Homeಅಂಕಣಗಳುಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

ಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 10/ ಜಾಗತಿಕ ಸಿನಿಮಾ/ ಗ್ರೀಸ್/ ಅರ್ಗಿರಿಸ್ ಪಪಡಿಮಿಟ್ರೊಪೊಲಸ್

ಸನ್‌ಟ್ಯಾನ್ (2016): ನಲವತ್ತೈದರ ಒಂಟಿಯಾಗಿರುವ ಡಾಕ್ಟರೊಬ್ಬ ಸಿಸಾನಲ್ ಟೂರಿಸ್ಟ್ ದ್ವೀಪದಲ್ಲಿ ಕೆಲಸ ಮಾಡಲು ನೇಮಕವಾಗಿ ಬರುತ್ತಾನೆ. ಚಳಿಗಾಲದಲ್ಲಿ ಜನ ವಿರಳವಾಗಿರುವ ದ್ವೀಪಕ್ಕೆ ಬೇಸಿಗೆ ಬಂದರೆ ಸಾಕು ಯೂರೋಪಿನ ಎಲ್ಲ ದೇಶಗಳಿಂದ ಯುವಕ ಯುವತಿಯರು ಬರುತ್ತಾರೆ. ಡಾಕ್ಟರ್‌ನ ದೈನಂದಿಕ ಜೀವನದಲ್ಲಿ ಮತ್ತು ಮಾನಸಿಕವಾಗಿ ಆಗುವ ಬದಲಾವಣೆಗಳೇ ಸಿನಿಮಾದ ಕಥಾನಕ.

ಡಾಕ್ಟರ್ ಒಂಟಿಯಾಗಿ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ, ಶಿಸ್ತುಬದ್ಧವಾಗಿ ಬದುಕುತ್ತಿರುತ್ತಾನೆ. ಜೊತೆಗೆ ಸುತ್ತಮುತ್ತಲಿನ ಜನರಾದ ರೆಸ್ಟ್ಟೊರೆಂಟ್‌ನ ಓನರ್, ಬಾರಿನ ಓನರ್, ದ್ವೀಪದ ಮೇಯರ್ ಹೀಗೆ ಎಲ್ಲರೂ ಇವನನ್ನು ಗೌರವಿಸುತ್ತಾರೆ.

ಬೇಸಿಗೆ ಶುರುವಾದೊಡನೆ ಯೂರೋಪಿನ ವಿವಿಧ ಭಾಗಗಳಿಂದ ಹದಿನೆಂಟು ಹತ್ತೊಂಬತ್ತರ ವಯಸ್ಸಿನ ಯುವಕ-ಯುವತಿಯರು ಗುಂಪುಗಳು ಬರುವುದರಿಂದ ದ್ವೀಪವೇ ಬದಲಾಗುತ್ತದೆ. ಸಾಮಾನ್ಯವಾಗಿ ಖಾಲಿಯಿರುವ ರಸ್ತೆಗಳಲ್ಲಿ ರಾತ್ರಿಗಳಲ್ಲೂ ಓಡಾಡುವ ವಾಹನಗಳು, ಬೆಳಿಗ್ಗೆವರೆಗೂ ತೆರೆದಿರುವ ರೆಸ್ಟ್ಟೊರೆಂಟ್‌ಗಳು, ನೈಟ್ ಕ್ಲಬ್‌ಗಳು, ಬೀಚ್‌ಗಳ ತುಂಬ ನಗ್ನವಾಗಿ ಓಡಾಡುತ್ತಾ, ಕುಣಿಯುತ್ತಾ, ಆಡುವ ಯುವಕ-ಯುವತಿಯರು.

ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡ ಯುವತಿ ತನ್ನ ಗೆಳೆಯರ ಗುಂಪಿನೊಂದಿಗೆ ಒಮ್ಮೆ ಆಸ್ಪತ್ರೆಗೆ ಬರುತ್ತಾಳೆ. ಗಾಯಗೊಂಡಿರುವ ಅನ್ನಾ, ಸ್ವಚ್ಚಂದವಾಗಿ ಸದಾ ನಗುತ್ತಾ ಇರುವ, ಯೌವ್ವನ ಚಿಲುಮೆಯ ತುತ್ತತುದಿಯಲ್ಲಿರುವ ಚೆಲುವೆ. ಅನ್ನಾಳಿಗೆ ಚಿಕಿತ್ಸೆ ನೀಡುವಾಗಲೇ ಆ ಗುಂಪು ಡಾಕ್ಟರಿಗೆ ಕೀಟಲೆ ಮಾಡುತ್ತದೆ. ಡಾಕ್ಟರ್ ಕೋಪಗೊಳ್ಳದೆ, ಸ್ನೇಹದಿಂದ ವರ್ತಿಸುತ್ತಾನೆ. ಅನ್ನಾ ಡಾಕ್ಟರನ್ನು ಮೆಚ್ಚಿಕೊಂಡು ಕೆನ್ನೆಗೊಂದು ಮುತ್ತನ್ನಿಡುತ್ತಾಳೆ.

ಸನ್ ಟ್ಯಾನ್

ಮತ್ತೆ ಡಾಕ್ಟರ್ ಮತ್ತು ಯುವ ಗುಂಪು ಬೀಚಿನಲ್ಲಿ ಭೇಟಿಯಾಗುತ್ತಾರೆ. ಅಲ್ಲಿಂದ, ಆಸ್ಪತ್ರೆಗೆ ಬಾಗಿಲು ಎಳೆದು, ಆ ಗುಂಪಿನ ಜೊತೆಯಲ್ಲೇ ಓಡಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಯುವಕನಂತಾಗುತ್ತಾನೆ. ಸಮಯ ಕಳೆಯುತ್ತಿದ್ದಂತೆ ಅವರೊಂದಿಗೆ ಇರಲು, ಮುಖ್ಯವಾಗಿ ಅನ್ನಾಳ ಜೊತೆಗಿರಲು ಹಂಬಲಿಸುತ್ತಾನೆ. ಕುಡಿದ ಮತ್ತಿನಲ್ಲಿ ಅವಳಿಗೆ ಮುತ್ತನ್ನಿಡುತ್ತಾನೆ. ಅವಳು ಅವನ ತಾಳಕ್ಕೆ ಕುಣಿಯುತ್ತಾಳೆ ಮತ್ತು ಯಾರು ಇಲ್ಲದ ಬೀಚಿನಲ್ಲಿ ಡಾಕ್ಟರ್ ಮತ್ತು ಅನ್ನಾ ಸೆಕ್ಸ್‌ನಲ್ಲಿ ಉನ್ಮತ್ತರಾಗುತ್ತಾರೆ.

ನಂತರದ ಐದು ದಿನಗಳು ಯುವ ಗುಂಪಿನ ಜಾಡೇ ಇಲ್ಲವಾಗುತ್ತದೆ. ಡಾಕ್ಟರ್ ಹಸಿದ ಹೆಬ್ಬುಲಿಯಂತೆ ಎಲ್ಲ ಬಾರ್‌ಗಳಿಗೂ, ನೈಟ್ ಕ್ಲಬ್‌ಗಳಿಗೆ ಹೋಗಿ ಅವಳನ್ನು ಹುಡುಕುತ್ತಾ, ಕುಡಿತದಲ್ಲಿ ಮುಳುಗುತ್ತಾನೆ. ಮತ್ತೆ ಅವನ ಮನೆಗೆ ಹಿಂತಿರುಗಿ ಬಂದು ಮಲಗಲು ಪ್ರಯತ್ನಿಸುತ್ತಾನೆ. ಆದರೆ ಅವನ ಮನಸ್ಸೆಲ್ಲ ಅನ್ನಾಳೇ ತುಂಬಿಕೊಂಡಿರುತ್ತಾಳೆ.

ಈ ಹುಡುಕಾಟದಲ್ಲಿ ಕೊನೆಗೂ ಅನ್ನಾ ಸಿಗುತ್ತಾಳೆ. ತನ್ನ ತಳಮಳದ ಹುಡುಕಾಟವನ್ನು ಪ್ರಸ್ತಾಪಿಸಿ, ’ಅವಳು ಎಲ್ಲಿ ಹೋಗಿದ್ದಳು?’ ಎಂದು ಹಕ್ಕಿನಿಂದ ಪ್ರಶ್ನಿಸುವುದು ಅನ್ನಾಳಿಗೆ ಇಷ್ಟವಾಗುವುದಿಲ್ಲ. ಡಾಕ್ಟರಿನ ಮನಸ್ಸಿನಲ್ಲಾದ ಕಳವಳಗಳನ್ನು ಅವಳ ಬಳಿ ಹಂಚಿಕೊಳ್ಳಲು ಪ್ರಯತ್ನಿಸಿದರೂ, ಅನ್ನಾ ಅವನೊಂದಿಗೆ ಏನನ್ನೂ ಮಾತಾಡದೆ, ಅವನನ್ನು ನಿರಾಕರಿಸುತ್ತಾಳೆ.

ಇದನ್ನು ಜೀರ್ಣಿಸಿಕೊಳ್ಳಲಾಗದೆ ಡಾಕ್ಟರ್ ಪದೇ ಪದೇ ಆಕೆಯ ಬೆನ್ನು ಹತ್ತುತ್ತಾನೆ. ಆದರೆ ಗುಂಪಿನ ಎಲ್ಲರೂ ಇವನನ್ನು ತಿರಸ್ಕರಿಸುತ್ತಾರೆ. ಅತಿಯಾದ ಕುಡಿತದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಯ ಕೊಡಲಾಗುವುದಿಲ್ಲ. ಡಾಕ್ಟರ್ ಕೆಲಸವನ್ನು ತೊರೆದುಹೋಗಲು ಮೇಯರ್ ಹೇಳುತ್ತಾನೆ. ನೈಟ್ ಕ್ಲಬಿನಲ್ಲಿ ಕುಣಿಯುತ್ತಿದ್ದ ಅನ್ನಾಳಿಗೆ ಇಂಜಕ್ಷನ್‌ಅನ್ನು ಚುಚ್ಚಿ ಡಾಕ್ಟರ್ ಅವಳನ್ನು ಆಸ್ಪತ್ರೆಗೆ ಎತ್ತಿಕೊಂಡು ಬರುವಲ್ಲಿಗೆ ಸಿನಿಮಾ ಮುಗಿಯುತ್ತದೆ.

ನಲವತ್ತೈದರ ವಯಸ್ಸಿನಲ್ಲಿ ಭದ್ರತೆ, ಸ್ಥಿರತೆಯನ್ನು ಮನಸ್ಸು ಒಂದು ಕಡೆ ಕೇಳಿದರೆ, ಇಪ್ಪತ್ತರ ಸ್ವಾತಂತ್ರ ಮತ್ತು ಸ್ವಚಂದವನ್ನು ಮತ್ತೊಂದು ಕಡೆ ಕೇಳುತ್ತದೆ. ಹೀಗೆ ಚಲನೆ ಸುಲಭವಾಗಿ ಸಾಧ್ಯವಾಗದ ಈ ಎರಡು ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಈ ಸಿನಿಮಾ ಹಿಡಿದಿಟ್ಟಿದೆ.

ವೆಸ್ಟೆಡ್ ಯೂತ್ (2011): ಅಥೆನ್ಸಿನಲ್ಲಿ ಐವತ್ತರ ಗಡಿಯಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಹದಿನಾರು ವರ್ಷದ ಹುಡುಗನ ಬೇರೆ ಬೇರೆ ಬದುಕುಗಳನ್ನು ನೈಜವಾಗಿ ಚಿತ್ರಿಸುತ್ತಾ, ಒಂದು ನಡುರಾತ್ರಿಯ ಸಂದರ್ಭದಲ್ಲಿ ಇವರಿಬ್ಬರೂ ಎದುರಾಗಲು ಕಾರಣವಾಗುವ ಕಹಿ ಘಟನೆಯೇ ಸಿನಿಮಾದ ಕಥೆ.

ಈ ಸಿನಿಮಾದಲ್ಲಿ ಸಮಾನಾಂತರವಾಗಿ ನಡೆಯುವ ಎರಡು ಪೀಳಿಗೆಗಳ ಕಥೆಗಳು ಒಂದು ಕಡೆಗೆ ಚಲಿಸುತ್ತವೆ. ನಿಧಾನಗತಿಯ ಹಾಗೂ ಉತ್ಸಾಹವಿಲ್ಲದೆ, ಸದಾ ಮೊಬೈಲ್ ನೋಡುವ ಮಗಳಿಗೆ ಬೈಯುತ್ತಾ ಮತ್ತು ಸದಾ ಟಿವಿ ನೋಡುವ ತಾಯಿಯೊಂದಿಗೆ ಮಾತಾಡಲು ಪ್ರಯತ್ನಿಸಿ ಸೋತು, ಸಾಧಾರಣ ಜೀವನ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಒಂದು ಕಡೆಯಾದರೆ, ಇನ್ನೊಂದೆಡೆ, ಯಾವುದೇ ಒತ್ತಡಗಳಲ್ಲಿದೆ, ಉತ್ಸಾಹದಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುತ್ತಾ, ಸದಾ ಹರಟುತ್ತಾ, ಸ್ಕೇಟ್ ಬೋರ್ಡಿನ ಸಹಾಯದಿಂದ ಸುತ್ತಾಡುವ ಹುಡುಗ. ಹದ್ದುಬಸ್ತಿನಲ್ಲಿಡುವ ತಂದೆಯಿಂದ ತಪ್ಪಿಸಿಕೊಂಡು, ಆಸ್ಪತ್ರೆಯಲ್ಲಿ ರೋಗಿಯಾಗಿರುವ ತಾಯಿಯನ್ನು ಮಾತಾಡಿಸುತ್ತಾ, ಯಾವುದೇ ಜವಾಬ್ದಾರಿಗಳಲ್ಲಿದೇ ಬದುಕುತ್ತಿರುತ್ತಾನೆ.

ಹೀಗೆ ಸಾಗುವ ಇವರಿಬ್ಬರ ಒಂದೇ ದಿನದ ಕಥೆಯನ್ನು ಚಿತ್ರಿಸಲಾಗಿದೆ. ಹುಡುಗ ತನ್ನ ಗೆಳಯರೊಡಗೂಡಿ, ಅವರೆಲ್ಲ ಸುತ್ತಾಡುತ್ತಾ, ಸ್ಕೇಟ್ ಮಾಡುತ್ತಾ, ಹಸ್ತಮೈಥುನ ಮಾಡುತ್ತಾ, ಊರೆಲ್ಲ ಸುತ್ತಾಡಿ ನೈಟ್ ಕ್ಲಬ್ಬಿಗೆ ಬರುತ್ತಾರೆ. ಪೊಲೀಸ್ ತನ್ನ ಸಹೋದ್ಯೋಗಿಯೊಂದಿಗೆ, ವೀಲಿಂಗ್ ಮಾಡುತ್ತಿರುವ ಯುವಕರನ್ನು ಚದುರಿಸುತ್ತಾ, ರಾತ್ರಿಯೆಲ್ಲ ರಸ್ತೆಗಳನ್ನು ಗಮನಿಸುತ್ತಾ ಗಸ್ತು ಸುತ್ತಿ ನೈಟ್ ಕ್ಲಬ್ಬಿನತ್ತ ಬರುತ್ತಾರೆ.

ವೆಸ್ಟೆಡ್ ಯೂತ್

ನೈಟ್ ಕ್ಲಬ್ಬಿನಲ್ಲಿ ಕುಡಿದ ಮತ್ತಿನಲ್ಲಿ ಬೇರೊಂದು ಹುಡುಗಿಗೆ ಮುತ್ತನ್ನಿಡುವುದನ್ನು, ಹುಡುಗನ ಗರ್ಲ್‌ಫ್ರೆಂಡ್ ನೋಡಿ, ಇವನೊಂದಿಗೆ ಜಗಳ ಮಾಡಿಕೊಂಡು, ಹೊರಗೆ ಹೋಗುತ್ತಾಳೆ. ಅವಳನ್ನು ಸಮಾಧಾನಪಡಿಸಲು ಸಾಧ್ಯವಾಗದೆ ತಿರುಗಿ ನೈಟ್ ಕ್ಲಬ್ಬಿಗೆ ಬರುವಾಗ ಪೊಲೀಸ್ ವಾಹನ ಬರುತ್ತದೆ. ಹುಡುಗ ಗರ್ಲ್‌ಫ್ರೆಂಡಿನ ಮೇಲಿನ ತನ್ನ ಕೋಪದಿಂದ ಪೊಲೀಸ್ ವಾಹನವನ್ನು ತಡೆದು ತಟ್ಟುತ್ತಾನೆ. ಆಗ ಪೊಲೀಸರು ಇಳಿದು ಆತನೆಡೆಗೆ ಬಂದಾಗ, ಹುಡುಗ ಹೊರಗೆ ಕುಡಿದು ನಿಂತಿದ್ದ ಜನಗಳ ಗುಂಪಿನೊಂದಿಗೆ ಸೇರಿಕೊಳ್ಳುತ್ತಾನೆ.

ಕುಡಿದ ಗುಂಪು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಗುಂಪಿನಿಂದ ಖಾಲಿ ಬಾಟಲ್‌ಗಳನ್ನು ಪೋಲಿಸರ ಮೇಲೆ ಎಸೆಯುತ್ತಾರೆ. ಆಗ ಪೋಲಿಸನ ಸಹದ್ಯೋಗಿ ಆಕಸ್ಮಿಕವಾಗಿ ಗುಂಪಿನತ್ತ ಗುಂಡನ್ನು ಹಾರಿಸುತ್ತಾನೆ. ಆ ಗುಂಡಿಗೆ ಆ ಹುಡುಗ ಬಲಿಯಾಗುವುದೇ ಸಿನಿಮಾದ ಕೊನೆ.

ಈ ಸಿನಿಮಾ ಅಥೆನ್ಸಿನಲ್ಲಿ ನಡೆದ ನೈಜ ಘಟನೆಯ ಆಧಾರಿತವಾಗಿದೆ. ಹುಡುಗ ಮತ್ತು ಪೊಲೀಸ್ ಅಧಿಕಾರಿಯ ಕಾಂಟ್ರಾಸ್ಟ್ ಬದುಕನ್ನು ಚಿತ್ರಿಸುವುದರ ಜೊತೆಗೆ ಆಥೆನ್ಸಿನ ಜನಜೀವನವನ್ನು ಈ ಸಿನಿಮಾ ಕಟ್ಟಿಕೊಟ್ಟಿದೆ.
ಅರ್ಗಿರಿಸ್‌ರ ಜೊತೆ ಯಾನ್ ವೊಗಲ್ ಕೂಡ ಈ ಸಿನಿಮಾಕ್ಕೆ ಸಹ ನಿರ್ದೇಶನ ಮಾಡಿರುವುದು ವಿಶೇಷ.

ಅರ್ಗಿರಿಸ್ ಪಪಡಿಮಿಟ್ರೊಪೊಲಸ್: ಅರ್ಗಿರಿಸ್ ಮೂಲತಃ ನಿರ್ಮಾಪಕ. ಇವರು ಹತ್ತಕ್ಕೂ ಸಿನಿಮಾಗಳನ್ನು ನಿರ್ಮಿಸಿ, ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರ ಮುಖ್ಯ ಆಸಕ್ತಿ ಅಥೆನ್ಸಿನ ಜನಜೀವನವನ್ನು ಹಿಡಿಯುವುದರ ಜೊತೆಗೆ ಯುವ ಹಾಗೂ ವಯಸ್ಕ ಪೀಳಿಗೆಗಳ ನಡುವಿನ ವ್ಯತ್ಯಾಸಗಳನ್ನು ಕಟ್ಟಿಕೊಡುವುದು. ಎರಡು ಪೀಳಿಗೆಗಳ ದೃಷ್ಟಿಕೋನದಲ್ಲಿ ಅಥೆನ್ಸ್‌ಅನ್ನು ಅಥೆಂಟಿಕ್ ಆಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಸಂದರ್ಶನವೊಂದರಲ್ಲಿ ಹೇಳುವಂತೆ, ಒಬ್ಬ ನಟನನ್ನು ಆರಿಸಿಕೊಂಡು, ಆ ಪಾತ್ರದ ಸ್ನೇಹಿತರ ಪಾತ್ರಗಳಿಗೆ, ಆ ನಟನ ನಿಜವಾದ ಸ್ನೇಹಿತರನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿರುತ್ತಾರೆ ಅರ್ಗಿರಿಸ್. ನಟ ನಟಿಯರೊಂದಿಗೆ ಕಥೆಯನ್ನು ಚರ್ಚಿಸಿದ ನಂತರ, ಸ್ಕ್ರಿಪ್ಟ್‌ಅನ್ನು ಪಕ್ಕಕ್ಕಿಟ್ಟು, ನಟ-ನಟಿಯರೊಂದಿಗೆ ಸಮಯ ಕಳೆಯುತ್ತಾ, ಯಾವುದೇ ಒತ್ತಡವಿಲ್ಲದೆ ಸಿನಿಮಾ ಮಾಡುವುದು ಇವರ ಶೈಲಿ. ಪರಸ್ಪರರ ಕುರಿತು ಒಮ್ಮೆ ತಿಳಿದುಕೊಂಡ ನಂತರ ಕ್ಯಾಮರಾದಿಂದ ಅವರ ಬದುಕನ್ನು ಹಿಡಿಯುವ ಮೂಲಕ ಸಿನಿಮಾವನ್ನು ಕಟ್ಟುವುದು ಕೂಡ.

ಅರ್ಗಿರಿಸ್ ಪಪಡಿಮಿಟ್ರೊಪೊಲಸ್

ಇದರಿಂದ ಅವರ ಸಿನಿಮಾಗಳಲ್ಲಿ ನಿಜವಾದ ಬದುಕನ್ನು ಹಿಡಿಯಲು ಸಾಧ್ಯವಾಗುತ್ತದೆ ಹಾಗೂ ಗೆಳೆಯರೇ ಒಡಗೂಡಿ ನಟಿಸುವಾಗ ಯಾವುದೇ ರೀತಿಯ ಮುಚ್ಚುಮರೆ ಮುಜುಗರಗಳಿಲ್ಲದೆ ನಟಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಇವರ ಕ್ಯಾಮರಾ ಶೈಲಿ ಸದಾ ’ಹ್ಯಾಂಡ್ ಹೆಲ್ಡ್’ ಆಗಿರುತ್ತದೆ. ಪ್ರೇಕ್ಷಕರು ಪಾತ್ರಗಳೊಂದಿಗೆ ಅವರು ಹೋದ ಜಾಗಗಳಿಗೆಲ್ಲ ಹೋಗುತ್ತಾ, ಪ್ರೇಕ್ಷಕರು ಪಾತ್ರಗಳ ಗೆಳೆಯರೆಂಬಂತೆ ಮಾಡುತ್ತದೆ ಸಿನಿಮ್ಯಾಟೋಗ್ರಫಿ.

ಕಥೆಯ ವಿಷಯಕ್ಕೆ ಬಂದರೆ, ಮುಖ್ಯವಾದ ಘಟನೆಗಳೇ ಇರಬೇಕು ಅನ್ನದೇ, ಎಷ್ಟೋ ನಿರಾಸಕ್ತವಾದ ಚಟುವಟಿಕೆಗಳನ್ನು ಚಿತ್ರೀಕರಿಸುತ್ತಾರೆ. ಅದೇ ನಿಜವಾದ ಬದುಕಿನ ಸೂಚಕವೆನ್ನುವುದು ಉಲ್ಲೇಖನೀಯ.

ಅಥೆನ್ಸ್‌ನಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು, ವಿವಿಧ ವಯಸ್ಸಿನ ವ್ಯಕ್ತಿಗಳ, ಪೀಳಿಗೆಗಳ ದೃಷ್ಟಿಯಿಂದ ಅವರ ಬದುಕುಗಳ ಬಗ್ಗೆ ಚಿತ್ರಕತೆ ಬರೆದು, ಅವರಂತಿರುವ ನಟರನ್ನು ಅಥವಾ ನಟನೆಯೇ ತಿಳಿಯದವರನ್ನು ಆಯ್ಕೆ ಮಾಡಿ, ಅವರೊಂದಿಗೆ ಕೂಡಿಕೊಂಡು ಗೆಳೆಯರಂತೆ ಬದುಕುತ್ತಾ ಅವರ ಬದುಕನ್ನು ನೈಜವಾಗಿ ಕ್ಯಾಮರಾದ ಸಹಾಯದಿಂದ ಕಟ್ಟಿರುವುದನ್ನು ಅರ್ಗಿರಿಸ್‌ರ ಸಿನಿಮಾಗಳಲ್ಲಿ ನೋಡಬಹುದು.


ಇದನ್ನೂ ಓದಿ: ಪಿಕೆ ಟಾಕೀಸ್: ನಿಗೂಢ ಅಥೆನ್ಸ್‌ನ ಜನಜೀವನವನ್ನು ಚಿತ್ರಿಸಿರುವ ಅದನ್ನು ಅಲೆಗರಿಯಾಗಿಸುವ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್: ಪ್ರತಿಭಟನಾಕಾರರ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವಿನ ಸಂಖ್ಯೆ 2571ಕ್ಕೆ ಏರಿಕೆ 

ಇರಾನ್‌ನಲ್ಲಿ ಪ್ರತಿಭಟನೆಗಳ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 2,571 ಕ್ಕೆ ಏರಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ. ಈ ಅಂಕಿ ಅಂಶವು ಅಮೆರಿಕ ಮೂಲದ ಮಾನವ ಹಕ್ಕುಗಳ...

ಕಾಂಗ್ರೆಸ್‌ ಮುಖಂಡನ ಗೂಂಡಾವರ್ತನೆ : ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಪೌರಾಯುಕ್ತೆಗೆ ಧಮ್ಕಿ, ಅವಾಚ್ಯ ಶಬ್ದಗಳಿಂದ ನಿಂದನೆ

ಸಚಿವ ಝಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಗೌಡ ಅವರೊಂದಿಗೆ ಗೂಂಡಾವರ್ತನೆ...

ಹಿಂದಿ ಶೈಕ್ಷಣಿಕ ಪದ್ಧತಿ ಹೇರಿಕೆಯಿಂದ ಉತ್ತರದ ಜನರಿಂದ ದಕ್ಷಿಣಕ್ಕೆ ವಲಸೆ: ಮಾರನ್

ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುತ್ತಾ, ವಿದ್ಯಾರ್ಥಿಗಳು ಹಿಂದಿ ಮಾತ್ರ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ರಾಜ್ಯಗಳ ಈ ನೀತಿಗಳಿಂದ ಉದ್ಯೋಗ ಸಿಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ...

ಚಿಕ್ಕಮಗಳೂರು| ದಲಿತರ ಜಮೀನಿಗೆ ನುಗ್ಗಿ ಬೆಳೆ ನಾಶ; ಪ್ರಬಲ ಜಾತಿ ಜನರಿಂದ ವಿನಾಕಾರಣ ತೊಂದರೆ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಸತ್ತಿಹಳ್ಳಿ ಗ್ರಾಮದ ದಲಿತ ಸಮುದಾಯದ ರೈತರಿಗೆ ಅದೇ ಊರಿನ ಪ್ರಬಲ ಜಾತಿಗೆ ಸೇರಿದ ಜನರು ವಿನಾಕಾರಣ ತೊಂದರೆ ನಿಡುತ್ತಿದ್ದು, ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎಂಬ...

ಎಲ್‌ಡಿಎಫ್‌ನ ‘ಕೇರಳಂ’ ಮರುನಾಮಕರಣ ಕ್ರಮ ಬೆಂಬಲಿಸಿದ ರಾಜ್ಯ ಬಿಜೆಪಿ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಮನವಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇರಳ ಘಟಕವು, ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಸರ್ಕಾರದ 'ಕೇರಳಂ' ಮರುನಾಕರಣ ಪ್ರಸ್ತಾವನೆಯನ್ನು ಬೆಂಬಲಿಸಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ...

ರಾಯಚೂರು ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ತಡೆಗೆ ಸಂಚು ಆರೋಪ: ನಿಗದಿತ ದಿನಾಂಕದಂದು ಪರೀಕ್ಷೆ ನಡೆಸಲು ಒತ್ತಾಯ 

ಬೆಂಗಳೂರು: ರಾಯಚೂರು ಕೃಷಿ ವಿವಿಯಲ್ಲಿನ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಿಗದಿತ ದಿನಾಂಕಗಳಾದ ಜನವರಿ.17 ಮತ್ತು ಜನವರಿ.18ರಂದೇ ನಡೆಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು...

ಸಂಭಾಲ್ ಹಿಂಸಾಚಾರ ಪ್ರಕರಣ : ಹಿರಿಯ ಅಧಿಕಾರಿಗಳು ಸೇರಿ 12 ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

2024ರ ನವೆಂಬರ್‌ನಲ್ಲಿ ಶಾಹಿ ಜಾಮಾ ಮಸೀದಿ ಬಳಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾತ್ರವಿದೆ ಎಂಬ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಸೇರಿದಂತೆ 12 ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್...

ಪಿಎಂ ಕೇರ್ಸ್ ನಿಧಿಗೆ ಆರ್‌ಟಿಐ ಕಾಯ್ದೆಯಡಿ ಗೌಪ್ಯತೆಯ ಹಕ್ಕಿದೆ : ದೆಹಲಿ ಹೈಕೋರ್ಟ್

ಪಿಎಂ ಕೇರ್ಸ್ ನಿಧಿಯು ಕಾನೂನು ಅಥವಾ ಸರ್ಕಾರಿ ಘಟಕವಾಗಿದ್ದರೂ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಗೌಪ್ಯತೆಯ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ (ಜ.13) ಮೌಖಿಕವಾಗಿ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು...

ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗ

ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿದೆ ಎಂದು ವರದಿಯಾಗಿದೆ. ಸೋಮವಾರ (ಜ.12) ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ...

ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿಗೆ ಎರಡು ತಿಂಗಳ ಜೈಲು ಶಿಕ್ಷೆ: ಇದು ‘ಕಾನೂನುಬಾಹಿರ’ ಎಂದ ಪಾಟ್ನಾ ಹೈಕೋರ್ಟ್: 5 ಲಕ್ಷ ಪರಿಹಾರಕ್ಕೆ ಆದೇಶ

ಬಿಹಾರ ಪೊಲೀಸರು ಎರಡು ತಿಂಗಳಿಗೂ ಹೆಚ್ಚು ಕಾಲ ಮುಸ್ಲಿಂ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಕಾನೂನುಬಾಹಿರ ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ. ಇಂಥ ವಿಚಾರಗಳಲ್ಲಿ ರಾಜ್ಯ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ ಎಂದಿರುವ ಕೋರ್ಟ್...