Homeಅಂಕಣಗಳುಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

ಪಿಕೆ ಟಾಕೀಸ್: ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಚಿತ್ರಿಸಿರುವ ಅರ್ಗಿರಿಸ್ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 10/ ಜಾಗತಿಕ ಸಿನಿಮಾ/ ಗ್ರೀಸ್/ ಅರ್ಗಿರಿಸ್ ಪಪಡಿಮಿಟ್ರೊಪೊಲಸ್

ಸನ್‌ಟ್ಯಾನ್ (2016): ನಲವತ್ತೈದರ ಒಂಟಿಯಾಗಿರುವ ಡಾಕ್ಟರೊಬ್ಬ ಸಿಸಾನಲ್ ಟೂರಿಸ್ಟ್ ದ್ವೀಪದಲ್ಲಿ ಕೆಲಸ ಮಾಡಲು ನೇಮಕವಾಗಿ ಬರುತ್ತಾನೆ. ಚಳಿಗಾಲದಲ್ಲಿ ಜನ ವಿರಳವಾಗಿರುವ ದ್ವೀಪಕ್ಕೆ ಬೇಸಿಗೆ ಬಂದರೆ ಸಾಕು ಯೂರೋಪಿನ ಎಲ್ಲ ದೇಶಗಳಿಂದ ಯುವಕ ಯುವತಿಯರು ಬರುತ್ತಾರೆ. ಡಾಕ್ಟರ್‌ನ ದೈನಂದಿಕ ಜೀವನದಲ್ಲಿ ಮತ್ತು ಮಾನಸಿಕವಾಗಿ ಆಗುವ ಬದಲಾವಣೆಗಳೇ ಸಿನಿಮಾದ ಕಥಾನಕ.

ಡಾಕ್ಟರ್ ಒಂಟಿಯಾಗಿ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ, ಶಿಸ್ತುಬದ್ಧವಾಗಿ ಬದುಕುತ್ತಿರುತ್ತಾನೆ. ಜೊತೆಗೆ ಸುತ್ತಮುತ್ತಲಿನ ಜನರಾದ ರೆಸ್ಟ್ಟೊರೆಂಟ್‌ನ ಓನರ್, ಬಾರಿನ ಓನರ್, ದ್ವೀಪದ ಮೇಯರ್ ಹೀಗೆ ಎಲ್ಲರೂ ಇವನನ್ನು ಗೌರವಿಸುತ್ತಾರೆ.

ಬೇಸಿಗೆ ಶುರುವಾದೊಡನೆ ಯೂರೋಪಿನ ವಿವಿಧ ಭಾಗಗಳಿಂದ ಹದಿನೆಂಟು ಹತ್ತೊಂಬತ್ತರ ವಯಸ್ಸಿನ ಯುವಕ-ಯುವತಿಯರು ಗುಂಪುಗಳು ಬರುವುದರಿಂದ ದ್ವೀಪವೇ ಬದಲಾಗುತ್ತದೆ. ಸಾಮಾನ್ಯವಾಗಿ ಖಾಲಿಯಿರುವ ರಸ್ತೆಗಳಲ್ಲಿ ರಾತ್ರಿಗಳಲ್ಲೂ ಓಡಾಡುವ ವಾಹನಗಳು, ಬೆಳಿಗ್ಗೆವರೆಗೂ ತೆರೆದಿರುವ ರೆಸ್ಟ್ಟೊರೆಂಟ್‌ಗಳು, ನೈಟ್ ಕ್ಲಬ್‌ಗಳು, ಬೀಚ್‌ಗಳ ತುಂಬ ನಗ್ನವಾಗಿ ಓಡಾಡುತ್ತಾ, ಕುಣಿಯುತ್ತಾ, ಆಡುವ ಯುವಕ-ಯುವತಿಯರು.

ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡ ಯುವತಿ ತನ್ನ ಗೆಳೆಯರ ಗುಂಪಿನೊಂದಿಗೆ ಒಮ್ಮೆ ಆಸ್ಪತ್ರೆಗೆ ಬರುತ್ತಾಳೆ. ಗಾಯಗೊಂಡಿರುವ ಅನ್ನಾ, ಸ್ವಚ್ಚಂದವಾಗಿ ಸದಾ ನಗುತ್ತಾ ಇರುವ, ಯೌವ್ವನ ಚಿಲುಮೆಯ ತುತ್ತತುದಿಯಲ್ಲಿರುವ ಚೆಲುವೆ. ಅನ್ನಾಳಿಗೆ ಚಿಕಿತ್ಸೆ ನೀಡುವಾಗಲೇ ಆ ಗುಂಪು ಡಾಕ್ಟರಿಗೆ ಕೀಟಲೆ ಮಾಡುತ್ತದೆ. ಡಾಕ್ಟರ್ ಕೋಪಗೊಳ್ಳದೆ, ಸ್ನೇಹದಿಂದ ವರ್ತಿಸುತ್ತಾನೆ. ಅನ್ನಾ ಡಾಕ್ಟರನ್ನು ಮೆಚ್ಚಿಕೊಂಡು ಕೆನ್ನೆಗೊಂದು ಮುತ್ತನ್ನಿಡುತ್ತಾಳೆ.

ಸನ್ ಟ್ಯಾನ್

ಮತ್ತೆ ಡಾಕ್ಟರ್ ಮತ್ತು ಯುವ ಗುಂಪು ಬೀಚಿನಲ್ಲಿ ಭೇಟಿಯಾಗುತ್ತಾರೆ. ಅಲ್ಲಿಂದ, ಆಸ್ಪತ್ರೆಗೆ ಬಾಗಿಲು ಎಳೆದು, ಆ ಗುಂಪಿನ ಜೊತೆಯಲ್ಲೇ ಓಡಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಯುವಕನಂತಾಗುತ್ತಾನೆ. ಸಮಯ ಕಳೆಯುತ್ತಿದ್ದಂತೆ ಅವರೊಂದಿಗೆ ಇರಲು, ಮುಖ್ಯವಾಗಿ ಅನ್ನಾಳ ಜೊತೆಗಿರಲು ಹಂಬಲಿಸುತ್ತಾನೆ. ಕುಡಿದ ಮತ್ತಿನಲ್ಲಿ ಅವಳಿಗೆ ಮುತ್ತನ್ನಿಡುತ್ತಾನೆ. ಅವಳು ಅವನ ತಾಳಕ್ಕೆ ಕುಣಿಯುತ್ತಾಳೆ ಮತ್ತು ಯಾರು ಇಲ್ಲದ ಬೀಚಿನಲ್ಲಿ ಡಾಕ್ಟರ್ ಮತ್ತು ಅನ್ನಾ ಸೆಕ್ಸ್‌ನಲ್ಲಿ ಉನ್ಮತ್ತರಾಗುತ್ತಾರೆ.

ನಂತರದ ಐದು ದಿನಗಳು ಯುವ ಗುಂಪಿನ ಜಾಡೇ ಇಲ್ಲವಾಗುತ್ತದೆ. ಡಾಕ್ಟರ್ ಹಸಿದ ಹೆಬ್ಬುಲಿಯಂತೆ ಎಲ್ಲ ಬಾರ್‌ಗಳಿಗೂ, ನೈಟ್ ಕ್ಲಬ್‌ಗಳಿಗೆ ಹೋಗಿ ಅವಳನ್ನು ಹುಡುಕುತ್ತಾ, ಕುಡಿತದಲ್ಲಿ ಮುಳುಗುತ್ತಾನೆ. ಮತ್ತೆ ಅವನ ಮನೆಗೆ ಹಿಂತಿರುಗಿ ಬಂದು ಮಲಗಲು ಪ್ರಯತ್ನಿಸುತ್ತಾನೆ. ಆದರೆ ಅವನ ಮನಸ್ಸೆಲ್ಲ ಅನ್ನಾಳೇ ತುಂಬಿಕೊಂಡಿರುತ್ತಾಳೆ.

ಈ ಹುಡುಕಾಟದಲ್ಲಿ ಕೊನೆಗೂ ಅನ್ನಾ ಸಿಗುತ್ತಾಳೆ. ತನ್ನ ತಳಮಳದ ಹುಡುಕಾಟವನ್ನು ಪ್ರಸ್ತಾಪಿಸಿ, ’ಅವಳು ಎಲ್ಲಿ ಹೋಗಿದ್ದಳು?’ ಎಂದು ಹಕ್ಕಿನಿಂದ ಪ್ರಶ್ನಿಸುವುದು ಅನ್ನಾಳಿಗೆ ಇಷ್ಟವಾಗುವುದಿಲ್ಲ. ಡಾಕ್ಟರಿನ ಮನಸ್ಸಿನಲ್ಲಾದ ಕಳವಳಗಳನ್ನು ಅವಳ ಬಳಿ ಹಂಚಿಕೊಳ್ಳಲು ಪ್ರಯತ್ನಿಸಿದರೂ, ಅನ್ನಾ ಅವನೊಂದಿಗೆ ಏನನ್ನೂ ಮಾತಾಡದೆ, ಅವನನ್ನು ನಿರಾಕರಿಸುತ್ತಾಳೆ.

ಇದನ್ನು ಜೀರ್ಣಿಸಿಕೊಳ್ಳಲಾಗದೆ ಡಾಕ್ಟರ್ ಪದೇ ಪದೇ ಆಕೆಯ ಬೆನ್ನು ಹತ್ತುತ್ತಾನೆ. ಆದರೆ ಗುಂಪಿನ ಎಲ್ಲರೂ ಇವನನ್ನು ತಿರಸ್ಕರಿಸುತ್ತಾರೆ. ಅತಿಯಾದ ಕುಡಿತದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಯ ಕೊಡಲಾಗುವುದಿಲ್ಲ. ಡಾಕ್ಟರ್ ಕೆಲಸವನ್ನು ತೊರೆದುಹೋಗಲು ಮೇಯರ್ ಹೇಳುತ್ತಾನೆ. ನೈಟ್ ಕ್ಲಬಿನಲ್ಲಿ ಕುಣಿಯುತ್ತಿದ್ದ ಅನ್ನಾಳಿಗೆ ಇಂಜಕ್ಷನ್‌ಅನ್ನು ಚುಚ್ಚಿ ಡಾಕ್ಟರ್ ಅವಳನ್ನು ಆಸ್ಪತ್ರೆಗೆ ಎತ್ತಿಕೊಂಡು ಬರುವಲ್ಲಿಗೆ ಸಿನಿಮಾ ಮುಗಿಯುತ್ತದೆ.

ನಲವತ್ತೈದರ ವಯಸ್ಸಿನಲ್ಲಿ ಭದ್ರತೆ, ಸ್ಥಿರತೆಯನ್ನು ಮನಸ್ಸು ಒಂದು ಕಡೆ ಕೇಳಿದರೆ, ಇಪ್ಪತ್ತರ ಸ್ವಾತಂತ್ರ ಮತ್ತು ಸ್ವಚಂದವನ್ನು ಮತ್ತೊಂದು ಕಡೆ ಕೇಳುತ್ತದೆ. ಹೀಗೆ ಚಲನೆ ಸುಲಭವಾಗಿ ಸಾಧ್ಯವಾಗದ ಈ ಎರಡು ಪೀಳಿಗೆಗಳ ನಡುವಿನ ಸಂಘರ್ಷಗಳನ್ನು ಈ ಸಿನಿಮಾ ಹಿಡಿದಿಟ್ಟಿದೆ.

ವೆಸ್ಟೆಡ್ ಯೂತ್ (2011): ಅಥೆನ್ಸಿನಲ್ಲಿ ಐವತ್ತರ ಗಡಿಯಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಹದಿನಾರು ವರ್ಷದ ಹುಡುಗನ ಬೇರೆ ಬೇರೆ ಬದುಕುಗಳನ್ನು ನೈಜವಾಗಿ ಚಿತ್ರಿಸುತ್ತಾ, ಒಂದು ನಡುರಾತ್ರಿಯ ಸಂದರ್ಭದಲ್ಲಿ ಇವರಿಬ್ಬರೂ ಎದುರಾಗಲು ಕಾರಣವಾಗುವ ಕಹಿ ಘಟನೆಯೇ ಸಿನಿಮಾದ ಕಥೆ.

ಈ ಸಿನಿಮಾದಲ್ಲಿ ಸಮಾನಾಂತರವಾಗಿ ನಡೆಯುವ ಎರಡು ಪೀಳಿಗೆಗಳ ಕಥೆಗಳು ಒಂದು ಕಡೆಗೆ ಚಲಿಸುತ್ತವೆ. ನಿಧಾನಗತಿಯ ಹಾಗೂ ಉತ್ಸಾಹವಿಲ್ಲದೆ, ಸದಾ ಮೊಬೈಲ್ ನೋಡುವ ಮಗಳಿಗೆ ಬೈಯುತ್ತಾ ಮತ್ತು ಸದಾ ಟಿವಿ ನೋಡುವ ತಾಯಿಯೊಂದಿಗೆ ಮಾತಾಡಲು ಪ್ರಯತ್ನಿಸಿ ಸೋತು, ಸಾಧಾರಣ ಜೀವನ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಒಂದು ಕಡೆಯಾದರೆ, ಇನ್ನೊಂದೆಡೆ, ಯಾವುದೇ ಒತ್ತಡಗಳಲ್ಲಿದೆ, ಉತ್ಸಾಹದಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುತ್ತಾ, ಸದಾ ಹರಟುತ್ತಾ, ಸ್ಕೇಟ್ ಬೋರ್ಡಿನ ಸಹಾಯದಿಂದ ಸುತ್ತಾಡುವ ಹುಡುಗ. ಹದ್ದುಬಸ್ತಿನಲ್ಲಿಡುವ ತಂದೆಯಿಂದ ತಪ್ಪಿಸಿಕೊಂಡು, ಆಸ್ಪತ್ರೆಯಲ್ಲಿ ರೋಗಿಯಾಗಿರುವ ತಾಯಿಯನ್ನು ಮಾತಾಡಿಸುತ್ತಾ, ಯಾವುದೇ ಜವಾಬ್ದಾರಿಗಳಲ್ಲಿದೇ ಬದುಕುತ್ತಿರುತ್ತಾನೆ.

ಹೀಗೆ ಸಾಗುವ ಇವರಿಬ್ಬರ ಒಂದೇ ದಿನದ ಕಥೆಯನ್ನು ಚಿತ್ರಿಸಲಾಗಿದೆ. ಹುಡುಗ ತನ್ನ ಗೆಳಯರೊಡಗೂಡಿ, ಅವರೆಲ್ಲ ಸುತ್ತಾಡುತ್ತಾ, ಸ್ಕೇಟ್ ಮಾಡುತ್ತಾ, ಹಸ್ತಮೈಥುನ ಮಾಡುತ್ತಾ, ಊರೆಲ್ಲ ಸುತ್ತಾಡಿ ನೈಟ್ ಕ್ಲಬ್ಬಿಗೆ ಬರುತ್ತಾರೆ. ಪೊಲೀಸ್ ತನ್ನ ಸಹೋದ್ಯೋಗಿಯೊಂದಿಗೆ, ವೀಲಿಂಗ್ ಮಾಡುತ್ತಿರುವ ಯುವಕರನ್ನು ಚದುರಿಸುತ್ತಾ, ರಾತ್ರಿಯೆಲ್ಲ ರಸ್ತೆಗಳನ್ನು ಗಮನಿಸುತ್ತಾ ಗಸ್ತು ಸುತ್ತಿ ನೈಟ್ ಕ್ಲಬ್ಬಿನತ್ತ ಬರುತ್ತಾರೆ.

ವೆಸ್ಟೆಡ್ ಯೂತ್

ನೈಟ್ ಕ್ಲಬ್ಬಿನಲ್ಲಿ ಕುಡಿದ ಮತ್ತಿನಲ್ಲಿ ಬೇರೊಂದು ಹುಡುಗಿಗೆ ಮುತ್ತನ್ನಿಡುವುದನ್ನು, ಹುಡುಗನ ಗರ್ಲ್‌ಫ್ರೆಂಡ್ ನೋಡಿ, ಇವನೊಂದಿಗೆ ಜಗಳ ಮಾಡಿಕೊಂಡು, ಹೊರಗೆ ಹೋಗುತ್ತಾಳೆ. ಅವಳನ್ನು ಸಮಾಧಾನಪಡಿಸಲು ಸಾಧ್ಯವಾಗದೆ ತಿರುಗಿ ನೈಟ್ ಕ್ಲಬ್ಬಿಗೆ ಬರುವಾಗ ಪೊಲೀಸ್ ವಾಹನ ಬರುತ್ತದೆ. ಹುಡುಗ ಗರ್ಲ್‌ಫ್ರೆಂಡಿನ ಮೇಲಿನ ತನ್ನ ಕೋಪದಿಂದ ಪೊಲೀಸ್ ವಾಹನವನ್ನು ತಡೆದು ತಟ್ಟುತ್ತಾನೆ. ಆಗ ಪೊಲೀಸರು ಇಳಿದು ಆತನೆಡೆಗೆ ಬಂದಾಗ, ಹುಡುಗ ಹೊರಗೆ ಕುಡಿದು ನಿಂತಿದ್ದ ಜನಗಳ ಗುಂಪಿನೊಂದಿಗೆ ಸೇರಿಕೊಳ್ಳುತ್ತಾನೆ.

ಕುಡಿದ ಗುಂಪು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಗುಂಪಿನಿಂದ ಖಾಲಿ ಬಾಟಲ್‌ಗಳನ್ನು ಪೋಲಿಸರ ಮೇಲೆ ಎಸೆಯುತ್ತಾರೆ. ಆಗ ಪೋಲಿಸನ ಸಹದ್ಯೋಗಿ ಆಕಸ್ಮಿಕವಾಗಿ ಗುಂಪಿನತ್ತ ಗುಂಡನ್ನು ಹಾರಿಸುತ್ತಾನೆ. ಆ ಗುಂಡಿಗೆ ಆ ಹುಡುಗ ಬಲಿಯಾಗುವುದೇ ಸಿನಿಮಾದ ಕೊನೆ.

ಈ ಸಿನಿಮಾ ಅಥೆನ್ಸಿನಲ್ಲಿ ನಡೆದ ನೈಜ ಘಟನೆಯ ಆಧಾರಿತವಾಗಿದೆ. ಹುಡುಗ ಮತ್ತು ಪೊಲೀಸ್ ಅಧಿಕಾರಿಯ ಕಾಂಟ್ರಾಸ್ಟ್ ಬದುಕನ್ನು ಚಿತ್ರಿಸುವುದರ ಜೊತೆಗೆ ಆಥೆನ್ಸಿನ ಜನಜೀವನವನ್ನು ಈ ಸಿನಿಮಾ ಕಟ್ಟಿಕೊಟ್ಟಿದೆ.
ಅರ್ಗಿರಿಸ್‌ರ ಜೊತೆ ಯಾನ್ ವೊಗಲ್ ಕೂಡ ಈ ಸಿನಿಮಾಕ್ಕೆ ಸಹ ನಿರ್ದೇಶನ ಮಾಡಿರುವುದು ವಿಶೇಷ.

ಅರ್ಗಿರಿಸ್ ಪಪಡಿಮಿಟ್ರೊಪೊಲಸ್: ಅರ್ಗಿರಿಸ್ ಮೂಲತಃ ನಿರ್ಮಾಪಕ. ಇವರು ಹತ್ತಕ್ಕೂ ಸಿನಿಮಾಗಳನ್ನು ನಿರ್ಮಿಸಿ, ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರ ಮುಖ್ಯ ಆಸಕ್ತಿ ಅಥೆನ್ಸಿನ ಜನಜೀವನವನ್ನು ಹಿಡಿಯುವುದರ ಜೊತೆಗೆ ಯುವ ಹಾಗೂ ವಯಸ್ಕ ಪೀಳಿಗೆಗಳ ನಡುವಿನ ವ್ಯತ್ಯಾಸಗಳನ್ನು ಕಟ್ಟಿಕೊಡುವುದು. ಎರಡು ಪೀಳಿಗೆಗಳ ದೃಷ್ಟಿಕೋನದಲ್ಲಿ ಅಥೆನ್ಸ್‌ಅನ್ನು ಅಥೆಂಟಿಕ್ ಆಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಸಂದರ್ಶನವೊಂದರಲ್ಲಿ ಹೇಳುವಂತೆ, ಒಬ್ಬ ನಟನನ್ನು ಆರಿಸಿಕೊಂಡು, ಆ ಪಾತ್ರದ ಸ್ನೇಹಿತರ ಪಾತ್ರಗಳಿಗೆ, ಆ ನಟನ ನಿಜವಾದ ಸ್ನೇಹಿತರನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿರುತ್ತಾರೆ ಅರ್ಗಿರಿಸ್. ನಟ ನಟಿಯರೊಂದಿಗೆ ಕಥೆಯನ್ನು ಚರ್ಚಿಸಿದ ನಂತರ, ಸ್ಕ್ರಿಪ್ಟ್‌ಅನ್ನು ಪಕ್ಕಕ್ಕಿಟ್ಟು, ನಟ-ನಟಿಯರೊಂದಿಗೆ ಸಮಯ ಕಳೆಯುತ್ತಾ, ಯಾವುದೇ ಒತ್ತಡವಿಲ್ಲದೆ ಸಿನಿಮಾ ಮಾಡುವುದು ಇವರ ಶೈಲಿ. ಪರಸ್ಪರರ ಕುರಿತು ಒಮ್ಮೆ ತಿಳಿದುಕೊಂಡ ನಂತರ ಕ್ಯಾಮರಾದಿಂದ ಅವರ ಬದುಕನ್ನು ಹಿಡಿಯುವ ಮೂಲಕ ಸಿನಿಮಾವನ್ನು ಕಟ್ಟುವುದು ಕೂಡ.

ಅರ್ಗಿರಿಸ್ ಪಪಡಿಮಿಟ್ರೊಪೊಲಸ್

ಇದರಿಂದ ಅವರ ಸಿನಿಮಾಗಳಲ್ಲಿ ನಿಜವಾದ ಬದುಕನ್ನು ಹಿಡಿಯಲು ಸಾಧ್ಯವಾಗುತ್ತದೆ ಹಾಗೂ ಗೆಳೆಯರೇ ಒಡಗೂಡಿ ನಟಿಸುವಾಗ ಯಾವುದೇ ರೀತಿಯ ಮುಚ್ಚುಮರೆ ಮುಜುಗರಗಳಿಲ್ಲದೆ ನಟಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಇವರ ಕ್ಯಾಮರಾ ಶೈಲಿ ಸದಾ ’ಹ್ಯಾಂಡ್ ಹೆಲ್ಡ್’ ಆಗಿರುತ್ತದೆ. ಪ್ರೇಕ್ಷಕರು ಪಾತ್ರಗಳೊಂದಿಗೆ ಅವರು ಹೋದ ಜಾಗಗಳಿಗೆಲ್ಲ ಹೋಗುತ್ತಾ, ಪ್ರೇಕ್ಷಕರು ಪಾತ್ರಗಳ ಗೆಳೆಯರೆಂಬಂತೆ ಮಾಡುತ್ತದೆ ಸಿನಿಮ್ಯಾಟೋಗ್ರಫಿ.

ಕಥೆಯ ವಿಷಯಕ್ಕೆ ಬಂದರೆ, ಮುಖ್ಯವಾದ ಘಟನೆಗಳೇ ಇರಬೇಕು ಅನ್ನದೇ, ಎಷ್ಟೋ ನಿರಾಸಕ್ತವಾದ ಚಟುವಟಿಕೆಗಳನ್ನು ಚಿತ್ರೀಕರಿಸುತ್ತಾರೆ. ಅದೇ ನಿಜವಾದ ಬದುಕಿನ ಸೂಚಕವೆನ್ನುವುದು ಉಲ್ಲೇಖನೀಯ.

ಅಥೆನ್ಸ್‌ನಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು, ವಿವಿಧ ವಯಸ್ಸಿನ ವ್ಯಕ್ತಿಗಳ, ಪೀಳಿಗೆಗಳ ದೃಷ್ಟಿಯಿಂದ ಅವರ ಬದುಕುಗಳ ಬಗ್ಗೆ ಚಿತ್ರಕತೆ ಬರೆದು, ಅವರಂತಿರುವ ನಟರನ್ನು ಅಥವಾ ನಟನೆಯೇ ತಿಳಿಯದವರನ್ನು ಆಯ್ಕೆ ಮಾಡಿ, ಅವರೊಂದಿಗೆ ಕೂಡಿಕೊಂಡು ಗೆಳೆಯರಂತೆ ಬದುಕುತ್ತಾ ಅವರ ಬದುಕನ್ನು ನೈಜವಾಗಿ ಕ್ಯಾಮರಾದ ಸಹಾಯದಿಂದ ಕಟ್ಟಿರುವುದನ್ನು ಅರ್ಗಿರಿಸ್‌ರ ಸಿನಿಮಾಗಳಲ್ಲಿ ನೋಡಬಹುದು.


ಇದನ್ನೂ ಓದಿ: ಪಿಕೆ ಟಾಕೀಸ್: ನಿಗೂಢ ಅಥೆನ್ಸ್‌ನ ಜನಜೀವನವನ್ನು ಚಿತ್ರಿಸಿರುವ ಅದನ್ನು ಅಲೆಗರಿಯಾಗಿಸುವ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...