Homeಕರ್ನಾಟಕಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

ಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

- Advertisement -
- Advertisement -

ಇಡೀ ಪ್ರಪಂಚವನ್ನೇ ಒಂದು ಸಾಂಕ್ರಾಮಿಕ ಕಾಡುತಿದ್ದರೆ ಕರ್ನಾಟಕದಲ್ಲಿ ಕೊರೊನಾದ ಜತೆಗೆ ಸರಕಾರವೂ ತನ್ನದೇ ಆದ ರೀತಿಯಲ್ಲಿ ರೋಗಗ್ರಸ್ತವಾದಂತಿದೆ ಅಧಿಕಾರವಹಿಸಿಕೊಂಡಂದಿನಿಂದ ಇಂದಿನವರೆಗೆ ಒಂದು ಆರೋಗ್ಯಪೂರ್ಣ ಚುನಾಯಿತ ಸರ್ಕಾರದಂತೆ ಈ ಸರಕಾರ ಕಂಡುಬರಲೇ ಇಲ್ಲ. ಮೊದಲಿಗೆ ಆಪರೇಷನ್ ಕಮಲ ಎಂಬ ಅರ್ಬುದವನ್ನು ಆಶ್ರಯಿಸಿ ಸರಕಾರ ರಚಿಸಿದಾಗಲೇ ಈ ಸರಕಾರದ ಆರೋಗ್ಯದ ಬಗ್ಗೆ ಸಂಶಯ ಎದ್ದಿತ್ತು. ಈಗ ಊಹಿಸಿದ್ದಕ್ಕಿಂತ ಹೆಚ್ಚೇ ಆಪರೇಷನ್ ಕಮಲದ ಪರಿಣಾಮಗಳು ಸರಕಾರವನ್ನು ಕಾಡುತ್ತಿರುವಂತಿದೆ.

ಅಶ್ಲೀಲತೆಯೂ ನಿಗೂಢತೆಯೂ ಒಂದಕ್ಕಿಂತ ಒಂದು ಹೆಚ್ಚು ಎನ್ನುವ ರೀತಿಯಲ್ಲಿ ಬೆರೆಸಿಕೊಂಡು ಕರ್ನಾಟಕದ ಜನರನ್ನು ಸದ್ಯಕ್ಕೆ ರಂಜಿಸುತ್ತಿರುವ ಆಳುವ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರ ವಿವಾಹೇತರ ಖಾಸಗಿ ಕ್ಷಣಗಳ ದೃಶ್ಯಾವಳಿಗಳ ಸಿ.ಡಿ.ಯ ಮೂಲ ಇನ್ನೂ ರಹಸ್ಯವಾಗಿಯೇ ಉಳಿದಿದ್ದರೂ, ಆಪರೇಷನ್ ಕಮಲಕ್ಕೂ ಈ ಸಿ.ಡಿ.ಗೂ ಒಂದು ನಂಟು ಇದ್ದಂತೆ ಈ ತನಕದ ಬೆಳವಣಿಗೆಗಳು ಸೂಚಿಸುತ್ತವೆ. ಇನ್ನೂ ಇವೆ ಎನ್ನಲಾದ ಹಲವು ಸಚಿವರುಗಳನ್ನೂ, ಪ್ರಭಾವಿಗಳನ್ನೂ ಒಳಗೊಂಡ ಸಿ.ಡಿ.ಗಳಿಗೂ ಈ ನಂಟನ್ನು ವಿಸ್ತರಿಸಬಹುದು ಅನ್ನಿಸುತ್ತದೆ. ಒಂದೆಡೆ, ಜನಸಮೂಹಕ್ಕೆ ಕೊರೊನಾ ವೈರಸ್ಸು ಬಾಧಿಸುತಿದ್ದರೆ, ಇನ್ನೊಂದೆಡೆ ಸರಕಾರದ ಬಹುಭಾಗವನ್ನು ಆಪರೇಷನ್ ಕಮಲದ ಉತ್ತರಾರ್ಧದಲ್ಲಿ ಅದ್ಯಾವುದೋ ವಿಕೃತಿ (perversion) ಆವರಿಸಿದಂತಿದೆ.

ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ 67.19% ಕ್ಕೆ ಏರಿಕೆ
PC: Google

ಕರ್ನಾಟಕದ ಈಗಿನ ಆಳುವ ಪಕ್ಷ 2008ರಲ್ಲಿ ಮೊದಲ ಬಾರಿಗೆ ಅಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಿದ ಸಂದರ್ಭದಲ್ಲಿ ಆಪರೇಷನ್ ಕಮಲದ ಮೂಲಕ ಖರೀದಿಸಿದ ವಿರೋಧಿ ಬಣದ ಶಾಸಕರು ಕೊಟ್ಟದ್ದನ್ನು ಪಡೆದು ತೆಪ್ಪಗೆ ಇರುವ ಜಾಯಮಾನದವರಾಗಿದ್ದರು. ಆದಕಾರಣ ಆಪರೇಷನ್ ಕಮಲದ ಆ ಮೊದಲ ಆವೃತ್ತಿ ’ಯಶಸ್ವಿ’ ಎನ್ನುವಂತೆಯೇ ಆಗಿಹೋಯಿತು. ಈ ಬಾರಿ ಆಪರೇಷನ್ ಕಮಲದ ಮೂಲಕ ಆಳುವ ಪಕ್ಷಕ್ಕೆ ಖರೀದಿಸಲು ಸಿಕ್ಕಿದ್ದು ಹೋದ ಬಾರಿ ಸಿಕ್ಕಂತಹ ನೀರೊಳ್ಳೆ ಹಾವುಗಳಲ್ಲ. ಈ ಬಾರಿ ಬಲೆಗೆ ಬಿದ್ದದ್ದು ಘಟಸರ್ಪಗಳು. ಅವು ಕೊಟ್ಟದ್ದನ್ನು ಗಿಟ್ಟಿಸಿಕೊಂಡು ಸುಮ್ಮನಿರುವ ಜಾಯಮಾನದವುಗಳಲ್ಲ. ಅವು ಖಾತೆಗಾಗಿ ನಡೆಸಿದ ಚೌಕಾಸಿಯನ್ನು ನೆನಪಿಸಿಕೊಳ್ಳಿ. ಈಗಲೂ ಆಳುವ ಪಕ್ಷದ ಮೂಲ ಹಳೆಯ ತಲೆಗಳಿಗಿಂತ ಸರಕಾರದಲ್ಲಿ ಹೆಚ್ಚು ಮಿಂಚುತ್ತಿರುವುದು ಆಪರೇಷನ್ ಕಮಲದ ಮೂಲಕ ಖರೀದಿಯಾದ ಮುಖಗಳೇ.

ಆಪರೇಷನ್ ಕಮಲವನ್ನು ಈ ಬಾರಿ ನಿರ್ದೇಶಿಸದವರಿಗೆ ಇದೆಲ್ಲಾ ಮೊದಲೇ ಗೊತ್ತಿತ್ತು. ಅವರು ಬಹು ಚಾಣಾಕ್ಷರೇ ಇರಬೇಕು. ಅವರು ಬಹಳ ಮುಂದಾಲೋಚನೆಯಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಬಲೆಗೆ ಬಿದ್ದ ಸರ್ಪಗಳ ಹಲ್ಲಿನ ಹರಿತವನ್ನೂ, ವಿಷದ ಚೀಲದ ಗಾತ್ರವನ್ನು ಅವರು ಪೂರ್ವಭಾವಿಯಾಗಿಯೇ ಲೆಕ್ಕಹಾಕಿ ಮುಂದೊಂದು ದಿನ ಭಾರಿಯಾಗಿ ಹೆಡೆ ಬಿಚ್ಚಿದರೆ ಏನೇನು ಮಾಡಬೇಕು ಅಂತ ಸರಿಯಾದ ಮುನ್ನೆಚ್ಚರಿಕೆ ವಹಿಸಿದ್ದಾರೆ. ಗುಟ್ಟಾಗಿ ಎಲ್ಲರ ಜುಟ್ಟನ್ನು ಕೈಗೆ ತೆಗೆದುಕೊಂಡೇ ಈ ಬಾರಿ ಆಪರೇಷನ್ ಕಮಲದ ದಾಳ ಉರುಳಿಸಿದ್ದಾರೆ. ಅದರ ಫಲವಾಗಿಯೇ ಈಗ ಆಪರೇಷನ್ ಕಮಲದ ಫಲಾನುಭವಿಗಳ ಕೊರಳಿಗೆ ಸಿ.ಡಿ.ಯ ಮಾಲೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸುತ್ತಿಕೊಂಡಿರುವುದು ಎನ್ನುವುದು ಜನರು ತಮ್ಮ ಸಾಮಾನ್ಯ ಜ್ಞಾನದಿಂದ ಹಾಕಿಕೊಂಡ ಲೆಕ್ಕಾಚಾರ.

ಈ ನಂಟಿಗೆ ಪುರಾವೆ ಇಲ್ಲ ಎನ್ನುವುದು ನಿಜ. ಆದರೆ, ಎಲ್ಲಾ ಪುರಾವೆಗಿಂತಲೂ ಜನರ ಸಾಮಾನ್ಯ ಜ್ಞಾನವನ್ನೇ ನಂಬಬೇಕಾದ ಕಾಲ ಇದು. ಈ ನಂಟಿಗೆ ಹಲವು ಆಯಾಮಗಳನ್ನು ಊಹಿಸಬಹುದು. ವಾಸ್ತವದಲ್ಲಿ, ಇದನ್ನೆಲ್ಲಾ ಆಪರೇಷನ್ ಕಮಲದ ನೇರ ರೂವಾರಿಗಳೇ ಮಾಡಿರಬೇಕಂತಲೂ ಇಲ್ಲ. ಆಪರೇಷನ್ ಕಮಲದ ಒಟ್ಟು ಯೋಜನೆ ಮತ್ತು ಆ ಮೂಲಕ ಈಗಿನ ಮುಖ್ಯಮಂತ್ರಿಗಳ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವುದೇ ಇಷ್ಟವಿಲ್ಲದ ಆಳುವ ಪಕ್ಷದ ಯಾವುದೋ ಗುಂಪಿನವರೂ ಹೀಗೆ ಎಲ್ಲರ ಜುಟ್ಟನ್ನು ಸಿ.ಡಿ.ಯ ಮೂಲಕ ಹಿಡಿದುಕೊಳ್ಳುವ ಜಾಣತನ ತೋರಿರುವ ಸಾಧ್ಯತೆ ಇದೆ. ಯಾರೇ ಮಾಡಿರಲಿ, ಅವರು ಈ ಜಾಲದ ಒಂದು ತಂತು ವಿರೋಧ ಪಕ್ಷದ ಬುಡಕ್ಕೂ ತಗುಲಿಸಿ ಅವರನ್ನೂ ಇದರಲ್ಲಿ ಭಾಗೀದಾರರನ್ನಾಗಿ ಮಾಡಿದ ರಣತಂತ್ರವಂತೂ ಅದ್ಭುತ. ಆಪರೇಷನ್ ಕಮಲದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದು ವಿರೋಧ ಪಕ್ಷದ ಯಾರದ್ದಾದರೂ ಕಡೆಯಿಂದಲೇ ಇಡೀ ನಾಟಕ ನಡೆದಿದ್ದರಂತೂ ಅದು ಇನ್ನೂ ಅದ್ಭುತ – ಯಾಕೆಂದರೆ ವಿರೋಧ ಪಕ್ಷಗಳಲ್ಲಿ ಚೈತನ್ಯವೇ ಉಡುಗಿಹೋಗಿದೆ ಎನ್ನುವ ಊಹೆ ಆ ಮೂಲಕ ಸುಳ್ಳಾದಂತೆ ಆಗುತ್ತದೆ. ಸದ್ಯಕ್ಕಂತೂ ನದಿ ಮೂಲ, ಋಷಿ ಮೂಲ ಇತ್ಯಾದಿಗಳಂತೆಯೇ ಈ ಸಿ.ಡಿ. ಮೂಲ ಕೂಡ ನಿಗೂಢ.

ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಮದ್ಯದ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ, ಕ್ಯಾಪಿಟೇಷನ್ ಲಾಬಿ, ಟಿಂಬರ್ ಲಾಬಿ, ಗಣಿ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ. ಆ ಲಾಬಿಗಳದ್ದೆಲ್ಲಾ ಹಳೆಯ ಕತೆ. ಇದು ಹೊಸ ಸ್ಟಾರ್ಟ್‌ಅಪ್ ಐಡಿಯಾಗಳ ಕಾಲ. ಯಾವ ಲಾಬಿಯೂ ಬೇಕಾಗಿಲ್ಲ. ಆಯಕಟ್ಟಿನ ಜಾಗದಲ್ಲಿ ಒಂದು ಕ್ಯಾಮರಾ ಇಟ್ಟುಬಿಟ್ಟು ಒಂದು ಸಿ.ಡಿ. ಸೃಷ್ಟಿಸಿಬಿಟ್ಟರೆ ಆರು ಕೋಟಿ ಜನ ಚುನಾಯಿಸಿದ ಸರ್ಕಾರವೊಂದನ್ನು ಬೆರಳ ತುದಿಯಲ್ಲಿ ಆಡಿಸಿಬಿಡಬಹುದು. ಹೋರಾಟಗಳ ಮೂಸೆಯಲ್ಲಿ ರೂಪುಗೊಂಡ ರಾಜಕೀಯ ಹುಲಿಗಳನ್ನು ಬಾಲ ಮುದುಡಿದ ಬೆಕ್ಕುಗಳನ್ನಾಗಿ ಮಾಡಿಬಿಡಬಹುದು. ಒಂದು ದಿನ ಸರಕಾರ ಉರುಳಿಸಿದವರನ್ನು ಮರುದಿನ ಪೊಲೀಸರ ಮುಂದೆ ದೈನೇಸಿ ನಿಲ್ಲುವಂತೆ ಮಾಡಬಹುದು. ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳು (ಸುದ್ದಿವಾಹಿನಿ) ಎಲ್ಲವನ್ನೂ ಮರೆತು ಆಡಿದ್ದನ್ನೇ ಆಡುತ್ತಾ, ತೋರಿಸಿದ್ದನ್ನೇ ತೋರಿಸುತ್ತಾ ಜೊಲ್ಲು ಸುರಿಸುವಂತೆ ಮಾಡಬಹುದು.

ಇಲ್ಲಿ ಯಾವುದೇ ರೀತಿಯ ಊಹೆ, ಕಲ್ಪನೆ, ಸುಳ್ಳು ಸುದ್ದಿಯ ಪ್ರಶ್ನೆ ಇಲ್ಲ. ಆಳುವ ಪಕ್ಷದ ಜವಾಬ್ದಾರಿಯುತ ಶಾಸಕರುಗಳು ಕಾಲಕಾಲಕ್ಕೆ ನೀಡಿದ ಸಾರ್ವಜನಿಕ ಹೇಳಿಕೆಗಳನ್ನು ಮತ್ತು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಒಟ್ಟಿಗಿಟ್ಟು ಪರಾಮರ್ಶಿಸಿದರೆ ತಿಳಿಯುವ ಕೆಲವು ಸತ್ಯಗಳು ಹೀಗಿವೆ: ಈ ರಾಜ್ಯದ ಮಂತ್ರಿಮಂಡಲದಲ್ಲಿ ಯಾರು ಸೇರುತ್ತಾರೆ, ಯಾರು ಸೇರುವುದಿಲ್ಲ ಎನ್ನುವುದರ ನಿರ್ಣಯವಾಗುವುದು ಯಾರೋ ಯಾರದೋ ಖಾಸಗಿ ಕ್ಷಣಗಳನ್ನೂ ಚಿತ್ರೀಕರಿಸಿ ಇಟ್ಟುಕೊಂಡಿರುವ ’ಸಿ.ಡಿ.’ಗಳ ಆಧಾರದಲ್ಲಿ. ಈ ರಾಜ್ಯದ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗುವುದೂ ಅಂತಹ ಸಿ.ಡಿ.ಗಳ ವಿಷಯ. ಈ ರಾಜ್ಯದ ಪತ್ರಿಕೆಗಳ ಮುಖಪುಟಗಳನ್ನು ಮತ್ತು ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳ ಪ್ರೈಮ್ ಟೈಮ್‌ಅನ್ನು ಆವರಿಸಿಕೊಳ್ಳುತ್ತಿರುವುದು ಅಂತಹ ಸಿ.ಡಿ.ಗಳಲ್ಲಿ ಹುದುಗಿಕೊಂಡಿರುವ ವರ್ಣರಂಜಿತ ದೃಶ್ಯಾವಳಿಗಳ-ಅವುಗಳ ಹಿಂದಿನ ಕಾಣದ ಕೈಗಳ ವಿಚಾರ.

pe

ತನಿಖೆ ನಡೆಸಲು ಸಾವಿರಗಟ್ಟಲೆ ಪ್ರಕರಣಗಳು ರಾಶಿ ಬಿದ್ದಿರುವಾಗ ಈ ರಾಜ್ಯದ ಪೊಲೀಸರು ತಮ್ಮ ಅಮೂಲ್ಯ ಸಮಯವನ್ನು ಬಳಸುವುದು ಈ ರೀತಿಯ ಸಿ.ಡಿ.ಗಳ ಪಾತ್ರಧಾರಿಗಳ, ಸೂತ್ರಧಾರಿಗಳ ಅಸಲೀಯತ್ತತೆಯನ್ನು ಪತ್ತೆ ಹಚ್ಚುವುದಕ್ಕೋಸ್ಕರ. ಈ ರಾಜ್ಯದ ವಿರೋಧ ಪಕ್ಷಗಳು ಸರಕಾರದ ವಿರುದ್ಧ ಹೋರಾಟ ನಡೆಸಲು ಆದ್ಯತೆಯ ಮೇಲೆ ಆಯ್ದುಕೊಳ್ಳುವುದು ಇಂತಹ ಸಿ.ಡಿ. ಸುತ್ತ ಎದ್ದಿರುವ ಪ್ರಶ್ನೆಗಳನ್ನು. ಈ ರಾಜ್ಯದಲ್ಲಿ ಸಾಮಾಜಿಕ ಕಾರ್ಯಕರ್ತರು ಕಂಡುಕೊಂಡ ಹೊಸ ಸಮಾಜ ಸೇವೆ ಎಂದರೆ ಅದು ಇಂತಹ ಸಿ.ಡಿ.ಗಳ ಸಂಗ್ರಹ ಮತ್ತು ಪ್ರದರ್ಶನ. ಸಿ.ಡಿ. ಪ್ರಕರಣಗಳಲ್ಲಿ ಸಿಲುಕಿದವರನ್ನು-ಸಿಲುಕಿಸಿದವರನ್ನು ಒಟ್ಟುಸೇರಿಸಿ ಸಂಧಾನ ನಡೆಸುವುದು ಈ ರಾಜ್ಯದ ಕೆಲವು ಸ್ವಾಮೀಜಿಗಳು ಮಾಡುವ ಹೊಸ ಆಧ್ಯಾತ್ಮ ಅನುಷ್ಠಾನ.

ರಾಜಕೀಯ ನಾಟಕ ಯಾವತ್ತಿಗೂ ಅಸಂಗತವೇ. ಆದರೆ ನಾವೀಗ ಕಾಣುತ್ತಿರುವುದು ಅಸಂಗತತೆಯ ಅಪರಾವತಾರವನ್ನು. ಅದನ್ನೂ ದಾಟಿದ ಮನೋವಿಕೃತಿಯಾಟಗಳನ್ನು. ಕೊರೊನಾಕ್ಕೆ ಆದರೂ ಲಸಿಕೆ ಬಂದಿದೆ. ಆದರೆ ಈ ಎಲ್ಲಾ ವಿಕೃತಿಗಳಿಗೆ ಲಸಿಕೆ ಎಲ್ಲಿದೆ?


ಇದನ್ನೂ ಓದಿ: ಸಿಡಿ ಹಗರಣ: SIT ನಿಷ್ಪಕ್ಷಪಾತ ತನಿಖೆ ಅನುಮಾನವೆಂದು ಗೃಹಮಂತ್ರಿಗಳಿಗೆ ಪತ್ರ ಬರೆದ ನಾವೆದ್ದು ನಿಲ್ಲದಿದ್ದರೇ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...