Homeಕರ್ನಾಟಕಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

ಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

- Advertisement -
- Advertisement -

ಇಡೀ ಪ್ರಪಂಚವನ್ನೇ ಒಂದು ಸಾಂಕ್ರಾಮಿಕ ಕಾಡುತಿದ್ದರೆ ಕರ್ನಾಟಕದಲ್ಲಿ ಕೊರೊನಾದ ಜತೆಗೆ ಸರಕಾರವೂ ತನ್ನದೇ ಆದ ರೀತಿಯಲ್ಲಿ ರೋಗಗ್ರಸ್ತವಾದಂತಿದೆ ಅಧಿಕಾರವಹಿಸಿಕೊಂಡಂದಿನಿಂದ ಇಂದಿನವರೆಗೆ ಒಂದು ಆರೋಗ್ಯಪೂರ್ಣ ಚುನಾಯಿತ ಸರ್ಕಾರದಂತೆ ಈ ಸರಕಾರ ಕಂಡುಬರಲೇ ಇಲ್ಲ. ಮೊದಲಿಗೆ ಆಪರೇಷನ್ ಕಮಲ ಎಂಬ ಅರ್ಬುದವನ್ನು ಆಶ್ರಯಿಸಿ ಸರಕಾರ ರಚಿಸಿದಾಗಲೇ ಈ ಸರಕಾರದ ಆರೋಗ್ಯದ ಬಗ್ಗೆ ಸಂಶಯ ಎದ್ದಿತ್ತು. ಈಗ ಊಹಿಸಿದ್ದಕ್ಕಿಂತ ಹೆಚ್ಚೇ ಆಪರೇಷನ್ ಕಮಲದ ಪರಿಣಾಮಗಳು ಸರಕಾರವನ್ನು ಕಾಡುತ್ತಿರುವಂತಿದೆ.

ಅಶ್ಲೀಲತೆಯೂ ನಿಗೂಢತೆಯೂ ಒಂದಕ್ಕಿಂತ ಒಂದು ಹೆಚ್ಚು ಎನ್ನುವ ರೀತಿಯಲ್ಲಿ ಬೆರೆಸಿಕೊಂಡು ಕರ್ನಾಟಕದ ಜನರನ್ನು ಸದ್ಯಕ್ಕೆ ರಂಜಿಸುತ್ತಿರುವ ಆಳುವ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರ ವಿವಾಹೇತರ ಖಾಸಗಿ ಕ್ಷಣಗಳ ದೃಶ್ಯಾವಳಿಗಳ ಸಿ.ಡಿ.ಯ ಮೂಲ ಇನ್ನೂ ರಹಸ್ಯವಾಗಿಯೇ ಉಳಿದಿದ್ದರೂ, ಆಪರೇಷನ್ ಕಮಲಕ್ಕೂ ಈ ಸಿ.ಡಿ.ಗೂ ಒಂದು ನಂಟು ಇದ್ದಂತೆ ಈ ತನಕದ ಬೆಳವಣಿಗೆಗಳು ಸೂಚಿಸುತ್ತವೆ. ಇನ್ನೂ ಇವೆ ಎನ್ನಲಾದ ಹಲವು ಸಚಿವರುಗಳನ್ನೂ, ಪ್ರಭಾವಿಗಳನ್ನೂ ಒಳಗೊಂಡ ಸಿ.ಡಿ.ಗಳಿಗೂ ಈ ನಂಟನ್ನು ವಿಸ್ತರಿಸಬಹುದು ಅನ್ನಿಸುತ್ತದೆ. ಒಂದೆಡೆ, ಜನಸಮೂಹಕ್ಕೆ ಕೊರೊನಾ ವೈರಸ್ಸು ಬಾಧಿಸುತಿದ್ದರೆ, ಇನ್ನೊಂದೆಡೆ ಸರಕಾರದ ಬಹುಭಾಗವನ್ನು ಆಪರೇಷನ್ ಕಮಲದ ಉತ್ತರಾರ್ಧದಲ್ಲಿ ಅದ್ಯಾವುದೋ ವಿಕೃತಿ (perversion) ಆವರಿಸಿದಂತಿದೆ.

ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ 67.19% ಕ್ಕೆ ಏರಿಕೆ
PC: Google

ಕರ್ನಾಟಕದ ಈಗಿನ ಆಳುವ ಪಕ್ಷ 2008ರಲ್ಲಿ ಮೊದಲ ಬಾರಿಗೆ ಅಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಿದ ಸಂದರ್ಭದಲ್ಲಿ ಆಪರೇಷನ್ ಕಮಲದ ಮೂಲಕ ಖರೀದಿಸಿದ ವಿರೋಧಿ ಬಣದ ಶಾಸಕರು ಕೊಟ್ಟದ್ದನ್ನು ಪಡೆದು ತೆಪ್ಪಗೆ ಇರುವ ಜಾಯಮಾನದವರಾಗಿದ್ದರು. ಆದಕಾರಣ ಆಪರೇಷನ್ ಕಮಲದ ಆ ಮೊದಲ ಆವೃತ್ತಿ ’ಯಶಸ್ವಿ’ ಎನ್ನುವಂತೆಯೇ ಆಗಿಹೋಯಿತು. ಈ ಬಾರಿ ಆಪರೇಷನ್ ಕಮಲದ ಮೂಲಕ ಆಳುವ ಪಕ್ಷಕ್ಕೆ ಖರೀದಿಸಲು ಸಿಕ್ಕಿದ್ದು ಹೋದ ಬಾರಿ ಸಿಕ್ಕಂತಹ ನೀರೊಳ್ಳೆ ಹಾವುಗಳಲ್ಲ. ಈ ಬಾರಿ ಬಲೆಗೆ ಬಿದ್ದದ್ದು ಘಟಸರ್ಪಗಳು. ಅವು ಕೊಟ್ಟದ್ದನ್ನು ಗಿಟ್ಟಿಸಿಕೊಂಡು ಸುಮ್ಮನಿರುವ ಜಾಯಮಾನದವುಗಳಲ್ಲ. ಅವು ಖಾತೆಗಾಗಿ ನಡೆಸಿದ ಚೌಕಾಸಿಯನ್ನು ನೆನಪಿಸಿಕೊಳ್ಳಿ. ಈಗಲೂ ಆಳುವ ಪಕ್ಷದ ಮೂಲ ಹಳೆಯ ತಲೆಗಳಿಗಿಂತ ಸರಕಾರದಲ್ಲಿ ಹೆಚ್ಚು ಮಿಂಚುತ್ತಿರುವುದು ಆಪರೇಷನ್ ಕಮಲದ ಮೂಲಕ ಖರೀದಿಯಾದ ಮುಖಗಳೇ.

ಆಪರೇಷನ್ ಕಮಲವನ್ನು ಈ ಬಾರಿ ನಿರ್ದೇಶಿಸದವರಿಗೆ ಇದೆಲ್ಲಾ ಮೊದಲೇ ಗೊತ್ತಿತ್ತು. ಅವರು ಬಹು ಚಾಣಾಕ್ಷರೇ ಇರಬೇಕು. ಅವರು ಬಹಳ ಮುಂದಾಲೋಚನೆಯಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಬಲೆಗೆ ಬಿದ್ದ ಸರ್ಪಗಳ ಹಲ್ಲಿನ ಹರಿತವನ್ನೂ, ವಿಷದ ಚೀಲದ ಗಾತ್ರವನ್ನು ಅವರು ಪೂರ್ವಭಾವಿಯಾಗಿಯೇ ಲೆಕ್ಕಹಾಕಿ ಮುಂದೊಂದು ದಿನ ಭಾರಿಯಾಗಿ ಹೆಡೆ ಬಿಚ್ಚಿದರೆ ಏನೇನು ಮಾಡಬೇಕು ಅಂತ ಸರಿಯಾದ ಮುನ್ನೆಚ್ಚರಿಕೆ ವಹಿಸಿದ್ದಾರೆ. ಗುಟ್ಟಾಗಿ ಎಲ್ಲರ ಜುಟ್ಟನ್ನು ಕೈಗೆ ತೆಗೆದುಕೊಂಡೇ ಈ ಬಾರಿ ಆಪರೇಷನ್ ಕಮಲದ ದಾಳ ಉರುಳಿಸಿದ್ದಾರೆ. ಅದರ ಫಲವಾಗಿಯೇ ಈಗ ಆಪರೇಷನ್ ಕಮಲದ ಫಲಾನುಭವಿಗಳ ಕೊರಳಿಗೆ ಸಿ.ಡಿ.ಯ ಮಾಲೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸುತ್ತಿಕೊಂಡಿರುವುದು ಎನ್ನುವುದು ಜನರು ತಮ್ಮ ಸಾಮಾನ್ಯ ಜ್ಞಾನದಿಂದ ಹಾಕಿಕೊಂಡ ಲೆಕ್ಕಾಚಾರ.

ಈ ನಂಟಿಗೆ ಪುರಾವೆ ಇಲ್ಲ ಎನ್ನುವುದು ನಿಜ. ಆದರೆ, ಎಲ್ಲಾ ಪುರಾವೆಗಿಂತಲೂ ಜನರ ಸಾಮಾನ್ಯ ಜ್ಞಾನವನ್ನೇ ನಂಬಬೇಕಾದ ಕಾಲ ಇದು. ಈ ನಂಟಿಗೆ ಹಲವು ಆಯಾಮಗಳನ್ನು ಊಹಿಸಬಹುದು. ವಾಸ್ತವದಲ್ಲಿ, ಇದನ್ನೆಲ್ಲಾ ಆಪರೇಷನ್ ಕಮಲದ ನೇರ ರೂವಾರಿಗಳೇ ಮಾಡಿರಬೇಕಂತಲೂ ಇಲ್ಲ. ಆಪರೇಷನ್ ಕಮಲದ ಒಟ್ಟು ಯೋಜನೆ ಮತ್ತು ಆ ಮೂಲಕ ಈಗಿನ ಮುಖ್ಯಮಂತ್ರಿಗಳ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವುದೇ ಇಷ್ಟವಿಲ್ಲದ ಆಳುವ ಪಕ್ಷದ ಯಾವುದೋ ಗುಂಪಿನವರೂ ಹೀಗೆ ಎಲ್ಲರ ಜುಟ್ಟನ್ನು ಸಿ.ಡಿ.ಯ ಮೂಲಕ ಹಿಡಿದುಕೊಳ್ಳುವ ಜಾಣತನ ತೋರಿರುವ ಸಾಧ್ಯತೆ ಇದೆ. ಯಾರೇ ಮಾಡಿರಲಿ, ಅವರು ಈ ಜಾಲದ ಒಂದು ತಂತು ವಿರೋಧ ಪಕ್ಷದ ಬುಡಕ್ಕೂ ತಗುಲಿಸಿ ಅವರನ್ನೂ ಇದರಲ್ಲಿ ಭಾಗೀದಾರರನ್ನಾಗಿ ಮಾಡಿದ ರಣತಂತ್ರವಂತೂ ಅದ್ಭುತ. ಆಪರೇಷನ್ ಕಮಲದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದು ವಿರೋಧ ಪಕ್ಷದ ಯಾರದ್ದಾದರೂ ಕಡೆಯಿಂದಲೇ ಇಡೀ ನಾಟಕ ನಡೆದಿದ್ದರಂತೂ ಅದು ಇನ್ನೂ ಅದ್ಭುತ – ಯಾಕೆಂದರೆ ವಿರೋಧ ಪಕ್ಷಗಳಲ್ಲಿ ಚೈತನ್ಯವೇ ಉಡುಗಿಹೋಗಿದೆ ಎನ್ನುವ ಊಹೆ ಆ ಮೂಲಕ ಸುಳ್ಳಾದಂತೆ ಆಗುತ್ತದೆ. ಸದ್ಯಕ್ಕಂತೂ ನದಿ ಮೂಲ, ಋಷಿ ಮೂಲ ಇತ್ಯಾದಿಗಳಂತೆಯೇ ಈ ಸಿ.ಡಿ. ಮೂಲ ಕೂಡ ನಿಗೂಢ.

ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಮದ್ಯದ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ, ಕ್ಯಾಪಿಟೇಷನ್ ಲಾಬಿ, ಟಿಂಬರ್ ಲಾಬಿ, ಗಣಿ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ. ಆ ಲಾಬಿಗಳದ್ದೆಲ್ಲಾ ಹಳೆಯ ಕತೆ. ಇದು ಹೊಸ ಸ್ಟಾರ್ಟ್‌ಅಪ್ ಐಡಿಯಾಗಳ ಕಾಲ. ಯಾವ ಲಾಬಿಯೂ ಬೇಕಾಗಿಲ್ಲ. ಆಯಕಟ್ಟಿನ ಜಾಗದಲ್ಲಿ ಒಂದು ಕ್ಯಾಮರಾ ಇಟ್ಟುಬಿಟ್ಟು ಒಂದು ಸಿ.ಡಿ. ಸೃಷ್ಟಿಸಿಬಿಟ್ಟರೆ ಆರು ಕೋಟಿ ಜನ ಚುನಾಯಿಸಿದ ಸರ್ಕಾರವೊಂದನ್ನು ಬೆರಳ ತುದಿಯಲ್ಲಿ ಆಡಿಸಿಬಿಡಬಹುದು. ಹೋರಾಟಗಳ ಮೂಸೆಯಲ್ಲಿ ರೂಪುಗೊಂಡ ರಾಜಕೀಯ ಹುಲಿಗಳನ್ನು ಬಾಲ ಮುದುಡಿದ ಬೆಕ್ಕುಗಳನ್ನಾಗಿ ಮಾಡಿಬಿಡಬಹುದು. ಒಂದು ದಿನ ಸರಕಾರ ಉರುಳಿಸಿದವರನ್ನು ಮರುದಿನ ಪೊಲೀಸರ ಮುಂದೆ ದೈನೇಸಿ ನಿಲ್ಲುವಂತೆ ಮಾಡಬಹುದು. ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳು (ಸುದ್ದಿವಾಹಿನಿ) ಎಲ್ಲವನ್ನೂ ಮರೆತು ಆಡಿದ್ದನ್ನೇ ಆಡುತ್ತಾ, ತೋರಿಸಿದ್ದನ್ನೇ ತೋರಿಸುತ್ತಾ ಜೊಲ್ಲು ಸುರಿಸುವಂತೆ ಮಾಡಬಹುದು.

ಇಲ್ಲಿ ಯಾವುದೇ ರೀತಿಯ ಊಹೆ, ಕಲ್ಪನೆ, ಸುಳ್ಳು ಸುದ್ದಿಯ ಪ್ರಶ್ನೆ ಇಲ್ಲ. ಆಳುವ ಪಕ್ಷದ ಜವಾಬ್ದಾರಿಯುತ ಶಾಸಕರುಗಳು ಕಾಲಕಾಲಕ್ಕೆ ನೀಡಿದ ಸಾರ್ವಜನಿಕ ಹೇಳಿಕೆಗಳನ್ನು ಮತ್ತು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಒಟ್ಟಿಗಿಟ್ಟು ಪರಾಮರ್ಶಿಸಿದರೆ ತಿಳಿಯುವ ಕೆಲವು ಸತ್ಯಗಳು ಹೀಗಿವೆ: ಈ ರಾಜ್ಯದ ಮಂತ್ರಿಮಂಡಲದಲ್ಲಿ ಯಾರು ಸೇರುತ್ತಾರೆ, ಯಾರು ಸೇರುವುದಿಲ್ಲ ಎನ್ನುವುದರ ನಿರ್ಣಯವಾಗುವುದು ಯಾರೋ ಯಾರದೋ ಖಾಸಗಿ ಕ್ಷಣಗಳನ್ನೂ ಚಿತ್ರೀಕರಿಸಿ ಇಟ್ಟುಕೊಂಡಿರುವ ’ಸಿ.ಡಿ.’ಗಳ ಆಧಾರದಲ್ಲಿ. ಈ ರಾಜ್ಯದ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗುವುದೂ ಅಂತಹ ಸಿ.ಡಿ.ಗಳ ವಿಷಯ. ಈ ರಾಜ್ಯದ ಪತ್ರಿಕೆಗಳ ಮುಖಪುಟಗಳನ್ನು ಮತ್ತು ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳ ಪ್ರೈಮ್ ಟೈಮ್‌ಅನ್ನು ಆವರಿಸಿಕೊಳ್ಳುತ್ತಿರುವುದು ಅಂತಹ ಸಿ.ಡಿ.ಗಳಲ್ಲಿ ಹುದುಗಿಕೊಂಡಿರುವ ವರ್ಣರಂಜಿತ ದೃಶ್ಯಾವಳಿಗಳ-ಅವುಗಳ ಹಿಂದಿನ ಕಾಣದ ಕೈಗಳ ವಿಚಾರ.

pe

ತನಿಖೆ ನಡೆಸಲು ಸಾವಿರಗಟ್ಟಲೆ ಪ್ರಕರಣಗಳು ರಾಶಿ ಬಿದ್ದಿರುವಾಗ ಈ ರಾಜ್ಯದ ಪೊಲೀಸರು ತಮ್ಮ ಅಮೂಲ್ಯ ಸಮಯವನ್ನು ಬಳಸುವುದು ಈ ರೀತಿಯ ಸಿ.ಡಿ.ಗಳ ಪಾತ್ರಧಾರಿಗಳ, ಸೂತ್ರಧಾರಿಗಳ ಅಸಲೀಯತ್ತತೆಯನ್ನು ಪತ್ತೆ ಹಚ್ಚುವುದಕ್ಕೋಸ್ಕರ. ಈ ರಾಜ್ಯದ ವಿರೋಧ ಪಕ್ಷಗಳು ಸರಕಾರದ ವಿರುದ್ಧ ಹೋರಾಟ ನಡೆಸಲು ಆದ್ಯತೆಯ ಮೇಲೆ ಆಯ್ದುಕೊಳ್ಳುವುದು ಇಂತಹ ಸಿ.ಡಿ. ಸುತ್ತ ಎದ್ದಿರುವ ಪ್ರಶ್ನೆಗಳನ್ನು. ಈ ರಾಜ್ಯದಲ್ಲಿ ಸಾಮಾಜಿಕ ಕಾರ್ಯಕರ್ತರು ಕಂಡುಕೊಂಡ ಹೊಸ ಸಮಾಜ ಸೇವೆ ಎಂದರೆ ಅದು ಇಂತಹ ಸಿ.ಡಿ.ಗಳ ಸಂಗ್ರಹ ಮತ್ತು ಪ್ರದರ್ಶನ. ಸಿ.ಡಿ. ಪ್ರಕರಣಗಳಲ್ಲಿ ಸಿಲುಕಿದವರನ್ನು-ಸಿಲುಕಿಸಿದವರನ್ನು ಒಟ್ಟುಸೇರಿಸಿ ಸಂಧಾನ ನಡೆಸುವುದು ಈ ರಾಜ್ಯದ ಕೆಲವು ಸ್ವಾಮೀಜಿಗಳು ಮಾಡುವ ಹೊಸ ಆಧ್ಯಾತ್ಮ ಅನುಷ್ಠಾನ.

ರಾಜಕೀಯ ನಾಟಕ ಯಾವತ್ತಿಗೂ ಅಸಂಗತವೇ. ಆದರೆ ನಾವೀಗ ಕಾಣುತ್ತಿರುವುದು ಅಸಂಗತತೆಯ ಅಪರಾವತಾರವನ್ನು. ಅದನ್ನೂ ದಾಟಿದ ಮನೋವಿಕೃತಿಯಾಟಗಳನ್ನು. ಕೊರೊನಾಕ್ಕೆ ಆದರೂ ಲಸಿಕೆ ಬಂದಿದೆ. ಆದರೆ ಈ ಎಲ್ಲಾ ವಿಕೃತಿಗಳಿಗೆ ಲಸಿಕೆ ಎಲ್ಲಿದೆ?


ಇದನ್ನೂ ಓದಿ: ಸಿಡಿ ಹಗರಣ: SIT ನಿಷ್ಪಕ್ಷಪಾತ ತನಿಖೆ ಅನುಮಾನವೆಂದು ಗೃಹಮಂತ್ರಿಗಳಿಗೆ ಪತ್ರ ಬರೆದ ನಾವೆದ್ದು ನಿಲ್ಲದಿದ್ದರೇ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...