Homeಮುಖಪುಟಬೆಳ್ಳಿಚುಕ್ಕಿ: ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

ಬೆಳ್ಳಿಚುಕ್ಕಿ: ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

- Advertisement -
- Advertisement -

ಡಿಸೆಂಬರ್ 17, 1903ರಲ್ಲಿ ಅರ್ವಿಲ್ಲೇ ರೈಟ್ ಮತ್ತು ವಿಲ್ಬರ್ ರೈಟ್ (ರೈಟ್ ಸಹೋದರರು) ತಾವೇ ರೂಪಿಸಿದ ವಿಮಾನವನ್ನು ಕ್ಯಾಲಿಫೋರ್ನಿಯಾದ ಕಿಟ್ಟಿ ಹಾಕ್ ಪ್ರದೇಶದಲ್ಲಿ ಮೊದಲ ಬಾರಿಗೆ ಹಾರಿಸಿದರು. ಈ ವಿಮಾನವು 12 ಸೆಕೆಂಡುಗಳವರೆಗೆ, ಭೂ ಪ್ರದೇಶದಿಂದ 20 ಅಡಿಗಳ ಅಂತರದಲ್ಲಿ ಹಾರಾಟ ನಡೆಸಿತು. ಇದು ಮಾನವನ ಇತಿಹಾಸದಲ್ಲೇ ಒಂದು ಚಾರಿತ್ರಿಕ ಮೈಲುಗಲ್ಲು.

ರೈಟ್ ಬ್ರದರ್ಸ್ ವಿಮಾನ ಹಾರಾಟವಾಗಿ ಒಂದು ದಶಕದ ಅಂತರದಲ್ಲಿಯೇ (1914 ರಲ್ಲಿ) ಪ್ರಪಂಚದ ಮೊದಲ ಪ್ರಯಾಣಿಕ ವಿಮಾನ ಹಾರಿತು. ನಂತರ ವೈಮಾನಿಕ ಕ್ಷೇತ್ರದಲ್ಲಿ ನಡೆದಿರುವುದೆಲ್ಲವೂ ರೋಚಕ ಇತಿಹಾಸ. ಅದರಲ್ಲೂ 1969, ಜುಲೈ 20ರಂದು ಚಂದ್ರನ ಮೇಲೆ ನೀಲ್ ಆರ್ಮ್‌ಸ್ಟ್ರಾಂಗ್ ನುಡಿದ ಮೊದಲ ಮಾತು ಇನ್ನೂ ನಮ್ಮ ಕಿವಿಯಲ್ಲಿ ಗುನುಗುತ್ತಲೇ ಇದೆ:

“That’s one small step for man. One giant leap for Mankind”.

PC : The Becker T3 Group, (ರೈಟ್ ಬ್ರದರ್ಸ್)

ರೈಟ್ ಬ್ರದರ್ಸ್ ಅಂದು ನಡೆಸಿದ ಮೊದಲ ವಿಮಾನ ಹಾರಾಟದಂತೆಯೇ ಇಂದು ನಡೆದ (ಏಪ್ರಿಲ್ 19, 2021) ಮತ್ತೊಂದು ಚಾರಿತ್ರಿಕ ಘಟನೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇದು ನಡೆಯುತ್ತಿರುವುದು ಭೂಮಿಯ ಮೇಲೆ ಅಲ್ಲ, ಬದಲಾಗಿ ಭೂಮಿಯಿಂದ ಸುಮಾರು 48 ಕೋಟಿ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹದ ಮೇಲೆ.

ನಾಸಾ ಬಾಹ್ಯಾಕಾಶ ಸಂಸ್ಥೆಯು ಜುಲೈ 30, 2020ರಂದು ಅಟ್ಲಾಸ್ ವಿ 541 ರಾಕೆಟ್‌ನಲ್ಲಿ ಪರ್ಸಿವರೆನ್ಸ್ ಎಂಬ ರೋವರ್‌ಅನ್ನು ಮಂಗಳ ಗ್ರಹಕ್ಕೆ ಕಳುಹಿಸಿತು. ಈ ರೋವರ್ ಸುಮಾರು ಏಳು ತಿಂಗಳ ಸಮಯದಲ್ಲಿ, 48 ಕೋಟಿ ಕಿಲೋಮೀಟರ್ ಸಂಚರಿಸಿ ಫೆಬ್ರವರಿ 18, 2021ರಂದು ಸುರಕ್ಷಿತವಾಗಿ ಮಂಗಳನ ಮೇಲೆ ಇಳಿಯಿತು. ಈ ರೋವರ್ ಸುಮಾರು ಒಂದು ಮಂಗಳ-ವರ್ಷಗಳ ಕಾಲ (ಅಂದರೆ 687 ಭೂ ದಿನಗಳು) ಮಂಗಳನ ಮೇಲೆ ತನ್ನಲ್ಲಿರುವ ಏಳು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಗ್ರಹದ ಅನ್ವೇಷಣೆ ನಡೆಸುತ್ತದೆ.

ಮಾರ್ಸ್ 2020: ಪರ್ಸಿವರೆನ್ಸ್ ರೋವರ್‌ನ ಉದ್ದೇಶವೇನು?

ಮಂಗಳ ಗ್ರಹದ ಮೇಲೆ ಇಳಿದಿರುವ ರೋವರ್‌ಗಳಲ್ಲಿ ಪರ್ಸಿವರೆನ್ಸ್ ರೋವರ್ ಮೊದಲನೆಯ ರೋವರ್ ಏನಲ್ಲ. ಈಗಾಗಲೇ ಹಲವು ರೋವರ್‌ಗಳು ಮಂಗಳ ಗ್ರಹದಲ್ಲಿ ಅನ್ವೇಷಣೆ ಕೈಗೊಂಡಿವೆ. ಈ ಎಲ್ಲಾ ರೋವರ್‌ಗಳಿಂದ ಬಂದ ಮಾಹಿತಿಯ ಪ್ರಕಾರ ಮಂಗಳ ಗ್ರಹದಲ್ಲಿ ಜೀವಿಗಳು ಹಿಂದೆಂದೋ ಇದ್ದಿರಬಹುದಾದ ಸಾಧ್ಯತೆ ಹೆಚ್ಚಿದೆ ಎಂದು ಊಹಿಸಲಾಗುತ್ತಿದೆ. ಆದರೆ ಯಾವ ರೋವರ್‌ಗಳು ಮತ್ತು ಮಂಗಳನ ಕಕ್ಷೆಯಲ್ಲಿ ತಿರುಗುತ್ತಿರುವ ಉಪಗ್ರಹಗಳೂ ಆ ಗ್ರಹದಲ್ಲಿ ಜೀವಿಗಳಿರುವುದರ ಬಗ್ಗೆ ಕಂಡುಹಿಡಿದು ಸಾಬೀತುಪಡಿಸಿಲ್ಲ. ಈಗ ಇಳಿದಿರುವ ಪರ್ಸಿವರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಹಿಂದೆಂದೋ ಇದ್ದ ಜೀವಿಗಳು ಹೇಗಿದ್ದಿರಬಹುದು ಎಂಬ ಅಂಶವನ್ನು ಅನ್ವೇಷಣೆ ಮಾಡಲು ಹೊರಟಿದೆ.

ಜೀವಿಗಳೆಂದರೆ, ಮನುಷ್ಯನ ಗಾತ್ರಕ್ಕೆ ಅಥವಾ ಇನ್ಯಾವುದೋ ಪ್ರಾಣಿಯ ಗಾತ್ರಕ್ಕೆ ಹೋಲುವ ಜೀವಿಗಳಲ್ಲ. ಪರ್ಸಿವರೆನ್ಸ್ ಹುಡುಕಲು ಹೊರಟಿರುವುದು ಸೂಕ್ಷ್ಮಜೀವಿಗಳನ್ನು (Micriobial Life). ಈ ಜೀವಿಗಳನ್ನು ಹುಡುಕಲು ಮಂಗಳನಲ್ಲಿ ಜೆಝೀರೋ ಕುಳಿಯನ್ನು (Jezero Crator) ಆಯ್ಕೆ ಮಾಡಿಕೊಳ್ಳಲಾಗಿದೆ. ಯಾಕೆ ಈ ಜೆಝೀರೋ ಕುಳಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರೆ, ಈ ಹಿಂದಿನ ಮಂಗಳನ ಭೂ ಪ್ರದೇಶಗಳ ಅನ್ವೇಷಣೆಯ ಪ್ರಕಾರ ಜೆಝೀರೋ ಕುಳಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದ ಸಾಧ್ಯತೆ ಹೆಚ್ಚಿದ್ದು, ಈ ನೀರಿನಲ್ಲಿ ಸೂಕ್ಷ್ಮಜೀವಿಗಳು ಜೀವಿಸಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಪರ್ಸಿವರೆನ್ಸ್ ತನ್ನ ಉಪಕರಣಗಳಲ್ಲಿ ಒಂದಾದ ಡ್ರಿಲ್ಲಿಂಗ್ ಮೆಷಿನ್ ಸಹಾಯದಿಂದ ಟ್ಯೂಬ್ ಆಕಾರದಲ್ಲಿ ಮಣ್ಣಿನ ಮಾದರಿಯನ್ನು ತೆಗೆದು, ಒಂದು ಟ್ಯೂಬ್‌ನಲ್ಲಿ ತುಂಬಿ, ತನ್ನಲ್ಲಿರುವ ಮತ್ತೆ ಕೆಲವು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಅದನ್ನು ಪರೀಕ್ಷೆ ಮಾಡಿ ಡೇಟಾವನ್ನು ಭೂಮಿಗೆ ರವಾನಿಸುತ್ತದೆ. ಅಲ್ಲದೆ, ಜೆಝೀರೋ ಕುಳಿಯ ಸುತ್ತಮುತ್ತ ಇಂತಹ ಹಲವು ಮಣ್ಣಿನ ಮಾದರಿಗಳನ್ನು ತೆಗೆದು, ಪರೀಕ್ಷಿಸಿ, ಎಲ್ಲಾ ಟ್ಯೂಬ್‌ಗಳನ್ನು ಒಂದು ಕಡೆ ಗುಡ್ಡೆಹಾಕುತ್ತದೆ. ಮುಂದಿನ ಹತ್ತು ವರ್ಷದಲ್ಲಿ ಮಂಗಳ ಗ್ರಹಕ್ಕೆ ತೆರಳುವ ಮತ್ತೊಂದು ರೋವರ್, ಪರ್ಸಿವರೆನ್ಸ್ ಸಂಗ್ರಹಿಸಿ ಗುಡ್ಡೆ ಮಾಡಿದ ಮಣ್ಣಿನ ಟ್ಯೂಬ್‌ಗಳನ್ನು ಎತ್ತಿಕೊಂಡು ಭೂಮಿಗೆ ಮರಳುತ್ತದೆ. ನಂತರ ಭೂಮಿಯಲ್ಲಿ ಮಂಗಳನ ಮಣ್ಣಿನ ಪೂರ್ಣ ಪ್ರಮಾಣದ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದಕ್ಕೆ ಸುಮಾರು 10 ವರ್ಷಗಳ ಕಾಲಾವಕಾಶ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.

PC : Science News

ಚಂದ್ರನ ನಂತರ ಅತಿ ಹೆಚ್ಚು ಬಾಹ್ಯಾಕಾಶ ಎಕ್ಸಪ್ಲೋರೇಷನ್ ಕೈಗೊಂಡ ಸೌರಮಂಡಲದ ಗ್ರಹ ಎಂದರೆ ಅದು ಮಂಗಳ ಗ್ರಹ. ಮನುಷ್ಯನಿಗೆ ಚಂದ್ರನಲ್ಲಿ ಒಂದು ನಿಲ್ದಾಣ ಮಾಡಿ, ಅಲ್ಲಿಂದ ಮಂಗಳ ಗ್ರಹಕ್ಕೆ ಬಾಹ್ಯಾಕಾಶಯಾನ ಕೈಗೊಳ್ಳುವ ಕನಸು. ಈ ಕನಸನ್ನು ನನಸು ಮಾಡುವುದಕ್ಕೆ ಪರ್ಸಿವರೆನ್ಸ್ ಹಲವು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕುತ್ತಿದೆ. ಮಂಗಳ ಗ್ರಹದ ಹವಾಮಾನ, ಭೂಪ್ರದೇಶದ ಮಾಹಿತಿ, ಅಲ್ಲಿರುವ ವಾತಾವರಣದಿಂದ ಆಕ್ಸಿಜನ್ ತಯಾರಿಕೆ ಮತ್ತು ಮಾನವನ ಆಗಮನಕ್ಕೆ ಬೇಕಾಗಬಲ್ಲ ಹಲವು ಮಾಹಿತಿಯನ್ನು ತನ್ನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಅದು ಕಲೆಹಾಕಲಿದೆ.

ಇದರ ಜೊತೆಗೆ ಪರ್ಸಿವರೆನ್ಸ್ ರೋವರ್‌ನ ಹೊಟ್ಟೆಯಲ್ಲಿ 1.8 ಕಿಲೋಗ್ರಾಂ ತೂಕದ ಸಣ್ಣ ಮಾರ್ಸ್ ಹೆಲಿಕಾಪ್ಟರ್ ಒಂದಿದೆ. ಇದನ್ನು ಇಂಜಿನ್ಯುಟಿ (Ingenuity) ಎಂದು ಕರೆಯಲಾಗಿದೆ. ಈ ಹೆಲಿಕಾಪ್ಟರ್‌ನಲ್ಲಿ ಕ್ಯಾಮರಾ, ಸಂವೇದಕಗಳು (sensors) ಮತ್ತು ಬ್ಯಾಟರಿಯನ್ನು ಹೊರತುಪಡಿಸಿ ಯಾವ ವೈಜ್ಞಾನಿಕ ಉಪಕರಣವೂ ಇಲ್ಲ. ಇದು ಸಾಮಾನ್ಯವಾಗಿ ಅಂಗಡಿಯಲ್ಲಿ ಸಿಗುವ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್ ಮಾದರಿಯಲ್ಲೇ ಇದೆ. ಆದರೆ ಇದು ಹಾರುವುದು ಮಾತ್ರ ಮಂಗಳ ಗ್ರಹದಲ್ಲಿ! ಇದೇ ಪ್ರಥಮ ಬಾರಿಗೆ ಅನ್ಯಗ್ರಹದಲ್ಲಿ ವೈಮಾನಿಕ ಸಂಚಾರ ನಡೆಸಲು ಅನುವಾಗುವಂತೆ ಪ್ರಾಯೋಗಿಕವಾಗಿ ಈ ಪುಟ್ಟ ಹೆಲಿಕಾಪ್ಟರ್‌ಅನ್ನು ನಾಸಾ ಮಂಗಳ ಗ್ರಹದಲ್ಲಿ ಹಾರಿಸಿದ್ದು, ಈ ಪ್ರಯೋಗ ಒಂದು ತಂತ್ರಜ್ಞಾನ ಪ್ರದರ್ಶನವಾಗಿದೆ (Technology Demonstration).

ಮಂಗಳ ಗ್ರಹದಲ್ಲಿ ಇಂತಹ ಸಣ್ಣ ಹೆಲಿಕಾಪ್ಟ್‌ರ್ ಹಾರಿಸಲು ಇಷ್ಟು ಕಷ್ಟಾನಾ?

ವಿಮಾನ ಅಥವಾ ಹೆಲಿಕಾಪ್ಟರ್ ಹಾರಿಸಬೇಕಾದರೆ, ಭೂಮಿಯ ವಾತಾವರಣದ ಸಾಂದ್ರತೆ ಎಷ್ಟಿದೆ ಎಂದು ತಿಳಿದು, ಹೆಲಿಕಾಪ್ಟರ್ ಆಗಿದ್ದರೆ ಅದರ ಬ್ಲೇಡ್‌ಗಳನ್ನು ಎಷ್ಟು ವೇಗವಾಗಿ ತಿರುಗಿಸಬೇಕು, ವಿಮಾನವಾಗಿದ್ದರೆ, ಟೇಕ್ ಆಫ್ ಮಾಡಲು ಎಷ್ಟು ವೇಗವಾಗಿ ಚಲಿಸಬೇಕು ಎಂದು ಲೆಕ್ಕ ಹಾಕಿ ಹಾರಿಸಲಾಗುತ್ತಿದೆ. ಇದೇ ರೀತಿ ಮಂಗಳ ಗ್ರಹಕ್ಕೂ ಮಾಡಲಾಗುತ್ತದೆ. ಮಂಗಳ ಗ್ರಹದ ವಾತಾವರಣದ ಸಾಂದ್ರತೆ ಭೂಮಿಯ ಶೇಕಡ ಒಂದರಷ್ಟು ಇರುವುದರಿಂದ ಹೆಲಿಕಾಪ್ಟರ್ ಅಥವಾ ವಿಮಾನವನ್ನು ಇಂತಹ ತೆಳುವಾದ ವಾತಾವರಣದಲ್ಲಿ ಹಾರಿಸುವುದು ಅತ್ಯಂತ ಕಷ್ಟಕರವಾದದ್ದು.

ಮಂಗಳ ಗ್ರಹದ ತೆಳುವಾದ ವಾತಾವರಣದಲ್ಲಿ ಹೆಲಿಕಾಪ್ಟರ್ ಹಾರಬೇಕಾದರೆ, ಅದರ ಬ್ಲೇಡ್‌ಗಳು ಒಂದು ನಿಮಿಷಕ್ಕೆ ಕನಿಷ್ಟ ಅಂದರೂ 25,000 ಬಾರಿ ತಿರುಗಬೇಕು. ಭೂಮಿಯಲ್ಲಿ ಈ ಸಂಖ್ಯೆ ಕೇವಲ 500 ರಿಂದ 600! ಇದು ಅತ್ಯಂತ ಸವಾಲಿನ ಕೆಲಸ. ತಾಂತ್ರಿಕವಾಗಿಯೂ ಇಂತಹ ಹೆಲಿಕಾಪ್ಟರ್ ಒಂದನ್ನು ಡಿಸೈನ್ ಮಾಡಿ, 48 ಕೋಟಿ ಕಿಲೋಮೀಟರ್ ದೂರದಿಂದ ಕಂಟ್ರೋಲ್ ಮಾಡುವುದು ಇನ್ನೂ ಕಷ್ಟದ ಕೆಲಸ. ಇದೇ ಕಾರಣದಿಂದ ಸತತ ಹತ್ತು ವರ್ಷಗಳ ಪ್ರಯತ್ನದಲ್ಲಿ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೆಟರಿ (Jet Propulsion Laboratory- JPL) ವಿಜ್ಞಾನಿಗಳು, ಇಂಜಿನಿಯರ್‌ಗಳು, ಡಿಸೈನರ್‌ಗಳು ಎಲ್ಲರೂ ಸೇರಿ ಇಂಜಿನ್ಯುಟಿ ಎಂಬ ಪುಟ್ಟ ಹೆಲಿಕಾಪ್ಟರ್ ತಯಾರಿಸಿದರು. ಈ ಹೆಲಿಕಾಪ್ಟರ್ ಅನ್ನು ಪರ್ಸಿವರೆನ್ಸ್ ರೋವರ್ ಮುಖಾಂತರ ಯಾವುದೇ ಅಡೆತಡೆ ಇಲ್ಲದೇ ಮಂಗಳನಲ್ಲಿ ಸುರಕ್ಷಿತವಾಗಿ ತಲುಪಿಸುವುದರಲ್ಲಿ ಈ ವಿಜ್ಞಾನಿಗಳು ಯಶಸ್ವಿಯಾದರು.

ಮಂಗಳ ಗ್ರಹದಲ್ಲಿ ಹಾರಿದ ಇಂಜಿನ್ಯುಟಿ ಹೆಲಿಕಾಪ್ಟರ್

ಪರ್ಸಿವರೆನ್ಸ್ ತನ್ನ ಹೊಟ್ಟೆಯಲ್ಲಿದ್ದ ಇಂಜಿನ್ಯುಟಿ ಹೆಲಿಕಾಪ್ಟರ್‌ಅನ್ನು ಏಪ್ರಿಲ್ 03, 2021ರಂದು ಮಂಗಳನ ಅಂಗಳದ ಮೇಲೆ ಇಳಿಬಿಟ್ಟಿತು. ಇದಾದ ನಂತರ ಇಂಜಿನ್ಯುಟಿಯ ಸವಾಲು ಮಂಗಳನ ಹವಾಮಾನವನ್ನು ಎದುರಿಸುವುದು. ರಾತ್ರಿಯ ಸಮಯದಲ್ಲಿ ’-90 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ಇಳಿಯುವುದರಿಂದ, ಇಂಜಿನ್ಯುಟಿಯ ಉಪಕರಣಗಳು ಹಾಳಾಗದಂತೆ ಡಿಸೈನ್ ಮಾಡುವುದು ಸವಾಲಿನ ಕೆಲಸ. ನಾಸಾದ ಜೆಪಿಎಲ್ ವಿಜ್ಞಾನಿಗಳು ಇಂಜಿನ್ಯುಟಿಯನ್ನು ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಂತೆ ಡಿಸೈನ್ ಮಾಡಿದ್ದರು. ತದನಂತರ ಇಂಜಿನ್ಯುಟಿ ಹೆಲಿಕಾಪ್ಟರ್‌ಗೆ ಏಪ್ರಿಲ್ 19ರಂದು ಸ್ವಯಂಚಾಲಿತವಾಗಿ ನಿರ್ದಿಷ್ಟ ಎತ್ತರಕ್ಕೆ ಹಾರಿ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಸಿದ್ಧಪಡಿಸಿದ್ದ ಕೋಡೆಡ್ ಮಾಹಿತಿಯನ್ನು ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾ ಸಹಾಯದಿಂದ ವಿಜ್ಞಾನಿಗಳು ಕಳುಹಿಸಿದ್ದರು. ಈ ಘಟನೆಯನ್ನು ಅಲ್ಲೆ ದೂರದಲ್ಲಿದ್ದ ಪರ್ಸಿವರೆನ್ಸ್ ರೋವರ್ ತನ್ನ ಕ್ಯಾಮರಾದಿಂದ ವೀಕ್ಷಣೆ ಮಾಡುವ ವ್ಯವಸ್ಥೆ ರೂಪಿಸಲಾಗಿತ್ತು. ಈ ಎಲ್ಲಾ ಘಟನೆಗಳೂ ಸ್ವಯಂಚಾಲಿತವಾಗಿ ನಡೆದು, ಘಟನೆಯ ಪ್ರತಿಯೊಂದು ಡೇಟಾ, ವಿಡಿಯೋಗಳು ರೆಕಾರ್ಡ್ ಆಗಿ ಭೂಮಿಗೆ ಬರಲು ಸುಮಾರು ನಾಲ್ಕು ಗಂಟೆಯ ಸಮಯ ತೆಗೆದುಕೊಂಡಿತು. ಇಂಜಿನ್ಯುಟಿಯಿಂದ ಯಾವ ಡೇಟಾ ಬರಬಹುದು, ಫಲಿತಾಂಶ ಏನಿರಬಹುದೆಂದು ವಿಜ್ಞಾನಿಗಳು ಕಾದುಕುಳಿತರು.

PC : sciencesprngs – WorldPress.com

ಅದೇ ದಿನ ಭಾರತೀಯ ಕಾಲಮಾನದ ಸಮಯ ಸಂಜೆ ನಾಲ್ಕ ಗಂಟೆಯ ಸುಮಾರಿಗೆ ಇಂಜಿನ್ಯುಟಿಯಿಂದ ಡೇಟಾ ಅದೇ ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾದಿಂದ ಭೂಮಿಗೆ ಬಂದಿತು. ಪರ್ಸಿವರೆನ್ಸ್ ರೋವರ್ ಇಂಜಿನ್ಯುಟಿಯು ಮಂಗಳನ ಮೇಲ್ಮೈನಿಂದ 3 ಮೀಟರ್ ಮೇಲಕ್ಕೆ ಹಾರಿ, ಸ್ವಲ್ಪ ಹೊತ್ತು ಗಾಳಿಯಲ್ಲಿದ್ದು ನಂತರ ನೆಲಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ತಾನು ತೆಗೆದಿದ್ದ ವಿಡಿಯೋ ಮುಖಾಂತರ ದೃಢಿಕರಿಸಿತು. ಜೆಪಿಎಲ್ ಕೊಠಡಿಯಲ್ಲಿ ಉಸಿರು ಬಿಗಿಹಿಡಿದು ಕಾಯುತ್ತಿದ್ದ ವಿಜ್ಞಾನಿಗಳಿಗೆ ಒಮ್ಮೆಲೆ ಉತ್ಸಾಹ ಮತ್ತು ಸಂತೋಷದ ಕಟ್ಟೆಯೊಡೆಯಿತು. ಮಾನವನ ಇತಿಹಾಸದಲ್ಲಿಯೇ ಅನ್ಯಗ್ರಹದಲ್ಲಿ ನಿಯಂತ್ರಿತ ವೈಮಾನಿಕ ಹಾರಾಟ ನಡೆಸಿರುವುದು ಇದೇ ಮೊದಲನೆಯ ಬಾರಿ.

ಸದ್ಯಕ್ಕೆ ಈ ಹಾರಾಟ ಚಿಕ್ಕದಾದರೂ ಮುಂದಿನ ವರ್ಷದಲ್ಲಿ ಇತರ ಗ್ರಹಗಳ ಮೇಲೂ ಹಾರಲು ಯೋಗ್ಯವಾದ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ತಯಾರಿಸುವುದಕ್ಕೆ ಇಟ್ಟ ಮೊದಲ ಚಾರಿತ್ರಿಕ ಹೆಜ್ಜೆಗೆ ನಾವೆಲ್ಲರೂ ಸಾಕ್ಷಿಯಾಗಿರುವುದಂತೂ ಸತ್ಯ. ಮುಂದಿನ ಒಂದು ತಿಂಗಳಿನಲ್ಲಿ ಇಂಜಿನ್ಯುಟಿ ಇಂತಹ ಐದು ವೈಮಾನಿಕ ಹಾರಾಟ ನಡೆಸಲು ಅನುವಾಗುವಂತೆ ಸಿದ್ಧಪಡಿಸಲಾಗಿದೆ. ಇದು ಮಂಗಳ ಗ್ರಹದ ತೆಳುವಾದ ವಾತಾವರಣದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಮಗೆ ನೀಡಲಿದೆ.

ಇಂಜಿನ್ಯುಟಿ (Ingenuity) ಎಂದರೆ ಕೆಲಸಗಳನ್ನು ಕೌಶಲ್ಯದಿಂದ ಹೊಸರೀತಿಯಲ್ಲಿ ಮಾಡುವುದು. ಹಾಗೆಯೇ ಮಂಗಳನಲ್ಲಿರುವ ಇಂಜಿನ್ಯುಟಿ, ನಮ್ಮಲ್ಲಿ ಹೊಸ ಯೋಚನೆಗಳನ್ನು, ಹೊಸ ಪ್ರಶ್ನೆಗಳನ್ನು, ಹೊಸ ವಿಚಾರಗಳನ್ನು ಕಲಿಯಲು ಪ್ರೇರೇಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮನುಷ್ಯನು ಮಂಗಳ ಗ್ರಹಕ್ಕೆ ತೆರಳುವ ಕನಸುಗಳನ್ನು ನನಸು ಮಾಡಲು ಮೊದಲ ಅಂಬೆಗಾಲಿಟ್ಟಿರುವುದಂತೂ ನಿಜ.
ವಿಡಿಯೋ ಲಿಂಕ್ 
ಲೈವ್‌ಸ್ಟ್ರೀಮ್ ವಿಡಿಯೋ ಲಿಂಕ್

ಇದನ್ನೂ ಓದಿ: ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್‌ ಹಾರಿಸಿದ ನಾಸಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...