Homeಕರೋನಾ ತಲ್ಲಣಮೂಗಿನಲ್ಲಿ ನಿಂಬೆರಸ ಶಿಕ್ಷಕನ ಬಲಿ ಪಡೆಯಿತೇ? ಸಂಕೇಶ್ವರ ಸಲಹೆ ಆಕ್ಷೇಪಿಸಿದ ಡಾ, ನರೇಂದ್ರ ನಾಯಕ್‌ರಿಗೆ ಫೇಸ್‌ಬುಕ್...

ಮೂಗಿನಲ್ಲಿ ನಿಂಬೆರಸ ಶಿಕ್ಷಕನ ಬಲಿ ಪಡೆಯಿತೇ? ಸಂಕೇಶ್ವರ ಸಲಹೆ ಆಕ್ಷೇಪಿಸಿದ ಡಾ, ನರೇಂದ್ರ ನಾಯಕ್‌ರಿಗೆ ಫೇಸ್‌ಬುಕ್ ನಿರ್ಬಂಧವೇಕೆ?

- Advertisement -
- Advertisement -

ಸಿಂಧನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮೂಗಿನಲ್ಲಿ ನಿಂಬೆರಸ ಸುರಿದುಕೊಂಡಿದ್ದೇ ಕಾರಣ ಎಂದು ಅವರ ಕುಟುಂಬಸ್ಥರು, ಸಹೋದ್ಯೋಗಿಗಳು ಅಪಾದಿಸಿದ್ದಾರೆ. ನಿಂಬೆರಸ ಮೂಗಿಗೆ ಸುರಿದುಕೊಂಡ ಶಿಕ್ಷಕ ಒದ್ದಾಡಿ ಸತ್ತರು ಎಂದು ಕನ್ನಡದ ಹಲವು ಪತ್ರಿಕೆಗಳು ವರದಿ ಮಾಡಿದೆ.

ಇನ್ನೊಂದು ಕಡೆ, ಸಂಕೇಶ್ವರರ ನಿಂಬೆರಸ ಸಲಹೆಯನ್ನು ಆಕ್ಷೇಪಿಸಿ, ವೈಜ್ಞಾನಿಕ ಮತ್ತು ವೈದ್ಯಕೀಯ ಅಂಶಗಳನ್ನು ಉಲ್ಲೇಖಿಸಿದ್ದ ಜೀವ ರಸಾಯನ ತಜ್ಞ, ಮೂಢನಂಬಿಕೆ ವಿರುದ್ಧ ಆಂದೋಲನ ನಡೆಸುತ್ತ ಬಂದಿರುವ ಡಾ, ನರೇಂದ್ರ ನಾಯಕ್, ನಿಂಬೆರಸದಿಂದ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಮೊನ್ನೆ ಪ್ರಕಟಿಸಿದ್ದ ಫೇಸ್‌ಬುಕ್ ವಿಡಿಯೋ ಕಾರಣಕ್ಕಾಗಿ, ಫೇಸ್‌ಬುಕ್ ಇಂದು ಅವರ ಖಾತೆಯನ್ನು 24 ಗಂಟೆ ಕಾಲ ನಿರ್ಬಂಧಿಸಿದೆ!

ಈ ಎರಡೂ ಘಟನೆಗಳು ಮತ್ತೆ ನಮ್ಮನ್ನು ವಿಜಯ ಸಂಕೇಶ್ವರ್ ಅವರ ನಿಂಬೆರಸ-ಆಮ್ಲಜನಕ ಕತೆಗೆ ತಂದ ನಿಲ್ಲಿಸುತ್ತವೆ.

ಶಿಕ್ಷಕರ ಸಾವಿಗೆ ನಿಂಬೆರಸವೇ ಕಾರಣವಾಗಿತ್ತೆ?

ಸಿಂಧನೂರಿನ ಶರಣಬಸವೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ 43 ವಯಸ್ಸಿನ ಬಸವರಾಜ್ ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅವರು ಅಗಲಿದ್ದಾರೆ. ಅವರು ನಿನ್ನೆ ರಾತ್ರಿ ಮತ್ತು ಇವತ್ತು ಮುಂಜಾನೆ ಆಮ್ಲಜನಕ ಮಟ್ಟ ಹೆಚ್ಚಿಸಿಕೊಳ್ಳಲು ಮೂಗಿಗೆ ನಿಂಬೆರಸ ಹಾಕಿಕೊಂಡಿದ್ದೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು, ಅವರ ಸಹೋದ್ಯೋಗಿಗಳು ಆರೋಪಿಸಿದ್ದಾರೆ.

ಮೃತ ಬಸವರಾಜ್ ಅವರ ಸಹೋದ್ಯೋಗಿ ವೀರೇಶ್, ‘ನಮಗಂತೂ ಹಾಗೆ ಅನ್ನಿಸಿದೆ ಸರ್. ನಿನ್ನೆ ತಾನೇ ಬಿಇಒ ಕಚೇರಿಯಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರು ಸದಾ ಸದೃಢರಾಗಿದ್ದರು. ನಿಂಬೆರಸ ಪ್ರಮಾಣವನ್ನು ಜಾಸ್ತಿ ಹಾಕಿಕೊಂಡರು ಎನಿಸುತ್ತದೆ’ ಎಂದು ನಾನುಗೌರಿ.ಕಾಂಗೆ ತಿಳಿಸಿದರು.

‘ಸಾವಿನ ನಿಖರ ಕಾರಣ ನಂತರ ಗೊತ್ತಾಗಬಹುದು. ಆದರೆ ಸಂಕೇಶ್ವರ್ ಅವರು ಈ ನಿಂಬೆರಸ-ಆಮ್ಲಜನಕ ಕತೆ ಹೇಳಿದ ನಂತರ, ಸ್ವಲ್ಪ ಮೈ ಬಿಸಿಯಾದರೂ ಈ ನಿಂಬೆರಸಕ್ಕೆ ಬಹಳಷ್ಟು ಜನ ಒಡ್ಡಿಕೊಳ್ಳುತ್ತಿದ್ದಾರೆ. ನಾನೇ ಬಲ್ಲ ನಮ್ಮ ಕೆಲವು ಶಿಕ್ಷಕರು 20-25 ನಿಂಬೆ ಹಣ್ಣುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ತಿಳಿದವರೇ ಇಂತಹ ಅವೈಜ್ಞಾನಿಕ ಸಂಗತಿಗೆ ಶರಣಾದರೇ ಹೇಗೆ?’ ಎಂದು ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಬಸವರಾಜ್ ಮೃತರಾಗಿದ್ದಾರೆ ಎಂದು ಘೋಷಿಸಿದ ಸಿಂಧನೂರಿನ ಶಾಂತಿ ಆಸ್ಪತ್ರೆಯ ವೈದ್ಯರು ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ಆಸ್ಪತ್ರೆಯ ಮಾಲೀಕ ನರೇಶ್ ನಮ್ಮೊಂದಿಗೆ ಮಾತನಾಡುತ್ತ, ‘ಇಲ್ಲಿಗೆ ಬರುವ ಮೊದಲೇ ಬಸವರಾಜ್ ಅವರು ಮೃತರಾಗಿದ್ದರು. ನಾವು ಸಹಜ ಕ್ರಮದಂತೆ ಇಸಿಜಿ ಮಾಡಿ, ಅವರು ಮೃತ ಎಂದು ಘೋಷಿಸಿದ್ದೇವೆ. ನಿಂಬೆರಸದಿಂದಾಗಿಯೇ ಸತ್ತರು ಎಂದು ದೃಢವಾಗಿಲ್ಲ. ಅವರಿಗೆ ಬೇರೇನೋ ಸಮಸ್ಯೆ ಇರಬಹುದು ಅಥವಾ ಮೊದಲೇ ಅವರಿಗೆ ಕೋವಿಡ್ ಇದ್ದು ಆ ಭಯಕ್ಕೆ ನಿಂಬೆರಸದ ಪ್ರಯೋಗ ಮಾಡಿರಬಹುದು. ಸಾವಿನ ನಿಖರ ಕಾರಣ ಗೊತ್ತಾಗಲು ಪೊಲೀಸರು ಪೋಸ್ಟ್ ಮಾರ್ಟಂ ಮಾಡಿಸಬೇಕು..’ ಎಂದರು.

ಸಿಂಧನೂರಿನ ಅನ್ನದಾನೀಶ್ವರ ಆಸ್ಪತ್ರೆಯ ಸರ್ಜರಿಯನ್ ಡಾ.ಬಿ.ಎನ್ ಪಾಟೀಲ್, ‘ಕೇಸ್ ಹಿಸ್ಟರಿ ಇಲ್ಲದೇ ಒಮ್ಮೆಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಮೃತರಿಗೆ ಬೇರೆ ಆರೋಗ್ಯ ಸಮಸ್ಯೆ ಇದ್ದು, ಅವರು ಈ ಪ್ರಯೋಗ ಮಾಡಿದಾಗ ಏನೋ ಎಡವಟ್ಟಾಗಿರಬಹುದು. ಆದರೆ ಈಗಲೇ ನಿಖರವಾಗಿ ಹೇಳಲಾಗದು. ಒಂದಂತೂ ಸ್ಪಷ್ಟ, ನಿಂಬೆರಸ ಮೂಗಿನಲ್ಲಿ ಹಾಕಿಕೊಂಡರೆ ಯಾವ ಘನಂದಾರಿ ಅನುಕೂಲವೂ ಇಲ್ಲ, ಹಾಗೆಯೇ ಅದರಿಂದ ಸಾವು ಸಂಭವಿಸುವಂತಹ ಅಪಾಯವಿಲ್ಲ. ತಿಳಿಯಾಗಿರುವ ರಸ ಶ್ವಾಸಕೋಶ ಸೇರಿದರೆ ಸಾವೇನೂ ಸಂಭವಿಸದು. ಆದರೆ, ಈ ನಿಂಬೆರಸ ಪ್ರಯೋಗ ಅವೈಜ್ಞಾನಿಕ. ಜನರು ಎಚ್ಚರವಾಗಿರಬೇಕು’ ಎಂದು ನಾನುಗೌರಿ.ಕಾಂ ಗೆ ತಿಳಿಸಿದರು.

ಕೋವಿಡ್ ಅಥವಾ ಉಸಿರಾಟದ ಸಮಸ್ಯೆ ಇದ್ದು, ಮೃತರು ನಿಂಬೆರಸ ಪ್ರಯೋಗಕ್ಕೆ ಒಡ್ಡಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗಿತೆ? ಇದು ನಿಜವಾದರೆ, ಸಂಕೇಶ್ವರ್ ಕ್ರಿಮಿನಲ್ ಅಪರಾಧ ಎಸಗಿದಂತೆ ಅಲ್ಲವೇ?

ಸತ್ಯ ಹೇಳಿದ ವಿಜ್ಞಾನಿಗೆ ಫೇಸ್‌ಬುಕ್ ನಿರ್ಬಂಧ!

ವಿಜಯ ಸಂಕೇಶ್ವರ್ ಅವರು ಸುದ್ದಿಗೋಷ್ಠಿ ಕರೆದು, ಆಮ್ಲಜನಕ ಮಟ್ಟ ವೃದ್ದಿಗೆ ನಿಂಬೆರಸವನ್ನು ಮೂಗಿನ ಮೂಲಕ ಹಾಕೊಕೊಳ್ಳುವುದು ಪರಿಣಾಮಕಾರಿ ಎಂದ ವಿಷಯ ಎಲ್ಲ ಮಾಧ್ಯಮಗಳಲ್ಲೂ ಪ್ರಕಟವಾಯಿತು. ಮರುದಿನ ಅಲ್ಲೇ ಧಾರವಾಡದಲ್ಲಿ ನಡೆದ ಮದುವೆಯೊಂದರಲ್ಲಿ ವಧು-ವರ ಸೇರಿ ಹಲವಾರು ಜನರ ಮೂಗಿನಲ್ಲಿ ಕೆಲವರು ನಿಂಬೆರಸ ಸುರಿಯುತ್ತ, ‘ಪೇಪರ್‌ನ್ಯಾಗ ಬಂದೈತೋ ಮಾರಾಯ. ಕೋವಿಡ್ ಬರಂಗಿಲ್ಲ’ ಎಂದು ಹೇಳುವ ವಿಡಿಯೋ ವೈರಲ್ ಆಗಿತ್ತು.

ಆದರೆ ಇದೊಂದು ಅವೈಜ್ಞಾನಿಕ ಕ್ರಮ, ಇದಕ್ಕೆ ಯಾವುದೇ ವೈದ್ಯಕೀಯ ಆಧಾರಗಳಿಲ್ಲ ಎಂದು ಸತ್ಯ ಪ್ರತಿಪಾದನೆ ಮಾಡಿದ ಮೌಢ್ಯ ವಿರೋಧಿ ಹೋರಾಟ ನಡೆಸಿಕೊಂಡು ಬಂದಿರುವ ಹಿರಿಯ ಜೀವ ರಸಾಯನ ಶಾಸ್ತ್ರಜ್ಞ ನರೇಂದ್ರ ನಾಯಕ್ ಅವರು, ಆ ವಿವರಗಳ ವಿಡಿಯೋವನ್ನು ಫೇಸ್‌ಬುಕ್ ಖಾತೆಗೆ ಹಾಕಿಕೊಂಡಿದ್ದರು.

ಈ ವಿಡಿಯೋ ಭರ್ಜರಿ ವೈರಲ್ ಆಗಿ ಜನರಲ್ಲಿ ಪ್ರಜ್ಞೆ ಮೂಡಿಸಲು ನೆರವಾಗಿತ್ತು. ಆದರೆ ಹಲವು ಜನರ ದೂರುಗಳ ಆಧಾರದ ಮೇಲೆ, ‘ಈ ವಿಡಿಯೋ ಫೇಸ್‌ಬುಕ್ ಕಮ್ಯುನಿಟಿ ಸ್ಟ್ಯಾಂಡರ್ಡ್‌ಗಳಿಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿ ಫೇಸ್‌ಬುಕ್ ಕಂಪನಿ ಅವರ ಖಾತೆಯನ್ನು 24 ಗಂಟೆ ಸ್ಥಗಿತಗೊಳಿಸಿದೆ.

ವೈಜ್ಞಾನಿಕ ಮನೋಭಾವ ಎತ್ತಿ ಹಿಡಿಯಬೇಕಾದ ಫೇಸ್‌ಬುಕ್ ಮೇಲೆ ಯಾವ ಶಕ್ತಿಗಳ ಒತ್ತಡವಿದೆ ಎಂಬುದು ನಗ್ನಸತ್ಯ ಅಲ್ಲವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...