Homeಮುಖಪುಟಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!

ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!

ನಿಮ್ಮ ಪಕ್ಷದ ಶಾಸಕರು, ನಿಮ್ಮೆದುರೆ ಆ ಕೋಮುವಾದಿ ಹೇಳಿಕೆಗಳನ್ನು ನೀಡುವುದಕ್ಕೆ ನೀವು ಹೇಗೆ ಅವಕಾಶ ಕೊಟ್ಟಿರಿ? ನೀವು ಅದಕ್ಕೆ ಜವಾಬ್ದಾರರಲ್ಲವೇ?

- Advertisement -
- Advertisement -

ಕಳೆದ ವಾರ ಬಿಬಿಎಂಪಿ ಕೋವಿಡ್ ವಾರ್‌ ರೂಂನಲ್ಲಿ ಕೆಲಸ ಮಾಡುವ 205 ಜನರಲ್ಲಿ ಕೇವಲ 17 ಜನ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಅವರ ಹೆಸರನ್ನು ಓದುವ ಮೂಲಕ ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಸದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಶಾಸಕರು ಕೋಮು ಆಯಾಮ ನೀಡಿ ವಿವಾದಕ್ಕೆ ಒಳಗಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ನೇರ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರರಾದ ಘಟನೆ ಸಂಭವಿಸಿದೆ.

ಕಳೆದ ವಾರ ಸಂಸದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಶಾಸಕರು ಬಿಬಿಎಂಪಿ ಕೋವಿಡ್ ವಾರ್‌ ರೂಂ ಮೇಲೆ ದಾಳಿ ನಡೆಸಿದ್ದರು. 205 ಜನರಲ್ಲಿ ಕೇವಲ 17 ಜನ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಅವರ ಹೆಸರನ್ನು ಓದಿದ ಸಂಸದ “ಇವರೆಲ್ಲಾ ಯಾರು? ಮೂರು ಶಿಪ್ಟ್‌ಗಳಲ್ಲಿ ಈ 17 ಜನರ ಹೆಸರಿದೆ, ಇವರನ್ನು ಹೇಗೆ ಕೆಲಸಕ್ಕೆ ತೆಗೆದುಕೊಳ್ಳಲಾಯಿತು? ಈ ಜನರು ಯಾರು” ಎಂದು ಪ್ರಶ್ನಿಸಿದ್ದರು. ತೇಜಸ್ವಿ ಸೂರ್ಯರವರ ಚಿಕ್ಕಪ್ಪ ಮತ್ತು ಬಸವನಗುಡಿ ಬಿಜೆಪಿ ಶಾಸಕ ಎಲ್. ಎ. ರವಿಸುಬ್ರಮಣ್ಯ “ನೀವೇನು ಮದರಾಸಗೆ ನೇಮಕಾತಿ ಮಾಡುತ್ತಿದ್ದೀರೊ ಇಲ್ಲ, ಕಾರ್ಪೋರೇಷನ್‌ಗೋ?” ಎಂದು ಪ್ರಶ್ನಿಸಿದ್ದರು. ಮತ್ತೊಬ್ಬ ಬಿಜೆಪಿ ಶಾಸಕ ಸತೀಶ್ ರೆಡ್ಡಿ “ಇವರ್ಯಾರು ಮೇಡಂ, ಇವರನ್ನು ಹೇಗೆ ನೇಮಕ ಮಾಡಲಾಯಿತು? ಹಜ್ ಸಮಿತಿಗೆ ನೇಮಕ ಮಾಡುವ ಹಾಗೆ ಈ 17 ಜನರನ್ನು ನೇಮಕ ಮಾಡಿದ್ದೀರಾ ಹೇಗೆ?” ಎಂದು ಕೂಗಾಡಿದ್ದರು.

ತದನಂತರ ಆ 17 ಜನ ಮುಸ್ಲಿಂ ಯುವಕರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಮತ್ತು ಅವರನ್ನು ಎರಡು ಬಾರಿ ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು.

“ಅವರ ಮೇಲೆ ಯಾವುದೇ ಕ್ರಿಮಿಲಾಟಿಯನ್ನು ನಾನು ಹೂಡಿಲ್ಲ. ಅವರು ತಪ್ಪಿತಸ್ಥರೆಂದು ಅಧಿಕಾರಿಗಳು ಕೂಡ ಹೇಳಿಲ್ಲ. ಏಜೆನ್ಸಿ ಜೊತೆಗೆ ಕೆಲಸ ಮಾಡುವ ಗುತ್ತಿಗೆ ನೌಕರರು ಅವರು. ಅವರನ್ನು ಕೆಲಸಕ್ಕೆ ನೇಮಕ ಮಾಡುವುದಾಗಿ, ತೆಗೆದುಹಾಕುವುದಾಗಲಿ ತೇಜಸ್ವಿ ಸೂರ್ಯ ಆಗಲಿ, ಶಾಸಕರಾಗಲಿ ಮಾಡುವ ಕೆಲಸ ಅಲ್ಲ. ಬಿಬಿಎಂಪಿ ಮಾಡುವ ಕೆಲಸ ಅದು. ಅವರನ್ನು ಏಕೆ ತೆಗೆದುಹಾಕಿದರು ಎಂಬುದನ್ನು ಬಿಬಿಎಂಪಿಯವರಲ್ಲಿ ಕೇಳಿ” ಎಂದು ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಾಗಾದರೆ ನೀವು 206 ಜನರ ಲಿಸ್ಟ್‌ನಲ್ಲಿ ಆ 17 ಮುಸ್ಲಿಮರ ಹೆಸರನ್ನು ಮಾತ್ರ ಓದಿದ್ದು ಏಕೆ ಎಂಬ ಪ್ರಶ್ನೆಗೆ “ಆ ಲಿಸ್ಟ್‌ನಲ್ಲಿ ಯಾರ ಹೆಸರಿದ್ದರೂ ನಾನು ಓದುತ್ತಿದ್ದೆ. ಇವರನ್ನು ಹೇಗೆ ಕೆಲಸಕ್ಕೆ ತೆಗೆದುಕೊಂಡಿರಿ ಎಂದು ಕೇಳಿದೆ. ನನಗೆ ಕೊಟ್ಟ ಲಿಸ್ಟ್‌ನಲ್ಲಿ ಅವರ ಹೆಸರು ಮಾತ್ರ ಇದ್ದವು. ನಂಬುವವರು ನಂಬಬಹುದು, ಬಿಡುವವರು ಬಿಡಬಹುದು” ಎಂದು ಹಾರಿಕೆಯ ಉತ್ತರ ನೀಡಿದರು.

ಹಾಗಾದರೆ ಅವರನ್ನು ಕೆಲಸದಿಂದ ಏಕೆ ತೆಗೆಯಲಾಯಿತು ಎಂಬ ಪ್ರಶ್ನೆಗೆ “ನಾನು ಅದನ್ನೇ ಕೇಳುತ್ತಿದ್ದೇನೆ. ನನಗೆ ಕೊಟ್ಟ ಪಟ್ಟಿ ಓದಿದೆ ಅಷ್ಟೇ. ಅವರನ್ನು ಏಕೆ, ಹೇಗೆ ನೇಮಕ ಮಾಡಿಕೊಳ್ಳಲಾಯಿತು? ಯಾವ ವಿಧಾನ ಅನುಸರಿಸಲಾಯಿತು ಎಂದು ಕೇಳಿದ್ದೇನೆ. ವಿಡಿಯೋ ಇದೆ ನೋಡಿ. ಏಕೆ 17 ಜನರನ್ನು ಪಟ್ಟಿ ಮಾಡಲಾಯಿತು ಎಂಬುದನ್ನು ನೀವು ಅಧಿಕಾರಿಗಳನ್ನು ಕೇಳಬೇಕು” ಎಂದರು.

ಆ ಸಂದರ್ಭದಲ್ಲಿ ಮದರಸ ಮತ್ತು ಹಜ್ ಎಂಬ ಪದಗಳನ್ನು ಏಕೆ ಬಳಕೆ ಮಾಡಲಾಯಿತು ಎಂಬ ಪತ್ರಕರ್ತರ ಪ್ರಶ್ನೆಗೆ “ನಾನು ಯಾವ ಪದಗಳನ್ನು ಬಳಸಿಲ್ಲ. ನಾನು ಏನು ಮಾತನಾಡಿದ್ದೇನೊ, ಯಾವ ವಿಚಾರ ಬಳಸಿದ್ದೆನೋ ಅದಕ್ಕೆ ಮಾತ್ರ ನಾನು ಜವಾಬ್ದಾರನಾಗಿದ್ದೇನೆ” ಎಂದು ತೇಜಸ್ವಿ ಸೂರ್ಯ ಹೇಳಿದರು.

ಆಗ ಪತ್ರಕರ್ತರು ಅಂದು ನಿಮ್ಮ ಜೊತೆಗಿದ್ದ ನಿಮ್ಮ ಪಕ್ಷದ ಶಾಸಕರು, ನಿಮ್ಮೆದುರೆ ಆ ಪದಗಳನ್ನು ಬಳಸಿದ್ದಾರೆ. ಆ ಕೋಮುವಾದಿ ಹೇಳಿಕೆಗಳನ್ನು ನೀಡುವುದಕ್ಕೆ ನೀವು ಹೇಗೆ ಅವಕಾಶ ಕೊಟ್ಟಿರಿ? ನೀವು ಅದಕ್ಕೆ ಜವಾಬ್ದಾರರಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ತೇಜಸ್ವಿ ಸೂರ್ಯ ಯಾವುದೇ ಉತ್ತರ ಕೊಡದೇ ನಿರುತ್ತರರಾದರು.

ನಂತರ ನಿಮಗೆ ನಿಮ್ಮದೇ ಅಜೆಂಡಾ ಇದೆ. ನನಗೆ ನನ್ನದೇ ಅಜೆಂಡಾ ಇದೆ. ನನ್ನ ಅಜೆಂಡ ಜನರಿಗೆ ಸತ್ಯ ಹೇಳುವುದು. ಜನರ ಜೀವ ರಕ್ಷಿಸುವುದು. ಈ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ಸಂಸದರು ಹೇಳಿದರು.

ಇದರಲ್ಲಿ ನಿಮ್ಮ ತಪ್ಪಿಲ್ಲ ಎಂದಾದರೆ ನೀವು ಓದಿದ ಆ 17 ಜನರನ್ನು ಜಯನಗರ ಪೊಲೀಸರು ವಿಚಾರಣೆ ನಡೆಸಿದ್ದೇಕೆ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ತಬ್ಬಿಬ್ಬಾಗಿ ಉತ್ತರಿಸದ ತೇಜಸ್ವಿ ಸೂರ್ಯ, ಬೇರೆ ಯಾವುದಾದರೂ ಪ್ರಶ್ನೆಗಳಿವೆಯೇ ಎಂದರು.

ಪ್ರಕರಣ ಬೆಳಕಿಗೆ ನಂತರ ನೀವು ಹೆಸರಿಸಿದವರಿಗೂ, ಬೆಡ್ ಬ್ಲಾಕ್‌ಗೂ ಯಾವುದೇ ಸಂಬಂಧವಿರಲಿಲ್ಲ. ಹಾಗಾದರೂ ನೀವು ಉನ್ನತ ಅಧಿಕಾರಿಗಳು ಕೊಟ್ಟ ಲಿಸ್ಟ್ ಅನ್ನು ಏಕೆ ಓದಿದಿರಿ? ಎಂದು ಪತ್ರಕರ್ತರ ಪ್ರಶ್ನಿಸಿದರು. ಅದಕ್ಕೂ ತಡಬಡಾಯಿಸಿದ ಸಂಸದರು “ನಾನು ಸತ್ಯವನ್ನು ಉತ್ತರಿಸಿದ್ದೇನೆ” ಎಂದು ಹೇಳುವ ಮೂಲಕ ಪ್ರಶ್ನೆಗೆ ಉತ್ತರಿಸಲಿಲ್ಲ.. ಮತ್ತು ಮತ್ತೆ ಯಾವುದೇ ಪ್ರಶ್ನೆ ಬಾರದಂತೆ ತಡೆದರು.

ಒಟ್ಟಿನಲ್ಲಿ ಪತ್ರಕರ್ತರ ಕಷ್ಟಕರವಾದ ಬಹುಮುಖ್ಯ ಪ್ರಶ್ನೆಗಳಿಗೆ ತೇಜಸ್ವಿ ಸೂರ್ಯ ಉತ್ತರಿಸಲೇ ಇಲ್ಲ. ಈ ಪತ್ರಿಕಾಗೋಷ್ಠಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪತ್ರಕರ್ತರ ಈ ಪ್ರಶ್ನೆಗಳಿಗಾಗಿ ಅವರನ್ನು ಅಭಿನಂದಿಸಲಾಗಿದೆ.

ಇನ್ನು ವಾರ್‌ ರೂಂ ಮೇಲೆ ದಾಳಿ ಮಾಡಿದಾಗ ಸಂಸದ ತೇಜಸ್ವಿ ಸೂರ್ಯ ಜೊತೆಗಿದ್ದ ಬಿಜೆಪಿ ಶಾಸಕ ಸತೀಶ್‌ ರೆಡ್ಡಿಯವರೆ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಮೀಲಾಗಿದ್ದರೆಂದು ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳು ವರದಿ ಮಾಡಿದ್ದವು. ಶಾಸಕರ ಪಿಎಯನ್ನು ಬಂಧಿಸುವಂತೆ ಒತ್ತಡ ಹೇರಲಾಗಿತ್ತು.

ತೇಜಸ್ವಿ ಸೂರ್ಯರವರ ಈ ನಡೆ ವಿರುದ್ಧ ಹಲವೆಡೆ ದೂರು ದಾಖಲಾಗಿವೆ. ಕೆಲಸದಿಂದ ಅಮಾನತ್ತಾಗಿದ್ದ 17 ಜನ ಅಮಾಯಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ.


ಇದನ್ನೂ ಓದಿ: ಅನ್ಯಾಯಕ್ಕೆ ಒಳಗಾದವರು ಇಲ್ಲದಿದ್ದಾಗ ತೆರಳಿ ಕ್ಷಮೆ ಯಾಚಿಸಿದ ತೇಜಸ್ವಿ ಸೂರ್ಯ: ಸಾರ್ವಜನಿಕ ಕ್ಷಮೆ ಯಾಚನೆಗೆ ಒತ್ತಾಯ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಸತ್ಯವನ್ನೇ ನುಡಿದು,ನಿಜಾಂಶಗಳನ್ನೇ..ಬಯಲು ಮಾಡಲಾಗಿದೆ.ಜನರು ಇದನ್ನು ಖಂಡಿತವಾಗಿ ನಿರೀಕ್ಷೆ ಮಾಡಿದ್ದರು.ಲಪಟಾಯಿಸುವವರಿಗೆ ಏನೂ ಸಿಗದಿದ್ದಾಗ ಇಂತಹ ಘನ ಕಾರ್ಯಗಳನ್ನು ತಾವೇ ಬಯಲುಗೊಳಿಸಿಕೊಂಡು ಬಿಡುತ್ತಾರೆಂಬುದಕ್ಕೆ *ಬೆಡ್ ಬ್ಲಾಕಿಂಗ್ ದಂಧೆ* ತಾಜಾ ಉದಾಹರಣೆ..
    ನೀವೇನಂತೀರೀ..!?

  2. ಮಾಧ್ಯಮದವರಿಗೆ ಜನಹಿತ ಚಿಂತನೆಯ ಬದಲು ರಾಜಕೀಯ ವೇ ಮುಖ್ಯವಾಗಿತ್ತು. ಸೂರ್ಯ ರವರು ಸರಿಯಾಗಿ ಉತ್ತರಿಸಿದರು.

  3. Mr Surya was correct in what he said. He said media is trying to divert the issue from finding a solution to the Covid bed blocking scam to a political and communal issue. Some members of the media were not happy. You seem to be one of them. As long as media is dishonest, they have no right to make comments like this.

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...