Homeಮುಖಪುಟತಾಯ್ತನ ಮತ್ತು ಅನಾಥತೆಯ ಭಾವಗಳನ್ನು ಅನನ್ಯವಾಗಿ ಕಟ್ಟಿಕೊಡುವ 'ಟ್ರೂ ಮದರ್ಸ್'

ತಾಯ್ತನ ಮತ್ತು ಅನಾಥತೆಯ ಭಾವಗಳನ್ನು ಅನನ್ಯವಾಗಿ ಕಟ್ಟಿಕೊಡುವ ‘ಟ್ರೂ ಮದರ್ಸ್’

- Advertisement -
- Advertisement -

ನವೋಮಿ ಕವಾಸೆ (Naomi Kawase) ಅವರ ಹೆಸರು ಜಾಗತಿಕ ಸಿನಿಮಾವಲಯದಲ್ಲಿ ಬಹಳ ಚಿರಪರಿಚಿತ. ಬಹುಶಃ ಕಳೆದ ಮೂರು ದಶಕಗಳಿಂದ ಜಪಾನಿನ ಹಿರೊಕಝು ಕೊರೀಡನ (hirokazu koreeda) ಸಿನಿಮಾಗಳನ್ನು ಬಿಟ್ಟರೆ ಕಾನ್, ಬರ್ಲಿನ್, ಟೊರೊಂಟೊ ಮುಂತಾದ ಪ್ರಸಿದ್ಧ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರವೇಶ ಪಡೆಯುವುದಷ್ಟೇ ಅಲ್ಲ ಪ್ರಶಸ್ತಿಗಳನ್ನು ಪಡೆದ ಮತ್ತೊಬ್ಬ ಸಿನಿಮಾತೃ ಎಂದರೆ ಅದು ನವೋಮಿ ಕವಾಸೆ.

90ರ ದಶಕದ ಪ್ರಾರಂಭದಿಂದಲೂ, ತನ್ನ ಇಪ್ಪತ್ತನೇ ವಯಸ್ಸಿನಿಂದಲೇ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ನವೋಮಿ, ಜಾಗತಿಕ ಸಿನಿಮಾ ವಲಯಕ್ಕೆ ಪರಿಚಿತವಾಗಿದ್ದು ಮಾತ್ರ 1997ರ ತಮ್ಮ ’ಸುಝಕು’ (Suzaku) ಸಿನಿಮಾದ ಮುಖಾಂತರ. ಈ ಸಿನಿಮಾ 1997ರ ಕಾನ್ ಸಿನಿಮೋತ್ಸವದಲ್ಲಿ ಪ್ರತಿಷ್ಠಿತ Camera d’or ಪ್ರಶಸ್ತಿ ಪಡೆಯಿತು. ಅತ್ಯಂತ ಕಿರಿಯ ವಯಸ್ಸಿನಲ್ಲೆ ಈ ಪ್ರಶಸ್ತಿ ಪಡೆದ ಹೆಗ್ಗಳಿಕೆ ನವೋಮಿಯವರದ್ದು. 2007ರ ’ದ ಮೌರ್‍ನಿಂಗ್ ಫಾರೆಸ್ಟ್’ (The Mourning Forest), 2011ರ ’ಹನೆಝು’ (Hanezu), 2014ರ ’ಸ್ಟಿಲ್ ದ ವಾಟರ್’ (Still The water) ಮತ್ತು 2015ರ ’ಸ್ವೀಟ್ ಬೀನ್’ (Sweet Bean) ಇವೆ ಮುಂತಾದ ಸಿನಿಮಾಗಳು ನವೋಮಿಯವರಿಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟವು.

’ಟ್ರೂ ಮದರ್ಸ್’- (True Mothers)

ಸಟೊಕೊ ಮತ್ತು ಕಿಯೊಕಝುರ 11 ವರ್ಷದ ಮಗ ಆಸಟೊನ ಮೇಲೆ, ಅವನು ಕಲಿಯುವ ಶಾಲೆಯಲ್ಲಿ, ಆಟವಾಡುವಾಗ ತನ್ನ ಸಹಪಾಠಿಯನ್ನು ಕೆಳಗೆ ಬೀಳಿಸಿದ ಎಂಬ ಅರೋಪ ಬರುತ್ತದೆ. ಈ ಅರೋಪವನ್ನ ತಾಯಿ ಸಟೊಕೊಳ ಮನಸ್ಸು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಈ ಆರೋಪ ಅವಳನ್ನು 11 ವರ್ಷದ ಹಿಂದಿನ ನೆನಪಿಗೆ ಕೊಂಡೊಯ್ಯುತ್ತದೆ. ಸಟೊಕೊ ಮತ್ತು ಕಿಯೊಕಝು ಬಹಳ ಅನ್ಸೋನ್ಯವಾದ ಜೋಡಿಗಳು. ಸಟೊಕೊಳಿಗೆ ತಾಯಿಯಾಗುವ ಬಯಕೆ, ಕಿಯೊಕಝು ಕೂಡ ಇದಕ್ಕೆ ಒಪ್ಪುತ್ತಾನೆ. ಆದರೆ
ಕಿಯೊಕಝುವಿನಲ್ಲಿರುವ ಸಮಸ್ಯೆಯಿಂದ ಮಗು ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಸಂಗತಿ ವೈದ್ಯರಿಂದ ತಿಳಿಯುತ್ತದೆ. ಇದು ಇಬ್ಬರನ್ನೂ ಬಾಧಿಸುತ್ತದೆ. ಆನಂತರ ಅವರು ಮಗುವನ್ನು ದತ್ತು ಪಡೆಯಲು ನಿಶ್ಚಯಿಸುತ್ತಾರೆ. ಇದಿಷ್ಟು ಸಿನಿಮಾ ಪ್ರಾರಂಭದ ಮೂವತ್ತು ನಿಮಿಷಗಳ ಕಥೆ/ದೃಶ್ಯಗಳು. ಇದಿಷ್ಟನ್ನು ನೋಡುವಾಗ ನನಗೆ ಈ ಸಿನಿಮಾ ಯಾವ ಆಲೋಚನೆಯನ್ನ ಪ್ರಸ್ತುತಪಡಿಸುತ್ತದೆ ಎಂಬ ಗೊಂದಲ ಶುರುವಾಯಿತು. ಅದರಲ್ಲೂ ಸಟೊಕೊ ಪಾತ್ರ ತಾನು ತಾಯಿಯಾಗಬೇಕು ಎಂದು ಹಂಬಲಿಸುವುದು, ಅದಕ್ಕಾಗಿ ಪರಿತಪಿಸುವುದು, ಈ ಎಲ್ಲಾ ಸಂಗತಿಗಳು ಸುಲಭಕ್ಕೆ ಒಪ್ಪಿಗೆ ಆಗುತ್ತಿರಲಿಲ್ಲ.

ಅನ್ಯ ಕ್ಷೇತ್ರಗಳಂತೆ ಸಿನಿಮಾ ಕೂಡ ಪುರುಷರ ಪ್ರಾಬಲ್ಯವಿರುವ ಕ್ಷೇತ್ರ. ಇದಕ್ಕೆ ಜಪಾನ್ ಕೂಡ ಹೊರತಲ್ಲ. ಇಂತಹ ಪರಿಸರದಲ್ಲಿ ತನ್ನ ಸ್ವಂತ ಸಾಮರ್ಥ್ಯದಿಂದ ಜಾಗತಿಕ ಮನ್ನಣೆ ಪಡೆದ ನವೋಮಿ, ಈ ಸಿನಿಮಾದಲ್ಲಿ ಅದೇ ಪುರುಷ ಪ್ರಧಾನ ಸಮಾಜದ ಆಲೋಚನೆಯ ಪ್ರಭಾವದಿಂದ ಹುಟ್ಟಿದ, ಹೆಣ್ಣು ತಾಯ್ತನಕ್ಕೆ ಹಂಬಲಿಸುವ ಅದು ಸಾಧ್ಯವಿಲ್ಲದಾಗ ಅಪರಾಧಿ ಭಾವನೆಯಿಂದ ನರಳುವ, ಈ ತರಹದ ಆಲೋಚನೆಯನ್ನ ಈ ಸಿನಿಮಾ ಮುಖಾಂತರ ಪ್ರಸ್ತುತ ಪಡಿಸುತ್ತಿದ್ದಾರಾ ಎಂದು ಪ್ರಾರಂಭದಲ್ಲಿ ಗೊಂದಲವಾಯಿತು. ಆದರೆ ಅರ್ಧ ಗಂಟೆಯ ನಂತರ ತೆರೆದುಕೊಳ್ಳುವ ಚಿತ್ರಕಥೆಯಲ್ಲಿ, ಸಟೊಕೊಳ ಕಥೆಯ ಸಮಾನಾಂತರವಾಗೆ ಬರುವ ಹಿಕಾರಿಳ ಪಾತ್ರದ ಚಿತ್ರಣ ಈ ಎಲ್ಲಾ ಗೊಂದಲಗಳಿಂದ ಆಚೆ ಬರುವಂತೆ ಮಾಡಿತು. ನವೋಮಿ ಏನು ಹೇಳುತ್ತಿದ್ದಾರೋ ಅಷ್ಟು ಮಾತ್ರ ಕೇಳುವ ಮತ್ತು ಅನುಭವಿಸುವ ಹಂತಕ್ಕೆ ಅದು ನನ್ನನ್ನು ಕೊಂಡೊಯ್ದಿತು.

ಸಟೊಕೊ ದಂಪತಿಗಳಿಗೆ ದತ್ತುವಾಗಿ ಸಿಗುವ ಮಗು ಹಿಕಾರಿಯಳದು. ಹಿಕಾರಿ ತನ್ನ 14ನೇ ವಯಸ್ಸಿಗೆ ತನ್ನ ಸಹಪಾಠಿಯೊಂದಿಗಿನ ಪ್ರೀತಿಯ ಕಾರಣವಾಗಿ ಆ ಮಗುವನ್ನು ಪಡೆಯುತ್ತಾಳೆ. ಹಿಕಾರಿಗೆ ತನ್ನ ಮಗುವಿಂದ ದೂರವಾಗಲೂ ಇಷ್ಟ ಇಲ್ಲ. ಆದರೆ ತನ್ನ ತಂದೆ ತಾಯಿಯರ ಒತ್ತಾಯಕ್ಕೆ ಮಣಿದು ಅವಳು ತನ್ನಮಗುವನ್ನು ದೂರಮಾಡಿಕೊಳ್ಳಬೇಕಾಗುತ್ತದೆ. ಸಟೊಕೊ ತಾಯ್ತತನದ ಹಂಬಲ ಮತ್ತು ತಾಯ್ತನದ ಅನುಭವ ಮತ್ತು ಹಿಕಾರಿಯ ಪ್ರೇಮ ಮತ್ತು ಮಗು ಕಳೆದುಕೊಂಡ ಅನಾಥತೆಯನ್ನ ನವೋಮಿ ಕವಾಸೆ ತನ್ನ ಅದ್ಭುತ ದೃಶ್ಯಕಟ್ಟುಗಳಲ್ಲಿ ಕಟ್ಟಿಕೊಡುತ್ತಾಳೆ. ಈ ಅದ್ಬುತ ದೃಶ್ಯಗಳು ಮೊದಲರ್ಧ ಗಂಟೆ ನನ್ನಲ್ಲಿ ಉಂಟಾದ ವೈಚಾರಿಕ ಗೊಂದಲಗಳಿಗೆ ಉತ್ತರ ಸಿಕ್ಕಿತು ಅಂತ ಖಂಡಿತ ಹೇಳಲಾರೆ. ಆದರೆ ನವೋಮಿ ಕವಾಸೆಯ ಕಲಾತ್ಮಕ ದೃಷ್ಟಿ ಸಮ್ಮೋಹನಗೊಳಿಸಿಬಿಟ್ಟಿತು.

ಯಾವುದೇ ಒಂದು ಐಡಿಯಾ (ಆಲೋಚನೆ), ಸಿನಿಮಾದಲ್ಲಿ ಹೆಚ್ಚು ಭಾವುಕವಾಗಿ ಅಥವಾ ಮೆಲೋಡ್ರಮ್ಯಾಟಿಕ್ ಆಗಿ ಬಂದುಬಿಟ್ಟರೆ ಅದು ಆ ಕ್ಷಣಕ್ಕೆ ಪ್ರೇಕ್ಷಕನನ್ನ ಆರ್ದ್ರಗೊಳಿಸಿ ಅಲುಗಿಸಿಬಿಡುತ್ತದೆ ನಿಜ. ಆದರೆ ಆ ಸಿನಿಮಾ ತನ್ನ ಪ್ರೇಕ್ಷಕನನ್ನು ಅದರಾಚೆ ಆಲೋಚಿಸಲು ಪ್ರೇರೇಪಿಸಬೇಕೆಲ್ಲ! ಕವಾಸೆಯ ’ಟ್ರೂ ಮದರ್ಸ್’ ಸಿನಿಮಾ ಹೆಚ್ಚು ಮೆಲೋಡ್ರಮ್ಯಾಟಿಕ್ ಆಗಿ ಭಾವುಕವಾಗಿ ಪ್ರಸ್ತುತವಾಗಿದ್ದರೂ ಕೂಡ ಈ ಮೇಲಿನ ಅಭಿಪ್ರಾಯವನ್ನ ಇದಕ್ಕೂ ಅನ್ವಯಿಸಲಾಗುವುದಿಲ್ಲ. ಕವಾಸೆಯ 2015ರ ’ಸ್ವೀಟ್ ಬೀನ್’ (Sweet Bean) ಸಿನಿಮಾದಲ್ಲೂ ಇದು ಅನಿಸಿತ್ತು.

’ಟ್ರೂ ಮದರ್ಸ್’ ಯಾಕೆ ಪ್ರೇಕ್ಷಕನನ್ನ ಸಮ್ಮೋಹನಗೊಳಿಸುತ್ತದೆ? ಪ್ರತಿ ಪಾತ್ರಗಳ ಪ್ರತಿ ಭಾವಗಳನ್ನ ತುಂಬಾ ಕ್ಲೋಸಪ್ ಷಾಟ್‌ಗಳಲ್ಲಿ ಚಿತ್ರಿಸಲಾಗಿದೆ. ಅದರಲ್ಲೂ ಸಿನಿಮಾದ ಎರಡು ಪ್ರಧಾನ ಪಾತ್ರಗಳಾದ ಸಟೊಕೊ ಮತ್ತು
ಹಿಕಾರಿಯರು ಇರುವ ದೃಶ್ಯಗಳನ್ನು. ಈ ಎರಡು ಪಾತ್ರಗಳಲ್ಲಿ ಕ್ರಮವಾಗಿ ಹಿರೋಮಿ ನಾಗಸಕು (Hiromi Nagasaku) ಮತ್ತು ಅಜು ಮಕಿಟ (Aju Makita) ಬಹಳ ಅದ್ಭುತವಾಗಿ ನಟಿಸಿದ್ದಾರೆ. ಕಥೆ, ಪಾತ್ರಗಳಲ್ಲಿ ಉಂಟಾಗುವ ಭಾವನೆ, ಅದರ ಅಭಿವ್ಯಕ್ತಿ, ಅದನ್ನು ಸೆರೆ ಹಿಡಿಯುವ ಕ್ಯಾಮರಾದ ಸ್ಥಿತಿ ಮತ್ತು ಚಲನೆ, ಅದರ ನಡುವೆ ಬರುವ ಆ ಪುಟ್ಟ ನಗರದ ಪರಿಸರದ ದೃಶ್ಯಗಳು, ಈ ಎಲ್ಲಾ ಸಂಗತಿಗಳು ಸಾವಯವಾಗಿ ಒಂದಕ್ಕೊಂದು ಲಯ ಕಂಡುಕೊಂಡಿವೆ.

ಈ ಸಿನಿಮಾಕ್ಕೆ ಮೂಲ ಪ್ರೇರಣೆ ಮಿಝುಕಿ ಸುಜಿಮುರ ಅವರ ಕಾದಂಬರಿ ‘Morning Comes’. ನವೋಮಿ ಕವಾಸೆ ಸಮಕಾಲೀನ ಜಪಾನ್ ಸಮಾಜ ಮತ್ತು ಕುಟುಂಬದ ಸಂಘರ್ಷಗಳನ್ನ ವೈಯಕ್ತಿಕ ನೆಲೆಯಲ್ಲಿ ತನ್ನ ಸಿನಿಮಾಗಳ ಮುಖಾಂತರ ಪ್ರಸ್ತುತಪಡಿಸುತ್ತಾರೆ ಎಂಬ ಮಾತಿದೆ. ಕವಾಸೆಯ ಬಹುತೇಕ ಸಿನಿಮಾಗಳು ಅವರ ’ಅರೆ ಆತ್ಮಚರಿತ್ರೆಗಳು’ ಕೂಡ. ಕವಾಸೆ ಬಾಲ್ಯದಲ್ಲಿಯೇ ಅವರ ತಂದೆ-ತಾಯಿ ವಿಚ್ಚೇದನ ಪಡೆದ ಕಾರಣವಾಗಿ, ಅವರು ತಮ್ಮ ದೊಡ್ಡಮ್ಮನ ಹತ್ತಿರ ಬೆಳೆಯಬೇಕಾದ ಸಂದರ್ಭ ಬರುತ್ತದೆ. ಮಿಝುಕಿ ಸುಜಿಮುರರ ಕಾದಂಬರಿಯ ವಸ್ತು ಈ ಕಾರಣಕ್ಕೆ ನವೋಮಿಯವರಿಗೆ ಹತ್ತಿರವಾಗಿರಬಹುದು. ನವೋಮಿ ತನ್ನ ಪ್ರೇಕ್ಷಕನನ್ನ ಸಿನಿಮಾ ಪ್ರಾರಂಭದಿಂದಲೂ ಅಳಿಸಲು ಪ್ರಯತ್ನಿಸುತ್ತಾಳೆ. ಈ ಸಂಗತಿಗಳಿಗೆಲ್ಲಾ ಭಾವುಕವಾಗಬಾರದು ಅಂತ ಎಷ್ಟೇ ಕಠಿಣವಾಗಿರಲೂ ಪ್ರಯತ್ನಿಸಿದರೂ ಸಿನಿಮಾದ ಕಡೆಯ ಹಿಂದಿನ ಒಂದು ದೃಶ್ಯ ಮಾತ್ರ ಆರ್ದ್ರಗೊಳಿಸದೆ ಬಿಡದು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...