Homeಅಂಕಣಗಳುಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

- Advertisement -
- Advertisement -

ಪಿಕೆ ಟಾಕೀಸ್ 15/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಡಾರ್‌ಡೆನ್ ಸಹೋದರರು (Jean Pierre Dardenne & Luc Dardenne)

ಟು ನೈಟ್ಸ್, ಒನ್ ನೈಟ್ (2014, ಫ್ರೆಂಚ್, Two nights, One night): ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ ತಾಯಿ ಸ್ಯಾಂಡ್ರಾ. ಆಕೆ ಖಿನ್ನತೆಯಿಂದ ಪೂರ್ತಿಯಾಗಿ ಚೇತರಿಸಿಕೊಳ್ಳುವ ಮೊದಲೇ ಅವಳಿಗೆ ಆಘಾತಕಾರಿಯಾದ ಸುದ್ದಿ ಕಾದಿರುತ್ತದೆ.

ಅದು, ಆರ್ಥಿಕ ಹಿಂಜರಿತದ ಕಾರಣಕ್ಕೆ, ಶುಕ್ರವಾರದಂದು ಅವಳ ಫ್ಯಾಕ್ಟರಿಯಲ್ಲಿ ತೀರ್ಮಾನಿಸಿದಂತೆ, ಸ್ಯಾಂಡ್ರಾಳನ್ನು ಕೆಲಸದಿಂದ ಕಿತ್ತುಹಾಕಬೇಕಿರುತ್ತದೆ. ಅವಳ ಸಹೋದ್ಯೋಗಿಗಳು ಚಲಾಯಿಸುವ ಮತಗಳ ಮೇಲೆ ಸ್ಯಾಂಡ್ರಾಳ ಭವಿಷ್ಯವೇ ನಿರ್ಧಾರವಾಗಲಿರುತ್ತದೆ.

ಸ್ಯಾಂಡ್ರಾ ಮನೆಯಲ್ಲೂ ಆರ್ಥಿಕವಾಗಿ ಎಲ್ಲವೂ ಸರಿಯಿರುವುದಿಲ್ಲ. ಕೆಲಸವನ್ನು ಮರುಪಡೆಯಲು ಪ್ರಯತ್ನಿಸುವಂತೆ ಗಂಡ ಹೇಳುತ್ತಾನೆ. ಅದರಂತೆ ಸ್ಯಾಂಡ್ರಾ ತನಗೆ ಉಳಿದಿರುವ ಶನಿವಾರ ಮತ್ತು ಭಾನುವಾರದ ರಜಾದಿನಗಳಂದು ತನ್ನೆಲ್ಲ ಸಹೋದ್ಯೋಗಿಗಳನ್ನು ಒಬ್ಬೊಬ್ಬರಂತೆ ಭೇಟಿಯಾಗಿ, ತನ್ನ ಕೆಲಸ ಉಳಿಯುವ ಸಲುವಾಗಿ ತನ್ನ ಪರವಾಗಿ ಮತ ಚಲಾಯಿಸುವಂತೆ ವಿನಂತಿಸಿಕೊಳ್ಳುವುವೇ ಈ ಸಿನಿಮಾದ ಕಥಾನಕ.

ಸ್ಯಾಂಡ್ರಾಳ ಸಹೋದ್ಯೋಗಿಗಳಿಗೆ ತಲಾ ಸಾವಿರ ಯೂರೋ ಬೋನಸ್ ಹಣವನ್ನು ಗಳಿಸಿಕೊಳ್ಳುವ ಅವಕಾಶ, ತಾವು ಮತ ಚಲಾಯಿಸಿ ಸ್ಯಾಂಡ್ರಾ ಉದ್ಯೋಗ ಕಳೆದುಕೊಳ್ಳುವುದರಲ್ಲಿ ಅಡಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ಸಹೋದ್ಯೋಗಿಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗಲೂ ವಿವಿಧ ಬಗೆಯ ಸನ್ನಿವೇಶಗಳನ್ನು ಸ್ಯಾಂಡ್ರಾ ಎದುರಿಸಬೇಕಾಗುತ್ತದೆ.

ಕೆಲವರು ಸ್ಯಾಂಡ್ರಾಳ ಸ್ಥಿತಿಯನ್ನು ನೋಡಿ ಮರುಕಪಟ್ಟು, ಆಕೆ ಕೆಲಸಕ್ಕೆ ಹಿಂದಿರುಗಲು ಸಹಾಯವಾಗುವಂತೆ ಮತ ಚಲಾಯಿಸಲು ಒಪ್ಪಿಕೊಂಡರೆ, ಮತ್ತೆ ಕೆಲವರು ಸಾವಿರ ಯೂರೋಗಳನ್ನು ಕಳೆದುಕೊಳ್ಳಬೇಕಾಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಇನ್ನು ಕೆಲವರು ತಮ್ಮ ಸಾವಿರ ಯೂರೋಗಳನ್ನು ಕಿತ್ತುಕೊಳ್ಳುವ ಹುನ್ನಾರವಿದು ಎಂದುಕೊಂಡು ಸ್ಯಾಂಡ್ರಾಳ ಮೇಲೆ ಸಿಟ್ಟಾಗುತ್ತಾರೆ ಮತ್ತು ರೇಗಾಡುತ್ತಾರೆ.

ಟು ನೈಟ್ಸ್, ಒನ್ ನೈಟ್

ಫ್ಯಾಕ್ಟರಿಯಲ್ಲಿ ಸೋಮವಾರ ಬೆಳಿಗ್ಗೆ ಸ್ಯಾಂಡ್ರಾಳ ಸಹೋದ್ಯೋಗಿಗಳು ಮತ ಚಲಾಯಿಸುವುದರೊಂದಿಗೆ ಸ್ಯಾಂಡ್ರಾ ಹೊರಹೋಗುತ್ತಾಳೆ. ಸಿನಿಮಾ ಅಂತ್ಯವಾಗುತ್ತದೆ.

ಫ್ಯಾಕ್ಟರಿಗಳಲ್ಲಿ ವರ್ಷವೆಲ್ಲ ದುಡಿದು ನೌಕರರು ಬೋನಸ್ ಹಣಕ್ಕಾಗಿ ಕಾಯುತ್ತಿರುವಾಗ, ಸಹೋದ್ಯೋಗಿಯನ್ನು ಕೆಲಸದಿಂದ ವಜಾ ಮಾಡಲು ಮತ ಚಲಾಯಿಸಿದರೆ ಮಾತ್ರ ಬೋನಸ್ ಹಣವನ್ನು ನೀಡುವ ಷರತ್ತಿನಿಂದ, ಪರಸ್ಪರರಲ್ಲಿಯೇ ಭೇದ ಮೂಡಿಸಿ, ಮಾನವೀಯ ಕಾಳಜಿಗಳನ್ನು ಮರೆಯುವಂತೆ ಮಾಡುವ ಆಡಳಿತ ವರ್ಗದ ಕ್ರೌರ್ಯವನ್ನು ಸಿನಿಮಾ ಸಶಕ್ತವಾಗಿ ಹಿಡಿದಿಡುತ್ತದೆ. ಫ್ಯಾಕ್ಟರಿ ತನ್ನ ನೌಕರರನ್ನು ಕುರಿತು ತೋರಿಸುವ ನಿರ್ಲಕ್ಷ್ಯ ಮತ್ತು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ವೀಕ್ಷಕರಿಗೆ ಮನಮುಟ್ಟುವಂತೆ ಕಥಾನಕವನ್ನು ನಿರ್ದೇಶಕ ಹೆಣೆದಿದ್ದಾರೆ.

ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿರುವ ಮಾರಿಯಾನ್ ಕೊಟಿಯಾಡ್ ಮುಖ್ಯವಾಹಿನಿ ಸಿನಿಮಾಗಳಲ್ಲಿ ಪ್ರಖ್ಯಾತಿ ಪಡೆದಿರುವವರು. ಈ ಸಿನಿಮಾದಲ್ಲಿ ಅವರು ಯಾವುದೇ ವಿಧವಾದ ಮೇಕಪ್ ಇಲ್ಲದೆ ಕಾಣಿಸಿಕೊಂಡು, ಅದ್ಬುತ ನಟನೆಯನ್ನು ನೀಡಿದ್ದಾರೆ.

ಖಿನ್ನತೆಯನ್ನು ನಿಜವಾದ ಕಾಯಿಲೆಯೆಂದು ಎಷ್ಟೋ ದೇಶಗಳಲ್ಲಿ ಗುರುತಿಸದೆ ಇರುವುದರ ಬಗ್ಗೆ ಕೂಡ ಈ ಸಿನಿಮಾ ದ್ವನಿ ಎತ್ತುತ್ತದೆ.

ಯಂಗ್ ಅಹ್ಮೆದ್ (2019, ಫ್ರೆಂಚ್, Young Ahmed): ತಂದೆಯನ್ನು ಕಳೆದುಕೊಂಡಿರುವ ಹದಿಮೂರು ವರ್ಷದ ಅಹ್ಮೆದ್ ತಾಯಿ ಮತ್ತು ಸಹೋದರಿಯ ಜೊತೆ ಬೆಲ್ಜಿಯಂನ ಹಳ್ಳಿಯೊಂದರಲ್ಲಿ ಬದುಕುತ್ತಿರುವ ಮುಸ್ಲಿಂ ಸಮುದಾಯದ ಹುಡುಗ.

ಅಹ್ಮೆದ್ ಅಲ್ಲಿನ ಹದಿಹರೆಯುದ ಹುಡುಗರು ತೊಡಗಿಸಿಕೊಳ್ಳುವಂತೆ ವಿಡಿಯೋ, ಮೊಬೈಲ್ ಆಟಗಳನ್ನು ಆಡುವುದನ್ನು ಬಿಟ್ಟು, ಇಸ್ಲಾಂ ಮೂಲಭೂತವಾದಕ್ಕೆ ತಿರುಗಿ ಅದರಂತೆಯೇ ವರ್ತಿಸುತ್ತಾನೆ. ತನ್ನ ತಾಯಿ ಮತ್ತು ಅಕ್ಕನಿಗೆ ಸರಿಯಾದ ಬಟ್ಟೆಗಳನ್ನು ಧರಿಸುವಂತೆ ಸಲಹೆ ನೀಡಲು ಪ್ರಾರಂಭಿಸುತ್ತಾನೆ. ಹೆಂಗಸರು
ಅಥವಾ ಹುಡುಗಿಯರನ್ನು ಮುಟ್ಟುವುದು ತಪ್ಪೆಂದು ಹೇಳುತ್ತಾನೆ.

ಶಾಲೆಯಲ್ಲಿ ಶಿಕ್ಷಕಿಯೊಬ್ಬರ ಪಾಠಗಳನ್ನು ಬೇಕಂತಲೇ ತಪ್ಪಿಸಿಕೊಳ್ಳುತ್ತಾನೆ. ಕಾರಣ ಶಿಕ್ಷಕಿಗೆ ’ಜ್ಯೂ’ ಬಾಯ್‌ಫ್ರೆಂಡ್ ಇರುವುದು. ಅದಕ್ಕಾಗಿ ಆಕೆಯನ್ನು ದ್ವೇಷಿಸುತ್ತಾನೆ.

ಅಹ್ಮೆದ್‌ನ ಸೋದರ ಸಂಬಂಧಿಯೊಬ್ಬ ಇಸ್ಲಾಂ ಜಿಹಾದಿಯಾಗಿರುತ್ತಾನೆ. ಅಲ್ಲದೆ ಅವನ ಹೆಸರಿನಲ್ಲಿರುವ ವೆಬ್‌ಸೈಟಿನಲ್ಲಿ ನಾಯಕನಂತೆ ರಂಜಿಸಿ ಬರೆದಿರುತ್ತಾರೆ. ಅದೇ ಊರಿನಲ್ಲಿ ಮೂಲಭೂತವಾದಿ ಇಮಾಮ್ ಜೊತೆಯಲ್ಲಿ ಅಹ್ಮೆದ್‌ನ ಗೆಳೆತನ. ’ಸೆಕ್ಯುಲರಿಸಂನಿಂದ ಇಸ್ಲಾಂ ದುರ್ಬಲಗೊಂಡು, ಇಸ್ಲಾಂ ಧರ್ಮವೇ ಮಾಯವಾಗುತ್ತದೆ. ಇದೇ ಕಾರಣದಿಂದ ಇಸ್ಲಾಂ ಧರ್ಮವನ್ನು ಉಳಿಸುವುದ್ದಕ್ಕಾಗಿ ಜವಾಬ್ದಾರಿಯನ್ನು ನಿರ್ವಹಿಸಿಬೇಕೆಂದು’ ಇಮಾಮ್ ಬ್ರೈನ್ ವಾಶ್ ಮಾಡುತ್ತಿರುತ್ತಾನೆ.

ಯಂಗ್ ಅಹ್ಮೆದ್

ಅದರಂತೆ ಅಹ್ಮೆದ್ ದಿನಚರಿ ಬದಲಾಗುತ್ತದೆ. ಒಂಟಿಯಾಗಿರುವುದು, ನಮಾಜ್ ಮಾಡುವುದು ಇಲ್ಲವೇ ಇಮಾಮ್‌ನ ಸಂಘದಲ್ಲಿ ಇರುವುದು ಅಷ್ಟೇ! ಇಸ್ಲಾಂಅನ್ನು ಉಳಿಸಬೇಕೆಂದು ’ಜ್ಯೂಯಿಶ್’ ಬಾಯ್‌ಫ್ರೆಂಡ್ ಇರುವ ಶಿಕ್ಷಕಿಯನ್ನು ಕೊಲ್ಲುವ ಪ್ರಯತ್ನಮಾಡುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ. ಈ ಹಲ್ಲೆಗಾಗಿ ಬಾಲಾಪರಾಧ ಕೇಂದ್ರದಲ್ಲಿ ಬಂಧಿಯಾಗುತ್ತಾನೆ.

ಬಾಲಾಪರಾಧ ಕೇಂದ್ರದಲ್ಲಿಯೇ ಐದು ಬಾರಿ ನಮಾಜ್ ಮಾಡುತ್ತಾ, ತನ್ನಲ್ಲಿ ಪರಿವರ್ತನೆಯಾಗುತ್ತಿದೆ ಎಂದು
ತೋರಿಸಿಕೊಳ್ಳುತ್ತಾನೆ. ಆದರೆ ಅವನಲ್ಲಿ ಬಿತ್ತಲಾಗಿದ್ದ ವಿಷ ಹಾಗೆಯೇ ಉಳಿದುಕೊಂಡಿರುತ್ತದೆ. ಈ ಕೇಂದ್ರದಲ್ಲಿ ಮನೋಶಾಸ್ತ್ರಜ್ಞರ ಸಹಾಯದಿಂದ, ತೋಟದ ಕೆಲಸದ ನಿಮಿತ್ತ ಅಹ್ಮೆದ್‌ನನ್ನು ಹೊರಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಭೇಟಿಯಾಗುವ ಹುಡುಗಿಯಿಂದ ಅಹ್ಮೆದ್‌ನಲ್ಲಿ ಬದಲಾವಣೆಗಳಾಗುತ್ತಾ ಸಿನಿಮಾ ಕೊನೆಮುಟ್ಟುತ್ತದೆ.

ಹದಿಹರೆಯದವರ ದುರ್ಬಲ ಮನಸ್ಸುಗಳನ್ನು ಹೇಗೆ ಮೂಲಭೂತವಾದಿಗಳು ತಮ್ಮ ತಕ್ಕೆಗೆ ತೆಗೆದುಕೊಂಡು, ಅವರ ಬದುಕನ್ನೇ ಅಲ್ಲೋಲಕಲ್ಲೋಲಗೊಳಿಸುತ್ತಾರೆ ಎಂಬುದನ್ನು ಚಿತ್ರಿಸಿರುವ ಸಿನಿಮಾದಲ್ಲಿ ಮಹತ್ವದ ಪ್ರಶ್ನೆಗಳನ್ನೂ ಎತ್ತಲಾಗಿದೆ. ಮನಸ್ಸೆಲ್ಲ ವಿಷ ತುಂಬಿಕೊಂಡು ಮಾಡಿರುವ ತಪ್ಪುಗಳಿಗೆ ಶಿಕ್ಷಿಸಬೇಕಾ ಇಲ್ಲವಾ ಆಥವಾ ಪರಿವರ್ತನೆ ಸಾಧ್ಯವೇ ಎನ್ನುವ ಅತಿ ದೊಡ್ಡ ಪ್ರಶ್ನೆಯನ್ನು ನಿರ್ದೇಶಕರು ಪ್ರೇಕ್ಷಕರಿಗೆ ತೇಲಿಬಿಡುತ್ತಾರೆ.

ಡಾರ್‌ಡೆನ್ ಸಹೋದರರು (Jean Pierre Dardenne & Luc Dardenne): ಡಾರ್‌ಡೆನ್ ಸಹೋದರಿಗೆ ವಯಸ್ಸಿನಲ್ಲಿ ಮೂರು ವರ್ಷಗಳ ಅಂತರ. ಈ ಜೋಡಿ ನಿರ್ದೇಶಕರು ಮುಂದುವರೆದ ಸಮಾಜದಲ್ಲಿ ವಿವಿಧ ಕಾರಣಗಳಿಂದ ಒಂಟಿಯಾಗಿರುವ ಮನಸ್ಸುಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವ ಪ್ರಯತ್ನವನ್ನು ತಮ್ಮ ಸಿನಿಮಾಗಳಲ್ಲಿ ಶೋಧಿಸಿದ್ದಾರೆ.

ಇವರ ’ಕಿಡ್ ವಿತ್ ಅ ಬೈಕ್’ (2011), ’ದಿ ಚೈಡ್’ (2005) ಮತ್ತು ’ಯಂಗ್ ಅಹ್ಮೆದ್’ ಚಿತ್ರಗಳಲ್ಲಿ ಮಕ್ಕಳ ಮನೋಲೋಕವನ್ನು ಅನ್ವೇಷಿಸಿ ಹಿಡಿದಿಟ್ಟಿದ್ದಾರೆ.

ಇವರ ಸಿನಿಮಾಟೋಗ್ರಾಫಿಯ ಶೈಲಿ ಕೂಡ ವಿಭಿನ್ನವಾದದ್ದು. ಸಾಂಪ್ರದಾಯಿಕವಾಗಿ ಚಿತ್ರಿಸುವಂತೆ ಫುಲ್, ಮಿಡ್ ಮತ್ತು ಕ್ಲೋಸ್‌ಅಪ್ ಶಾಟ್‌ಗಳನ್ನು ಬಳಸದೆ, ಪಾತ್ರಗಳು ತಮ್ಮ ದಿನನಿತ್ಯದಲ್ಲಿ ವ್ಯವಹರಿಸುವಂತೆಯೇ ಅಥವಾ ಮತ್ತೊಂದು ಪಾತ್ರದೊಂದಿಗೆ ಸಂಭಾಷಿಸುತ್ತಿದ್ದಾಗ ಕ್ಯಾಮರಾ ಒಂದೇ ಕಡೆ ನಿಂತು, ಎಲ್ಲದಕ್ಕೂ ಸಾಕ್ಷಿಯೆಂಬಂತೆ ಗಮನಿಸುತ್ತದೆ.

ಡಾರ್‌ಡೆನ್ ಸಹೋದರರು

ಇವರ ಸಿನಿಮಾಗಳಲ್ಲಿ ಕ್ಯಾಮರಾ ಚಲನೆಯೂ ಗಮನಾರ್ಹವಾದದ್ದು. ಪಾತ್ರವೊಂದು ಎಡಬದಿಯಿಂದ ಬೇರೆಕಡೆಗೆ ಹೋಗುವ ಸನ್ನಿವೇಶದಲ್ಲಿ, ಮಧ್ಯೆದಲ್ಲಿ ನಿಂತು ಕ್ಯಾಮರಾವನ್ನು ಎಡಗಡೆಯಿಂದ ಪ್ಯಾನ್ ಮಾಡಿ ಬಲಭಾಗಕ್ಕೆ ತಿರುಗಿಸುತ್ತಾರೆ. ಮತ್ತು ದೃಶ್ಯಗಳನ್ನು ಪದೇ ಪದೇ ತುಂಡರಿಸದೆ, ನಿರಂತರವಾಗಿ ನಡೆವ ಸಂಭಾಷಣೆಗಳಲ್ಲಿ ಪ್ರೇಕ್ಷಕ ಮುಳುಗಿ, ಇದು ಸಿನಿಮಾ ಎಂಬುದನ್ನು ಮರೆತು, ನಿಜವಾಗಿ ನಡೆಯುತ್ತಿರುವ ಸನ್ನಿವೇಶಗಳೇನೋ ಎಂದು ಭಾಸವಾಗುವಂತೆ ಮಾಡಿ, ಪ್ರೇಕ್ಷಕನನ್ನು ಅದಕ್ಕೆ ಮೂಕಸಾಕ್ಷಿಯನ್ನಾಗಿಸುತ್ತಾರೆ.

ಡಾರ್‌ಡೆನ್ ಸಹೋದರರು ಹಲವಾರು ಸಾಕ್ಷ್ಯಚಿತ್ರಗಳನ್ನು ಕೂಡ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಇದೇ ಕಾರಣದಿಂದಲೇ ಇವರ ಸಿನಿಮಾಟೋಗ್ರಾಫಿಯ ಶೈಲಿ ಫೀಚರ್ ಫಿಲ್ಮ್‌ಗಳಲ್ಲಿ ಕೂಡ ನೈಜತೆಯನ್ನು ಸೆರೆಹಿಡಿಯಲು ಪ್ರಯತ್ನಿಸುತ್ತದೆ.


ಇದನ್ನೂ ಓದಿ: ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...