Homeಅಂಕಣಗಳುಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

ಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

- Advertisement -
- Advertisement -

ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಮಹಾಸ್ಫೋಟಕ್ಕೆ ಭೂಮಂಡಲ ಸಾಕ್ಷಿಯಾಗಿದೆ. ಮಾಹಿತಿ ಅಥವಾ ಡೇಟಾವನ್ನು ಹೊಸ ಪ್ರಬಲ ಅಸ್ತ್ರ ಎಂದು ಬಣ್ಣಿಸಲಾಗುತ್ತಿದೆ. ಡೇಟಾವನ್ನು ನಿಯಂತ್ರಿಸುವಾತನೇ ಸರ್ವಶಕ್ತ ಎಂಬುದು ಈ ಯುಗದ ಹೊಸ ಸತ್ಯ.

ಚಿಂತಕರು, ತಂತ್ರಜ್ಞನಿಪುಣರು ಕೆಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ ಈ ಅಂಶ ದಿನಗಳೆದಂತೆ ಮತ್ತಷ್ಟು ಗಟ್ಟಿಯಾಗಿ ಸ್ಫುಟವಾಗಿ ಹರಳುಗಟ್ಟತೊಡಗಿದೆ. ಜೊತೆಜೊತೆಗೆ ಸರ್ವಾಧಿಕಾರಗಳು, ಧ್ರುವೀಕರಣ ರಾಜಕಾರಣ ಬೇರಿಳಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ತಮ್ಮ ಮೇಲೆ ಪ್ರಯೋಗಿಸಲಾಗಿರುವ ಮಂಕುಬೂದಿಯನ್ನು ಜನಸಮುದಾಯಗಳು ಕೊಡವಿಕೊಳ್ಳದಿದ್ದರೆ ಈ ಅಪಾಯ ಕೈಮೀರಲಿದೆ ಮತ್ತು ಗಹಗಹಿಸಲಿದೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಸನ್ನಿವೇಶದಲ್ಲಿ ಇಸ್ರೇಲಿ ಮೂಲದ ಜಗತ್ಪ್ರಸಿದ್ಧ ಯುವ ಚಿಂತಕ ಯುವಾಲ್ ನೋವಾ ಹರಾರಿ ಅವರ ಕೆಳಕಂಡ ಚಿಂತನೆಗೆ ಕಿವಿಗೊಟ್ಟು ಧೇನಿಸಬೇಕಿದೆ.

ಹರಾರಿ ಹೇಳುತ್ತಾರೆ… ಆರಂಭದಲ್ಲಿ ಭೂವಿಸ್ತಾರ, ಆನಂತರ ಯಂತ್ರಗಳು, ಇದೀಗ ಡೇಟಾ ಬಹುದೊಡ್ಡ ಆಸ್ತಿಯೆಂದು ಪರಿಗಣಿಸಲಾಗಿದೆ. ಡೇಟಾವನ್ನು ನಿಯಂತ್ರಿಸುವವರು ಭಾರೀ ಜನಸಮೂಹಗಳನ್ನು ಮತ್ತು ಆ ಮೂಲಕ ಅಧಿಕಾರವನ್ನು ನಿಯಂತ್ರಿಸುತ್ತಾರೆ ಎನ್ನುವ ವಾದ ಊರ್ಜಿತಗೊಂಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗಿರುವ ಕ್ರಾಂತಿಯೇ ಉದಾರವಾದಿ ಜನತಂತ್ರದ ಪಾಲಿಗೆ ಬಲು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಮಾಹಿತಿ ತಂತ್ರಜ್ಞಾನವು ಕಟಾವು ಮಾಡಿರುವ ಡೇಟಾದ ಮಹಾ ಇಳುವರಿಯು ಜನತಂತ್ರಗಳಿಗೆ ಶಕ್ತಿ ತುಂಬುವ ಬದಲು ಸರ್ವಾಧಿಕಾರಗಳ ಕೈ ಬಲಪಡಿಸಲಿದೆ

ಸರ್ವಾಧಿಕಾರಗಳು ತಮ್ಮ ಲಾಭಕ್ಕಾಗಿ ಎಲ್ಲ ಡೇಟಾವನ್ನು ಒಂದೆಡೆ ಕೇಂದ್ರೀಕರಿಸುವಲ್ಲಿ ಯಶಸ್ವಿಯಾಗಿವೆ. ತಂತ್ರಜ್ಞಾನ ಬೆಳೆದಂತೆಲ್ಲ ಅಪಾರ ಡೇಟಾವನ್ನು ಒಂದೆಡೆ ಸಂಸ್ಕರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಲೀಸಾಗಿ ಹೋಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಜೀವತಂತ್ರಜ್ಞಾನ (ಐಟಿ ಮತ್ತು ಬಿಟಿ) ಒಂದರೊಡನೆ ಮತ್ತೊಂದು ವಿಲೀನಗೊಳ್ಳುವ ವಿದ್ಯಮಾನವು ’ಆಲ್ಗರಿದಮ್’ಗಳನ್ನು ಸೃಷ್ಟಿಸಿದೆ. ಈ ’ಆಲ್ಗರಿದಮ್’ಗಳು ವ್ಯಕ್ತಿಗಳ ಅನಿಸಿಕೆ ಆಶಯ ಆಯ್ಕೆಗಳನ್ನು ಖುದ್ದು ಅವರೇ ಅರಿತಿರುವುದಕ್ಕಿಂತ ಹೆಚ್ಚು ನಿಖರವಾಗಿ ನಿಚ್ಚಳವಾಗಿ ಅರಿಯಬಲ್ಲವು. ಸರ್ಕಾರದಂತಹ ಸಂಸ್ಥೆಗಳು ಈ ತಂತ್ರಜ್ಞಾನದ ಲಾಭ ಪಡೆದು ಜನಸಮುದಾಯಗಳ ಒಲವು ನಿಲುವುಗಳನ್ನು ಮುಂದಾಗಿಯೇ ಕಂಡುಕೊಳ್ಳಬಲ್ಲವು. ಆವರ ಭಾವನೆಗಳನ್ನು ತಮಗೆ ಬೇಕಾದಂತೆ ತಿದ್ದಿ ತೀಡಬಲ್ಲವು. ಉದಾಹರಣೆಗೆ ತನ್ನ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲಾರದ ಸರ್ವಾಧಿಕಾರಿಯೊಬ್ಬನು ತನ್ನ ಜನರು ತನ್ನನ್ನು ಪ್ರೀತಿಸುವಂತೆಯೂ ಪ್ರತಿಪಕ್ಷಗಳನ್ನು ದ್ವೇಷಿಸುವಂತೆಯೂ ಮಾಡಬಲ್ಲ. ಅಂತಹ ವಿರೋಧಾಭಾಸದ ಪರಿಸ್ಥಿತಿಯಲ್ಲಿ ಜನತಂತ್ರ ಉಳಿದು ಬೆಳೆಯಲಾರದು. ಅಂತಹ ವಾತಾವರಣದಲ್ಲಿ ಜನತಂತ್ರವು ಸರಿತಪ್ಪುಗಳನ್ನು ವಿವೇಚಿಸುವ ಮಾನವ ಆಲೋಚನಾ ಶಕ್ತಿಯ ಆಧಾರವನ್ನು ಕಳೆದುಕೊಳ್ಳುತ್ತದೆ. ಬುದ್ಧಿಯ ಜಾಗವನ್ನು ಭಾವುಕತೆ ಆವರಿಸುತ್ತದೆ. ನಮ್ಮ ಭಾವನೆಗಳನ್ನು ಹ್ಯಾಕ್ ಮಾಡಿ ಧ್ರುವೀಕರಣ ಮಾಡಿ ಜನತಂತ್ರವನ್ನು ನಾಶ ಮಾಡಲು ಬಳಸಿಕೊಳ್ಳಲಾಗುತ್ತದೆ. ಜನತಂತ್ರವು ಕೇವಲ ಒಂದು ಭಾವನಾತ್ಮಕ ಗೊಂಬೆಯಾಟ ಆಗಿಬಿಡುತ್ತದೆ.

ಇಂತಹ ಅಪಾಯವನ್ನು ತಪ್ಪಿಸಲು ಭಾರೀ ಡೇಟಾ ಒಂದೇ ಕಡೆ ಕೇಂದ್ರೀಕೃತ ಆಗುವುದನ್ನು ತಪ್ಪಿಸಬೇಕು. ಡೇಟಾ ನಿಯಂತ್ರಿಸುವವರು ನಮ್ಮ ಭಾವನೆಗಳನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ತಿದ್ದಿ ತೀಡಿಕೊಳ್ಳುವುದಕ್ಕೆ ಆಗ ಸಾಧ್ಯವಾಗುವುದಿಲ್ಲ.

ದೈನಂದಿನ ಗ್ರಾಹಕ ಸರಕು ಸರಂಜಾಮುಗಳನ್ನು ನಮಗೆ ಮಾರಾಟ ಮಾಡಲು ಮಾಹಿತಿ ತಂತ್ರಜ್ಞಾನದ ಆಲ್ಗರಿದಂ ವಿಧಾನದ ಪ್ರಯೋಗ ಈಗಾಗಲೆ ಜಾರಿಯಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನತಂತ್ರದ ಶತ್ರುಗಳು ಇದೇ ವಿಧಾನವನ್ನು ಅನುಸರಿಸಿ ಭಯ, ದ್ವೇಷ ಹಾಗೂ ಒಣಪ್ರತಿಷ್ಠೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವುಗಳ ಮಾರಾಟ ಶೂನ್ಯದಲ್ಲಿ ಸಾಧ್ಯವಿಲ್ಲ. ಅವರು ಜನಸಮೂಹಗಳ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ತಮ್ಮ ದೌರ್ಬಲ್ಯಗಳು ಜನತಂತ್ರದ ಶತ್ರುಗಳ ಕೈಯಲ್ಲಿನ ಅಸ್ತ್ರವಾಗದಂತೆ ಜನಸಮೂಹಗಳು ಜಾಗ್ರತೆ ವಹಿಸಬೇಕು. ದೌರ್ಬಲ್ಯಗಳನ್ನು ಅರಿತು ಇಂತಹ ಎಚ್ಚರಿಕೆ ವಹಿಸುವುದು ಜನರನ್ನು ಫ್ಯಾಸಿಸ್ಟ್ ಕನ್ನಡಿಯಿಂದಲೂ ಕಾಪಾಡುತ್ತದೆ. ಫ್ಯಾಸಿಸಮ್ ನಮ್ಮ ಒಣಪ್ರತಿಷ್ಠೆಯಂತಹ ದೌರ್ಬಲ್ಯಗಳನ್ನು ಬಳಸಿಕೊಂಡು ಬೇರೂರುತ್ತದೆ. ನಾವು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ನಮ್ಮನ್ನು ತೋರುತ್ತದೆ. ನಮ್ಮನ್ನು ನಾವು ಚೆನ್ನಾಗಿ ಬಲ್ಲೆವಾದರೆ ಈ ಮೋಹಪರವಶತೆಗೆ ಬಲಿ ಬೀಳುವುದು ಸಾಧ್ಯವಿಲ್ಲ. ಸರ್ವಾಧಿಕಾರಿಗಳು ನಿಮ್ಮ ಕಣ್ಣೆದುರಿಗೆ ಫ್ಯಾಸಿಸ್ಟ್ ಕನ್ನಡಿಯೊಂದನ್ನು ಇಡುತ್ತಾರೆ. ಆ ಕನ್ನಡಿಯು ನಿಮ್ಮ ಎಲ್ಲ ಕುರೂಪವನ್ನು ಅಡಗಿಸಿಟ್ಟು ನೀವು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ತೋರಿಸುತ್ತದೆ. ನಿಮಗೆ ವಾಸ್ತವದಲ್ಲಿ ಇಲ್ಲದಸಲ್ಲದ ಪ್ರಾಮುಖ್ಯತೆಯನ್ನು ತೊಡಿಸುತ್ತದೆ. ಈ ಅವಾಸ್ತವಿಕ ಕನ್ನಡಿಯನ್ನು ಒಡೆಯಿರಿ….


ಇದನ್ನೂ ಓದಿ: ಬಹುಜನ ಭಾರತ; ಜನತಂತ್ರದ ಸ್ತಂಭಗಳ ಮೇಲೆ ನಡೆದ ಕರಾಳ ದಾಳಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...