Homeಮುಖಪುಟಭಾರತದ ಕೃಷಿ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್‌: ಅಮೆರಿಕದಲ್ಲಾಗಿದ್ದು, ಇಲ್ಲಾಗುವುದಿಲ್ಲ ಎಂಬುದಕ್ಕೆ ಸರ್ಕಾರ ಗ್ಯಾರಂಟಿ ಕೊಡುವುದೆ?

ಭಾರತದ ಕೃಷಿ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್‌: ಅಮೆರಿಕದಲ್ಲಾಗಿದ್ದು, ಇಲ್ಲಾಗುವುದಿಲ್ಲ ಎಂಬುದಕ್ಕೆ ಸರ್ಕಾರ ಗ್ಯಾರಂಟಿ ಕೊಡುವುದೆ?

ರೈತರ ಕೈ ಕಟ್ಟಿಹಾಕುವ ಮೈಕ್ರೋಸಾಫ್ಟ್‌ನ ಈ ತಂತ್ರದಿಂದ ರೋಸಿರುವ ಅಮೆರಿಕದ ರೈತರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.

- Advertisement -
- Advertisement -

ಮೈಕ್ರೋಸಾಫ್ಟ್‌ ಭಾರತದಲ್ಲಿ ಏನೆಲ್ಲಾ ಮಾಡುತ್ತಿದೆ, ಏನು ಮಾಡಲು ಹೊರಟಿದೆ ಎಂಬುದನ್ನು ಹೇಳುವುದಕ್ಕೂ ಮೊದಲು, ಇಲ್ಲಿಯವರೆಗೆ ಏನು ಮಾಡಿದೆ ಎಂಬುದನ್ನು ಹೇಳಿಬಿಡುತ್ತೇನೆ. ಸಾಫ್ಟ್‌ವೇರ್‌ನಿಂದ ಅಕ್ಕಿ ಬೆಳೆಯಲು ಆಗುತ್ತಾ ಎಂದವರ ಬಾಯಿ ಮುಚ್ಚಿಸುತ್ತೇವೆಂದು ಹೊರಟಂತೆ ಮೈಕ್ರೋಸಾಫ್ಟ್‌ ಸಂಸ್ಥೆ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ವರ್ಷಗಳಾಗಿವೆ. ಅಮೆರಿಕದ ಅತಿ ದೊಡ್ಡ ರಾಜ್ಯಗಳೆನಿಸಿಕೊಂಡ ಕನಾಸ್‌, ಐಯೋವಾ ಮತ್ತು ನೆಬ್ರಾಸ್ಕಾಗಳಲ್ಲಿ 2,42,000 ಕೃಷಿ ಭೂಮಿಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ಹೊಸ ತಂತ್ರಜ್ಞಾನ ಬಳಸಿ ಕೃಷಿ ಮಾಡಲು ಹೊರಟಿದೆ. ತನ್ನದೇ ಸೋದರ ಸಂಸ್ಥೆಯಾದ ಗೇಟ್ಸ್‌ ಫೌಂಡೇಷನ್‌ ಮೂಲಕ ಎಜಿಒನ್‌ ಹೆಸರಿನ ಒಂದು ಕಾರ್ಯಯೋಜನೆಗೆ ಚಾಲನೆ ನೀಡಿದೆ. ಇದು ಬೆಳೆ ಉತ್ಪಾದನೆಯ ಪ್ರಮಾಣ ಹೆಚ್ಚಿಸಲು, ಸಣ್ಣ ಹಿಡುವಳಿದಾರರ ಕೃಷಿ ಚಟುವಟಿಕೆಗೆ ನೆರವಾಗಲು, ಹವಾಮಾನದಲ್ಲಾಗುವ ಬದಲಾವಣೆಗೆ ಅನುಗುಣವಾಗಿ ಕೃಷಿಚಟುವಟಿಕೆ ನಡೆಸುವುದಕ್ಕೆ ಅಗತ್ಯ ನೆರವು ನೀಡುವ ಉದ್ದೇಶದೊಂದಿಗೆ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆಯಂತೆ.

ಈ ಎಜಿಒನ್‌ (AgOne) ಅನ್ನು ಜಗತ್ತಿನಲ್ಲಿ ಅತಿ ದೊಡ್ಡದಾದ ಅಸಂಘಟಿತವಾಗಿ ಉಳಿದಿರುವ ಕೃಷಿ ವಲಯಗಳಲ್ಲಿ ಪ್ರಯೋಗಿಸುವ ಉದ್ದೇಶ ಮೈಕ್ರೊಸಾಫ್ಟ್‌ ಸಂಸ್ಥೆಯದ್ದು. ಅವುಗಳಲ್ಲಿ ಬಹಳ ಮುಖ್ಯವಾಗಿ ಮೈಕ್ರೋಸಾಫ್ಟ್‌ ಗಮನದಲ್ಲಿರುವುದು- ಒಂದು, ಸಬ್‌ ಸಹರನ್‌ ಆಫ್ರಿಕಾ, ಇನ್ನೊಂದು ದಕ್ಷಿಣ, ಏಷ್ಯಾ. ಈ ಭಾಗಗಳಲ್ಲಿ ಅಧ್ಯಯನ ನಡೆಸಿರುವ ಫೌಂಡೇಷನ್‌, ‘ ಇಲ್ಲಿ ಇಳುವರಿ, ಜಗತ್ತಿನ ಇತರ ಭಾಗದ ರೈತರು ಪಡೆಯುತ್ತಿರುವ ಇಳುವರಿಗಿಂತ ಕಡಿಮೆ. ಹವಮಾನದಲ್ಲಾಗುತ್ತಿರುವ ಬದಲಾವಣೆಯಿಂದ ಇಳುವರಿ ಇನ್ನಷ್ಟು ಕುಸಿಯುತ್ತದೆ ಎಂದು ಹೇಳಿದೆ. ಹಾಗಾಗಿ ಇಳುವರಿ ಹೆಚ್ಚಿಸಲು ಎಜಿಒನ್‌ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ತನ್ನ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಕೃಷಿ ಸ್ಥಿತಿಯನ್ನು ಸುಧಾರಿಸಬಹುದು ಎಂದು ಪ್ರತಿಪಾದಿಸಿದೆ.

ಹಾಗಾಗಿ ಈ ಭಾಗದ ದೇಶಗಳಲ್ಲಿ ಅಗತ್ಯವಿರುವ ಮಾಹಿತಿ ಸಂಗ್ರಹಿಸಲು ಹೊರಟಿದೆ. ಅಮೆರಿಕ ಮತ್ತು ಕೆನಡಾದಲ್ಲಿ ಇದೇ ರೀತಿಯ ಯೋಜನೆಯನ್ನು ಕೈಗೆತ್ತಿಕೊಂಡಿದ್ದ ಮೈಕ್ರೋಸಾಫ್ಟ್‌, ಅಲ್ಲಿನ ಕೃಷಿ ವ್ಯವಸ್ಥೆಯನ್ನು ಡಿಜಿಟಲ್‌ ರೂಪಕ್ಕೆ ರೂಪಾಂತರಿಸಿತು. ಇದರಿಂದ ನಿಜಕ್ಕೂ ಪವಾಡವಾಯಿತೆ? ಕೃಷಿ ವಲಯ ಉತ್ತಮವಾಯಿತೆ? ರೈತನ ಸ್ಥಿತಿ ಸುಧಾರಿಸಿತೆ? ಇಲ್ಲ! ಬದಲಿಗೆ ಹೊಸ ಸಮಸ್ಯೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಬಹಳ ಮುಖ್ಯವಾದದ್ದು ಟ್ರ್ಯಾಕ್ಟರ್‌ಗಳದ್ದು. ಅಮೆರಿಕ ಮತ್ತು ಕೆನಡಾದ ಬಹುತೇಕ ರೈತರು ಬಳಸುತ್ತಿರುವುದು ಜಾನ್‌ ಡೀರ್ ಕಂಪನಿಯ ಟ್ರ್ಯಾಕ್ಟರ್‌ಗಳನ್ನು. ಇತರೆ ಕೃಷಿ ಉಪಕರಣಗಳನ್ನು ಇದೇ ಕಂಪನಿಯಿಂದ ಖರೀದಿಸಲಾಗುತ್ತದೆ. ಈ ಟ್ರ್ಯಾಕ್ಟರ್‌ಗಳಿಗೆ ಅಗತ್ಯವಿರುವ ಸಾಫ್ಟ್‌ವೇರ್‌ ಒದಗಿಸುವುದು ಮೈಕ್ರೋಸಾಫ್ಟ್‌ ಸಂಸ್ಥೆ. ಟ್ರ್ಯಾಕ್ಟರ್‌ ಅಥವಾ ಯಾವುದೇ ಉಪಕರಣ ಕೆಟ್ಟರೆ ಅದನ್ನು ರೈತರು ತಮಗೆ ಬೇಕಾದ್ದಲ್ಲಿ ರಿಪೇರಿ ಮಾಡಿಸಿಕೊಳ್ಳುವ ಅವಕಾಶವಿಲ್ಲ. ಕಂಪನಿಯವರಲ್ಲಿಯೇ ದುರಸ್ತಿಗೆ ಒಯ್ಯಬೇಕು ಮತ್ತು ಅದೂ ದುಬಾರಿ ಸೇವೆಯಾಗಿರುತ್ತದೆ.

ದುರಂತವೆಂದರೆ ಅಮೆರಿಕದಲ್ಲಿರುವ ಡಿಜಿಟಲ್‌ ರೈಟ್‌ ಟು ರಿಪೇರ್‌ ಆಕ್ಟ್‌ ಪ್ರಕಾರ ರೈತರು ಸಾಫ್ಟ್‌ವೇರ್‌ ಸಮಸ್ಯೆ ಏನು ಎಂದು ತಾವೇ ಖುದ್ದು ಕಂಡುಕೊಂಡು ಬಗೆಹರಿಸಿಕೊಳ್ಳುವಂತಿಲ್ಲ. ಉಲ್ಲಂಘಿಸಿದರೆ ಅಪರಾಧ. ರೈತರ ಕೈ ಕಟ್ಟಿಹಾಕುವ ಮೈಕ್ರೋಸಾಫ್ಟ್‌ನ ಈ ತಂತ್ರದಿಂದ ರೋಸಿರುವ ಅಮೆರಿಕದ ರೈತರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ಇದೊಂದು ಸಮಸ್ಯೆಯಾದರೆ, ಇನ್ನೊಂದು ಮತ್ತೊಂದು ವಿಷ ವರ್ತುಲ. ಅರವತ್ತರ ದಶಕದಲ್ಲಿ ಭಾರತದಲ್ಲಿ ಹಸಿರುಕ್ರಾಂತಿಯಾಗಿತ್ತು, ನೆನಪಿರಬಹುದು. ಇದೇ ಮಾದರಿಯಲ್ಲಿ ಕ್ರಾಂತಿ ಉಂಟು ಮಾಡುವ ಉತ್ಸಾಹದಲ್ಲಿರುವ ಗೇಟ್ಸ್‌ ಫೌಂಡೇಷನ್‌ ಆಫ್ರಿಕಾದಲ್ಲಿ ರಾಕ್‌ಫೆಲ್ಲರ್‌ ಗೋಲ್ಡನ್‌ ಬತ್ತ ಬೆಳೆಯುವುದಕ್ಕೆ ಪ್ರೋತ್ಸಾಹಿಸುತ್ತಿದೆ. ಆದರೆ ಹಲವು ಸಂಶೋಧನೆಗಳು ಅಮೆರಿಕದ ಈ ಬತ್ತದ ತಳಿ ಉತ್ತರ ಅಮೆರಿಕದ ಹೊರಗೆ ಇನ್ನಾವುದೇ ಪರಿಸರದಲ್ಲಿ ಉತ್ತಮ ಇಳುವರಿ ಕೊಡುವುದಿಲ್ಲ ಎಂದು ಹೇಳಿವೆ. ಅಷ್ಟೇ ಅಲ್ಲ, ಯಾವ ಬಿಟಿ ಬದನೆಯನ್ನು ಭಾರತದಿಂದ ಕಿತ್ತು ಹೊರಗೆ ಹಾಕಿದೆವು, ಯಾವುದನ್ನು ವಿಷವೆಂದು ರೈತರು ಕರೆದರೋ, ಅದೇ ತಳಿಯನ್ನು ಈ ಮೈಕ್ರೋಸಾಫ್ಟ್‌ ಮತ್ತು ಅದರ ಅಂಗ ಸಂಸ್ಥೆ ಗೇಟ್ಸ್ ಫೌಂಡೇಷನ್‌ ಆಫ್ರಿಕಾದಲ್ಲಿ ಬೆಳೆಸಲು ಹೊರಟಿದೆ!

ಇವುಗಳ ಜೊತೆಗೆ ಆಫ್ರಿಕಾದಲ್ಲಿ ತನ್ನ ಉದ್ಯಮ ಚಟುವಟಿಕೆಗಳಿಗೆ ಪಾಲುದಾರರನ್ನಾಗಿ ಮಾಡಿಕೊಂಡಿರುವ ಕಾರ್ಗಿಲ್‌ ಎಂಬ ಸಂಸ್ಥೆಯು ಸಣ್ಣ ಹಿಡುವಳಿದಾರರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ, ಅವರ ಕೃಷಿಭೂಮಿಯನ್ನು ಕಿತ್ತುಕೊಳ್ಳುತ್ತಿರುವುದಾಗಿಯೂ ವರದಿಗಳಾಗಿವೆ.

ಇದನ್ನೂ ಓದಿ: ವಿವಾದಾತ್ಮಕ ಕೃಷಿ ಕಾಯ್ದೆಗಳ ಹಿಂದೆ ಮೈಕ್ರೋಸಾಫ್ಟ್, ಅಮೆಜಾನ್ ಕಂಪನಿಗಳ ಲಾಬಿ: ಕುಮಾರ್ ಎಸ್

ಹೀಗೆ ನಾಲ್ಕಾರು ದೇಶಗಳಲ್ಲಿ ರೈತರನ್ನು ಅಸಹಾಯಕ ಸ್ಥಿತಿಗೆ ತಳ್ಳಿರುವ ಮೈಕ್ರೋಸಾಫ್ಟ್‌ ಸಂಸ್ಥೆ ಭಾರತದಲ್ಲಿ ತಂತ್ರಜ್ಞಾನ ಬಳಸಿ ಭಾರತದಲ್ಲಿ ಕೃಷಿ ಕ್ರಾಂತಿಯನ್ನು ಮಾಡಿಬಿಡುವ ಭ್ರಮೆಯನ್ನುಬಿತ್ತುತ್ತಿದ್ದು, ಇದನ್ನು ಎಷ್ಟು ನಂಬಬೇಕು? ಹಾಗೇನಾದರೂ ಸಮಸ್ಯೆಯಾದರೆ, ರೈತರಿಗೆ ಅನ್ಯಾಯವಾದರೆ ಸರ್ಕಾರ ಮಧ್ಯಪ್ರವೇಶಿಸಿ, ಭಾರತದ ರೈತನ ಪರ ನಿಲ್ಲುತ್ತದೆಯೇ? ಇವುಗಳಿಗೆ ಉತ್ತರ ಕೊಡುವ ಗೋಜಿಗೆ ಭಾರತವೂ ಸರ್ಕಾರವೂ ಹೋಗಿಲ್ಲ. ಮೈಕ್ರೋಸಾಫ್ಟ್‌ ಸಂಸ್ಥೆಗೆ ಅದೊಂದು ಬದ್ಧತೆ ಎಂದು ಎನ್ನಿಸಿಲ್ಲ. ಆದರೆ ರೈತರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕೆಲಸವಂತೂ ಅವ್ಯಾಹತವಾಗಿ ನಡೆಯುತ್ತಿದೆ.

ಮೈಕ್ರೋಸಾಫ್ಟ್‌ಗೆ ಕೆಂಪು ಹಾಸಿನ ಸ್ವಾಗತ!

ಒಂದು ದಶಕದಿಂದ ಭಾರತಕ್ಕೆ ಕ್ಲೌಡ್‌ ಸರ್ವಿಸ್‌ ಸೇರಿದಂತೆ ವಿವಿಧ ತಂತ್ರಜ್ಞಾನ ಸೇವೆಗಳನ್ನು ನೀಡುತ್ತಿರುವ ಮೈಕ್ರೋಸಾಫ್ಟ್‌ ಈಗ ಕೃಷಿ ಕ್ಷೇತ್ರದ ಭಾರಿ ದೊಡ್ಡ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. 2018ರ ಫೆಬ್ರವರಿಯಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವ ಕೃಷಿ ಇಲಾಖೆಯ ವರದಿಯೊಂದರಲ್ಲಿ ಕೃಷಿ ವಲಯವನ್ನು ಡಿಜಿಟೈಸ್‌ ಮಾಡುವುದಕ್ಕೆ ಒತ್ತು ನೀಡಿತ್ತು. ಈ ವರದಿಯನ್ನು ಅದೇ ವರ್ಷ ಜೂನ್‌ ತಿಂಗಳಲ್ಲಿ ಆಧರಿಸಿ ನೀತಿ ಆಯೋಗವು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕುರಿತು ರಾಷ್ಟ್ರೀಯ ಕಾರ್ಯತಂತ್ರ ಕುರಿತು ಪತ್ರಿಕೆಯೊಂದನ್ನು ಮಂಡಿಸಿತ್ತು. ಇದರಲ್ಲಿ ಕೃಷಿಕರ ಮಾಹಿತಿ ಸಂಗ್ರಹಿಸುವುದು. ಬಹುಮುಖ್ಯವಾಗಿ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ, ಮಣ್ಣಿನ ಫಲವತ್ತತೆ ಮಾಹಿತಿ ಮತ್ತು ಫಸಲ್‌ ಬಿಮಾಯೋಜನೆಯ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸುವುದು ಸೇರಿತ್ತು. ಇದೇ ವೇಳೆ ಅಗ್ರಿ ಸ್ಟ್ಯಾಕ್‌ ಕಲ್ಪನೆ ಮೊಳಕೆಯೊಡೆಯುವುದಕ್ಕೆ ಆರಂಭವಾಗಿತ್ತು.

2020 ಭಾರತ ಸರ್ಕಾರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯಲ್ಲಿ ತಿದ್ದುಪಡಿ ತಂದರು, ಸೆಕ್ಷನ್‌ 42, 5, 7 ಮತ್ತು 17-2ಎ ಮೂಲಕ ರೈತರು, ವ್ಯಾಪರಿಗಳು, ಸಾರಿಗೆ ಮತ್ತು ಗ್ರಾಹಕರ ಆನ್‌ಲೈನ್‌ ಜಾಲವನ್ನು ನಿರ್ಮಿಸುವುದಕ್ಕೆ ಅನುವು ಮಾಡಿಕೊಡುವ ಕಾನೂನನ್ನು ಜಾರಿಗೆ ತಂದಿತು.

ಈ ಕಾನೂನು ಬದಲಾವಣೆಗಳು ಮುಂದೆ ಜಾರಿಗೆ ತರಲು ಹೊರಟಿದ್ದ ತಂತ್ರಜ್ಞಾನ ಯೋಜನೆಗೆ ಹಾಕಲಾಗಿದ್ದ ಬುನಾದಿ. ಇದಾಗಿ ಕೆಲವೇ ತಿಂಗಳಲ್ಲಿ ಅಂದರೆ 2021ರ ಏಪ್ರಿಲ್ 13ರಂದು ಮೈಕ್ರೋಸಾಫ್ಟ್‌ನೊಂದಿಗೆ ಅಗ್ರಿಸ್ಟ್ಯಾಕ್‌ ಯೋಜನೆಗೆ ತಿಳಿವಳಿಕೆ ಒಪ್ಪಂದ ಭಾರತ ಸರ್ಕಾರ ಸಹಿ ಹಾಕಿತು. ಈ ಒಪ್ಪಂದದಲ್ಲಿ ಏನಿದೆ ಎಂಬುದನ್ನು ಆಗ ಕೃಷಿ ಇಲಾಖೆ ಬಹಿರಂಗಗೊಳಿಸಿರಲಿಲ್ಲ. ಆಗ ಕೃಷಿ, ಕಾರ್ಮಿಕ ಹಾಗೂ ಇಂಟರ್ನೆಟ್‌ ಖಾಸಗಿತನದ ಹಕ್ಕುಗಳಿಗೆ ಹೋರಾಡುವ 55 ಸಂಘಟನೆಗಳು ಇಲಾಖೆಗೆ ಪತ್ರ ಬರೆದು ಒತ್ತಾಯಿಸಿದ ಮೇಲೆ ಒಪ್ಪಂದ ವಿವರಗಳ ಜೊತೆಗೆ ಕಾರ್ಯಾಚರಣೆಯ ವಿಧಾನವನ್ನು ಬಹಿರಂಗ ಪಡಿಸಿತು.

ಈ ವಿಧಾನದಂತೆ ರೈತನ ಖಾಸಗಿ ಮಾಹಿತಿ ಅಂದರೆ ಹೆಸರು, ವಯಸ್ಸು, ಲಿಂಗ, ಕುಟುಂಬದ ಗಾತ್ರ, ಆಧಾರ್‌ ಕಾರ್ಡ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರಗಳು, ಕೃಷಿ ಭೂಮಿಯ ವಿವರಗಳು- ಕ್ಯಾಡಸ್ಟ್ರಲ್‌ ಮ್ಯಾಪ್‌, ಕೃಷಿ ಭೂಮಿಯ ಗಾತ್ರ, ಸ್ಥಳೀಯ ಹವಾಮಾನ, ಭೌಗೋಳಿಕ ಸ್ಥಿತಿ. ಕೃಷಿ ಉತ್ಪನ್ನದ ವಿವರಗಳು – ಯಾವ ಬೆಳೆ ಬೆಳೆಯಲಾಗುತ್ತದೆ, ಕೃಷಿ ಉತ್ಪನ್ನಗಳ ಇತಿಹಾಸ, ಯಾವ ಗುಣಮಟ್ಟದ ಇಳುವರಿ ಸಿಕ್ಕಿದೆ, ಯಾವ ರೀತಿಯ ಸಲಕರಣೆ, ಯಂತ್ರೋಪಕರಣಗಳು ಇವೆ ಮತ್ತು ಹಣಕಾಸಿನ ವಿವರಗಳು, ಅಂದರೆ ಕೃಷಿ ಚಟುವಟಿಕೆಗೆ ಮಾಡುವ ವೆಚ್ಚ, ಆದಾಯ, ಸಾಲದ ವಿವರಗಳು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಸಿಇಒ ಅಶಿಶ್‌ ಕುಮಾರ್‌ ಭುತಾನಿ ಹೇಳಿದ್ದೇನೆಂದರೆ, ‘ ಈ ವ್ಯವಸ್ಥೆ ಸಮಗ್ರ ಮಾಹಿತಿಒದಗಿಸುವ ಏಕೈಕ ಕೇಂದ್ರವಾಗಲಿದೆ. ಹಣಕಾಸು ಸಂಸ್ಥೆಗಳಿರಲಿ, ರೈತರಿರಲಿ, ಸ್ಟಾರ್ಟಪ್‌ ಕಂಪನಿಗಳಿರಲಿ, ಹೊಸ ಮೊಬೈಲ್‌ ಅಪ್ಲಿಕೇಷನ್‌ ಡೆವಲೆಪ್‌ ಮಾಡಲು ಸಂಶೋಧನೆ ನಡೆಸುವವರಿರಲಿ, ಎಲ್ಲರಿಗೂ ಇದು ಏಕಮಾತ್ರ ಸಂಪನ್ಮೂಲವಾಗಿರಲಿದೆ” ಎಂದಿದ್ದರು.

ಅತ್ಯಂತ ಸೂಕ್ಷ್ಮ, ಮಹತ್ವದಿಂದ ಕೂಡಿದ ದಾಖಲೆಗಳು ಭಾರತದ ಸರ್ಕಾರಿ ಕಚೇರಿಗಳಲ್ಲಿ ಅಷ್ಟೊಂದು ವ್ಯವಸ್ಥಿತವಾಗಿ ಇರಿಸಿಲ್ಲ. ಹೀಗಿರುವಾಗ ರೈತರಿಂದ ಮಾಹಿತಿ ಸಂಗ್ರಹಿಸುವುದು, ಸಂಗ್ರಹಿಸಿದ ಮಾಹಿತಿಗಳನ್ನು ಸರ್ಕಾರದ ದಾಖಲೆಗಳೊಂದಿಗೆ ತಾಳೆ ನೋಡುವುದು ಎಲ್ಲವೂ ಸವಾಲಿನ ಕೆಲಸವಾಗಿತ್ತು. ಸರ್ಕಾರಿ ವ್ಯವಸ್ಥೆಗೆ ಮಾಹಿತಿ ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ಯಾವುದೇ ವಿಧಾನ ಅಥವಾ ವ್ಯವಸ್ಥೆ ಇಲ್ಲ ಎನ್ನುವುದನ್ನು ನ್ಯೂಸ್‌ಲಾಂಡ್ರಿ.ಕಾಮ್‌ಗೆ ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ಹೇಳಿದ್ದರು. ಅದೇ ಅಧಿಕಾರಿ ಈ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲದು ಎಂಬ ಕಾರಣಕ್ಕೆ ಮೈಕ್ರೋಸಾಫ್ಟ್‌ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ ಮೈಕ್ರೋಸಾಫ್ಟ್‌ ಸಂಸ್ಥೆಯೇ ಏಕೆ ಎಂಬುದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ ಎಂಬುದನ್ನು ನ್ಯೂಸ್‌ಲಾಂಡ್ರಿ ತಿಳಿಸಿದೆ.

ಮೇಲೆ ಹೇಳಿದಂತೆ ಕೃಷಿ ಮತ್ತು ಭೂದಾಖಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕುವುದು ಅಷ್ಟು ಸುಲಭವಲ್ಲ. ಇನ್ನೂ ಹಳೆಯ ಕಾಗದ ಪತ್ರಗಳನ್ನೇ ಅವಲಂಬಿಸಿರುವ ಭೂದಾಖಲೆಗಳ ಇಲಾಖೆ, ಡಿಜಿಟಲ್‌ ರೂಪಕ್ಕೆ ಹೊರಳಿಲ್ಲ. ಹಾಗಾಗಿ ಮೈಕ್ರೋಸಾಫ್ಟ್‌ ಮೊದಲು ಈ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುವುದಕ್ಕೆ ಚಾಲನೆ ನೀಡಿದೆ. ಅದಕ್ಕಾಗಿ ನಾಗಪುರ ಮೂಲದ ಕ್ರಾಪ್‌ಡೇಟಾ ಟೆಕ್ನಾಲಜಿ ಎಂಬ ಸಂಸ್ಥೆಯನ್ನು ಪಾಲುದಾರರನ್ನಾಗಿ ಮಾಡಿಕೊಂಡಿದೆ. ಈಗಾಗಲೇ ರೈತರಿಗೆ ಆನ್‌ಲೈನ್‌ ಮಾರುಕಟ್ಟೆ ಸೃಷ್ಟಿಸುವ, ರೈತರಿಗೆ ತಂತ್ರಜ್ಞಾನ ಬಳಸಿ ಪರಿಹಾರ ಒದಗಿಸುವ ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿರುವ ಈ ಖಾಸಗಿ ಸಂಸ್ಥೆಯನ್ನು ಯೋಜನೆಯಲ್ಲಿ ಭಾಗಿಯಾಗಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ಸಂಸ್ಥೆಯ ಮೂಲಕ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಗುಜರಾತ್‌, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸೇರಿ 10 ರಾಜ್ಯಗಳ 100 ಹಳ್ಳಿಗಳಲ್ಲಿ ಮಾಹಿತಿ ಕಲೆಹಾಕುವ ಕೆಲಸ ನಡೆಯುತ್ತಿದೆ.

ಇದನ್ನೂ ಓದಿ: ವಾಟ್ಸ್ಆ್ಯಪ್ ನಿಮ್ಮ ಖಾಸಗಿತನ ಕದಿಯುತ್ತಿದೆ: ಪ್ರೊಪಬ್ಲಿಕಾ ವರದಿ | ಭಾಗ-1

ಖಾಸಗಿ ಸಂಸ್ಥೆಗಳನ್ನು ಒಳಗೊಂಡು ಕಲೆಹಾಕಲಾಗುತ್ತಿರುವ ಈ ಮಾಹಿತಿಯ ಸುರಕ್ಷತೆ ಯಾರ ಹೊಣೆ. ಉದ್ಯಮ ಆಸಕ್ತಿಗಳಿರುವ, ಜಾಗತಿಕ ಮಟ್ಟದಲ್ಲಿ ಪ್ರಭಾವಿ ಶಕ್ತಿಗಳಾಗಿ ಬೆಳೆದಿರುವ ಸಂಸ್ಥೆಗಳು ಈಯೋಜನೆಯಲ್ಲಿ ಸಕ್ರಿಯವಾಗಿ ಹಾಗೂ ಮಹತ್ವದ ಜವಾಬ್ದಾರಿಗಳನ್ನು ಹೊತ್ತಿರುವಾಗ ಇಲ್ಲಿ ರೈತ ಅಥವಾ ಕೃಷಿ ವಲಯಕ್ಕೆ ಯಾವುದೇ ರೀತಿಯ ಅನ್ಯಾಯವಾಗದು ಎಂಬುದನ್ನು ಖಾತ್ರಿ ಪಡಿಸುವವರು ಯಾರು? ಭವಿಷ್ಯದಲ್ಲಿ ಈ ಮಾಹಿತಿಯ ದುರುಪಯೋಗ ನಿಯಂತ್ರಣಕ್ಕೆ ಸರ್ಕಾರದ ನಿಲುವೇನು? ಭಾರತದಲ್ಲಿ ಖಾಸಗಿ ಮಾಹಿತಿ ರಕ್ಷಣೆ ಕಾಯ್ದೆಯೇ ಇಲ್ಲದಿರುವಾಗ, ಹಲವು ಉದ್ಯಮ ಆಸಕ್ತಿಗಳಿರುವ ಕಂಪನಿಗಳು ಇಂತಹ ಬಹುದೊಡ್ಡ ಯೋಜನೆಯನ್ನು ಮುನ್ನಡೆಸಲು ಹೊರಟಿರುವಾಗ ಮೂಲಭೂತ ಹಕ್ಕುಗಳ ಜೊತೆಗೆ ಹಲವು ಅವಕಾಶಗಳನ್ನು ಕಿತ್ತುಕೊಳ್ಳುವ ಅಪಾಯವಿರುವಾಗ ಭಾರತ ಸರ್ಕಾರ ಯಾವ ಭರವಸೆಯನ್ನು ನೀಡುತ್ತದೆ? ಮೇಕ್‌ ಇನ್‌ ಇಂಡಿಯಾದಂತಹ ಆದರ್ಶದ ಘೋಷಣೆಗಳನ್ನು ನೀಡಿದ ಭಾರತ ಸರ್ಕಾರ, ಸಣ್ಣ ಪ್ರಮಾಣದ ಉದ್ಯಮಗಳು, ಸ್ಟಾರ್ಟಪ್‌ಗಳಿಗೆ ಯಾವುದೇ ಅವಕಾಶ ಇಲ್ಲದಂತೆ ಮಾಡುವ ಇಂತಹ ಯೋಜನೆಗಳಿಂದ ನಿಜಕ್ಕೂ ಆತ್ಮನಿರ್ಭರತೆ ಸಾಧಿಸುವುದೆ? ಮಹತ್ವಕಾಂಕ್ಷಿಯಾಗಿ ಕಾಣಿಸುವ ಈ ಯೋಜನೆಯ ಮೂಲಕ ನಿಜಕ್ಕೂ ರೈತ ಏನನ್ನು ಪಡೆಯಲಿದ್ದಾನೆ? ಕೃಷಿ ಎಷ್ಟು ಶ್ರೀಮಂತವಾಗಲಿದೆ? ನಿಜಕ್ಕೂ ಇದರ ಲಾಭವನ್ನುಯಾರು ಪಡೆಯಲಿದ್ದಾರೆ? ಇಂತಹ ಪ್ರಶ್ನೆಗಳು ಬಹಳಷ್ಟಿವೆ? ಉತ್ತರ ಹೇಳಲು ಸರ್ಕಾರ ಸಿದ್ಧವಿಲ್ಲ. ಮೈಕ್ರೋಸಾಫ್ಟ್‌ ಸಂಸ್ಥೆಗೆ ಈ ಹೊಣೆಗಾರಿಕೆ ಇಲ್ಲ!!

ಕೃಪೆ: ಅನ್ನದ ಋಣ ಜಾಲತಾಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...