Homeಕರ್ನಾಟಕರಾಷ್ಟ್ರೀಯ ಶಿಕ್ಷಣ ನೀತಿ 2020; ಶಿಕ್ಷಕರ ಮೇಲಿನ ಪರಿಣಾಮ

ರಾಷ್ಟ್ರೀಯ ಶಿಕ್ಷಣ ನೀತಿ 2020; ಶಿಕ್ಷಕರ ಮೇಲಿನ ಪರಿಣಾಮ

- Advertisement -
- Advertisement -

ಇತ್ತೀಚಿನ ಕಾಲಘಟ್ಟದಲ್ಲಿ, ಪ್ರಪಂಚದಾದ್ಯಂತ ಶಿಕ್ಷಣವನ್ನು ಮಾನವ ಬಂಡವಾಳದ ದೃಷ್ಟಿಯಿಂದ ನೋಡಲಾಗುತ್ತಿರುವುದರಿಂದ, ಶಿಕ್ಷಣ ನೀತಿಗಳು ವಿದ್ಯಾರ್ಥಿಗಳನ್ನು ಹೊಸ ರೀತಿಯ ಕೆಲಸಗಳು ಮತ್ತು ಕಾರ್ಮಿಕ ಸಂಬಂಧಗಳಿಗಾಗಿ ತಯಾರಿಸುವ ತವಕವನ್ನು ಹೊಂದಿರುತ್ತವೆ. ಈ ರೀತಿಯಾಗಿ, ಶೈಕ್ಷಣಿಕ ನೀತಿಗಳು ಸಾಮುದಾಯಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಾದ ನ್ಯಾಯ ಮತ್ತು ಪ್ರಜಾಪ್ರಭುತ್ವಕ್ಕಿಂತ ಮಿಗಿಲಾಗಿ ಮಾರುಕಟ್ಟೆಯ ಮೌಲ್ಯಗಳು ಮತ್ತು ವ್ಯವಸ್ಥೆಯ ಸಾಮರ್ಥ್ಯದ ಮೇಲೆಯೇ ಹೆಚ್ಚು ಆಧಾರಿತವಾಗಿವೆ. (ರಿಜ್ವಿ ಮತ್ತು ಲಿಂಗಾರ್ಡ್, ’ಗ್ಲೋಬಲೈಸಿಂಗ್ ಎಜುಕೇಷನಲ್ ಪಾಲಿಸೀಸ್’ನಲ್ಲಿ, ಪುಟ 116). ಇತ್ತೀಚಿಗಿನ ಶಿಕ್ಷಣ ನೀತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಾದರೆ ನವಉದಾರವಾದಿ ಮತ್ತು ನವಸಂಪ್ರದಾಯವಾದದಲ್ಲಿ, ಆಯಾ ದೇಶಕ್ಕೆ ಸಂಬಂಧಿಸಿದಂತೆ ಪ್ರಭುತ್ವವು ಹೊಂದಿರುವ ಕೆಲವು ನಿರ್ದಿಷ್ಟ ಗುಣಲಕ್ಷಣಗಳನ್ನು ನಾವು ಮನದಲ್ಲಿ ಇರಿಸಿಕೊಳ್ಳಬೇಕು ಎಂಬುದು ಇದರರ್ಥ. ಉದಾಹರಣೆಗೆ, ಭಾರತದ ಪ್ರಭುತ್ವದಲ್ಲಾಗುತ್ತಿರುವ ಬದಲಾವಣೆಗಳಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತದರ ಕವಲುಗಳನ್ನು ತೊಡಗಿಸಿಕೊಳ್ಳುವಲ್ಲಿ, ಫ್ಯಾಸಿಸ್ಟ್ ಮತ್ತು ಮೂಲಭೂತವಾದದ ಚಹರೆಗಳನ್ನು ಗಮನಿಸಬೇಕಾಗುತ್ತದೆ.

ಇತ್ತೀಚಿಗಿನ ಅಧ್ಯಯನಗಳಲ್ಲಿ, ರಾಷ್ಟ್ರಗಳು ನೇಶನ್ ಸ್ಟೇಟ್‌ನಿಂದ (nation state) ಪಾಲಿಸೆಂಟ್ರಿಕ್ ಸ್ಟೇಟ್‌ನೆಡೆಗೆ (polycentric state) ನಿರಂತರ ಬದಲಾವಣೆ ಕಾಣಸಿಗುತ್ತಿವೆ ಎಂದು ವಾದಿಸಲಾಗಿದೆ. ಇದರಿಂದಾಗಿ, ಅಂತಾರಾಷ್ಟ್ರೀಯ ಕಂಪನಿಗಳು, ಇಂಟೆರ್ ಗವರ್ನಮೆಂಟಲ್ ಸಂಸ್ಥೆಗಳೂ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಹೆಚ್ಚಾಗಿ ತಮ್ಮನ್ನು ತಾವು ಆಡಳಿತ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುತ್ತಿವೆ.

ಪ್ರಭುತ್ವದ ಬಗೆಗಿನ ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಮತ್ತು ಶಿಕ್ಷಕರ ಮೇಲೆ ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ನಮ್ಮೆಲ್ಲರಿಗೂ ತಿಳಿದಿರುವಂತೆ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜುಲೈ 29, 2020ರಂದು ಸಚಿವ ಸಂಪುಟದ ಅನುಮೋದನೆಯ ನಂತರ ಒಕ್ಕೂಟ ಸರ್ಕಾರವು ಘೋಷಿಸಿತು. ಈ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಚರ್ಚೆಗಾಗಿ ದೇಶದ ಸಂಸತ್ತಿನಲ್ಲಿ ಮಂಡಿಸದೆ, ಅಂತೆಯೇ, ಇದನ್ನು ರೂಪಿಸುವ ಪ್ರಕ್ರಿಯೆಯಲ್ಲಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂಡಿಸಲಾಗಿದೆ. ಪ್ರಜಾಪ್ರಭುತ್ವದ ಪ್ರಕಿಯೆಗಳನ್ನು ಪಾಲಿಸದ ಹೊರತಾಗಿಯೂ ಈ ನೀತಿಯು, ಶಿಕ್ಷಣವನ್ನು ಸಮಗ್ರವಾಗಿ ಮತ್ತು ಚಿಕ್ಕ-ಪುಟ್ಟ ರೀತಿಯಲ್ಲಿ ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಲಾಗಿದೆ.

ರಾ.ಶಿ.ನೀ 2020ನ್ನು ಸಾಕಷ್ಟು ವಿಚಾರಗಳಿಗೆ ವಿಮರ್ಶಾತ್ಮಕ ಟೀಕೆಗೆ ಒಳಪಡಿಸಿ, ಸರ್ಕಾರವು ಹಾಡ-ಹಗಲಿನಲ್ಲೇ ಜನರಿಗೆ ಎಸಗುತ್ತಿರುವ ದ್ರೋಹವನ್ನು ದೇಶದ ಜನತೆಯ ಮುಂದೆ ಬಹಿರಂಗಪಡಿಸಬೇಕಿದೆಯಾದರೂ ಈ ಲೇಖನವು, ರಾ.ಶಿ.ನೀ 2020 ಶಿಕ್ಷಕರ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದಕ್ಕೆ ಸೀಮಿತವಾಗಿದೆ.

ಶಿಕ್ಷಕರು ಕನಿಷ್ಠ ಪಕ್ಷ ರಾ.ಶಿ.ನೀ 2020ರಲ್ಲಿ, ವಿದ್ಯಾರ್ಥಿಗಳು ಮತ್ತು ಪೋಷಕರ ನಂತರದ ಮೂರನೇ ಅತಿಮುಖ್ಯ ಪಾಲುದಾರರಾಗಿದ್ದಾರೆ. ಅವರ ಮೇಲೆ ಈ ನೀತಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ 1950ರ ದಶಕದಲ್ಲಿ ಹೆರಾಲ್ಡ್ ಲಾಸ್‌ವೆಲ್ ರಾಜಕೀಯದ ಬಗ್ಗೆ ನೀಡಿದ ’ಯಾರಿಗೆ ಏನು? ಯಾವಾಗ? ಮತ್ತು ಹೇಗೆ ಸಿಗುತ್ತದೆ ಎನ್ನುವುದೇ ರಾಜಕೀಯ’ ಎಂಬ ವ್ಯಾಖ್ಯಾನವನ್ನು ಬಳಸಿಕೊಳ್ಳಬಹುದಾಗಿದೆ.

ರಾ.ಶಿ.ನೀ 2020ರಲ್ಲಿ ಶಿಕ್ಷಕರ ಸೇವಾ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಲಾಗಿದೆ? ಶಿಕ್ಷಕರಿಗೆ ಇದು ಕೆಲಸದ ಖಾಯಮಾತಿಯನ್ನು ಒದಗಿಸುತ್ತದೆಯೆ? ಶಿಕ್ಷಕರಿಗೆ ಇದು ಸುಗಮ ಹಣಕಾಸು ವ್ಯವಸ್ಥೆಯನ್ನು ಒದಗಿಸುತ್ತದೆಯೇ? ಶಿಕ್ಷಕರಿಗೆ ಇದು ಪಾರದರ್ಶಕ ಮತ್ತು ಅಡೆತಡೆಯಿಲ್ಲದ ಮುಂಬಡ್ತಿ ವ್ಯವಸ್ಥೆಯನ್ನು ನೀಡುತ್ತದೆಯೇ? ಶಿಕ್ಷಕರಿಗೆ ಶೈಕ್ಷಣಿಕ ಸ್ವಾತಂತ್ರ್ಯವನ್ನು ಒದಗಿಸುತ್ತದೆಯೇ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಆಡಳಿತಾತ್ಮಕ ಅಧಿಕಾರಿಗಳ ನಿಗ್ರಹದಿಂದ ಇದು ಶಿಕ್ಷಕರನ್ನು ರಕ್ಷಿಸುತ್ತದೆಯೇ? ರಾ.ಶಿ.ನೀ 2020ರಲ್ಲಿರುವ, ಶಿಕ್ಷಕರಿಗೆ ಸಂಬಂಧಿಸಿದ ನಿಬಂಧನೆಯನ್ನು ಈಗ ನಾವು ಪರಿಶೀಲಿಸೋಣ.

ಈ ಹಿಂದಿನ ಶಿಕ್ಷಣ ನೀತಿಗಳೂ ಶಿಕ್ಷಕರ ಮಹತ್ವವನ್ನು ಒಪ್ಪಿಕೊಂಡಿವೆ ಎಂಬ ವಾಸ್ತವವನ್ನು ಗುರುತಿಸದೆ, ರಾ.ಶಿ.ನೀ 2020ರಲ್ಲಿ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಮೊಟ್ಟ ಮೊದಲ ಬಾರಿಗೆ ಶಿಕ್ಷಕರಿಗೆ ಅತ್ಯಂತ ಮುಖ್ಯವಾದ ಸ್ಥಾನವನ್ನು ನೀಡಿದೆ ಎಂದು ತೋರ್ಪಡಿಸಲು ಹವಣಿಸುತ್ತದೆ. ರಾ.ಶಿ.ನೀ 2020ರಲ್ಲಿ ಉಲ್ಲೇಖಿಸಿದಂತೆ “ಶಿಕ್ಷಣ ವ್ಯವಸ್ಥೆಯ ಸುಧಾರಣೆಯಲ್ಲಿ ಶಿಕ್ಷಕರು ಕೇಂದ್ರ ಬಿಂದು ಆಗಿರಬೇಕಾಗುತ್ತದೆ. ಶಿಕ್ಷಕರು ಮುಂದಿನ ಪೀಳಿಗೆಯನ್ನು ರೂಪಿಸುವುದರಿಂದ ಹೊಸ ಶಿಕ್ಷಣ ನೀತಿಯು ಎಲ್ಲಾ ಸ್ಥರದ ಶಿಕ್ಷಕರನ್ನು, ಸಮಾಜದ ಅತ್ಯಂತ ಗೌರವಯುತ ಮತ್ತು ಪ್ರಮುಖವಾದ ವ್ಯಕ್ತಿಗಳನ್ನಾಗಿ ಪುನರ್ ಸ್ಥಾಪಿಸಬೇಕಿದೆ. ಶಿಕ್ಷಕರನ್ನು ಸಬಲೀಕರಿಸಲು ಮತ್ತು ಅವರು ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಿಕ್ಕೆ ಈ ಶಿಕ್ಷಣ ನೀತಿಯು ಎಲ್ಲವನ್ನೂ ಮಾಡಬೇಕಿದೆ. ಹೊಸ ಶಿಕ್ಷಣ ನೀತಿಯು ಅತ್ಯುತ್ತಮರು ಮತ್ತು ಪ್ರತಿಭಾವಂತರು ಎಲ್ಲಾ ಸ್ಥರದ ಶಿಕ್ಷಣ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು, ಅವರಿಗೆ ಜೀವನೋಪಾಯ, ಘನತೆ-ಗೌರವ, ಸ್ವಾಯತ್ತತೆಯನ್ನು ನೀಡುತ್ತಾ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಉತ್ತರದಾಯಿತ್ವವನ್ನು ಬೆಳಸುವ ಮೂಲಕ ಪೂರಕವಾದ ವ್ಯವಸ್ಥೆಯನ್ನು ಕಟ್ಟಿಕೊಡಬೇಕಿದೆ”.

ಇದು ಬಹಳ ಪ್ರಗತಿಪರವಾಗಿ ಮತ್ತು ಶಿಕ್ಷಕ ವೃತ್ತಿಯ ಘನತೆಯನ್ನು ಎತ್ತಿಹಿಡಿಯಲಿಕ್ಕೆ ಪ್ರಯತ್ನಿಸಿದಂತೆ ಕಂಡುಬರುತ್ತದೆ.

ಆದರೆ ಇದನ್ನು ಒಳಹೊಕ್ಕು ನೋಡಿದಾಗ, ಶಿಕ್ಷಕರನ್ನು ರಾಜಕಾರಣಿಗಳ, ಅಧಿಕಾರಿಗಳ (bureaucrat), ಖಾಸಗಿ ಮತ್ತು ಕಾರ್ಪೊರೇಟ್‌ಗಳ ಅಧೀನಕ್ಕೊಳಪಡಿಸಲು ಹೆಣೆಯಲಾಗಿರುವ ಒಳಸಂಚು ತೆರೆದುಕೊಳ್ಳುತ್ತದೆ. ಮೇಲಿನ ಉಲ್ಲೇಖದಲ್ಲೇ ಗುಣಮಟ್ಟ ಎಂಬ ಪದವು ಕಾರ್ಪೊರೇಟ್ ಶೈಲಿಯ ಆಡಳಿತವನ್ನು ಸೂಚಿಸುತ್ತದೆ. ಇದರಲ್ಲಿ ಎಲ್ಲರೂ ಕೇವಲ ಯಂತ್ರದ ಒಂದೊಂದು ಭಾಗಗಳು ಮಾತ್ರ, ಹೆಚ್ಚೇನೂ ಅಲ್ಲ!

ಶಿಕ್ಷಕರನ್ನು ಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳುವುದು ಮತ್ತು ಅವರ ಸೇವೆಯನ್ನು ಅತ್ಯಂತ ಅಮಾನವೀಯವಾದ ನಿಯಮಗಳಿಗೆ ಒಳಪಡಿಸುವ ಧೋರಣೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇದೆಲ್ಲದರ ಬಗ್ಗೆ ರಾ.ಶಿ.ನೀ 2020 ಮೌನವಹಿಸಿದ್ದು, ಯಥಾಸ್ಥಿತಿ ಮುಂದುವರೆಯುವ, ಮತ್ತು ಶಿಕ್ಷಕರ ಜೀವನದಲ್ಲಿ ಇಂದಾಗುತ್ತಿರುವ ಮತ್ತು ಮುಂದೆ ಹೆಚ್ಚಲಿರುವ ಮಾನಸಿಕ ಸಮಸ್ಯೆಗಳನ್ನು ಸೂಚಿಸುವಂತಿದೆ.

ರಾ.ಶಿ.ನೀ 2020ರಲ್ಲಿ, ಶಿಕ್ಷಕರ ಸೇವೆಗಳ ಪಾತ್ರ, ಷರತ್ತು ಹಾಗು ನಿಬಂಧನೆಗಳನ್ನು ಚರ್ಚಿಸಲು ಮೂರು ಅಧ್ಯಾಯಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಅವುಗಳಲ್ಲಿ ಎರಡು ಅಧ್ಯಾಯಗಳಾದ ’ಪ್ರೇರೇಪಿತ, ಶಕ್ತಿಯುತ ಮತ್ತು ಸಮರ್ಥ ಅಧ್ಯಾಪಕರು’ಎಂಬ ಹದಿಮೂರನೇ ಅಧ್ಯಾಯ ಮತ್ತು ’ಶಿಕ್ಷಕರ ಶಿಕ್ಷಣ’ ಎಂಬ ಹದಿನೈದನೇ ಅಧ್ಯಾಯವನ್ನು ಉನ್ನತ ಶಿಕ್ಷಣದ ವಿಭಾಗದಲ್ಲಿ ಹಾಗು ’ಶಿಕ್ಷಕರು’ ಎಂಬ ಐದನೇ ಅಧ್ಯಾಯವನ್ನು ಶಾಲಾ ಶಿಕ್ಷಣದ ವಿಭಾಗದಲ್ಲಿ ಇರಿಸಲಾಗಿದೆ. ಈ ಅಧ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಮೇಲೆ ತಿಳಿಸಿದ ಮೂರೂ ಅಧ್ಯಾಯಗಳಲ್ಲಿ ’ಶಿಕ್ಷಕರು’ ಎಂಬ ಐದನೆಯ ಅಧ್ಯಾಯದ ಗಣನೀಯ ಭಾಗಗಳನ್ನು ಪುನರಾವರ್ತಿಸಲಾಗಿದೆ ಎಂಬುದು ತಿಳಿಯುತ್ತದೆ. ಇದರಲ್ಲಿ ಶಿಕ್ಷಕರ ಸೇವೆಗಳಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ನಿಬಂಧನೆಗಳಿವೆ ಮತ್ತು ಇವುಗಳಲ್ಲಿ ಶಿಕ್ಷಕರ ವೃತ್ತಿಯ ಬಗ್ಗೆ ಇರುವ ಹುಂಬತನದ ಪೂರ್ವಾಗ್ರಹ ಖಂಡಿತವಾಗಿಯೂ ಶಿಕ್ಷಕರ ಜೀವನದಿಂದ ಮಾನಸಿಕ ಶಾಂತಿಯನ್ನು ದೂರ ಮಾಡುವಂತಹದ್ದಾಗಿದೆ.

ಉದಾಹರಣೆಗೆ, ರಾ.ಶಿ.ನೀ 2020ರಲ್ಲಿ ಪಾಯಿಂಟ್ 5.5 ರನಲ್ಲಿ ಹೀಗೆ ಪ್ರಸ್ತಾಪಿಸಲಾಗಿದೆ: “ವಿಷಯಗಳಾದ್ಯಂತ ಅಗತ್ಯವಿರುವಷ್ಟು ಶಿಕ್ಷಕರ ಸಂಖ್ಯೆಯನ್ನು ಖಾತ್ರಿಪಡಿಸಿಕೊಳ್ಳಲು ಅದರಲ್ಲೂ ವಿಶೇಷವಾಗಿ ಕಲೆ, ದೈಹಿಕ ಶಿಕ್ಷಣ, ಔದ್ಯೋಗಿಕ ಶಿಕ್ಷಣ ಮತ್ತು ಭಾಷೆಗಳು ಮುಂತಾದ ವಿಷಯಗಳಲ್ಲಿ – ಶಾಲೆ ಅಥವಾ ಶಾಲಾ ಸಂಕೀರ್ಣಗಳಿಗೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಮತ್ತು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ನಿಗದಿ ಮಾಡುವಂತೆ ಶಾಲಾ-ಗುಂಪುಗಳಿಗೆ ಅನುಗುಣವಾಗಿ ಶಿಕ್ಷಕರ ಹಂಚಿಕೆ ಆಗಬೇಕು”. ಅಂದರೆ, ಕಲೆ, ಕೌಶಲ್ಯ ಮತ್ತು ದೈಹಿಕ ಶಿಕ್ಷಣ, ಮತ್ತು ಭಾಷೆಗಳು ಸೇರಿದಂತೆ ಕೆಲವು ವಿಷಯಗಳ ಶಿಕ್ಷಕರು ಶಾಲಾ ಸಂಕೀರ್ಣ ಅಥವಾ ಶಾಲಾ-ಗುಂಪುಗಳ ಮಟ್ಟದಲ್ಲಿ ನೇಮಕಗೊಳ್ಳುತ್ತಾರೆ ಮತ್ತು ಅವರು ವಿವಿಧ ಶಾಲೆಗಳಿಗೆ ಅಲೆಯಬೇಕಾಗುತ್ತದೆ. ಇದರಿಂದಾಗಿ, ಅವರು ಯಾವೊಂದೂ ಶಾಲೆಯ ಮಕ್ಕಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸಲಾಗುವುದಿಲ್ಲ. ಇದು ಮಕ್ಕಳ ಶಿಕ್ಷಣವನ್ನು ಕುಂದಿಸುವುದು ಖಚಿತವಾಗಿದೆ ಮತ್ತು ಶಿಕ್ಷಕರ ನೌಕರಿಯ ಕೆಲಸದೊತ್ತಡ ನಿರಂತರವಾಗಿರುತ್ತದೆ.

ರಾ.ಶಿ.ನೀ 2020ರ ಪಾಯಿಂಟ್ 5.10ರಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿ ಶಾಲಾ ಆಡಳಿತಕ್ಕಾಗಿ, ಸಂಪನ್ಮೂಲಗಳನ್ನು ಹಂಚಿಕೊಳ್ಳುವುದ್ದಕ್ಕಾಗಿ, ಸಮುದಾಯ ನಿರ್ಮಾಣಕ್ಕಾಗಿ, ಪ್ರವೇಶಾವಕಾಶವನ್ನು ಕಡಿತಗೊಳಿಸದೆ ಶಾಲಾ ಸಂಕೀರ್ಣ, ಸ್ಕೂಲ್ ರಾಷನಲೈಸೇಷನ್ ಸೇರಿದಂತೆ ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ವಾಸ್ತವವಾಗಿ ಸ್ಕೂಲ್ ರಾಷನಲೈಸೇಷನ್ ಎಂದರೆ ಶಾಲೆಗಳನ್ನು ಸ್ಥಳಾಂತರಿಸುವುದು ಮತ್ತು ಮುಚ್ಚುವುದೇ ಆಗಿದೆ. ಇದರಿಂದಾಗಿ ಬಹಳಷ್ಟು ಶಿಕ್ಷಕರು ಕೆಲಸ ಕಳೆದುಕೊಳ್ಳುತ್ತಾರೆ ಅಥವಾ ಅರೆ ನೌಕರರಾಗಬೇಕಾಗುತ್ತದೆ. ಇದಲ್ಲದೆ, ಈ ನೀತಿ ಸ್ಕೂಲ್ ರಾಷನಲೈಸೇಷನ್ ವರ್ಗಾವಣೆಯನ್ನು ಪದೇ ಪದೇ ಒತ್ತಾಯಿಸುತ್ತದೆ ಮತ್ತು ಶಿಕ್ಷಕರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಖಿನ್ನರನ್ನಾಗಿಸುತ್ತದೆ.

ಶಿಕ್ಷಕರಿಗೆ, ’ಸದೃಢವಾದ – ಅರ್ಹತೆಯಾಧಾರಿತ ಅಧಿಕಾರಾವಧಿ, ಬಡ್ತಿ ಮತ್ತು ವೇತನವನ್ನು ನೀಡಲಾಗುವ ವ್ಯವ್ಯಸ್ಥೆಯೊಂದನ್ನು ಕಟ್ಟಿಕೊಳ್ಳುವುದನ್ನು ರಾ.ಶಿ.ನೀ 2020, ತನ್ನ ಪ್ರಸ್ತಾಪಕ್ಕೆ ನವೀನ ಕಲ್ಪನೆಯ ಕೇಂದ್ರಬಿಂದುವನ್ನಾಗಿ ಪರಿಗಣಿಸಿದೆ. ಅರ್ಹತೆ ಆಧಾರಿತವಾಗಿ ಸಂಬಳ ಮತ್ತು ಅತ್ಯುತ್ತಮ ಕೆಲಸ ಮಾಡುವ ಶಿಕ್ಷಕರು ಅದೇ ಕೇಡರ್‌ನಲ್ಲಿ ಉಳಿದು ಹೆಚ್ಚಿನ ಸಂಬಳ ಪಡೆಯಬಹುದು ಎಂದು ಹೇಳುತ್ತದೆ. (ಇದರಲ್ಲಿ ಹೇಳಿರುವ ಪ್ರಕಾರ ಈಗಿನ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಕರಿಗೆ ಮುಂಬಡ್ತಿ ನೀಡಲು ವ್ಯವಸ್ಥೆಯೇ ಇಲ್ಲ ಎಂದು ಬಿಂಬಿಸುತ್ತದೆ. ಈ ನೀತಿಯ ಹೊಗಳುಭಟ್ಟರು ಈ ನೀತಿಯು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಹಳ ಉಪಯುಕ್ತವಾದದ್ದು ಎಂದು ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.) ಆದರೆ, ಇದಕ್ಕೆ ಪೂರಕವಾಗಿ, ಈ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ಹೇಗೆ ತರಲಾಗುತ್ತದೆ ಎಂದು ರಾ.ಶಿ.ನೀ 2020 ತಿಳಿಸಿಲ್ಲ.

ಈ ನೀತಿಯು ಶಿಕ್ಷಕರಿಗೆ ಸೀನಿಯಾರಿಟಿ ಆಧಾರಿತ ಮುಂಬಡ್ತಿ ಮತ್ತು ವೇತನ ಹೆಚ್ಚಳಕ್ಕೆ ಬದಲಾಗಿ ಕೆಲಸ ನಿರ್ವಹಣೆಯ ಮೌಲ್ಯಮಾಪನ ಆಧಾರಿತ ವ್ಯವಸ್ಥೆಯನ್ನು ಪ್ರಸ್ತಾಪಿಸುತ್ತದೆ. ಇದರ ಪ್ರಕಾರ, “ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಅನೇಕ ಮಾನದಂಡ ಆಧಾರಿತ ಮೌಲ್ಯಮಾಪನ ವ್ಯವಸ್ಥೆಯನ್ನು ಪೀರ್ ರಿವ್ಯೂ (ಒಬ್ಬರಿಗೆ ಸಹೋದ್ಯೋಗಿಗಳು ನೀಡುವ ಅಂಕಗಳು), ಹಾಜರಾತಿ, ಬದ್ಧತೆ, Continuous Professional Developmentಗಾಗಿ ವ್ಯಯಿಸಿದ ಘಂಟೆಗಳು ಮತ್ತು ಶಾಲೆಗೆ ಅಥವಾ ಸಮುದಾಯಕ್ಕೆ ನೀಡಿದ ಕೊಡುಗೆಯ
ಆಧಾರದಲ್ಲಿ ಅಥವಾ National Professional Standards for Teachersನ ಆಧಾರದ ಮೇಲೆ ರೂಪಿಸುತ್ತವೆ. ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ ಮೇಲೆ ಗುರುತಿಸಲಾದ ಬಹಳಷ್ಟು ಮಾನದಂಡಗಳು ವಸ್ತುನಿಷ್ಠತೆಗೆ ಸಂಬಂಧಿಸಿಲ್ಲ.

ಬದಲಿಗೆ, ಸಂಪೂರ್ಣವಾಗಿ ತಕ್ಷಣದ ಮೇಲಧಿಕಾರಿಗಳು ಮತ್ತು ಅಧಿಕಾರಶಾಹಿಗಳ ಹುಚ್ಚಾಟಿಕೆಯ ಅನಿಸಿಕೆಗಳ ಮೇಲೆ ಆಧಾರಿತವಾಗಿದೆ. ಇಲ್ಲಿ, ಮೇಲಾಧಿಕಾರಿಗಳು ಶಿಕ್ಷಕರನ್ನು ತಮ್ಮಿಚ್ಛೆಯಂತೆ ಮೌಲ್ಯಮಾಪನಕ್ಕೊಳಪಡಿಸಿ ತಮ್ಮ ಅಧೀನಕ್ಕೆ ಒಳಪಡಿಸಲು ಎಡೆ ಮಾಡಿಕೊಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಶಿಕ್ಷಕರ ಬಗ್ಗೆ ಅಸಮಾಧಾನ ಹೊಂದಿದ್ದರೆ, ಈ ನೀತಿಯನ್ನು ಬಳಸಿ ಅವರ ಮುಂಬಡ್ತಿ ಮತ್ತು ವೇತನ ಹೆಚ್ಚಳವನ್ನು ತಡೆ ಹಿಡಿಯಬಹುದಾಗಿರುತ್ತದೆ. ಇಂದು ಅಸ್ತಿತ್ವದಲ್ಲಿರುವ ಸರ್ವಾಧಿಕಾರಿ ಧೋರಣೆಯ ಹಿನ್ನೆಲೆಯಲ್ಲಿ ಪ್ರಭುತ್ವವು ಮತ್ತು ಮೇಲಾಧಿಕಾರಿಗಳು ತನ್ನ ಸಿದ್ಧಾಂತವನ್ನು ಒಪ್ಪದ, ಪಾಲಿಸದ ಯಾವುದೇ ಶಿಕ್ಷಕರನ್ನು ಈ ನೀತಿ ಬಳಸಿ ಶಿಕ್ಷಿಸಬಹುದಾಗಿದೆ. ಅಲ್ಲದೆ, ಪಾಯಿಂಟ್ 5.20ಯು, ಈ ರೀತಿಯ ಮೌಲ್ಯಮಾಪನವನ್ನು ಎಲ್ಲಾ ಸ್ಥರದಲ್ಲೂ ರೂಪಿಸಲಾಗುತ್ತದೆ ಎಂದು ತಿಳಿಸುತ್ತದೆ.

ಇನ್ನೂ ಮುಂದೆ ಸಾಗಿ, ’ಮುಂಬಡ್ತಿಗಳು ಮತ್ತು ವೇತನ ಹೆಚ್ಚಳವು ಅಧಿಕಾರಾವಧಿ ಅಥವಾ ಸೀನಿಯಾರಿಟಿಗಳ ಆಧಾರದ ಮೇಲೆ ಸಂಭವಿಸುವುದಿಲ್ಲ, ಬದಲಿಗೆ ಇಂತಹ ಮೌಲ್ಯಮಾಪನದ ಆಧಾರದ ಮೇಲೆ ಮಾತ್ರ ಆಧಾರಿತವಾಗಿರುತ್ತವೆ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದು ಸ್ಪಷ್ಟವಾಗಿ ಶಿಕ್ಷಕರು ಶಾಶ್ವತ ಸೇವಾ ಅವಧಿಯನ್ನು ಹೊಂದಿದ ದಿನಗಳು ಕಳೆದು ಹೋಗಿವೆ ಮತ್ತು ಶಿಕ್ಷಕರ ಹೊಸ ವೃತ್ತಿ ನಿರ್ವಹಣಾ ವ್ಯವಸ್ಥೆಯು ಸಂಪೂರ್ಣವಾಗಿ ಕಾರ್ಪೊರೇಟ್ ಶೈಲಿಯ ನಿರ್ವಹಣೆಗೆ ಅನುಗುಣವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಇದು ವಾಸ್ತವವಾಗಿ ಪ್ರತಿಯೊಬ್ಬ ಶಿಕ್ಷಕರನ್ನು ದಿನಗೂಲಿ ಕಾರ್ಮಿಕರನ್ನಾಗಿಸುತ್ತದೆ. ಇದು, ಇಂದು ಆಡಳಿತ ನಡೆಸುತ್ತಿರುವ ಹಿಂದೂ ಶ್ರೇಷ್ಠತೆಯ ಸಿದ್ಧಾಂತದ ಜೊತೆಗೂಡಿ ಶಿಕ್ಷಕರನ್ನು ಇನ್ನೂ ಹೆಚ್ಚು ಶೋಷಿಸುತ್ತದೆ. ಇದೆಲ್ಲಕ್ಕಿಂತ ಹೆಚ್ಚು ಗಂಭೀರವಾದ ವಿಷಯವೆಂದರೆ, ರಾ.ಶಿ.ನೀ 2020 ನೇರವಾಗಿಯಾಗಲೀ ಅಥವಾ ಪರೋಕ್ಷವಾಗಿಯಾಗಲೀ ಶಿಕ್ಷಕರ ಸಂಘಟನೆಗಳು ಮತ್ತು ಶಿಕ್ಷಕರ ಒಕ್ಕೂಟಗಳ ಅಸ್ತಿತ್ವವನ್ನು ಗುರುತಿಸಿಯೂ ಇಲ್ಲ. ಬದಲಿಗೆ, ಈ ನೀತಿಯನ್ನು ಬಳಸಿ ಈಗಿನ ಅಧಿಕಾರಶಾಹಿ ವರ್ಗವು ಇವೆಲ್ಲಾ ಒಕ್ಕೂಟ ಮತ್ತು ಸಂಘಟನೆಗಳನ್ನು ಒಂದೇ ಬಾರಿಗೆ ನಿರ್ಬಂಧಿಸುವ ಅಪಾಯವಿದೆ.

ಈ ರೀತಿಯಲ್ಲಿ, ರಾ.ಶಿ.ನೀ 2020 ಎಂಬ ಬಹಳ ಅಪಾಯಕಾರಿ ವಿಷದುಂಡೆಗೆ, ಸುಳ್ಳು ಭರವಸೆಗಳೆಂಬ ಸಕ್ಕರೆಯನ್ನು ಲೇಪಿಸಿ ಶಿಕ್ಷರಿಗೆ, ಮಕ್ಕಳಿಗೆ ಮತ್ತು ಇಡೀ ದೇಶಕ್ಕೆ ಉಣಬಡಿಸಲಾಗುತ್ತಿದೆ.

ಕನ್ನಡಾನುವಾದ: ಶಶಾಂಕ್ ಎಸ್ ಆರ್

ರಾಮಮೂರ್ತಿ ಶರ್ಮ

ರಾಮಮೂರ್ತಿ ಶರ್ಮ
ಇವರು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಅವರ ವೈಯಕ್ತಿಕ ನಿಲುವಾಗಿದೆ.


ಇದನ್ನೂ ಓದಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

ಇದನ್ನೂ ಓದಿ: ಬಹುಜನ ಭಾರತ; ದಲಿತ ಬರೆಹಗಳ ಹೊರದಬ್ಬಿದ ದೆಹಲಿ ವಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...