Homeಮುಖಪುಟ2021 ರಾಸಾಯನಶಾಸ್ತ್ರ ನೊಬೆಲ್; ಪರಿಸರ ಸ್ನೇಹಿ ರಾಸಾಯನಿಕ ವೇಗವರ್ಧಕಗಳ ಸಂಶೋಧನೆಗೆ ಸಂದ ಗೌರವ

2021 ರಾಸಾಯನಶಾಸ್ತ್ರ ನೊಬೆಲ್; ಪರಿಸರ ಸ್ನೇಹಿ ರಾಸಾಯನಿಕ ವೇಗವರ್ಧಕಗಳ ಸಂಶೋಧನೆಗೆ ಸಂದ ಗೌರವ

- Advertisement -
- Advertisement -

ಇಡೀ ವಿಶ್ವದ ಒಟ್ಟು ಆಂತರಿಕ ಉತ್ಪನ್ನ (GDP – Gross Domestic Product) ಹತ್ತಿರಹತ್ತಿರ 90 ಟ್ರಿಲಿಯನ್ ಡಾಲರುಗಳು (1 ಟ್ರಿಲಿಯನ್ ಡಾಲರ್ ಅಂದರೆ 75 ಲಕ್ಷ ಕೋಟಿ ರೂಪಾಯಿಗಳು). ಈ 90 ಟ್ರಿಲಿಯನ್ ಡಾಲರುಗಳಲ್ಲಿ ಬಹುತೇಕ 30 ಟ್ರಿಲಿಯನ್ ಡಾಲರುಗಳಷ್ಟು (ಜಗತ್ತಿನ ಜಿಡಿಪಿಯ ಶೇ.35 ರಷ್ಟು!) ಜಿಡಿಪಿ ರಾಸಾಯನಿಕ ವೇಗವರ್ಧಕಗಳನ್ನು (Chemical catalysts) ಒಳಗೊಂಡ ಕೈಗಾರಿಕಾ ಪ್ರಕ್ರಿಯೆಗಳನ್ನು (Industrial process) ಅವಲಂಬಿಸಿದೆ.

ಕಚ್ಚಾತೈಲದಿಂದ ಹೆಚ್ಚು ಪೆಟ್ರೋಲನ್ನು ಪಡೆಯುವ ಪ್ರಕ್ರಿಯೆ ಇರಬಹುದು (ಝಿಯೋಲೈಟ್Zeolite ಕೆಟಲಿಸ್ಟ್), ಜೈವಿಕ ತ್ಯಾಜ್ಯವನ್ನು ಅನಿಲ ರೂಪದ ಇಂಧನವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಇರಬಹುದು (ನಿಕ್ಕಲ್-Nickel ಕೆಟಲಿಸ್ಟ್), ಮುಂದುವರೆದು ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್‌ಚಾಲಿತ ವಾಹನ ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ತರಲಿರುವ ಫ್ಯೂಯೆಲ್ ಸೆಲ್ (Fuel cell) ಇರಬಹುದು (ಪ್ಲಾಟಿನಮ್, ರೋಡಿಯಮ್-Platinum, Rhodium ಇತ್ಯಾದಿ ಕೆಟಲಿಸ್ಟ್), ನೀರನ್ನು ವಿಭಜಿಸಿ ಜಲಜನಕ ಇಂಧನವನ್ನು ಉತ್ಪಾದಿಸುವ ಕ್ರಿಯೆ ಇರಬಹುದು (ಸಿಲ್ವರ್, ಟೈಟಾನಿಯಮ್ ಡೈ ಆಕ್ಸೈಡ್ ಇತ್ಯಾದಿ ಕೆಟಲಿಸ್ಟ್), ಇನ್ನೂ ಕೆಲವು ಮುಖ್ಯ ಪಾಲಿಮರ್‌ಗಳ ಉತ್ಪಾದನೆ ಇರಬಹುದು (ಝೀಗ್ಲರ್ ನಟ್ಟಾ ಕೆಟಲಿಸ್ಟ್), ಸಲ್ಫ್ಯೂರಿಕ್ ಆಸಿಡ್ ಉತ್ಪಾದನೆ ಇರಬಹುದು (ಪ್ಲಾಟಿನಮ್ ಮತ್ತು ವೆನೆಡಿಯಮ್ ಪೆಂಟಾಕ್ಸೈಡ್ ಕೆಟಲಿಸ್ಟ್) – ಹೀಗೆ ಜಗತ್ತಿನ ಅತಿಮುಖ್ಯ ಕೈಗಾರಿಕಾ ಕ್ಷೇತ್ರಗಳ ಉತ್ಪಾದನಾ ಪ್ರಕ್ರಿಯೆಗಳು ವಿವಿಧ ಕೆಟಲಿಸ್ಟುಗಳ ಮೇಲೇಯೇ ಅವಲಂಬಿತವಾಗಿವೆ. ಆದ್ದರಿಂದಲೇ ಈ ಜಗತ್ತಿನ ಶೇ.35ರಷ್ಟು ಜಿಡಿಪಿ ಒಂದಲ್ಲಾ ಒಂದು ರೀತಿ ರಾಸಾಯನಿಕ ವೇಗವರ್ಧಕಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ, ಈ ಬಾರಿಯ ರಾಸಾಯನಶಾಸ್ತ್ರದ ನೊಬೆಲ್ ತಂದುಕೊಟ್ಟಿರುವ “Asymmetric Organocatalysis” ಯಾಕೆ ಕ್ರಾಂತಿಕಾರಕ ಸಂಶೋಧನೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಎದ್ದು ಕಾಣಿಸುತ್ತದೆ.

ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯ ವಿಜ್ಞಾನಿ ಬೆಂಜಮಿನ್ ಲಿಸ್ಟ್ ಮತ್ತು ಸ್ಕಾಟ್‌ಲೆಂಡ್ ಸಂಜಾತ ಅಮೆರಿಕದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ವಿಜ್ಞಾನಿ ಡೇವಿಡ್ ಮೆಕ್ಮಿಲನ್ ಅವರಿಗೆ “Asymmetric Organocatalysis” ಮೇಲಿನ ಸಂಶೋಧನೆಗಾಗಿ ಈ ಬಾರಿ ನೊಬೆಲ್ ಬಹುಮಾನ ಬಂದಿದೆ.

ಹಾಗೆ ನೋಡಿದರೆ ಈ ಇಬ್ಬರೂ ವಿಜ್ಞಾನಿಗಳು ಈ ಹೊಸಬಗೆಯ ಕೆಟಲಿಸ್ಟುಗಳನ್ನು 2000ನೇ ಇಸ್ವಿಯಲ್ಲಿಯೇ ಸಂಶೋಧಿಸಿದ್ದಾರೆ. ಈ ಇಪ್ಪತ್ತು ವರ್ಷಗಳಲ್ಲಿ ಈ ಹೊಸ ಆರ್ಗಾನಿಕ್ ಕೆಟಲಿಸ್ಟುಗಳು ಉಂಟುಮಾಡಿದ ಕ್ರಾಂತಿಕಾರಕ ಬದಲಾವಣೆಗಳನ್ನು ಗಮನಿಸಿ ಈಗ ಈ ಇಬ್ಬರು ವಿಜ್ಞಾನಿಗಳಿಗೆ ನೊಬೆಲ್ ನೀಡಲಾಗಿದೆ.

ಈ ಹೊಸ ಆರ್ಗಾನಿಕ್ ಕೆಟಲಿಸ್ಟುಗಳು ಹೇಗೆ ರಾಸಾಯನಿಕ ವಸ್ತುಗಳ ಉತ್ಪಾದನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯುವ ಪ್ರಯತ್ನ ಮಾಡೋಣ.

ರಾಸಾಯನಿಕ ವೇಗವರ್ಧಕಗಳು (Chemical catalyst) ಎಂದರೆ?

ಹಲವಾರು ರಾಸಾಯನಿಕ ಕ್ರಿಯೆಗಳು ಅತ್ಯಂತ ನಿಧಾನಗತಿಯಲ್ಲಿ ಅಂದರೆ ನಿರುಪಯುಕ್ತವಾಗುವಷ್ಟು ನಿಧಾನವಾಗಿ ಜರುಗುತ್ತವೆ. ಇಂತಹ ನೂರಾರು ಮುಖ್ಯ ರಾಸಾಯನಿಕ ಕ್ರಿಯೆಗಳ ವೇಗವನ್ನು ಹೆಚ್ಚಿಸಲು ಬಳಸುವ ರಾಸಾಯನಿಕ ಸಂಯುಕ್ತಗಳನ್ನೇ ಕೆಟಲಿಸ್ಟುಗಳು ಅಥವಾ ವೇಗವರ್ಧಕಗಳು ಎನ್ನುತ್ತೇವೆ.

ಈ ಕೆಟಲಿಸ್ಟುಗಳು ಒಂದು ರಾಸಾಯನಿಕ ಕ್ರಿಯೆಯ ವೇಗವನ್ನು ಹೆಚ್ಚಿಸಿದ ನಂತರ ತಾವು ಯಾವುದೇ ಬದಲಾವಣೆ ಹೊಂದದೆ ಮತ್ತು ಉತ್ಪನ್ನದ ಭಾಗವೂ ಆಗದೆ ಪ್ರತ್ಯೇಕವಾಗಿ ಉಳಿಯುತ್ತವೆ. ಆದುದರಿಂದ ಒಂದು ರಾಸಾಯನಿಕ ಕ್ರಿಯೆ ಮುಗಿದನಂತರ ಬಹುತೇಕ ಈ ಕೆಟಲಿಸ್ಟುಗಳನ್ನು ಪ್ರತ್ಯೇಕಿಸುವುದಕ್ಕೆ ಸಾಧ್ಯ.

ಇಲ್ಲಿಯತನಕ ಯಾವ ರೀತಿಯ ಕೆಟಲಿಸ್ಟುಗಳನ್ನು ಬಳಸುತ್ತಿದ್ದರು?

ಮುಖ್ಯವಾಗಿ ಭಾರೀ ಲೋಹ (Heavy metals) ಮತ್ತು ಕಿಣ್ವಗಳನ್ನು (Enzymes) ಕೆಟಲಿಸ್ಟುಗಳನ್ನಾಗಿ ಬಳಸುತ್ತಿದ್ದರು (ಈಗಲೂ ಹಲವಾರು ಕೈಗಾರಿಕೆಗಳಲ್ಲಿ ಬಳಸುತ್ತಿದ್ದಾರೆ).

ಈ ಭಾರೀ ಲೋಹ ಮತ್ತು ಎನ್‌ಜೈಮುಗಳನ್ನು ಬಳಸುವಲ್ಲಿ ಇದ್ದ ತೊಂದರೆಗಳೇನು?

ಭಾರೀ ಲೋಹಗಳನ್ನು (ಪ್ಲಾಟಿನಮ್, ಪೆಲೆಡಿಯಮ್, ನಿಕ್ಕಲ್, ಕಾಪರ್, ರೋಡಿಯಮ್ ಇತ್ಯಾದಿ) ಕೆಟಲಿಸ್ಟುಗಳಾಗಿ ಬಳಸುವಲ್ಲಿ ಹಲವು ಮುಖ್ಯ ತೊಂದರೆಗಳಿದ್ದವು. ಅವುಗಳಲ್ಲಿ ಕೆಲವು..

1. ಈ ಲೋಹಗಳನ್ನು ಹೊರತೆಗೆಯುವ ಕ್ರಿಯೆ ಭಾರೀ ದುಬಾರಿ ಮತ್ತು ಪರಿಸರ ಸ್ನೇಹಿಯಲ್ಲದ್ದು.

2. ಲೋಹಗಳನ್ನು ಹೊರತೆಗೆಯುವ ಕ್ರಿಯೆ ಹೆಚ್ಚು ಇಂಧನ ವೆಚ್ಚವನ್ನು ಬೇಡುವಂತದ್ದು.

3. ಹಲವು ಲೋಹಗಳು ತೇವಾಂಶ ಮತ್ತು ಆಮ್ಲಜನಕ ಇರುವಲ್ಲಿ ಪರಿಣಾಮಕಾರಿಯಾಗಿ ಕೆಟಲಿಸ್ಟಿನ ಕೆಲಸ ಮಾಡಲಾರವು. ಹಾಗಾಗಿ, ಈ ಲೋಹಗಳ ಬಳಕೆಗೆ ತೇವಾಂಶ ಮತ್ತು ಆಮ್ಲಜನಕ ಇಲ್ಲದಂತೆ ಮಾಡುವ ಯಂತ್ರಗಳ ಅವಶ್ಯವಿದ್ದು ಇದು ಇಡೀ ಪ್ರಕ್ರಿಯೆಯನ್ನು ಮತ್ತಷ್ಟು ದುಬಾರಿಗೊಳಿಸುತ್ತದೆ.

4. ಕಡೆಯದಾಗಿ, ಒಂದು ರಾಸಾಯನಿಕ ಕ್ರಿಯೆ ಮುಗಿದನಂತರ ಬಂದ ಉತ್ಪನ್ನದಿಂದ ಈ ಲೋಹಗಳನ್ನು (ಕೆಟಲಿಸ್ಟ್) ನೂರಕ್ಕೆ ನೂರರಷ್ಟು ಬೇರ್ಪಡಿಸಲು ಅತ್ಯಂತ ಕಷ್ಟ. ಇದರಿಂದ ಸಂಪೂರ್ಣ ಶುದ್ಧ ಉತ್ಪನ್ನವನ್ನು ಪಡೆಯುವುದು ಅಸಾಧ್ಯವಾಗಿತ್ತು. ಅದರಲ್ಲೂ ಔಷಧ ಉತ್ಪನ್ನಗಳ ವಿಷಯದಲ್ಲಿ ಇದು ಗಂಭೀರ ಪರಿಣಾಮ ಬೀರುವಂತಿತ್ತು.

ಇನ್ನು ಕಿಣ್ವ ಅಥವಾ ಎನ್‌ಜೈಮುಗಳನ್ನು ಬಳಸುವಲ್ಲಿ ಲೋಹ ವೇಗವರ್ಧಕಗಳಿಗೆ ಹೋಲಿಸಿದರೆ ಹಲವು ಅನುಕೂಲತೆಗಳಿದ್ದರೂ ಒಂದೆರಡು ಸಣ್ಣಪುಟ್ಟ ಕೊರತೆಗಳೂ ಇದ್ದವು.

1. ಲೋಹಗಳಿಗೆ ಹೋಲಿಸಿದರೆ ಎನ್‌ಜೈಮುಗಳು ಹೆಚ್ಚು ನಿಖರವಾಗಿ ಕೆಲಸಮಾಡಬಲ್ಲವು.

2. ಕೆಲವು ರಾಸಾಯನಿಕ ಸಂಯುಕ್ತಗಳು ಒಂದೇ ರೀತಿಯ ರಚನೆ ಹೊಂದಿದ್ದು ಕೆಲವು ಘಟಕಗಳ ಅರೇಂಜ್‌ಮೆಂಟ್‌ನಲ್ಲಿ ಮಾತ್ರ ಭಿನ್ನತೆ ಹೊಂದಿರುತ್ತವೆ. ಒಂದು ಸಂಯುಕ್ತದಲ್ಲಿ ಒಂದು ಘಟಕ (ಉದಾ: OH group) ಮುಖ್ಯ ಕಾರ್ಬನ್ ಚೈನಿನ ಬಲಕ್ಕಿದ್ದರೆ ಮತ್ತೊಂದು ಸಂಯುಕ್ತದಲ್ಲಿ ಇದೇ ಘಟಕ ಎಡಕ್ಕಿರುತ್ತದೆ.

ಈ ಎರಡೂ ಸಂಯುಕ್ತಗಳನ್ನು ಮಿರರ್ ಇಮೇಜುಗಳು (ನಮ್ಮ ಎರಡೂ ಹಸ್ತಗಳಿದ್ದಂತೆ) ಎನ್ನುತ್ತೇವೆ. ಈ ರೀತಿಯ ಪ್ರತಿ ಮಿರರ್ ಇಮೇಜ್ ಸಂಯುಕ್ತವು ತನ್ನದೇ ಗುಣಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಲಿಮೋನೀನ್ (Limonene) ಎಂಬ ಸಂಯುಕ್ತವೇ ಲಿಂಬೆ ಮತ್ತು ಕಿತ್ತಲೆ ಎರಡರಲ್ಲೂ ಇರುವುದು. ಇದರಲ್ಲಿ S – Limonene ಮಿರರ್ ಇಮೇಜ್ ಸಂಯುಕ್ತವು ಲಿಂಬೆ ಹಣ್ಣಿನಲ್ಲಿದೆ ಮತ್ತು R – Limonene ಸಂಯುಕ್ತವು ಕಿತ್ತಲೆ ಹಣ್ಣಿನಲ್ಲಿದೆ.

ಅಂದರೆ, ಒಂದು ಸಂಯುಕ್ತ ಒಂದೇ ರಾಸಾಯನಿಕ ರಚನೆ ಹೊಂದಿದ್ದರೂ ಕೇವಲ ಒಂದೆರಡು ಘಟಕಗಳ ಸ್ಥಾನ ವ್ಯತ್ಯಾಸದಿಂದಾಗಿ ಬೇರೆ ಗುಣಗಳನ್ನೇ ಪಡೆಯುವ ಆಶ್ಚರ್ಯಚಕಿತ ಸತ್ಯ ಇದು. ಎನ್‌ಜೈಮುಗಳನ್ನು ಕೆಟಲಿಸ್ಟುಗಳಾಗಿ ಬಳಸುವ ಮುಖ್ಯ ಅನುಕೂಲವೆಂದರೆ ನಮಗೆ ಬೇಕಾದ ಮಿರರ್ ಇಮೇಜ್ ಸಂಯುಕ್ತವನ್ನು ಉತ್ಪಾದಿಸಬಹುದು.

1950-60ರ ದಶಕದಲ್ಲಿ ಗರ್ಭಿಣಿ ಮಹಿಳೆಯರಲ್ಲಿ ವಾಕರಿಕೆ ಲಕ್ಷಣವನ್ನು ತಡೆಗಟ್ಟಲು ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಥ್ಯಾಲಿಡೊಮೈಡ್ (Thalidomide) ಮಾತ್ರೆಗಳು ನಂತರ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಉಂಟುಮಾಡುತ್ತಿದ್ದವು. ಅದೇ ಥ್ಯಾಲಿಡೋಮೈಡಿನ ಮಿರರ್ ಇಮೇಜ್ ಮಾತ್ರೆಯಲ್ಲಿ ಈ ಅಡ್ಡ ಪರಿಣಾಮ ಇಲ್ಲ ಎಂದು ತಿಳಿಯಲು ಒಂದು ದಶಕವೇ ಬೇಕಾಯಿತು.

ಹೀಗೆ ಬೇಕಾದ ಮಿರರ್ ಇಮೇಜ್ ಸಂಯುಕ್ತವನ್ನು ಪಡೆಯಲು ಎನ್‌ಜೈಮ್ ಕೆಟಲಿಸ್ಟುಗಳಿಂದ ಸಾಧ್ಯವಿದ್ದು, ಇದು ಇವುಗಳ ಬಹುಮುಖ್ಯ ಅನುಕೂಲವಾಗಿದೆ.

ಈ ಎನ್‌ಜೈಮ್ ಕೆಟಲಿಸ್ಟುಗಳೂ ಒಂದೆರಡು ಮುಖ್ಯ ಅನಾನುಕೂಲತೆಗಳನ್ನು ಹೊಂದಿವೆ.

1. ಎನ್‌ಜೈಮುಗಳು ನೈಸರ್ಗಿಕವಾಗಿ ಮಾತ್ರ ದೊರೆಯುತಿದ್ದು, ಲಭ್ಯವಿರುವ ಎನ್‌ಜೈಮುಗಳಿಂದ ನಿರ್ದಿಷ್ಟ ಕ್ರಿಯೆಗಳನ್ನಷ್ಟೇ ಕೆಟಲೈಸ್ ಮಾಡಲು ಸಾಧ್ಯ.

2. ಎನ್‌ಜೈಮುಗಳು ಪ್ರೋಟೀನುಗಳಾಗಿದ್ದು ಎಷ್ಟೋ ಬಾರಿ ಒಂದು ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಔಷದ ವಸ್ತುವಿಗಿಂತ ಗಾತ್ರದಲ್ಲಿ ಹತ್ತುಸಾವಿರ ಪಟ್ಟು ದೊಡ್ಡದಿರುತ್ತವೆ. ಇದು ಇಡೀ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಾಧ್ಯತೆಯಿರುತ್ತದೆ. ಹಾಗಿದ್ದರೆ, ಈ ಹೊಸ ಆರ್ಗಾನಿಕ್ ಕೆಟಲಿಸ್ಟುಗಳು ಲೋಹ ಮತ್ತು ಎನ್‌ಜೈಮ್ ಕೆಟಲಿಸ್ಟುಗಳಿಗಿಂತ ಹೇಗೆ ಉತ್ತಮ? ಇವು ರಾಸಾಯನಿಕ ಸಂಯುಕ್ತಗಳ ಉತ್ಪಾದನೆಯಲ್ಲಿ ಹೇಗೆ ಕ್ರಾಂತಿಕಾರಕ ಬದಲಾವಣೆ ತರಬಲ್ಲವು?

1. ಮೊದಲನೆಯದಾಗಿ ಆರ್ಗಾನಿಕ್ ಕೆಟಲಿಸ್ಟುಗಳು ಎಂದರೆ ಸರಳ ಆರ್ಗಾನಿಕ್ ಸಂಯುಕ್ತಳಾಗಿದ್ದು ಮುಖ್ಯ ಕಾರ್ಬನ್ ಚೇನಿನ ಜೊತೆ ಆಕ್ಸಿಜನ್, ಸಲ್ಫರ್, ನೈಟ್ರೋಜನ್ ಇತ್ಯಾದಿ ಅಣುಗಳನ್ನು ಹೊಂದಿರುತ್ತವೆ. ಇವುಗಳನ್ನು ಒಂದೇ ಒಂದು ಅಮಿನೋ ಆಸಿಡ್‌ನಿಂದ ಮಾಡಲ್ಪಟ್ಟಿರುತ್ತವೆ ಎಂದೂ ಹೇಳಬಹುದು.

2. ಈ ಆರ್ಗಾನಿಕ್ ಕೆಟಲಿಸ್ಟುಗಳು ಬಹುತೇಕ ಎನ್‌ಜೈಮುಗಳ ಹಾಗೇ ಕೆಲಸಮಾಡುವುದರಿಂದ ಎನ್‌ಜೈಮುಗಳ ಎಲ್ಲ ಅನುಕೂಲತೆಗಳೂ ಇವಕ್ಕೂ ಇವೆ.

3. ಆರ್ಗಾನಿಕ್ ಕೆಟಲಿಸ್ಟುಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಇವುಗಳ ಉತ್ಪಾದನೆ ಸುಲಭವಾಗಿದೆ (ಎನ್‌ಜೈಮುಗಳು ನೈಸರ್ಗಿಕವಾಗಿ ಮಾತ್ರ ಲಭ್ಯ). ಅಂದರೆ, ಯಾವುದೇ ರಾಸಾಯನಿಕದ ಪ್ರಕ್ರಿಯೆಗೆ ಬೇಕಾದ ಆರ್ಗಾನಿಕ್ ಕೆಟಲಿಸ್ಟನ್ನು ಬಹುತೇಕ ಸುಲಭವಾಗಿ ಉತ್ಪಾದಿಸಬಹುದು.

4. ಆರ್ಗಾನಿಕ್ ಕೆಟಲಿಸ್ಟುಗಳನ್ನು ಬಳಸಿ ನಮಗೆ ಬೇಕಾದ ಮಿರರ್ ಇಮೇಜ್ ಸಂಯುಕ್ತವನ್ನು
Zಉತ್ಪಾದಿಸಬಹುದು. ಇದರಿಂದ ನಮಗೆ ಬೇಕಾದ ನಿರ್ದಿಷ್ಟ ಸಂಯುಕ್ತವನ್ನು ಸುಲಭವಾಗಿ ಉತ್ಪಾದಿಸಲು ಸಾಧ್ಯ. ಹಾಗಾಗಿಯೇ ಇವುಗಳನ್ನು asymmetric organic catalysts ಎನ್ನುತ್ತೇವೆ.

5. ಒಮ್ಮೆ ರಾಸಾಯನಿಕ ಪ್ರಕ್ರಿಯೆ ಮುಗಿದ ನಂತರ ಆರ್ಗಾನಿಕ್ ಕೆಟಲಿಸ್ಟುಗಳನ್ನು ಅತ್ಯಂತ ಸುಲಭವಾಗಿ ಉತ್ಪನ್ನದಿಂದ ಬೇರ್ಪಡಿಸಬಹುದು. ಇದರಿಂದ ಶೇ.ನೂರರಷ್ಟು ಶುದ್ಧ ಸಂಯುಕ್ತಗಳನ್ನು ಉತ್ಪಾದಿಸಲು ಸಾಧ್ಯವಿದ್ದು (ಈಗಾಗಲೇ ಆಗಿದೆ) ಇದು ಔಷಧೀಯ ಕ್ಷೇತ್ರಕ್ಕೆ ಭಾರೀ ಅನುಕೂಲ ತರಲಿದೆ.

6. ಆರ್ಗಾನಿಕ್ ಕೆಟಲಿಸ್ಟುಗಳು ಭಾರೀ ಲೋಹಗಳ ಬಳಕೆಯನ್ನು ಗರಿಷ್ಟ ಪ್ರಮಾಣದಲ್ಲಿ ಕಡಿಮೆ ಮಾಡುತ್ತಾ ಹೋಗುವುದರಿಂದ ಅತ್ಯಂತ ಪರಿಸರ ಸ್ನೇಹಿ ಸಂಯುಕ್ತಗಳಾಗಿವೆ.

7. ಲೋಹಗಳಿಗೆ ಹೋಲಿಸಿದರೆ, ಆರ್ಗಾನಿಕ್ ಕೆಟಲಿಸ್ಟುಗಳು ಸಂಬಂಧಿಸಿದ ಯಾವುದೇ ರಾಸಾಯನಿಕ ಕ್ರಿಯೆಯ ವೇಗವನ್ನು ಗರಿಷ್ಟ ಪ್ರಮಾಣದಲ್ಲಿ ಹೆಚ್ಚಿಸುವುದರಿಂದ ಇಡೀ ಪ್ರಕ್ರಿಯೆ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ.

ಆರ್ಗಾನಿಕ್ ಕೆಟಲಿಸ್ಟುಗಳಿಗೆ ಇರುವ ಈ ಮೇಲ್ಕಂಡ ಕೆಲವು ಅನುಕೂಲತೆಗಳಿಂದಾಗಿ ಈಗಾಗಲೇ ಇರುವ ಮತ್ತು ಹೊಸ ಸಂಯುಕ್ತಗಳ ಉತ್ಪಾದನೆಯ ದಿಕ್ಕೇ ಬದಲಾಗಲಿದೆ. ಇದರಿಂದ ಇಡೀ ಉತ್ಪಾದನಾ ವಿಧಾನ ಹೆಚ್ಚು ಪರಿಸರ ಸ್ನೇಹಿಯೂ, ಕ್ಷಿಪ್ರವೂ ಮತ್ತು ಅಗ್ಗವೂ ಆಗಲಿದೆ. ಮತ್ತು ಈ ಇಪ್ಪತ್ತು ವರ್ಷಗಳಲ್ಲಿ ಹಲವಾರು ಸಂಯುಕ್ತಗಳ ಉತ್ಪಾದನೆಯಲ್ಲಿ ಮೇಲಿನೆಲ್ಲ ಅನುಕೂಲತೆಗಳೂ ಸಾಧಿಸಲ್ಪಟ್ಟಿವೆ.

ಹೀಗಾಗಿಯೇ ಇಡೀ ಜಗತ್ತು ಪರಿಸರ ಉಳಿವಿನ ಬಗ್ಗೆ ಅತಿಹೆಚ್ಚು ಕಾಳಜಿ ಹೊಂದಿರುವಂತ ಈ ಸಂದರ್ಭದಲ್ಲಿ ಈ ಆರ್ಗಾನಿಕ್ ಕೆಟಲಿಸ್ಟುಗಳ ಸಂಶೋಧನೆ ಮತ್ತು ಬಳಕೆ ನಿಜಕ್ಕೂ ಒಂದು ಕ್ರಾಂತಿಕಾರಕ ಸಂಶೋಧನೆ ಎಂದೇ ಹೇಳಬಹುದು. ಹಾಗೂ, ಈ ಸಂಶೋಧನೆ ಮಾಡಿದ ಇಬ್ಬರೂ ವಿಜ್ಞಾನಿಗಳಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವಾರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ


ಇದನ್ನೂ ಓದಿ: 2021ರ ಫಿಸಿಕ್ಸ್ ನೊಬೆಲ್; Butterfly Effect ಮತ್ತು ಹವಾಮಾನ ಬದಲಾವಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...