Homeಅಂಕಣಗಳುನಾಗಸುಧೆ ಜಗಲಿಯಿಂದಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬೇವಿನಗಿಡದ ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಅವಕಾಶ ನೀಡಿ ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತ ಸತ್ಯ.

- Advertisement -
- Advertisement -

ಉಂಡದ್ದು ಉಗುಳಿದ್ದು
ತಿಂದಿದ್ದು ತೇಗಿದ್ದು
ಎಲ್ಲವನೂ ರಸ್ತೆಗಳು
ಬಾಯಿಬಿಡದೇ ನುಂಗಿಕೊಂಡಿದೆ
ಅವು ಬಾಯಿಬಿಟ್ಟಾಗ
ಇದ್ದೇ ಇದೆಯಲ್ಲ
ತೇಪೆ ಹಚ್ಚಿ ತುಪ್ಪ ಸವರುವುದು
ಹಿಡಿ ಮಣ್ಣು ಹಾಕಿ ಮುಚ್ಚುವುದು

ತಮ್ಮ ‘ಇಳೆಯ ಅರ್ಥ’ ಕವನ ಸಂಕಲನದ ‘ಹೊಲ ಮಾರಿ ಉಳಿದ ಬೇರೀಜು’ ಕವನದಲ್ಲಿ ಡಾ. ಬಸು ಬೇವಿನಗಿಡದ ಜಗದ ಭ್ರಷ್ಟಾಚಾರ ಮತ್ತು ಮಾನವೀಯ ಸಂಬಂಧದ ಪಲ್ಲಟಗಳ ಕುರಿತು ಮನಮುಟ್ಟುವಂತೆ ಹೇಳಿರುವರು. ಇವರ ಬರಹಗಳೇ ಹೀಗೆ ; ಮೇಲ್ನೋಟಕ್ಕೆ ಸೀದಾ ಸಾದಾ ಕಂಡರೂ ಒಳಗೊಳಗೇ ಬಿಸಿಲಿನ ಕುದಿತದ ಛಾಯೆ ಇದೆ ; ಬರಹಗಳಂತೆ ಇವರೂ ಸಹ.

ಸವದತ್ತಿ ತಾಲೂಕಿನ ಮುನವಳ್ಳಿಯ ಡಾ. ಬೇವಿನಗಿಡದ ಬಡತನದ ಬೇಗೆಯಲೇ ಬೆಳೆದವರು. ಪುಟ್ಟದೊಂದು ಕೃಷಿ ಕುಟುಂಬಕ್ಕೆ ಏಳು ಜನ ಒಡಹುಟ್ಟಿದವರು. ನೀರೇ ಇಲ್ಲದ ನಾಲ್ಕು ಎಕರೆ ಒಣ ಭೂಮಿ. ಅಣ್ಣ ಕೂಲಿ ನಾಲಿ ಮಾಡಿದ ; ಸೋದರಮಾವ ಕೈ ಹಿಡಿದು ದಡ ಸೇರಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಬೇಂದ್ರೆ ಕಾವ್ಯದಲ್ಲಿ ನಿಸರ್ಗ’ದಲ್ಲಿ ಪಿಎಚ್‌ಡಿ ಪದವಿ ಪಡೆದರು. ಅವರಿಗೆ ಕನ್ನಡ ಮತ್ತು ಅಕ್ಷರ ಪ್ರೀತಿ ಹಾಗೂ ಬರಹ ಉಸಿರಿನಷ್ಟೇ ಸಲೀಸಾಗಿದೆ. ವಿಶಾಲವಾದ ಅನುಭವವನ್ನು ಕಂಡುಂಡದ್ದರಿಂದ ಇವರ ಬರಹದಲ್ಲಿ ಪ್ರೀತಿ, ಮಮತೆ, ಮಾನವೀಯತೆ ಮತ್ತು ಗ್ರಾಮೀಣ ಬದುಕಿನ ಒಳನೋಟಗಳು ಪುಟಿದೇಳುತ್ತದೆ. ಯಾರಿಗೂ ನೋವಾಗದ ಹಾಗೆ ಎಲ್ಲರೊಂದಿಗೂ ಬೆರೆತು ಅಕ್ಷರ ಲೋಕದ ಬೆಳಕಿನಲ್ಲಿ ನಡೆವ ಇವರಿಗೆ ಸಾಮಾನ್ಯ ಜನರ ಎಲ್ಲವನ್ನೂ ಹೇಳುವ-ಕೇಳುವ ಚಾಕಚಕ್ಯತೆ ಇದೆ. ಭಾಷೆಯ ಹಿಡಿತ, ಸೊಗಡು, ಅಧ್ಯಯನದಿಂದ ಇವರ ಬರಹಗಳು ಗಟ್ಟಿತನದಿಂದ ಕೂಡಿವೆ.

ಪ್ರಸ್ತುತ ಕನ್ನಡದ ಬಹುಮುಖ ಪ್ರತಿಭೆಯ ಪ್ರಮುಖ ಬರಹಗಾರರಾದ ಇವರು ತಮ್ಮ ಕಥೆ, ಕವನ, ವಿಮರ್ಶೆ, ಅನುವಾದ ಮತ್ತು ಮಕ್ಕಳ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮುಡಿಸಿರುವರು. ಯಾವ ಇಸಂಗೂ ಒಳಗಾಗದೇ ವಯಸ್ಸಿಗೂ ಮೀರಿದ ಗೆಳೆತನ ಇವರದು. ವೃತ್ತಿ-ಪ್ರವೃತ್ತಿ, ಬದುಕು-ಬರಹದಲ್ಲಿ ಸಾಧನೆಯ ಸಿದ್ದಿ ಇವರದಾಗಿದೆ. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಆಕಾಶವಾಣಿಯಲ್ಲಿ ದುಡಿಯುತ್ತಿದ್ದ ಬಸು, ಪದೋನ್ನತಿ ಹೊಂದುತ್ತಾ ಈಗ ಆಕಾಶವಾಣಿ ಧಾರವಾಡಕ್ಕೇ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿರುತ್ತದೆ. ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬೇವಿನಗಿಡದ ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಆಕಾಶವಾಣಿಯಲ್ಲಿ ಅವಕಾಶ ನೀಡಿ ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತ ಸತ್ಯ. ಅದಕ್ಕೇ ಸದಾ ನಗು ಮೊಗದ ಈ ಭಾವ ಜೀವಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ವಿಶ್ವಾಸ.

ಹಿಂದಿನ ದಿನಗಳಲ್ಲಿ ಈ ರೇಡಿಯೋ ಸ್ಟೇಷನ್ ಎಂದರೆ ಕೆಲವರದೇ ಸೊತ್ತಿನಂತಿತ್ತು. ಸಾಮಾನ್ಯ ಜನಕ್ಕೆ ಅವಕಾಶವೇ ಇಲ್ಲದಂತಿತ್ತು. ಕಳುಹಿಸಿದ ಕವಿತೆಗಳ ಲಕೋಟೆಗಳು ಆ ಅಧಿಕಾರಶಾಹಿಗಳ ಟೇಬಲ್ಲಿನ ಡ್ರಾವರ್‌ನಲ್ಲಿಯೇ ತೆಪ್ಪಗೆ ಬಿದ್ದಿರುತಿತ್ತು. ಇವರ ಅಧಿಕಾರಾವಧಿಯಲ್ಲಿ ಇದಕ್ಕೆ ಅವಕಾಶವಿಲ್ಲದೇ ತೆಪ್ಪಗಿದ್ದ ಲಕೋಟೆಗಳೆಲ್ಲಾ ಮರು ಜೀವ ಪಡೆಯಿತು. ತಮ್ಮ ಕಛೇರಿಗೆ ಬಂದ ಹೊಸ ಹೊಸ ಪ್ರತಿಭೆಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅವರನ್ನೂ ಪರಿಚಯಿಸಿದರು. ಕೆಲವೇ ವರ್ಷಗಳ ಕಾಲ ಕಾರವಾರದ ಕಾಡೊಡಲ-ಕಡಲೊಡಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಅಲ್ಲಿಯ ಸಾಂಸ್ಕೃತಿಕ ಲೋಕದ ಜನ ಈ ಅಧಿಕಾರಿ, ಅಕ್ಷರ ಪ್ರೇಮಿ ಮತ್ತು ಮಾನವೀಯ ಮನೋಭಾವದ ಮನುಷ್ಯನನ್ನು ಎಂದಿಗೂ ಮರೆಯಲಾರರು. ಇವರು ಕಾರ್ಯ ನಿರ್ವಹಿಸಿದ ಆಕಾಶವಾಣಿ ಕೇಂದ್ರಕ್ಕೂ ಹೆಸರು ತಂದುಕೊಟ್ಟಿರುವರು. 2015, 16, 17 ಹಾಗೂ 2020 ರಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದರೆ, 2017 ಮತ್ತು 2018ರಲ್ಲಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಕೀರ್ತಿ ಪತಾಕೆಯನ್ನು ಹಾರಿಸಿರುವುದು. ಅದಕೇ ಇವರ ಇಲಾಖೆಯಲ್ಲೂ ಇವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಕನ್ನಡ ಸಾಹಿತ್ಯಕ್ಕೆ ಇವರು ಈಗಾಗಲೇ ಹಲವು ಕೊಡುಗೆಗಳನ್ನು ನೀಡಿರುವರು. ‘ಕನಸು’ ‘ಇಳೆಯ ಅರ್ಥ’ ಇವರ ಕವನ ಸಂಕಲನಗಳಾದರೆ, ‘ತಾಯವ್ವ’ ‘ಬಾಳೆಯ ಕಂಬ’ ‘ಹೊಡಿ ಚಕ್ಕಡಿ’ ‘ಉಗುಳುಬುಟ್ಟಿ’ ಮತ್ತು ‘ನೆರಳಿಲ್ಲದ ಮರ’ ಇವು ಕಥಾಸಂಕಲನಗಳು. ಮಕ್ಕಳ ಸಾಹಿತ್ಯದಲ್ಲಿಯೂ ಇವರ ಪ್ರತಿಭೆ ಎದ್ದು ಕಾಣುತ್ತದೆ. ‘ನಾಳೆಯ ಸೂರ್ಯ’ ‘ಓಡಿ ಹೋದ ಹುಡುಗ’ ‘ಬೀಳದ ಗಡಿಯಾರ’ ಇವು ಇವರ ಬಾಲ ಸಾಹಿತ್ಯದ ಕೃತಿಗಳಾಗಿವೆ. ‘ಹಕ್ಕಿ ಗಮನದ ಹಾದಿ’ ‘ಕಲ್ಲು ಸಕ್ಕರೆ’ ‘ಕಾಲದ ಕನ್ನಡಿ’ ‘ಶತಮಾನದ ಕವಿ ಬೇಂದ್ರೆ’ ‘ಬೇಂದ್ರೆ ನಿಸರ್ಗ ಕಾವ್ಯ’ ‘ಕನಕದಾಸರು ಮತ್ತು ಮಧುರ ಚೆನ್ನರು’ ‘ಸನದಿ ವ್ಯಕ್ತಿತ್ವ’ ಇವು ಬಸು ಅವರ ವಿಮರ್ಶೆಯ ಸಂಕಲನಗಳು. ಅನುವಾದ ಕ್ಷೇತ್ರಕ್ಕೂ ಇವರು ಬೆಳಕನ್ನು ಚೆಲ್ಲಿರುವರು. ‘ಅಪರಾಜಿತೆ’ ‘ದಕ್ಕಿದ ಹಾಡು’ ‘ಕಮಲಾದೇವಿ ಚಟ್ಟೋಪಾಧ್ಯಾಯ’ ‘ಹಸಿರು ಕಾಡಿನ ಗೆಳೆಯರು’ ‘ನಮ್ಮ ಮಂದಿ’ ‘ಸ್ವಾತಂತ್ರ‍್ಯ ಚಳುವಳಿ ಹಾಗೂ ಭಾರತೀಯ ಮುಸ್ಲಿಮರು’ ‘ಸಮಕಾಲೀನ ಭಾರತೀಯ ಕಥೆಗಳು’ ‘ಸಾಮರಸೆಟ್ ಮಾಮ್ ಕಥೆಗಳು’ ಇವು ಬೇವಿನಗಿಡದರ ಅನುವಾದಿತ ಕೃತಿಗಳು. ಇದಲ್ಲದೇ ಕೆಲ ಸಂಪಾದಿತ ಕ್ರತಿಗಳನ್ನೂ ಡಾ. ಬಸೂ ಬೇವಿನಗಿಡದ ಕನ್ನಡಮ್ಮನ ಮಡಿಲಿಗೆ ಅರ್ಪಿಸಿರುವರು. ತಮ್ಮ 57 ನೇ ವಯಸ್ಸಿನಲ್ಲಿಯೇ ಮೂವತ್ತಕ್ಕೂ ಮೀರಿ ಕೃತಿಗಳನ್ನು ರಚಿಸಿದ ಬೇವಿನಗಿಡದ ನಿಜಕ್ಕೂ ಅಭಿನಂದನೀಯರು.

ತಮ್ಮ ಎಲ್ಲಾ ಬರಹಗಳೆಂದರೂ ಇವರಿಗೆ ಇಷ್ಟವೇ ; ಆದರೆ ಕಥೆಗಳೆಂದರೆ ಬಹು ಖುಷಿ. ತಮ್ಮ ‘ನೆರಳಿಲ್ಲದ ಮರ’ ಕಥಾ ಸಂಕಲನದ ತಮ್ಮ ಮಾತಿನಲ್ಲಿ ಕಥೆ ಹುಟ್ಟುವ ಪರಿಯನ್ನು ವಿವರಿಸುತ್ತಾ “ಅನೇಕ ಕೆಲಸಗಳ ಮಧ್ಯೆ ಕತೆಗಳು ನನ್ನನ್ನು ಕಾಡಿಸುವ ಹಾಗೂ ಅವು ತಮ್ಮಷ್ಟಕ್ಕೆ ತಾವು ಬೆಳೆದುಕೊಳ್ಳುವ ಪರಿ ನನ್ನಲ್ಲಿಯೂ ವಿಸ್ಮಯ ಹುಟ್ಟಿಸುವಂತಹದ್ದು. ಅವು ಹೇಳದೇ ಕೇಳದೇ ಬರುತ್ತದೆ. ತಮಗೆ ಇಷ್ಟವಾಗುವ ಹಾಗೆ ಬರೆಸಿಕೊಳ್ಳುತ್ತದೆ. ಆಮೇಲೆ ‘ನೀನ್ಯಾಕೋ, ನಿನ್ನ ಹಂಗ್ಯಾಕೋ’ ಎಂದು ಕತೆಗಾರನನ್ನು ಅತ್ತ ದೂಡಿ ತಮ್ಮೊಳಗೆ ಹುದುಗಿರುವ ಅರ್ಥ-ಆಯಾಮಗಳನ್ನು ಹೇಳಿರೆಂದು ಓದುಗರ ಮತ್ತು ವಿಮರ್ಶಕರ ಬೆನ್ನು ಹತ್ತುತ್ತವೆ. ಅವರು ಕೊಟ್ಟ ಅರ್ಥಗಳನ್ನು ನನಗೆ ತಿರುಗಿಸುತ್ತ, ಕತೆಗಾರನನ್ನು ಆಶ್ಚರ್ಯಕ್ಕೀಡು ಮಾಡುತ್ತಾ ಅವನ ಸಾರ್ಥಕತೆಯನ್ನು ಹೆಚ್ಚಿಸುತ್ತದೆ” ಎಂದಿರುವುದು.

ಇವರ ಕಥೆಗಳ ಕುರಿತು ಕನ್ನಡದ ನಾಮಾಂಕಿತರು ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ. ರಾಜೇಂದ್ರ ಚೆನ್ನಿ : ಬಸು ಬೇವಿನಗಿಡದ ಅವರಲ್ಲಿ ನನಗೆ ಇಷ್ಟವಾದದ್ದೆಂದರೆ ಅವರು ಅನುಭವ ಲೋಕಕ್ಕೆ ತಕ್ಕುದಾದ ಭಾಷೆಯ ರೂಪಕ ಗುಣ. ಘಟನೆಗಳನ್ನು ಮೀರಿಯೂ ಬಹಳ ಕಾಲದವರೆಗೆ ನಮ್ಮನ್ನು ಆವರಿಸಿಕೊಳ್ಳುವ ಶಕ್ತಿ ಅವರ ಕತೆಗಳಿಗೆ ಇದೆ. ಅವರ ಕತೆಗಳ ಇನ್ನೊಂದು ಗುಣವೆಂದರೆ ನಿರೂಪಣೆಯ ಲವಲವಿಕೆ.

ಡಾ.ಸಿ.ಎನ್. ರಾಮಚಂದ್ರನ್ : ಮೊದಲಿನಿಂದಲೂ ಬಸು ಅವರಿಗೆ ಕಥೆಗಳನ್ನು ಆಕರ್ಷಕವಾಗಿ ಕಟ್ಟುವ ಕಲೆ ಇದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಸೊಗಡು ಜೀವಂತಿಕೆ ಇವರ ಪ್ರತಿ ಕಥೆಯಲ್ಲಿಯೂ ಕಂಡುಬರುತ್ತದೆ. ಕಾಲ ಪಲ್ಲಟವನ್ನು ಅದರೊಳಗೆ ಬರುವ ಮೌಲ್ಯ ಪಲ್ಲಟವನ್ನು ಅವರ ಕತೆಗಳು ಅದ್ಭುತವಾಗಿ ಹಿಡಿದಿಟ್ಟಿರುತ್ತದೆ.

ಟಿ.ಪಿ.ಅಶೋಕ : ಆಧುನಿಕತೆಯ ಪ್ರವೇಶದಿಂದಾಗಿ ಗ್ರಾಮೀಣ ಬದುಕು ಪಲ್ಲಟಗೊಳ್ಳುವ ಪರಿ ಮತ್ತು ಪರಿಣಾಮಗಳ ಶೋಧ ಬಸು ಬೇವಿನಗಿಡದ ಅವರ ಕಥೆಗಳ ಒಂದು ಪ್ರಧಾನ ಆಶಯ.

ಸುನಂದಾ ಕಡಮೆ : ಹದವಾದ ಭಾಷೆ, ಸಾಮಾಜಿಕತೆಗೆ ತುಡಿಯುವ ಸಂಯಮ, ಅತಿ ಸೂಕ್ಷ್ಮ ವಿವರ ಹಾಗೂ ತಿಳಿ ವಿನೋದ ಶೈಲಿಯ ಸಂದರ್ಭಗಳು ಬಸು ಬೇವಿನಗಿಡದ ಕತೆಗಳಲ್ಲಿ ಹುಬೇ ಹುಬಾಗಿ ಕಣ್ಣಿಗೆ ಕಟ್ಟುತ್ತದೆ.

ವಿವೇಕ ಶಾನಭಾಗ : ಅನುಭವವನ್ನು ಬಹು ವಿವರಗಳಲ್ಲಿ ಕಟ್ಟಿ ಕೊಡುವ ಕಲೆ ಬಸು ಅವರಲ್ಲಿರುವದರಿಂದ ಇಲ್ಲಿಯ ಕಥೆಗಳಿಗೆ ಹೆಚ್ಚಿನ ಸೌಷ್ಠವ ಒದಗಿ ಬಂದಿದೆ. ಅವು ಎಡಬಿಡದೇ ಓದಿಸಿಕೊಳ್ಳುತ್ತದೆ.

ವಿಷ್ಣು ನಾಯ್ಕ : ಕಥೆಯನ್ನು ಕವಿತೆಯಂತೆ ಬರೆಯಬಲ್ಲ ಕೌಶಲ್ಯ ಬಸು ಅವರಿಗೆ ಸಿದ್ಧಿಸಿದೆ. ಅವರು ಕತೆಗಳು ನೆಲಮುಖಿಯಾಗಿ ಚಲಿಸುತ್ತದೆ.

ಡಾ. ವಿನಯಾ : ಗ್ರಾಮ- ನಗರ ಎಂಬ ವರ್ಗೀಕೃತ ಜೀವನ ಇಲ್ಲವಾಗುತ್ತಿರುವ ಸಂಕೀರ್ಣ ಕಾಲದಲ್ಲಿ ವೈಭವೀಕರಿಸಲ್ಪಟ್ಟ ಗ್ರಾಮೀಣ ಪರಿಕಲ್ಪನೆಯ ಪೂರ್ವಕಲ್ಪಿತಗಳನ್ನು ನಾಜೂಕಾಗಿ ಮೀರುವುದು ಬಸು ಅವರ ಕತೆಗಳ ಮುಖ್ಯ ಕಾಳಜಿಗಳಲ್ಲೊಂದು. ಹಳ್ಳಿಯ ಬದುಕುಗಳ ಛಿದ್ರತೆಯ ಮೂಲಕವೇ ಗ್ಲೋಬಲ್ ಎಕಾನಮಿ ಉಂಟು ಮಾಡುತ್ತಿರುವ ಅವಾಂತರಗಳನ್ನು ಅವರ ಕತೆಗಳು ಕಾಣಿಸುತ್ತದೆ.

ಡಾ. ಬಸೂ ಬೇವಿನಗಿಡದರ ಈ ಎಲ್ಲಾ ಕನ್ನಡ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿದೆ. ಎರಡು ಸಲ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ, ಸಾರಂಗಿ ವೆಂಕಟರಾಮಯ್ಯ ಹಾಗೂ ನಿಡಸಾಲೆ ಪುಟ್ಟಸ್ವಾಮಯ್ಯ ದತ್ತಿ ಪ್ರಶಸ್ತಿಗಳು, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪುರಸ್ಕಾರ, ಬೆಳಗಾವಿಯ ಸಾಹಿತ್ಯ ಪ್ರತಿಷ್ಟಾನದ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಜಿ.ವಿ.ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಹರ್ಡೇಕರ್ ಮಂಜಪ್ಪ ಪ್ರಶಸ್ತಿ, ಸೇಡಂ ನ ಅಮ್ಮ ಪ್ರಶಸ್ತಿ, ತುಮಕೂರಿನ ವೀಚೀ ಸಾಹಿತ್ಯ ಪ್ರಶಸ್ತಿ, ಅಜೂರ ಪ್ರಶಸ್ತಿ, ತೇಜಸ್ವಿ ಕಟ್ಟಿಮನಿ ಕಥಾ ಪ್ರಶಸ್ತಿ, ಬೆಂಗಳೂರಿನ ಗಾಂಧೀ ಕಥಾ ಪ್ರಶಸ್ತಿ ಮತ್ತು ಅಡ್ವೈಸರ್ ಪುಸ್ತಕ ಪ್ರಶಸ್ತಿ ಹೀಗೆ ಹತ್ತು ಹಲವು. ಕೆಲ ವಿಶ್ವವಿದ್ಯಾಲಯ ಹಾಗೂ ಶಾಲಾ ವಿಭಾಗದಲ್ಲಿ ಇವರ ಅನೇಕ ಕಥೆ ಮತ್ತು ಕವಿತೆಗಳು ಪಠ್ಯವಾದುದಲ್ಲದೇ ಕೆಲ ಕಥೆ, ಕವಿತೆಗಳು ಹಿಂದಿ, ಇಂಗ್ಲಿಷ್ ಮತ್ತು ಮರಾಠಿಗೆ ಅನುವಾದಗೊಂಡಿರುವುದಕ್ಕೆ ಬಸು ಅಭಿನಂದನೀಯರು.

ಇವರ ಈ ಎಲ್ಲಾ ಸಾಹಿತ್ಯ, ಬದುಕು-ಬರಹ, ವೃತ್ತಿ-ಪ್ರವೃತ್ತಿಗಳಿಗೆ ಸ್ಪೂರ್ತಿದಾಯಕರಾದ ಪತ್ನಿ ಉಮಾ, ಮಗ ರಾಕೇಶ, ಮಗಳು-ಅಳಿಯ ಚೈತ್ರಾ-ವಿನಯ್ ಇವರಿಂದ ಒಡ ಗೂಡಿದ ತುಂಬು ಸಂಸಾರಕ್ಕೆ ಶುಭ ಕೋರಿ ಅಭಿನಂದಿಸುವೆನು.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಡಾ.ಬಸು ಬೇವಿನಗಿಡದ ಸರ್ ರವರ ಸೃಜನಾತ್ಮಕ ಮನೋಭಾವ ಹಾಗೂ ಪ್ರತಿಭೆಗೆ ಗೌರವಿಸುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಆಕಾಶವಾಣಿ ಕಾರವಾರದಲ್ಲಿ ಇದ್ದಾಗಿಂದ ಬಲ್ಲೆವು ತುಂಬಾನೆ ಖುಷಿಯಾಗುತ್ತೆ.ಸುಂದರ ಬರಹ…ಪ್ರಕಾಶ ಸರ್…

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...