Homeಅಂಕಣಗಳುನಾಗಸುಧೆ ಜಗಲಿಯಿಂದಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಹೊಸ ಪ್ರತಿಭೆಗಳಿಗೆ ಬೆಲ್ಲವಾದ ಬೇವಿನಗಿಡದ

ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬೇವಿನಗಿಡದ ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಅವಕಾಶ ನೀಡಿ ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತ ಸತ್ಯ.

- Advertisement -
- Advertisement -

ಉಂಡದ್ದು ಉಗುಳಿದ್ದು
ತಿಂದಿದ್ದು ತೇಗಿದ್ದು
ಎಲ್ಲವನೂ ರಸ್ತೆಗಳು
ಬಾಯಿಬಿಡದೇ ನುಂಗಿಕೊಂಡಿದೆ
ಅವು ಬಾಯಿಬಿಟ್ಟಾಗ
ಇದ್ದೇ ಇದೆಯಲ್ಲ
ತೇಪೆ ಹಚ್ಚಿ ತುಪ್ಪ ಸವರುವುದು
ಹಿಡಿ ಮಣ್ಣು ಹಾಕಿ ಮುಚ್ಚುವುದು

ತಮ್ಮ ‘ಇಳೆಯ ಅರ್ಥ’ ಕವನ ಸಂಕಲನದ ‘ಹೊಲ ಮಾರಿ ಉಳಿದ ಬೇರೀಜು’ ಕವನದಲ್ಲಿ ಡಾ. ಬಸು ಬೇವಿನಗಿಡದ ಜಗದ ಭ್ರಷ್ಟಾಚಾರ ಮತ್ತು ಮಾನವೀಯ ಸಂಬಂಧದ ಪಲ್ಲಟಗಳ ಕುರಿತು ಮನಮುಟ್ಟುವಂತೆ ಹೇಳಿರುವರು. ಇವರ ಬರಹಗಳೇ ಹೀಗೆ ; ಮೇಲ್ನೋಟಕ್ಕೆ ಸೀದಾ ಸಾದಾ ಕಂಡರೂ ಒಳಗೊಳಗೇ ಬಿಸಿಲಿನ ಕುದಿತದ ಛಾಯೆ ಇದೆ ; ಬರಹಗಳಂತೆ ಇವರೂ ಸಹ.

ಸವದತ್ತಿ ತಾಲೂಕಿನ ಮುನವಳ್ಳಿಯ ಡಾ. ಬೇವಿನಗಿಡದ ಬಡತನದ ಬೇಗೆಯಲೇ ಬೆಳೆದವರು. ಪುಟ್ಟದೊಂದು ಕೃಷಿ ಕುಟುಂಬಕ್ಕೆ ಏಳು ಜನ ಒಡಹುಟ್ಟಿದವರು. ನೀರೇ ಇಲ್ಲದ ನಾಲ್ಕು ಎಕರೆ ಒಣ ಭೂಮಿ. ಅಣ್ಣ ಕೂಲಿ ನಾಲಿ ಮಾಡಿದ ; ಸೋದರಮಾವ ಕೈ ಹಿಡಿದು ದಡ ಸೇರಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಬೇಂದ್ರೆ ಕಾವ್ಯದಲ್ಲಿ ನಿಸರ್ಗ’ದಲ್ಲಿ ಪಿಎಚ್‌ಡಿ ಪದವಿ ಪಡೆದರು. ಅವರಿಗೆ ಕನ್ನಡ ಮತ್ತು ಅಕ್ಷರ ಪ್ರೀತಿ ಹಾಗೂ ಬರಹ ಉಸಿರಿನಷ್ಟೇ ಸಲೀಸಾಗಿದೆ. ವಿಶಾಲವಾದ ಅನುಭವವನ್ನು ಕಂಡುಂಡದ್ದರಿಂದ ಇವರ ಬರಹದಲ್ಲಿ ಪ್ರೀತಿ, ಮಮತೆ, ಮಾನವೀಯತೆ ಮತ್ತು ಗ್ರಾಮೀಣ ಬದುಕಿನ ಒಳನೋಟಗಳು ಪುಟಿದೇಳುತ್ತದೆ. ಯಾರಿಗೂ ನೋವಾಗದ ಹಾಗೆ ಎಲ್ಲರೊಂದಿಗೂ ಬೆರೆತು ಅಕ್ಷರ ಲೋಕದ ಬೆಳಕಿನಲ್ಲಿ ನಡೆವ ಇವರಿಗೆ ಸಾಮಾನ್ಯ ಜನರ ಎಲ್ಲವನ್ನೂ ಹೇಳುವ-ಕೇಳುವ ಚಾಕಚಕ್ಯತೆ ಇದೆ. ಭಾಷೆಯ ಹಿಡಿತ, ಸೊಗಡು, ಅಧ್ಯಯನದಿಂದ ಇವರ ಬರಹಗಳು ಗಟ್ಟಿತನದಿಂದ ಕೂಡಿವೆ.

ಪ್ರಸ್ತುತ ಕನ್ನಡದ ಬಹುಮುಖ ಪ್ರತಿಭೆಯ ಪ್ರಮುಖ ಬರಹಗಾರರಾದ ಇವರು ತಮ್ಮ ಕಥೆ, ಕವನ, ವಿಮರ್ಶೆ, ಅನುವಾದ ಮತ್ತು ಮಕ್ಕಳ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮುಡಿಸಿರುವರು. ಯಾವ ಇಸಂಗೂ ಒಳಗಾಗದೇ ವಯಸ್ಸಿಗೂ ಮೀರಿದ ಗೆಳೆತನ ಇವರದು. ವೃತ್ತಿ-ಪ್ರವೃತ್ತಿ, ಬದುಕು-ಬರಹದಲ್ಲಿ ಸಾಧನೆಯ ಸಿದ್ದಿ ಇವರದಾಗಿದೆ. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಆಕಾಶವಾಣಿಯಲ್ಲಿ ದುಡಿಯುತ್ತಿದ್ದ ಬಸು, ಪದೋನ್ನತಿ ಹೊಂದುತ್ತಾ ಈಗ ಆಕಾಶವಾಣಿ ಧಾರವಾಡಕ್ಕೇ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿರುತ್ತದೆ. ಆಕಾಶವಾಣಿಯಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಬೇವಿನಗಿಡದ ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಆಕಾಶವಾಣಿಯಲ್ಲಿ ಅವಕಾಶ ನೀಡಿ ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯದ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತ ಸತ್ಯ. ಅದಕ್ಕೇ ಸದಾ ನಗು ಮೊಗದ ಈ ಭಾವ ಜೀವಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ವಿಶ್ವಾಸ.

ಹಿಂದಿನ ದಿನಗಳಲ್ಲಿ ಈ ರೇಡಿಯೋ ಸ್ಟೇಷನ್ ಎಂದರೆ ಕೆಲವರದೇ ಸೊತ್ತಿನಂತಿತ್ತು. ಸಾಮಾನ್ಯ ಜನಕ್ಕೆ ಅವಕಾಶವೇ ಇಲ್ಲದಂತಿತ್ತು. ಕಳುಹಿಸಿದ ಕವಿತೆಗಳ ಲಕೋಟೆಗಳು ಆ ಅಧಿಕಾರಶಾಹಿಗಳ ಟೇಬಲ್ಲಿನ ಡ್ರಾವರ್‌ನಲ್ಲಿಯೇ ತೆಪ್ಪಗೆ ಬಿದ್ದಿರುತಿತ್ತು. ಇವರ ಅಧಿಕಾರಾವಧಿಯಲ್ಲಿ ಇದಕ್ಕೆ ಅವಕಾಶವಿಲ್ಲದೇ ತೆಪ್ಪಗಿದ್ದ ಲಕೋಟೆಗಳೆಲ್ಲಾ ಮರು ಜೀವ ಪಡೆಯಿತು. ತಮ್ಮ ಕಛೇರಿಗೆ ಬಂದ ಹೊಸ ಹೊಸ ಪ್ರತಿಭೆಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅವರನ್ನೂ ಪರಿಚಯಿಸಿದರು. ಕೆಲವೇ ವರ್ಷಗಳ ಕಾಲ ಕಾರವಾರದ ಕಾಡೊಡಲ-ಕಡಲೊಡಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಅಲ್ಲಿಯ ಸಾಂಸ್ಕೃತಿಕ ಲೋಕದ ಜನ ಈ ಅಧಿಕಾರಿ, ಅಕ್ಷರ ಪ್ರೇಮಿ ಮತ್ತು ಮಾನವೀಯ ಮನೋಭಾವದ ಮನುಷ್ಯನನ್ನು ಎಂದಿಗೂ ಮರೆಯಲಾರರು. ಇವರು ಕಾರ್ಯ ನಿರ್ವಹಿಸಿದ ಆಕಾಶವಾಣಿ ಕೇಂದ್ರಕ್ಕೂ ಹೆಸರು ತಂದುಕೊಟ್ಟಿರುವರು. 2015, 16, 17 ಹಾಗೂ 2020 ರಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದರೆ, 2017 ಮತ್ತು 2018ರಲ್ಲಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಕೀರ್ತಿ ಪತಾಕೆಯನ್ನು ಹಾರಿಸಿರುವುದು. ಅದಕೇ ಇವರ ಇಲಾಖೆಯಲ್ಲೂ ಇವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಕನ್ನಡ ಸಾಹಿತ್ಯಕ್ಕೆ ಇವರು ಈಗಾಗಲೇ ಹಲವು ಕೊಡುಗೆಗಳನ್ನು ನೀಡಿರುವರು. ‘ಕನಸು’ ‘ಇಳೆಯ ಅರ್ಥ’ ಇವರ ಕವನ ಸಂಕಲನಗಳಾದರೆ, ‘ತಾಯವ್ವ’ ‘ಬಾಳೆಯ ಕಂಬ’ ‘ಹೊಡಿ ಚಕ್ಕಡಿ’ ‘ಉಗುಳುಬುಟ್ಟಿ’ ಮತ್ತು ‘ನೆರಳಿಲ್ಲದ ಮರ’ ಇವು ಕಥಾಸಂಕಲನಗಳು. ಮಕ್ಕಳ ಸಾಹಿತ್ಯದಲ್ಲಿಯೂ ಇವರ ಪ್ರತಿಭೆ ಎದ್ದು ಕಾಣುತ್ತದೆ. ‘ನಾಳೆಯ ಸೂರ್ಯ’ ‘ಓಡಿ ಹೋದ ಹುಡುಗ’ ‘ಬೀಳದ ಗಡಿಯಾರ’ ಇವು ಇವರ ಬಾಲ ಸಾಹಿತ್ಯದ ಕೃತಿಗಳಾಗಿವೆ. ‘ಹಕ್ಕಿ ಗಮನದ ಹಾದಿ’ ‘ಕಲ್ಲು ಸಕ್ಕರೆ’ ‘ಕಾಲದ ಕನ್ನಡಿ’ ‘ಶತಮಾನದ ಕವಿ ಬೇಂದ್ರೆ’ ‘ಬೇಂದ್ರೆ ನಿಸರ್ಗ ಕಾವ್ಯ’ ‘ಕನಕದಾಸರು ಮತ್ತು ಮಧುರ ಚೆನ್ನರು’ ‘ಸನದಿ ವ್ಯಕ್ತಿತ್ವ’ ಇವು ಬಸು ಅವರ ವಿಮರ್ಶೆಯ ಸಂಕಲನಗಳು. ಅನುವಾದ ಕ್ಷೇತ್ರಕ್ಕೂ ಇವರು ಬೆಳಕನ್ನು ಚೆಲ್ಲಿರುವರು. ‘ಅಪರಾಜಿತೆ’ ‘ದಕ್ಕಿದ ಹಾಡು’ ‘ಕಮಲಾದೇವಿ ಚಟ್ಟೋಪಾಧ್ಯಾಯ’ ‘ಹಸಿರು ಕಾಡಿನ ಗೆಳೆಯರು’ ‘ನಮ್ಮ ಮಂದಿ’ ‘ಸ್ವಾತಂತ್ರ‍್ಯ ಚಳುವಳಿ ಹಾಗೂ ಭಾರತೀಯ ಮುಸ್ಲಿಮರು’ ‘ಸಮಕಾಲೀನ ಭಾರತೀಯ ಕಥೆಗಳು’ ‘ಸಾಮರಸೆಟ್ ಮಾಮ್ ಕಥೆಗಳು’ ಇವು ಬೇವಿನಗಿಡದರ ಅನುವಾದಿತ ಕೃತಿಗಳು. ಇದಲ್ಲದೇ ಕೆಲ ಸಂಪಾದಿತ ಕ್ರತಿಗಳನ್ನೂ ಡಾ. ಬಸೂ ಬೇವಿನಗಿಡದ ಕನ್ನಡಮ್ಮನ ಮಡಿಲಿಗೆ ಅರ್ಪಿಸಿರುವರು. ತಮ್ಮ 57 ನೇ ವಯಸ್ಸಿನಲ್ಲಿಯೇ ಮೂವತ್ತಕ್ಕೂ ಮೀರಿ ಕೃತಿಗಳನ್ನು ರಚಿಸಿದ ಬೇವಿನಗಿಡದ ನಿಜಕ್ಕೂ ಅಭಿನಂದನೀಯರು.

ತಮ್ಮ ಎಲ್ಲಾ ಬರಹಗಳೆಂದರೂ ಇವರಿಗೆ ಇಷ್ಟವೇ ; ಆದರೆ ಕಥೆಗಳೆಂದರೆ ಬಹು ಖುಷಿ. ತಮ್ಮ ‘ನೆರಳಿಲ್ಲದ ಮರ’ ಕಥಾ ಸಂಕಲನದ ತಮ್ಮ ಮಾತಿನಲ್ಲಿ ಕಥೆ ಹುಟ್ಟುವ ಪರಿಯನ್ನು ವಿವರಿಸುತ್ತಾ “ಅನೇಕ ಕೆಲಸಗಳ ಮಧ್ಯೆ ಕತೆಗಳು ನನ್ನನ್ನು ಕಾಡಿಸುವ ಹಾಗೂ ಅವು ತಮ್ಮಷ್ಟಕ್ಕೆ ತಾವು ಬೆಳೆದುಕೊಳ್ಳುವ ಪರಿ ನನ್ನಲ್ಲಿಯೂ ವಿಸ್ಮಯ ಹುಟ್ಟಿಸುವಂತಹದ್ದು. ಅವು ಹೇಳದೇ ಕೇಳದೇ ಬರುತ್ತದೆ. ತಮಗೆ ಇಷ್ಟವಾಗುವ ಹಾಗೆ ಬರೆಸಿಕೊಳ್ಳುತ್ತದೆ. ಆಮೇಲೆ ‘ನೀನ್ಯಾಕೋ, ನಿನ್ನ ಹಂಗ್ಯಾಕೋ’ ಎಂದು ಕತೆಗಾರನನ್ನು ಅತ್ತ ದೂಡಿ ತಮ್ಮೊಳಗೆ ಹುದುಗಿರುವ ಅರ್ಥ-ಆಯಾಮಗಳನ್ನು ಹೇಳಿರೆಂದು ಓದುಗರ ಮತ್ತು ವಿಮರ್ಶಕರ ಬೆನ್ನು ಹತ್ತುತ್ತವೆ. ಅವರು ಕೊಟ್ಟ ಅರ್ಥಗಳನ್ನು ನನಗೆ ತಿರುಗಿಸುತ್ತ, ಕತೆಗಾರನನ್ನು ಆಶ್ಚರ್ಯಕ್ಕೀಡು ಮಾಡುತ್ತಾ ಅವನ ಸಾರ್ಥಕತೆಯನ್ನು ಹೆಚ್ಚಿಸುತ್ತದೆ” ಎಂದಿರುವುದು.

ಇವರ ಕಥೆಗಳ ಕುರಿತು ಕನ್ನಡದ ನಾಮಾಂಕಿತರು ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಾ. ರಾಜೇಂದ್ರ ಚೆನ್ನಿ : ಬಸು ಬೇವಿನಗಿಡದ ಅವರಲ್ಲಿ ನನಗೆ ಇಷ್ಟವಾದದ್ದೆಂದರೆ ಅವರು ಅನುಭವ ಲೋಕಕ್ಕೆ ತಕ್ಕುದಾದ ಭಾಷೆಯ ರೂಪಕ ಗುಣ. ಘಟನೆಗಳನ್ನು ಮೀರಿಯೂ ಬಹಳ ಕಾಲದವರೆಗೆ ನಮ್ಮನ್ನು ಆವರಿಸಿಕೊಳ್ಳುವ ಶಕ್ತಿ ಅವರ ಕತೆಗಳಿಗೆ ಇದೆ. ಅವರ ಕತೆಗಳ ಇನ್ನೊಂದು ಗುಣವೆಂದರೆ ನಿರೂಪಣೆಯ ಲವಲವಿಕೆ.

ಡಾ.ಸಿ.ಎನ್. ರಾಮಚಂದ್ರನ್ : ಮೊದಲಿನಿಂದಲೂ ಬಸು ಅವರಿಗೆ ಕಥೆಗಳನ್ನು ಆಕರ್ಷಕವಾಗಿ ಕಟ್ಟುವ ಕಲೆ ಇದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಸೊಗಡು ಜೀವಂತಿಕೆ ಇವರ ಪ್ರತಿ ಕಥೆಯಲ್ಲಿಯೂ ಕಂಡುಬರುತ್ತದೆ. ಕಾಲ ಪಲ್ಲಟವನ್ನು ಅದರೊಳಗೆ ಬರುವ ಮೌಲ್ಯ ಪಲ್ಲಟವನ್ನು ಅವರ ಕತೆಗಳು ಅದ್ಭುತವಾಗಿ ಹಿಡಿದಿಟ್ಟಿರುತ್ತದೆ.

ಟಿ.ಪಿ.ಅಶೋಕ : ಆಧುನಿಕತೆಯ ಪ್ರವೇಶದಿಂದಾಗಿ ಗ್ರಾಮೀಣ ಬದುಕು ಪಲ್ಲಟಗೊಳ್ಳುವ ಪರಿ ಮತ್ತು ಪರಿಣಾಮಗಳ ಶೋಧ ಬಸು ಬೇವಿನಗಿಡದ ಅವರ ಕಥೆಗಳ ಒಂದು ಪ್ರಧಾನ ಆಶಯ.

ಸುನಂದಾ ಕಡಮೆ : ಹದವಾದ ಭಾಷೆ, ಸಾಮಾಜಿಕತೆಗೆ ತುಡಿಯುವ ಸಂಯಮ, ಅತಿ ಸೂಕ್ಷ್ಮ ವಿವರ ಹಾಗೂ ತಿಳಿ ವಿನೋದ ಶೈಲಿಯ ಸಂದರ್ಭಗಳು ಬಸು ಬೇವಿನಗಿಡದ ಕತೆಗಳಲ್ಲಿ ಹುಬೇ ಹುಬಾಗಿ ಕಣ್ಣಿಗೆ ಕಟ್ಟುತ್ತದೆ.

ವಿವೇಕ ಶಾನಭಾಗ : ಅನುಭವವನ್ನು ಬಹು ವಿವರಗಳಲ್ಲಿ ಕಟ್ಟಿ ಕೊಡುವ ಕಲೆ ಬಸು ಅವರಲ್ಲಿರುವದರಿಂದ ಇಲ್ಲಿಯ ಕಥೆಗಳಿಗೆ ಹೆಚ್ಚಿನ ಸೌಷ್ಠವ ಒದಗಿ ಬಂದಿದೆ. ಅವು ಎಡಬಿಡದೇ ಓದಿಸಿಕೊಳ್ಳುತ್ತದೆ.

ವಿಷ್ಣು ನಾಯ್ಕ : ಕಥೆಯನ್ನು ಕವಿತೆಯಂತೆ ಬರೆಯಬಲ್ಲ ಕೌಶಲ್ಯ ಬಸು ಅವರಿಗೆ ಸಿದ್ಧಿಸಿದೆ. ಅವರು ಕತೆಗಳು ನೆಲಮುಖಿಯಾಗಿ ಚಲಿಸುತ್ತದೆ.

ಡಾ. ವಿನಯಾ : ಗ್ರಾಮ- ನಗರ ಎಂಬ ವರ್ಗೀಕೃತ ಜೀವನ ಇಲ್ಲವಾಗುತ್ತಿರುವ ಸಂಕೀರ್ಣ ಕಾಲದಲ್ಲಿ ವೈಭವೀಕರಿಸಲ್ಪಟ್ಟ ಗ್ರಾಮೀಣ ಪರಿಕಲ್ಪನೆಯ ಪೂರ್ವಕಲ್ಪಿತಗಳನ್ನು ನಾಜೂಕಾಗಿ ಮೀರುವುದು ಬಸು ಅವರ ಕತೆಗಳ ಮುಖ್ಯ ಕಾಳಜಿಗಳಲ್ಲೊಂದು. ಹಳ್ಳಿಯ ಬದುಕುಗಳ ಛಿದ್ರತೆಯ ಮೂಲಕವೇ ಗ್ಲೋಬಲ್ ಎಕಾನಮಿ ಉಂಟು ಮಾಡುತ್ತಿರುವ ಅವಾಂತರಗಳನ್ನು ಅವರ ಕತೆಗಳು ಕಾಣಿಸುತ್ತದೆ.

ಡಾ. ಬಸೂ ಬೇವಿನಗಿಡದರ ಈ ಎಲ್ಲಾ ಕನ್ನಡ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿದೆ. ಎರಡು ಸಲ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ, ಸಾರಂಗಿ ವೆಂಕಟರಾಮಯ್ಯ ಹಾಗೂ ನಿಡಸಾಲೆ ಪುಟ್ಟಸ್ವಾಮಯ್ಯ ದತ್ತಿ ಪ್ರಶಸ್ತಿಗಳು, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪುರಸ್ಕಾರ, ಬೆಳಗಾವಿಯ ಸಾಹಿತ್ಯ ಪ್ರತಿಷ್ಟಾನದ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಜಿ.ವಿ.ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಹರ್ಡೇಕರ್ ಮಂಜಪ್ಪ ಪ್ರಶಸ್ತಿ, ಸೇಡಂ ನ ಅಮ್ಮ ಪ್ರಶಸ್ತಿ, ತುಮಕೂರಿನ ವೀಚೀ ಸಾಹಿತ್ಯ ಪ್ರಶಸ್ತಿ, ಅಜೂರ ಪ್ರಶಸ್ತಿ, ತೇಜಸ್ವಿ ಕಟ್ಟಿಮನಿ ಕಥಾ ಪ್ರಶಸ್ತಿ, ಬೆಂಗಳೂರಿನ ಗಾಂಧೀ ಕಥಾ ಪ್ರಶಸ್ತಿ ಮತ್ತು ಅಡ್ವೈಸರ್ ಪುಸ್ತಕ ಪ್ರಶಸ್ತಿ ಹೀಗೆ ಹತ್ತು ಹಲವು. ಕೆಲ ವಿಶ್ವವಿದ್ಯಾಲಯ ಹಾಗೂ ಶಾಲಾ ವಿಭಾಗದಲ್ಲಿ ಇವರ ಅನೇಕ ಕಥೆ ಮತ್ತು ಕವಿತೆಗಳು ಪಠ್ಯವಾದುದಲ್ಲದೇ ಕೆಲ ಕಥೆ, ಕವಿತೆಗಳು ಹಿಂದಿ, ಇಂಗ್ಲಿಷ್ ಮತ್ತು ಮರಾಠಿಗೆ ಅನುವಾದಗೊಂಡಿರುವುದಕ್ಕೆ ಬಸು ಅಭಿನಂದನೀಯರು.

ಇವರ ಈ ಎಲ್ಲಾ ಸಾಹಿತ್ಯ, ಬದುಕು-ಬರಹ, ವೃತ್ತಿ-ಪ್ರವೃತ್ತಿಗಳಿಗೆ ಸ್ಪೂರ್ತಿದಾಯಕರಾದ ಪತ್ನಿ ಉಮಾ, ಮಗ ರಾಕೇಶ, ಮಗಳು-ಅಳಿಯ ಚೈತ್ರಾ-ವಿನಯ್ ಇವರಿಂದ ಒಡ ಗೂಡಿದ ತುಂಬು ಸಂಸಾರಕ್ಕೆ ಶುಭ ಕೋರಿ ಅಭಿನಂದಿಸುವೆನು.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಡಾ.ಬಸು ಬೇವಿನಗಿಡದ ಸರ್ ರವರ ಸೃಜನಾತ್ಮಕ ಮನೋಭಾವ ಹಾಗೂ ಪ್ರತಿಭೆಗೆ ಗೌರವಿಸುವ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ಆಕಾಶವಾಣಿ ಕಾರವಾರದಲ್ಲಿ ಇದ್ದಾಗಿಂದ ಬಲ್ಲೆವು ತುಂಬಾನೆ ಖುಷಿಯಾಗುತ್ತೆ.ಸುಂದರ ಬರಹ…ಪ್ರಕಾಶ ಸರ್…

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...