Homeಮುಖಪುಟಸ್ಟ್ಯಾನ್ ಸ್ವಾಮಿ ಶ್ರದ್ಧಾಂಜಲಿ; ವಿಚಾರಣಾಧೀನ ಕೈದಿಯಾಗಿ ಭಾರತರತ್ನವೊಂದರ ಸಾವು

ಸ್ಟ್ಯಾನ್ ಸ್ವಾಮಿ ಶ್ರದ್ಧಾಂಜಲಿ; ವಿಚಾರಣಾಧೀನ ಕೈದಿಯಾಗಿ ಭಾರತರತ್ನವೊಂದರ ಸಾವು

ಸಾಮಾಜಿಕ ಬದಲಾವಣೆಯ ಒಬ್ಬ ತರಬೇತುದಾರರಾಗಿ ಹಾಗೂ ಸಂಶೋಧಕರಾಗಿ ಸ್ಟ್ಯಾನ್ ಅವರ ನಿಖರತೆಯು ದೇಶದ ಅತ್ಯಂತ ದುರ್ಬಲರಿಗೆ ಮೂಲಭೂತ ಸ್ವಾತಂತ್ರ್ಯವನ್ನು ದೊರಕಿಸಬೇಕು ಎಂಬ ಅವರ ಗಟ್ಟಿಯಾದ ಹಾಗೂ ಸಹಾನುಭೂತಿಯ ದೃಢನಿಶ್ಚಯದೊಂದಿಗೆ ತಳುಕುಹಾಕಿಕೊಂಡಿತ್ತು. ಆ ಸ್ವಾತಂತ್ರ್ಯವನ್ನು ದೊರಕಿಸುವ ಸಲುವಾಗಿ ಸಂವಿಧಾನಬದ್ಧವಾದ ಮೂಲಭೂತ ಹಕ್ಕುಗಳನ್ನು ಅನುಷ್ಠಾನಗೊಳಿಸುವ ಅಗತ್ಯವನ್ನು ಅವರು ಗಟ್ಟಿಯಾಗಿ ವಾದಿಸಿದರು. ಅವರು ಮಧ್ಯಭಾರತದ, ಅದರಲ್ಲೂ ನಿರ್ದಿಷ್ಟವಾಗಿ ಜಾರ್ಖಂಡಿನ ಬುಡಕಟ್ಟು ಜನರ ಹೋರಾಟಗಳ ಕಡೆಗೆ ಹೊರಟರು.

- Advertisement -
- Advertisement -

ನ್ಯಾಯಾಂಗದ ಕಸ್ಟಡಿಯಲ್ಲಿ ನಿನ್ನೆ ನಿಧನರಾದ ಫಾದರ್ ಸ್ಟ್ಯಾನ್ ಸ್ವಾಮಿಯ ಅಂತ್ಯಕ್ರಿಯೆಯನ್ನು ಇಂದು, 6ನೇ ಜುಲೈ 2021ರಂದು ಯುಟ್ಯೂಬ್‌ನಲ್ಲಿ ವೀಕ್ಷಿಸುವಂತಾಯಿತು; ಅವರನ್ನು ಪಾದ್ರಿಯ ಕೆಂಪುಬಟ್ಟೆಯಲ್ಲಿ ಸುತ್ತಿ, ಕೈಯಲ್ಲಿ ಒಂದು ಬಟ್ಟಲು ಇರಿಸಲಾಗಿ, ಸುತ್ತಲೂ ಹೂವುಗಳಿಂದ ಅಲಂಕರಿಸಿ, ಒಂದು ಸುಂದರವಾದ ಶವಪೆಟ್ಟಿಗೆಯಲ್ಲಿ ಮುಂಬಯಿಯ ಸೇಂಟ್ ಪೀಟರ್‍ಸ್‌ನ ಅಲ್ಟಾರ್‌ನಲ್ಲಿ ಇರಿಸಲಾಗಿತ್ತು. ಸ್ಟ್ಯಾನ್ ಅವರ ಮುಖದಲ್ಲಿ ಸದಾಕಾಲ ಕಾಣುತ್ತಿದ್ದ ಪ್ರಸನ್ನಭಾವ ಮತ್ತು ಅವರ ಮುಗುಳ್ನಗು ಕಾಣಲಿಲ್ಲ. ಅವರ ಮುಖ ನೋಡಿದರೆ, ತನ್ನ ದಣಿವಿನಿಂದ ಮುಕ್ತಿ ಪಡೆದ ವ್ಯಕ್ತಿಯ ಮುಖದ ಹಾಗೆ ಕಾಣಿಸುತ್ತಿತ್ತು. ಕಳೆದ ಒಂದು ವರ್ಷದಲ್ಲಿ ಅವರು ಒಬ್ಬ ವಿಚಾರಣಾಧೀನ ಕೈದಿಯಾಗಿ ಮುಂಬಯಿಯ ತಲೋಜಾ ಜೈಲಿನಲ್ಲಿ ಅವರು ಅನುಭವಿಸಿದ ಹಿಂಸೆಯ ಕುರುಹು ಅಲ್ಲಿ ಕಾಣಿಸಲಿಲ್ಲ.

ಒಂದು ವೇಳೆ ಅವರು ನಿನ್ನೆ ಜೈಲಿನಲ್ಲಿ ನಿಧನರಾಗದೇ ಇದ್ದರೆ ಎಂದು ಊಹಿಸಿದಲ್ಲಿ ಹಾಗೂ ಇಂದು ನಡೆಯಬೇಕಿದ್ದ ಜಾಮೀನಿನ ವಿಚಾರಣೆಯಲ್ಲಿ ಪಾಲ್ಗೊಂಡು, ಅವರಿಗೆ ಜಾಮೀನು ಸಿಕ್ಕಿದ್ದಲ್ಲಿ, ಅವರು ತಮ್ಮ ವಿಶಿಷ್ಟ ಮುಗುಳ್ನಗೆಯೊಂದಿಗೆ ನಡೆದುಕೊಂಡು ಹೊರಬರುವುದನ್ನು ನೋಡಬಹುದಿತ್ತು. ಅವರ ಕಣ್‍ಗಳಲ್ಲಿಯ ಹೊಳಪು, ಸುತ್ತಲೂ ಇದ್ದವರನ್ನು ಶಾಂತಗೊಳಿಸುವಂತೆ ಮೂಡುವುದನ್ನು ನೋಡಬಹುದಿತ್ತು. ಆಗ ನಾವು ಹುಡುಕಿದರೂ, ’ನರೇಂದ್ರ ಮೋದಿ ಸರಕಾರವನ್ನು ಹಿಂಸಾತ್ಮಕವಾಗಿ ಉರುಳಿಸಲು ಸಂಚು ರೂಪಿಸುವ’ ಎಂಬ ಅತ್ಯಂತ ಹಾಸ್ಯಾಸ್ಪದವಾದ ಆರೋಪದಡಿ ಅವರನ್ನು ಸಿಕ್ಕಿಸಲು ಸಂಚು ಹೂಡಿದವರ ಮೇಲೆ ಸೇಡು ತೀರಿಸಿಕೊಳ್ಳುವ ಯಾವ ಆಲೋಚನೆಯೂ ಅವರ ಕಂಗಳಲ್ಲಿ ಕಂಡುಬರಲು ಸಾಧ್ಯವಿದ್ದಿರಲಿಲ್ಲ.

1980ರಲ್ಲಿ ನಾನೊಬ್ಬ ವಿದ್ಯಾರ್ಥಿಯಾಗಿ, ಭಾರತೀಯ ಸಾಮಾಜಿಕ ಸಂಸ್ಥೆಯಲ್ಲಿ (ಇಂಡಿಯನ್ ಸೋಷಲ್ ಇನ್ಸ್ಟಿಟ್ಯೂಟ್) ಸಾಮಾಜಿಕ ಬದಲಾವಣೆಗಳ ಬಗ್ಗೆ ನಡೆಯುತ್ತಿದ್ದ ಹಲವಾರು ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದೆ. ಆಗ ಸ್ಟ್ಯಾನ್ ಅಲ್ಲಿಯೇ ಇದ್ದರು. ಅವರು ಅಲ್ಲಿಯ ಹಲವಾರು ಗುಂಪುಗಳೊಂದಿಗೆ ಬೆರೆಯುತ್ತ, ಸಾಮಾಜಿಕ ಸುಧಾರಣೆಯೊಂದಿಗೆ ತೊಡಗಿಸಿಕೊಳ್ಳುವ ತಮ್ಮ ಪ್ರಯತ್ನಕ್ಕೆ ಉಳಿದವರಿಗೂ ನಯವಾಗಿ ಉತ್ತೇಜನ ನೀಡುತ್ತಿದ್ದರು. ನಾವು ಕೇಳಿದಾಗ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ನಿಜವಾದ ಸಾಮಾಜಿಕ ಬದಲಾವಣೆ ಎಂದರೇನು ಎಂಬುದರ ಬಗ್ಗೆ ಪರಿಣಾಮ ಕಾರಿಯಾದ ವಿಶ್ಲೇಷಣೆ ನೀಡುತ್ತಿದ್ದರು. ಸ್ಟ್ಯಾನ್ ಅವರ ಭಾಷೆ ಸರಳವಾಗಿತ್ತು, ಅಲ್ಲಿ ಸ್ಪಷ್ಟತೆ ಮತ್ತು ನಿಖರತೆ ಎದ್ದು ಕಾಣುತ್ತಿತ್ತು. ಅವರ ತೀಕ್ಷ್ಣ ಕಣ್ಣುಗಳು ತಾನು ಹೇಳಿದ್ದನ್ನೆಲ್ಲ ಎಲ್ಲರೂ ಗಮನವಿಟ್ಟು ಕೇಳಿಕೊಳ್ಳುತ್ತಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದವು. ಸುಮ್ಮಸುಮ್ಮನೇ ಅವರು ಒಂದು ಪದವನ್ನೂ ಉಚ್ಚರಿಸುತ್ತಿದ್ದಿಲ್ಲ. ಹಾಗೂ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸಮಯದ ಒಂದು ಕ್ಷಣವನ್ನು ವ್ಯಯಿಸುವ ವ್ಯಕ್ತಿಯಾಗಿದ್ದಿಲ್ಲ ಸ್ಟ್ಯಾನ್.

ಸಾಮಾಜಿಕ ಬದಲಾವಣೆಯ ಒಬ್ಬ ತರಬೇತುದಾರರಾಗಿ ಹಾಗೂ ಸಂಶೋಧಕರಾಗಿ ಸ್ಟ್ಯಾನ್ ಅವರ ನಿಖರತೆಯು ದೇಶದ ಅತ್ಯಂತ ದುರ್ಬಲರಿಗೆ ಮೂಲಭೂತ ಸ್ವಾತಂತ್ರ್ಯವನ್ನು ದೊರಕಿಸಬೇಕು ಎಂಬ ಅವರ ಗಟ್ಟಿಯಾದ ಹಾಗೂ ಸಹಾನುಭೂತಿಯ ದೃಢನಿಶ್ಚಯದೊಂದಿಗೆ ತಳುಕು ಹಾಕಿಕೊಂಡಿತ್ತು. ಆ ಸ್ವಾತಂತ್ರ್ಯವನ್ನು ದೊರಕಿಸುವ ಸಲುವಾಗಿ ಸಂವಿಧಾನಬದ್ಧವಾದ ಮೂಲಭೂತ ಹಕ್ಕುಗಳನ್ನು ಅನುಷ್ಠಾನಗೊಳಿಸುವ ಅಗತ್ಯವನ್ನು ಅವರು ಗಟ್ಟಿಯಾಗಿ ವಾದಿಸಿದರು. ಅವರು ಮಧ್ಯಭಾರತದ, ಅದರಲ್ಲೂ ನಿರ್ದಿಷ್ಟವಾಗಿ ಜಾರ್ಖಂಡಿನ ಬುಡಕಟ್ಟು ಜನರ ಹೋರಾಟಗಳ ಕಡೆಗೆ ಹೊರಟರು. ಬುಡಕಟ್ಟು ಜನರು ತಮ್ಮ ಭೂಮಿ, ತಮ್ಮ ಅರಣ್ಯ, ಅವರ ನದಿಗಳು, ತಮ್ಮ ಮಾನವ ಹಕ್ಕುಗಳು ಮತ್ತು ತಮ್ಮ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಮಾಡುತ್ತಿದ್ದ ಹೋರಾಟಗಳನ್ನು ಸಂಘಟಿಸುವಲ್ಲಿ ನಿರತರಾದರು. ಈ ಸಮುದಾಯಗಳು ಸ್ವಾತಂತ್ರಪೂರ್ವದಿಂದಲೂ ಹಾಗೂ ನಂತರದಲ್ಲಿ ಅನುಭವಿಸುತ್ತಿರುವ ವ್ಯವಸ್ಥಿತವಾದ ಶೋಷಣೆಯ ಬಗ್ಗೆ ಅವರು ಮಾತನಾಡಿದರು ಹಾಗೂ ಈ ಘೋರ ವಿನಾಶವನ್ನು ತಡೆಯಬೇಕಾದರೆ ಸಂವಿಧಾನದ 5ನೇ ಶೆಡ್ಯೂಲ್‌ಅನ್ನು ಅನುಷ್ಠಾನಗೊಳಿಸುವುದೊಂದೇ ದಾರಿ ಎಂದು ಪ್ರತಿಪಾದಿಸಿದರು. ಸ್ಟ್ಯಾನ್ ಅವರಿಗೆ ಭಾರತೀಯ ಸಂವಿದಾನದ 39ನೇ ಅನುಚ್ಛೇದವು ಕೇವಲ ಅಲಂಕಾರಿಕವಾದ ಅನುಚ್ಛೇದವಾಗಿದ್ದಿಲ್ಲ.

PC : Catholic Outlook

ಆದಿವಾಸಿ ಜನರನ್ನು ಶೋಷಣೆ ಮಾಡುವುದು, ಅಲ್ಲಿಯ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವುದೇ ಸಾಮಾನ್ಯ ಎಂಬ ಪರಿಸ್ಥಿತಿಯಲ್ಲಿ ಸ್ಟ್ಯಾನ್ ಮತ್ತು ಅವರ ಸಂಗಡಿಗರು ದಣಿವಿಲ್ಲದೇ ದಶಕಗಳ ಕಾಲ ನ್ಯಾಯಯುತವಾದ ದಾರಿಯಲ್ಲಿ ಈ ಕ್ರೂರ ದಬ್ಬಾಳಿಕೆಯನ್ನು ನಿಲ್ಲಿಸಬಹುದು ಎಂಬ ಆತ್ಮವಿಶ್ವಾಸವನ್ನು ತುಂಬಲು ಕೆಲಸ ಮಾಡಿದರು. ಅವರ ಜೊತೆಗೂಡಬೇಕಿದ್ದ ಸರಕಾರವು, ಆ ಪ್ರದೇಶದ ಖನಿಜ ಸಂಪತ್ತನ್ನು, ಅರಣ್ಯಗಳನ್ನು ಮತ್ತು ನೀರನ್ನು ಲೂಟಿ ಮಾಡುತ್ತಿದ್ದ ಕಾಂಟ್ರ್ಯಾಕ್ಟರ್‌ಗಳು ಮತ್ತು ಕಾರ್ಪೊರೇಟ್‌ಗಳೊಂದಿಗೆ ಕೈಜೋಡಿಸಿತು. ವಿನಾಶ ಮತ್ತು ನೋವಿನ ಈ ಘೋರ ನೆಲದಲ್ಲಿ ಸ್ಟ್ಯಾನ್ ಜೀವಿಸಿದರು, ಶೋಷಣೆಗೊಳಗಾಗುತ್ತಿರುವ ಸಮುದಾಯಗಳೊಂದಿಗೆ ಹಾಗೂ ಅವರ ಹೋರಾಟಗಳಲ್ಲಿ ಒಂದಾಗುತ್ತ ಬದುಕಿದರು.

ಲೂಟಿ ಮತ್ತು ಸುಲಿಗೆಯಿಂದ ಲಾಭ ಪಡಯುತ್ತಿರುವವರಿಗೆ ಇದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಸ್ಟ್ಯಾನ್ ಮತ್ತು ಅವರ ಸಂಗಡಿಗರನ್ನು ಸುಮ್ಮನಾಗಿಸಲು ಅನೇಕ ಪ್ರಯತ್ನಗಳು ನಡೆದವು. ಆದರೆ ಅವರು ಯಾವುದೇ ಪ್ರಭಾವಕ್ಕೆ ಒಳಗಾಗದೇ ತಮ್ಮ ಕೆಲಸವನ್ನು ವ್ಯವಸ್ಥಿತವಾಗಿ ಹಾಗೂ ಧೈರ್ಯದಿಂದ ಮುಂದುವರೆಸಿದರು. ಸ್ಟ್ಯಾನ್ ಅವರು, ಸಾವಿರಾರು ಆದಿವಾಸಿ ಜನರನ್ನು ವಿಚಾರಣೆಯಿಲ್ಲದೇ ಜೈಲಿನಲ್ಲಿ ಇಟ್ಟಿದ್ದು ಸ್ಪಷ್ಟವಾಗಿ ತೋರಿಸುವಂತೆ, ಅಲ್ಲಿನ ಸರಕಾರಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ನಡೆಸುತ್ತಿದ್ದ ಶೋಷಣೆಯನ್ನು ಬಹಿರಂಗಪಡಿಸಲು ಪ್ರಯತ್ನಗಳನ್ನು ಮಾಡಿದರು. ಆ ಆದಿವಾಸಿ ಜನರ ಮೇಲಿನ ಆರೋಪಗಳು ಸಾಬೀತಾಗದೇ ಇದ್ದಾಗ ಅವರನ್ನು ಮರಳಿ ಮನೆಗೆ ಕಳುಹಿಸಲು ತ್ವರಿತವಾದ ವಿಚಾರಣೆಯನ್ನು ನಡೆಸುವಂತೆ ಅವರು ನ್ಯಾಯಾಲಯಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ದುಷ್ಟ ಪ್ರಕ್ರಿಯೆಗೆ ತಾನೂ ಬಲಿಪಶು ಆಗುವೆ ಎಂದು ಸ್ಟ್ಯಾನ್ ಅವರಿಗೆ ಅನಿಸಿತ್ತೆ? ಭೀಮಾ ಕೋರೆಗಾಂವ್ ಎಂಬ ಅರ್ಥವಿಲ್ಲದ ಪ್ರಕರಣದಲ್ಲಿ ಒಬ್ಬ ವಿಚಾರಣಾಧೀನ ಕೈದಿಯಾಗಿ, ಅತ್ಯಂತ ಕರಾಳ ಯುಎಪಿಎ ಕಾನೂನಿನ ಉಲ್ಲಂಘಿಸಿದ ಹಾಗೂ ರಾಷ್ಟ್ರವಿರೋಧಿ ಎಂದು ಆರೋಪಿಸಲಾಗುವುದೆಂದು ತಿಳಿದಿತ್ತೆ? ಗೊತ್ತಿಲ್ಲ ಆದರೆ ಒಂದಂತೂ ನಿಜ. ಅವರನ್ನು ಇತರ ಹೋರಾಟಗಾರರು, ವಕೀಲರು, ಟ್ರೇಡ್ ಯುನಿಯನ್ ನಾಯಕರು ಮತ್ತು ಅಕ್ಯಾಡೆಮಿಕ್ ವ್ಯಕ್ತಿಗಳು ಸೇರಿದಂತೆ 15 ಜನರ ಜೊತೆಗೆ ಪ್ರಕರಣದಲ್ಲಿ ಸಿಕ್ಕಿಸಿ ತಲೋಜಾ ಜೈಲಿನಲ್ಲಿ ದಬ್ಬಿದಾಗ, ಅವರು ತತ್ವಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದ ಗುಣಮಟ್ಟದ ನ್ಯಾಯಕ್ಕಾಗಿ ದೃಢ ನಿಶ್ಚಯದಿಂದ ಹೋರಾಟ ಮಾಡಿದರು.

ಸ್ಟ್ಯಾನ್ ಅವರು ಪಾರ್ಕಿನ್ಸನ್ ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ರಾಷ್ಟ್ರೀಯ ತನಿಖಾ ಎಜೆನ್ಸಿಯು (ಎನ್‌ಐಎ) ಅವೆಲ್ಲ ಸುಳ್ಳು ಎಂದು ವಾದ ಮಾಡಿತು. ಅವರು ಅನುಭವಿಸುತ್ತಿದ್ದ ಕಷ್ಟಗಳನ್ನು ಇತರರಿಗೆ (ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಧೈರ್ಯ ತೋರುವವರು) ಉದಾಹರಣೆಯಂತೆ ಬಿಂಬಿಸುವಂತೆ ಮಾಡುವ ಸಲುವಾಗಿ ಸ್ಟ್ಯಾನ್ ಅವರಿಗೆ ಸುಲಭವಾಗಿ ನೀರು ಕುಡಿಯಲು ಬೇಕಾಗಿದ್ದ ಸಿಪ್ಪರ್‌ಅನ್ನೂ ಸರಿಯಾದ ಸಮಯಕ್ಕೆ ಪೂರೈಸಲಿಲ್ಲ. ಅವರ ಆರೋಗ್ಯ ಹದಗೆಟ್ಟಿದಂತೆ, ನ್ಯಾಯಾಧೀಶರು ಅವರನ್ನು ಜೈಲಿನ ಆಸ್ಪತ್ರೆಗೆ ವರ್ಗಾಯಿಸಲು ಒಪ್ಪಿಕೊಂಡಾಗ, ಸ್ಟ್ಯಾನ್ ಅದನ್ನು ವಿರೋಧಿಸಿದರು, ಅವರು ತಮ್ಮ ಹಕ್ಕಾದ ಜಾಮೀನನ್ನು ನೀಡಬೇಕೆಂದು ವಾದಿಸಿದರು. ಆದರೆ ಅದನ್ನು ನಿರಾಕರಿಸಲಾಯಿತು. ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಾಗ, ಹಾಗೂ ಅವರಿಗೆ ಸ್ವಾಭಾವಿಕವಾಗಿಯೇ ಕೋವಿಡ್ ಸೋಂಕು ತಗುಲಿದಾಗ ಅವರನ್ನು ಆಸ್ಪತ್ರೆಗೆ ವರ್ಗಾಯಿಸಬೇಕೆಂದು ಆದೇಶ ನೀಡಲಾಯಿತು, ಆದರೆ ಅದು ಸಾಧ್ಯವಾಗಲು ಹತ್ತು ದಿನ ಹಿಡಿಯಿತು. ಆಗ ಬಹಳ ತಡವಾಗಿತ್ತು.

ವಶದಲ್ಲಿದ್ದಾಗ ಆದ ಸ್ಟ್ಯಾನ್ ಅವರ ಸಾವು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಆಗಬಹುದಾದ ಸಾಂಸ್ಥಿಕ ಕೊಲೆ ಅಂದರೆ ಹೇಗಿರುತ್ತೆ ಎಂಬುದರ ಸ್ಪಷ್ಟ ಚಿತ್ರಣವಾಗಿದೆ. ಸ್ಟ್ಯಾನ್ ಅವರು ವಿಚಾರಣಾಧೀನ ಕೈದಿಗಳ ಹಕ್ಕುಗಳಿಗಾಗಿ ಹೋರಾಡಿದರು. ಕೊನೆಯಲ್ಲಿ ಅವರೇ ಒಬ್ಬ ವಿಚಾರಣಾಧೀನ ಕೈದಿಯಾಗಿ ಸಾವನ್ನಪ್ಪಿದರು. ಸ್ಟ್ಯಾನ್ ಸ್ವಾಮಿ ಒಬ್ಬ ಸಂತನಾಗಿ ಜೀವಿಸಿದರು, ಶಾಂತಿಯನ್ನು ಹೃದಯದಲ್ಲಿಟ್ಟುಕೊಂಡು ಯಾವುದೇ ದ್ವೇಷವಿಲ್ಲದೇ ಜೀವಿಸಿದರು. ಭಾರತವು ಗುರುತಿಸಲು ವಿಫಲವಾದ ನಿಜವಾದ ಭಾರತರತ್ನ.

  • ಲಿಯೋ ಎಫ್. ಸಾಲ್ಡಾನಾ

ಅನುವಾದ: ರಾಜಶೇಖರ ಅಕ್ಕಿ

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲಿಯೋ, ಪರಿಸರ ಬೆಂಬಲ ಗುಂಪುಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: ‘ಹೋರಾಟಗಾರರನ್ನು ಬಿತ್ತಲಾಗುತ್ತದೆ; ಹೂಳಲಾಗುವುದಿಲ್ಲ’ – ಸ್ಟಾನ್‌ಸ್ವಾಮಿ ನಿಧನಕ್ಕೆ ಒಕ್ಕೂಟ ಸರ್ಕಾರದ ವಿರುದ್ದ ದೇಶದಾದ್ಯಂತ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...