ಭೀಮಾಕೊರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ 84 ವರ್ಷದ ಹಿರಿಯ ಸಾಮಾಜಿಕ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿಯವರು ಮೃಪಟ್ಟಿದ್ದಾರೆ. ಇಂದು ಮಧ್ಯಾಹ್ನ 1:30 ಗಂಟೆಗೆ ಸ್ಟ್ಯಾನ್ ಸ್ವಾಮಿ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಪರ ವಾದಿಸುತ್ತದ್ದ ನ್ಯಾಯವಾದಿ ಮಿನಿ ದೇಸಾಯಿ ಬಾಂಬೆ ಹೈಕೋರ್ಟ್ಗೆ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳೆದ್ದಿದ್ದು, “ಇದು ಒಕ್ಕೂಟ ಸರ್ಕಾರ ಪ್ರಾಯೋಜಿತ ಕೊಲೆ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಯಾಥೋಲಿಕ್ ಪಾದ್ರಿಯಾಗಿರುವ ಸ್ಟ್ಯಾನ್ ಸ್ವಾಮಿ ಕೇರಳ ಮೂಲದವರಾಗಿದ್ದು 50 ವರ್ಷದಿಂದ ಮಾನವ ಹಕ್ಕು ಮತ್ತು ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಅವರು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ NIA ಕಳೆದ ವರ್ಷ ಬಂಧಿಸಿತ್ತು. ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಸ್ಟ್ಯಾನ್ ಸ್ವಾಮಿಯ ಮೇಲೆ ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಕಠಿಣ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿತ್ತು.
ಇದನ್ನೂ ಓದಿ: ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ನಿಧನ
ಸ್ಟ್ಯಾನ್ ಸ್ವಾಮಿ ವಿಸ್ತಾಪನ್ ವಿರೋಧಿ ಜನವಿಕಾಸ್ ಆಂದೋಲನ್ (ವಿ.ವಿ.ಜೆ.ಎ) ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರು ಜಾರ್ಖಂಡ್ನ ಅತ್ಯಂತ ಶ್ರೇಷ್ಠ ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದಾರೆ. ಭೀಮಾ ಕೋರೆಗಾಂವ್ ಪ್ರಕರಣದ ಸಂಬಂಧ ಬಂಧನಕ್ಕೊಳಗಾದ 16 ನೇ ವ್ಯಕ್ತಿಯಾಗಿದ್ದು, ಇದುವರೆಗೂ ಬಂಧಿಸಿದವರಲ್ಲಿ ಹಿರಿಯರಾಗಿದ್ದಾರೆ. ಸ್ಟ್ಯಾನ್ ಸ್ವಾಮಿ ಅವರು ಪಾರ್ಕಿನ್ಸನ್ ಸೇರಿದಂತೆ ಹಲವು ರೀತಿಯ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯಾಗಿದ್ದರು.
ಅವರ ಸಾವಿಗೆ ದೇಶದ ಹಲವಾರು ಚಿಂತಕರು, ಹೋರಾಟಗಾರರು, ಗಣ್ಯವ್ಯಕ್ತಿಗಳು, ಸಾಮಾಜಿಕ ಕಾರ್ಯಕರ್ತರು ಸಂತಾಪ ವ್ಯಕ್ತಪಡಿಸಿದ್ದು, ಒಕ್ಕೂಟ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಶ್ರೀವತ್ಸ ಅವರು, “ಸ್ಟಾನ್ಸ್ಸ್ವಾಮಿಯವರ ನಿಧನ ಮೋದಿ ಮತ್ತು ಷಾ ಸರ್ಕಾರದ ಸರ್ಕಾರಿ ಪ್ರಾಯೋಜಿತ ರಾಜಕೀಯ ಕೊಲೆಯಾಗಿದೆ. ಅದನ್ನು ಬೇರೇನೂ ಕರೆಯಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸುಪ್ರೀಂಕೋರ್ಟ್ ತುರ್ತು ವಿಚಾರಣೆ ನಡೆಸಿ, ‘ವ್ಯಕ್ತಿ ಸ್ವಾತಂತ್ಯ್ರ’ ಎಂದು ಹೇಳಿ ಅರ್ನಾಬ್ ಗೋಸ್ವಾಮಿಗೆ 7 ದಿನಗಳಲ್ಲಿ ಜಾಮೀನು ನೀಡಿತು. 84 ಸ್ಟಾನ್ ಸ್ವಾಮಿ ಬಂಧನವಾಗಿ 7 ತಿಂಗಳಾದರೂ ಜಾಮೀನು ನಿರಾಕರಿಸಲಾಯಿತು. ಪಾರ್ಕಿನ್ಸನ್ ಕಾಯಿಲೆಯಿಂದ ಅವರು ಬಳಲುತ್ತಿದ್ದ ಅವರು ವ್ಯಕ್ತಿ ಸ್ವಾತಂತ್ಯ್ರ ಇಲ್ಲದ ರಾಜಕೀಯ ಕೈದಿಯಾಗಿ ಕೊರೊನಾ ಪಡೆದರು! ಒಂದು ರಾಷ್ಟ್ರ, ಒಂದು ಕಾನೂನು ಆದರೆ ನ್ಯಾಯವಿಲ್ಲ” ಎಂದು ಶ್ರೀವತ್ಸ ಕಿಡಿ ಕಾರಿದ್ದಾರೆ.
Arnab Goswami was given bail in 7 DAYS after SC held urgent hearings & said 'Personal Liberty'
Stan Swamy was denied bail for 7 MONTHS though he was 84, suffered from Parkinson’s disease & got COVID, A Political Prisoner with no Liberty!
One Nation, One Law but No Justice
— Srivatsa (@srivatsayb) July 5, 2021
ಇದನ್ನೂ ಓದಿ: ‘ಸ್ಟಾನ್ಸ್ವಾಮಿಯದ್ದು ನಿಧನವಲ್ಲ; ಪ್ರಭುತ್ವ ಮುಂದೆ ನಿಂತು ಮಾಡಿಸಿದ ಕೊಲೆ’
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, “ಫಾದರ್ ಸ್ಟಾನ್ ಸ್ವಾಮಿ ಅವರ ನಿಧನದ ಸುದ್ದಿಯನ್ನು ತಿಳಿದು ದುಃಖವಾಯಿತು. ನಮ್ಮ ಸರ್ಕಾರವು ಮಾನವೀಯತೆಯೊಂದಿಗೆ ನಡೆಸಿಕೊಳ್ಳಲು ಸಾಧ್ಯವಾಗದ ಮಾನವೀಯ ಮತ್ತು ದೇವತಾ ಮನುಷ್ಯ” ಎಂದು ಹೇಳಿದ್ದಾರೆ.
Sad to learn of Fr #StanSwamy's passing. A humanitarian & man of God whom our government could not treat with humanity. Deeply saddened as an Indian. RIP. https://t.co/aOB6T0iHU9
— Shashi Tharoor (@ShashiTharoor) July 5, 2021
ಡಿಎಂಕೆ ನಾಯಕಿ ಕನಿಮೋಳಿ ಅವರು, “ಪಾರ್ಕಿನ್ಸನ್ನಿಂದ ಬಳಲುತ್ತಿದ್ದ ಸ್ಟಾನ್ ಸ್ವಾಮಿ (84) ಅವರನ್ನು ಬಿಜೆಪಿ ಸರ್ಕಾರ ದೇಶ ವಿರೋಧಿ ಎಂದು ಬಂಧಿಸಿದೆ. ಅವರ ಆರೋಗ್ಯ ಪರಿಸ್ಥಿತಿಗಳನ್ನು ಎಂದಿಗೂ ಪರಿಗಣಿಸಲಾಗಲಿಲ್ಲ. ಅವರು ಕೋಮಾಕ್ಕೆ ಜಾರಿ ನಿಧನರಾದರು.
Stan Swami (84) who suffered from Parkinson’s was arrested by the BJP government as Anti-national. His health conditions were never considered. He slipped into coma and passed away.
போராளிகள் விதைக்கப்படுகிறார்கள் புதைக்கப்படுவதில்லை.#StanSwamy pic.twitter.com/a8Ko8tfks5
— Kanimozhi (கனிமொழி) (@KanimozhiDMK) July 5, 2021
ಇದನ್ನೂ ಓದಿ: ಒಂದು ಸ್ಟ್ರಾ ಪಡೆಯಲು ’ಸ್ಟ್ಯಾನ್ ಸ್ವಾಮಿ’ ಹಲವು ತಿಂಗಳು ಕಾಯಬೇಕು!
ರೈತ ಹೋರಾಟಗಾರ ಯೋಗೇಂದ್ರ ಯಾದವ್ ಅವರು, “ಫಾದರ್ ಸ್ಟಾನ್ ಸ್ವಾಮಿಯವರ ಸಾವಿನ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ಎನ್ಐಎ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಬಿಜೆಪಿ ಮತ್ತು ನ್ಯಾಯಾಂಗದಿಂದ ಆದ ತಣ್ಣನೆಯ ಕ್ರೌರ್ಯ ಇದು. ಈ ದೇಶದ ಅತ್ಯಂತ ತುಳಿತಕ್ಕೊಳಗಾದ ಜನರ ಪರವಾಗಿ ಹೋರಾಡಿದ ಮಾನವೀಯ ವ್ಯಕ್ತಿಯನ್ನು ಈ ರೀತಿ ಹತ್ಯೆ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Deeply saddened to hear about the death of Father #StanSwamy. A cold blooded murder by NIA, NHRC, BJP & the judiciary. Whatever it offered was too little, too late.
This is how a humanitarian who fought for the most dispossessed people of this country has been murdered:
⬇️⬇️⬇️
— Yogendra Yadav (@_YogendraYadav) July 5, 2021
ಹೋರಾಟಗಾರ್ತಿ ಮೀನಾ ಕಂದಸಾಮಿ ಅವರು, “ನ್ಯಾಯಾಂಗದ ಕೈಯಲ್ಲಿ ರಕ್ತ. ಆರ್ಎಸ್ಎಸ್-ಬಿಜೆಪಿಯ ಕೈಯಲ್ಲಿ ರಕ್ತ. ಎನ್ಐಎ ಕೈಯಲ್ಲಿ ರಕ್ತ. ರಾಜ್ಯದ ಪರವಾಗಿ ಪ್ರೊಪಗಾಂಡ ನಡೆಸಿದ ಮಾಧ್ಯಮಗಳ ಕೈಯಲ್ಲಿ ರಕ್ತ. ಇದರಿಂದ ಪಾರಾಗಲು ಮೋದಿ-ಷಾಗೆ ಅವಕಾಶ ನೀಡುವ ಪ್ರತಿಪಕ್ಷದ ಕೈಯಲ್ಲಿ ರಕ್ತ. ನಮ್ಮೆಲ್ಲರ ಕೈಯಲ್ಲಿ ರಕ್ತ.” ಎಂದು ಟ್ವೀಟ್ ಮಾಡಿದ್ದಾರೆ.
Blood on the hands of judiciary
Blood on the hands of RSS-BJP
Blood on the hands of NIA
Blood on the hands of media that carried propaganda on the state's behalf
Blood on the hands of an opposition that let Modi-Shah to get away with this
Blood on all our hands
RIP Fr #StanSwamy pic.twitter.com/KwXZZ28tTx— Meena Kandasamy | #BJPKilledStanSwamy (@meenakandasamy) July 5, 2021
ಇದನ್ನೂ ಓದಿ: ಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ
ಗುಜರಾತ್ ಶಾಸಕ, ಯುವ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರು, ‘‘ಫಾದರ್ ಸ್ಟಾನ್ ಸ್ವಾಮಿ ಎಂದಿಗೂ ಸಾಯುವುದಿಲ್ಲ. ಅವರು ವೀರರಾಗಿ ನಮ್ಮ ಹೃದಯದಲ್ಲಿ ಜೀವಿಸುವರು. ಫ್ಯಾಸಿಸ್ಟ್ ಮೋದಿ ಸರ್ಕಾರದ ವಿರುದ್ಧ ನಿಂತು ಜೀವನವನ್ನೇ ವ್ಯಯಿಸಿದ ಧೈರ್ಯಶಾಲಿ ಅವರು. ಮೋದಿ ಮತ್ತು ಶಾ ಅವರ ಕೈಯಲ್ಲಿ ಫಾದರ್ ಸ್ಟಾನ್ ಸ್ವಾಮಿಯ ರಕ್ತವಿದೆ. ದೇಶ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಕಿಡಿಕಾರಿದ್ದಾರೆ.
Fr Stan Swamy shall never die. He will live in our hearts as a hero, the brave dissenter who stood against the fascist Modi government at the cost of his life.
Modi & Shah have Fr. Stan Swamy's blood on their hands. The country will never forgive them. #StanSwamy
— Jignesh Mevani (@jigneshmevani80) July 5, 2021
ಜನತಾಕಾ ರಿಪೋರ್ಟ್ ಸಂಸ್ಥಾಪಕ ರಿಫಾತ್ ಜಾವೇದ್, “ಫಾದರ್ ಸ್ಟಾನ್ ಸ್ವಾಮಿಯ ಸಾವಿನ ಬಗ್ಗೆ ಬಾಂಬೆ ಹೈಕೋರ್ಟ್ ‘ನಮಗೆ ವ್ಯಕ್ತಪಡಿಸಲು ಪದಗಳಿಲ್ಲ’ ಎಂದು ಹೇಳಿದೆ. ಭಾರತೀಯ ನ್ಯಾಯಾಂಗದ ಬಗ್ಗೆ ಇತಿಹಾಸದಲ್ಲಿ ಹೇಳಲು ಈ ಮಾತುಗಳು ಸಾಕಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
“We have no words to express,” says Bombay High Court on Father #StanSwamy’s death. I think these words wouldn’t be enough for history to take kind view of Indian judiciary.
— Rifat Jawaid (@RifatJawaid) July 5, 2021
ಜೆಎನ್ಯು ನಾಯಕಿ ಐಶೆ ಘೋಷ್, “ಇದು ಕಸ್ಟೋಡಿಯಲ್ ಕೊಲೆ. ಪಾದರ್ ಸ್ವಾಮಿ ಹಿಂದುಳಿದ ಸಮುದಾಯಗಳಿಗಾಗಿ ಜೀವನದುದ್ದಕ್ಕೂ ಕೆಲಸ ಮಾಡಿದ್ದರು. ಅವರಿಗೆ ಮೂಲಭೂತ ಅವಶ್ಯಕತೆಗಳು ಮತ್ತು ಆರೋಗ್ಯ ರಕ್ಷಣೆ ನಿರಾಕರಿಸಲಾಯಿತು. ಯುಎಪಿಎ ಹಿಂತೆಗೆದುಕೊಳ್ಳಿ, ಎಲ್ಲಾ ರಾಜಕೀಯ ಕೈದಿಗಳನ್ನು ತಕ್ಷಣ ಬಿಡುಗಡೆ ಮಾಡಿ” ಎಂದು ಹೇಳಿದ್ದಾರೆ.
A custodial killing.
Fr. Stan Swamy who worked throughout his life for the marginalized communities was denied basic necessities and health care.Repeal UAPA
Release All Political Prisoners immediately.Rest in Power ✊#StanSwamy
— Aishe (ঐশী) (@aishe_ghosh) July 5, 2021
It’s a murder
Imprisonments without trial is the death of whole justice system ?
My head bow in shame ?
Father #StanSwamy has passed away.The 84 year old human rights activist had been in jail for 9 months. Was suffering from Parkinson’s .
#ElgarParishad pic.twitter.com/x7IyY4CBrg— Dr Kafeel Khan (@drkafeelkhan) July 5, 2021
ಇದನ್ನೂ ಓದಿ: ಭೀಮಾ ಕೋರೆಗಾಂವ್ ಖೈದಿಗಳ ಬಿಡುಗಡೆ ಮಾಡಿ-ಮೋದಿಗೆ ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಯುರೋಪಿಯನ್ ಸಂಸದರ ಪತ್ರ