Homeಮುಖಪುಟ’ಸಂಚು ಪತ್ರ'ವೇ ಸಂಚಿನಿಂದ ಲ್ಯಾಪ್‌ಟಾಪ್ ಒಳಗೆ ನುಸುಳಿದೆ!

’ಸಂಚು ಪತ್ರ’ವೇ ಸಂಚಿನಿಂದ ಲ್ಯಾಪ್‌ಟಾಪ್ ಒಳಗೆ ನುಸುಳಿದೆ!

- Advertisement -
- Advertisement -

ನಾವು ಸಣ್ಣವರಿರುವಾಗ ಸಿನಿಮಾಗಳಲ್ಲಿ ಒಂದು ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಅದು, ಸಮಾಜದಲ್ಲಿ ಒಳ್ಳೆಯದನ್ನು ಮಾಡುತ್ತಿರುವ ಹೀರೋವನ್ನು ಅಥವಾ ಸಾಮಾಜಿಕ ಕಾರ್ಯಕರ್ತರನ್ನು ಹತ್ತಿಕ್ಕಲು, ಪೊಲೀಸರು ರಾತ್ರೋರಾತ್ರಿ ಬಂದು ಅವನ ಮನೆಗೆ ಬಂದು, ಏನನ್ನೋ ಹುಡುಕುವ ನೆಪದಲ್ಲಿ ಅಥವಾ ವಾಹನ ತಪಾಸಣೆ ಮಾಡುವ ನೆಪದಲ್ಲಿ, ನಿಷೇಧಿತ ಪದಾರ್ಥವಿದೆಯೆಂದೋ, ಸಂಚಿನ ಪತ್ರ ಇದೆಯೆಂದೋ ಅರೆಸ್ಟ್ ಮಾಡುತ್ತಿದ್ದ ದೃಶ್ಯ. ಬಹಿರಂಗವಾಗಿ ಪೊಲೀಸರೇ ಅಲ್ಲಿ ಆ ನಿಷೇಧಿತ ಪದಾರ್ಥ ಇಡುವುದು ಕೂಡ ಸಾಮಾನ್ಯ ದೃಶ್ಯವಾಗಿತ್ತು ಆ ಸಿನಿಮಾಗಳಲ್ಲಿ. ಕೆಲವೊಮ್ಮೆ ಸಿನೆಮ್ಯಾಟಿಕ್ ರೀತಿಯಲ್ಲಿ ಆ ಒಳಸಂಚನ್ನು ಅನಾವರಣಗೊಳಿಸುವ, ಹಿನ್ನೆಲೆ ಸೀನ್ ಒಂದನ್ನು ಸೃಷ್ಟಿಸಿ ಬಂಧನಗೊಳಗಾಗಿದ್ದ ಆ ವ್ಯಕ್ತಿಯನ್ನು ನಿರಪರಾಧಿ ಎಂದು ತೋರಿಸಲಾಗುತ್ತಿತ್ತು.

ಈ ರೀತಿಯ ಸಿನೆಮಾ ಕತೆಗಳ ದೃಶ್ಯಗಳು ಪ್ರಪಂಚದ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಇವೆ. ಏಕೆಂದರೆ ಜೀವನದಲ್ಲೂ ಅದೇ ರೀತಿಯ ಕಥೆಗಳು ಬಹಳ ಧಾರಾಳಗಾಗಿ ನೆಡೆದಿರುವ ಸಾವಿರಾರು ನಿದರ್ಶನಗಳಿವೆ. ಈಗ ಆಧುನಿಕ ಡಿಜಿಟಲ್ ಯುಗದಲ್ಲೂ ಈ ಚಾಳಿ ಮುಂದುವರೆದಿದೆ. ಭೀಮ ಕೋರೆಗಾಂವ್ ಮತ್ತು ಪ್ರಧಾನಮಂತ್ರಿ ಮೋದಿಯವರ ಕೊಲೆ ಸಂಚಿನ ಪತ್ರದ ಆರೋಪ ಕೂಡ ಇದೇ ರೀತಿಯ ಸಿನಿಮೀಯ ಸಂಚು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಟಾಬಯಲಾಗಿ ಚರ್ಚೆಯಾಗುತ್ತಿದೆ. ವಿಪರ್ಯಾಸವೆಂದರೆ ಪ್ರಭುತ್ವದ ಸಂಚನ್ನು ಎದುರಿಸುತ್ತಿರುವ 20ಕ್ಕೂ ಹೆಚ್ಚು ಮಂದಿ ಈಗಲೂ ಸೆರೆಮನೆಯಲ್ಲಿ ಬಂಧಿಗಳಾಗಿದ್ದಾರೆ.

ಪ್ರಭುತ್ವದ ಸಂಚಿಗೂ ಒಂದು ಕಾರಣವಿದೆ. ಭೀಮ ಕೋರೆಗಾಂವ್ ವಿಜಯ ಭಾರತದ ದಮನಿತರ ಇತಿಹಾಸದಲ್ಲೊಂದು ಮೈಲಿಗಲ್ಲು. 1818ರ ಜನವರಿ 1ರಂದು ಹೆಚ್ಚಾಗಿ ದಲಿತ ಸಮುದಾಯದ ಮಹರ್ ಸೈನಿಕರನ್ನು ಹೊಂದಿದ್ದ 500 ಸಂಖ್ಯೆಯ ಬ್ರಿಟಿಷ್ ಸೇನೆ ಅತ್ಯಂತ ನೀಚ ಜಾತಿವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದ್ದ ಪೇಶ್ವೆಯರನ್ನು ಒಂದೇ ಮಧ್ಯಾಹ್ನದೊಳಗೆ ಹಿಮ್ಮೆಟ್ಟಿಸಿತ್ತು. ಈ ವಿಜಯ ಮತ್ತು ವಿಜಯೋತ್ಸವ ಈಗಲೂ ಮಹಾರಾಷ್ಟ್ರದ ಪೇಶ್ವಾ ಪ್ರತಿಪಾದಕರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಇದರ ಒಳಸಂಚಿನ ಭಾಗವಾಗಿಯೇ ನವ ಪೇಶ್ವೆಯ ಪ್ರತಿಪಾದಕ, ದೇವೇಂದ್ರ ಫಡ್ನವಿಸ್ 2014ರಲ್ಲಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ, ಪ್ರತಿ ವರ್ಷ ಹೆಚ್ಚೆಚ್ಚು ಜನ ಸೇರುತ್ತಿದ್ದ, ದಲಿತರ ಸ್ವಾಭಿಮಾನದ ಪ್ರಜ್ಞೆಯನ್ನು ಎಚ್ಚರಿಸುವ ಈ ವಿಜಯೋತ್ಸವವನ್ನು ಹತ್ತಿಕ್ಕಲು ಕೋರೆಗಾಂವ್ ವಿಜಯೋತ್ಸವದ 200ನೆ ವಾರ್ಷಿಕೋತ್ಸವವನ್ನು ಗುರಿ ಮಾಡುತ್ತಾರೆ.

ಡಿಸೆಂಬರ್ 31 2017ರಂದು ವಿಜಯೋತ್ಸವಕ್ಕೆಂದು ತೆರಳುತ್ತಿದ್ದ ದಲಿತರ ಮೇಲೆ ಆಡಳಿತ ಬೆಂಬಲಿತ ಸ್ಥಳೀಯ ಹಿಂದುತ್ವ ಮುಖಂಡರಾದ ಮಿಲಿಂದ್ ಎಕ್ಬೋಟೆ ಮತ್ತು ಸಂಭಾಜಿ ಭಿಡೆ ನೇತೃತ್ವದಲ್ಲಿ ದಾಳಿ ನಡೆಯುತ್ತದೆ. ಪುಣೆಯಲ್ಲಿ ಜರುಗಿದ ಎಲ್ಗಾರ್ ಪರಿಷದ್ ಕಾರ್ಯಕ್ರಮದ ವಿರುದ್ಧ ಪಿತೂರಿ ನಡೆದು, ಅರ್ಬನ್ ನಕ್ಸಲರು ಎಂಬ ಆಡಳಿತ ವ್ಯವಸ್ಥೆಯ ಸಂಚು ಅನಾವರಣಗೊಳ್ಳುತ್ತದೆ. ಅದೇ ವರ್ಷದಲ್ಲಿ, ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಲವಾರು ಕಾರ್ಯಕರ್ತರ ಕಂಪ್ಯೂಟರ್ ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ಜಪ್ತಿ ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ರೋಣ ವಿಲ್ಸನ್ ಎಂಬ ಮಾನವ ಹಕ್ಕುಗಳ ಹೋರಾಟಗಾರನ ಲ್ಯಾಪ್‌ಟಾಪ್ ಕೂಡ ದೆಹಲಿಯ ಮುನಿರ್ಕಾ ಜಾಗದಲ್ಲಿ ಜಪ್ತಿಯಾಗುತ್ತದೆ. ಅದರಲ್ಲಿ ಪ್ರಧಾನಿ ಮೋದಿಯವರನ್ನು ರಾಜೀವ್ ಗಾಂಧಿಯ ಹಾಗೆ ಕೊಲ್ಲುವ ಸಂಚಿನ ಪತ್ರಗಳು ದೊರೆಯುತ್ತವೆ. ಈ ಸಾಕ್ಷಿಯಿಂದಲೇ, ಶೋಮಾ ಸೆನ್, ಸುಧೀಂದ್ರ ಗಾಡ್ಲಿಂಗ್, ಸುಧಾ ಭಾರದ್ವಾಜ್, ಸುಧೀರ್ ಧವಳೆ, ಮಹೇಶ್ ರಾವುತ್, ಆನಂದ್ ತೇಲ್ತುಂಬ್ಡೆ, ಸ್ಟಾನ್ ಸ್ವಾಮಿ ಸೇರಿದಂತೆ ಒಬ್ಬೊಬ್ಬರನ್ನೇ 15 ಮಂದಿಯನ್ನು ಬಂಧಿಸಲಾಗುತ್ತದೆ.

ಆದರೆ ಈ ಲ್ಯಾಪ್‌ಟಾಪ್‌ನೊಳಗಿನ ಮಾಹಿತಿಯ ಡಿಜಿಟಲ್ ಪ್ರತಿಯನ್ನು ರೋನ ವಿಲ್ಸನ್‌ರನ್ನು ಪ್ರತಿನಿಧಿಸುತ್ತಿರುವ ವಕೀಲರಾದ ಮಿಹಿರ್ ದೇಸಾಯಿ ಕೇಳಿ ಪಡೆಯುತ್ತಾರೆ ಮತ್ತು ಅದನ್ನು ಅಮೆರಿಕಾದ ಮ್ಯಾಸಚೂಸೆಟ್ಸ್‌ನಲ್ಲಿರುವ ಪ್ರತಿಷ್ಠಿತ ಆರ್ಸೆನಲ್ ಕನ್ಸಲ್ಟಿಂಗ್ ಎಂಬ ಡಿಜಿಟಲ್ ಫೋರೆನ್ಸಿಕ್ ಸಂಸ್ಥೆಗೆ ಕಳುಹಿಸುತ್ತಾರೆ. ಇದೆ ಆರ್ಸೆನಲ್ ಕನ್ಸಲ್ಟಿಂಗ್ ಹಿಂದೆ ಹಲವಾರು ಪ್ರಕರಣಗಳಲ್ಲಿ ಕರಾರುವಾಕ್ಕಾಗಿ ಫಲಿತಾಂಶವನ್ನು ನೀಡಿರುವ ಸಂಸ್ಥೆಯಾಗಿದೆ. ಈ ಪ್ರತಿಯನ್ನು ಕೂಲಂಕಷವಾಗಿ ಭೇದಿಸಿರುವ ಈ ಸಂಸ್ಥೆ ಫೆಬ್ರವರಿ 2021ರಂದು ತನ್ನ ವರದಿಯನ್ನು ನೀಡುತ್ತದೆ. ಅದರ ಪ್ರಕಾರ, ರೋನ ವಿಲ್ಸನ್ ಲ್ಯಾಪ್‌ಟಾಪ್‌ಅನ್ನು ಹ್ಯಾಕರ್ ಮೂಲಕ ದಾಳಿಗೆ ಈಡುಮಾಡಲಾಗಿದೆ. ಈ ಹ್ಯಾಕರ್ ವರವರ ರಾವ್ ಅವರ ಈಮೇಲ್ ಹ್ಯಾಕ್ ಮಾಡಿ, ಅದನ್ನು ಉಪಯೋಗಿಸಿಕೊಂಡು ವಿಲ್ಸನ್ ಅವರರಿಗೆ ಒಂದರ ಮೇಲೊಂದರಂತೆ ಈಮೇಲ್ ಕಳುಹಿಸಿರುತ್ತಾರೆ ಮತ್ತು ಅದರಲ್ಲಿರುವ ಒಂದು ಅಟ್ಯಾಚ್ಮೆಂಟ್‌ಅನ್ನು ತೆರೆಯಿರಿ ಎಂದು ಪದೇಪದೆ ಸೂಚಿಸಿರುತ್ತಾರೆ. ಆಗ ವಿಲ್ಸನ್ ಅಟ್ಯಾಚ್ಮೆಂಟ್ ತೆರೆದು ಅದರಲ್ಲಿ ಏನು ಇಲ್ಲ ಎಂದು ಮೇಲ್ ಕಳುಹಿಸಿರುತ್ತಾರೆ. ಅವರು ಅಟ್ಯಾಚ್ಮೆಂಟ್ ತೆರೆದಾಗ ಹ್ಯಾಕರ್ ಒಂದು ಕೊಳಕು ಸಾಫ್ಟ್ವೇರ್ (ಮಾಲ್ವೇರ್) ಮೂಲಕ ಅವರ ಲ್ಯಾಪ್‌ಟಾಪ್‌ಅನ್ನು ಅವರ ಅರಿವಿಗೆ ಬಾರದಂತೆ ನಿಯಂತ್ರಿಸತೊಡಗುತ್ತಾರೆ.

ವಿಲ್ಸನ್ ಅವರನ್ನು ಬಂಧನ ಮಾಡುವ ಎರಡು ವರ್ಷಗಳ ಹಿಂದೆಯೇ, ಅವರಿಗೆ ಗೊತ್ತಿಲ್ಲದಂತೆಯೇ ಅವರ ಲ್ಯಾಪ್‌ಟಾಪ್‌ನಲ್ಲಿ ಹಿಡನ್ ಫೋಲ್ಡರ್ ಒಂದನ್ನು ಸೃಷ್ಟಿಸಿ ಅದರಲ್ಲಿ ’ಸಂಚಿನ ಪತ್ರಗಳನ್ನು ಅಡಗಿಸಲಾಗಿದೆ. ಈ ಸಂಚು ಎಷ್ಟು ಪೊಳ್ಳು ಎಂದರೆ ಅವರ ಲ್ಯಾಪ್‌ಟಾಪ್ ಜಪ್ತಿ ಮಾಡಿದ ದಿನ ಬೆಳಿಗ್ಗೆ 6 ಗಂಟೆಯಾದರೆ, ಸಂಚಿನ ಕೊನೆಯ ಪತ್ರವನ್ನು ಹಿಂದಿನ ದಿನ ಸಂಜೆ 4:30ಕ್ಕೆ ಅಲ್ಲಿ ಸೇರಿಸಿರುತ್ತಾರೆ. ಇದನ್ನು ತನಿಖೆ ಮಾಡಿರುವ ಸಂಸ್ಥೆಯ ಅಧ್ಯಕ್ಷ ಮಾರ್ಕ್ ಸ್ಪೆನ್ಸರ್ “ಈವರೆಗೂ ಎಷ್ಟೋ ಹ್ಯಾಕಿಂಗ್ ಪ್ರಕರಣಗಳನ್ನು ನಾವು ನೋಡಿದ್ದೇವೆ, ಆದರೆ ಇದರಲ್ಲಿನ ನೈಪುಣ್ಯತೆ ಮತ್ತು ಆತಂಕಕಾರಿ ಚಾಣಾಕ್ಷತೆ ನಾವು ಈವರೆಗೂ ಕಂಡಿಲ್ಲ ಎಂದು ವರದಿ ನೀಡಿದ್ದಾರೆ. ಈ ವರದಿಯಲ್ಲಿ ಇನ್ನೊಂದು ಮುಖ್ಯ ಸಾಕ್ಷಿಯೆಂದರೆ ಆ ಲ್ಯಾಪ್‌ಟಾಪ್‌ನಲ್ಲಿದ್ದ ಆ ಪತ್ರಗಳನ್ನು ವಿಲ್ಸನ್ ಎಂದೂ ತೆರೆದಿಲ್ಲ ಎಂಬುದು ಮತ್ತು ಆ ಪತ್ರಗಳು ಸೃಷ್ಟಿಯಾಗಿರುವುದೇ ವಿಂಡೋಸ್‌ನ ವರ್ಡ್ 2013 ಆವೃತ್ತಿಯಲ್ಲಿ, ಆದರೆ ವಿಲ್ಸನ್ ಉಪಯೋಗಿಸುತ್ತಿದ್ದು ವಿಂಡೋಸ್ 7 ಎಂದು ತಿಳಿದಿದೆ. ಆದ್ದರಿಂದ ವಿಲ್ಸನ್ ಉಪಯೋಗಿಸುತ್ತಿದ್ದ ಕಂಪ್ಯೂಟರ್‌ನಲ್ಲಿ ಆ ಪತ್ರಗಳು ಸೃಷ್ಟಿಯಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು.

ಆಂಧ್ರ ಪ್ರದೇಶ, ಪಂಜಾಬ್ ಮತ್ತು ಕಾಶ್ಮೀರದಲ್ಲಿ ಡಿಜಿಟಲ್ ಯುಗದ ಮುಂಚೆಯ ಈ ರೀತಿಯ ಸಂಚುಗಳನ್ನು ನಮ್ಮ ಪ್ರಭುತ್ವ ಹೆಣೆದಿದೆ. ಹಾಗೆ ಹುಡುಕುತ್ತಾ ಹೋದರೆ ಪ್ರತಿ ರಾಜ್ಯದಲ್ಲೂ ಆದಿವಾಸಿ, ದಮನಿತ, ಮುಸಲ್ಮಾನ ಅಸ್ಮಿತೆಗಳಿಗೆ ಹೋರಾಡುತ್ತಿರುವ ಸಾವಿರಾರು ಮಂದಿಯನ್ನು ಪ್ರಭುತ್ವದ ವಿರೋಧಿಗಳೆಂದು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಬಂಧಿಸಲಾಗಿದೆ. ಹಿಂದಿನ ರಾಜಪ್ರಭುತ್ವದ ಕಾಲದಿಂದಲೂ ತನ್ನ ಅಧಿಕಾರವನ್ನು ಉಳಿಸಿಕೊಂಡಿದ್ದೆ ಈ ರೀತಿಯ ಸಂಚುಗಳನ್ನು ಸೃಷ್ಟಿಸುವುದರ ಮೂಲಕ ಎಂಬುದೇ ವಾಸ್ತವ.

ಈ ರೀತಿಯ ಸಂಚಿನ ಕಥಾನಕವನ್ನು ಸಮಾಜದಲ್ಲಿ ಸೃಷ್ಟಿಸುವುದೇ ದಮನಿತ ಸಮುದಾಯಗಳನ್ನು ಹತ್ತಿಕ್ಕುವುದಕ್ಕೆ ಅಥವಾ ಪ್ರಜಾಪ್ರಭುತ್ವದ ಸಮ ಸಮಾಜದ ಕನಸು ಕಾಣುತ್ತಿರುವ ಜನರನ್ನು ಹತೋಟಿಯಲ್ಲಿಡುವುದಕ್ಕೆ. ಅದು ಈಗ ಡಿಜಿಟಲ್ ಯುಗದಲ್ಲೂ ಸಾಗಿದೆ ಎಂದು ಈ ವರದಿ ನಿರೂಪಿಸಿದೆ.

ಭಾರತದಲ್ಲೇ ಅಲ್ಲ ವಿಶ್ವಾದ್ಯಂತ ಇದೇ ರೀತಿಯ ಪ್ರಕರಣಗಳು ಕಾಣಸಿಗುತ್ತವೆ. ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಆಕ್ಟಿವಿಸ್ಟ್‌ಗಳ ಮೇಲೆ ನಿಗಾ ಇಡಲು ಪ್ರತಿ ಸರಕಾರ ಯುದ್ಧಕ್ಕೆ ಬಳಸುವ ಬೇಹುಗಾರಿಕೆ ಸಾಫ್ಟ್ವೇರ್‌ಗಳನ್ನೂ ಬಳಸುತ್ತಿದೆ. ಹಾಗೆಯೇ ಟರ್ಕಿಯ ಸೌದಿ ರಾಯಭಾರ ಕಚೇರಿಯಲ್ಲಿಯೇ ಹತ್ಯೆಯಾದ ಜಮಾಲ್ ಖಶೋಗ್ಗಿ ಪ್ರಕರಣ ಕೂಡ ಇದೆ.

ಇಸ್ರೇಲಿನ ಬೇಹುಗಾರಿಕೆ ಸಾಫ್ಟ್ವೇರ್ ’ಪೆಗಾಸಸ್ ಈ ಕಾರಣಕ್ಕಾಗಿಯೇ ಕುಖ್ಯಾತವಾಗಿದೆ. ಇಸ್ರೇಲ್ ಇದನ್ನು ಭಯೋತ್ಪಾದನೆ ವಿರುದ್ಧವಷ್ಟೇ ಉಪಯೋಗಿಸುತ್ತೇವೆ ಎಂದರೂ ಈ ಬೇಹುಗಾರಿಕೆ ಸಾಫ್ಟ್‌ವೇರ್‌ಅನ್ನು ಭಾರತವು ಸೇರಿದಂತೆ ಅನೇಕ ದೇಶಗಳು ಪ್ರಜಾಸತ್ತಾತ್ಮಕ ಹೋರಾಟಗಾರರನ್ನು ಹತ್ತಿಕ್ಕಲು ಬಳಸಲಾಗುತ್ತಿದೆ. ವಾಟ್ಸಾಪ್‌ಅನ್ನು ಈಗ ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳು ಶಸ್ತ್ರದ ರೀತಿಯಲ್ಲಿ ಬಳಸುತ್ತಿವೆ.

ಸದ್ಯಕ್ಕೆ ಈಗ ಸಿಕ್ಕಿರುವ ವರದಿಯನ್ನು ಬಳಸಿಕೊಂಡು ಈವರೆಗೂ ಬಂಧನವಾಗಿರುವವರ ಪರ ವಾದಿಸುತ್ತಿರುವ ನ್ಯಾಯವಾದಿಗಳು ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಕೋರಿಕೆ ಇಟ್ಟಿದ್ದಾರೆ. ಆದರೆ ಸಾಕ್ಷಿಯೇ ಇಲ್ಲದೆ, ಕ್ಷುಲ್ಲಕ ಕಾರಣಗಳಿಗೆ 21 ವರ್ಷದ ಹುಡುಗಿಯನ್ನು ಯಾವುದೇ ಶಿಷ್ಟಾಚಾರವಿಲ್ಲದೆ, ಸಂವಿಧಾನವನ್ನೂ, ಕಾನೂನನ್ನು ಗಾಳಿಗೆ ತೂರಿ ಬಂಧಿಸುತ್ತಿರುವ ಈ ನಿರಂಕುಶ ಆಡಳಿತ ವ್ಯವಸ್ಥೆಯ ಕಾಲಘಟ್ಟದಲ್ಲಿ ನ್ಯಾಯ ಕೇಳುವುದೇ ಅಪರಾಧವಾಗಿದೆ!

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.


ಇದನ್ನೂ ಓದಿ: ಭಾರತದ ಸಾರ್ವಭೌಮತೆ ಜನರೇ ಜನರಿಗಾಗಿ ಕಟ್ಟಿಕೊಂಡಿರುವಂಥದ್ದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...

ಬೆಂಗಳೂರು ಚಲೋ: ಧರಣಿ ಸ್ಥಳಕ್ಕೆ ಬಾರದ ಸಚಿವರು, ಕೋಪಗೊಂಡು ರಸ್ತೆಗಿಳಿದ ಪ್ರತಿಭಟನಾಕಾರರು

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ 'ಬೆಂಗಳೂರು ಚಲೋ' ಬುಧವಾರ (ನವೆಂಬರ್ 26) ಫ್ರೀಡಂ...

ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ: ವಿಐಟಿ ಭೋಪಾಲ್ ವಿವಿ ಕ್ಯಾಂಪಸ್ ಧ್ವಂಸ, ವಾಹನಗಳಿಗೆ ಬೆಂಕಿ

ಇಂದೋರ್-ಭೋಪಾಲ್ ಹೆದ್ದಾರಿಯಲ್ಲಿರುವ ಸೆಹೋರ್ ಜಿಲ್ಲೆಯ ವಿಐಟಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ತಡರಾತ್ರಿ ನಡೆದ ಪ್ರತಿಭಟನೆ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ತಿರುಗಿದ್ದು, ಕೋಪಗೊಂಡ ವಿದ್ಯಾರ್ಥಿಗಳು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿ ಕ್ಯಾಂಪಸ್ ಆಸ್ತಿಗೆ ಹಾನಿ ಮಾಡಿದ್ದಾರೆ...

ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವಾಗ ನಾಲ್ವರು ಕಾರ್ಮಿಕರು ಸಾವು : ತಲಾ 30 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಫೆಬ್ರವರಿ 2021ರಲ್ಲಿ ಕೋಲ್ಕತ್ತಾದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವಾಗ ನಾಲ್ವರು ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆಗೆ ಕೋಲ್ಕತ್ತಾ ಮಹಾನಗರ ಪಾಲಿಕೆ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಕಲ್ಕತ್ತಾ ಹೈಕೋರ್ಟ್ ಹೊಣೆಗಾರರನ್ನಾಗಿ ಮಾಡಿದೆ...