Homeಬಹುಜನ ಭಾರತಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ - ಡಿ. ಉಮಾಪತಿ

ಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ – ಡಿ. ಉಮಾಪತಿ

ಮಿಯಾಮಿ ಪೊಲೀಸರು ಕ್ರೋಧತಪ್ತ ಪ್ರತಿಭಟನಾಕಾರರ ಮುಂದೆ ಕ್ಯಾಮೆರಾಗಳ ಸಮಕ್ಷಮದಲ್ಲಿ ತಲೆ ತಗ್ಗಿಸಿ ಮಂಡಿಯೂರಿ ಕ್ಷಮಾಪಣೆ ಕೇಳಿದರು. ಭಾರತದಲ್ಲಿ ಇಂತಹ ನೋಟವನ್ನು ಕಾಣಲು ಇನ್ನೆಷ್ಟು ಯುಗಗಳು ಸರಿಯಬೇಕೋ?

- Advertisement -
- Advertisement -

ಮನುಷ್ಯ ಮನುಷ್ಯನನ್ನು ಜಾತಿಯ ಕಾರಣಕ್ಕೆ, ಧರ್ಮದ ಕಾರಣಕ್ಕೆ, ತೊಗಲಿನ ಬಣ್ಣದ ಕಾರಣಕ್ಕೆ ದ್ವೇಷಿಸಿ ಹಿಂಸಿಸತೊಡಗಿದ್ದಾನೆ. ಮಾನವೀಯತೆಯನ್ನು ಮರೆತಿದ್ದಾನೆ. ಆಳದಲ್ಲಿ ಮಲಗಿರುವ ಪಾಶವಿಕ ಹಿಂಸಾ ಪ್ರವೃತ್ತಿ ಮೇಲೆದ್ದು ಹೆಡೆಯೆತ್ತಿ ಭುಸುಗುಡುತ್ತಿದೆ. ಸಾವಿರ ಸಾವಿರ ವರ್ಷಗಳಿಂದ ನಾಗರಿಕತೆಯ ವಿಕಾಸದ ಹಾದಿಯಲ್ಲಿ ಮಾನವೀಯ ಸಾಮಾಜಿಕ ನಡವಳಿಕೆಗಳು ಕೆಳಕ್ಕೆ ತುಳಿದಿಟ್ಟ ಈ ಪ್ರವೃತ್ತಿಗಳನ್ನು ಕೆದರಿ ಕೆಣಕಿ ಕೆರಳಿಸಿ ಭುಗಿಲೆಬ್ಬಿಸಿದವರು ಯಾರು? ಈ ಉರಿವ ಬೆಂಕಿಗೆ ಎಣ್ಣೆ ಎರಚುತ್ತ ಬಂದಿರುವವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರಗಳು ದೇಶ ವಿದೇಶಗಳಲ್ಲಿ ಒಡಮೂಡಿವೆ.

ಒಂದೊಂದು ದೇಶದಲ್ಲಿ ಒಂದೊಂದು ಹೆಸರು ಧರಿಸಿವೆ. ಹೊಸ ಭಯೋತ್ಪಾದಕರನ್ನು ಕಟೆದು ನಿಲ್ಲಿಸಿವೆ. ಈ ಭಯೋತ್ಪಾದಕರು ಮುಖ ಕೈಕಾಲು ದೇಹಧಾರಿ ಮನುಷ್ಯರಲ್ಲ. ಬದಲಾಗಿ ಅವರದೆಯಲ್ಲಿ ಭುಗಿಲೆದ್ದು ಪ್ರಚಂಡ ನಾಯಕರು ಯಾರತ್ತ ಇಷಾರೆ ಮಾಡಿದರೆ ಅವರನ್ನು ಸುಡಬಹುದಾದ ಕಡುದ್ವೇಷದ ಕಿಚ್ಚು. ಅದುವೇ ನವ ಭಯೋತ್ಪಾದಕ. ಈ ಭಯೋತ್ಪಾದಕ ಈವರೆಗೆ ಕಂಡು ಕೇಳಿರುವ ಎಲ್ಲ ಭಯೋತ್ಪಾದಕರಿಗಿಂತ ಅಧಿಕ ಘಾತಕ. ಈ ಕಿಚ್ಚಿಗೆ ವರ್ಣಭೇದ, ಧರ್ಮ, ಜಾತಿ, ಮೇಲು ಕೀಳಿನ ಮುಖವಾಡ ತೊಡಿಸಿ ಅಮಾಯಕರನ್ನು ಹರಿದು ತಿನ್ನಲು ಛೂ ಬಿಡಲಾಗಿದೆ. ಅಮೆರಿಕೆ ಎಂಬ ದೇಶದಲ್ಲಿ ಈ ದ್ವೇಷದ ಬೆಂಕಿ ಹಚ್ಚಿ ಎಣ್ಣೆ ಎರಚುತ್ತ ಬಂದಿರುವಾತನ ನಾಮಧೇಯ ಡೊನಾಲ್ಡ್ ಟ್ರಂಪ್.

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕಾ ಹೊರಗೆ ಬರಲಿದೆ,ಟ್ರಂಪ್ ಎಚ್ಚರಿಕೆ

ಭರತವರ್ಷದಲ್ಲಿನ ನಿಜ ನಾಮಧೇಯಗಳು ಚಿರಪರಿಚಿತ. ಇವುಗಳು ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು. ನಂತರದ್ದು ಕ್ರೈಸ್ತರದು ಇದ್ದೀತು.

ಕಪ್ಪು ಜನರನ್ನು ಅವರ ತೊಗಲಿನ ಬಣ್ಣದ ಕಾರಣ ನೂರಾರು ವರ್ಷಗಳಿಂದ ಬೇಟೆಯಾಡುತ್ತ ಬಂದಿದ್ದಾರೆ ಬಿಳಿಯರು. ಸಮಾಜ 21ನೆಯ ಶತಮಾನದ ನಾಗರಿಕ ಚಹರೆ ಧರಿಸುತ್ತಿದ್ದಂತೆ ಬೇಟೆಗಾರರು ಹತ್ತು ಹಲವು ಛದ್ಮವೇಷಗಳನ್ನು ಧರಿಸಿ ಎರಗುತ್ತಿದ್ದಾರೆ. ಆಳುವವರ ಸಕ್ರಿಯ ಕುಮ್ಮಕ್ಕು ಅವರಿಗೆ ಉಂಟು.

ಹಿಟ್ಲರ್ ಸತ್ತಿದ್ದಾನೆ ಎಂದು ಯಾರು ಹೇಳುತ್ತಾರೆ? ಜರ್ಮನಿಯಲ್ಲಿ ದಫನಾದದ್ದು ಅವನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿ ಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

ಕಳೆದ ಆರು ವರ್ಷಗಳಿಂದ ದೇಶದುದ್ದಗಲಕ್ಕೆ ರಸ್ತೆ ರಸ್ತೆಗಳಲ್ಲಿ ಮುಸಲ್ಮಾನರು ದಲಿತರು ಈ ಕಿಚ್ಚಿಗೆ ಬಲಿಯಾದರು. ಕರೋನಾ ಮಹಾಮಾರಿ ಹಾಕಿರುವ ಅಲ್ಪವಿರಾಮ ತೆರವಾದ ನಂತರ ಈ ಕಿಚ್ಚು ಹೊಸ ಎಣ್ಣೆ ಎರೆಸಿಕೊಂಡು ಭುಗಿಲೇಳುವಲ್ಲಿ ಯಾವ ಅನುಮಾನವೂ ಇಲ್ಲ.

ಅಮೆರಿಕೆಯಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಮನುಷ್ಯ ಬಿಳಿಯ ಪೊಲೀಸರ ವರ್ಣವಿದ್ವೇಷಕ್ಕೆ ಬಲಿಯಾದ ಭೀಭತ್ಸ ದೃಶ್ಯಗಳು ನಾಗರಿಕ ಪ್ರಜ್ಞೆಯನ್ನು ಬೆಚ್ಚಿ ಬೀಳಿಸಿವೆ.

ಎಂಟು ನಿಮಿಷ 46 ಸೆಕೆಂಡುಗಳ ಕಾಲ ಉಸಿರಿಗಾಗಿ ಚಡಪಡಿಸಿದ ಆ ದೈತ್ಯ ಕಪ್ಪು ಮನುಷ್ಯ ದಯೆ ತೋರಿರೆಂದು ಕೋರಿದ. ನೀರಿಗಾಗಿ ಬೇಡಿದ. ಉಸಿರಾಡಲಾಗುತ್ತಿಲ್ಲ ಸ್ವಾಮೀ ಎಂದ. ಮೂಗಿನಿಂದ ರಕ್ತ ಒಸರಿತು. ದೇಹ ಪ್ರಾಣಸಂಕಟದಿಂದ ವಿಲವಿಲನೆ ಒದ್ದಾಡಿತು. ಮೂತ್ರಕೋಶದ ಮೇಲೆ ನಿಯಂತ್ರಣ ತಪ್ಪಿತು.

ಐದು ನಿಮಿಷಗಳಲ್ಲಿ ಹದಿನಾರು ಸಾರಿ ಹೇಳಿದ್ದನಾತ ಉಸಿರಾಡಲಾಗುತ್ತಿಲ್ಲಾ… ಎಂದು. ಕಡೆಗೆ ಪ್ರಜ್ಞೆ ತಪ್ಪಿತು. ವೈದ್ಯಕೀಯ ಸಿಬ್ಬಂದಿ ಬೇಡಿಕೊಂಡರು. ಆದರೂ ಬಿಳಿಯ ಪೊಲೀಸರ ಸಾವಿನ ಹಿಡಿತ ಸಡಿಲಾಗಲಿಲ್ಲ. ಆಮ್ಲಜನಕ ದೊರೆಯದೆ ಆತನ ಅಂಗಾಂಗಗಳು ಚೀರಿದ್ದವು. ಮೆದುಳು ಹೌಹಾರಿತ್ತು.

ಫ್ಲಾಯ್ಡ್ ಅಣು ಅಣುವಾಗಿ ಸಾಯುವುದನ್ನು ಬಿಳಿಯ ದ್ವೇಷ ವಿಚಿತ್ರ ವಿಲಕ್ಷಣ ತೃಪ್ತಿಯಿಂದ ನೋಡಿತು. ಕ್ಷಣದಿಂದ ಕ್ಷಣಕ್ಕೆ ಉಸಿರು ತ್ಯಜಿಸಿ ಹೋಗಿ ತಣ್ಣಗಾಗುತ್ತಿದ್ದ ಒಡಲಿನ ಒದ್ದಾಟವನ್ನು, ಚಡಪಡಿಕೆಯ ಸ್ಪರ್ಶಸುಖವನ್ನು ಸವಿಯಿತು.

ಸತ್ತ ತನ್ನ ತಾಯಿಯನ್ನು ಸೇರಿಕೊಳ್ಳುವ ಸಂಕಟದಲ್ಲಿ ಅಮ್ಮಾ ಎಂದು ಕೂಗಿ ಕರೆದ. ಆ ಕಪ್ಪು ಮನುಷ್ಯ ಸಾಧು ಸ್ವಭಾವದ ದೈತ್ಯ. ತೊಗಲಿನ ಬಣ್ಣ ಕಪ್ಪೆಂಬ ಕಾರಣಕ್ಕಾಗಿ ಕ್ರೂರ ಹತ್ಯೆಗೆ ಬಲಿಯಾದ.

ಉಸಿರಾಡಲಾಗುತ್ತಿಲ್ಲ ಎಂದು ಫ್ಲಾಯ್ಡ್ ಐದು ನಿಮಿಷಗಳಲ್ಲಿ ಹದಿನಾರು ಸಲ ಹೇಳುತ್ತಾನೆ. ಪ್ರಾಣ ಹೋಗುವ ಸಂಕಟದಲ್ಲಿ ಹೆತ್ತಮ್ಮನನ್ನು ನೆನೆದು ಕರೆಯುತ್ತಾನೆ. ‘ಆಫೀಸರ್ ಪ್ಲೀಸ್’ ಎಂದು ಬೇಡಿಕೊಳ್ಳುತ್ತಾನೆ. ಬಾಯಿಂದ ರಕ್ತ ಒಸರುತ್ತದೆ.

ಆ ಬಿಳಿಯ ಪೊಲೀಸ್ ಎಂಟು ನಿಮಿಷ 46 ಸೆಕೆಂಡುಗಳ ಕಾಲ ತನ್ನ ಮೃತ್ಯಸದೃಶ ಮೊಣಕಾಲನ್ನು ಫ್ಲಾಯ್ಡ್ ಕುತ್ತಿಗೆಯ ಮೇಲೆ ಅದುಮಿ ಹಿಡಿದಿರುತ್ತಾನೆ. ಕಡೆಯುಸಿರೆಳೆದ ಮೇಲೂ ಆ ಮೊಣಕಾಲು ಕದಲುವುದಿಲ್ಲ. ಆಂಬುಲೆನ್ಸ್ ಬಂದು ಸ್ಟ್ರೆಚರ್ ತಂದ ವೈದ್ಯಕೀಯ ಸಿಬ್ಬಂದಿ ಹೇಳಿದಾಗ ಒಲ್ಲದ ಮನಸಿನಿಂದ ಕದಲುತ್ತದೆ. ಆದರೆ ಆ ಹೊತ್ತಿಗೆ ತೀರಾ ತಡವಾಗಿರುತ್ತದೆ.

ಮೇ.25 ಸೋಮವಾರ ಸಂಜೆ. 20 ಡಾಲರಿನ ಖೋಟಾ ನೋಟನ್ನು ಸಿಗರೇಟು ಖರೀದಿಗೆ ಬಳಸಿದನೆಂಬುದು ಫ್ಲಾಯ್ಡ್ ಮೇಲಿನ ಆರೋಪ. 46 ವರ್ಷದ ಈ ವ್ಯಕ್ತಿ ಹ್ಯೂಸ್ಟನ್‍ನ ರೆಸ್ಟುರಾದಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ. ಕರೋನಾ ಮಹಾಮಾರಿಯ ಕಾರಣ ಕೆಲಸ ಕಳೆದುಕೊಂಡ ಕೋಟ್ಯಂತರ ಜನರ ಪೈಕಿ ಫ್ಲಾಯ್ಡ್ ಕೂಡ ಒಬ್ಬನಾಗಿದ್ದ.

ಆರಡಿಗೂ ಅಧಿಕ ಎತ್ತರದ ಫ್ಲಾಯ್ಡನನ್ನು ರಸ್ತೆಯ ಪಕ್ಕ ನೆಲಕ್ಕೆ ಕೆಡವಿ ಕಾಲು ಎದೆ ಪಕ್ಕೆ ಕುತ್ತಿಗೆಯನ್ನು ನಾಲ್ವರು ಪೊಲೀಸರು ಒಟ್ಟೊಟ್ಟಿಗೆ ಅದುಮಿ ಹಿಡಿದಿರುತ್ತಾರೆ.

ಫ್ಲಾಯ್ಡ್ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಎಂಬುದು ಪೊಲೀಸರ ಹಸೀ ಸುಳ್ಳು. ಕಾರಿನೊಳಕ್ಕೆ ಅವನನ್ನು ತಳ್ಳಲು, ಎದ್ದು ಪೊಲೀಸ್ ಕಾರಿನೊಳಗೆ ಕುಳಿತುಕೋ ಎನ್ನುತ್ತಾರೆ. ಆದರೆ ತಮ್ಮ ಮೃತ್ಯುಪಾಶವನ್ನು ಸಡಿಲಿಸುವುದಿಲ್ಲ. ದಾರಿ ಹೋಕರು ಕುತ್ತಿಗೆಯ ಮೇಲಿಂದ ಎದ್ದೇಳಲು ಪೊಲೀಸರಿಗೆ ಒತ್ತಾಯಿಸುತ್ತಾರೆ. ಅವನು ಕದಲುತ್ತಿಲ್ಲ, ನಾಡಿ ಪರೀಕ್ಷಿಸಿ ಎಂದು ಆಗ್ರಹಿಸುತ್ತಾರೆ.

ಅಮೆರಿಕೆ ಭುಗಿಲೆದ್ದಿದೆ. ಕಾನೂನು ಜಾರಿಯ ವೈಖರಿಯಲ್ಲಿ ಬದಲಾವಣೆಗೆ ಆಗ್ರಹ ಸ್ಫೋಟಿಸಿದೆ. ಮಾನವಂತ ಬಿಳಿಯರೂ ಈ ಪ್ರತಿಭಟನೆಯಲ್ಲಿ ಸೇರಿದ್ದಾರೆ. ಈ ನಡುವೆ ಮಿಯಾಮಿ ಪೊಲೀಸರು ಕ್ರೋಧತಪ್ತ ಪ್ರತಿಭಟನಾಕಾರರ ಮುಂದೆ ಕ್ಯಾಮೆರಾಗಳ ಸಮಕ್ಷಮದಲ್ಲಿ ತಲೆ ತಗ್ಗಿಸಿ ಮಂಡಿಯೂರಿ ಕ್ಷಮಾಪಣೆ ಕೇಳಿದರು. ಭಾರತದಲ್ಲಿ ಇಂತಹ ನೋಟವನ್ನು ಕಾಣಲು ಇನ್ನೆಷ್ಟು ಯುಗಗಳು ಸರಿಯಬೇಕೋ?
ಜಾರ್ಜ್ ಫ್ಲಾಯ್ಡ್ ಆತ್ಮ ಈಗ ನಿರಾಳವಾಗಿ ಉಸಿರಾಡುತ್ತಿರಬಹುದು… ವರ್ಣದ್ವೇಷದ ಕಿಚ್ಚಿನಿಂದ ದೂರ ಬಹುದೂರದಲ್ಲಿ.


ಇದನ್ನು ಓದಿ: ಚೀನಾದ ಆಕ್ರಮಣ ಒಪ್ಪಿಕೊಂಡ ರಾಜನಾಥ್‌ ಸಿಂಗ್: ಜೂನ್‌ 06 ರಂದು ಮಾತುಕತೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...