Homeಮುಖಪುಟಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್

ಲಾಠಿ ಹಿಡಿದ ಪ್ರಧಾನಿ ನೆಹರೂ ಹಿಂಸಾನಿರತ ಗುಂಪು ಚದುರಿಸಿದ್ದನ್ನು ಮರೆಯಲಾಗದು: ಅಡ್ಮಿರಲ್ ರಾಮದಾಸ್

ನಿಜವಾದ ನಾಯಕರೆಂದರೆ, ದಾರ್ಶನಿಕತೆ ಮತ್ತು ಧೈರ್ಯ ಹೊಂದಿರುವವರು. ಪಂಡಿತ್‌ಜೀ ಅವರು ಈ ಗುಣಗಳ ಮಾದರಿಯಾಗಿದ್ದಾರೆ.

- Advertisement -
- Advertisement -

ಅಡ್ಮಿರಲ್ ಲಕ್ಷ್ಮೀನಾರಾಯಣ ರಾಮದಾಸ್, ಪಿವಿಎಸ್‌ಎಂ, ಎವಿಎಸ್‌ಎಂ, ವೀರಚಕ್ರ, ವಿಎಸ್‌ಎಂ, ಎಡಿಸಿ ಅವರು ಭಾರತೀಯ ನೌಕಾಸೇನೆಯ ಮಾಜಿ ಮಹಾದಂಡನಾಯಕರಾಗಿದ್ದು, ಮೊದಲ ಪ್ರಧಾನಿ ನೆಹರೂ ಅವರು ಲಾಠಿ ಹಿಡಿದು ಹಿಂಸಾನಿರತ ಗುಂಪನ್ನು ಚದರಿಸಿದ ಘಟನೆಯನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

***

1947ರಲ್ಲಿ ನಾನು ಹದಿನಾಲ್ಕು ವರ್ಷದ ಹುಡುಗನಾಗಿದ್ದು, ದಿಲ್ಲಿಯಲ್ಲಿ ವಾಸಿಸುತ್ತಿದ್ದೆ. ದೇಶ ವಿಭಜನೆಯ ಯಾತನೆ ಮತ್ತು ಉದ್ವೇಗ ಹಾಗೂ ಸ್ವಾತಂತ್ರ್ಯದ ಭರವಸೆಯಲ್ಲಿ ನಾನಿದ್ದೆ. ನಾನು ನೌಕಾಪಡೆಗೆ ಸೇರಿದ್ದಕ್ಕೆ ಪ್ರೇರಣೆಯೇ ಅದು ದೇಶಸೇವೆಗೆ ಅವಕಾಶ ಒದಗಿಸಿ, ದೇಶ ಕಟ್ಟುವ ಕೆಲಸದಲ್ಲಿ ನೆರವಾಗಬಹುದೆಂಬ ನಿರೀಕ್ಷೆ. ನಾನು ಭಾರತದ ಕೊನೆಯ ವೈಸರಾಯ್ ಮತ್ತು ಮೊದಲ ಗವರ್ನರ್ ಜನರಲ್ ಆಗಿದ್ದ ಬರ್ಮಾದ ಲಾರ್ಡ್ ಲೂಯಿ ಮೌಂಟ್‌ಬ್ಯಾಟನ್ ಅವರ ಸ್ವಚ್ಛ, ಬಿಳಿ ಸಮವಸ್ತ್ರದಿಂದ ಸಂಪೂರ್ಣ ಮಂತ್ರಮುಗ್ಧನಾಗಿದ್ದೆ ಎಂಬುದನ್ನು ಒಪ್ಪಿಕೊಳ್ಳಬೇಕು. ನೆಹರೂ ಅವರನ್ನು ಅವರ ನಿಷ್ಕಳಂಕ ಚೂಡಿದಾರ್- ಕುರ್ತಾ ಮತ್ತು ವಿಶಿಷ್ಟ “ನೆಹರೂ” ಜ್ಯಾಕೆಟ್‌ನಲ್ಲಿ ನೋಡದಿರುವುದು ಸಾಧ್ಯವಿರಲಿಲ್ಲ- ಅದಕ್ಕೆ ಈ ದಿನಗಳಲ್ಲಿ ಬೇರೆಯೇ ಹೆಸರಿದೆ.

ನೆನಪಿನಲ್ಲಿ ಎದ್ದು ಕಾಣುವ ಆ ತಲೆಮಾರಿನ ನಾಯಕರ ಗುಣಗಳ ಕುರಿತು ಹಿಂತಿರುಗಿ ನೋಡಿದಾಗ ಒಂದು ಚಿತ್ರವನ್ನು ಅದೂ ತೀರಾ ಹತ್ತಿರದಿಂದ ನೋಡಿದ ಒಂದು ಚಿತ್ರವನ್ನು ನಾನೆಂದಿಗೂ ಮರೆಯಲಾರೆ. ಅದೆಂದರೆ “ಕಾರ್ಯಾಚರಣೆಯಲ್ಲಿ ನೆಹರೂ”.

ಆ ಭಯಾನಕ ದಿನಗಳ ಮೂರು ಚಿತ್ರಗಳು ನನ್ನ ಮನದಲ್ಲಿ ಅಚ್ಚೊತ್ತಿ ಉಳಿದಿವೆ-

– ನನ್ನ ಕಣ್ಣೆದುರೇ ಅಸಹಾಯಕ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಚೂರಿ ಇರಿತದ ಕ್ರೂರ ಘಟನೆ.

-ನಮ್ಮ ಬಂಗಾಳಿ ಮಾರ್ಕೆಟ್ ಮನೆಯ ಹೊರಗೆ ಉದ್ರಿಕ್ತ ಗುಂಪೊಂದು ನಮ್ಮ ಮನೆಯಲ್ಲಿ ಆಶ್ರಯ ಪಡೆದಿದ್ದ ನನ್ನ ತಂದೆಯವರ ಮಿತ್ರ ಹಾಗೂ ಸಹೋದ್ಯೋಗಿ ಗುಲಾಂ ಮೊಹಮ್ಮದ್ ಅವರನ್ನು ಹೊರಗೆ ಕಳುಹಿಸದಿದ್ದರೆ ತಂದೆಯವರಿಗೆ ಹಿಂಸಾಚಾರದ ಬೆದರಿಕೆ ಒಡ್ಡಿದ್ದು.

– ತನ್ನ ಸ್ವಂತ ಜೀವದ ಬೆದರಿಕೆಯನ್ನೂ ಲೆಕ್ಕಿಸದೆ ಪಂಡಿತ್ ನೆಹರೂ ಅವರು ಹಿಂಸಾನಿರತ ಉದ್ರಿಕ್ತ ಜನರ ಗುಂಪನ್ನು ಚದರಿಸಲು ಲಾಠಿ ಹಿಡಿದು ಧುಮುಕಿದ್ದು.

ಈ ಕೊನೆಯ ಘಟನೆಯನ್ನು ನೆನಪಿಸಿಕೊಳ್ಳಲು ನಾನು ಕೆಲವು ಸೆಕೆಂಡುಗಳನ್ನು ಕಳೆಯುತ್ತೇನೆ.

ನಾನು ಕನ್ನಾಟ್ ಸರ್ಕಸ್‌ನ ಅಗ್ನಿಶಾಮಕ ಠಾಣೆಯ ಎದುರಿದ್ದ ಕಟ್ಟಡವೊಂದರ ಮೊದಲ ಮಹಡಿಯಲ್ಲಿದ್ದ ನ್ಯೂ ಕ್ಯಾಂಬ್ರಿಡ್ಜ್ ಸ್ಕೂಲ್‌ನಿಂದ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗ ಅಲ್ಲಲ್ಲಿ ಉದ್ರಿಕ್ತ ಮತ್ತು ಹಿಂಸಾಚಾರ ನಿರತ ಗುಂಪುಗಳಿರುತ್ತಿದ್ದವು. ಅಂತಹಾ ಒಂದು ಗುಂಪು ದಿಲ್ಲಿಯ ಹಲವಾರು ಜನರಿಗೆ ಪ್ರಿಯ ತಾಣವಾಗಿದ್ದ ಪ್ರಸಿದ್ಧ ಪುಸ್ತಕದಂಗಡಿಯಾಗಿದ್ದ ಎಸ್. ರಿಯಾಜುದ್ದೀನ್ ಎಂಡ್ ಸನ್ಸ್‌ನತ್ತ ಸಾಗುತ್ತಿತ್ತು.

ಏಕಾಏಕಿಯಾಗಿ ಒಂದು ಕೆನೆಬಣ್ಣದ ಅಂಬಾಸಿಡರ್ ಕಾರು ಬಂದು ನಿಂತಿತು, ಅದರ ಬಾಗಿಲು ತೆರೆಯಿತು ಮತ್ತು ನನ್ನನ್ನು ದಂಗುಬಡಿಸುವಂತಹ ಅಚ್ಚರಿಯಲ್ಲಿ ಕೆಡಹುವಂತೆ ಕೆಳಗಿಳಿದ ಜವಾಹರಲಾಲ್ ನೆಹರೂ ಅವರು ತನ್ನ ಕೈಯಲ್ಲಿದ್ದ ಲಾಠಿಯನ್ನು ಝಳಪಿಸುತ್ತಾ, ಹಿಂಸಾಚಾರ ನಿಲ್ಲಿಸುವಂತೆ ಕೂಗುತ್ತಾ ಗುಂಪಿನತ್ತ ಓಡಿದರು. ನಮ್ಮ ಪ್ರಧಾನಿಯವರೇ ಸ್ವಂತ ಭದ್ರತೆಯನ್ನು ಲೆಕ್ಕಿಸದೇ, ಯಾವುದೇ ಭದ್ರತೆ ಇಲ್ಲದೇ ಕಾರ್ಯಾಚರಣೆಗೆ ಧುಮುಕಿದ್ದನ್ನು ನೋಡಿ ದಂಗಾಗಿಹೋದೆ.

ಹೀಗೆ ನಡೆದಂತೆ, ನಾನು ಚಿಕ್ಕದೊಂದು ಭೇಟಿಗಾಗಿ ಮುಂಬಯಿಗೆ ಹೋಗಿದ್ದವನು ಮಹಮ್ಮದಾಲಿ ರಸ್ತೆಯಲ್ಲಿದ್ದಾಗ ದಿಲ್ಲಿಯ ಬಿರ್ಲಾ ಭವನದಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಹತ್ಯೆಯಾದ ಸುದ್ದಿ ಬಂತು. ವ್ಯಾಪಾರಿಗಳು ತರಾತುರಿಯಲ್ಲಿ ಅಂಗಡಿ ಬಾಗಿಲುಗಳನ್ನು ಮುಚ್ಚುವುದನ್ನು ಮತ್ತು ಜನರು ಯದ್ವಾತದ್ವಾ ಓಡುವುದನ್ನು ಕಂಡೆ. ಗಾಂಧೀಜಿಯವರನ್ನು ಕೊಂದದ್ದು ಒಬ್ಬ ಹಿಂದೂ ಎಂದು ಆಕಾಶವಾಣಿಯಲ್ಲಿ ಮಾತನಾಡಿದ ಪ್ರಧಾನಿ ನೆಹರೂ ಮತ್ತೆ ಮತ್ತೆ ಹೇಳಿದ್ದನ್ನು ಕೇಳಿ ನಮಗೆಷ್ಟು ಸಮಾಧಾನವಾಯಿತು ಎಂಬುದನ್ನು ನೆನಪಿಸಿಕೊಳ್ಳಬಲ್ಲೆ. ಇದರಿಂದ ಅವರು ಅಲ್ಪಪಸಂಖ್ಯಾತ ಸಮುದಾಯದ ಮೇಲೆ ಕೋಪ ಸ್ಫೋಟಗೊಂಡು ಹಿಂಸಾಚಾರ ನಡೆಯದಂತೆ ಅವರು ಖಾತರಿಪಡಿಸಿದ್ದರು. ಇದಕ್ಕೆ ತೀಕ್ಷ್ಣವಾದ ಪ್ರಸಂಗಾವಧಾನತೆ ಮತ್ತು ನಮ್ಮ ದೇಶದ ಜಾತ್ಯಾತೀತ ಸ್ವರೂಪದ ರಕ್ಷಣೆಯ ಅಗತ್ಯದ ಕುರಿತು ಆಳವಾದ ನಂಬಿಕೆಯ ಅಗತ್ಯವಿತ್ತು.

ನಾನು ವರ್ಷಗಳ ಹಿಂದೆ ಕಣ್ಣುತಿರುಗಿಸಿ ನೋಡಿದಾಗ, ಅದರಲ್ಲೂ ಮುಖ್ಯವಾಗಿ ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಗಮನಿಸಿದಾಗ ಅದನ್ನು 1947ರ ಅತ್ಯಂತ ಸ್ಫೋಟಕ ಪರಿಸ್ಥಿತಿಗೆ ಹೋಲಿಸುವುದು ಕಷ್ಟವಲ್ಲ. 2020ರಲ್ಲಿ ಯಾವುದೇ ರಾಜಕೀಯ ನಾಯಕರು ಹಿಂಸಾಚಾರವನ್ನಾಗಲೀ, ನಂತರದಲ್ಲಿ ದೇಶಕ್ಕೆ ಆಳವಾದ ಹಾನಿಯುಂಟುಮಾಡುವ ವಿಭಜನೆಯನ್ನಾಗಲೀ ದೈಹಿಕವಾಗಿ ನಿಯಂತ್ರಿಸಲು ವೈಯಕ್ತಿಕವಾಗಿ ಹಾಜರಿರಲಿಲ್ಲ.

ನಿಜವಾದ ನಾಯಕರೆಂದರೆ, ದಾರ್ಶನಿಕತೆ ಮತ್ತು ಧೈರ್ಯ ಹೊಂದಿರುವವರು. ಪಂಡಿತ್‌ಜೀ ಅವರು ಈ ಗುಣಗಳ ಮಾದರಿಯಾಗಿದ್ದಾರೆ.

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವಿಚ್ಛಿದ್ರಕಾರಿ ಅಜೆಂಡಾ ತಡೆಯಲು ಮುಂದಾಗಿ: ಮೋದಿಗೆ ನೌಕಾಪಡೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...