Homeಮುಖಪುಟಆಪ್ ಗುಜರಾತ್ ಕೋರ್ಟ್ ಕಾ ಭಿ ಕ್ರೋನಾಲಜಿ ಸಮಜ್ ಲೀಜಿಯೇ....!!

ಆಪ್ ಗುಜರಾತ್ ಕೋರ್ಟ್ ಕಾ ಭಿ ಕ್ರೋನಾಲಜಿ ಸಮಜ್ ಲೀಜಿಯೇ….!!

- Advertisement -
- Advertisement -

ಇಂದು ಇಡೀ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅತಿ ಹೆಚ್ಚು ದಾಖಲಾಗುತ್ತಿರುವುದು ಮಹಾರಾಷ್ಯ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ, ಆದರೆ ಗುಜರಾತಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮಹಾರಾಷ್ಟ್ರಕ್ಕಿಂತ ಕಡಿಮೆ ಇರಲು ಕಾರಣ ಅಲ್ಲಿ ಸೋಂಕಿತರು ಕಡಿಮೆ ಇರುವುದಲ್ಲ. ಬದಲಿಗೆ ಟೆಸ್ಟ್ ಗಳನ್ನೇ ಕಡಿಮೆ ಮಾಡುತ್ತಿರುವುದು!

ವಾಸ್ತವದಲ್ಲಿ ಮಹಾರಾಷ್ಟ್ರದಲ್ಲಿ ಮಾಡುತ್ತಿರುವ ಟೆಸ್ಟ್ ಗಳ ಅರ್ಧದಷ್ಟು ಟೆಸ್ಟ್ ಗಳನ್ನೂ ಸಹ ಗುಜರಾತ್ ಸರ್ಕಾರ ಮಾಡುತ್ತಿಲ್ಲ. ಸೋಂಕಿತರನ್ನು ಆಸ್ಪತ್ರೆಯಲ್ಲಿ ನೋಂದಾಯಿಸಿಕೊಳ್ಳುತ್ತಿಲ್ಲ. ಸತ್ತವರ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುತ್ತಿಲ್ಲ ಹಾಗು ಸಂಬಂಧಿಕರಿಗೂ ತಿಳಿಸುತ್ತಿಲ್ಲ.

ಅದರಲ್ಲೂ ವಿಶೇಷವಾಗಿ ಗುಜರಾತ್ ನ ರಾಜಧಾನಿ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆ ಸಾವಿನ ಕೂಪವಾಗಿ ಬಿಟ್ಟಿದೆ. ಈವರೆಗೆ ಗುಜರಾತಿನಲ್ಲಿ ಕೋವಿಡ್ ನಿಂದ ಸತ್ತವರಲ್ಲಿ ಅರ್ಧದಷ್ಟು ಭಾಗ ಸತ್ತಿರುವುದು ಅಹಮದಾಬಾದಿನ ಈ ಆಸ್ಪತ್ರೆಯಲ್ಲೇ.. ಕಾರಣ ನಿರ್ಲಕ್ಷ್ಯ, ಸಿಬ್ಬಂದಿ ಹಾಗು ಪರಿಕರಗಳ ಕೊರತೆ, ಸರ್ಕಾರದ ಬೇಜವಾಬ್ದಾರಿ ಇತ್ಯಾದಿ…

ಹೀಗೆ ಕೋವಿಡ್ ನಿರ್ವಹಣೆಯಲ್ಲಿ ಗುಜರಾತ್ ಮಾಡೆಲ್ ಎಂದರೆ ಸುಳ್ಳುಗಳನ್ನು ಹೇಳುತ್ತಾ ಸತ್ಯವನ್ನು ಮರೆಮಾಚುತ್ತಾ ನಡೆಸುತ್ತಿರುವ ಕಪಟವಾಗಿದೆ.

ಇತ್ತೀಚೆಗೆ, ಇವೆಲ್ಲವನ್ನೂ ಕಂಡು ಬೇಸತ್ತ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆಯ ಅನಾಮಧೇಯ ವೈದ್ಯರೊಬ್ಬರು ಗುಜರಾತಿನ ಹೈಕೋರ್ಟಿಗೆ ಪತ್ರವೊಂದನ್ನು ಬರೆದಿದ್ದರು. ಅದನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಗುಜರಾತಿನ ಹೈಕೋರ್ಟು ದಾಖಲಿಸಿಕೊಂಡಿತು ಪ್ರಾರಂಭಿಕ ವಿಚಾರಣೆಯಲ್ಲಿ ಸರ್ಕಾರ ವು ಸತ್ಯಗಳನ್ನು ಮರೆಮಾಚುತ್ತಿರುವುದನ್ನು ಕಂಡುಕೊಂಡಿದ್ದ ಹೈಕೋರ್ಟಿನ ದ್ವಿಸದಸ್ಯ ಪೀಠ ಕೂಡಲೇ ಸರಿಯಾದ ಕ್ರಮಗಳನ್ನು ಜಾರಿಗೊಳಿಸಲು ಆದೇಶಿಸಿತ್ತು.

ಆದರೆ ತನ್ನ ನಿರ್ಲಕ್ಷ್ಯ ಹಾಗು ದುಷ್ಟತನವನ್ನು ಮರೆಮಾಚಲು ಗುಜರಾತ್ ಹಾಗು ಕೇಂದ್ರದ ಬಿಜೆಪಿ ಸರ್ಕಾರ ಹೈ ಕೋರ್ಟನ್ನು ಕೂಡಾ ಬ್ಲಾಕ್ ಮೇಲ್ ಮಾಡುತ್ತಿದೆ.

ಮೋದಿ ಮತ್ತು ಶಾ ಕ್ರೊನಾಲಜಿ

ಅದು ಹೇಗೆಂದು ಅರ್ಥವಾಗಬೇಕೆಂದರೆ ಕೆಳಗಿನ ಕ್ರೋನಾಲಜಿಯನ್ನು ಗಮನಿಸಬೇಕು..

ಮೇ 22-

ಅಹಮದಾಬಾದಿನ ಹೈಕೋರ್ಟಿನ ಜಸ್ಟಿಸ್ ಪಾರ್ದಿವಾಲ ಮತ್ತು ಜಸ್ಟಿಸ್ ವೋರಾ ಪೀಠ:

“ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಗುಜರಾತ್ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಅದರಲ್ಲೂ ಅಹಮದಾಬಾದಿನ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಯ ಆಗರವಾಗಿದೆ. ಸಾವಿನ ಸೆರೆಮನೆಯಾಗಿದೆ. ಗುಜರಾತ್ ಸರ್ಕಾರ ಮೇ 29ರ ಒಳಗೆ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿಯನ್ನು ನೀಡದಿದ್ದರೆ ಕೋರ್ಟು ಕಠಿಣವಾದ ಆದೇಶಗಳನ್ನು ನೀಡಬೇಕಾಗುತ್ತದೆ”

ಮೇ 25-

ಹೈಕೋರ್ಟು ಈ ಕ್ರಮಗಳಿಗೆ ಮುಂದಾಗಬಾರದೆಂದು ಸರ್ಕಾರಿ ವಕೀಲರ ಮನವಿ. ಈ ಮನವಿಯಿಂದ ಕೆಂಡಾಮಂಡಲವಾಗುವ ಕೋರ್ಟು ಮೇ 29 ರೊಳಗೆ ಸರಿಯಾದ ತಿದ್ದುಪಡಿ ಕ್ರಮಗಳನ್ನು ತೆಗೆದುಕೊಂಡು ವರದಿ ಮಾಡಲು ಸೂಚನೆ ಹಾಗು ಆಸ್ಪತೆಯ ಖುದ್ದು ಭೇಟಿ ಕಾರ್ಯಕ್ರಮದ ಘೋಷಣೆ.

ಮೇ 29-

ಅಹಮದಾಬಾದಿನ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್ ವಿಕ್ರಂ ನಾಥರಿಂದ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸುತ್ತಿದ್ದ ಪಾರ್ದಿವಾಲ್ -ವೋರಾ ಪೀಠದ ಪುನರ್ರಚನೆ.

ಈ ಹಿಂದಿನ ಜಸ್ಟಿಸ್ ಪಾರ್ದಿವಾಲ ಮತ್ತು ಜಸ್ಟಿಸ್ ವೋರಾ ಪೀಠದಲ್ಲಿ ಆದೇಶಗಳನ್ನು ಬರೆದ ಜಸ್ಟಿಸ್ ಪಾರ್ದಿವಾಲ ಆ ಪೀಠದ ಹಿರಿಯ ನ್ಯಾಯಾಧೀಶರಾಗಿದ್ದರು.

ಪುನರ್ರಚಿತವಾದ ಪೀಠದ ಜವಾಬ್ದಾರಿಯನ್ನು ಈಗ ಸಾಕ್ಷಾತ್ ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥರೇ ವಹಿಸಿಕೊಂಡಿದ್ದರಿಂದ ಹಳೆಯ ಪೀಠದಲ್ಲಿ ಹಿರಿಯ ನ್ಯಾಯಾಧೀಶರಾಗಿದ್ದ ಪಾರ್ದಿವಾಲಾರವರು ಈ ಹೊಸ ದ್ವಿಸದಸ್ಯ ಪೀಠದಲ್ಲಿ ಕಿರಿಯ ಸಹಚರರಾದರು !

ಮೇ 31-

ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥ ಹಾಗೂ ಜಸ್ಟಿಸ್ ಪಾರ್ದಿವಾಲರ ಪೀಠ :

“ಗುಜರಾತ್ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದೆ. ಸರ್ಕಾರವು ಈಗ ತೆಗೆದುಕೊಂಡಿರುವ ಕ್ರಮಗಳನ್ನು ತೆಗೆದುಕೊಳ್ಳದಿರುತ್ತಿದ್ದರೆ ನಾವೆಲ್ಲರೂ ಸತ್ತೇ ಹೋಗಿರುತ್ತಿದ್ದೆವು. ಅಹಮದಾಬಾದಿನ ಆಸ್ಪತ್ರೆಯೂ ಸಹ ಅತ್ಯುತ್ತಮವಾಗಿದೆ. ಈ ಸಾರ್ವಜನಿಕ ಮೊಕದ್ದಮೆಯನ್ನು ಕೋರ್ಟು ಅಲಹಾಬಾದ್ ಕೈಗೆತ್ತಿಕೊಂಡಿರುವುದು ಸರ್ಕಾರದ ಮೇಲೆ ಆಕ್ಷೇಪಣೆ ಮಾಡುವುದಕ್ಕಲ್ಲ. ವಿರೋಧ ಪಕ್ಷಗಳೂ ಸಹ ಇಂದಿನ ಸಂದರ್ಭದಲ್ಲಿ ಸರ್ಕಾರಕ್ಕೆ ರಚನಾತ್ಮಕ ಸಹಕಾರ ಕೊಡಬೇಕು”

ಅಡಿ ಟಿಪ್ಪಣಿ :

ಅಹಮದಾಬಾದಿನ ಹಾಲಿ ಮುಖ್ಯನ್ಯಾಯಮೂರ್ತಿ ವಿಕ್ರಂ ನಾಥರು 2014 ರಲ್ಲಿ ಉತ್ತರಪ್ರದೇಶದ ಅಲಹಾಬಾದಿನ ಹೈಕೋರ್ಟಿನ ನ್ಯಾಯಾಧೀಶರಾಗಿದ್ದಾಗ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನರೇಂದ್ರ ಮೋದಿಯವರ ಗೆಲುವನ್ನು ಪ್ರಶ್ನಿಸಿದ್ದ ತಕರಾರು ಅರ್ಜಿಯನ್ನು ಹೆಚ್ಚಿನ ವಿಚಾರಣೆಯಿಲ್ಲದೆ ವಜಾ ಮಾಡಿದ್ದರು.

ಆದರೂ 2019 ರ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟಿನ ಕೊಲಿಜಿಯಂ ಆಗ ಅಲಹಾಬಾದ್ ಹೈಕೋರ್ಟಿನ ಹಿರಿಯ ನ್ಯಾಯಾಧೀಶರಾಗಿದ್ದ ವಿಕ್ರಂ ನಾಥರನ್ನು ಆಂಧ್ರಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿಸಲು ಮಾಡಿದ್ದ ಶಿಪಾರಸ್ಸುಗಳನ್ನು ಮೋದಿ ಸರ್ಕಾರ ವಾಪಸ್ ಕಳಿಸಿತ್ತು .

ಆದರೆ 2019 ರ ಆಗಸ್ಟ್ ನಲ್ಲಿ ಮೋದಿ ಸರ್ಕಾರವೇ ಕೊಲಿಜಿಯಂ ಗೆ ವಿಶೇಷ ಮನವಿ ಮಾಡಿ ಜಸ್ಟಿಸ್ ವಿಕ್ರಂ ನಾಥರನ್ನು ಗುಜರಾತಿನ ಮುಖ್ಯ ನ್ಯಾಯಾಧೀಶರನ್ನಾಗಿಸಿಕೊಂಡಿತು…!!

ಒಂದು ಗಿಳಿಪಾಠ : ಭಾರತದ ನ್ಯಾಯಾಂಗವು ಒಂದು ಸ್ವತಂತ್ರ ಸಂಸ್ಥೆಯಾಗಿದೆ.


ಓದಿ: ರಸ್ತೆಯಲ್ಲಿ ಕೊರೊನಾ ಸೋಂಕಿತರ ಶವ; ಗುಜರಾತ್‌ ಮಾಡೆಲ್ ಧ್ವಂಸ ಮಾಡಿ: ಜಿಗ್ನೇಶ್‌ ಮೇವಾನಿ ಆಕ್ರೋಶ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...