Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ.

- Advertisement -
- Advertisement -

‘ಜನ್ನತ್ ಮೊಹಲ್ಲಾ’ ಮತ್ತೆ ಮತ್ತೆ ಓದಿಸಿಕೊಳ್ಳುವ ಅಬ್ಬಾಸ್ ಮೇಲಿನಮನಿ ಅವರ ಮೊದಲ ಕಾದಂಬರಿ. ದ್ವೇಷ-ಪ್ರೀತಿ, ಹಿಂಸೆ-ಅಹಿಂಸೆ, ಸಿಟ್ಟು-ತಾಳ್ಮೆ, ನಿರಾಶೆ-ಭರವಸೆ ಇವುಗಳ ಮುಖಾಮುಖಿಯಲ್ಲಿ ಪ್ರೀತಿ ಅರಳಿಸುವ, ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನವಾಗಿ ‘ಜನ್ನತ್ ಮೊಹಲ್ಲಾ’ ಮೂಡಿಬಂದಿದೆ.

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ. ಕನಸುಗಳೆಂದರೆ ಅವಾಸ್ತವಿಕ ಭ್ರಮೆಗಳೂ ಆಗಬಹುದು. ಆದರೆ ಇಲ್ಲಿನ ಕನಸುಗಳಿಗೆ ನೆಲದ ಆಳದೊಳಗೆ ಇಳಿದಿರುವ ಬೇರುಗಳಿವೆ. ನೆಲದ ಮೇಲಣ ಕಡುವಾಸ್ತವಗಳ ದಟ್ಟ ಅರಿವಿದೆ. ಕನಸುಗಳನ್ನು ಛಿದ್ರಗೊಳಿಸುವ ಪ್ರಯತ್ನಗಳ ಎಚ್ಚರಿವಿದೆ. ಕನಸು ಕಾಣುವ ಹಂಬಲಕ್ಕೆ ಇವುಗಳನ್ನು ನಿವಾರಿಸಿಕೊಳ್ಳುವ ಮನುಷ್ಯಪ್ರೀತಿ, ವಿವೇಕ, ಜಾಣ್ಮೆಗಳಿವೆ.

ಕಾದಂಬರಿಯ ಭಾಷೆ ಕಾವ್ಯಾತ್ಮಕವಾದುದು. ಕುತೂಹಲ ಕಾಯ್ದುಕೊಂಡು ಸಾಗುವ ನಿರೂಪಣಾ ಶೈಲಿ ಓದುಗನ ಗಮನವನ್ನು ಅತ್ತಿತ್ತ ವಿಚಲಿಸದಂತೆ ಕೂರಿಸುತ್ತದೆ. ಅಧ್ಯಾಯಗಳ ಶೀರ್ಷಿಕೆಯೇ ಕವಿತೆಯ ಸಾಲುಗಳಂತೆ ಓದುಗನನ್ನು ಸೆಳೆಯುತ್ತವೆ: ‘ಜೀವಪ್ರೀತಿಯ ಗೂಡಿನೊಳಗೆ ಹೊಸ ಸೂರ್ಯನ ಕನಸು’, ನೆಲದಾಳಕ್ಕೆ ಬೇರು ಆಕಾಶಕ್ಕೆ ಗರಿಗಳು’, ‘ಕಾಡು ಬೆಕ್ಕಿನ ಉಪದ್ರವೂ ಪಾರಿವಾಳದ ಪ್ರತಿರೋಧವೂ’, ‘ಮೋಹದ ಮಾಯೆ ಪಾರಿಜಾತ ಪ್ರೀತಿ’, ‘ಜಿನ್ ಮೊರೆತ ಹೊಸಗಾಳಿಯ ತುಡಿತ’, ‘ತಮಂಧದಂತರಾಳದಲ್ಲಿ ಬೆಳಕಿನ ಹಣತೆ’, ‘ಮುಂಗಾರು ಮಳೆಗೆ ಗರಿಗೆದರಿ ಕುಣಿದ ನವಿಲು’, ‘ಚಂದ್ರ ದರ್ಶನಕೆ ಕಪ್ಪು ಮೋಡಗಳ ಆತಂಕ’, ’ಕತ್ತಲು ಗೂಡಿನಿಂದ ಬೆಳಕು ಹುಡುಕುತ್ತ..’ ಹೀಗೆ. ಪ್ರೀತಿ, ಕನಸು, ಅನ್ಯಾಯದ ವಿರುದ್ಧ ಪ್ರತಿಭಟನೆ, ಕತ್ತಲೆಯ ಎದುರು ಬೆಳಕಿನ ಭರವಸೆ ಹೀಗೆ ಈ ಶೀರ್ಷಿಕೆಗಳೇ ಕಾದಂಬರಿಯ ಹಂಬಲವನ್ನು ಮನದಟ್ಟು ಮಾಡುತ್ತವೆ.

ಇಲ್ಲಿಯ ಪಾತ್ರಗಳು ಕಪ್ಪು ಬಿಳುಪಿನದ್ದಲ್ಲ. ಜೀವಪರವಾದ ರೆಹಮಾನ್, ಸೈರಾ, ತಾಹಿರಾ, ಪೇಶ್ ಇಮಾಮರು, ಶಬ್ಬೀರ, ತಸ್ಸೀಮಾ, ರಫೀಕ್, ನೌಷಾದ್, ಮೋಹನ್, ಬಸವಗಂಗ ಸ್ವಾಮಿಗಳಂತೆ ಜೀವವಿರೋಧಿಯಾದ ಮೋದಿನ, ದೌಲಾ, ಲಾಲ್ಯಾ, ಮಸ್ತಾನ, ಸಾಧಿಕನಂತಹವು. ಹೀಗೆ ಎರಡೂ ಮನಸ್ಥಿತಿಯ ಪಾತ್ರಗಳೂ ಇಲ್ಲಿವೆ. ಈ ತದ್ವಿರುದ್ಧ ವ್ಯಕ್ತಿತ್ವಗಳಲ್ಲಿ ಕೆಲವು ಶಾಶ್ವತವಾಗಿಯೇ ಈ ಗುಣಗಳನ್ನು ಹೊಂದಿರುವವು. ಆದರೂ ವಿರಳ ಸಂದರ್ಭಗಳಲ್ಲಿ ಅದರಾಚೆಗೆ ಹೊರಳುವವು. ಬದುಕಿನ ಕಟುವಾದ ಏರಿಳಿತಗಳಲ್ಲಿ ಮನುಷ್ಯರು ಖಳರಾಗುವ ಹೆಜ್ಜೆ ಗುರುತುಗಳನ್ನು ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ. ಖಳನೆನಿಸುವ ಜಿಲಾನಿ, ಇಮಾಮರಂತಹ ಪಾತ್ರಗಳು ಆದ್ರ್ರವಾಗಿ ಮಿಡಿಯುವ ಬದುಕಿನ ವಿಸ್ಮಯಗಳನ್ನು ಅಚ್ಚರಿಯಿಂದ ದಾಖಲಿಸುತ್ತದೆ. ಜಮಾಲನಂತಹ ಕೆಲವು ಪಾತ್ರಗಳು ಕ್ರೂರಿಯಾಗಿ ಕಂಡರೂ ಅವರು ಹಾಗಾಗುವಲ್ಲಿ ಅವರ ಬದುಕಿನ ದುರಂತವಿರುವುದನ್ನು ಕಾಣಿಸುತ್ತದೆ.

ಅಧಿಕಾರ, ಹಣದ ದುರಾಶೆಗಳು ಒಟ್ಟಾಗಿ ಬದುಕುವ ಸಮುದಾಯಗಳ ಜನರ ನಡುವೆ ಧರ್ಮ, ಜಾತಿಗಳ ನೆಲೆಯಲ್ಲಿ ಮನಸ್ಸುಗಳನ್ನು ಒಡೆದು ಹಿಂಸಾಚಾರಕ್ಕೆ ಕಾರಣವಾಗುವುದನ್ನು ನೈಜವೆನಿಸುವ ಘಟನಾವಳಿಗಳ ಮೂಲಕ ಕಾದಂಬರಿ ಕಟ್ಟಿಕೊಡುತ್ತವೆ. ಒಂದು ಕಡೆ ಮೋದಿನ ಇದ್ದರೆ ಇನ್ನೊಂದು ಕಡೆ ಕಲ್ಯಾಣಪ್ಪ ಇದ್ದಾನೆ. ಈ ಅಧಿಕಾರದಾಹಿಗಳು, ದುರಾಶೆಯ ಜನರು ಎಲ್ಲ ಸಮುದಾಯಗಳಲ್ಲಿ ಇರುವವರು. ಅವರಿಗೆ ಹಿಂದೂ, ಮುಸ್ಲಿಂ ಎನ್ನುವ ಗುರುತುಗಳಿವೆ. ಈ ಗುರುತುಗಳನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿ ಸಮುದಾಯದ ಜನರನ್ನು ಬಲಿಕೊಡುತ್ತಾರೆ. ಇದಕ್ಕೆ ಪ್ರತಿಯಾಗಿ ರೆಹಮಾನ್ ಮತ್ತು ಸಂಗನ ಬಸವಸ್ವಾಮಿಗಳಂತಹ ಜಾತಿ-ಧರ್ಮಗಳಾಚೆ ಜನರ ಏಳಿಗೆ ಮತ್ತು ನೆಮ್ಮದಿ ಬಯಸುವ ಮುಂದಾಳುಗಳು ಭರವಸೆಯಾಗುತ್ತಾರೆ. ಆದರೆ ಮೋದಿನ, ಕಲ್ಯಾಣಪ್ಪನಂತವರ ಅರ್ಭಟಗಳೇ ರಾಜಕೀಯ ಶಕ್ತಿಯನ್ನು ಪಡೆಯುತ್ತ ನಾಡನ್ನು ದುರಂತದತ್ತ ತಳ್ಳುತ್ತಿರುವುದು ಲೇಖಕನನ್ನು ದಿಗ್ಭ್ರಮೆಗೊಳಿಸುವ ಸೂಚನೆಗಳು ಕಾದಂಬರಿಯಲ್ಲಿ ಸಿಗುತ್ತವೆ.

ಎಲ್ಲಾ ಜಾತಿ ಧರ್ಮಗಳಲ್ಲಿಯೂ ಮಹಿಳೆ ಶೋಷಿತಳು. ಮುಸ್ಲಿಂ ಧರ್ಮದಲ್ಲಿಯೂ ಇದು ಎದ್ದು ಕಾಣುತ್ತದೆ. ಈ ಬಗ್ಗೆ ಕಾದಂಬರಿ ಮಹಿಳೆಯರನ್ನು ಘನತೆಯಿಂದ ಕಾಣುತ್ತದೆ. ಖತೀಜಾಬೀಬಿ, ತಾಹಿರಾ, ಸೈರಾರಂಥ ಮಹಿಳೆಯರನ್ನು ಕಾದಂಬರಿ ಉತ್ಸಾಹದಲ್ಲಿ ಚಿತ್ರಿಸುತ್ತದೆ. ಸಾಂಪ್ರದಾಯಿಕ ಬದುಕಿನೊಳಗಿನಿಂದಲೇ ವ್ಯಕ್ತವಾಗುವ ಈ ಮಹಿಳೆಯರ ದಿಟ್ಟತನಗಳನ್ನು ಅವರ ಬದುಕಿನ ಕಥನಗಳ ಮೂಲಕವೇ ಓದುಗನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸುತ್ತದೆ.

ಇದನ್ನು ಓದುವ ಈಗಿನ ತಲೆಮಾರು ಇದನ್ನೊಂದು ಮುಸ್ಲಿಂ ಬದುಕನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಕಾದಂಬರಿ ಎಂಬ ತೀರ್ಮಾನಕ್ಕೆ ಬರಬಹುದಾದ ಅಪಾಯವಿದೆ. ಯಾಕೆಂದರೆ ಮೋಹನ, ಸಂಗನಬಸವನ ಸ್ವಾಮಿಗಳು, ಕಲ್ಯಾಣಪ್ಪನಂತಹ ನಾಲ್ಕೈದು ಪಾತ್ರಗಳು ಮಾತ್ರ ಮುಸ್ಲೀಮೇತರರದ್ದಾಗಿವೆ. ಆದರೆ ಇದು ಮುಸ್ಲಿಂ ಬದುಕಿನ ಕಷ್ಟ ಸುಖಗಳನ್ನು ಚಿತ್ರಿಸುವ ಕಾದಂಬರಿಯಲ್ಲ. ಇಲ್ಲಿನ ಪಾತ್ರಗಳ ಹೆಸರು ಬದಲಿಸಿದರೆ ಅದು ಹಿಂದೂ, ಕ್ರಿಶ್ಚಿಯನ್ ಅಥವಾ ಜಗತ್ತಿನ ಯಾವುದೇ ಸಮಾಜದ ಬದುಕೇ ಆಗಿರುತ್ತವೆ.

ಜನ್ನತ್ ಮೊಹಲ್ಲಾವನ್ನು ನಮ್ಮೆದುರಿಟ್ಟು ದಿಢೀರನೇ ಕಣ್ಮರೆಯಾದ ಅಬ್ಬಾಸ್ ಮೇಲಿನಮನಿಯವರು ರಹಮಾನನ ಸಮುದಾಯಪ್ರಜ್ಞೆ, ಇಮಾಮರ ಸ್ವಚ್ಚ ಧಾರ್ಮಿಕಮನಸ್ಸು, ಶಬ್ಬೀರನ ಜೀವನೋತ್ಸಾಹ, ಜಿಲಾನಿಯು ತನ್ನನ್ನು ಮೀರಿ ಕಾಣುವ ದಾರ್ಶನಿಕ ರೂಪದಲ್ಲಿ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ.

  • ಡಾ.ಸರ್ಜಾಶಂಕರ್ ಹರಳಿಮಠ

ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...