Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ.

- Advertisement -
- Advertisement -

‘ಜನ್ನತ್ ಮೊಹಲ್ಲಾ’ ಮತ್ತೆ ಮತ್ತೆ ಓದಿಸಿಕೊಳ್ಳುವ ಅಬ್ಬಾಸ್ ಮೇಲಿನಮನಿ ಅವರ ಮೊದಲ ಕಾದಂಬರಿ. ದ್ವೇಷ-ಪ್ರೀತಿ, ಹಿಂಸೆ-ಅಹಿಂಸೆ, ಸಿಟ್ಟು-ತಾಳ್ಮೆ, ನಿರಾಶೆ-ಭರವಸೆ ಇವುಗಳ ಮುಖಾಮುಖಿಯಲ್ಲಿ ಪ್ರೀತಿ ಅರಳಿಸುವ, ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನವಾಗಿ ‘ಜನ್ನತ್ ಮೊಹಲ್ಲಾ’ ಮೂಡಿಬಂದಿದೆ.

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ. ಕನಸುಗಳೆಂದರೆ ಅವಾಸ್ತವಿಕ ಭ್ರಮೆಗಳೂ ಆಗಬಹುದು. ಆದರೆ ಇಲ್ಲಿನ ಕನಸುಗಳಿಗೆ ನೆಲದ ಆಳದೊಳಗೆ ಇಳಿದಿರುವ ಬೇರುಗಳಿವೆ. ನೆಲದ ಮೇಲಣ ಕಡುವಾಸ್ತವಗಳ ದಟ್ಟ ಅರಿವಿದೆ. ಕನಸುಗಳನ್ನು ಛಿದ್ರಗೊಳಿಸುವ ಪ್ರಯತ್ನಗಳ ಎಚ್ಚರಿವಿದೆ. ಕನಸು ಕಾಣುವ ಹಂಬಲಕ್ಕೆ ಇವುಗಳನ್ನು ನಿವಾರಿಸಿಕೊಳ್ಳುವ ಮನುಷ್ಯಪ್ರೀತಿ, ವಿವೇಕ, ಜಾಣ್ಮೆಗಳಿವೆ.

ಕಾದಂಬರಿಯ ಭಾಷೆ ಕಾವ್ಯಾತ್ಮಕವಾದುದು. ಕುತೂಹಲ ಕಾಯ್ದುಕೊಂಡು ಸಾಗುವ ನಿರೂಪಣಾ ಶೈಲಿ ಓದುಗನ ಗಮನವನ್ನು ಅತ್ತಿತ್ತ ವಿಚಲಿಸದಂತೆ ಕೂರಿಸುತ್ತದೆ. ಅಧ್ಯಾಯಗಳ ಶೀರ್ಷಿಕೆಯೇ ಕವಿತೆಯ ಸಾಲುಗಳಂತೆ ಓದುಗನನ್ನು ಸೆಳೆಯುತ್ತವೆ: ‘ಜೀವಪ್ರೀತಿಯ ಗೂಡಿನೊಳಗೆ ಹೊಸ ಸೂರ್ಯನ ಕನಸು’, ನೆಲದಾಳಕ್ಕೆ ಬೇರು ಆಕಾಶಕ್ಕೆ ಗರಿಗಳು’, ‘ಕಾಡು ಬೆಕ್ಕಿನ ಉಪದ್ರವೂ ಪಾರಿವಾಳದ ಪ್ರತಿರೋಧವೂ’, ‘ಮೋಹದ ಮಾಯೆ ಪಾರಿಜಾತ ಪ್ರೀತಿ’, ‘ಜಿನ್ ಮೊರೆತ ಹೊಸಗಾಳಿಯ ತುಡಿತ’, ‘ತಮಂಧದಂತರಾಳದಲ್ಲಿ ಬೆಳಕಿನ ಹಣತೆ’, ‘ಮುಂಗಾರು ಮಳೆಗೆ ಗರಿಗೆದರಿ ಕುಣಿದ ನವಿಲು’, ‘ಚಂದ್ರ ದರ್ಶನಕೆ ಕಪ್ಪು ಮೋಡಗಳ ಆತಂಕ’, ’ಕತ್ತಲು ಗೂಡಿನಿಂದ ಬೆಳಕು ಹುಡುಕುತ್ತ..’ ಹೀಗೆ. ಪ್ರೀತಿ, ಕನಸು, ಅನ್ಯಾಯದ ವಿರುದ್ಧ ಪ್ರತಿಭಟನೆ, ಕತ್ತಲೆಯ ಎದುರು ಬೆಳಕಿನ ಭರವಸೆ ಹೀಗೆ ಈ ಶೀರ್ಷಿಕೆಗಳೇ ಕಾದಂಬರಿಯ ಹಂಬಲವನ್ನು ಮನದಟ್ಟು ಮಾಡುತ್ತವೆ.

ಇಲ್ಲಿಯ ಪಾತ್ರಗಳು ಕಪ್ಪು ಬಿಳುಪಿನದ್ದಲ್ಲ. ಜೀವಪರವಾದ ರೆಹಮಾನ್, ಸೈರಾ, ತಾಹಿರಾ, ಪೇಶ್ ಇಮಾಮರು, ಶಬ್ಬೀರ, ತಸ್ಸೀಮಾ, ರಫೀಕ್, ನೌಷಾದ್, ಮೋಹನ್, ಬಸವಗಂಗ ಸ್ವಾಮಿಗಳಂತೆ ಜೀವವಿರೋಧಿಯಾದ ಮೋದಿನ, ದೌಲಾ, ಲಾಲ್ಯಾ, ಮಸ್ತಾನ, ಸಾಧಿಕನಂತಹವು. ಹೀಗೆ ಎರಡೂ ಮನಸ್ಥಿತಿಯ ಪಾತ್ರಗಳೂ ಇಲ್ಲಿವೆ. ಈ ತದ್ವಿರುದ್ಧ ವ್ಯಕ್ತಿತ್ವಗಳಲ್ಲಿ ಕೆಲವು ಶಾಶ್ವತವಾಗಿಯೇ ಈ ಗುಣಗಳನ್ನು ಹೊಂದಿರುವವು. ಆದರೂ ವಿರಳ ಸಂದರ್ಭಗಳಲ್ಲಿ ಅದರಾಚೆಗೆ ಹೊರಳುವವು. ಬದುಕಿನ ಕಟುವಾದ ಏರಿಳಿತಗಳಲ್ಲಿ ಮನುಷ್ಯರು ಖಳರಾಗುವ ಹೆಜ್ಜೆ ಗುರುತುಗಳನ್ನು ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ. ಖಳನೆನಿಸುವ ಜಿಲಾನಿ, ಇಮಾಮರಂತಹ ಪಾತ್ರಗಳು ಆದ್ರ್ರವಾಗಿ ಮಿಡಿಯುವ ಬದುಕಿನ ವಿಸ್ಮಯಗಳನ್ನು ಅಚ್ಚರಿಯಿಂದ ದಾಖಲಿಸುತ್ತದೆ. ಜಮಾಲನಂತಹ ಕೆಲವು ಪಾತ್ರಗಳು ಕ್ರೂರಿಯಾಗಿ ಕಂಡರೂ ಅವರು ಹಾಗಾಗುವಲ್ಲಿ ಅವರ ಬದುಕಿನ ದುರಂತವಿರುವುದನ್ನು ಕಾಣಿಸುತ್ತದೆ.

ಅಧಿಕಾರ, ಹಣದ ದುರಾಶೆಗಳು ಒಟ್ಟಾಗಿ ಬದುಕುವ ಸಮುದಾಯಗಳ ಜನರ ನಡುವೆ ಧರ್ಮ, ಜಾತಿಗಳ ನೆಲೆಯಲ್ಲಿ ಮನಸ್ಸುಗಳನ್ನು ಒಡೆದು ಹಿಂಸಾಚಾರಕ್ಕೆ ಕಾರಣವಾಗುವುದನ್ನು ನೈಜವೆನಿಸುವ ಘಟನಾವಳಿಗಳ ಮೂಲಕ ಕಾದಂಬರಿ ಕಟ್ಟಿಕೊಡುತ್ತವೆ. ಒಂದು ಕಡೆ ಮೋದಿನ ಇದ್ದರೆ ಇನ್ನೊಂದು ಕಡೆ ಕಲ್ಯಾಣಪ್ಪ ಇದ್ದಾನೆ. ಈ ಅಧಿಕಾರದಾಹಿಗಳು, ದುರಾಶೆಯ ಜನರು ಎಲ್ಲ ಸಮುದಾಯಗಳಲ್ಲಿ ಇರುವವರು. ಅವರಿಗೆ ಹಿಂದೂ, ಮುಸ್ಲಿಂ ಎನ್ನುವ ಗುರುತುಗಳಿವೆ. ಈ ಗುರುತುಗಳನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿ ಸಮುದಾಯದ ಜನರನ್ನು ಬಲಿಕೊಡುತ್ತಾರೆ. ಇದಕ್ಕೆ ಪ್ರತಿಯಾಗಿ ರೆಹಮಾನ್ ಮತ್ತು ಸಂಗನ ಬಸವಸ್ವಾಮಿಗಳಂತಹ ಜಾತಿ-ಧರ್ಮಗಳಾಚೆ ಜನರ ಏಳಿಗೆ ಮತ್ತು ನೆಮ್ಮದಿ ಬಯಸುವ ಮುಂದಾಳುಗಳು ಭರವಸೆಯಾಗುತ್ತಾರೆ. ಆದರೆ ಮೋದಿನ, ಕಲ್ಯಾಣಪ್ಪನಂತವರ ಅರ್ಭಟಗಳೇ ರಾಜಕೀಯ ಶಕ್ತಿಯನ್ನು ಪಡೆಯುತ್ತ ನಾಡನ್ನು ದುರಂತದತ್ತ ತಳ್ಳುತ್ತಿರುವುದು ಲೇಖಕನನ್ನು ದಿಗ್ಭ್ರಮೆಗೊಳಿಸುವ ಸೂಚನೆಗಳು ಕಾದಂಬರಿಯಲ್ಲಿ ಸಿಗುತ್ತವೆ.

ಎಲ್ಲಾ ಜಾತಿ ಧರ್ಮಗಳಲ್ಲಿಯೂ ಮಹಿಳೆ ಶೋಷಿತಳು. ಮುಸ್ಲಿಂ ಧರ್ಮದಲ್ಲಿಯೂ ಇದು ಎದ್ದು ಕಾಣುತ್ತದೆ. ಈ ಬಗ್ಗೆ ಕಾದಂಬರಿ ಮಹಿಳೆಯರನ್ನು ಘನತೆಯಿಂದ ಕಾಣುತ್ತದೆ. ಖತೀಜಾಬೀಬಿ, ತಾಹಿರಾ, ಸೈರಾರಂಥ ಮಹಿಳೆಯರನ್ನು ಕಾದಂಬರಿ ಉತ್ಸಾಹದಲ್ಲಿ ಚಿತ್ರಿಸುತ್ತದೆ. ಸಾಂಪ್ರದಾಯಿಕ ಬದುಕಿನೊಳಗಿನಿಂದಲೇ ವ್ಯಕ್ತವಾಗುವ ಈ ಮಹಿಳೆಯರ ದಿಟ್ಟತನಗಳನ್ನು ಅವರ ಬದುಕಿನ ಕಥನಗಳ ಮೂಲಕವೇ ಓದುಗನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸುತ್ತದೆ.

ಇದನ್ನು ಓದುವ ಈಗಿನ ತಲೆಮಾರು ಇದನ್ನೊಂದು ಮುಸ್ಲಿಂ ಬದುಕನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಕಾದಂಬರಿ ಎಂಬ ತೀರ್ಮಾನಕ್ಕೆ ಬರಬಹುದಾದ ಅಪಾಯವಿದೆ. ಯಾಕೆಂದರೆ ಮೋಹನ, ಸಂಗನಬಸವನ ಸ್ವಾಮಿಗಳು, ಕಲ್ಯಾಣಪ್ಪನಂತಹ ನಾಲ್ಕೈದು ಪಾತ್ರಗಳು ಮಾತ್ರ ಮುಸ್ಲೀಮೇತರರದ್ದಾಗಿವೆ. ಆದರೆ ಇದು ಮುಸ್ಲಿಂ ಬದುಕಿನ ಕಷ್ಟ ಸುಖಗಳನ್ನು ಚಿತ್ರಿಸುವ ಕಾದಂಬರಿಯಲ್ಲ. ಇಲ್ಲಿನ ಪಾತ್ರಗಳ ಹೆಸರು ಬದಲಿಸಿದರೆ ಅದು ಹಿಂದೂ, ಕ್ರಿಶ್ಚಿಯನ್ ಅಥವಾ ಜಗತ್ತಿನ ಯಾವುದೇ ಸಮಾಜದ ಬದುಕೇ ಆಗಿರುತ್ತವೆ.

ಜನ್ನತ್ ಮೊಹಲ್ಲಾವನ್ನು ನಮ್ಮೆದುರಿಟ್ಟು ದಿಢೀರನೇ ಕಣ್ಮರೆಯಾದ ಅಬ್ಬಾಸ್ ಮೇಲಿನಮನಿಯವರು ರಹಮಾನನ ಸಮುದಾಯಪ್ರಜ್ಞೆ, ಇಮಾಮರ ಸ್ವಚ್ಚ ಧಾರ್ಮಿಕಮನಸ್ಸು, ಶಬ್ಬೀರನ ಜೀವನೋತ್ಸಾಹ, ಜಿಲಾನಿಯು ತನ್ನನ್ನು ಮೀರಿ ಕಾಣುವ ದಾರ್ಶನಿಕ ರೂಪದಲ್ಲಿ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ.

  • ಡಾ.ಸರ್ಜಾಶಂಕರ್ ಹರಳಿಮಠ

ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...