Homeಕರ್ನಾಟಕಬಯಲಲ್ಲಿ ಬಯಲಾದ ಬಯಲ ಜೀವ ಕಾರ್ನಾಡ್

ಬಯಲಲ್ಲಿ ಬಯಲಾದ ಬಯಲ ಜೀವ ಕಾರ್ನಾಡ್

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು.

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಸಾಕ್ಷಿ ಪ್ರಜ್ಞೆಯಾದ ಗಿರೀಶ್ ಕಾರ್ನಾಡರು ನಮ್ಮಿಂದ ಇಂದು ಅಗಲಿ ಹೋಗಿದ್ದಾರೆ. ಆದರೆ ಅವರು ಕಟ್ಟಿಕೊಟ್ಟ, ಬಿತ್ತಿ ಹೋದ ಬೀಜಗಳು ನಮ್ಮೆಲ್ಲರ ಅಂತರಂಗದಲ್ಲಿ ಮೊಳಕೆ ಒಡೆದಿವೆ. ಅವರ ವಿಚಾರಧಾರೆಯ ಎಳೆ ಹಿಡಿದು ಹೊರಟ ಎಷ್ಟೋ ಕನಸಿನ ಹೂಗಳು ಈಗಾಗಲೆ ಮಿಡಿಯಾಗಿ, ಕಾಯಾಗಿ , ಹಣ್ಣಾಗಿ ನಮ್ಮ ಕಣ್ಣ ಮುಂದೆಯೆ ನಳನಳಿಸುತ್ತಿವೆ. ಗಿರೀಶ್ ಕರ್ನಾಡರು ತಲೆದಂಡ ಬರೆದಾಗ ಅವರ ಬಗೆಗೆ ಕೆಲವು ಆಕ್ಷೇಪಗಳು ಇದ್ದವು. ಅವನ್ನು ಹೊರತು ಪಡಿಸಿ ಅವರೊಬ್ಬ ಗಟ್ಟಿಯಾದ ನಿಲುವುಗಳು ಹೊಂದಿದ ಬರಹಗಾರರಾಗಿದ್ದರು. ನಿರ್ದೇಶಕರಾಗಿದ್ದರು. ಅತ್ಯುತ್ತಮ ನಟರೂ ಆಗಿದ್ದರು.

ಇದಷ್ಟೇ ಅಲ್ಲದೆ ಕಲಾವಿದ, ಬರಹಗಾರ, ನಾಟಕಕಾರ ಕೇವಲ ತನ್ನ ಲೋಕದಲ್ಲಿ ಮುಳುಗಿ ಹೋಗದೆ ವಾಸ್ತವಿಕ ಜಗತ್ತಿನಲ್ಲೂ ತನ್ನ ಪಾತ್ರವನ್ನು ಅವಕಾಶ ಸಿಕ್ಕಾಗಲೆಲ್ಲ ತೋರ್ಪಡಿಸುತ್ತಿದ್ದರು. ಪಿ.ಲಂಕೇಶ್ ಅವರೊಂದಿಗೆ ಬೆಳೆದ ಸಖ್ಯ, ಗೌರಿ ಲಂಕೇಶ್ ವರೆಗೂ ಹಾಗೆ ಮುಂದುವರೆಯಿತು. ರಾಷ್ಟ್ರದಲ್ಲಿ ಹಿಂದೂ ಭಕ್ತಿಯ ಹೆಸರಿನ ಮೇಲೆ ನಡೆದ ನಂಗಾನಾಚ ವಿರುದ್ಧ ಧ್ವನಿ ಎತ್ತಿದವರಲ್ಲಿ ಕಾರ್ನಾಡರೂ ಒಬ್ಬರಾಗಿದ್ದರು. ದನದ ಸೆಗಣಿ, ಗಂಜಳಕ್ಕಿಂತಲೂ ಮನುಷ್ಯತ್ವ ಶ್ರೇಷ್ಠ ಎಂಬುದು ಅವರ ಚಿಂತನೆಯ ಒಟ್ಟು ಧ್ವನಿಯಾಗಿತ್ತು.

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು. ತಮ್ಮ ಗಟ್ಟಿಯಾದ ಅಷ್ಟೇ ದಿಟ್ಟವಾದ ಹೆಜ್ಜೆಗಳನ್ನು ಇಡುವ ಮೂಲಕ ಕನಸುಗಳನ್ನೂ ಕಟ್ಟಿಕೊಟ್ಟರು. ಇಡೀ ನಾಡಿನ ತುಂಬ ತಮ್ಮ ಚಟುವಟಿಕೆಗಳ ಮೂಲಕ ಎಲ್ಲರ ಹೆಗ್ಗಳಿಕೆ ಪಾತ್ರರಾದರು. ಜ್ಞಾನಪೀಠ ಪ್ರಶಸ್ತಿಯ ಪುರಸ್ಕಾರವೂ ಅವರ ಮಡಿಲಿಗೆ ಏರಿತು.

ಆದರೆ ಬಹಳಷ್ಟು ಜನ ಸಾಹಿತಿಗಳು ಕಲಾವಿದರು ಪ್ರಶಸ್ತಿ ಫಲಗಳು, ಸ್ಥಾನ ಮಾನಗಳು ದೊರೆತಾದ ಮೇಲೆ ಎಲ್ಲರ ಜೊತೆ ಅಂದರೆ ಸಾಮಾನ್ಯರ ಜೊತೆ ಸಾಮಾನ್ಯರಾಗಿ ಬೆರೆಯುವುದು ಕಮ್ಮಿ. ತಮ್ಮ ಎಂದಿನ ಪ್ರಶಸ್ತಿಯ ಗುಂಗಿನಿಂದ ಹೊರಗಡೆ ಬಂದಿರುವುದಿಲ್ಲ. ಆ ಪ್ರಶಸ್ತಿ ಹಾರ ತುರಾಯಿಗಳಲ್ಲಿಯೇ ಕೊಳೆತು ಹೋಗಿರುತ್ತಾರೆ. ಈ ಮಾತಿಗೆ ಕಾರ್ನಾಡರು ಅಪವಾದವಾಗಿದ್ದರು. ತಾವು ನಂಬಿದ ತತ್ವ ಸಿದ್ಧಾಂತಗಳು ತಮ್ಮ ಕಣ್ಣ ಮುಂದೆಯೆ ನಗೆಪಾಟಲಿಗೆ ಈಡಾಗುತ್ತಿದ್ದರೆ ತಕ್ಷಣವೆ ಅದಕ್ಕೆ ಸ್ಪಂದಿಸುತ್ತಿದ್ದರು. ಬೆಂಗಳೂರಿನ ಟೌನ ಹಾಲ್ ಮುಂದೆ ನಡೆಯುವ ಏನೆಲ್ಲ ಪ್ರತಿಭಟನೆಯಲ್ಲಿಯೂ ಅವರ ಹಾಜರಿ ಇರುತ್ತಿತ್ತು.

ಪ್ರಜ್ಞಾವಂತ ನಡಾವಳಿಯ ಬರಹಗಾರರನ್ನು ಕಂಡರೆ ಗುಲಾಮರಿಗೆ ಉರಿ ಉರಿ. ಕಾರ್ನಾಡರ ಬಗೆಗೂ ಸಂಘಿಗಳು ಕಿಡಿಕಾರಿದವು. ನಾನೂ ನಗರ ನಕ್ಸಲ್ ವಾದಿ ಎಂದು ಬರಹವೊಂದನ್ನು ಕೊರಳಲ್ಲಿ ಹಾಕಿಕೊಂಡು ಪ್ರತಿಭಟನೆಗೆ ಇಳಿದಾಗ ಬಹಳಷ್ಟು ಜನ ಕುಹಕದ ಮಾತನಾಡಿದರು. ಆಗಲೂ ಅವರ ಮಾತನ್ನು ಕಾರ್ನಾಡ ನಗು ನಗುತ್ತಾ ಸ್ವೀಕರಿಸಿದರು. ಏಕೆಂದರೆ ಅವರಿಗೆ ಸತ್ಯ ಗೊತ್ತಿತ್ತು. ಸನಾತನವಾದಿಗಳು ವಿಚಾರವಾದವನ್ನು ಒಪ್ಪಲಾರರು. ಧರ್ಮವನ್ನು ಅಫೀಮನ್ನಾಗಿ ಜನಗಳಿಗೆ ನೀಡುವವರು ಧರ್ಮವೊಂದು ದಯಯ ತಳಹದಿ ಎಂದು ಅರಿಯಲಾರರು ಎಂದು.

‘ನನ್ನ ರಾಜ್ಯದಲ್ಲಿ ಪ್ರತಿಯೊಂದು ಕಾರ್ಯವೂ ಪ್ರಾರ್ಥನೆಯಾಗಬೇಕು. ಪ್ರತಿಯೊಂದು ಪ್ರಾರ್ಥನೆಯೂ ನಮ್ಮನ್ನು ದೇವರೆಡೆಗೆ ಒಯ್ಯುವ ಮೆಟ್ಟಿಲಾಗಬೇಕು. ಆದರೆ ಇಲ್ಲಿ ಪ್ರಾರ್ಥನೆಗೂ ರಾಜಕಾರಣದ ಸೋಂಕು ಬಡಿದಿದೆ’ ಎಂದು ತುಘಲಕ್ ನಾಟಕದಲ್ಲಿ ಬರೆಯುವ ಮೂಲಕ ನಮ್ಮ ಇಂದಿನ ರಾಜಕೀಯ ವಸ್ತು ಸ್ಥಿತಿಯನ್ನು ಬಿಚ್ಚಿಟ್ಟರು.

ಒಬ್ಬ ಅಗಸ ತೊಳೆದಷ್ಟು ಕೊಳೆಯನ್ನು ಜಗತ್ತಿನ ಯಾವ ಧರ್ಮ ಗುರುವು ತೊಳೆದಿಲ್ಲ! ಎಂಬುದು ಅವರಿಗೆ ಖಚಿತವಾಗಿತ್ತು. ಆದರೂ ಅವರು ತಮ್ಮ ಮಾನವೀಯ ನಡಾವಳಿಕೆಗಳ ಮೂಲಕ ಸಮಾಜಕ್ಕೆ ಅಂಟಿದ ಕೊಳೆಯನ್ನು ತೊಳೆಯಲು ಮುಂದಾಗುತ್ತಿದ್ದರು. ಆಗ ರಾಕ್ಷಸಿ ಪ್ರವೃತಿಯನ್ನು ರೂಢಿಸಿಕೊಂಡ ಕೆಲವು ಮನಸ್ಸುಗಳು ಈಗ ಸಂತೋಷ ವ್ಯಕ್ತ ಪಡಿಸುತ್ತಿವೆ. ಸಾವನ್ನು ಮರಣವೇ ಮಹನವಮಿ ಎಂದು ಸ್ವೀಕರಿಸುವ ಛಲ ಕಾರ್ನಾಡರಿಗೆ ಇತ್ತು. ಆದ್ದರಿಂದಲೆ ತಮ್ಮ ಜೀವವಿಲ್ಲದ ದೇಹಕ್ಕೆ ಸರಕಾರಿ ಸಕಲ ಗೌರವ ಎಂಬ ನಾಟಕ ಗೀಟಕ ಬೇಡ ಎಂದು ತಮ್ಮ ಕುಟುಂಬದ ಸದಸ್ಯರಲ್ಲಿ ಹೇಳಿಕೊಂಡಿದ್ದಾರೆ. ಅವರ ಶರೀರವೂ ಸಹ ಯಾವುದೆ ಧಾರ್ಮಿಕ ವಿಧಿ ವಿಧಾನ ಇಲ್ಲದೆ ನೆರವೇರಿಸಬೇಕೆಂದೂ ತಿಳಿಸಿದ್ದಾರೆ. ಈ ಮೂಲಕ ಅವರು ಅನಂತದೆಡೆಗೆ ಪಯಣಿಸಿದ್ದಾರೆ.

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಎಂಬ ಅಲ್ಲಮಪ್ರಭುವಿನ ವಚನದಂತೆ ಬಯಲು ಬಯಲನ್ನು ಬಿತ್ತಿ ಬಯಲು ಬಯಲನ್ನೆ ಬೆಳೆದು ಬಯಲು ಬಯಲಾದರು ಕರ್ನಾಡರು. ಅವರ ಬಯಲ ಜೀವನ ಬಯಲ ಭಾವನೆ ನಮ್ಮೆಲ್ಲರೊಳಗೆ ಬಯಲು ಬಯಲಾಯಿತ್ತು. ಸಮಾಜವನ್ನು ಪ್ರೀತಿಸಿದ ಗೌರವಿಸಿದ ಸಮಾಜದೊಂದಿಗೆ ಜೀವಂತವಾಗಿ ಸ್ಪಂದಿಸಿ ಜೀವಂತ ಬದುಕಿದ ಕಾರ್ನಾಡ ಸತ್ಯವನ್ನು ನಂಬಿ ಬಯಲಾಗಿದ್ದಾರೆ. ಅಂದರೆ ನಮ್ಮೆಲ್ಲರೊಳಗೆ ಬೆರೆತು ಹೋಗಿದ್ದಾರೆ. ಕಾರ್ನಾಡರಿಗೆ ಸಾವು ಇಲ್ಲ. ಅರಿತವರು ಸಾಯುವುದೂ ಇಲ್ಲ. ಅರಿತುಕೊಂಡಿದ್ದ ಕಾರ್ನಾಡರು ನಮ್ಮೆಲ್ಲರೊಳಗೆ ಪ್ರಜ್ಞೆಯಾಗಿ ಜೀವಂತವಾಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...