Homeಕರ್ನಾಟಕಬಯಲಲ್ಲಿ ಬಯಲಾದ ಬಯಲ ಜೀವ ಕಾರ್ನಾಡ್

ಬಯಲಲ್ಲಿ ಬಯಲಾದ ಬಯಲ ಜೀವ ಕಾರ್ನಾಡ್

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು.

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಸಾಕ್ಷಿ ಪ್ರಜ್ಞೆಯಾದ ಗಿರೀಶ್ ಕಾರ್ನಾಡರು ನಮ್ಮಿಂದ ಇಂದು ಅಗಲಿ ಹೋಗಿದ್ದಾರೆ. ಆದರೆ ಅವರು ಕಟ್ಟಿಕೊಟ್ಟ, ಬಿತ್ತಿ ಹೋದ ಬೀಜಗಳು ನಮ್ಮೆಲ್ಲರ ಅಂತರಂಗದಲ್ಲಿ ಮೊಳಕೆ ಒಡೆದಿವೆ. ಅವರ ವಿಚಾರಧಾರೆಯ ಎಳೆ ಹಿಡಿದು ಹೊರಟ ಎಷ್ಟೋ ಕನಸಿನ ಹೂಗಳು ಈಗಾಗಲೆ ಮಿಡಿಯಾಗಿ, ಕಾಯಾಗಿ , ಹಣ್ಣಾಗಿ ನಮ್ಮ ಕಣ್ಣ ಮುಂದೆಯೆ ನಳನಳಿಸುತ್ತಿವೆ. ಗಿರೀಶ್ ಕರ್ನಾಡರು ತಲೆದಂಡ ಬರೆದಾಗ ಅವರ ಬಗೆಗೆ ಕೆಲವು ಆಕ್ಷೇಪಗಳು ಇದ್ದವು. ಅವನ್ನು ಹೊರತು ಪಡಿಸಿ ಅವರೊಬ್ಬ ಗಟ್ಟಿಯಾದ ನಿಲುವುಗಳು ಹೊಂದಿದ ಬರಹಗಾರರಾಗಿದ್ದರು. ನಿರ್ದೇಶಕರಾಗಿದ್ದರು. ಅತ್ಯುತ್ತಮ ನಟರೂ ಆಗಿದ್ದರು.

ಇದಷ್ಟೇ ಅಲ್ಲದೆ ಕಲಾವಿದ, ಬರಹಗಾರ, ನಾಟಕಕಾರ ಕೇವಲ ತನ್ನ ಲೋಕದಲ್ಲಿ ಮುಳುಗಿ ಹೋಗದೆ ವಾಸ್ತವಿಕ ಜಗತ್ತಿನಲ್ಲೂ ತನ್ನ ಪಾತ್ರವನ್ನು ಅವಕಾಶ ಸಿಕ್ಕಾಗಲೆಲ್ಲ ತೋರ್ಪಡಿಸುತ್ತಿದ್ದರು. ಪಿ.ಲಂಕೇಶ್ ಅವರೊಂದಿಗೆ ಬೆಳೆದ ಸಖ್ಯ, ಗೌರಿ ಲಂಕೇಶ್ ವರೆಗೂ ಹಾಗೆ ಮುಂದುವರೆಯಿತು. ರಾಷ್ಟ್ರದಲ್ಲಿ ಹಿಂದೂ ಭಕ್ತಿಯ ಹೆಸರಿನ ಮೇಲೆ ನಡೆದ ನಂಗಾನಾಚ ವಿರುದ್ಧ ಧ್ವನಿ ಎತ್ತಿದವರಲ್ಲಿ ಕಾರ್ನಾಡರೂ ಒಬ್ಬರಾಗಿದ್ದರು. ದನದ ಸೆಗಣಿ, ಗಂಜಳಕ್ಕಿಂತಲೂ ಮನುಷ್ಯತ್ವ ಶ್ರೇಷ್ಠ ಎಂಬುದು ಅವರ ಚಿಂತನೆಯ ಒಟ್ಟು ಧ್ವನಿಯಾಗಿತ್ತು.

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು. ತಮ್ಮ ಗಟ್ಟಿಯಾದ ಅಷ್ಟೇ ದಿಟ್ಟವಾದ ಹೆಜ್ಜೆಗಳನ್ನು ಇಡುವ ಮೂಲಕ ಕನಸುಗಳನ್ನೂ ಕಟ್ಟಿಕೊಟ್ಟರು. ಇಡೀ ನಾಡಿನ ತುಂಬ ತಮ್ಮ ಚಟುವಟಿಕೆಗಳ ಮೂಲಕ ಎಲ್ಲರ ಹೆಗ್ಗಳಿಕೆ ಪಾತ್ರರಾದರು. ಜ್ಞಾನಪೀಠ ಪ್ರಶಸ್ತಿಯ ಪುರಸ್ಕಾರವೂ ಅವರ ಮಡಿಲಿಗೆ ಏರಿತು.

ಆದರೆ ಬಹಳಷ್ಟು ಜನ ಸಾಹಿತಿಗಳು ಕಲಾವಿದರು ಪ್ರಶಸ್ತಿ ಫಲಗಳು, ಸ್ಥಾನ ಮಾನಗಳು ದೊರೆತಾದ ಮೇಲೆ ಎಲ್ಲರ ಜೊತೆ ಅಂದರೆ ಸಾಮಾನ್ಯರ ಜೊತೆ ಸಾಮಾನ್ಯರಾಗಿ ಬೆರೆಯುವುದು ಕಮ್ಮಿ. ತಮ್ಮ ಎಂದಿನ ಪ್ರಶಸ್ತಿಯ ಗುಂಗಿನಿಂದ ಹೊರಗಡೆ ಬಂದಿರುವುದಿಲ್ಲ. ಆ ಪ್ರಶಸ್ತಿ ಹಾರ ತುರಾಯಿಗಳಲ್ಲಿಯೇ ಕೊಳೆತು ಹೋಗಿರುತ್ತಾರೆ. ಈ ಮಾತಿಗೆ ಕಾರ್ನಾಡರು ಅಪವಾದವಾಗಿದ್ದರು. ತಾವು ನಂಬಿದ ತತ್ವ ಸಿದ್ಧಾಂತಗಳು ತಮ್ಮ ಕಣ್ಣ ಮುಂದೆಯೆ ನಗೆಪಾಟಲಿಗೆ ಈಡಾಗುತ್ತಿದ್ದರೆ ತಕ್ಷಣವೆ ಅದಕ್ಕೆ ಸ್ಪಂದಿಸುತ್ತಿದ್ದರು. ಬೆಂಗಳೂರಿನ ಟೌನ ಹಾಲ್ ಮುಂದೆ ನಡೆಯುವ ಏನೆಲ್ಲ ಪ್ರತಿಭಟನೆಯಲ್ಲಿಯೂ ಅವರ ಹಾಜರಿ ಇರುತ್ತಿತ್ತು.

ಪ್ರಜ್ಞಾವಂತ ನಡಾವಳಿಯ ಬರಹಗಾರರನ್ನು ಕಂಡರೆ ಗುಲಾಮರಿಗೆ ಉರಿ ಉರಿ. ಕಾರ್ನಾಡರ ಬಗೆಗೂ ಸಂಘಿಗಳು ಕಿಡಿಕಾರಿದವು. ನಾನೂ ನಗರ ನಕ್ಸಲ್ ವಾದಿ ಎಂದು ಬರಹವೊಂದನ್ನು ಕೊರಳಲ್ಲಿ ಹಾಕಿಕೊಂಡು ಪ್ರತಿಭಟನೆಗೆ ಇಳಿದಾಗ ಬಹಳಷ್ಟು ಜನ ಕುಹಕದ ಮಾತನಾಡಿದರು. ಆಗಲೂ ಅವರ ಮಾತನ್ನು ಕಾರ್ನಾಡ ನಗು ನಗುತ್ತಾ ಸ್ವೀಕರಿಸಿದರು. ಏಕೆಂದರೆ ಅವರಿಗೆ ಸತ್ಯ ಗೊತ್ತಿತ್ತು. ಸನಾತನವಾದಿಗಳು ವಿಚಾರವಾದವನ್ನು ಒಪ್ಪಲಾರರು. ಧರ್ಮವನ್ನು ಅಫೀಮನ್ನಾಗಿ ಜನಗಳಿಗೆ ನೀಡುವವರು ಧರ್ಮವೊಂದು ದಯಯ ತಳಹದಿ ಎಂದು ಅರಿಯಲಾರರು ಎಂದು.

‘ನನ್ನ ರಾಜ್ಯದಲ್ಲಿ ಪ್ರತಿಯೊಂದು ಕಾರ್ಯವೂ ಪ್ರಾರ್ಥನೆಯಾಗಬೇಕು. ಪ್ರತಿಯೊಂದು ಪ್ರಾರ್ಥನೆಯೂ ನಮ್ಮನ್ನು ದೇವರೆಡೆಗೆ ಒಯ್ಯುವ ಮೆಟ್ಟಿಲಾಗಬೇಕು. ಆದರೆ ಇಲ್ಲಿ ಪ್ರಾರ್ಥನೆಗೂ ರಾಜಕಾರಣದ ಸೋಂಕು ಬಡಿದಿದೆ’ ಎಂದು ತುಘಲಕ್ ನಾಟಕದಲ್ಲಿ ಬರೆಯುವ ಮೂಲಕ ನಮ್ಮ ಇಂದಿನ ರಾಜಕೀಯ ವಸ್ತು ಸ್ಥಿತಿಯನ್ನು ಬಿಚ್ಚಿಟ್ಟರು.

ಒಬ್ಬ ಅಗಸ ತೊಳೆದಷ್ಟು ಕೊಳೆಯನ್ನು ಜಗತ್ತಿನ ಯಾವ ಧರ್ಮ ಗುರುವು ತೊಳೆದಿಲ್ಲ! ಎಂಬುದು ಅವರಿಗೆ ಖಚಿತವಾಗಿತ್ತು. ಆದರೂ ಅವರು ತಮ್ಮ ಮಾನವೀಯ ನಡಾವಳಿಕೆಗಳ ಮೂಲಕ ಸಮಾಜಕ್ಕೆ ಅಂಟಿದ ಕೊಳೆಯನ್ನು ತೊಳೆಯಲು ಮುಂದಾಗುತ್ತಿದ್ದರು. ಆಗ ರಾಕ್ಷಸಿ ಪ್ರವೃತಿಯನ್ನು ರೂಢಿಸಿಕೊಂಡ ಕೆಲವು ಮನಸ್ಸುಗಳು ಈಗ ಸಂತೋಷ ವ್ಯಕ್ತ ಪಡಿಸುತ್ತಿವೆ. ಸಾವನ್ನು ಮರಣವೇ ಮಹನವಮಿ ಎಂದು ಸ್ವೀಕರಿಸುವ ಛಲ ಕಾರ್ನಾಡರಿಗೆ ಇತ್ತು. ಆದ್ದರಿಂದಲೆ ತಮ್ಮ ಜೀವವಿಲ್ಲದ ದೇಹಕ್ಕೆ ಸರಕಾರಿ ಸಕಲ ಗೌರವ ಎಂಬ ನಾಟಕ ಗೀಟಕ ಬೇಡ ಎಂದು ತಮ್ಮ ಕುಟುಂಬದ ಸದಸ್ಯರಲ್ಲಿ ಹೇಳಿಕೊಂಡಿದ್ದಾರೆ. ಅವರ ಶರೀರವೂ ಸಹ ಯಾವುದೆ ಧಾರ್ಮಿಕ ವಿಧಿ ವಿಧಾನ ಇಲ್ಲದೆ ನೆರವೇರಿಸಬೇಕೆಂದೂ ತಿಳಿಸಿದ್ದಾರೆ. ಈ ಮೂಲಕ ಅವರು ಅನಂತದೆಡೆಗೆ ಪಯಣಿಸಿದ್ದಾರೆ.

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಎಂಬ ಅಲ್ಲಮಪ್ರಭುವಿನ ವಚನದಂತೆ ಬಯಲು ಬಯಲನ್ನು ಬಿತ್ತಿ ಬಯಲು ಬಯಲನ್ನೆ ಬೆಳೆದು ಬಯಲು ಬಯಲಾದರು ಕರ್ನಾಡರು. ಅವರ ಬಯಲ ಜೀವನ ಬಯಲ ಭಾವನೆ ನಮ್ಮೆಲ್ಲರೊಳಗೆ ಬಯಲು ಬಯಲಾಯಿತ್ತು. ಸಮಾಜವನ್ನು ಪ್ರೀತಿಸಿದ ಗೌರವಿಸಿದ ಸಮಾಜದೊಂದಿಗೆ ಜೀವಂತವಾಗಿ ಸ್ಪಂದಿಸಿ ಜೀವಂತ ಬದುಕಿದ ಕಾರ್ನಾಡ ಸತ್ಯವನ್ನು ನಂಬಿ ಬಯಲಾಗಿದ್ದಾರೆ. ಅಂದರೆ ನಮ್ಮೆಲ್ಲರೊಳಗೆ ಬೆರೆತು ಹೋಗಿದ್ದಾರೆ. ಕಾರ್ನಾಡರಿಗೆ ಸಾವು ಇಲ್ಲ. ಅರಿತವರು ಸಾಯುವುದೂ ಇಲ್ಲ. ಅರಿತುಕೊಂಡಿದ್ದ ಕಾರ್ನಾಡರು ನಮ್ಮೆಲ್ಲರೊಳಗೆ ಪ್ರಜ್ಞೆಯಾಗಿ ಜೀವಂತವಾಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...