Homeಕರ್ನಾಟಕ'ಮಹಿಷಾ ದಸರಾ,' ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌

‘ಮಹಿಷಾ ದಸರಾ,’ ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌

ಮಹಿಷನಿಂದಾಗಿ ಮೈಸೂರು ಎನ್ನುವ ಹೆಸರು ಇದುವರೆಗೂ ನಿಂತಿದೆ ಎನ್ನುವುದನ್ನು ಇತಿಹಾಸದ ಹಲವು ಪುಟಗಳು ಸಾರುತ್ತಿವೆ. ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ಆಳಿದ ರಾಜ ಈ ಮಹಿಷ. ಕೇರಳ ರಾಜ್ಯದಲ್ಲಿ ಬಲಿಚಕ್ರವರ್ತಿಯನ್ನು ನೆನಪಿಸುವ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಮಹಿಷನನ್ನು ಸ್ಮರಿಸುತ್ತಾರೆ.

- Advertisement -
- Advertisement -

ಕಳೆದ ಐದಾರು ವರ್ಷಗಳಿಂದ ‘ಮಹಿಷ ದಸರಾ’ ಎನ್ನುವುದು ಹೆಚ್ಚುಹೆಚ್ಚು ಚಾಲ್ತಿಗೆ ಬರುತ್ತಿದೆ. ಈ ಮೂಲಕ ಹೂತುಹೋಗಿರುವ ಇತಿಹಾಸವನ್ನು ಮತ್ತೆ ಮುನ್ನಲೆಗೆ ತಂದು ತಿಳಿಹೇಳುವ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇತಿಹಾಸ, ಪುರಾಣ ಮತ್ತು ಶಾಸ್ತ್ರಗಳ ತುಂಬಾ ವೈದಿಕರ ವಿಚಾರಗಳೇ ತುಂಬಿ ನಿಂತಿವೆ. ಹೀಗಿರುವಾಗ ಅವೈದಿಕ ಪರಂಪರೆಯಲ್ಲಿ ಬಹುಸಮುದಾಯಗಳನ್ನು ಪೊರೆದವರು ಯಾರು? ಎನ್ನುವುದನ್ನು ಮತ್ತೆ ಮತ್ತೆ ಕೇಳಿಕೊಂಡಾಗ ಈ ತರದ ಅವಲೋಕನ ಸಾಧ್ಯವಾಗುತ್ತದೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು, ಮಹಿಷನೂರು ಮೊದಲಾದ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಇಂದಿನ ಮೈಸೂರು ಮಹಿಷನಾಳಿದ ಬಹುದೊಡ್ಡ ಪ್ರದೇಶವಾಗಿತ್ತು. ವಿಂಧ್ಯಪರ್ವತದ ಮಹಿಸ್ಮೃತಿ ತಪ್ಪಲಿನವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ ಈ ಪ್ರದೇಶ, ಮೂಲನಿವಾಸಿ ರಾಜನೊಬ್ಬನ ಕತೆಯನ್ನು ಹಿಡಿದಿಟ್ಟುಕೊಂಡಿದೆ. ಇದೆಲ್ಲದಕ್ಕೆ ಸಾಕ್ಷಿಯಾಗಿ ಇತಿಹಾಸದ ಪುಟಗಳು ನಿಂತಿವೆ.

ಈ ದೇಶದಲ್ಲಿ ಮೂಲನಿವಾಸಿಗಳ, ಬುಡಕಟ್ಟುಗಳ ಮತ್ತು ಬೌದ್ಧರ ಮೇಲಿನ ದಾಳಿಗಳು ಇತಿಹಾಸವನ್ನು ಛಿದ್ರಛಿದ್ರವಾಗಿಸಿವೆ. ಈ ಛಿದ್ರತೆಯಲ್ಲಿ ಮೇಲುಗೈ ಪಡೆದ ವೈದಿಕ ಪರಂಪರೆ ಅನೇಕ ಕಟ್ಟುಕತೆಗಳ ರೂಪದಲ್ಲಿ ಇತಿಹಾಸವನ್ನು ನೋಡುವಂತೆ ನಮ್ಮ ಕಣ್ಣುಗಳನ್ನು ರೂಪಿಸಿದೆ. ಇದರಿಂದ ಮೂಲನಿವಾಸಿ ಮತ್ತು ಅಸುರ ರಾಜರುಗಳು ಹೆಚ್ಚು ಮನದಾಳದಲ್ಲಿ ಬೇರೂರಿದಂತಾಗಿದೆ. ಇದರ ಹಿಂದೆ ವೈದಿಕತೆಯನ್ನೇ ಹೆಚ್ಚು ವಿಜೃಂಭೀಕರಿಸುವ, ಆ ಮೂಲಕ ಸಾಮ್ರಾಜ್ಯವನ್ನು ಆಳುವ ಮತ್ತು ಶತಶತಮಾನಗಳ ಕಾಲ ಮಾನಸಿಕ ಗುಲಾಮಗಿರಿಗೆ ಒಳಗಾಗಿ ಬದುಕುವಂತೆ ಮಾಡುವ ಹುನ್ನಾರವನ್ನು ಈ ವರ್ಗ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಲೇ ಇದೆ. ಇದಕ್ಕಾಗಿ ಅದು ಕೋಟ್ಯಾಂತರ ದೇವರುಗಳನ್ನು ಸೃಷ್ಟಿಸಿ ತಮ್ಮ ಬೇಳೆಯನ್ನು ಇಂದಿಗೂ ಬೇಯಿಸಿಕೊಳ್ಳುತ್ತಲೇ ಇದ್ದಾರೆ. ಕುರು, ಪಾಂಚಾಲ, ಚೇರ, ವೆಂಗಿ, ಮಗಧ ಮುಂತಾದ ರಾಜಮನೆತನಗಳ ಭವ್ಯ ಪರಂಪರೆಯನ್ನು ಕಟ್ಟಿಕೊಟ್ಟ ಹಾಗೆ ನಾಗ ಮತ್ತು ಮಹಿಷ ಮಂಡಲದ ಮನೆತನಗಳ ಇತಿಹಾಸವನ್ನು ಕಟ್ಟಿಕೊಡುವ ಗೋಜಿಗೆ ಅಕ್ಷರ ಬಲ್ಲವರು ಹೋಗಿಲ್ಲ. ಇದರ ಪರಿಣಾಮ ಇವೆರಡರ ಅಪ್ರತಿಮ ಹೋರಾಟಗಾರರು ಅಂಚಿಗೆ ಸರಿದರು. ಇದರಲ್ಲಿ ಮಹಿಷನೂ ಒಬ್ಬ.

ಭಾರತದ ವೈದಿಕಶಾಹಿ ಇಲ್ಲಿನ ಮೂಲನಿವಾಸಿಗಳ ಪರಂಪರೆಯನ್ನು ಒಡೆದು ಮೇಲುಗೈ ಸಾಧಿಸಿದಂತೆಲ್ಲ ಇಲ್ಲಿನ ಅಪ್ರತಿಮ ನಾಯಕರನ್ನು ಖಳನಾಯಕರಂತೆ ಬಿಂಬಿಸಲು ಪ್ರಾರಂಭಿಸಿತು. ರಾಕ್ಷಸ, ಅಸುರ, ದಾನವ, ಕಿನ್ನರ, ಕಿಂಪುರುಷ ಮೊದಲಾದ ಪದಗಳಿಗೆ ಅಪಾರ್ಥಗಳನ್ನು ಹೊರಿಸಿ ಜನತೆಯ ಮನದಲ್ಲಿ ಇವರ ಕೀರ್ತಿಪತಾಕೆಗಳನ್ನೇ ಶಾಶ್ವತವಾಗಿ ನಕಾರಾತ್ಮಕ ಧೋರಣೆ ಬರುವಂತೆ ಮಾಡಿದರು. ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಚಿತ್ರಿಸಿದರು. ಇವರ ಹಾದಿಯಲ್ಲಿ ಕಾಣುವ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರವನ್ನು ಈ ಮೂಲಕ ಮಾಡುತ್ತಾ ಬಂದರು. ಈ ವೈದಿಕಶಾಹಿ ತನಗೆ ವಿರುದ್ಧವಾದುದೆಲ್ಲವನ್ನು ರಾಕ್ಷಸ ಪರಂಪರೆಯೆಂದು ವಿಂಗಡಿಸಿ, ಅವರು ಕ್ರೂರಾತಿಕ್ರೂರರೆಂದು ಬಿಂಬಿಸಿದರು. ‘ಇವರನ್ನು ನಾಶಗೊಳಿಸಲು ದೇವನೊಬ್ಬನು ಅವತರಿಸಿ ಬರಬೇಕಾಯಿತು. ಹೀಗೆ ಬಂದದ್ದರಿಂದಲೇ ಈ ರಾಕ್ಷಸನ ಸಂಹಾರ ಸಾಧ್ಯವಾಗಿ ಲೋಕಕಲ್ಯಾಣವಾಯಿತು’ ಎನ್ನುವ ಹಸಿ ಸುಳ್ಳಿನ ಕತೆಯನ್ನು ಕಟ್ಟಿ ಜನತೆಗೆ ಆಚರಣೆ ಮೂಲಕ ನಂಬಿಸಿದರು. ಇದರ ಪರಿಣಾಮವಾಗಿ ಮೈಸೂರಿನ ದೊರೆಯಾದ ಮಹಿಷ ಹೊರನಿಲ್ಲುವಂತಾಗಿ ಕಟ್ಟಿದ ಕತೆಯ ಕುರುಹಾಗಿ ಚಾಮುಂಡಿ ಒಳ ನಿಲ್ಲುವಂತಾಗಿದೆ.

ಮಹಿಷನಿಂದಾಗಿ ಮೈಸೂರು ಎನ್ನುವ ಹೆಸರು ಇದುವರೆಗೂ ನಿಂತಿದೆ ಎನ್ನುವುದನ್ನು ಇತಿಹಾಸದ ಹಲವು ಪುಟಗಳು ಸಾರುತ್ತಿವೆ. ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ಆಳಿದ ರಾಜ ಈ ಮಹಿಷ. ಕೇರಳ ರಾಜ್ಯದಲ್ಲಿ ಬಲಿಚಕ್ರವರ್ತಿಯನ್ನು ನೆನಪಿಸುವ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಮಹಿಷನನ್ನು ಸ್ಮರಿಸುತ್ತಾರೆ. ಈ ಧನ್ಯತೆಯ ಭಾವದಿಂದ ಆಚರಿಸಲ್ಪಡುವ ಹಬ್ಬವೇ ದಸರಾ. ಇತಿಹಾಸವನ್ನು ತಿರುಚಿ ಅಂತೆಕಂತೆಗಳ ಪುರಾಣ ಕಟ್ಟುವಲ್ಲಿ ಪ್ರಸಿದ್ಧರಾದ ವೈದಿಕರು ‘ಬ್ರಾಹ್ಮಣನ ವೇಷದಲ್ಲಿ ಬಂದು ಮೂರು ಮೊಳ ಭೂಮಿಯನ್ನು ದಾನ ಪಡೆದು ವಿಷ್ಣು ಅವನನ್ನು ಭೂಮಿಗೆ ತುಳಿದನು’ ಎನ್ನುವ ಕತೆ ಕಟ್ಟಿದಂತೆ ಅತಿ ಕೆಟ್ಟವನಾದ ಮಹಿಷನನ್ನು ಸಂಹರಿಸಲು ಪಾರ್ವತಿ ದೇವಿಯೇ ಶಕ್ತಿ ಪಡೆದು ಬಂದು ಅವನನ್ನು ಸಂಹರಿಸಿದಳು’ ಎನ್ನುವ ಕತೆಯನ್ನು ಕಟ್ಟಿ ನಂಬಿಸಿದರು. ಈ ನಂಬಿಸಿದ ಫಲವೇ ಇಂದಿನ ಚಾಮುಂಡಿ ದಸರಾ. ಇದಕ್ಕೆ ರಾಜಮಹಾರಾಜರ ಒಪ್ಪಿತ ಮುದ್ರೆ ಬಿದ್ದಿದ್ದರಿಂದ ಇದು ನಿರಂತರ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಂದಮೇಲೂ ಇಂತವೇ ಮನಸ್ಸುಗಳು ಇಲ್ಲಿ ಉಸಿರಾಡುತ್ತಿರುವುದರಿಂದ ಈಗಲೂ ಅದ್ದೂರಿ ದಸರಾ ಹಬ್ಬ ‘ನಾಡದೇವತೆ’ ಎನ್ನುವ ಹೆಸರಿನಡಿ ನಡೆಯುತ್ತಲೇ ಇದೆ.

ಇತಿಹಾಸದ ಮಹತ್ವದ ಅಂಶಗಳು ಒಂದಲ್ಲ ಒಂದು ಕಾಲದಲ್ಲಿ ಬೆಳಕಿಗೆ ಬಂದೇ ಬರುತ್ತವೆ. ಹೀಗೆ ಬೆಳಕಿಗೆ ಬಂದ ಪ್ರತಿಫಲವೇ ವೈದಿಕರು ಕಟ್ಟಿರುವ ಎಲ್ಲ ದುಷ್ಟಶಕ್ತಿಗಳ ಹಿಂದಿನ ನೈಜತೆ ಬೆಳಕಿಗೆ ಬರುತ್ತಿದೆ. ಹೀಗೆ ಬೆಳಕಿಗೆ ಬಂದ ಕಾರಣದಿಂದಲೇ ಅಸುರ ಶಕ್ತಿಗಳಾದ ಬಲಿಚಕ್ರವರ್ತಿ, ಮಹಿಷ, ರಾವಣ, ನರಕಾಸುರ ಮುಂತಾದವರ ಬಗ್ಗೆ ಹೊಸ ಹೊಸ ದೃಷ್ಟಿಕೋನಗಳು ಬೆಳೆಯುತ್ತಿವೆ. ವಿದ್ಯೆ, ಸಂಪತ್ತು, ಅಧಿಕಾರ ಎಲ್ಲವನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿದ್ದ ವೈದಿಕಶಾಹಿ ಸಹಜವಾಗಿಯೇ ತನಗೆ ವಿರುದ್ಧದಾದುದ್ದೆಲ್ಲವನ್ನು ಇನ್ನಿಲ್ಲದ ತಂತ್ರಗಳ ಮೂಲಕ ಹಣಿಯಲು ಪ್ರಾರಂಭಿಸಿತು. ಇದೆಲ್ಲವು ಶಾಶ್ವತವಾಗಿರಲು ಜನತೆಯ ನಂಬಿಕೆಯೊಂದೇ ಪ್ರಬಲ ಅಸ್ತ್ರವೆಂದು ತಿಳಿದ ಈ ಬೌದ್ಧಿಕಶಾಹಿಗಳು ಕತೆ, ಗೀತೆ, ಮಹಾಕಾವ್ಯ, ಪುರಾಣ, ಶಾಸ್ತ್ರ, ವೇದ ಮುಂತಾದವುಗಳನ್ನು ಜನತೆಯ ಮನದಾಳದಲ್ಲಿ ಬೇರೂರಿಸಿತು. ಇದರಿಂದ ಅಪ್ರತಿಮ ದೊರೆಯಾದ, ನಾಡಿನ ಹೆಮ್ಮೆಯ ಪ್ರತಿನಿಧಿಯಾದ, ಮೂಲನಿವಾಸಿ ರಾಜನಾದ ಮಹಿಷನಂತವರು ಖಳನಾಯಕರಾಗಿ ಜನಮನದಲ್ಲಿ ನಿಂತರು. ಇಂದು ಇತಿಹಾಸ ಪುನರ್ ವ್ಯಾಖ್ಯಾನಕ್ಕೆ ನಾಡಿನ ಪ್ರಗತಿಪರ ಮತ್ತು ದಮನಿತ ಸಮುದಾಯಗಳು ಮುಂದಾಗಿವೆ. ಇದಕ್ಕೆ ಪ್ರೇರಕ ಶಕ್ತಿಯಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ದೈತ್ಯ ಪ್ರತಿಭೆ ಎದುರಿಗಿದೆ. ಇದೆಲ್ಲವನ್ನು ಬಳಸಿಕೊಂಡು ಮಹಿಷದಸರಾ ಮಾಡಲು ಸೇನೆಯಂತೆ ಮುನ್ನುಗ್ಗಿದೆ ಮೂಲನಿವಾಸಿಗಳ ದಂಡು. ಇದು ಕಾರ್ಯಗತಗೊಳ್ಳಲಿ. ನಾಡಿನ ಹೆಮ್ಮೆಯ ವೀರನಾದ ಮಹಿಷ ಮತ್ತೆ ಎಲ್ಲರ ಎದೆಯಲ್ಲಿ ನಿಲ್ಲಲಿ. ಈ ಮೂಲಕ ಅಗೋಚರಕ್ಕೆ ಒಳಗಾಗಿರುವ ಎಲ್ಲ ಮೂಲನಿವಾಸಿ ದೇವರುಗಳು ಅಂಚಿನಿಂದ ಮುನ್ನಲೆಗೆ ಬಂದು ನಿಲ್ಲುವಂತಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...