Homeಮುಖಪುಟನಮಾಜು, ತಬ್ಲಿಗಿ, ಕುಂಭಮೇಳ ಕುರಿತು ಕೋರ್ಟು ಮತ್ತು ಮಾಧ್ಯಮಗಳ ವರ್ತನೆ

ನಮಾಜು, ತಬ್ಲಿಗಿ, ಕುಂಭಮೇಳ ಕುರಿತು ಕೋರ್ಟು ಮತ್ತು ಮಾಧ್ಯಮಗಳ ವರ್ತನೆ

- Advertisement -
- Advertisement -

ಕೋವಿಡ್ ಹೊಸ ಅಲೆ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಈ ವಾರ ನಡೆದ ಕೆಲವು ಸನ್ನಿವೇಶಗಳನ್ನು ಗಮನಿಸೋಣ. ಇಲ್ಲಿ ಎರಡು ಹೈಕೋರ್ಟ್‌ಗಳ ಆದೇಶಗಳು ತದ್ವಿರುದ್ಧವಾಗಿವೆ. ಮುಖ್ಯವಾಹಿನಿ ಮೀಡಿಯಾಗಳು ಪಕ್ಷಪಾತ ಮಾಡುತ್ತಿದೆ. ಈ ಎಲ್ಲದರ ಮಧ್ಯೆ ಕೋವಿಡ್ ದಿನಕ್ಕೆ 2 ಲಕ್ಷ ಜನರನ್ನು ಸೋಂಕಿಸುತ್ತಿದೆ.

ದೆಹಲಿ ಹೈಕೋರ್ಟ್
ಸೋಮವಾರ ಏಪ್ರಿಲ್ 12
ದೆಹಲಿ ವಕ್ಫ್ ಮಂಡಳಿ: ನಿಜಾಮುದ್ದೀನ್ ಮರ್ಕಾಜ್‌ನಲ್ಲಿ ದಿನಕ್ಕೆ 5 ಸಲ ನಮಾಜ್ ಮಾಡಲು ಅವಕಾಶ ನೀಡಿ. ಪ್ರತಿ ಸಲಕ್ಕೆ 50 ಜನರಿಗೆ ಮಾತ್ರ ಅವಕಾಶ ಕೊಡಿ.

ಕೇಂದ್ರ ಸರ್ಕಾರ: ನಮಾಜಿಗೆ ಅನುಮತಿಸಬಹುದು.

ಮಂಗಳವಾರ ಏಪ್ರಿಲ್ 13
ಕೇಂದ್ರ ಸರ್ಕಾರ: ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಲ್ಲಿ ಇರುವ ಕಾರಣ ನಮಾಜಿಗೆ ಅನುಮತಿ ನೀಡಲಾಗದು. ಹೆಚ್ಚೆಂದರೆ 20 ಜನರು ಪ್ರಾರ್ಥನೆ ಮಾಡಬಹುದು.

ಹೈಕೋರ್ಟ್: ಹರಿದ್ವಾರದಲ್ಲಿೆಲ್ಲ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಕುಂಭಮೇಳ ನಡೆಯುತ್ತಿದೆ. ಇಲ್ಲಿ ನೀವು ಧಾರ್ಮಿಕ ಸಭೆಯೊಂದಕ್ಕೆ 20 ಜನರಿಗಷ್ಟೇ ಅವಕಾಶ ಎನ್ನುತ್ತೀದ್ದೀರಾ? ಎಲ್ಲ ಧಾರ್ಮಿಕ ಸ್ಥಳ, ಸಭೆಗಳಿಗೂ ನೀವು ವಿಧಿಸಿರುವ ನಿರ್ಬಂಧಗಳ ಅಫಿಡವಿಟ್ ಸಲ್ಲಿಸಿ.

ಕೇಂದ್ರ ಸರ್ಕಾರದ ಪಕ್ಷಪಾತಿ ನಿಲುವುಗಳನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡಲು, ಪ್ರತಿ ಸಲ 50 ಜನ ನಮಾಜ್ ಮಾಡಲು ಅನುಮತಿ ನೀಡಿದೆ.

ಬಾಂಬೆ ಹೈಕೋರ್ಟ್
ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲೇ ಬಾಂಬೆ ಹೈಕೋರ್ಟಿನಲ್ಲಿ ಇದೇ ವಿಷಯವಾಗಿ ಒಂದು ವಿಚಾರಣೆ ನಡೆದು ವ್ಯತಿರಿಕ್ತ ತೀರ್ಪು ಹೊರ ಬಂದಿದೆ. ಮುಂಬೈನ ಜುಮ್ಮಾ ಮಸೀದಿ ಟ್ರಸ್ಟ್‌ನವರು, 50 ಜನರಿಗಾದರೂ ನಮಾಜ್ ಮಾಡಲು ಅವಕಾಶ ಕೊಡಿ, ದಿನಕ್ಕೆ ಹೀಗೆ ನಾಲ್ಕೈದು ಬಾರಿ ನಮಾಜ್ ಏರ್ಪಡಿಸುತ್ತೇವೆ. ನಮ್ಮ ಮಸೀದಿ ಆವರಣ ಒಂದು ಎಕರೆಯಷ್ಟು ವಿಶಾಲವಾಗಿದ್ದು 50 ಜನ ಅಲ್ಲಿ ಸೇರಿದರೆ ತೊಂದರೆಯಾಗುವುದಿಲ್ಲ ಎಂದು ಅರ್ಜಿ ಸಲ್ಲಿಸಿತ್ತು.

ಜನರ ಆರೋಗ್ಯ ಮುಖ್ಯ ಎಂದ ಬಾಂಬೆ ಹೈಕೋರ್ಟ್ ನಮಾಜಿಗೆ ಅನುಮತಿ ನಿರಾಕರಿಸಿತು. ಆ ಹೊತ್ತಿನಲ್ಲಿ ಕುಂಭಮೇಳದಲ್ಲಿ ಲಕ್ಷಾಂತರ ಜನ ನೀರಿನಲ್ಲಿ ಮುಳುಗಿ ಏಳುತ್ತಿದ್ದರು!

ಮೀಡಿಯಾ ಪಕ್ಷಪಾತ

ಕಳೆದ ವರ್ಷ ಆಗಿನ್ನೂ ಕೊವಿಡ್ ಹರಡಲು ಶುರುವಾದ ಸಮಯದಲ್ಲಿ ದೆಹಲಿಯ ನಿಜಾಮುದೀನ್ ಮರ್ಕಾಜ್ ಮಸೀದಿಯಲ್ಲಿ ನಡೆದ ತಬ್ಲಿಗಿ ಸಮಾವೇಶದಲ್ಲಿನ ಹಲವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಸಮಾವೇಶದಲ್ಲಿ ಪಾಲ್ಗೊಂಡವರು ದೇಶದ ಬೇರೆ ಬೇರೆ ಭಾಗಗಳಿಗೆ ತೆರಳಿದ ನಂತರ ಅಲ್ಲಿ ಕೆಲವರಿಗೆ ಕೊವಿಡ್ ತಗುಲಿತ್ತು. ಆಗ ಮೀಡಿಯಾ ಪಾಲಿಗೆ ಕೊರೋನಾ ವೈರಸ್ ತಬ್ಲಿಗಿ ಆಗಿತ್ತು.

ಈಗ ಅದೇ ಮುಖ್ಯವಾಹಿನಿ ಮಾಧ್ಯಮಗಳಿಗೆ ಕುಂಭಮೇಳ ಮಾತ್ರ ಭಕ್ತಿಭಾವದ ಪ್ರತೀಕ. ಆಗ ದಿನಕ್ಕೆ ಸಾವಿರ ಲೆಕ್ಕದಲ್ಲಿ ಕೇಸುಗಳಿದ್ದವು, ಈಗ ದಿನಕ್ಕೆ ಲಕ್ಷಗಳ ಲೆಕ್ಕದಲ್ಲಿ ಕೇಸುಗಳಿವೆ. ಆದರೆ ಯಾರನ್ನು ಓಲೈಸಲು ಈ ಮೀಡಿಯಾಗಳು ಕುಂಭಮೇಳದ ವರದಿಯನ್ನು ಭಕ್ತಿಭಾವದಿಂದ ವರದಿ ಮಾಡುತ್ತಿವೆ.?

ಆಳುವ ಪಕ್ಷ

ಇಲ್ಲಿ ನೆನಪಿಡಬೇಕಾದದ್ದು, ಈಗ ಆಳುತ್ತಿರುವ ಸರ್ಕಾರದ ಮೂಲ ತಳಹದಿಯೇ ವೈದಿಕ ಪುನರುತ್ಥಾನ. ಈ ದೇಶದ ಬಹುಸಂಖ್ಯಾತರಾದ ದಲಿತರು, ಹಿಂದುಳಿದವರ ಸಣ್ಣಪುಟ್ಟ ಜಾತ್ರೆಗಳಿಗೂ ನಿಷೇಧ ಹೇರಲಾಗಿದೆ. (ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದೇ ಎಂಬುದು ಬೇರೆ ಚರ್ಚೆಯ ವಿಷಯ)…. ಮುಸ್ಲಿಮರು 50 ಜನ ಸೇರಿ ರಂಜಾನ್ ಪ್ರಾರ್ಥನೆ ಮಾಡುವುದನ್ನು ವಿರೋಧಿಸುವ ಸರ್ಕಾರ, ವೈದಿಕರು, ಕ್ಷತ್ರಿಯರು ಮತ್ತು ವೈಶ್ಯರೇ ಹೆಚ್ಚಾಗಿ ಪಾಲ್ಗೊಳ್ಳುವ ಕುಂಭಮೇಳಕ್ಕೆ ಅನುಮತಿ ನೀಡಿದೆ. ಈ ಮೇಲ್‌ಸ್ಥರದ ಹಿಂದೂಗಳು ಸತ್ರೂ ಪರವಾಗಿಲ್ಲ, ತನಗೆ ರಾಜಕೀಯ ಲಾಭ (ಮುಖ್ಯವಾಗಿ ಬಂಗಾಳದಲ್ಲಿ) ಆಗಬೇಕು ಎಂಬುದೇ ಸರ್ಕಾರದ ಉದ್ದೇಶವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕುಂಭಮೇಳದ 30 ಸಾಧುಗಳಿಗೆ ಕೊರೊನಾ ಪಾಸಿಟಿವ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಸ್ವಾಮಿ…….
    ಹಿಂದೂಗಳು ಅಂಧ ಭಕ್ತರು ಅವರು ಮೂರ್ತಿ ಪೂಜೆ ನಂಬುತ್ತಾರೆ ನದಿ ಯಲ್ಲಿ ಮಿಂದೇಳುವ ಕಾರ್ಯಕ್ಕೆ ಪುಣ್ಯ ಎಂದು ಭಾವಿಸುತ್ತಾರೆ ಅದಕ್ಕೆ ಮಂದಿರ, ದೇವಸ್ಥಾನಗಳು ಇರುವ ಕಡೆ ಸಾವಿರಾರು ಜನ ಸೇರುತ್ತಾರೆ …..
    ಆದರೆ ತೀರ ಬುದ್ದಿವಂತರಾದ ಇಸ್ಲಾಂ ಭಾಂದವರು ಅವರ ಖುರಾನ್ ನಲ್ಲಿ ಹೇಳಿರುವ ಪ್ರಕಾರ ದಿನದಲ್ಲಿ ಐದು ಬಾರಿ ನಮಾಜ್ ಮಾಡಲು ಯಾವುದೇ ಕಟ್ಟಡದ ಮೂರ್ತಿ ಯ ಅವಶ್ಯಕತೆ ಇಲ್ಲ ಅಲ್ಲವೇ ಮನೆಯಲ್ಲೇ ಕೂತು ಐವತ್ತು ಬಾರಿ ನಮಾಜ್ ಮಾಡಲು ಆಕ್ಷೇಪ ಇಲ್ಲಾ ಅಲ್ಲವೇ……
    ನವಿಲನ್ನು ನೋಡಿ ಪುಕ್ಕ ಕಿತ್ತುಕೊಳ್ಳುವ ಅವಶ್ಯಕತೆ ಏನಿದೆ….
    ನಾನು ಸಾಮಾನ್ಯ ಪ್ರಜೆ …….ನನ್ನ ಬರಹ ಸರಿ ಅನಿಸಿದರೆ ದಯವಿಟ್ಟು ಒಂದಷ್ಟು ದುಡ್ಡು ಕಳಿಸಿ ……

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...