Homeಮುಖಪುಟನಮಾಜು, ತಬ್ಲಿಗಿ, ಕುಂಭಮೇಳ ಕುರಿತು ಕೋರ್ಟು ಮತ್ತು ಮಾಧ್ಯಮಗಳ ವರ್ತನೆ

ನಮಾಜು, ತಬ್ಲಿಗಿ, ಕುಂಭಮೇಳ ಕುರಿತು ಕೋರ್ಟು ಮತ್ತು ಮಾಧ್ಯಮಗಳ ವರ್ತನೆ

- Advertisement -
- Advertisement -

ಕೋವಿಡ್ ಹೊಸ ಅಲೆ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಈ ವಾರ ನಡೆದ ಕೆಲವು ಸನ್ನಿವೇಶಗಳನ್ನು ಗಮನಿಸೋಣ. ಇಲ್ಲಿ ಎರಡು ಹೈಕೋರ್ಟ್‌ಗಳ ಆದೇಶಗಳು ತದ್ವಿರುದ್ಧವಾಗಿವೆ. ಮುಖ್ಯವಾಹಿನಿ ಮೀಡಿಯಾಗಳು ಪಕ್ಷಪಾತ ಮಾಡುತ್ತಿದೆ. ಈ ಎಲ್ಲದರ ಮಧ್ಯೆ ಕೋವಿಡ್ ದಿನಕ್ಕೆ 2 ಲಕ್ಷ ಜನರನ್ನು ಸೋಂಕಿಸುತ್ತಿದೆ.

ದೆಹಲಿ ಹೈಕೋರ್ಟ್
ಸೋಮವಾರ ಏಪ್ರಿಲ್ 12
ದೆಹಲಿ ವಕ್ಫ್ ಮಂಡಳಿ: ನಿಜಾಮುದ್ದೀನ್ ಮರ್ಕಾಜ್‌ನಲ್ಲಿ ದಿನಕ್ಕೆ 5 ಸಲ ನಮಾಜ್ ಮಾಡಲು ಅವಕಾಶ ನೀಡಿ. ಪ್ರತಿ ಸಲಕ್ಕೆ 50 ಜನರಿಗೆ ಮಾತ್ರ ಅವಕಾಶ ಕೊಡಿ.

ಕೇಂದ್ರ ಸರ್ಕಾರ: ನಮಾಜಿಗೆ ಅನುಮತಿಸಬಹುದು.

ಮಂಗಳವಾರ ಏಪ್ರಿಲ್ 13
ಕೇಂದ್ರ ಸರ್ಕಾರ: ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಲ್ಲಿ ಇರುವ ಕಾರಣ ನಮಾಜಿಗೆ ಅನುಮತಿ ನೀಡಲಾಗದು. ಹೆಚ್ಚೆಂದರೆ 20 ಜನರು ಪ್ರಾರ್ಥನೆ ಮಾಡಬಹುದು.

ಹೈಕೋರ್ಟ್: ಹರಿದ್ವಾರದಲ್ಲಿೆಲ್ಲ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಕುಂಭಮೇಳ ನಡೆಯುತ್ತಿದೆ. ಇಲ್ಲಿ ನೀವು ಧಾರ್ಮಿಕ ಸಭೆಯೊಂದಕ್ಕೆ 20 ಜನರಿಗಷ್ಟೇ ಅವಕಾಶ ಎನ್ನುತ್ತೀದ್ದೀರಾ? ಎಲ್ಲ ಧಾರ್ಮಿಕ ಸ್ಥಳ, ಸಭೆಗಳಿಗೂ ನೀವು ವಿಧಿಸಿರುವ ನಿರ್ಬಂಧಗಳ ಅಫಿಡವಿಟ್ ಸಲ್ಲಿಸಿ.

ಕೇಂದ್ರ ಸರ್ಕಾರದ ಪಕ್ಷಪಾತಿ ನಿಲುವುಗಳನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡಲು, ಪ್ರತಿ ಸಲ 50 ಜನ ನಮಾಜ್ ಮಾಡಲು ಅನುಮತಿ ನೀಡಿದೆ.

ಬಾಂಬೆ ಹೈಕೋರ್ಟ್
ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲೇ ಬಾಂಬೆ ಹೈಕೋರ್ಟಿನಲ್ಲಿ ಇದೇ ವಿಷಯವಾಗಿ ಒಂದು ವಿಚಾರಣೆ ನಡೆದು ವ್ಯತಿರಿಕ್ತ ತೀರ್ಪು ಹೊರ ಬಂದಿದೆ. ಮುಂಬೈನ ಜುಮ್ಮಾ ಮಸೀದಿ ಟ್ರಸ್ಟ್‌ನವರು, 50 ಜನರಿಗಾದರೂ ನಮಾಜ್ ಮಾಡಲು ಅವಕಾಶ ಕೊಡಿ, ದಿನಕ್ಕೆ ಹೀಗೆ ನಾಲ್ಕೈದು ಬಾರಿ ನಮಾಜ್ ಏರ್ಪಡಿಸುತ್ತೇವೆ. ನಮ್ಮ ಮಸೀದಿ ಆವರಣ ಒಂದು ಎಕರೆಯಷ್ಟು ವಿಶಾಲವಾಗಿದ್ದು 50 ಜನ ಅಲ್ಲಿ ಸೇರಿದರೆ ತೊಂದರೆಯಾಗುವುದಿಲ್ಲ ಎಂದು ಅರ್ಜಿ ಸಲ್ಲಿಸಿತ್ತು.

ಜನರ ಆರೋಗ್ಯ ಮುಖ್ಯ ಎಂದ ಬಾಂಬೆ ಹೈಕೋರ್ಟ್ ನಮಾಜಿಗೆ ಅನುಮತಿ ನಿರಾಕರಿಸಿತು. ಆ ಹೊತ್ತಿನಲ್ಲಿ ಕುಂಭಮೇಳದಲ್ಲಿ ಲಕ್ಷಾಂತರ ಜನ ನೀರಿನಲ್ಲಿ ಮುಳುಗಿ ಏಳುತ್ತಿದ್ದರು!

ಮೀಡಿಯಾ ಪಕ್ಷಪಾತ

ಕಳೆದ ವರ್ಷ ಆಗಿನ್ನೂ ಕೊವಿಡ್ ಹರಡಲು ಶುರುವಾದ ಸಮಯದಲ್ಲಿ ದೆಹಲಿಯ ನಿಜಾಮುದೀನ್ ಮರ್ಕಾಜ್ ಮಸೀದಿಯಲ್ಲಿ ನಡೆದ ತಬ್ಲಿಗಿ ಸಮಾವೇಶದಲ್ಲಿನ ಹಲವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಸಮಾವೇಶದಲ್ಲಿ ಪಾಲ್ಗೊಂಡವರು ದೇಶದ ಬೇರೆ ಬೇರೆ ಭಾಗಗಳಿಗೆ ತೆರಳಿದ ನಂತರ ಅಲ್ಲಿ ಕೆಲವರಿಗೆ ಕೊವಿಡ್ ತಗುಲಿತ್ತು. ಆಗ ಮೀಡಿಯಾ ಪಾಲಿಗೆ ಕೊರೋನಾ ವೈರಸ್ ತಬ್ಲಿಗಿ ಆಗಿತ್ತು.

ಈಗ ಅದೇ ಮುಖ್ಯವಾಹಿನಿ ಮಾಧ್ಯಮಗಳಿಗೆ ಕುಂಭಮೇಳ ಮಾತ್ರ ಭಕ್ತಿಭಾವದ ಪ್ರತೀಕ. ಆಗ ದಿನಕ್ಕೆ ಸಾವಿರ ಲೆಕ್ಕದಲ್ಲಿ ಕೇಸುಗಳಿದ್ದವು, ಈಗ ದಿನಕ್ಕೆ ಲಕ್ಷಗಳ ಲೆಕ್ಕದಲ್ಲಿ ಕೇಸುಗಳಿವೆ. ಆದರೆ ಯಾರನ್ನು ಓಲೈಸಲು ಈ ಮೀಡಿಯಾಗಳು ಕುಂಭಮೇಳದ ವರದಿಯನ್ನು ಭಕ್ತಿಭಾವದಿಂದ ವರದಿ ಮಾಡುತ್ತಿವೆ.?

ಆಳುವ ಪಕ್ಷ

ಇಲ್ಲಿ ನೆನಪಿಡಬೇಕಾದದ್ದು, ಈಗ ಆಳುತ್ತಿರುವ ಸರ್ಕಾರದ ಮೂಲ ತಳಹದಿಯೇ ವೈದಿಕ ಪುನರುತ್ಥಾನ. ಈ ದೇಶದ ಬಹುಸಂಖ್ಯಾತರಾದ ದಲಿತರು, ಹಿಂದುಳಿದವರ ಸಣ್ಣಪುಟ್ಟ ಜಾತ್ರೆಗಳಿಗೂ ನಿಷೇಧ ಹೇರಲಾಗಿದೆ. (ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದೇ ಎಂಬುದು ಬೇರೆ ಚರ್ಚೆಯ ವಿಷಯ)…. ಮುಸ್ಲಿಮರು 50 ಜನ ಸೇರಿ ರಂಜಾನ್ ಪ್ರಾರ್ಥನೆ ಮಾಡುವುದನ್ನು ವಿರೋಧಿಸುವ ಸರ್ಕಾರ, ವೈದಿಕರು, ಕ್ಷತ್ರಿಯರು ಮತ್ತು ವೈಶ್ಯರೇ ಹೆಚ್ಚಾಗಿ ಪಾಲ್ಗೊಳ್ಳುವ ಕುಂಭಮೇಳಕ್ಕೆ ಅನುಮತಿ ನೀಡಿದೆ. ಈ ಮೇಲ್‌ಸ್ಥರದ ಹಿಂದೂಗಳು ಸತ್ರೂ ಪರವಾಗಿಲ್ಲ, ತನಗೆ ರಾಜಕೀಯ ಲಾಭ (ಮುಖ್ಯವಾಗಿ ಬಂಗಾಳದಲ್ಲಿ) ಆಗಬೇಕು ಎಂಬುದೇ ಸರ್ಕಾರದ ಉದ್ದೇಶವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕುಂಭಮೇಳದ 30 ಸಾಧುಗಳಿಗೆ ಕೊರೊನಾ ಪಾಸಿಟಿವ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಸ್ವಾಮಿ…….
    ಹಿಂದೂಗಳು ಅಂಧ ಭಕ್ತರು ಅವರು ಮೂರ್ತಿ ಪೂಜೆ ನಂಬುತ್ತಾರೆ ನದಿ ಯಲ್ಲಿ ಮಿಂದೇಳುವ ಕಾರ್ಯಕ್ಕೆ ಪುಣ್ಯ ಎಂದು ಭಾವಿಸುತ್ತಾರೆ ಅದಕ್ಕೆ ಮಂದಿರ, ದೇವಸ್ಥಾನಗಳು ಇರುವ ಕಡೆ ಸಾವಿರಾರು ಜನ ಸೇರುತ್ತಾರೆ …..
    ಆದರೆ ತೀರ ಬುದ್ದಿವಂತರಾದ ಇಸ್ಲಾಂ ಭಾಂದವರು ಅವರ ಖುರಾನ್ ನಲ್ಲಿ ಹೇಳಿರುವ ಪ್ರಕಾರ ದಿನದಲ್ಲಿ ಐದು ಬಾರಿ ನಮಾಜ್ ಮಾಡಲು ಯಾವುದೇ ಕಟ್ಟಡದ ಮೂರ್ತಿ ಯ ಅವಶ್ಯಕತೆ ಇಲ್ಲ ಅಲ್ಲವೇ ಮನೆಯಲ್ಲೇ ಕೂತು ಐವತ್ತು ಬಾರಿ ನಮಾಜ್ ಮಾಡಲು ಆಕ್ಷೇಪ ಇಲ್ಲಾ ಅಲ್ಲವೇ……
    ನವಿಲನ್ನು ನೋಡಿ ಪುಕ್ಕ ಕಿತ್ತುಕೊಳ್ಳುವ ಅವಶ್ಯಕತೆ ಏನಿದೆ….
    ನಾನು ಸಾಮಾನ್ಯ ಪ್ರಜೆ …….ನನ್ನ ಬರಹ ಸರಿ ಅನಿಸಿದರೆ ದಯವಿಟ್ಟು ಒಂದಷ್ಟು ದುಡ್ಡು ಕಳಿಸಿ ……

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...