Homeಮುಖಪುಟನಮಾಜು, ತಬ್ಲಿಗಿ, ಕುಂಭಮೇಳ ಕುರಿತು ಕೋರ್ಟು ಮತ್ತು ಮಾಧ್ಯಮಗಳ ವರ್ತನೆ

ನಮಾಜು, ತಬ್ಲಿಗಿ, ಕುಂಭಮೇಳ ಕುರಿತು ಕೋರ್ಟು ಮತ್ತು ಮಾಧ್ಯಮಗಳ ವರ್ತನೆ

- Advertisement -
- Advertisement -

ಕೋವಿಡ್ ಹೊಸ ಅಲೆ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಈ ವಾರ ನಡೆದ ಕೆಲವು ಸನ್ನಿವೇಶಗಳನ್ನು ಗಮನಿಸೋಣ. ಇಲ್ಲಿ ಎರಡು ಹೈಕೋರ್ಟ್‌ಗಳ ಆದೇಶಗಳು ತದ್ವಿರುದ್ಧವಾಗಿವೆ. ಮುಖ್ಯವಾಹಿನಿ ಮೀಡಿಯಾಗಳು ಪಕ್ಷಪಾತ ಮಾಡುತ್ತಿದೆ. ಈ ಎಲ್ಲದರ ಮಧ್ಯೆ ಕೋವಿಡ್ ದಿನಕ್ಕೆ 2 ಲಕ್ಷ ಜನರನ್ನು ಸೋಂಕಿಸುತ್ತಿದೆ.

ದೆಹಲಿ ಹೈಕೋರ್ಟ್
ಸೋಮವಾರ ಏಪ್ರಿಲ್ 12
ದೆಹಲಿ ವಕ್ಫ್ ಮಂಡಳಿ: ನಿಜಾಮುದ್ದೀನ್ ಮರ್ಕಾಜ್‌ನಲ್ಲಿ ದಿನಕ್ಕೆ 5 ಸಲ ನಮಾಜ್ ಮಾಡಲು ಅವಕಾಶ ನೀಡಿ. ಪ್ರತಿ ಸಲಕ್ಕೆ 50 ಜನರಿಗೆ ಮಾತ್ರ ಅವಕಾಶ ಕೊಡಿ.

ಕೇಂದ್ರ ಸರ್ಕಾರ: ನಮಾಜಿಗೆ ಅನುಮತಿಸಬಹುದು.

ಮಂಗಳವಾರ ಏಪ್ರಿಲ್ 13
ಕೇಂದ್ರ ಸರ್ಕಾರ: ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಲ್ಲಿ ಇರುವ ಕಾರಣ ನಮಾಜಿಗೆ ಅನುಮತಿ ನೀಡಲಾಗದು. ಹೆಚ್ಚೆಂದರೆ 20 ಜನರು ಪ್ರಾರ್ಥನೆ ಮಾಡಬಹುದು.

ಹೈಕೋರ್ಟ್: ಹರಿದ್ವಾರದಲ್ಲಿೆಲ್ಲ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಕುಂಭಮೇಳ ನಡೆಯುತ್ತಿದೆ. ಇಲ್ಲಿ ನೀವು ಧಾರ್ಮಿಕ ಸಭೆಯೊಂದಕ್ಕೆ 20 ಜನರಿಗಷ್ಟೇ ಅವಕಾಶ ಎನ್ನುತ್ತೀದ್ದೀರಾ? ಎಲ್ಲ ಧಾರ್ಮಿಕ ಸ್ಥಳ, ಸಭೆಗಳಿಗೂ ನೀವು ವಿಧಿಸಿರುವ ನಿರ್ಬಂಧಗಳ ಅಫಿಡವಿಟ್ ಸಲ್ಲಿಸಿ.

ಕೇಂದ್ರ ಸರ್ಕಾರದ ಪಕ್ಷಪಾತಿ ನಿಲುವುಗಳನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡಲು, ಪ್ರತಿ ಸಲ 50 ಜನ ನಮಾಜ್ ಮಾಡಲು ಅನುಮತಿ ನೀಡಿದೆ.

ಬಾಂಬೆ ಹೈಕೋರ್ಟ್
ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲೇ ಬಾಂಬೆ ಹೈಕೋರ್ಟಿನಲ್ಲಿ ಇದೇ ವಿಷಯವಾಗಿ ಒಂದು ವಿಚಾರಣೆ ನಡೆದು ವ್ಯತಿರಿಕ್ತ ತೀರ್ಪು ಹೊರ ಬಂದಿದೆ. ಮುಂಬೈನ ಜುಮ್ಮಾ ಮಸೀದಿ ಟ್ರಸ್ಟ್‌ನವರು, 50 ಜನರಿಗಾದರೂ ನಮಾಜ್ ಮಾಡಲು ಅವಕಾಶ ಕೊಡಿ, ದಿನಕ್ಕೆ ಹೀಗೆ ನಾಲ್ಕೈದು ಬಾರಿ ನಮಾಜ್ ಏರ್ಪಡಿಸುತ್ತೇವೆ. ನಮ್ಮ ಮಸೀದಿ ಆವರಣ ಒಂದು ಎಕರೆಯಷ್ಟು ವಿಶಾಲವಾಗಿದ್ದು 50 ಜನ ಅಲ್ಲಿ ಸೇರಿದರೆ ತೊಂದರೆಯಾಗುವುದಿಲ್ಲ ಎಂದು ಅರ್ಜಿ ಸಲ್ಲಿಸಿತ್ತು.

ಜನರ ಆರೋಗ್ಯ ಮುಖ್ಯ ಎಂದ ಬಾಂಬೆ ಹೈಕೋರ್ಟ್ ನಮಾಜಿಗೆ ಅನುಮತಿ ನಿರಾಕರಿಸಿತು. ಆ ಹೊತ್ತಿನಲ್ಲಿ ಕುಂಭಮೇಳದಲ್ಲಿ ಲಕ್ಷಾಂತರ ಜನ ನೀರಿನಲ್ಲಿ ಮುಳುಗಿ ಏಳುತ್ತಿದ್ದರು!

ಮೀಡಿಯಾ ಪಕ್ಷಪಾತ

ಕಳೆದ ವರ್ಷ ಆಗಿನ್ನೂ ಕೊವಿಡ್ ಹರಡಲು ಶುರುವಾದ ಸಮಯದಲ್ಲಿ ದೆಹಲಿಯ ನಿಜಾಮುದೀನ್ ಮರ್ಕಾಜ್ ಮಸೀದಿಯಲ್ಲಿ ನಡೆದ ತಬ್ಲಿಗಿ ಸಮಾವೇಶದಲ್ಲಿನ ಹಲವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಸಮಾವೇಶದಲ್ಲಿ ಪಾಲ್ಗೊಂಡವರು ದೇಶದ ಬೇರೆ ಬೇರೆ ಭಾಗಗಳಿಗೆ ತೆರಳಿದ ನಂತರ ಅಲ್ಲಿ ಕೆಲವರಿಗೆ ಕೊವಿಡ್ ತಗುಲಿತ್ತು. ಆಗ ಮೀಡಿಯಾ ಪಾಲಿಗೆ ಕೊರೋನಾ ವೈರಸ್ ತಬ್ಲಿಗಿ ಆಗಿತ್ತು.

ಈಗ ಅದೇ ಮುಖ್ಯವಾಹಿನಿ ಮಾಧ್ಯಮಗಳಿಗೆ ಕುಂಭಮೇಳ ಮಾತ್ರ ಭಕ್ತಿಭಾವದ ಪ್ರತೀಕ. ಆಗ ದಿನಕ್ಕೆ ಸಾವಿರ ಲೆಕ್ಕದಲ್ಲಿ ಕೇಸುಗಳಿದ್ದವು, ಈಗ ದಿನಕ್ಕೆ ಲಕ್ಷಗಳ ಲೆಕ್ಕದಲ್ಲಿ ಕೇಸುಗಳಿವೆ. ಆದರೆ ಯಾರನ್ನು ಓಲೈಸಲು ಈ ಮೀಡಿಯಾಗಳು ಕುಂಭಮೇಳದ ವರದಿಯನ್ನು ಭಕ್ತಿಭಾವದಿಂದ ವರದಿ ಮಾಡುತ್ತಿವೆ.?

ಆಳುವ ಪಕ್ಷ

ಇಲ್ಲಿ ನೆನಪಿಡಬೇಕಾದದ್ದು, ಈಗ ಆಳುತ್ತಿರುವ ಸರ್ಕಾರದ ಮೂಲ ತಳಹದಿಯೇ ವೈದಿಕ ಪುನರುತ್ಥಾನ. ಈ ದೇಶದ ಬಹುಸಂಖ್ಯಾತರಾದ ದಲಿತರು, ಹಿಂದುಳಿದವರ ಸಣ್ಣಪುಟ್ಟ ಜಾತ್ರೆಗಳಿಗೂ ನಿಷೇಧ ಹೇರಲಾಗಿದೆ. (ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದೇ ಎಂಬುದು ಬೇರೆ ಚರ್ಚೆಯ ವಿಷಯ)…. ಮುಸ್ಲಿಮರು 50 ಜನ ಸೇರಿ ರಂಜಾನ್ ಪ್ರಾರ್ಥನೆ ಮಾಡುವುದನ್ನು ವಿರೋಧಿಸುವ ಸರ್ಕಾರ, ವೈದಿಕರು, ಕ್ಷತ್ರಿಯರು ಮತ್ತು ವೈಶ್ಯರೇ ಹೆಚ್ಚಾಗಿ ಪಾಲ್ಗೊಳ್ಳುವ ಕುಂಭಮೇಳಕ್ಕೆ ಅನುಮತಿ ನೀಡಿದೆ. ಈ ಮೇಲ್‌ಸ್ಥರದ ಹಿಂದೂಗಳು ಸತ್ರೂ ಪರವಾಗಿಲ್ಲ, ತನಗೆ ರಾಜಕೀಯ ಲಾಭ (ಮುಖ್ಯವಾಗಿ ಬಂಗಾಳದಲ್ಲಿ) ಆಗಬೇಕು ಎಂಬುದೇ ಸರ್ಕಾರದ ಉದ್ದೇಶವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕುಂಭಮೇಳದ 30 ಸಾಧುಗಳಿಗೆ ಕೊರೊನಾ ಪಾಸಿಟಿವ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಸ್ವಾಮಿ…….
    ಹಿಂದೂಗಳು ಅಂಧ ಭಕ್ತರು ಅವರು ಮೂರ್ತಿ ಪೂಜೆ ನಂಬುತ್ತಾರೆ ನದಿ ಯಲ್ಲಿ ಮಿಂದೇಳುವ ಕಾರ್ಯಕ್ಕೆ ಪುಣ್ಯ ಎಂದು ಭಾವಿಸುತ್ತಾರೆ ಅದಕ್ಕೆ ಮಂದಿರ, ದೇವಸ್ಥಾನಗಳು ಇರುವ ಕಡೆ ಸಾವಿರಾರು ಜನ ಸೇರುತ್ತಾರೆ …..
    ಆದರೆ ತೀರ ಬುದ್ದಿವಂತರಾದ ಇಸ್ಲಾಂ ಭಾಂದವರು ಅವರ ಖುರಾನ್ ನಲ್ಲಿ ಹೇಳಿರುವ ಪ್ರಕಾರ ದಿನದಲ್ಲಿ ಐದು ಬಾರಿ ನಮಾಜ್ ಮಾಡಲು ಯಾವುದೇ ಕಟ್ಟಡದ ಮೂರ್ತಿ ಯ ಅವಶ್ಯಕತೆ ಇಲ್ಲ ಅಲ್ಲವೇ ಮನೆಯಲ್ಲೇ ಕೂತು ಐವತ್ತು ಬಾರಿ ನಮಾಜ್ ಮಾಡಲು ಆಕ್ಷೇಪ ಇಲ್ಲಾ ಅಲ್ಲವೇ……
    ನವಿಲನ್ನು ನೋಡಿ ಪುಕ್ಕ ಕಿತ್ತುಕೊಳ್ಳುವ ಅವಶ್ಯಕತೆ ಏನಿದೆ….
    ನಾನು ಸಾಮಾನ್ಯ ಪ್ರಜೆ …….ನನ್ನ ಬರಹ ಸರಿ ಅನಿಸಿದರೆ ದಯವಿಟ್ಟು ಒಂದಷ್ಟು ದುಡ್ಡು ಕಳಿಸಿ ……

LEAVE A REPLY

Please enter your comment!
Please enter your name here

- Advertisment -

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...