ಮಿಲಿಟರಿ ಗುಪ್ತಚರ ಘಟಕದ ಮಾಹಿತಿಯ ಮೇರೆಗೆ ಉತ್ತರ ಪ್ರದೇಶದ ಬಾಬು ಪೂರ್ವಾ ಪ್ರದೇಶದಲ್ಲಿ 265 ರೆಮ್ಡಿಸಿವಿರ್ ಬಾಟಲ್ಗಳೊಂದಿಗೆ ಇದ್ದ ಮೂವರನ್ನು ಕಾನ್ಪುರ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈಗಾಗಲೇ ದೇಶದ ಹಲವು ರಾಜ್ಯಗಳು ರೆಮ್ಡೆಸಿವಿರ್ ಕೊರತೆಯನ್ನು ಎದುರಿಸುತ್ತಿದೆ.
ಮೂವರ ಬಂಧನವನ್ನು ದಕ್ಷಿಣ ಕಾನ್ಪುರ ನಗರ ಪೊಲೀಸ್ (ಡಿಸಿಪಿ) ಉಪ ಆಯುಕ್ತೆ ರವಿನಾ ತ್ಯಾಗಿ ದೃಡಪಡಿಸಿದ್ದಾರೆ.
ರೆಮ್ಡಿಸಿವಿರ್ ಎಂಬುದು ಆಂಟಿ ವೈರಲ್ ಔಷಧವಾಗಿದ್ದು, ಇದನ್ನು ಕೊರೊನಾ ವೈರಸ್ ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. “ರೆಮ್ಡಿಸಿವಿರ್ ಚುಚ್ಚುಮದ್ದಿನ 265 ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ, ಅವುಗಳ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ರವಿನಾ ತ್ಯಾಗಿ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ರೆಮ್ಡಿಸಿವಿರ್ ಕೊರತೆ: ಖಾಸಗಿ ಆಸ್ಪತ್ರೆಗಳ ಒಕ್ಕೂಟ ‘ಫಾನಾ’
“ನೌಬಸ್ತಾದ ಪಶುಪತಿ ನಗರದ ಪ್ರಶಾಂತ್ ಶುಕ್ಲಾ ಮತ್ತು ಬಕ್ತೌರಿ ಪೂರ್ವಾ ನಿವಾಸಿ ಮೋಹನ್ ಸೋನಿ ಅವರನ್ನು ಸೀರೆ ಪ್ಯಾಕೆಟ್ನಲ್ಲಿ ಸುತ್ತಿಡಲಾದ ಬಾಟಲುಗಳೊಂದಿಗೆ ಬಂಧಿಸಲಾಗಿದೆ. ಈ ಇಬ್ಬರು ನೀಡಿದ ಮಾಹಿತಿಯ ಮೇರೆಗೆ ಎಸ್ಟಿಎಫ್ ಸಿಬ್ಬಂದಿಗಳು ಹರಿಯಾಣದ ಯಮುನಾ ನಗರ ನಿವಾಸಿ ಸಚಿನ್ ಕುಮಾರ್ ಅವರನ್ನು ಬಂಧಿಸಿದ್ದಾರೆ” ರವಿನಾ ತ್ಯಾಗಿ ತಿಳಿಸಿದ್ದಾರೆ.
Kanpur: Acting on a tip-off of Military Intelligence Unit, police arrested three people with Remdesivir injections in Babu Purwa area yesterday.
"265 vials of Remdesivir injection have been seized & its genuineness is being checked," said DCP (South) Ravina Tyagi. pic.twitter.com/I9plRIikPi
— ANI UP (@ANINewsUP) April 16, 2021
ಬಂಧಿತ ವ್ಯಕ್ತಿಗಳು ಈ ಲಸಿಕೆಯನ್ನು ಪಶ್ಚಿಮ ಬಂಗಾಳದಿಂದ ಪಡೆದಿದ್ದಾಗಿ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಶಾಂತ್ ಮತ್ತು ಮೋಹನ್ ಅವರು ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರಿಂದ ಸಾಲ ಪಡೆದಿದ್ದು, ಅದನ್ನು ಮರು ಪಾವತಿಸುವ ಬದಲು, 265 ರೆಮ್ಡಿಸಿವಿರ್ ಬಾಟಲುಗಳನ್ನು ತೆಗೆದುಕೊಂಡು ಹರಿಯಾಣದ ಯಮುನಾ ನಗರದಲ್ಲಿರುವ ಸಚಿನ್ಗೆ ತಲುಪಿಸಲು ಕೇಳಿಕೊಂಡಿದ್ದಾರೆ” ಎಂದು ಆರೋಪಿಗಳು ಹೇಳಿದ್ದಾಗಿ ರವೀನಾ ತ್ಯಾಗಿ ಹೇಳಿದ್ದಾರೆ.
ಬಾಟಲುಗಳಲ್ಲಿ ಬ್ಯಾಚ್ ಸಂಖ್ಯೆ ಕಾಣೆಯಾಗಿದ್ದು, ಬಂಧಿತ ವ್ಯಕ್ತಿಗಳ ಬಳಿ ಬಾಟಲುಗಳ ಬಿಲ್ಗಳು ಕೂಡಾ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾವನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿ, SDRF ಹಣ ಬಳಸಲು ಬಿಡಿ- ಉದ್ಧವ್ ಠಾಕ್ರೆ