Homeಕರೋನಾ ತಲ್ಲಣರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ರೆಮ್ಡಿಸಿವಿರ್‌ ಕೊರತೆ: ಖಾಸಗಿ ಆಸ್ಪತ್ರೆಗಳ ಒಕ್ಕೂಟ ‘ಫಾನಾ’

ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ರೆಮ್ಡಿಸಿವಿರ್‌ ಕೊರತೆ: ಖಾಸಗಿ ಆಸ್ಪತ್ರೆಗಳ ಒಕ್ಕೂಟ ‘ಫಾನಾ’

- Advertisement -
- Advertisement -

ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ರೆಮ್ಡಿಸಿವಿರ್ ಪ್ರಮಾಣಗಳ ಕೊರತೆ ಇದೆ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಶನ್‌ನ (ಫಾನಾ) ಕಾರ್ಯಕಾರಿ ಸಮಿತಿ ಸದಸ್ಯ ಡಾ. ರಾಜಶೇಖರ್ ಅವರು ಬುಧವಾರ ಹೇಳಿದ್ದಾರೆ. ಅಗತ್ಯ ರೋಗಿಗಳಿಗೆ ಔಷಧದ ಹೆಚ್ಚುವರಿ ಸರಬರಾಜು ಮಾಡುವುದಾಗಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕೊರೊನಾ ನಿರ್ವಹಣೆಯಲ್ಲಿ ರೆಮ್ಡಿಸಿವಿರ್ ಒಂದು ಪ್ರಮುಖ ಚುಚ್ಚುಮದ್ದು. ಕೊರೊನಾ ಮೊದಲ ಅಲೆಯ ನಂತರ, ತಯಾರಕರು ತಮ್ಮ ಉತ್ಪಾದನೆಯನ್ನು ನಿಧಾನಗೊಳಿಸಿದರು. ಆದಾಗ್ಯೂ, ಎರಡನೇ ಅಲೆಯ ತ್ವರಿತ ಆಕ್ರಮಣದಿಂದಾಗಿ ಡೋಸೇಜ್‌ಗಳ ಕೊರತೆ ಪ್ರಾರಂಭವಾಗಿತ್ತು. ಇದೀಗ ಒಂದು ವಾರದದಿಂದ ರೆಮ್‌ಡೆಸಿವಿರ್‌ನ ತೀವ್ರ ಕೊರತೆ ಇದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಉಲ್ಬಣ: ಕಳೆದ ಒಂದು ದಿನದಲ್ಲಿ ಹಲವು ದಾಖಲೆ ಮಾಡಿದ ಭಾರತ!

“ಹಲವಾರು ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಅಗತ್ಯವಿರುವ ರೋಗಿಗಳಿದ್ದಾರೆ. ಆದಾಗ್ಯೂ, ಅಗತ್ಯವಿರುವ ರೋಗಿಗಳಲ್ಲಿ 20% ದಿಂದ 30% ರಷ್ಟು ಜನರಿಗೂ ದಾಸ್ತಾನು ಇರಲಿಲ್ಲ” ಎಂದು ಅವರು ಹೇಳಿದ್ದಾರೆ.

“ಇಂದು ನಾವು ಸರ್ಕಾರ ಮತ್ತು ಡಿಜಿಸಿಐ ಜೊತೆ ಸಭೆ ನಡೆಸಿದ್ದೇವೆ. ನಾವು ಈ ಬಗ್ಗೆ ಎಚ್ಚರಿಸಿದ ಮಾಡಿದ ಕೆಲವೇ ಗಂಟೆಗಳಲ್ಲಿ ಅಗತ್ಯ ರೋಗಿಗಳಿಗೆ ಬೇಕಾದುದನ್ನು ಪೂರೈಸುವ ಭರವಸೆ ನೀಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಕೊರೊನಾ ಸನ್ನಿವೇಶದ ಬಗ್ಗೆ ಮಾತನಾಡಿದ ರಾಜಶೇಖರ್, “ಮೊದಲ ಅಲೆಯ ಸಮಯದಲ್ಲಿ, ಸಾಕಷ್ಟು ಎಚ್ಚರಿಕೆ ಮತ್ತು ಭಯವಿತ್ತು, ಈಗ ಜನರಿಗೆ ಆ ಭಯವಿಲ್ಲ. ನಾವು ಗಮನಿಸಬೇಕಾದ ಅಂಶವೆಂದರೆ, ಎಲ್ಲಿಗೂ ಪ್ರಯಾಣಿಸದ ಮತ್ತು ಯಾವುದೇ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿಲ್ಲದ ಜನರು ಕೊರೊನಾ ಪಾಸಿಟಿವ್ ಆಗುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಎರಡನೆ ಅಲೆಯಲ್ಲಿ, ಸೋಂಕಿನ ಹರಡುವಿಕೆಯ ಪ್ರಮಾಣವು ಹೆಚ್ಚು ವೇಗವಾಗಿರುತ್ತದೆ, ಆರಂಭಿಕ ದಿನಗಳಲ್ಲಿ, ಇದು ದ್ವಿಗುಣಗೊಳ್ಳಲು 18 ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಈಗ ದ್ವಿಗುಣಗೊಳ್ಳಲು ಎಂಟು ರಿಂದ ಒಂಬತ್ತು ದಿನಗಳನ್ನು ತೆಗೆದುಕೊಳ್ಳುತ್ತದೆ. ಭವಿಷ್ಯದಲ್ಲಿ ಇದು ದ್ವಿಗುಣಗೊಳ್ಳಲು ಕೇವಲ ಐದು ದಿನಗಳು ಬೇಕಾಗಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಆತಂಕ: ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಗಳು ರದ್ದು, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ನೊಟೀಸ್‌ ನೀಡುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ಕಳುಹಿಸಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...