Homeಕರ್ನಾಟಕಎಬಿವಿಪಿಯನ್ನು ಪುಂಡರು, ರೌಡಿಗಳೆಂದು ಕರೆದು ದೂರು ನೀಡಿದ ಉಪಕುಲಪತಿ: ಪಬ್ಲಿಕ್ ಟಿವಿ ವರದಿಗಾರನ ಬಂಧನ

ಎಬಿವಿಪಿಯನ್ನು ಪುಂಡರು, ರೌಡಿಗಳೆಂದು ಕರೆದು ದೂರು ನೀಡಿದ ಉಪಕುಲಪತಿ: ಪಬ್ಲಿಕ್ ಟಿವಿ ವರದಿಗಾರನ ಬಂಧನ

ನೇಮಕಾತಿ ವಿಚಾರದಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯದೆ ಪ್ರವೇಶ್ ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯಪಾಲ ವಜುಬಾಯಿವಾಲರವರ ಪೋಟೊ ಅಂಟಿಸಿ ಅದನ್ನು ಟಿವಿಯಲ್ಲಿ ಬೇಕಾಬಿಟ್ಟಿ ಪ್ರಸಾರ ಮಾಡಿದ್ದಾರೆ.

- Advertisement -
- Advertisement -

| ಮುತ್ತುರಾಜು |

ನಾನು ಹಣ ವಸೂಲಿ ಮಾಡುತ್ತಿರುವುದು ರಾಮಚಂದ್ರ ಮಠಕ್ಕೆ ಹೊರತು ನನಗಲ್ಲ. ಹಾಗಾಗಿ ನೇಮಕಾತಿಯಾಗುವಾಗ ಪ್ರತಿಯೊಬ್ಬರೂ ಹಣ ಕೊಡಲೇಬೇಕು. ಹೀಗೆಂದವರು ಬಳ್ಳಾರಿ ವಿ.ವಿಯ ಮಾಜಿ ಉಪಕುಲಪತಿ ಮಂಜಪ್ಪ ಹೊಸಮನಿ. ಆಗ ಈತನಿಗೆ ಜೈಕಾರ ಹಾಕಿ ವಸೂಲಿಗೆ ಸಹಕರಿಸಿದವರು ಇದೇ ಬಿಜೆಪಿಯ ಮರಿಸಂಘಟನೆಯಾದ ಎಬಿವಿಪಿಯವರು. ಅಲ್ಲೊಂದಿಷ್ಟು ಪಾಲು ಪಡೆದು ತಮ್ಮವರನ್ನು ವಿ.ವಿಯ ಆಯಾಕಟ್ಟಿನ ಜಾಗದಲ್ಲಿ ಕೂಡಿಸಿ ಮೇಯಲು ಜಾಗಮಾಡಿಕೊಂಡಿದ್ದ ಎಬಿವಿಪಿ ನಾಯಕರಿಗೆ ಈಗ ಮೇವು ಸಾಲುತ್ತಿಲ್ಲ. ಹಾಗಾಗಿ ಹಾಲಿ ಉಪಕುಲಪತಿ ಡಾ.ಸುಭಾಷ್ ವಿರುದ್ಧ ಜೋರಾಗಿಯೇ ಗುಟುರು ಹಾಕುತ್ತಿದ್ದಾರೆ. ಆದರೆ ಇವರ ಗುಟುರಿಗೆ ಜಗ್ಗದ ಉಪಕುಲಪತಿಗಳು ಸೆಡ್ಡು ಹೊಡೆದಿದ್ದಾರೆ. ಮೇಲ್ನೋಟಕ್ಕೆ ಇದು ನೇಮಕಾತಿ ವಿಚಾರದಲ್ಲಿನ ಭ್ರಷ್ಟಾಚಾರ ಎಂದು ಕಾಣಿಸಿದರೂ ಆಳ ಅಗಲ ಎಲ್ಲೆಲ್ಲಿಗೋ ಹೋಗಿ ನಿಲ್ಲುತ್ತಿದೆ. ಬನ್ನಿ ನೋಡೋಣ

ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ ಕಳೆದೆರಡು ತಿಂಗಳಿಂದ ಜೋರಾಗಿಯೇ ಸದ್ದು ಮಾಡುತ್ತಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದಿದ್ದ ಕುಲಸಚಿವರಾದ ಬಿ.ಕೆ ತುಳಸಿಮಾಲರವರನ್ನು ಪತ್ರಿಕಾಗೋಷ್ಟಿಯಿಂದ ಹೊರಕಳಿಸಿದ್ದು ಎಲ್ಲಾ ಕಡೆ ಸುದ್ದಿಯಾಗಿತ್ತು. ತದನಂತರ ಅಲ್ಲಿಗೆ ಎಂಟ್ರಿಯಾದವರು ಎಬಿವಿಪಿ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿರುವ ಕೆಲ ಯುವಕರು. ಓದಿ ಮುಗಿಸಿ ಎಷ್ಟೊ ವರ್ಷಗಳಾದರೂ ನಾವಿನ್ನು ವಿದ್ಯಾರ್ಥಿ ನಾಯಕರು ಎಂದು ಪೋಸು ಕೊಡುತ್ತಿರುವ ಇವರ ಹಾವಳಿ ಜಿಲ್ಲೆಯಲ್ಲಿ ಜೋರಾಗಿದೆ.

ಅವರ ಮೊದಲ ಉದ್ದೇಶ ತಮ್ಮವರನ್ನು ವಿ.ವಿಯಲ್ಲಿ ಪ್ರತಿಷ್ಠಾಪಿಸುವುದು. ಆ ಮೂಲಕ ವಿ.ವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ರಾಜಕಾರಣ ಮಾಡುವುದು. ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಹೇಗಾದರೂ ಮಾಡಿ ವಿ.ವಿಯ ಒಳಕ್ಕೆ ತೂರಿಸಿಬಿಟ್ಟರೆ ತಮ್ಮ ಆಟ ಸಲೀಸು ಎಂದು ಇನ್ನಿಲ್ಲದ ಪ್ರಯತ್ನವನ್ನು ಎಬಿವಿಪಿ ಮಾಡಿತು. ಆದರೆ ಯಾರಾದರೇನು, ತನಗೆ ಬರಬೇಕಿದ್ದ ದುಡ್ಡು ಬಂದರೆ ಸಾಕು ಎಂದು ಉಪಕುಲಪತಿಗಳು ದುಡ್ಡು ಕೊಟ್ಟವರಿಗೆ ಮಾತ್ರ ಮಣೆ ಹಾಕಿದರು. ಇದರಿಂದ ಕುಪಿತರಾದ ಎಬಿವಿಪಿಯ ಕೆಲ ಮುಖಂಡರು ಕುಲಪತಿಗಳ ವಿರುದ್ಧ ಯುದ್ಧ ಸಾರಿದರು.

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ದೊಡ್ಡ ಬಸನಗೌಡ ಆರ್.ಎಸ್.ಎಸ್ ಹಿನ್ನೆಲೆಯ ವ್ಯಕ್ತಿ, ಜಾತಿ ಮತ್ತು ರಾಜಕೀಯ ಬಲದೊಂದಿಗೆ ಸಿಂಡಿಕೇಟ್ ಮೆಂಬರ್ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಇನ್ನು ಅಡವಿಸ್ವಾಮಿ ಎಬಿವಿಪಿಯಲ್ಲಿದ್ದುಕೊಂಡು ಸಂಘಟನೆ ಕಾರ್ಯಕ್ರಮಗಳ ಆಯೋಜನೆಯ ಹೆಸರಿನಲ್ಲಿ ಯುವಕರನ್ನು ದಾರಿತಪ್ಪಿಸುತ್ತಲೇ ಹಣ ಬಾಚುತ್ತಿರುವ ವ್ಯಕ್ತಿ. ಇನ್ನು ವರುಣ್ ಕುಮಾರ್ ರೆಡ್ಡಿ, ಎಂ.ಎಲ್.ಎ ಸೋಮಶೇಖರ ರೆಡ್ಡಿ ಕೃಪಾಕಟಾಕ್ಷದಿಂದ ಸಿಂಡಿಕೇಟ್ ಮೆಂಬರ್ ಆಗಿದ್ದಾನೆ. ಇವರಿಷ್ಟು ಜನ ಸೇರಿಕೊಂಡು ಒಂದಿಷ್ಟು ಜನರನ್ನು ವಿ.ವಿ ಸೇರಿಸಲು ದಳ್ಳಾಳಿಗಳಾಗಿ ಕೆಲಸ ಮಾಡಿದರು. ಆದರೆ ಉಪಕುಲಪತಿ ಸುಭಾಷ್ ಕೇರ್ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಇವರು ಅವರ ವಿರುದ್ಧ ತಿರುಗಿ ಬಿದ್ದರು.

ದೊಡ್ಡಬಸವನಗೌಡ

ಉಪಕುಲಪತಿ ದಲಿತರಾಗಿದ್ದು ಅವರನ್ನು ಮತ್ತಷ್ಟು ಕೆರಳಿಸಿತು. ಲಿಂಗಾಯತ ಸಮುದಾಯದ ಅಡವಿಸ್ವಾಮಿ ಇದನ್ನೇ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡ. ಮೊದಲನೇಯದಾಗಿ ಅಲ್ಲಿನ ಬಿಜೆಪಿ ಎಂ.ಎಲ್.ಎಗಳಿಗೆ ವಿ.ವಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ದೂರು ನೀಡಿದ. ನಂತರ ರಾಜ್ಯಪಾಲರಿಗೆ ದೂರು ನೀಡಿ ರಾಜ್ಯಮಟ್ಟದ ಸುದ್ದಿ ಮಾಡಲು ನೋಡಿದರು. ಆಗ ಅವರ ಕೈಗೆ ಸಿಕ್ಕಿದ್ದು ವಿ.ವಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಚಿದಾನಂದ್ ಎಂಬುವವರು. ಅವನನ್ನು ಪುಸಲಾಯಿಸಿ ಅಡವಿಸ್ವಾಮಿ ಪತ್ರಿಕಾಗೋಷ್ಠಿಯೊಂದನ್ನು ಮಾಡಿ ಆರೋಪಗಳ ಮಳೆ ಸುರಿಸಿದ. ಇದನ್ನೇ ಕಾದು ಕುಳಿತಿದ್ದ ಮಾಧ್ಯಮಗಳು ಭಾರೀ ಸುದ್ದಿ ಮಾಡಿದವು.

ಇದು ಅಡವಿಸ್ವಾಮಿಗೆ ಬೂಸ್ಟ್ ನೀಡಿದಂತಾಯ್ತು. ಅಲ್ಲಿಂದ ಮುಂದುವರಿದು ನೇಮಕಾತಿ ಮಾಡಿಕೊಳ್ಳುವಂತೆ ಚಿದಾನಂದ್‍ರವರಿಂದ ಗ್ರಂಥ ಪಾಲಕ ಕಟ್ಟಿಮನಿಯವರಿಗೆ ಫೋನ್ ಮಾಡಿಸಿ ಪದೇ ಪದೇ ಒಂದು ಹುದ್ದೆಗೆ ದುಡ್ಡು ಎಷ್ಟು? ಯಾರಿಗೆ ಕೊಡಬೇಕು ಎಂದೆಲ್ಲಾ ಮಾತಾಡಿಸಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದೇ ರೀತಿ ಮಹಿಳೆಯೊಬ್ಬಳು ಇನ್ನೊಬ್ಬ ಪುರುಷನಿಗೆ ಕರೆ ಮಾಡಿ ಈ ರೀತಿ ದುಡ್ಡು ಕೊಟ್ಟರೆ ಉದ್ಯೋಗ ಸಿಗುತ್ತದೆ ಎಂದು ಮಾತಾಡಿರುವ ಆಡಿಯೊ ರೆಕಾರ್ಡ್ ಮಾಡಿದ್ದಾರೆ. ಇವೆರಡನ್ನು ಪ್ರೆಸ್ ಮೀಟ್ ನಲ್ಲಿ ರಿಲೀಸ್ ಮಾಡಿ ತಾನೇನೊ ದೊಡ್ಡ ಸಾಧನೆ ಮಾಡಿದಂತೆ ಪೋಸು ಕೊಟ್ಟಿದ್ದಾರೆ. ಆದರೆ ನಂತರ ಅದೆಲ್ಲವೂ ಆತನಿಗೆ ಉಲ್ಟಾ ಹೊಡಿದಿದೆ.

ಉಪಕುಲಪತಿ ಪ್ರೊ.ಸುಭಾಷ್

ಆಡಿಯೊ ಉಪಕುಲಪತಿ ಕೈ ಸೇರಿದ್ದೆ ತಡ ಕ್ಲರ್ಕ್ ಚಿದಾನಂದ್ ಮತ್ತು ಗ್ರಂಥಪಾಲಕ ಕಟ್ಟಿಮನಿ ಅಮಾನತ್ತಾಗಿದ್ದಾರೆ. ಯಾರ ಯಾರ ವಿರುದ್ಧ ಆರೋಪ ಬಂತೊ ಅವರೆಲ್ಲರನ್ನು ಮನೆಗೆ ಕಳಿಸಲಾಗಿದೆ. ಇನ್ನು ಉಪಕುಲಪತಿ ಸುಭಾಷ್‍ರವರು ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಬಿಟ್ಟಿದ್ದಾರೆ. ದುಡ್ಡು ತಿಂದಿರುವ ಒಂದು ದಾಖಲೆಯೂ ಹೊರಗೆ ಬಾರದಂತೆ ಅವರು ಎಚ್ಚರಿಕೆ ವಹಿಸಿದ್ದಾರೆ. ಅಷ್ಟು ಮಾತ್ರವಲ್ಲ ಇನ್ನ 15 ದಿನದಲ್ಲಿ ಅವರ ಅಧಿಕಾರವದಿ ಮುಗಿಯಲಿದೆ. ಈಗ ಅವರು ತನಗೆ ಯಾರೆಲ್ಲ ತೊಂದರೆ ಕೊಟ್ಟಿದ್ದರೊ ಅವರೆಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.

ಮೊದಲಿಗೆ ಅಡವಿ ಸ್ವಾಮಿ ವಿರುದ್ಧ ಸುಭಾಷ್‍ರವರು ಜೂನ್ 03ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈತ ರೌಡಿ ಆಗಿದ್ದು ಹಲವು ಕೇಸ್‍ಗಳು ಈತನ ಮೇಲಿವೆ. ತನ್ನ ಸಹಚರನಿಂದ ಯಾವುದೋ ಕಾರ್ಯಕ್ರಮಕ್ಕೆ 1 ಲಕ್ಷ ದುಡ್ಡು ಕೇಳಿದ್ದನಂತೆ. ಆದರೆ ಸಿಂಡಿಕೇಟ್‍ನಲ್ಲಿ ಚರ್ಚಿಸಿ 10 ಸಾವಿರ ನೀಡಿದ್ದನ್ನು ಉಲ್ಲೇಖಿಸಿರುವ ಅವರು ದುಡ್ಡು ಕೊಡದಿದ್ದರಿಂದ ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಆರ್‍ಎಸ್‍ಎಸ್ ಹಿನ್ನೆಲೆಯ ಸಿಂಡಿಕೇಟ್ ಸದಸ್ಯರಾದ ದೊಡ್ಡ ಬಸನಗೌಡ, ವರುಣ್ ಕುಮಾರ್ ರೆಡ್ಡಿ ಮಾಜಿ ಸಿಂಡಿಕೇಟ್ ಸದಸ್ಯ ಅಲ್ಲಾವಲಿ ಬಾಷಾ ಕೊಲ್ಮಿ ಸೇರಿಕೊಂಡು ತಾವು ಹೇಳಿದವರನ್ನು ವಿ.ವಿ ಗೆ ನೇಮಿಸಬೇಕೆಂದು ಒತ್ತಾಯಿಸಿದ್ದರು ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಜೊತೆಗೆ ಮಲ್ಲೇಶಿ ಎಂಬಾತ ವಿ.ವಿಗೆ ಟ್ಯಾಂಕರ್ ನೀರು ಸರಬರಾಜು ಟೆಂಡರ್‍ಗೆ ಆಕಾಂಕ್ಷಿಯಾಗಿದ್ದ, ಅದು ಅವನಿಗೆ ಸಿಗದಿದ್ದರಿಂದ ಇವರೆಲ್ಲ ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಮತ್ತು ವಿ.ವಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಾನೊಬ್ಬ ದಲಿತನಾದ ಕಾರಣಕ್ಕೆ ಇವರೆಲ್ಲರ ಉಪಟಳ ಹೆಚ್ಚಾಗಿದೆ ಎಂದು ದೂರಿರುವ ಅವರು ಆ ಪತ್ರವನ್ನು ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಿಗೂ ರವಾನಿಸಿದ್ದಾರೆ.

ಮಂಜಪ್ಪ ಹೊಸಮನಿ

ಮಾಜಿ ಕುಲಪತಿ ಮಂಜಪ್ಪ ಹೊಸಮನಿಯವರು 2012ರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ, 371ಜೆ ಉಲ್ಲಂಘಿಸಿ ಸ್ಥಳೀಯೇತರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾಗ ಈ ಎಬಿವಿಪಿ ನಾಯಕರು ಬಾಯಿ ಬಿಡಲಿಲ್ಲ ಮಾತ್ರವಲ್ಲ ಉಪಕುಲಪತಿಗಳ ಪರ ನಿಂತರು. ಇದರಿಂದ ನ್ಯಾಯಯುತವಾಗಿ ಹೈದರಾಬಾದ್ ಕರ್ನಾಟದಕ ನಿರುದ್ಯೋಗಿಗಳಿಗೆ ಸಿಗಬೇಕಿದ್ದ ಉದ್ಯೋಗಗಳು ಸಿಗಲಿಲ್ಲ. ಆದರೆ ಈಗ 7 ವರ್ಷಗಳ ನಂತರವಾದರೂ 371ಜೆ ಅನ್ವಯ ನೇಮಕಾತಿ ನಡೆಯುತ್ತಿದ್ದು ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತಿವೆ. ಆದರೆ ಈಗ ನೇಮಕಾತಿಗೆ ಎಬಿವಿಪಿನವರು ಕಲ್ಲು ಹಾಕಲು ಹೊರಟಿರುವುದ ಅಕ್ಷಮ್ಯ. ಉಪ ಕುಲಪತಿಗಳು ಭ್ರಷ್ಟಾಚಾರ ಮಾಡಿದರೆ ದಾಖಲೆ ಸಮೇತ ಕಾನೂನು ಹೋರಾಟ ಮಾಡಬೇಕೆ ಹೊರತು ಈ ರೀತಿಯ ರೌಡಿ ವರ್ತನೆ ಸರಿಯಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ವಿದ್ಯಾರ್ಥಿಗಳ ಹಿತಾಸಕ್ತಿ ಪರವಾಗಿ ಹೋರಾಡಬೇಕಾದ ಎಬಿವಿಪಿಯಂತಹ ಸಂಘಟನೆ ಅಡವಿ ಸ್ವಾಮಿಯಂತಹ ರೌಡಿಗಳ ಕೈಯಲ್ಲಿ ಹಣ ಮಾಡುವ ದಂಧೆಯಾಗಿರುವುದ ದುರಂತ. ಈ ಕುರಿತು ಎಬಿವಿಪಿಯ ರಾಜ್ಯ ಪಧಾದಿಕಾರಿಗಳು ಗಮನಹರಿಸಬೇಕಿದೆ. ಇನ್ನು ವಿ.ವಿಯಲ್ಲಿನ ಭ್ರಷ್ಟಾಚಾರ ಸಾಮಾನ್ಯ ಸಂಗತಿಯಾಗಿರುವುದು ನಾಗರೀಕ ಸಮಾಜಕ್ಕೆ ಕಳಂಕ. ಈ ಕುರಿತು ದಿಟ್ಟ ಕ್ರಮಗಳಿಗೆ ಸರ್ಕಾರ ಮುಂದಾಗುವಂತೆ ಸಾರ್ವಜನಿಕರು ಒತ್ತಾಯ ಮಾಡಬೇಕಿದೆ. ವಿ.ವಿಯಲ್ಲಿನ ಮೂಲಸೌಕರ್ಯ ಕೊರತೆಯ ನೂರಾರು ಸಮಸ್ಯೆಗಳಿವೆ. ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಸಿಗದೇ ನರಳುತ್ತಿದ್ದಾರೆ. ಇದರ ವಿರುದ್ಧ ಮಾತ್ರ ಯಾರು ದನಿಯೆತ್ತದಿರುವುದು ದುರಂತವಾಗಿದೆ.

ಪಬ್ಲಿಕ್ ಟಿವಿ ವರದಿಗಾರನ ಬಂಧನ

ಒಂದು ಕಡೆ ಇಷ್ಟೆಲ್ಲಾ ರಗಳೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಉಪಕುಲಪತಿ ಸುಭಾಷ್ ವಿರುದ್ಧ ಹಠ ಸಾಧಿಸಲು ಹೋದ ನಾಲ್ವರು ಜೈಲು ಪಾಲಾಗಿದ್ದಾರೆ. ಪಬ್ಲಿಕ್ ಟಿವಿಯ ವೀರೇಶ್ ದಾನಿ, ಇಂಚರ ಟಿವಿಯ ಮಾಜಿ ರಿಪೋರ್ಟರ್ ನಾಗಭೂಷಣ, ಸಿ.ಎಂ ಮಂಜುನಾಥಯ್ಯ ಮತ್ತು ಅವರ ಸ್ನೇಹಿತ ವಿರೇಶ ಬಂಧನವಾಗಿರುವ ಆ ಮಹಾನುಭಾವರು. ನೇಮಕಾತಿ ವಿಚಾರದಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯದೆ ಪ್ರವೇಶ್ ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯಪಾಲ ವಜುಬಾಯಿವಾಲರವರ ಪೋಟೊ ಅಂಟಿಸಿ ಅದನ್ನು ಟಿವಿಯಲ್ಲಿ ಬೇಕಾಬಿಟ್ಟಿ ಪ್ರಸಾರ ಮಾಡಿದ್ದಾರೆ.

ಉಪಕುಲಪತಿಗಳು ಇದನ್ನು ನೋಡಿದ್ದೆ ತಡ ಪೊಲೀಸರಿಗೆ ದೂರು ನೀಡಿದ್ದಾರೆ. ನವರಂಗಿ ಆಟ ಆಡಲು ಹೋದ ಆ ನಾಲ್ವರು ಅಂದರ್ ಆಗಿದ್ದಾರೆ. ಹುಚ್ಚುಚ್ಚು ಸುದ್ದಿ ಪ್ರಸಾರ ಮಾಡುವ ಪಬ್ಲಿಕ್ ಟಿವಿಗೆ ಸರಿಯಾಗಿ ಮಂಗಳಾರತಿ ಆಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...