Homeಮುಖಪುಟಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತವೆ.

- Advertisement -
- Advertisement -

ಮೊದಲಿಗೆ ಕೋವಿಡ್ ಅವಾಂತರಗಳಿಂದ ಬೇಸತ್ತು ಒಂದಷ್ಟು ಕಾಲದ ನಂತರ ಸಿನೆಮಾ ಥಿಯೇಟರ್ ಗಳಿಗೆ ಹೋಗುವಂತಾದ ಖುಷಿಯನ್ನ ಎಲ್ಲರೂ ಹಂಚಿಕೊಳ್ಳೋಣ. ಆಕ್ಟ್-1978 ಸಿನೆಮಾ, ಬಹಳ ಹಿಂದೆ ಕನ್ನಡದಲ್ಲೇ ಬಂದ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ನಿಷ್ಕರ್ಷ’, ಆ ಸಿನೆಮಾಗೆ ಸ್ಫೂರ್ತಿಯಾಗಿದ್ದ ಅಮೆರಿಕನ್ ಚಲನಚಿತ್ರ ‘ಡೈ ಹಾರ್ಡ್’ ಇಂತಹ ಹೋಸ್ಟೇಜ್ ಡ್ರಾಮ ಸಿನೆಮಾಗಳ ಪ್ರಕಾರಕ್ಕೆ ಸೇರಿದರೂ, ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವ ‘ಕಾರಣ’ದಿಂದಾಗಿ ವಿಭಿನ್ನ ಕಥಾವಸ್ತು ಹೊಂದಿದೆ. ಸಿನೆಮಾದ ಮೂಲ ಉದ್ದೇಶವೇ ಚಿಂತನೆಗಳನ್ನ ಹೆಚ್ಚಿಸುವುದಾದ್ದರಿಂದ, ಆ ನಿಟ್ಟಿನಲ್ಲಿ ಆಕ್ಟ್-1978 ಗೆದ್ದಿದೆಯಾ? ಮುಂದೆ ನೋಡೋಣ…

ಮೊದಲಿಗೆ ಹಿಂಸೆಯನ್ನ ಹೋರಾಟದ ಪ್ರಕ್ರಿಯೆಗಳಿಗೆ ಬಳಸೋದು, ಹಾಗೆ ಬಳಸುವಂತೆ ಪ್ರಚೋದಿಸುವುದು ಸರಿಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ತುಂಬು ಗರ್ಭಿಣಿಯ ಪಾತ್ರ ಸೃಷ್ಟಿಸಿ, ಆಕೆಯ ಮೂಲಕ ಕಥೆ ಹೇಳಿ, ಪ್ರೇಕ್ಷಕನನ್ನ ಭಾವನಾತ್ಮಕವಾಗಿ ಹಿಡಿದಿಡುವ ಪ್ರಯತ್ನ ಸಮಂಜಸವಾದುದಲ್ಲ.

ಸರ್ಕಾರಿ ಕಚೇರಿಯೊಂದರಲ್ಲಿ ನಡೆಯುವ ಕಥೆ, ಆ ಕಚೇರಿಯ ನೌಕರರ ಭ್ರಷ್ಟತೆಯನ್ನು ಅನಾವರಣಗೊಳಿಸುತ್ತಾ, ಅವರ ಮೇಲ್ದರ್ಜೆಯ ಅಧಿಕಾರಿಗಳನ್ನೂ ಒಳಗೊಂಡಂತೆ ಹೇಗೆ ಇವರೆಲ್ಲಾ ಭ್ರಷ್ಟ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂಬುದನ್ನ ತೋರಿಸುತ್ತಾ ಸಾಗುತ್ತದೆ.

ಕಥಾನಾಯಕಿ ಅಮಾಯಕಳೇನಲ್ಲ. ಎನ್ ಸಿ ಸಿ ಯಲ್ಲಿ ತರಬೇತಿ ಪಡೆದಿರುವಾಕೆ. ಆದರೆ ಆಕೆ ಸನ್ನಿವೇಶಗಳನ್ನ ಎದುರಿಸುವ ರೀತಿಯಲ್ಲಿ ಕಟ್ಟಿಕೊಟ್ಟಿರುವ ಚಿತ್ರಣ ತಡವರಿಸಿದಂತಿದೆ. ಉದಾಹರಣೆಗೆ ಆಕೆ ಒಂದೇ ಟ್ರಿಗರ್ ಗೆ ಶೂಟ್ ಮಾಡುವಾಗ ಇರುವ ಪಕ್ವತೆಗೂ, ತನ್ನ ಬೇಡಿಕೆ ಇಡುವಾಗ ತೋರಿಸುವ ಅಮಾಯಕತೆಗೂ, ಬಹಳವೇ ಅಂತರವಿದೆ.

ಮಹಾತ್ಮ ಗಾಂಧಿಯ ಹೋಲಿಕೆಯನ್ನು ಬಳಕೆ ಮಾಡಿರುವುದು, ಸಣ್ಣ ಸಣ್ಣ ಅರ್ಥಗಳನ್ನ ಹೊಸೆಯುವಿಕೆಗೆ ಸಹಾಯವಾಗಿದೆ, ಪ್ರತೀ ಸರ್ಕಾರಿ ಕಚೇರಿಯ ಎದುರು ಹೀಗೊಂದು ಪ್ರಜ್ಞೆ ಸದಾ ಜಾಗೃತವಾಗಿದ್ದರೆ ಎಷ್ಟು ಚೆಂದವಿತ್ತು ಅನ್ನುವ ಹಾಗೆ.

ಇನ್ನು, ಕ್ರಿಶ್ಚಿಯನ್ ಮುಸ್ಲಿಂ ಧರ್ಮದಾರಿ ಪಾತ್ರಗಳನ್ನ ಕಾಮಿಡಿ ಪೀಸುಗಳನ್ನಾಗಿಸುವ ಟ್ರೆಂಡ್ ಇತ್ತೀಚಿಗೆ ಬೆಳೆಯುತ್ತಿರುವುದು ಅಪಾಯಕಾರಿ ಸಂಗತಿ. ಈ ಸಿನಿಮಾದಲ್ಲಿ ಬೆಂಜಮಿನ್ ಪಾತ್ರಧಾರಿಯನ್ನು ಹಾಸ್ಯ ಮಾಡುವುದು ಕನಿಷ್ಠ ಎಂಬಂತೆ ಬಳಕೆಯಾದರೂ ಬಹುಸಂಖ್ಯಾತ ಧಾರ್ಮಿಕವಾದ ಯಜಮಾನ್ಯ ಸಾಧಿಸುತ್ತಿರುವ ಸಮಯದಲ್ಲಿ ಅದು ಕಾಣುವ ರೀತಿ ಸಮಸ್ಯಾತ್ಮಕವಾದದ್ದು.

ಯಜ್ಞಾಶೆಟ್ಟಿಯವರು ಒಬ್ಬ ಗರ್ಭಿಣಿ ಸ್ತ್ರೀ ಹೇಗೆ ನೆಡೆಯುತ್ತಾಳೆ, ಹೇಗೆ ನೋವನ್ನು ಅನುಭವಿಸುತ್ತಾಳೆ ಎನ್ನುವ ರೀತಿಗಳನ್ನು ಬಹಳ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ, ಡೈಲಾಗ್ ಹೇಳುವಾಗ ಒಂದಷ್ಟು ಹೆಚ್ಚಿನ ಶ್ರಮ ಹಾಕಿದ್ದರೆ ನಟನೆ ಇನ್ನೂ ಆಪ್ತವಾಗಿರುತ್ತಿತ್ತು. ಸಂಚಾರಿ ವಿಜಯ್, ಅವಿನಾಶ್, ಅಚ್ಚುತ್ , ಶ್ರುತಿ, ಇವರೆಲ್ಲರೂ ಕಡಿಮೆ ಸಮಯದಲ್ಲಿಯೇ ಬಂದರೂ , ಯಜ್ಞಾಶೆಟ್ಟಿಯವರನ್ನೂ ಮರೆಸುವಂತೆ ಕಾಣುತ್ತಾರೆ.
ಇದೆಲ್ಲದರ ಹೊರತಾಗಿ ಸಿನೆಮಾ ಕಡೆಗಾಣಿಸುವಂಥಹ ಪ್ರಯತ್ನವಾ?  ಖಂಡಿತಾ ಇಲ್ಲ….

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತದೆ. ಆದರೆ ವಿಷಯವನ್ನು ಕಟ್ಟುವಾಗ ಇನ್ನಷ್ಟು ಗಂಭೀರತೆ ಅವಶ್ಯಕವಾಗಿತ್ತು ಅನ್ನುವುದೂ ನಿಜ.

ಈ ವಿಷಯಾಧಾರಿತ ಸಿನೆಮಾಗಳು, ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಿಗಿಂತ ತುಸು ಹೆಚ್ಚಾಗಿಯೇ ಸಿನೆಮಾ ಗ್ರಾಮರ್ ಅನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗೆ ಪ್ರಯೋಗಿಸಿದ ಮತ್ತಷ್ಟು ಫೈನ್ ಟ್ಯೂನ್ ಚಿತ್ರಗಳು ಹೆಚ್ಚಾಗಿ ಬಂದರೆ, ನಾವುಗಳು (ಕನ್ನಡ ಸಿನೆಮಾದವರು) ಇನ್ನೂ ಹೆಚ್ಚಿಗೆ ಬೆಳೆಯಬಹುದು, ಸಿನೆಮಾ ಕ್ಷೇತ್ರವನ್ನ ಒಂದು ಚರ್ಚಾ ಮಾಧ್ಯಮವನ್ನಾಗಿ ಬಳಸಿಕೊಳ್ಳಬಹುದು.


ಇದನ್ನೂ ಓದಿ: ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...