Homeಮುಖಪುಟಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತವೆ.

- Advertisement -
- Advertisement -

ಮೊದಲಿಗೆ ಕೋವಿಡ್ ಅವಾಂತರಗಳಿಂದ ಬೇಸತ್ತು ಒಂದಷ್ಟು ಕಾಲದ ನಂತರ ಸಿನೆಮಾ ಥಿಯೇಟರ್ ಗಳಿಗೆ ಹೋಗುವಂತಾದ ಖುಷಿಯನ್ನ ಎಲ್ಲರೂ ಹಂಚಿಕೊಳ್ಳೋಣ. ಆಕ್ಟ್-1978 ಸಿನೆಮಾ, ಬಹಳ ಹಿಂದೆ ಕನ್ನಡದಲ್ಲೇ ಬಂದ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ನಿಷ್ಕರ್ಷ’, ಆ ಸಿನೆಮಾಗೆ ಸ್ಫೂರ್ತಿಯಾಗಿದ್ದ ಅಮೆರಿಕನ್ ಚಲನಚಿತ್ರ ‘ಡೈ ಹಾರ್ಡ್’ ಇಂತಹ ಹೋಸ್ಟೇಜ್ ಡ್ರಾಮ ಸಿನೆಮಾಗಳ ಪ್ರಕಾರಕ್ಕೆ ಸೇರಿದರೂ, ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವ ‘ಕಾರಣ’ದಿಂದಾಗಿ ವಿಭಿನ್ನ ಕಥಾವಸ್ತು ಹೊಂದಿದೆ. ಸಿನೆಮಾದ ಮೂಲ ಉದ್ದೇಶವೇ ಚಿಂತನೆಗಳನ್ನ ಹೆಚ್ಚಿಸುವುದಾದ್ದರಿಂದ, ಆ ನಿಟ್ಟಿನಲ್ಲಿ ಆಕ್ಟ್-1978 ಗೆದ್ದಿದೆಯಾ? ಮುಂದೆ ನೋಡೋಣ…

ಮೊದಲಿಗೆ ಹಿಂಸೆಯನ್ನ ಹೋರಾಟದ ಪ್ರಕ್ರಿಯೆಗಳಿಗೆ ಬಳಸೋದು, ಹಾಗೆ ಬಳಸುವಂತೆ ಪ್ರಚೋದಿಸುವುದು ಸರಿಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ತುಂಬು ಗರ್ಭಿಣಿಯ ಪಾತ್ರ ಸೃಷ್ಟಿಸಿ, ಆಕೆಯ ಮೂಲಕ ಕಥೆ ಹೇಳಿ, ಪ್ರೇಕ್ಷಕನನ್ನ ಭಾವನಾತ್ಮಕವಾಗಿ ಹಿಡಿದಿಡುವ ಪ್ರಯತ್ನ ಸಮಂಜಸವಾದುದಲ್ಲ.

ಸರ್ಕಾರಿ ಕಚೇರಿಯೊಂದರಲ್ಲಿ ನಡೆಯುವ ಕಥೆ, ಆ ಕಚೇರಿಯ ನೌಕರರ ಭ್ರಷ್ಟತೆಯನ್ನು ಅನಾವರಣಗೊಳಿಸುತ್ತಾ, ಅವರ ಮೇಲ್ದರ್ಜೆಯ ಅಧಿಕಾರಿಗಳನ್ನೂ ಒಳಗೊಂಡಂತೆ ಹೇಗೆ ಇವರೆಲ್ಲಾ ಭ್ರಷ್ಟ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂಬುದನ್ನ ತೋರಿಸುತ್ತಾ ಸಾಗುತ್ತದೆ.

ಕಥಾನಾಯಕಿ ಅಮಾಯಕಳೇನಲ್ಲ. ಎನ್ ಸಿ ಸಿ ಯಲ್ಲಿ ತರಬೇತಿ ಪಡೆದಿರುವಾಕೆ. ಆದರೆ ಆಕೆ ಸನ್ನಿವೇಶಗಳನ್ನ ಎದುರಿಸುವ ರೀತಿಯಲ್ಲಿ ಕಟ್ಟಿಕೊಟ್ಟಿರುವ ಚಿತ್ರಣ ತಡವರಿಸಿದಂತಿದೆ. ಉದಾಹರಣೆಗೆ ಆಕೆ ಒಂದೇ ಟ್ರಿಗರ್ ಗೆ ಶೂಟ್ ಮಾಡುವಾಗ ಇರುವ ಪಕ್ವತೆಗೂ, ತನ್ನ ಬೇಡಿಕೆ ಇಡುವಾಗ ತೋರಿಸುವ ಅಮಾಯಕತೆಗೂ, ಬಹಳವೇ ಅಂತರವಿದೆ.

ಮಹಾತ್ಮ ಗಾಂಧಿಯ ಹೋಲಿಕೆಯನ್ನು ಬಳಕೆ ಮಾಡಿರುವುದು, ಸಣ್ಣ ಸಣ್ಣ ಅರ್ಥಗಳನ್ನ ಹೊಸೆಯುವಿಕೆಗೆ ಸಹಾಯವಾಗಿದೆ, ಪ್ರತೀ ಸರ್ಕಾರಿ ಕಚೇರಿಯ ಎದುರು ಹೀಗೊಂದು ಪ್ರಜ್ಞೆ ಸದಾ ಜಾಗೃತವಾಗಿದ್ದರೆ ಎಷ್ಟು ಚೆಂದವಿತ್ತು ಅನ್ನುವ ಹಾಗೆ.

ಇನ್ನು, ಕ್ರಿಶ್ಚಿಯನ್ ಮುಸ್ಲಿಂ ಧರ್ಮದಾರಿ ಪಾತ್ರಗಳನ್ನ ಕಾಮಿಡಿ ಪೀಸುಗಳನ್ನಾಗಿಸುವ ಟ್ರೆಂಡ್ ಇತ್ತೀಚಿಗೆ ಬೆಳೆಯುತ್ತಿರುವುದು ಅಪಾಯಕಾರಿ ಸಂಗತಿ. ಈ ಸಿನಿಮಾದಲ್ಲಿ ಬೆಂಜಮಿನ್ ಪಾತ್ರಧಾರಿಯನ್ನು ಹಾಸ್ಯ ಮಾಡುವುದು ಕನಿಷ್ಠ ಎಂಬಂತೆ ಬಳಕೆಯಾದರೂ ಬಹುಸಂಖ್ಯಾತ ಧಾರ್ಮಿಕವಾದ ಯಜಮಾನ್ಯ ಸಾಧಿಸುತ್ತಿರುವ ಸಮಯದಲ್ಲಿ ಅದು ಕಾಣುವ ರೀತಿ ಸಮಸ್ಯಾತ್ಮಕವಾದದ್ದು.

ಯಜ್ಞಾಶೆಟ್ಟಿಯವರು ಒಬ್ಬ ಗರ್ಭಿಣಿ ಸ್ತ್ರೀ ಹೇಗೆ ನೆಡೆಯುತ್ತಾಳೆ, ಹೇಗೆ ನೋವನ್ನು ಅನುಭವಿಸುತ್ತಾಳೆ ಎನ್ನುವ ರೀತಿಗಳನ್ನು ಬಹಳ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ, ಡೈಲಾಗ್ ಹೇಳುವಾಗ ಒಂದಷ್ಟು ಹೆಚ್ಚಿನ ಶ್ರಮ ಹಾಕಿದ್ದರೆ ನಟನೆ ಇನ್ನೂ ಆಪ್ತವಾಗಿರುತ್ತಿತ್ತು. ಸಂಚಾರಿ ವಿಜಯ್, ಅವಿನಾಶ್, ಅಚ್ಚುತ್ , ಶ್ರುತಿ, ಇವರೆಲ್ಲರೂ ಕಡಿಮೆ ಸಮಯದಲ್ಲಿಯೇ ಬಂದರೂ , ಯಜ್ಞಾಶೆಟ್ಟಿಯವರನ್ನೂ ಮರೆಸುವಂತೆ ಕಾಣುತ್ತಾರೆ.
ಇದೆಲ್ಲದರ ಹೊರತಾಗಿ ಸಿನೆಮಾ ಕಡೆಗಾಣಿಸುವಂಥಹ ಪ್ರಯತ್ನವಾ?  ಖಂಡಿತಾ ಇಲ್ಲ….

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತದೆ. ಆದರೆ ವಿಷಯವನ್ನು ಕಟ್ಟುವಾಗ ಇನ್ನಷ್ಟು ಗಂಭೀರತೆ ಅವಶ್ಯಕವಾಗಿತ್ತು ಅನ್ನುವುದೂ ನಿಜ.

ಈ ವಿಷಯಾಧಾರಿತ ಸಿನೆಮಾಗಳು, ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಿಗಿಂತ ತುಸು ಹೆಚ್ಚಾಗಿಯೇ ಸಿನೆಮಾ ಗ್ರಾಮರ್ ಅನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗೆ ಪ್ರಯೋಗಿಸಿದ ಮತ್ತಷ್ಟು ಫೈನ್ ಟ್ಯೂನ್ ಚಿತ್ರಗಳು ಹೆಚ್ಚಾಗಿ ಬಂದರೆ, ನಾವುಗಳು (ಕನ್ನಡ ಸಿನೆಮಾದವರು) ಇನ್ನೂ ಹೆಚ್ಚಿಗೆ ಬೆಳೆಯಬಹುದು, ಸಿನೆಮಾ ಕ್ಷೇತ್ರವನ್ನ ಒಂದು ಚರ್ಚಾ ಮಾಧ್ಯಮವನ್ನಾಗಿ ಬಳಸಿಕೊಳ್ಳಬಹುದು.


ಇದನ್ನೂ ಓದಿ: ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...