Homeಮುಖಪುಟಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಕನ್ನಡದ ಅಪರೂಪದ ಹೋಸ್ಟೇಜ್ ಡ್ರಾಮ ಸಿನೆಮಾ ಆಕ್ಟ್-1978 ಗೆದ್ದಿದೆಯೇ?

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತವೆ.

- Advertisement -
- Advertisement -

ಮೊದಲಿಗೆ ಕೋವಿಡ್ ಅವಾಂತರಗಳಿಂದ ಬೇಸತ್ತು ಒಂದಷ್ಟು ಕಾಲದ ನಂತರ ಸಿನೆಮಾ ಥಿಯೇಟರ್ ಗಳಿಗೆ ಹೋಗುವಂತಾದ ಖುಷಿಯನ್ನ ಎಲ್ಲರೂ ಹಂಚಿಕೊಳ್ಳೋಣ. ಆಕ್ಟ್-1978 ಸಿನೆಮಾ, ಬಹಳ ಹಿಂದೆ ಕನ್ನಡದಲ್ಲೇ ಬಂದ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ನಿಷ್ಕರ್ಷ’, ಆ ಸಿನೆಮಾಗೆ ಸ್ಫೂರ್ತಿಯಾಗಿದ್ದ ಅಮೆರಿಕನ್ ಚಲನಚಿತ್ರ ‘ಡೈ ಹಾರ್ಡ್’ ಇಂತಹ ಹೋಸ್ಟೇಜ್ ಡ್ರಾಮ ಸಿನೆಮಾಗಳ ಪ್ರಕಾರಕ್ಕೆ ಸೇರಿದರೂ, ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವ ‘ಕಾರಣ’ದಿಂದಾಗಿ ವಿಭಿನ್ನ ಕಥಾವಸ್ತು ಹೊಂದಿದೆ. ಸಿನೆಮಾದ ಮೂಲ ಉದ್ದೇಶವೇ ಚಿಂತನೆಗಳನ್ನ ಹೆಚ್ಚಿಸುವುದಾದ್ದರಿಂದ, ಆ ನಿಟ್ಟಿನಲ್ಲಿ ಆಕ್ಟ್-1978 ಗೆದ್ದಿದೆಯಾ? ಮುಂದೆ ನೋಡೋಣ…

ಮೊದಲಿಗೆ ಹಿಂಸೆಯನ್ನ ಹೋರಾಟದ ಪ್ರಕ್ರಿಯೆಗಳಿಗೆ ಬಳಸೋದು, ಹಾಗೆ ಬಳಸುವಂತೆ ಪ್ರಚೋದಿಸುವುದು ಸರಿಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ತುಂಬು ಗರ್ಭಿಣಿಯ ಪಾತ್ರ ಸೃಷ್ಟಿಸಿ, ಆಕೆಯ ಮೂಲಕ ಕಥೆ ಹೇಳಿ, ಪ್ರೇಕ್ಷಕನನ್ನ ಭಾವನಾತ್ಮಕವಾಗಿ ಹಿಡಿದಿಡುವ ಪ್ರಯತ್ನ ಸಮಂಜಸವಾದುದಲ್ಲ.

ಸರ್ಕಾರಿ ಕಚೇರಿಯೊಂದರಲ್ಲಿ ನಡೆಯುವ ಕಥೆ, ಆ ಕಚೇರಿಯ ನೌಕರರ ಭ್ರಷ್ಟತೆಯನ್ನು ಅನಾವರಣಗೊಳಿಸುತ್ತಾ, ಅವರ ಮೇಲ್ದರ್ಜೆಯ ಅಧಿಕಾರಿಗಳನ್ನೂ ಒಳಗೊಂಡಂತೆ ಹೇಗೆ ಇವರೆಲ್ಲಾ ಭ್ರಷ್ಟ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂಬುದನ್ನ ತೋರಿಸುತ್ತಾ ಸಾಗುತ್ತದೆ.

ಕಥಾನಾಯಕಿ ಅಮಾಯಕಳೇನಲ್ಲ. ಎನ್ ಸಿ ಸಿ ಯಲ್ಲಿ ತರಬೇತಿ ಪಡೆದಿರುವಾಕೆ. ಆದರೆ ಆಕೆ ಸನ್ನಿವೇಶಗಳನ್ನ ಎದುರಿಸುವ ರೀತಿಯಲ್ಲಿ ಕಟ್ಟಿಕೊಟ್ಟಿರುವ ಚಿತ್ರಣ ತಡವರಿಸಿದಂತಿದೆ. ಉದಾಹರಣೆಗೆ ಆಕೆ ಒಂದೇ ಟ್ರಿಗರ್ ಗೆ ಶೂಟ್ ಮಾಡುವಾಗ ಇರುವ ಪಕ್ವತೆಗೂ, ತನ್ನ ಬೇಡಿಕೆ ಇಡುವಾಗ ತೋರಿಸುವ ಅಮಾಯಕತೆಗೂ, ಬಹಳವೇ ಅಂತರವಿದೆ.

ಮಹಾತ್ಮ ಗಾಂಧಿಯ ಹೋಲಿಕೆಯನ್ನು ಬಳಕೆ ಮಾಡಿರುವುದು, ಸಣ್ಣ ಸಣ್ಣ ಅರ್ಥಗಳನ್ನ ಹೊಸೆಯುವಿಕೆಗೆ ಸಹಾಯವಾಗಿದೆ, ಪ್ರತೀ ಸರ್ಕಾರಿ ಕಚೇರಿಯ ಎದುರು ಹೀಗೊಂದು ಪ್ರಜ್ಞೆ ಸದಾ ಜಾಗೃತವಾಗಿದ್ದರೆ ಎಷ್ಟು ಚೆಂದವಿತ್ತು ಅನ್ನುವ ಹಾಗೆ.

ಇನ್ನು, ಕ್ರಿಶ್ಚಿಯನ್ ಮುಸ್ಲಿಂ ಧರ್ಮದಾರಿ ಪಾತ್ರಗಳನ್ನ ಕಾಮಿಡಿ ಪೀಸುಗಳನ್ನಾಗಿಸುವ ಟ್ರೆಂಡ್ ಇತ್ತೀಚಿಗೆ ಬೆಳೆಯುತ್ತಿರುವುದು ಅಪಾಯಕಾರಿ ಸಂಗತಿ. ಈ ಸಿನಿಮಾದಲ್ಲಿ ಬೆಂಜಮಿನ್ ಪಾತ್ರಧಾರಿಯನ್ನು ಹಾಸ್ಯ ಮಾಡುವುದು ಕನಿಷ್ಠ ಎಂಬಂತೆ ಬಳಕೆಯಾದರೂ ಬಹುಸಂಖ್ಯಾತ ಧಾರ್ಮಿಕವಾದ ಯಜಮಾನ್ಯ ಸಾಧಿಸುತ್ತಿರುವ ಸಮಯದಲ್ಲಿ ಅದು ಕಾಣುವ ರೀತಿ ಸಮಸ್ಯಾತ್ಮಕವಾದದ್ದು.

ಯಜ್ಞಾಶೆಟ್ಟಿಯವರು ಒಬ್ಬ ಗರ್ಭಿಣಿ ಸ್ತ್ರೀ ಹೇಗೆ ನೆಡೆಯುತ್ತಾಳೆ, ಹೇಗೆ ನೋವನ್ನು ಅನುಭವಿಸುತ್ತಾಳೆ ಎನ್ನುವ ರೀತಿಗಳನ್ನು ಬಹಳ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ, ಡೈಲಾಗ್ ಹೇಳುವಾಗ ಒಂದಷ್ಟು ಹೆಚ್ಚಿನ ಶ್ರಮ ಹಾಕಿದ್ದರೆ ನಟನೆ ಇನ್ನೂ ಆಪ್ತವಾಗಿರುತ್ತಿತ್ತು. ಸಂಚಾರಿ ವಿಜಯ್, ಅವಿನಾಶ್, ಅಚ್ಚುತ್ , ಶ್ರುತಿ, ಇವರೆಲ್ಲರೂ ಕಡಿಮೆ ಸಮಯದಲ್ಲಿಯೇ ಬಂದರೂ , ಯಜ್ಞಾಶೆಟ್ಟಿಯವರನ್ನೂ ಮರೆಸುವಂತೆ ಕಾಣುತ್ತಾರೆ.
ಇದೆಲ್ಲದರ ಹೊರತಾಗಿ ಸಿನೆಮಾ ಕಡೆಗಾಣಿಸುವಂಥಹ ಪ್ರಯತ್ನವಾ?  ಖಂಡಿತಾ ಇಲ್ಲ….

ಹೊಡಿ ಬಡಿ, ಅಬ್ಬರಿಸುವ ಡೈಲಾಗ್ ಗಳನ್ನೇ ಪ್ರತಿನಿಧಿಸುವ ಸಿನಿಮಾಗಳು ರಾಶಿರಾಶಿಯಾಗಿ ಮೂಡುವ ಸಮಯದಲ್ಲಿ, ವಿಷಯಾಧಾರಿತವಾದ ಇಂಥಹ ಪ್ರಯತ್ನಗಳು ಒಂದಷ್ಟು ಕುತೂಹಲ ಹುಟ್ಟಿಸುತ್ತದೆ. ಆದರೆ ವಿಷಯವನ್ನು ಕಟ್ಟುವಾಗ ಇನ್ನಷ್ಟು ಗಂಭೀರತೆ ಅವಶ್ಯಕವಾಗಿತ್ತು ಅನ್ನುವುದೂ ನಿಜ.

ಈ ವಿಷಯಾಧಾರಿತ ಸಿನೆಮಾಗಳು, ಸಾಮಾನ್ಯ ಕಮರ್ಷಿಯಲ್ ಸಿನೆಮಾಗಳಿಗಿಂತ ತುಸು ಹೆಚ್ಚಾಗಿಯೇ ಸಿನೆಮಾ ಗ್ರಾಮರ್ ಅನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗೆ ಪ್ರಯೋಗಿಸಿದ ಮತ್ತಷ್ಟು ಫೈನ್ ಟ್ಯೂನ್ ಚಿತ್ರಗಳು ಹೆಚ್ಚಾಗಿ ಬಂದರೆ, ನಾವುಗಳು (ಕನ್ನಡ ಸಿನೆಮಾದವರು) ಇನ್ನೂ ಹೆಚ್ಚಿಗೆ ಬೆಳೆಯಬಹುದು, ಸಿನೆಮಾ ಕ್ಷೇತ್ರವನ್ನ ಒಂದು ಚರ್ಚಾ ಮಾಧ್ಯಮವನ್ನಾಗಿ ಬಳಸಿಕೊಳ್ಳಬಹುದು.


ಇದನ್ನೂ ಓದಿ: ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...