Homeಚಳವಳಿಸಕ್ರಿಯ ಸ್ತ್ರೀವಾದಿ ಪ್ರಜ್ಞೆ : ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಬದಲಾವಣೆಗೆ ಪಣ- ಸಿ.ಜಿ ಮಂಜುಳಾ

ಸಕ್ರಿಯ ಸ್ತ್ರೀವಾದಿ ಪ್ರಜ್ಞೆ : ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಬದಲಾವಣೆಗೆ ಪಣ- ಸಿ.ಜಿ ಮಂಜುಳಾ

’ವ್ಯಭಿಚಾರವು ಅಪರಾಧವಲ್ಲ ಎಂದು ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್‌ಅನ್ನು ರದ್ದುಮಾಡಿದ ಸುಪ್ರೀಂ ಕೋರ್ಟ್ ತೀರ್ಪು, ಮಹಿಳಾ ಸಮಾನತೆ, ಘನತೆ, ಸ್ವಾಯತ್ತೆಯನ್ನು ಎತ್ತಿ ಹಿಡಿದಿತ್ತು.

- Advertisement -
- Advertisement -

ಕೋವಿಡ್ -19ರ ಸಂಕಷ್ಟದ ಈ ದಿನಗಳು ಜನಜೀವನವನ್ನು ಪಲ್ಲಟಗೊಳಿಸಿದೆ. ಅದರಲ್ಲೂ ಮಹಿಳೆ ಈಗಾಗಲೇ ಅನುಭವಿಸುತ್ತಿದ್ದ ಸಮಸ್ಯೆಗಳು ಮತ್ತಷ್ಟು ತೀವ್ರವಾಗಿವೆ ಎಂಬುದನ್ನು ವರದಿಗಳು ತಿಳಿಸುತ್ತಿವೆ. ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣಗಳ ಹೆಚ್ಚಳದ ಜೊತೆಗೆ ಕೋವಿಡ್ -19ರ ನಿರ್ವಹಣೆಯಲ್ಲಿ ಲಿಂಗತ್ವ ಸಂವೇದನಾಶೀಲತೆ ಇಲ್ಲದ ಆಡಳಿತ ನೀತಿಗಳು, ಮಹಿಳೆ ಹೇಗೆ ಇನ್ನೂ ಈ ಸಮಾಜದಲ್ಲಿ ಎರಡನೇ ದರ್ಜೆ ಪ್ರಜೆ ಎಂಬುದನ್ನು ನೆನಪಿಸುತ್ತಿವೆ. ಉದ್ಯೋಗ ನಷ್ಟದ ಪೆಟ್ಟು ಪುರುಷರನ್ನಷ್ಟೇ ಅಲ್ಲ ಮಹಿಳೆಯರನ್ನೂ ಹೆಚ್ಚಿನ ಮಟ್ಟದಲ್ಲಿ ಕಾಡುತ್ತಿದೆ. ಭಾರತದಲ್ಲಿ ಈಗಾಗಲೇ ಔದ್ಯೋಗಿಕ ರಂಗದಲ್ಲಿ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕೋವಿಡ್ 19ರ ಸಂಕಷ್ಟ ಈ ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗಿಸಲಿರುವುದು ಆತಂಕಕಾರಿ. ಈ ಬೆಳವಣಿಗೆಗಳನ್ನು ಸೂಕ್ತವಾಗಿ ನಿರ್ವಹಿಸಲು ಸರ್ಕಾರದ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಂವೇದನಾಶೀಲತೆ ಅಗತ್ಯ.

ಮುಖ್ಯವಾಹಿನಿ ರಾಜಕಾರಣದ ಆವುಟಗಳಲ್ಲಿ ಗಮನವನ್ನೇ ಸೆಳೆದುಕೊಳ್ಳದ ಮಹಿಳಾ ವಿಚಾರಗಳನ್ನು ಪ್ರಭುತ್ವದ ಗಮನಕ್ಕೆ ತರುವಲ್ಲಿ ಭಾರತದ ಮಹಿಳಾ ಚಳವಳಿ ಈ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಈಗಲೂ ಈ ಸಂಕಷ್ಟ ಕಾಲದಲ್ಲಿ ಮಹಿಳೆ ಅಗತ್ಯಗಳ ಕುರಿತಾದ ಕೆಲವು ವಿಚಾರಗಳಾದರೂ ಚರ್ಚೆಗೆ ಬರುವಲ್ಲಿ ಮಹಿಳಾ ಚಳವಳಿಯ ಕೊಡುಗೆ ಇದೆ.

ವಸಾಹತುಶಾಹಿ ವಿರುದ್ಧದ ಸ್ವಾತಂತ್ರ್ಯ ಹೋರಾಟದಿಂದ ವರ್ತಮಾನದ ಸಾಮ್ರಾಜ್ಯಶಾಹಿ ಜಾಗತೀಕರಣದ ವಿರುದ್ಧದ ಹೋರಾಟದವರೆಗೆ ಸ್ತ್ರೀವಾದದ ಪ್ರಜ್ಞೆ ಸಾರ್ವಜನಿಕ ಆಂದೋಲನಗಳಲ್ಲಿ ಸಕ್ರಿಯವಾಗಿದೆ. ಸ್ತ್ರೀವಾದದ ಹಲವು ಛಾಯೆಗಳು, ಹಲವು ಸಿದ್ಧಾಂತಗಳಲ್ಲಿ ಇದು ವ್ಯಕ್ತ. ಜಾತಿ, ಧರ್ಮ, ವರ್ಗ, ಲಿಂಗತ್ವ ನೆಲೆಗಳಲ್ಲಿ ಮಹಿಳಾ ಶೋಷಣೆಗೆ ಹಲವು ಆಯಾಮಗಳಿದ್ದು ವಿವಿಧ ಮಹಿಳಾ ಗುಂಪುಗಳು ಸಕ್ರಿಯವಾಗಿ ಚಳವಳಿಯ ಚೈತನ್ಯವನ್ನು ಮುಂದಕ್ಕೊಯ್ಯುತ್ತಿವೆ.

ಈ ದಶಕದ ಆರಂಭದಲ್ಲೇ 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿ ನಿರ್ಭಯಾ ಮೇಲೆ ನಡೆದ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಹಾಗೂ ನಂತರ ಆಕೆಯ ಸಾವು, ರಾಷ್ಟ್ರದಾದ್ಯಂತ ಪ್ರತಿಭಟನಾ ಹೋರಾಟಗಳಿಗೆ ಕಾರಣವಾಗಿ ಅಪರಾಧ ಕಾನೂನುಗಳ ತಿದ್ದುಪಡಿ ಕಾಯ್ದೆ ೨೦೧೩ನ್ನು ಸರ್ಕಾರ ಜಾರಿ ಮಾಡಿದ್ದು ಇತಿಹಾಸ. ಅತ್ಯಾಚಾರದ ವ್ಯಾಖ್ಯೆ ಬದಲಿಸಿದ ಈ ಕಾನೂನನ್ನು ನಿರ್ಭಯಾ ಕಾನೂನು ಎಂದೇ ಕರೆಯಲಾಯಿತು. ಹಾಗೆಯೇ ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ) ಕಾಯ್ದೆ 2013 ಕೂಡ ಜಾರಿಯಾಗಿ ಮಹಿಳಾ ಸುರಕ್ಷತೆಗೆ ಕಾನೂನು ಬಲ ದೊರಕಿತು. 2005ರಷ್ಟು ಹಿಂದೆಯೇ ’ಕೌಟುಂಬಿಕ ಹಿಂಸೆ’ ಎಂಬ ಪರಿಕಲ್ಪನೆಯನ್ನು ಸರ್ಕಾರ ಗ್ರಹಿಸಿಕೊಳ್ಳುವಂತೆ ಮಾಡಿ ಅದರ ನಿಗ್ರಹಕ್ಕೆ ಕಾನೂನು ರೂಪಿಸಲು ಕಾರಣವಾಗಿದ್ದು ಸಂಘಟಿತವಾದ ಮಹಿಳಾ ಚಳವಳಿ ಎಂಬುದನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ಈಗ, ಲೈಂಗಿಕ ಹಿಂಸೆಗಳ ಆಯಾಮಗಳನ್ನು ಅಧ್ಯಯನ ಹಾಗೂ ವಿಶ್ಲೇಷಣೆಗಳಿಗೆ ಒಳಪಡಿಸಿ ಅವೆಲ್ಲವನ್ನೂ ಕಾನೂನು ಕಕ್ಷೆಗೆ ಸೇರಿಸಿ ಪಿತೃಪ್ರಧಾನ ಮನಸ್ಥಿತಿಗಳ ಬದಲಾವಣೆಗೆ ಪ್ರೇರಕವಾಗಲು ಮಹಿಳಾ ಆಂದೋಲನ ಯತ್ನಿಸಿದೆ.

ಹೆಚ್ಚುತ್ತಿರುವ ಲೈಂಗಿಕ ಹಿಂಸೆಗಳ ಮಧ್ಯೆಯೇ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆಯ ವಿಚಾರವು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಮುಗಿಯಲಿರುವ ಈ ದಶಕದಲ್ಲಿ ಮುನ್ನೆಲೆಗೆ ಬಂದಿದೆ ಎನ್ನಬಹುದು. ಸಾರ್ವಜನಿಕ ಸ್ಥಳಗಳಾದ ಪಾರ್ಕ್‌ಗಳು ಹಾಗೂ ಬೀಚ್‌ಗಳಲ್ಲಿ ಒಂಟಿ ಮಹಿಳೆಯರು ಕಾಣಸಿಗುವುದು ಅಪರೂಪ. ಲೈಂಗಿಕ ಕಿರುಕುಳಗಳ ಭೀತಿ ಇದಕ್ಕೆ ಕಾರಣ. ಆದರೆ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ಅಡ್ಡಾಡುವಿಕೆ ಅಥವಾ ಅಲೆದಾಟವನ್ನು ಮಾಮೂಲಾಗಿಸುವುದು ಅಥವಾ ಸಹಜವಾಗಿಸುವುದಕ್ಕಾಗಿ ಬೆಂಗಳೂರು ಸೇರಿದಂತೆ ರಾಷ್ಟ್ರದ ಹಲವು ನಗರಗಳಲ್ಲಿ ಮಧ್ಯರಾತ್ರಿಗಳಲ್ಲೂ ಅಲೆದಾಟಗಳ ಅಭಿಯಾನಗಳನ್ನು ಮಹಿಳಾ ಗುಂಪುಗಳು ನಡೆಸಿವೆ. ಈ ಅಭಿಯಾನದ #ವೈಲಾಯ್ಟರ್ (#whyloitre) ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದೂ ಇದೆ. ಸಾರ್ವಜನಿಕ ಸ್ಥಳಗಳನ್ನೂ ಆಕ್ರಮಿಸಿಕೊಂಡ ಪುರುಷ ಸ್ವಾಮ್ಯವನ್ನು ಪ್ರತಿರೋಧಿಸುವ ಕಥನಗಳನ್ನು ಮಹಿಳೆಯರು ಈ ಅಭಿಯಾನದಲ್ಲಿ ಹಂಚಿಕೊಂಡಿದ್ದರು.

2018ರಲ್ಲಿ ಭಾರತದಲ್ಲಿ ಕಾವು ಪಡೆದ #ಮೀಟೂ ಆಂದೋಲನದಿಂದಾಗಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಅನೇಕ ಸಶಕ್ತ ವ್ಯಕ್ತಿಗಳು ಹುದ್ದೆಗಳನ್ನು ಕಳೆದುಕೊಂಡಿದ್ದು ಈ ದಶಕದ ಪ್ರಮುಖ ವಿದ್ಯಮಾನ. ಮೌನ ಸಂಸ್ಕೃತಿಯೊಳಗೆ ಹುದುಗಿದ್ದ ಲೈಂಗಿಕ ಕಿರುಕುಳಗಳ ಕಥನಗಳು ಬಟಾಬಯಲಾದ ರೀತಿಗೆ ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಸಮಾಜ ಕಸಿವಿಸಿಗೊಂಡಿದ್ದು ನಿಜ.

ರಾಷ್ಟ್ರದ 24ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 200 ಜಿಲ್ಲೆಗಳಲ್ಲಿ 65 ದಿನಗಳ ಕಾಲ, ಲೈಂಗಿಕ ಹಿಂಸೆ ವಿರುದ್ಧ ಘನತೆಯ ಮೆರವಣಿಗೆಯನ್ನು ಮಹಿಳೆಯರು ನಡೆಸಿದ್ದು ಮತ್ತೊಂದು ವಿಶೇಷ. ಲೈಂಗಿಕ ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸಲು 5000 ಸಾಮಾಜಿಕ ಕಾರ್ಯಕರ್ತರು ಹಾಗೂ ಲೈಂಗಿಕ ದೌರ್ಜನ್ಯಗಳ ಸಂತ್ರಸ್ತರು 10,000 ಕಿ.ಮೀ ದೂರ ಕ್ರಮಿಸಿದ್ದರು. ಲೈಂಗಿಕ ಹಿಂಸೆಗಳ ವಿರುದ್ಧದ ಜಾಗೃತಿ ಈ ದಶಕದಲ್ಲಿ ತೀವ್ರಗೊಂಡಿದೆ ಎಂಬುದಕ್ಕೆ ಇದು ದ್ಯೋತಕ. ಇದೇ ಸಂದರ್ಭದಲ್ಲಿ, ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿರುವ ಕಾಂಗೊದ ಸ್ತ್ರೀರೋಗ ತಜ್ಞ ಡೆನಿಸ್ ಮುವ್ಟೆಜ್ ಹಾಗೂ ಇರಾಕ್‌ನಲ್ಲಿ 2014ರಲ್ಲಿ ಐಎಸ್‌ಐಎಸ್ ಸಂಘಟನೆಯ ಉಗ್ರರಿಗೆ ಸೆರೆ ಸಿಕ್ಕಿ ದೌರ್ಜನ್ಯಕ್ಕೊಳಗಾಗಿದ್ದ ಮಾನವ ಹಕ್ಕು ಹೋರಾಟಗಾರ್ತಿ ಇರಾಕ್‌ನ ನಾಡಿಯಾ ಮುರಾದ್ ಅವರುಗಳಿಗೆ 2018ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ಎಂಬುದನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು. ಯುದ್ಧ ಹಾಗೂ ಸಶಸ್ತ್ರ ಸಂಘರ್ಷದ ಅಸ್ತ್ರವಾಗಿ ಲೈಂಗಿಕ ಹಿಂಸೆಯ ಬಳಕೆಯನ್ನು ಅಂತ್ಯಗೊಳಿಸುವ ಪ್ರಯತ್ನಗಳಿಗಾಗಿ ಈ ಪ್ರಶಸ್ತಿ ಸಂದಿದೆ.

ಮಹಿಳಾ ಹಕ್ಕುಗಳ ರಕ್ಷಣೆಗೆ ಭಾರತದ ಸುಪ್ರೀಂ ಕೋರ್ಟ್ ಹಲವು ಮಹತ್ವದ ತೀರ್ಪುಗಳನ್ನು ಈ ದಶಕದಲ್ಲಿ ನೀಡಿದ್ದು ಮಹಿಳೆಯರ ಹೋರಾಟಕ್ಕೆ ಸಂದ ಜಯ ಎನ್ನಬೇಕು. ಶಬರಿಮಲೆ ದೇವಾಲಯಕ್ಕೆ 0 ರಿಂದ 50 ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು 2018ರ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ತೀರ್ಪು ರದ್ದುಮಾಡಿದ್ದು ಐತಿಹಾಸಿಕ ನಡೆ. ಈ ತೀರ್ಪು ವಿವಾದ ಸೃಷ್ಟಿಸಿದರೂ ಲಿಂಗತ್ವ ಸಮಾನತೆಯತ್ತ ಇರಿಸಿದ ದೊಡ್ಡ ಹೆಜ್ಜೆಯಾಗಿತ್ತು. 2019ರ ಜನವರಿ 1ರಂದು ಸುಮಾರು 35 ಲಕ್ಷ ಮಹಿಳೆಯರು ಸುಪ್ರೀಂ ಕೋರ್ಟ್ ತೀರ್ಪಿಗೆ ಬೆಂಬಲ ಸೂಚಿಸಿ ಲಿಂಗತ್ವ ಸಮಾನತೆಯನ್ನು ಎತ್ತಿ ಹಿಡಿಯಲು ಕೇರಳದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 620 ಕಿಮೀ ಉದ್ದ ಒಟ್ಟಾಗಿ ನಿಂತು ಮಾನವ ಗೋಡೆ’ಯನ್ನು ನಿರ್ಮಿಸಿದ್ದರು.

ಹಾಗೆಯೇ 2018ರ ಸೆಪ್ಟೆಂಬರ್ 27ರಂದು, ’ವ್ಯಭಿಚಾರವು ಅಪರಾಧವಲ್ಲ ಎಂದು ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್‌ಅನ್ನು ರದ್ದುಮಾಡಿದ ಸುಪ್ರೀಂ ಕೋರ್ಟ್ ತೀರ್ಪು, ಮಹಿಳಾ ಸಮಾನತೆ, ಘನತೆ, ಸ್ವಾಯತ್ತೆಯನ್ನು ಎತ್ತಿ ಹಿಡಿದಿತ್ತು. ಬೇರೊಬ್ಬನ ಪತ್ನಿ ಜೊತೆ ಆತನ ಸಮ್ಮತಿಅಥವಾ ಪರೋಕ್ಷ ಒಪ್ಪಿಗೆ ಇಲ್ಲದೆ ಅತ್ಯಾಚಾರವೆಂದು ಪರಿಗಣಿಸಲಾದ ರೀತಿಯಲ್ಲಿ ವ್ಯಕ್ತಿಯೊಬ್ಬರು ನಡೆಸುವ ಲೈಂಗಿಕ ಸಂಪರ್ಕವನ್ನು ಈ ಸೆಕ್ಷನ್ ಪ್ರಕಾರ ವ್ಯಭಿಚಾರವೆಂದು ವ್ಯಾಖ್ಯಾನಿಸಲಾಗುತ್ತಿತ್ತು. ಆದರೆ ವಿವಾಹಿತ ವ್ಯಕ್ತಿಯು ಅವಿವಾಹಿತ ಮಹಿಳೆ ಅಥವಾ ವಿಧವೆಯ ಜತೆಗೆ ಲೈಂಗಿಕ ಸಂಪರ್ಕ ಹೊಂದುವುದೂ ವಿವಾಹದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಹದ್ದಾಗಿದ್ದರೂ ಸೆಕ್ಷನ್ 497ರ ಅಡಿ ಇದರ ವಿರುದ್ಧ ದೂರು ಕೊಡಲು ಅವಕಾಶ ಇರಲಿಲ್ಲ. ಹಾಗೆಯೇ ವ್ಯಭಿಚಾರ ಎಸಗುವ ಗಂಡಸಿನ ಪತ್ನಿಯನ್ನೂ ಸಂತ್ರಸ್ತೆ ಎಂದು ಪರಿಗಣಿಸುತ್ತಿರಲಿಲ್ಲವಾದ್ದರಿಂದ ಆಕೆಯೂ ದೂರು ಕೊಡಲಾಗುತ್ತಿರಲಿಲ್ಲ. ಹೀಗಾಗಿ, ’ಮಹಿಳೆಯನ್ನು ತಾರತಮ್ಯದಿಂದ ನೋಡುವ ಯಾವುದೇ ಅಂಶ ಸಾಂವಿಧಾನಿಕವಲ್ಲ. ಗಂಡನು ಹೆಂಡತಿಯ ಮಾಲೀಕ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುವ ಕಾಲ ಬಂದಿದೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ ಮಾತು ಮಹತ್ವದ್ದು.

100 ವರ್ಷಕ್ಕೂ ಹೆಚ್ಚು ಕಾಲದಿಂದ ಮಹಿಳಾ ಚಳವಳಿ ಜಗತ್ತಿನಲ್ಲಿ ಸಕ್ರಿಯವಾಗಿದೆ. ಮತದಾನದ ಹಕ್ಕಿನ ಚಳವಳಿಯಿಂದ ’ಮೀ ಟೂ’ ಚಳವಳಿಯವರೆಗೆ ಮಹಿಳೆಯರು ಕೇಳುತ್ತಿರುವುದು ಸಮಾನ ಹಕ್ಕುಗಳಷ್ಟೇ; ವಿಶೇಷ ಪರಿಗಣನೆಗಳಲ್ಲ ಎಂಬುದನ್ನು ಮನಗಾಣಬೇಕು.

ಇದೇ ಸಂದರ್ಭದಲ್ಲಿ 2019ರ ಟ್ರಾನ್ಸ್  ಜೆಂಡರ್ ಕಾಯಿದೆ ಬಗ್ಗೆ ಟ್ರಾನ್ಸ್ ಜೆಂಡರ್ ಸಮುದಾಯ ಅಸಮಾಧಾನ ವ್ಯಕ್ತ ಪಡಿಸಿರುವುದೂ ಗಮನಾರ್ಹ. ಹಾಗೆಯೇ ಮುಸ್ಲಿಂ ಮಹಿಳೆಯರ (ವಿವಾಹದಲ್ಲಿ ಹಕ್ಕುಗಳ ರಕ್ಷಣೆ) ಕಾಯ್ದೆಯೂ ಟೀಕೆಗಳಿಗೆ ಕಾರಣವಾಗಿದೆ. ಈಗಾಗಲೇ 2018ರಲ್ಲಿ ತ್ರಿವಳಿ ತಲಾಖ್‌ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಹೀಗಾಗಿ, ಗಂಡ ತ್ರಿವಳಿ ತಲಾಖ್ ಹೇಳಿದರೂ ಅದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಿದ್ದೂ ಈಗ ತರಲಾಗಿರುವ ಹೊಸ ಕಾಯ್ದೆಯ ಗುರಿ ಮುಸ್ಲಿಂ ಪುರುಷರಾಗಿದ್ದಾರೆಯೇ ಎಂಬಂಥ ಪ್ರಶ್ನೆಗಳನ್ನು ಹುಟ್ಟುಹಾಕಿರುವುದು ಸಹಜ.

ಇಂದು ಮಹಿಳಾ ಸಬಲೀಕರಣದ ವಿಚಾರ ಸರ್ಕಾರಗಳ ಅಭಿವೃದ್ಧಿ ಕಾರ್ಯಸೂಚಿಗಳಲ್ಲಿದೆ. ಇದಕ್ಕೆ ಮುಖ್ಯ ಕಾರಣ, ಹಲವು ದಶಕಗಳ ಕಾಲ ಸ್ತ್ರೀವಾದಿಗಳು ನಡೆಸಿದ ಅವಿರತ ಹೋರಾಟ. ಆದರೆ, ’ಬೇಟಿ ಬಚಾವೋ ಬೇಟಿ ಪಢಾವೋ’ ಅಥವಾ ’ಪ್ರಧಾನ ಮಂತ್ರಿ ಉಜ್ವಲಾ’ದಂತಹ ಸರ್ಕಾರದ ಯೋಜನೆಗಳು ಮಹಿಳೆಯ ಸಬಲೀಕರಣಕ್ಕಾಗಿ ಜಾರಿಗೊಳಿಸಲಾದ ಕ್ಷೇಮಾಭಿವೃದ್ಧಿ ಯೋಜನೆಗಳಷ್ಟೇ. ಹೀಗಾಗಿ, ಅಸಮಾನತೆ ಸೃಷ್ಟಿಗೆ ಮೂಲ ಕಾರಣವಾದ ಪಿತೃಪ್ರಧಾನ ಸ್ವರೂಪಗಳನ್ನು ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನಗಳನ್ನೇ ಮಾಡದ ಪ್ರಭುತ್ವದ ನೀತಿಗಳು ಹಾಗೂ ವಿಭಿನ್ನ ವೇಷಗಳಲ್ಲಿ ಹುಟ್ಟಿಕೊಳ್ಳುತ್ತಿರುವ ಪಿತೃಪ್ರಧಾನ ಸಾಮಾಜಿಕ ಮೌಲ್ಯ ವ್ಯವಸ್ಥೆ ವಿರುದ್ಧ ಮಹಿಳಾ ಚಳವಳಿ ಮುಂದುವರಿಯುತ್ತಲೇ ಇದೆ.

  • ಸಿ.ಜಿ.ಮಂಜುಳಾ
    ಪೂರ್ಣಾವಧಿ ಪತ್ರಕರ್ತೆ ಮತ್ತು ಪೂರ್ಣಾವಧಿ ಮಹಿಳಾ ಚಿಂತನೆ ಎರಡನ್ನೂ ನಡೆಸಿದ ಮಂಜುಳಾರವರು ಈಗ ಪತ್ರಿಕೋದ್ಯಮದಿಂದ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ: ಹೊಂಬಾಳೆ 3: ಸ್ತ್ರೀಕರಣಗೊಳ್ಳುತ್ತಿರುವ ಕೃಷಿಯಲ್ಲಿ ಮಹಿಳೆ ಉಳಿದರೆ, ಕೃಷಿಯೂ ಉಳಿದೀತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...