Homeಅಂತರಾಷ್ಟ್ರೀಯಅಫ್ಘಾನ್‌ಗೆ ರಾಜಕೀಯ ಪೂರ್ವಾಗ್ರಹಗಳನ್ನು ಬಿಟ್ಟು ಸಹಾಯ ಮಾಡಿ: ತಾಲಿಬಾನ್ ಮನವಿ

ಅಫ್ಘಾನ್‌ಗೆ ರಾಜಕೀಯ ಪೂರ್ವಾಗ್ರಹಗಳನ್ನು ಬಿಟ್ಟು ಸಹಾಯ ಮಾಡಿ: ತಾಲಿಬಾನ್ ಮನವಿ

- Advertisement -
- Advertisement -

ಇತ್ತೀಚಿಗೆ ಬಿದ್ದ ಹಿಮ ಮತ್ತು ಉಂಟಾದ ಭೀಕರ ಪ್ರವಾಹ ಅಫ್ಘಾನ್‌ ಜನರನ್ನು ದುಸ್ಥಿತಿಗೆ ತಳ್ಳಿದೆ. ಇಂತಹ ಸಮಯದಲ್ಲಿ “ರಾಜಕೀಯ ಪೂರ್ವಾಗ್ರಹ”ವಿಲ್ಲದೆ ತುರ್ತು ಮಾನವೀಯ ನೆರವು ನೀಡಬೇಕು ಎಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ವಿಶ್ವದ ಇತರ ರಾಷ್ಟ್ರಗಳಿಗೆ ಮನವಿ ಮಾಡಿದೆ.

ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಹೊಸ ಸರ್ಕಾರ ರಚಿಸಿದೆ. ಅಂದಿನಿಂದ ದೇಶದಲ್ಲಿ ಹಣದುಬ್ಬರ, ಆಹಾರದ ಕೊರತೆ ಮತ್ತು ನಿರುದ್ಯೋಗ ಹೆಚ್ಚಾಗಿ ದೇಶವು ಆರ್ಥಿಕ ಅವ್ಯವಸ್ಥೆಯಲ್ಲಿ ಮುಳುಗಿದೆ.

ವೀಡಿಯೊ ಒಂದರಲ್ಲಿ ಮನವಿ ಮಾಡಿರುವ, ಉಪಪ್ರಧಾನಿ ಅಬ್ದುಲ್ ಘನಿ ಬರಾದಾರ್, “ಇದೀಗ ವಿವಿಧ ಸ್ಥಳಗಳಲ್ಲಿ, ಜನರಿಗೆ ಊಟ, ವಸತಿ, ಬೆಚ್ಚಗಿನ ಬಟ್ಟೆ ಮತ್ತು ಹಣ ಕೂಡ ಇಲ್ಲ. ಜಗತ್ತು ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ, ಪೂರ್ವಾಗ್ರಹಗಳಿಲ್ಲದೇ ಆಫ್ಘನ್ ಜನರನ್ನು ಬೆಂಬಲಿಸಬೇಕು. ಇತರೆ ದೇಶಗಳು ತಮ್ಮ ಮಾನವೀಯ ಜವಾಬ್ದಾರಿಗಳನ್ನು ನಿರ್ವಹಿಸಬೇಕು” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನ: ಪುರುಷನ ಬೆಂಗಾವಲು ಇಲ್ಲದೆ ಮಹಿಳೆ ದೂರ ಪ್ರಯಾಣಿಸುವಂತಿಲ್ಲ- ತಾಲಿಬಾನ್

ಇತ್ತೀಚಿನ ದಿನಗಳಲ್ಲಿ ಮಧ್ಯ ಮತ್ತು ಉತ್ತರ ಅಫ್ಘಾನಿಸ್ತಾನದ ಬಹುತೇಕ ಭಾಗಗಳಲ್ಲಿ ಹಿಮ ಆವರಿಸಿದೆ, ಇತ್ತ ದಕ್ಷಿಣದ ಭಾಗಗಳಲ್ಲಿ ಪ್ರವಾಹವು ಪರಿಣಾಮ ಬೀರಿದೆ. ಅನೇಕ ಜನ ಬಿಸಿ ಊಟವನ್ನು ಪಡೆಯಲು ಕೂಡ ಹೆಣಗಾಡುತ್ತಿದ್ದಾರೆ. ಸರಿಯಾದ ವಿದ್ಯುತ್ ಸಂಪರ್ಕ ಕೂಡ ಸಾಧ್ಯವಾಗುತ್ತಿಲ್ಲ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

“ಅಫ್ಘಾನಿಸ್ತಾನವು ಗಂಭೀರ ಪರಿಸ್ಥಿತಿಯಲ್ಲಿದೆ. ಜಗತ್ತು ನಮ್ಮ ಬಡ ಜನರನ್ನು ಮರೆಯಬಾರದು ಎಂದು ನಾವು ಅಂತರರಾಷ್ಟ್ರೀಯ ಸಮುದಾಯ, ಎನ್‌ಜಿಒಗಳು ಮತ್ತು ಎಲ್ಲಾ ದೇಶಗಳಿಗೆ ಕರೆ ನೀಡುತ್ತೇವೆ” ಎಂದು ಉಪ ಪ್ರಧಾನಿ ಅಬ್ದುಲ್ ಘನಿ ಬರಾದರ್ ಮನವಿ ಮಾಡಿದ್ದಾರೆ.

“ಒಂದು ಕಡೆ, ದಬ್ಬಾಳಿಕೆಯ ನಿರ್ಬಂಧಗಳಿವೆ ಮತ್ತು ಇನ್ನೊಂದು ಬದಿಯಲ್ಲಿ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ನೀಡಲು ಅಫ್ಘಾನಿಸ್ತಾನದಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಮೂಲಸೌಕರ್ಯಗಳಿಲ್ಲ” ಎಂದು ಹೇಳಿದ್ದಾರೆ.

ಇನ್ನು, ಜನವರಿ 7 ರಂದು ಭಾರತವು 2 ಟನ್‌ ಅಗತ್ಯ ವೈದ್ಯಕೀಯ ಸಾಮಗ್ರಿಯನ್ನು ತಾಲಿಬಾನ್‌ ಆಡಳಿತದ ದೇಶಕ್ಕೆ ರವಾನಿಸಿದೆ. ಕಾಬೂಲ್‌ನ ಇಂದಿರಾಗಾಂಧಿ ಆಸ್ಪತ್ರೆಗೆ ಸಾಮಗ್ರಿಗಳನ್ನು ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.


ಇದನ್ನೂ ಓದಿ: ನಾವು ತಾಳಿ, ಕಾಲುಂಗುರ ಸಹ ಹಾಕುವುದಿಲ್ಲ, ಕೇಳಲು ನೀವ್ಯಾರು?: ಬಜರಂಗದಳ ಸದಸ್ಯರಿಗೆ ಮಹಿಳೆಯ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...