HomeUncategorizedಹೊನ್ನಿನೊಳಗೊಂದೊರೆಯನ್ನೂ ಬಯಸದ ಬಸವಣ್ಣನವರು ಹಾಗೂ ಅಕ್ಷಯ ತೃತೀಯ ಎಂಬ ಮೋಸ !

ಹೊನ್ನಿನೊಳಗೊಂದೊರೆಯನ್ನೂ ಬಯಸದ ಬಸವಣ್ಣನವರು ಹಾಗೂ ಅಕ್ಷಯ ತೃತೀಯ ಎಂಬ ಮೋಸ !

- Advertisement -
| ವಿಶ್ವಾರಾಧ್ಯ ಸತ್ಯಂಪೇಟೆ |
ಪ್ರತಿ ವರ್ಷ ಅಕ್ಷಯ ತೃತೀಯ ದಿನ ಬಂತೆಂದರೆ ಬಂಗಾರ ಮಾರಾಟ ಮಾಡುವವರಿಗೂ ಹಾಗೂ ತೆಗೆದುಕೊಳ್ಳುವವರಿಗೂ ಖುಷಿಯೋ ಖುಷಿ. ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯ ದಿನದಂದು ಯಾರು ಬಂಗಾರ ಖರೀದಿ ಮಾಡುತ್ತಾರೊ ಅವರ ಮನೆಯಲ್ಲಿ ಬಂಗಾರದ ಹೊಳೆಯೇ ಹರಿಯುತ್ತದೆ ಎಂಬುದೊಂದು ನಂಬಿಕೆ. ಈ ನಂಬಿಕೆಗೆ ಯಾವುದೆ ರೀತಿಯ ವೈಜ್ಞಾನಿಕ ಆಧಾರವಿಲ್ಲವೆಂಬುದು ಅಷ್ಟೇ ಸತ್ಯ. ಆದರೆ ಜನ ನಂಬುಗೆಯ ಜಾತ್ರೆಯಲ್ಲಿ ತಮ್ಮ ಅಸಲಿತನವನ್ನು ಕಳಕೊಂಡಿದ್ದಾರೆ. ಜೋತಿಷ್ಯಗಾರರಿಗೆ ತಮ್ಮ ತಲೆಯನ್ನು ಒತ್ತೆ ಇಟ್ಟ ಮೇಲೆ ಅವರ ಮಿದುಳು ಕ್ರಿಯಾಶೀಲವಾಗಿದೆ ಎಂದು ಊಹಿಸಲು ಸಾಧ್ಯವಿಲ್ಲದ ವಾತಾವರಣ ಇಂದು ಸೃಷ್ಟಿಯಾಗಿದೆ. ಇದು ನಮ್ಮ ಭಾರತಿಯರೆಲ್ಲರ ದುರಂತವಾಗಿದೆ.
ಮತ್ತೊಂದು ಆಶ್ಚರ್ಯ ಹಾಗೂ ವ್ಯಂಗ್ಯದ ಸಮಾಚಾರವೆಂದರೆ ಇದೆ ಅಕ್ಷಯ ತೃತೀಯ ನಕ್ಷತ್ರದ ದಿನ ಯುಗ ಯುಗಳ ಪುರುಷ, ವೈಚಾರಿಕ ಚಿಂತಕ, ಚಳುವಳಿಗಳ ಜನಕ ವಿಶ್ವಗುರು ಬಸವಣ್ಣನವರು ಹುಟ್ಟಿದ ದಿನ. ಅಕ್ಷಯ ತೃತೀಯ ದಿನದ ನಂಬುಗೆ ಒಂದು ಬಗೆಯಾದರೆ ಬಸವಣ್ಣನವರ ವಿಚಾರ ಧಾರೆ ಮತ್ತೊಂದು ಮಗ್ಗುಲು. ಇವು ಒಂದಕ್ಕೊಂದು ಸೇರಲು ಸಾಧ್ಯವೇ ಇಲ್ಲ. ಒಂದು ಉತ್ತರವಾದರೆ ಮತ್ತೊಂದು ದಕ್ಷಿಣ. ಆದರೆ ನಾವು ಇವೆರಡರಲ್ಲಿ ಯಾವುದನ್ನು ಆಯ್ದುಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ ಎಂಬ ಸತ್ಯವನ್ನು ಮನಗಾಣಲೆಬೇಕಾಗಿದೆ. ಇಲ್ಲದೆ ಹೋದರೆ ನಾವು ಬದುಕಿರುವವರೆಗೂ ಭ್ರಮೆಗಳ ನಡುವೆಯೆ ಬದುಕು ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಸತ್ತು ಹೋಗುವ ಅಪಾಯ ಇದೆ.
ಹೊನ್ನಿನೊಳಗೊಂದೊರೆಯ , ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣಿ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ
ಎಂಬುದು ಬಸವಣ್ಣನವರ ಉಸಿರು. ನಾಳೆ ಬೇಕೆಂದು ತೆಗೆದು ಇರಿಸುವುದೆ ಬಹು ದೊಡ್ಡ ಅಪರಾಧ. ಅಲ್ಲದೆ ಹೊನ್ನು ಮಾಯೆ ಎಂಬರು. ಹೊನ್ನು ಮಾಯೆ ಅಲ್ಲವೆ ಅಲ್ಲ, ಮನದ ಮುಂದಣ ಆಸೆಯೆ ಮಾಯೆ ಎಂಬುದು ಶರಣರ ಇಂಗಿತವಾಗಿದೆ. ನಾಳೆ ಬೇಕೆಂದು ತೆಗೆದು ಇಡುವುದು ಅಪರಾಧ. ಒಂದು ಸಲ ಬಸವಣ್ಣನವರ ಮಹಾಮನೆಗೆ ಕಳ್ಳನೊಬ್ಬ ಬರುತ್ತಾನೆ. ಆ ಕಳ್ಳ ಸಹಜವಾಗಿ ನೀಲಾಂಬಿಕೆಯ ಕಿವಿಯಲ್ಲಿರುವ ಓಲೆಗೆ ಕೈಹಾಕಿ ಕಳ್ಳತನ ಮಾಡಬೇಕೆಂದು ಪ್ರಯತ್ನ ಮಾಡುತ್ತಿರುತ್ತಾನೆ. ಆಗ ನೀಲಾಂಬಿಕೆ ಚಟಾರನೆ ಕಿರುಚಿಕೊಂಡು ಕಳ್ಳ ಕಳ್ಳ ಎಂದು ಧಾವಂತಗೊಳ್ಳುತ್ತಾರೆ. ಆಶ್ಚರ್ಯವೆಂದರೆ ಕಲ್ಯಾಣ ನಾಡಿನ ಅಂದಿನ ಪ್ರಧಾನಿಯಾಗಿದ್ದ ಬಸವಣ್ಣನವರು ತನ್ನ ಮಡದಿ ನೀಲಾಂಬಿಕೆಯನ್ನು ಗದರಿಸುವ ಧ್ವನಿಯಲ್ಲಿ  :
ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ
ಅಯ್ಯ ನಮ್ಮಯ್ಯನ ಕೈನೊಂದಿತು,
ತೆಗೆದುಕೊಡಾ ಎಲೆ ಬೆಂಡೊಲೆ ಕಿತ್ತಿ
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ
ಕೂಡಲಸಂಗಮನಲ್ಲದೆ ಆರೂ ಇಲ್ಲ
ಎಂಬ ವಚನದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ನಮಗೆ ಬೇಕಾಗಿರುವುದಕ್ಕಿಂತಲೂ ಹೆಚ್ಚು ಹೆಚ್ಚು ಸಂಗ್ರಹ ಮಾಡಿಕೊಂಡಿರುವುದೆ ದೊಡ್ಡ ಅಪರಾಧ. ಕಳ್ಳನಾದರೂ ತನ್ನ ಹಸಿವನ್ನು ಹಿಂಗಿಸಿಕೊಳ್ಳಲು ಕಳ್ಳತನಕ್ಕೆ ಇಳಿದಿರಬಹುದು. ಆದರೆ ನಮ್ಮ ಹೊಟ್ಟೆ ತುಂಬಿಸಿಕೊಂಡೂ ಹೆಚ್ಚು ಹೆಚ್ಚು ಬೇಕೆಂಬ ಬಯಕೆ ಇಟ್ಟುಕೊಂಡವರೆ ಬಲುಗಳ್ಳರು. ಹೀಗಾಗಿ ಆತ ಹಸಿವೆಗಾಗಿ ನಮ್ಮ ಮನೆಗೆ ಬಂದಾತ. ನಾವು ಬಲುಗಳ್ಳರು ಎಂಬುದು ಬಸವಣ್ಣನವರ ಆಶಯ.
ಹೊನ್ನಿಂಗೆ ಬಂದಿಲ್ಲದ, ಹೆಣ್ಣಿಂಗೆ ಬಂದಿಲ್ಲದ , ಆಶನಕ್ಕೆ- ವಸನಕ್ಕೆ ಬಂದಿಲ್ಲದ ಭಕ್ತಿಯ ಪಥವ ತೋರಲು ಬಂದ ಬಸವಣ್ಣನವರ ಹುಟ್ಟು ಹಬ್ಬದ ದಿನವೆ ಅಕ್ಷಯ ತೃತಿ ಎಂಬ ದಿನ ಬಂದಿರುವುದು ಕಾಕತಾಳೀಯ. ಕನಿಷ್ಠ ಪಕ್ಷ ಬಸವಾದಿ ಶರಣರ ಆಶಯಗಳನ್ನು ಹೇಳುವ , ಅನುಸರಿಸುವ ಜನಗಳಾದರೂ ಅಕ್ಷಯ ತೃತೀಯ ಎಂಬ ವಿಶೇಷ ದಿನದಂದು  ಪುರೋಹಿತರು ನಂಬಿಸಿದ ಮೌಢ್ಯದ ಎದುರು ಈಜಬೇಕಿದೆ. ನಮ್ಮ ರಾಜ್ಯದಲ್ಲಿಯೆ ನಿನ್ನೆಯ ದಿನ 3900 ಕೋಟಿ ಮೌಲ್ಯದ ಚಿನ್ಹ ಮಾರಾಟವಾಗಿರುವುದು ನೋಡಿದರೆ ನಾವು ಎತ್ತ ಹೊರಟಿದ್ದೇವೆ ? ಎಂಬುದು ಮನದಟ್ಟಾಗುತ್ತದೆ. ಹೊನ್ನಿನೊಳಗೆ ಒಂದೊರೆಯ ಎಂಬ ಬಸವಣ್ಣನವರ ಮಾತು ಒತ್ತಟ್ಟಿಗಿರಲಿ, ಈ ದಿನ ಖರೀದಿಸಿದ ಬಂಗಾರ ಮುಂದಿನ ವರ್ಷದಷ್ಟೊತ್ತಿಗೆ ದುಪ್ಪಟ್ಟು ಆಗುತ್ತದೆ ಎಂಬುದೆ ಮೂರ್ಖತನವಲ್ಲವೆ ? ವ್ಯಾಪಾರಿಗಳು ಹಾಗೂ ಜೋತಿಷ್ಯಿಗಳು ಕೂಡಿ ಮಾಡಿದ ಆಟಕ್ಕೆ ಭಾರತೀಯ ಮನಸ್ಸುಗಳು ಪಿಗ್ಗಿ ಬಿದ್ದಿರುವುದು ಕಾಣುತ್ತೇವೆ. ಪಂಚಾಂಗವೆಂಬ ಗಣಿತವಲ್ಲದ, ವಿಜ್ಞಾನವಲ್ಲದ ಅರೆ ಬರೆ ಅಜ್ಞಾನದ ಹಿಂದೆ ಹೋಗುತ್ತಿದ್ದೇವೆ. ಪ್ರಜ್ಞಾವಂತ ಬಸವಣ್ಣನವರ ನಾಡಿನ ನಾವೆಲ್ಲ ವ್ಯಾಪಾರಿಗಳ ಹಾಗೂ ಜೋತಿಷ್ಯಿಗಳ ಕೌಲು ಕೂಟಕ್ಕೆ ಬಲಿಯಾಗಿರುವುದು ಎಷ್ಟು ಸರಿ ? ಎಂದು ನಮ್ಮನ್ನೆ ನಾವು ಕೇಳಿಕೊಳ್ಳಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...