Homeಅಂಕಣಗಳುಬಸವತತ್ವ ವಿರೋಧಿ ಮೋದಿಯ ಸಾನಿಧ್ಯ!, ಇಷ್ಟಲಿಂಗ ಪೂಜೆ ಹೆಸರಲ್ಲಿ ಬಿಜೆಪಿಯ ಧಗಲ್ಬಾಜಿ...

ಬಸವತತ್ವ ವಿರೋಧಿ ಮೋದಿಯ ಸಾನಿಧ್ಯ!, ಇಷ್ಟಲಿಂಗ ಪೂಜೆ ಹೆಸರಲ್ಲಿ ಬಿಜೆಪಿಯ ಧಗಲ್ಬಾಜಿ…

- Advertisement -
- Advertisement -

ವಿಶ್ವಾರಾಧ್ಯ ಸತ್ಯಂಪೇಟೆ |

ಹತಾಶಗೊಂಡಿರುವ ಸಂಘ ಪರಿವಾರ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಮತ್ತೆ ಧರ್ಮದ ಹೆಸರಲ್ಲಿ ತನ್ನ ಕೊಳಕು ಚಟುವಟಿಕೆಗಳನ್ನು ಆರಂಭಿಸಿದೆ. ರಾಜ್ಯದಲ್ಲಿ ಇಷ್ಟಲಿಂಗ ಧಾರಣೆ ಹೆಸರಲ್ಲಿ ಬಿಜೆಪಿ ಮತ್ತು ಪಂಚ ಪೀಠಾಧಿಪತಿಗಳೆಂಬ ಪೀಡೆಗಳು ಈಗ ಕಾರ್ಯಾಚರಣೆಗೆ ಇಳಿದಿವೆ. ಬಸವತತ್ವದ ಪುಟ್ಟಾಪೂರಾ ವಿರೋಧಿಗಳಾದ ಈ ಜನ ಇವತ್ತು ಇಷ್ಟಲಿಂಗದ ಬಗ್ಗೆ ಮಾತನಾಡಲೂ ಆಯೋಗ್ಯರು. ಈ ಹುನ್ನಾರಗಳ ವಿರುದ್ಧ ಪ್ರಜಾಪ್ರಭುತ್ವವಾದಿಗಳೆಲ್ಲ ಈಗಲೇ ಧ್ವನಿ ಎತ್ತಬೇಕಿದೆ.

ರಾಜ್ಯದೆಲ್ಲೆಡೆ ಲಿಂಗಾಯತ ಧರ್ಮದ ಪ್ರಜ್ಞೆ ಮೊಳಗುತ್ತಿದೆ ಎಂದು ಸಾಮಾಜಿಕ ಕಳಕಳಿ ಉಳ್ಳ ಎಲ್ಲರೂ ಒಂದೆಡೆ ಬೀಗುತ್ತಿದ್ದರೆ ಇನ್ನೊಂದೆಡೆ ಅವರೆಲ್ಲರ ಗಮನಕ್ಕೆ ಬರದ ರೀತಿಯಲ್ಲಿ ಹಲವಾರು ಆಘಾತಕಾರಿ ಬೆಳವಣಿಗೆಗಳು ನಡೆದು ಹೋಗುತ್ತಿವೆ. ಇದೆ ತಿಂಗಳು 15 ರಿಂದ 19 ರವರೆಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟಿ ಎಂಬ ಗ್ರಾಮದಲ್ಲಿ
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜನರ ಸಾಮೂಹಿಕ ಇಷ್ಟಲಿಂಗ ಪೂಜೆ ಎಂಬ ಹೆಸರಿನ ಧಗಲಬಾಜಿತನ ಯಾಗ ಎಗ್ಗಿಲ್ಲದೆ ನಡೆಯುತ್ತಿದೆ.

ಅಡವಿಸ್ವಾಮಿ

ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜನ ಜಂಗಮರು ಎಂಬ ಪದ ಹನ್ನೆರಡನೆಯ ಶತಮಾನದಲ್ಲಿ ಬಳಕೆಯಾಗಿರುವಂತಹದ್ದು. ಅಂದು ಬಸವಣ್ಣನವರು ಕನಸಿದ ಸಮಾಜ ಕಟ್ಟಲು ಕಟಿಬದ್ಧರಾಗಿ ಲಕ್ಷದ ಮೇಲೆ ತೊಂಬತ್ತಾರು ಸಹಸ್ರ ಜನರನ್ನು ತರಬೇತಿ ನೀಡಿ ಸಿದ್ಧಗೊಳಿಸಿದ್ದರು. ಇವರೆಲ್ಲ ಭಿನ್ನ ಭಿನ್ನ ಜಾತಿ ಧರ್ಮಗಳಿಂದ ಎದ್ದು ಬಂದ ವಿವೇಕವಂತರಾಗಿದ್ದರು. ಇಷ್ಟಲಿಂಗ ಕುರುಹನ್ನು ಇಂಬಿಟ್ಟುಕೊಂಡು ಮಾಡಿದ ಕ್ರಾಂತಿ ಜಗತ್ತಿನ ಯಾವ ಪ್ರದೇಶದಲ್ಲೂ ಜರುಗಿಲ್ಲ. ಸ್ತ್ರೀ ಸಮಾನತೆ, ಮೇಲು ಕೀಳು, ಬಡವ-ಬಲ್ಲಿದ ಎಂಬ ಶಬ್ಧಗಳು ಬಸವಣ್ಣನವರ ಸಂದರ್ಭದಲ್ಲಿ ಅರ್ಥ ಕಳೆದುಕೊಂಡಿದ್ದವು. ಬಸವಣ್ಣನವರು ಪ್ರಧಾನಿಯಾಗಿದ್ದಾಗ ಅಲ್ಲಿನ ರಾಜ ಬಿಜ್ಜಳನನ್ನು ಭವಿಯೆಂದು ಕರೆದುದಲ್ಲದೆ ಆನೀ ಭವಿ ಬಿಜ್ಜಳಂಗೆ ಅಂಜುವೆನೆ ? ಎಂಬ ಸವಲನ್ನು ಹಾಕಿದ್ದರು. ಅಷ್ಟೇ ಅಲ್ಲ ಕಲ್ಯಾಣದಲ್ಲಿ ಅಂದು ಬಂದು ಸಮಾವೇಶಗೊಂಡಿದ್ದ ಯಾವ ಶರಣನು ತನ್ನ ಆತ್ಮಾಭಿಮಾನಬಿಟ್ಟು ಬದುಕಿರಲಿಲ್ಲ.

ಕಾಯದ ದಾಸೋಹ ತತ್ವಗಳ ಹಿನ್ನೆಲೆಯಲ್ಲಿ ರೂಪಗೊಂಡ ಚಳುವಳಿ ಇಷ್ಟಲಿಂಗವನ್ನು ತನ್ನ ಮೇಟಿಯಾಗಿ ಇಟ್ಟುಕೊಂಡು ನಡೆಸಿದ ಕ್ರಾಂತಿ ಅತ್ಯದ್ಭುತ. ದುರಂತವೆಂದರೆ ಆ ಚಳುವಳಿಯ ಎಲ್ಲಾ ಚರ ಜಂಗಮರನ್ನು ಹಾಗೂ ಆ ತತ್ವಗಳನ್ನು ಅವರ ಕಣ್ಣೆದುರಿಗೆ ಹಾಳು ಮಾಡಲು ಪಟ್ಟಭದ್ರ ಶಕ್ತಿಗಳು, ಮೂಲಭೂತವಾದಿಗಳು ಇನ್ನಿಲ್ಲದ ಪರಿಶ್ರಮ ಪಟ್ಟರು. ಸಹಸ್ರಾರು ಜನ ಶರಣರ ಬರ್ಬರ ಹತ್ಯೆಗಳಾದವು. ತತ್ವಗಳಿಗಾಗಿ ಹರಳಯ್ಯ- ಮಧುವಯ್ಯಗಳ ಎಳೆಹೂಟಿ ಶಿಕ್ಷೆ ಎಲ್ಲರ ಕಣ್ಣೆದುರಿಗೆ ಜರುಗಿ ಹೋಯ್ತು.

ಜನದ್ರೋಹಿ, ಧರ್ಮದ್ರೋಹಿ ಮೋದಿ

ಚಾರಿತ್ರ್ಯಿಕ ಸತ್ಯಗಳನ್ನು ಮರೆ ಮಾಚುತ್ತ ಬಂದ ಟೊಳ್ಳು ಇತಿಹಾಸ ಖೋರರು ಮುದ್ದಾಂ ಆಗಿ ಇಂಥ ಕಳವಳಕಾರಿಯಾದ ಸಂಗತಿಗಳನ್ನು ಬೇಕಂತಲೆ ಮರೆ ಮಾಚಿದರು. ಸಕಲ ಜೀವರಾಶಿಗೆ ಒಳಿತಾಗಬಲ್ಲ ತತ್ವವನ್ನು ಹೀಚುಹೀಚುಕಿ ಸಾಯಿಸಿದರು. ತದ ನಂತರ ಬಂದ ಆಂದ್ರದ ಆರಾಧ್ಯ ಜಂಗಮರು ಲಿಂಗಾಯತ ಧರ್ಮದ ತತ್ವಗಳನ್ನು ಇಂಚು ಇಂಚಾಗಿ ಹಾಳು ಮಾಡುತ್ತ ನಡೆದರು. ಅವರೆಲ್ಲರ ಪಳಿಯುಳಿಕೆಯೆ ಇಂದಿನ ಬಹುತೇಕ ಮಠಪೀಠ ಪರಂಪರೆಯ ಸ್ವಾಮೀಜಿಗಳು.

ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಕನಹಳ್ಳಿ ಗ್ರಾಮದ ಪಡಪೋಸಿಯೊಬ್ಬ 1994 ರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟಿಯಲ್ಲಿ ಠಿಕಾಣಿ ಹೂಡಿದ. ತಲೆಯಲ್ಲಿ ಮಿದುಳು ಇಲ್ಲದವರ ವರ್ತಿಸುವ ಈ ವ್ಯಕ್ತಿಗೆ ಧಾರ್ಮಿಕವಾದ ಯಾವುದೆ ಆಚಾರ ವಿಚಾರ, ತತ್ವ ಸಿದ್ಧಾಂತದ ಎಳ್ಳಷ್ಟು ಪರಿಚಯವಿಲ್ಲ. ಅರೆಬರೆ ಬಟ್ಟೆಯಲ್ಲಿ ನಾಗಾಸಾಧುಗಳಂತೆ ಕಾಣುವ ಅರೆ ಹುಂಬನೊಬ್ಬನನ್ನು ಮುಂದು ಮಾಡಿ ಪುರೋಹಿತಶಾಹಿ ವ್ಯವಸ್ಥೆ ಅವನ ಮೂಲಕ ಮತ್ತೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜನರ ಇಷ್ಟಲಿಂಗ ಪೂಜೆ ಎಂಬ ಪ್ರಹಸನವೊಂದನ್ನು ನಡೆಸಿದೆ.

ಅಡವಿಸ್ವಾಮಿಯ ಪಟಾಲಂ

ಹೇಗೂ ಜನತೆಯಲ್ಲಿ ಬಸವಾದಿ ಶರಣರ ಬಗೆಗೆ ಇನ್ನಿಲ್ಲದ ಪ್ರೀತಿ, ಮಮತೆ, ಗೌರವ ಎಲ್ಲವೂ ಇನ್ನೂ ಹಚ್ಚ ಹಸಿರಾಗಿ ಇವೆ. 770 ಅಮರ ಗಣಂಗಳು ಅಂದು ಮಾಡಿದ ಕ್ರಾಂತಿಯ ಬಗ್ಗೆ ದಂತಕತೆಗಳಿವೆ. ಜನತೆಯ ಮನಸ್ಸಿನಲ್ಲಿರುವ ಪ್ರೀತಿ ಮಮತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಲಿಂಗಾಯತ ಧರ್ಮದ ಹೈಜಾಕ ಮಾಡುವ ಕಂಪನಿಯವರಾದ ಪಂಚಪೀಠಾಧೀಶ್ವರರೆಲ್ಲ ಇದಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಶ್ರೀಶೈಲ, ಕಾಶಿಯ ಜಗದ್ಗುರುಗಳು , ಹೊಸಪೇಟೆಯ ಡಾ. ಸಂಗನಬಸವ ಸ್ವಾಮಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮಿ, ನಾಲವಾರದ ತೋಟೇಂದ್ರ ಸ್ವಾಮಿ ಮುಂತಾದವರೆಲ್ಲ ಅಲ್ಲಿ ಠಳಾಯಿಸಲಿದ್ದಾರೆ. ಮುಸುರೆಗೆ ನೋಣ ಮುತ್ತಿಕೊಂಡಿಪ್ಪಂತೆ. ಕಸುವುಳ್ಳ ಹೊಲದಲ್ಲಿ ಪಶುಗಳು ನೆರೆದಿಪ್ಪಂತೆ ಬಹುಭಾಷಾ ಪಂಡಿತರು ಇಲ್ಲಿ ನೆರೆಯಲಿದ್ದಾರೆ. ಈ ಸಂದರ್ಭದಲ್ಲಿ ನನಗೆ ಅಮ್ಮುಗೆ ರಾಯಮ್ಮನ ವಚನ ನೆನಪಾಗುತ್ತಿದೆ.

ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ ?
ಸೀಳ ನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಹೊತ್ತುಕೊಂಡು ತಿರುಗುವ ಗಾವಿಲರ
ಮುಖವ ನೋಡಲಾಗದು ಅಮುಗೇಶ್ವರಾ

ಜನ ಸಾಮಾನ್ಯರು ಎಲ್ಲಿಯಾದರೂ ನೆರೆಯುತ್ತಾರೆಂದರೆ ಸಾಕು ಅಲ್ಲಿ ರಾಜಕಾರಣಿಗಳು ಹದ್ದುಗಳಂತೆ ಬಂದು ಎರಗುತ್ತಾರೆ. ತಮ್ಮ ಬೇಳೆ ಬೇಯಿಸಿಕೊಂಡು ಜನ ಸಾಮಾನ್ಯರಲ್ಲಿ ದೊಡ್ಡ ಧಾರ್ಮಿಕ ನಾಯಕರು ಎಂದು ಫೋಜ್ ಕೊಡುತ್ತಾರೆ. ಜನರ ಧಾರ್ಮಿಕ ನಂಬಿಕೆಗಳ ಮೇಲೆ ಸವಾರಿ ಮಾಡಿ ಎಲ್ಲರನ್ನೂ ದಿಶಾಬೂಲ್ ಗೊಳಿಸುತ್ತಾರೆ. ಹೀಗಾಗಿಯೆ ನಮ್ಮ ದೇಶದ ಪ್ರಧಾನಿ ಊರ್ಫ ಚೌಕಿದಾರ ಶ್ರೀ. ಸನ್ಮಾನ್ಯ ನರೇಂದ್ರ ಮೋದಿಯವರೂ ಸಹ ಇಲ್ಲಿ ತಮ್ಮ ದಿವ್ಯ ದರ್ಶನವನ್ನು ಜನತೆಗೆ ಮಾಡಿಸಲಿದ್ದಾರೆ. ಲಿಂಗಾಯತನಲ್ಲದ ಕರ್ಮಠ ಸಿದ್ಧಾಂತಿ ಯಡ್ಡಿಯ ಪರಿವಾರವೂ ಇಲ್ಲಿ ಜಮಾಗೊಳ್ಳಲಿದೆ. ಬಿ.ಜೆ.ಪಿ. ಪಾಳೆಯಕ್ಕೆ ಜಿಗಿದ ಮೊಟ್ಟ ಮೊದಲ ಧನದಾಹಿ ಶಿವಣ್ಣಗೌಡ ನಾಯಕರ ಮತಕ್ಷೇತ್ರದಲ್ಲಿಯೆ ಈ ವೀರಗೋಟಿ ಬರುತ್ತದೆ. ಹೀಗಾಗಿ ರಕ್ತಪಿಪಾಸುಗಳು, ಅರೆಬೆಂದ ಧಾರ್ಮಿಕ ಕಪಟ ವೇಷಧಾರಿಗಳು ಜನ ಸಾಮಾನ್ಯರನ್ನು ಮತ್ತದೆ ಶಿಲಾಯುಗಕ್ಕೆ ಕೊಂಡೊಯ್ಯುವ ಎತ್ತುಗಡೆ ಯಾವ ಎಗ್ಗಿಲ್ಲದೆ ನಡೆದಿವೆ. ಜನರೂ ಅಷ್ಟೇ : “ಜನ ಮರುಳೋ ಜಾತ್ರೆ ಮರುಳೋ…… ಮರುಳೋ ಸಿದ್ಧೇಶ್ವರ” ಎನ್ನುತ್ತಾ ಗುಂಪಿನಲ್ಲಿ ಗೋವಿಂದ ಎನ್ನುತ್ತಾ ಹೊರಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...