ನವದೆಹಲಿ: ಅಲಹಾಬಾದ್ ಹೈಕೋರ್ಟ್ನ ಇಬ್ಬರು ಹಾಲಿ ನ್ಯಾಯಾಧೀಶರು ಭಾನುವಾರ (ಡಿಸೆಂಬರ್ 8) ಹಿಂದುತ್ವ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಪ್ರಯಾಗ್ರಾಜ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅವರಲ್ಲಿ ಒಬ್ಬರು ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆಯ ಕುರಿತು ಉಪನ್ಯಾಸ ನೀಡಿರುವುದು ವರದಿಯಾಗಿದೆ.
ಹೈಕೋರ್ಟ್ನ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿಎಚ್ಪಿಯ “ಕಾಶಿ ಪ್ರಾಂತ” (ವಾರಣಾಸಿ ವಲಯ) ಮತ್ತು ಹೈಕೋರ್ಟ್ ಘಟಕದ (ಅಲಹಾಬಾದ್) ಕಾನೂನು ಘಟಕ ಆಯೋಜಿಸಿದ್ದವು.
“ವಕ್ಫ್ ಬೋರ್ಡ್ ಕಾಯ್ದೆ” ಮತ್ತು “ಧಾರ್ಮಿಕ ಪರಿವರ್ತನೆ – ಕಾರಣಗಳು ಮತ್ತು ತಡೆಗಟ್ಟುವಿಕೆ” ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ. 2026ರಲ್ಲಿ ನಿವೃತ್ತರಾಗಲಿರುವ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಯುಸಿಸಿಯಲ್ಲಿ “ಏಕರೂಪ ನಾಗರಿಕ ಸಂಹಿತೆ – ಒಂದು ಸಾಂವಿಧಾನಿಕ ಅಗತ್ಯ” ಎಂಬುದರ ಕುರಿತು ಉಪನ್ಯಾಸವನ್ನು ನೀಡಿದರು.
ಯುಸಿಸಿ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಆಧರಿಸಿದೆ ಎಂದ ಅವರು, ಜಾತ್ಯತೀತತೆ ಭಾರತದಲ್ಲಿ ದೀರ್ಘ ಕಾಲದಿಂಲೂ ಚರ್ಚೆಯ ವಿಷಯವಾಗಿದೆ.
“ಯುಸಿಸಿಯ ಮುಖ್ಯ ಉದ್ದೇಶವೆಂದರೆ ವಿವಿಧ ಧರ್ಮಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಅಸಮಾನ ಕಾನೂನು ವ್ಯವಸ್ಥೆಗಳನ್ನು ತೆಗೆದುಹಾಕುವ ಮೂಲಕ ಸಾಮಾಜಿಕ ಸಾಮರಸ್ಯ, ಲಿಂಗ ಸಮಾನತೆ ಮತ್ತು ಜಾತ್ಯತೀತತೆಯನ್ನು ಉತ್ತೇಜಿಸುವುದು. ಈ ಸಂಹಿತೆಯು ಸಮುದಾಯಗಳ ನಡುವೆ ಮಾತ್ರವಲ್ಲದೆ ಒಂದು ಸಮುದಾಯದೊಳಗೆ ಕಾನೂನುಗಳ ಏಕರೂಪತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ಯಾದವ್ ಹೇಳಿದ್ದಾರೆ.
ಇನ್ನೋರ್ವ ನ್ಯಾಯಾಧೀಶರಾದ ಜಸ್ಟಿಸ್ ದಿನೇಶ್ ಪಾಠಕ್ ಅವರು ಸಮಾರಂಭದಲ್ಲಿ “ದೀಪ ಬೆಳಗಿಸಿ” ಮತ್ತು “ಆಶೀರ್ವಾದ” ನೀಡಲು ನಿರ್ಧರಿಸಲಾಗಿತ್ತು. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ ಎನ್ನಲಾಗಿದೆ.
ಜಾನ್ಪುರ್, ಸುಲ್ತಾನ್ಪುರ, ಪ್ರತಾಪ್ಗಢ, ಅಮೇಥಿ, ಪ್ರಯಾಗ್ರಾಜ್, ಕೌಶಂಬಿ, ಭದೋಹಿ, ಮಿರ್ಜಾಪುರ, ಚಂದೌಲಿ, ಸೋನ್ಭದ್ರ, ಘಾಜಿಪುರ ಮತ್ತು ವಾರಣಾಸಿಯಿಂದ ವಿಎಚ್ಪಿಯ ಕಾಶಿ ಪ್ರಾಂತ್ ಕಾನೂನು ಘಟಕದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಸರ್ಕಾರಿ ವಕೀಲ ಎ.ಕೆ.ಸಾಂಡ್ ಮತ್ತು ಅಲಹಾಬಾದ್ನ ಹೈಕೋರ್ಟ್ ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಅನಿಲ್ ತಿವಾರಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಇದು ಆಯ್ದ ವ್ಯಕ್ತಿಗಳ ಸಭೆ ಎಂದು ವಿಎಚ್ಪಿ ಮೂಲಗಳು ತಿಳಿಸಿವೆ.
ನ್ಯಾಯಾಧೀಶ ಯಾದವ್ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಈ ಹಿಂದೆ ಜನಮನವನ್ನು ಗಳಿಸಿದ್ದು, ನಿರ್ದಿಷ್ಟವಾಗಿ ಹಿಂದೂ ಧರ್ಮ ಮತ್ತು ಪುರಾಣದ ಅಂಶಗಳನ್ನು ಉಲ್ಲೇಖಿಸುವವರಾಗಿದ್ದಾರೆ.
2021ರಲ್ಲಿ, ಸಂಭಾಲ್ನ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಸಹಚರರೊಂದಿಗೆ ಹಸುವನ್ನು ಕದ್ದು, ಹತ್ಯೆ ಮಾಡಿದ ಆರೋಪಕ್ಕಾಗಿ ಜಾಮೀನು ನೀಡಲು ನಿರಾಕರಿಸಿದ್ದರು. ಯಾದವ್ ಅವರು ಹಿಂದೂಗಳ ಮೂಲಭೂತ ಹಕ್ಕಾಗಿ ಗೋವನ್ನು “ರಾಷ್ಟ್ರೀಯ ಪ್ರಾಣಿ” ಎಂದು ಮತ್ತು ಗೋರಕ್ಷ (ಗೋ ರಕ್ಷಣೆ) ಅನ್ನು ಘೋಷಿಸಬೇಕೆಂದು ಹೇಳಿದ್ದರು.
ಪೌರಾಣಿಕ ಕಥೆಗಳೊಂದಿಗೆ ಹಿಂದಿಯಲ್ಲಿ ನ್ಯಾಯಮೂರ್ತಿ ಯಾದವ್ ಅವರು ಹಿಂದಿಯಲ್ಲಿ 12 ಪುಟಗಳಲ್ಲಿ ಬರೆದ ತನ್ನ ಆದೇಶದಲ್ಲಿ ಹಸು ಉಸಿರಾಟದಿಂದ ಆಮ್ಲಜನಕವನ್ನು ಹೊರಹಾಕುವ ಏಕೈಕ ಪ್ರಾಣಿ ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ ಎಂದು ತೀರ್ಪು ನೀಡಿದ್ದರು.
ಗೋಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಸತ್ತು ಕಾನೂನನ್ನು ಜಾರಿಗೆ ತರಬೇಕೆಂದು ಯಾದವ್ ಇದೇ ಆದೇಶದಲ್ಲಿ ವಾದಿಸಿದ್ದರು. “ದೇಶದ ನಂಬಿಕೆ ಮತ್ತು ಸಂಸ್ಕೃತಿಗೆ ಹಾನಿಯಾದಾಗ, ದೇಶವು ದುರ್ಬಲಗೊಳ್ಳುತ್ತದೆ” ಎಂದು ಅವರು ತೀರ್ಪಿತ್ತಿದ್ದರು.
ಅದೇ ವರ್ಷ, ಅಕ್ಟೋಬರ್ನಲ್ಲಿ, ನ್ಯಾಯಮೂರ್ತಿ ಯಾದವ್ ಅವರು ಆದೇಶವೊಂದರಲ್ಲಿ ಮತ್ತೊಂದು ಭಾವನಾತ್ಮಕ ತೀರ್ಪು ನೀಡಿದ್ದರು. ಹಿಂದೂ ದೇವತೆಗಳಾದ ರಾಮ ಮತ್ತು ಕೃಷ್ಣ ಹಾಗೂ ಹಿಂದೂ ಪುರಾಣ ಗ್ರಂಥಗಳಾದ ರಾಮಾಯಣ ಮತ್ತುಭಗವದ್ಗಿತೆ ಮತ್ತು ಇವುಗಳ ಕರ್ತೃಗಳಾದ ವಾಲ್ಮೀಕಿ ಮತ್ತು ವೇದವ್ಯಾಸ್ ರಿಗೆ ಸಂಸತ್ತಿನಲ್ಲಿ ಕಾಯ್ದೆ ಮೂಲಕ ರಾಷ್ಟ್ರೀಯ ಗೌರವವನ್ನು ನೀಡಲಾಗುವುದು ಎಂದು ಹೇಳಿದ್ದರು.
ರಾಮ, ಕೃಷ್ಣ, ರಾಮಾಯಣ, ಭಗವದ್ಗೀತೆ, ವಾಲ್ಮೀಕಿ ಮತ್ತು ವೇದವ್ಯಾಸರು ದೇಶದ “ಸಂಸ್ಕೃತಿ ಮತ್ತು ಪರಂಪರೆಯ” ಭಾಗವಾಗಿದ್ದಾರೆ. ರಾಮ, ಕೃಷ್ಣರಿಗೆ ಅವಮಾನಿಸಿದ ಆರೋಪದ ಮೇಲೆ ಹಿಂದೂ ದಲಿತ ವ್ಯಕ್ತಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಯಾದವ್ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.

ಹಿಂದೂ ಸಮಾಜದಲ್ಲಿ ಮತ್ತು ವಿಶ್ವ ಕಲ್ಯಾಣಕ್ಕಾಗಿ ಈ ದೇವತೆಗಳು ಮತ್ತು ಪೌರಾಣಿಕ ಮಹಾಕಾವ್ಯಗಳು ನಿರ್ವಹಿಸಿದ ಪಾತ್ರವನ್ನು ಯಾದವ್ ಶ್ಲಾಘಿಸಿದ್ದು, ಈ ಅಂಶಗಳನ್ನು ದೇಶದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ಕಲಿಕಾ ವಿಷಯವನ್ನಾಗಿ ಮಾಡಬೇಕು ಎಂದು ಅವರು ಉಲ್ಲೇಖಿಸಿದ್ದರು ಮತ್ತು ಶಿಕ್ಷಣದ ಮೂಲಕ ಮಾತ್ರ ಒಬ್ಬ ವ್ಯಕ್ತಿಯು ಸುಸಂಸ್ಕೃತನಾಗುತ್ತಾನೆ ಮತ್ತು ಅವನು ಜೀವನ ಮೌಲ್ಯಗಳ ಬಗ್ಗೆ ಅರಿವು ಹೊಂದುತ್ತಾನೆ ಎಂದು ಯಾದವ್ ಹೇಳಿದರು.
“ರಾಮ ಮತ್ತು ಕೃಷ್ಣರು ಈ ಭಾರತದ ನೆಲದಲ್ಲಿ ಜನಿಸಿದ್ದಾರೆ ಮತ್ತು ಇಲ್ಲಿಯ ಜನರ ಕಲ್ಯಾಣದ ಬಗ್ಗೆ ಚಿಂತಿಸಿದ್ದರು ಮತ್ತು ತಮ್ಮ ಜೀವನದುದ್ದಕ್ಕೂ ಜೀವರಾಶಿಗಳ ಕಲ್ಯಾಣಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದರು. ಇದರಿಂದ ಲೋಕಕಲ್ಯಾಣವಾಯಿತು. ವಿಶ್ವದ ಅನೇಕ ದೇಶಗಳ ಜನತೆ ರಾಮ ಮತ್ತು ಕೃಷ್ಣ ಮತ್ತು ಅವರ ಕಾರ್ಯಗಳು ಮತ್ತು ಆಲೋಚನೆಗಳನ್ನು ನಂಬಿದ್ದಾರೆ ಎಂದು ನ್ಯಾಯಾಧೀಶರು ಅಕ್ಟೋಬರ್ 2021ರಲ್ಲಿ ಹೇಳಿದರು.
2021ರ ಡಿಸೆಂಬರ್ನಲ್ಲಿ ನ್ಯಾಯಮೂರ್ತಿ ಯಾದವ್ ಅವರು, ರಾಜಕೀಯ ಪಕ್ಷಗಳ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ತಕ್ಷಣವೇ ನಿಷೇಧಿಸುವಂತೆ ಮತ್ತು 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳನ್ನು ಕೋವಿಡ್-19 ರ ರೂಪಾಂತರದ ಪ್ರಕರಣಗಳ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಮುಂದೂಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗವನ್ನು ವಿನಂತಿಸಿದ್ದರು.
ಪ್ರಯಾಗರಾಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಎಚ್ಪಿಯ ಕಾನೂನು ಘಟಕದ ರಾಷ್ಟ್ರೀಯ ಸಹ ಸಂಚಾಲಕ ಅಭಿಷೇಕ್ ಅತ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಭಾಷಣ ಮಾಡಿದರು.
ಬಾಂಗ್ಲಾದೇಶದಲ್ಲಿ “ಎರಡನೇ ಕಾಶ್ಮೀರ” ವನ್ನು ಕಾಣಬಹುದು ಎಂದು ಹೇಳಿದ ಅತ್ರೇ, ಅಲ್ಲಿನ ಇತ್ತೀಚಿನ ರಾಜಕೀಯ ಕ್ರಾಂತಿಯ ನಂತರ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳನ್ನು ಗುರಿಯಾಗಿಸಲಾಗಿದೆ ಎಂದು ಉಲ್ಲೇಖಿಸಿದರು.
ನಮ್ಮ ಗುರುತನ್ನು ರಕ್ಷಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಅತ್ರೆ ಹೇಳಿದರು.
ಇದನ್ನೂಓದಿ….‘ಎಂವಿಎ’ ಮೈತ್ರಿಯಿಂದ ಹೊರಬಂದ ಸಮಾಜವಾದಿ ಪಾರ್ಟಿಯನ್ನು ‘ಬಿಜೆಪಿಯ ಬಿ ಟೀಮ್’ ಎಂದ ಆದಿತ್ಯ ಠಾಕ್ರೆ


