Homeಕರ್ನಾಟಕದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

- Advertisement -
- Advertisement -

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4, 2026) ಸಂಜೆ 6.10ರ ಸುಮಾರಿಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಅರಣ್ಯ ಇಲಾಖೆ, ಪೊಲೀಸರು, ನಕ್ಸಲ್ ನಿಗ್ರಹ ದಳದ (ಎಎನ್‌ಎಫ್‌) ಸಿಬ್ಬಂದಿ, ಸ್ಥಳೀಯ ಕುಡಿಯ ಜನಾಂಗದ ಜನರು ಹಾಗೂ ಸ್ಥಳೀಯ ಮುಖಂಡರು, ಸ್ವಯಂ ಸೇವಕರ ಜಂಟಿ ಪರಿಶ್ರಮದ ಫಲವಾಗಿ ಶರಣ್ಯ ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಶರಣ್ಯ ನಾಪತ್ತೆಯಾದ ಕ್ಷಣದಿಂದ, ಆಕೆ ಪತ್ತೆಯಾಗುವವರೆಗೆ ಹಗಲಿರುಳು ಸತತವಾಗಿ ಹುಡುಕಾಟ ನಡೆಸಿದ್ದರು. ಡ್ರೋನ್, ಶ್ವಾನದಳ ಕೂಡ ಹುಡುಕಾಟಕ್ಕೆ ಸಾಥ್ ನೀಡಿತ್ತು. ಶಾಸಕರು, ಸಚಿವರು, ಸಂಸದರು ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಕೂಡ ಶರಣ್ಯ ಪತ್ತೆಗೆ ಪ್ರಯತ್ನ ನಡೆದಿತ್ತು.

ಕೇರಳ ಸರ್ಕಾರ ಕೂಡ ಶರಣ್ಯ ನಾಪತ್ತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿತ್ತು. ಕರ್ನಾಟಕ-ಕೇರಳ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲೂ ಮಾಧ್ಯಮಗಳಲ್ಲಿ ಶರಣ್ಯ ನಾಪತ್ತೆ ವಿಚಾರ ಸುದ್ದಿಯಾಗಿತ್ತು. ಸ್ಥಳೀಯ ಆದಿವಾಸಿ ಜನರು ಶರಣ್ಯಳ ಸುರಕ್ಷಿತ ಹಿಂದಿರುಗುವಿಕೆಗಾಗಿ ಹರಣಕೆಯನ್ನೂ ಹೊತ್ತಿದ್ದರು. ಮಲೆ‌ಕುಡಿಯ ಜನಾಂಗ ತಮ್ಮ ದೈವದ ಮೊರೆ ಹೋಗಿತ್ತು. “ಶರಣ್ಯ ಬಳಲಿ ಒಂದೆಡೆ ಆಶ್ರಯ ಪಡೆದಿದ್ದಾಳೆ. ಸುರಕ್ಷಿತವಾಗಿ ಸಿಗಲಿದ್ದಾಳೆ‌” ಎಂದು ದೈವ ಮಲೆ ತಚ್ಚನ್ ನುಡಿದಿತ್ತು.

ಶರಣ್ಯ ಪತ್ತೆಯಾಗಿದ್ದು ಹೇಗೆ ಮತ್ತು ಎಲ್ಲಿ?

ಭಾನುವಾರ ಸಂಜೆಯ ವೇಳೆಗೆ, ಹುಡುಕಾಟದಲ್ಲಿ ನಿರತರಾದ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ಕೂಗಾಟ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ ಎನ್ನಲಾಗಿದೆ. “ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು” ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಶರಣ್ಯ ಪತ್ತೆಯಾದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹುಡುಕಾಟಕ್ಕೆ ಶ್ರಮಿಸಿದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ತಡಿಯಂಡಮೋಳ್ ಬೆಟ್ಟದ ತಪ್ಪಲಿನಿಂದ ಸುಮಾರು 3.5 ರಿಂದ 6 ಕಿ.ಮೀ ದೂರದಲ್ಲಿರುವ ಮಲೆತಿರಿಕೆ ಎಂಬ ದಟ್ಟ ಅರಣ್ಯ ಪ್ರದೇಶದಲ್ಲಿ ಶರಣ್ಯ ಸ್ಥಳೀಯರಿಗೆ ಸಿಕ್ಕಿದ್ದಾರೆ ಎಂದು ವರದಿಯಾಗಿದೆ. ಕೆಲವು ವರದಿಗಳ ಪ್ರಕಾರ ಅವರು ಅಲ್ಲಿನ ಪಾಳು ಬಿದ್ದ ಬಂಗಲೆ ಅಥವಾ ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದಿದ್ದರು ಎಂದು ಹೇಳಲಾಗ್ತಿದೆ. ಸ್ಥಳೀಯ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡಕ್ಕೆ ಶರಣ್ಯ ಮೊದಲು ಕಾಣ ಸಿಕ್ಕಿದ್ದಾರೆ ಎಂದು ವರದಿಯಾಗಿದೆ.

ಶರಣ್ಯ ನಾಪತ್ತೆಯಾಗಿದ್ದು ಹೇಗೆ?

ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಝಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2ರಂದು ಕೊಡಗಿಗೆ ಚಾರಣಕ್ಕೆ ಬಂದಿದ್ದರು. ಆನ್‌ಲೈನ್ ಮೂಲಕ ಚಾರಣ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು ಎನ್ನಲಾಗಿದೆ.

ಅರಣ್ಯದಿಂದ ಹೊರ ಬಂದ ಶರಣ್ಯ ಹೇಳಿದ್ದೇನು?

ಅರಣ್ಯದಿಂದ ಹೊರ ಬಂದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಶರಣ್ಯ, “ದಾರಿ ತಪ್ಪಿ ನಾನು ಕಾಡಿನಲ್ಲಿ ಬಾಕಿಯಾಗಿದ್ದೆ. ನಾನು ಬೆಟ್ಟದ ಇಳಿಜಾರು ಪ್ರದೇಶಕ್ಕೆ ಇಳಿದ ವೇಳೆ ನನ್ನ ಚಾರಣ ತಂಡದವರು ಬೆಟ್ಟದ ತುದಿಯಲ್ಲಿದ್ದರು. ನಾನು ಅವರತ್ತ ತೆರಳಲು ಎಡ ಬದಿಗೆ ಅರಣ್ಯದೊಳಗೆ ಮೇಲಕ್ಕೆ ನಡೆದೆ. ನಾನು ಮೇಲ್ಬಾಗಕ್ಕೆ ಬಂದು ತಲುಪಿದಾಗ, ಅವರು ಮೇಲೆಯೂ ಇರಲಿಲ್ಲ, ಕೆಳಗಡೆಯೂ ಇರಲಿಲ್ಲ. ಹಾಗಾಗಿ, ನಾನು ಮತ್ತೆ ಬೆಟ್ಟದ ಕೆಳ ಭಾಗಕ್ಕೆ ಹೋದೆ, ಸ್ವಲ್ಪ ಕೆಳಗೆ ಹೋದಾಗ ಮೊಬೈಲ್ ನೆಟ್‌ವರ್ಕ್ ಹೋಯಿತು” ಎಂದಿದ್ದಾರೆ.

“ನಾನು ಇಳಿದ ಬೆಟ್ಟದ ಕೆಳಗಿನ ಭಾಗ ದಟ್ಟಾರಣ್ಯವಾಗಿತ್ತು. ಅಲ್ಲಿ, ನಾನು ಏಕಾಂಕಿಯಾಗಿ ಸಂಜೆ 6.45ರವರೆಗೆ ಕಾಡಿನಲ್ಲಿ ನಡೆದೆ. ಕೊನೆಗೆ ನಾನು ನನ್ನ ಆಫೀಸ್ ಗೆಳೆಯ ಯಧುಗೆ ಕಾಲ್ ಮಾಡಲು ಮುಂದಾದೆ, ಅದು ಸಾಧ್ಯವಾಗಲಿಲ್ಲ. ನಂತರ ಅರಣ್ಯ ಇಲಾಖೆಯ ಸಹಾಯವಾಣಿಯನ್ನು ಸಂಪರ್ಕಿಸಲು ಮೆಸೇಜ್ ಟೈಪ್ ಮಾಡಿದ್ದೆ. ಮೆಸೇಜ್ ಟೈಪ್ ಮಾಡಿ ಮುಗಿಯುವಾಗ ಮೊಬೈಲ್ ಚಾರ್ಜ್ ಒಂದು ಪರ್ಸೆಂಟ್‌ಗೆ ಬಂದು ಮೊಬೈಲ್ ಸ್ವಿಚ್ ಆಫ್ ಆಯಿತು” ಎಂದು ತಿಳಿಸಿದ್ದಾರೆ.

“ಮೊಬೈಲ್ ಸ್ವಿಚ್ ಆಫ್ ಆದ ಬಳಿಕ, ನಾನು ಒಂದು ತೊರೆ ಮತ್ತು ಬಂಡೆ ಇರುವ ಜಾಗಕ್ಕೆ ತಲುಪಿದೆ. ಮೊದಲ ದಿನ (ಗುರುವಾರ) ರಾತ್ರಿ ಅಲ್ಲೇ ಉಳಿದುಕೊಂಡೆ. ಮರುದಿನ (ಶುಕ್ರವಾರ) ಬೆಳಗೆದ್ದಾಗ ಹಿಂದಿನ ದಿನ ನಡೆದ ಪರಿಣಾಮ, ಸ್ವಲ್ಪ ಕಾಲು ನೋವು ಇತ್ತು. ಹಾಗಾಗಿ, ಅಲ್ಲೆ ಉಳಿದುಕೊಂಡೆ. ರಕ್ಷಣಾ ತಂಡ ಡ್ರೋನ್ ಏನಾದರು ಹಾರಿಸಿದರೆ ನನ್ನನ್ನು ಕಾಣಲಿ ಎಂದು ಆಕಾಶ ಕಾಣುವ ಜಾಗದಲ್ಲೇ ಇದ್ದೆ” ಎಂದು ವಿವರಿಸಿದ್ದಾರೆ.

“ಮೂರನೇ ದಿನ (ಶನಿವಾರ) ಬೆಟ್ಟದ ತುದಿಯನ್ನು ಗುರಿಯಾಗಿಸಿ ನಡೆಯಲು ಪ್ರಯತ್ನಿಸಿದೆ. ಆದರೆ, ಅಂದು ಭಾರೀ ಮಳೆಯಾಯಿತು. ಪರಿಣಾಮ ನನ್ನ ಬಟ್ಟೆಯೆಲ್ಲ ಒದ್ದೆಯಾಯಿತು. ಸುಮಾರು ಒಂದು ಗಂಟೆ ಮಳೆ ಸುರಿಯಿತು. ಹಾಗಾಗಿ, ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಸಂಪೂರ್ಣ ಚಳಿಯ ವಾತಾವರಣ ಇತ್ತು”

ಇಂದು (ಭಾನುವಾರ) ಮಧ್ಯಾಹ್ನ 12 ಗಂಟೆಯವರೆಗೆ ಅದೇ ಜಾಗದಲ್ಲಿ ನಾನು ಕಾದೆ. ನಂತರ ಇನ್ನೂ ಕಾದರೆ ಆಗುವುದಿಲ್ಲ ಎಂದು ಬೆಟ್ಟದ ತುದಿಯತ್ತ ನಡೆಯಲು ಪ್ರಾರಂಭಿಸಿದೆ. ಈ ವೇಳೆ ನನಗೆ ಸ್ಥಳೀಯರು ಸಿಕ್ಕಿದರು. ದಾರಿ ತಪ್ಪಿದ ದಿನದಿಂದ ಸ್ಥಳೀಯರು ಸಿಗುವವರೆಗೆ ನಾನು ಆಗಾಗ ಕೂಗುತ್ತಿದೆ. ಯಾರಾದರು ಕೇಳಿಸಿಕೊಂಡಾರು ಎಂಬ ಭರವಸೆ ನನಗಿತ್ತು. ಇಂದು ಬೆಟ್ಟದ ತುದಿಯ ಭಾಗಕ್ಕೆ ಸ್ವಲ್ಪ ಮೇಲಕ್ಕೇರಿ ಮರವೊಂದರ ಬುಡದಲ್ಲಿ ಕುಳಿತಾಗ ಯಾರದ್ದೋ ಶಬ್ದ ಕೇಳಿತು. ನಾನು ಕೂಗುವಾಗ ಆ ಕಡೆಯಿಂದ ಪ್ರತಿಕ್ರಿಯೆ ಬರುತ್ತಿತ್ತು. ನನ್ನ ಕೂಗು ಕೇಳುವಾಗ ಇವರು (ಸ್ಥಳೀಯರು) ಸುಮಾರು 3-4 ಕಿ.ಮೀ ದೂರದಲ್ಲಿದ್ದರು. ನಂತರ ತಕ್ಷಣ ಅವರು ನನ್ನ ಬಳಿ ತಲುಪಿದರು” ಎಂದು ತಿಳಿಸಿದ್ದಾರೆ.

“ನನ್ನ ಬಳಿ ಆಹಾರ ಏನು ಇರಲಿಲ್ಲ. ಚಾರಣಕ್ಕೆ ಹೋಗುವಾಗ ಕೊಂಡೊಯ್ದ ಅರ್ಧ ಲೀಟರ್ ನೀರಿನ ಬಾಟಲಿ ಮಾತ್ರ ಇತ್ತು. ದಿನಕ್ಕೆ ಮೂರು ಲೀಟರ್ ನೀರು ಕುಡಿಯುತ್ತಿದ್ದೆ. ನಾನಿದ್ದ ಜಾಗ ಆನೆ ಇರುವ ಪ್ರದೇಶ ಎಂದು ಅನಿಸುತ್ತದೆ. ನನಗೆ ಭಯ ಆಗಿರಲಿಲ್ಲ, ಏಕೆ ಭಯ ಆಗಿಲ್ಲವೋ ನನಗೇ ಗೊತ್ತಿಲ್ಲ” ಎಂದು ಶರಣ್ಯ ಹೇಳಿದ್ದಾರೆ.

“ನಿಮ್ಮ ಬಳಿ ಗೈಡ್ ಅಥವಾ ಮ್ಯಾಪ್ ಏನಾದರು ಇತ್ತ?” ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶರಣ್ಯ,”ನಾವು ಸಣ್ಣದೊಂದು ಚಾರಣಕ್ಕೆ ಪ್ಲ್ಯಾನ್ ಮಾಡಿದ್ದೆವು. ಹಾಗಾಗಿ, ಮೊಬೈಲ್, ಕ್ಯಾಮರಾ ಮತ್ತು ನೀರಿನ ಬಾಟಲಿ ಮಾತ್ರ ಇತ್ತು” ಎಂದಿದ್ದಾರೆ.

ಶರಣ್ಯ ಅವರನ್ನು ಮೊದಲು ಕಂಡ ಸ್ಥಳೀಯರು ಮಾತನಾಡಿ, “ನಮಗೆ ಯಾರೋ ಕೂಗುವುದು ಕೇಳಿಸಿತು. ನಾವು ಅದಕ್ಕೆ ಲಕ್ಷ್ಯವಾಗಿಸಿ ಹೋದೆವು ಎಂದಿದ್ದಾರೆ. ಶರಣ್ಯ ಇದ್ದ ಜಾಗದ ಬಗ್ಗೆ ಮಾತನಾಡಿದ ಸ್ಥಳೀಯರು, “ಅದು ಯಾರೂ ಉಳಿದುಕೊಳ್ಳುವ ಸ್ಥಳವಲ್ಲ. ಅಲ್ಲಿಗೆ ಯಾರೂ ಹೋಗುವುದಿಲ್ಲ” ಎಂದು ತಿಳಿಸಿದ್ದಾರೆ.

ಶರಣ್ಯ ಮನೋಸ್ಥರ್ಯಕ್ಕೆ ಮೆಚ್ಚುಗೆ

ದಟ್ಟ ಅರಣ್ಯದೊಳಗೆ ಮೂರು ದಿನಗಳನ್ನು ಕಳೆದ ಶರಣ್ಯ ಆರೋಗ್ಯವಾಗಿ ಪತ್ತೆಯಾಗಿದ್ದಾರೆ. ಕಾಡಿನಿಂದ ಹೊರ ಬಂದ ಬಳಿಕ ಅವರು ಮಾಧ್ಯಮಗಳ ಮುಂದೆ ಲವಲವಿಕೆಯಿಂದ ಮಾತನಾಡಿದ್ದಾರೆ. ಕಾಡಿನಲ್ಲಿ ಬಾಕಿಯಾದ ಬಗ್ಗೆ ಅವರು ಯಾವುದೇ ಭಯವನ್ನು ವ್ಯಕ್ತಪಡಿಸಿಲ್ಲ. ಇದನ್ನು ಗಮನಿಸಿದ ಸಾರ್ವಜನಿಕರು ಅಥವಾ ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ವೀಕ್ಷಕರು ಮತ್ತು ಬಳಕೆದಾರರು ಶರಣ್ಯಳ ಮನೋಸ್ಥೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಶರಣ್ಯ ಸುರಕ್ಷಿತವಾಗಿ ಮನೆಗ ಮರಳಿದ್ದಾರೆ.

ತಡಿಯಂಡಮೋಳ್ ಚಾರಣ

ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಳ್ ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಗ್ರಾಮದ ಸಮೀಪದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1,748 ಮೀಟರ್ ಎತ್ತರವಿದೆ. ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುರುವ ಈ ಬೆಟ್ಟ, ಚಾರಣಿಗರ ನೆಚ್ಚಿನ ತಾಣವಾಗಿದೆ.

ತಡಿಯಂಡಮೋಳ್ ಚಾರಣವು ಕಕ್ಕಬ್ಬೆಯ ಅರಮನೆ ಸ್ಟಾಪ್‌ನಿಂದ ಪ್ರಾರಂಭವಾಗುತ್ತದೆ. ಇಲ್ಲಿಂದ ಶಿಖರ ತಲುಪಲು ಸುಮಾರು 6-8 ಕಿ.ಮೀ ನಡೆಯಬೇಕಾಗುತ್ತದೆ. ಬೆಟ್ಟದ ಬುಡದಲ್ಲಿರುವ ಐತಿಹಾಸಿಕ ನಾಲ್ಕುನಾಡು ಅರಮನೆ ಮತ್ತು ಶಿಖರದ ಮೇಲಿನಿಂದ ಕಾಣುವ ಮೋಡಗಳ ಸುಂದರ ನೋಟ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗೆ ಇಲ್ಲಿನ ಹವಾಮಾನವು ಚಾರಣಕ್ಕೆ ಅತ್ಯಂತ ಪೂರಕವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...