Homeಚಳವಳಿಅಂಬೇಡ್ಕರ್ ಜನ್ಮದಿನ ವಿಶೇ‍ಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

ಅಂಬೇಡ್ಕರ್ ಜನ್ಮದಿನ ವಿಶೇ‍ಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

ಭಾರತದ ಪ್ರತಿಯೊಂದು ಶೋಷಿತ ಸಮುದಾಯದ ಹಕ್ಕುಗಳ ಬಗ್ಗೆಯೂ ಇಷ್ಟೊಂದು ಕಳಕಳಿವಹಿಸಿ ಚಿಂತಿಸಿದ ಮತ್ತು ಹೋರಾಡಿದ ಇನ್ನೊಂದು ಜೀವ ಈ ದೇಶದಲ್ಲಿ ಹುಟ್ಟಿರಲಿಕ್ಕಿಲ್ಲ....

- Advertisement -
- Advertisement -

ಸುದೀರ್ಘ ಕಾಲ ವಿಸ್ಮೃತಿಯೇ ತಾವಾಗಿಹೋಗಿದ್ದ ಈ ದೇಶದ ದೊಡ್ಡ ಸಂಖ್ಯೆಯ ಶೋಷಿತ ಸಮುದಾಯದ ಎದೆಗಳಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿ, ಅರಿವಿನ ದೀಪ ಮತ್ತು ಸಂಘಟನೆಯ ಶಕ್ತಿಗಳನ್ನು ಕೈಗಿತ್ತಿದ್ದು ಬಾಬಾಸಾಹೇಬರು. ಆ ಶಕ್ತಿಗಳೊಂದಿಗೆ ಮುಂದಿನ ದಾರಿ ಹುಡುಕಿಕೊಳ್ಳಿರೆಂದು ಬೀಳ್ಕೊಂಡ ಅದಮ್ಯ ಚೇತನ ಡಾ. ಅಂಬೇಡ್ಕರ್ ಅವರ ಮತ್ತೊಂದು ಜಯಂತಿಯ ಬೆಳಕಿನಲ್ಲಿ ಕೆಲವು ಸಂಗತಿಗಳನ್ನು ದಾಖಲಿಸಬೇಕೆನಿಸಿತು.

ಸ್ವಲ್ಪ ಸಮಯದ ಹಿಂದೆ ಅಂಬೇಡ್ಕರ್ ಪರಿಭಾವಿಸಿದ ಭಾರತದ ಬಗ್ಗೆ ಮಾತನಾಡಲಿಕ್ಕಾಗಿ ಟಿಪ್ಪಣಿ ಮಾಡಿಕೊಳ್ಳುತ್ತಾ, ಅವರ ಕೆಲವು ಬರಹಗಳನ್ನು ಮತ್ತೊಮ್ಮೆ ತಿರುವಿ ಹಾಕುತ್ತಿದ್ದಾಗ, ಭಾರತದ ಪ್ರತಿಯೊಂದು ಶೋಷಿತ ಸಮುದಾಯದ ಹಕ್ಕುಗಳ ಬಗ್ಗೆಯೂ ಇಷ್ಟೊಂದು ಕಳಕಳಿವಹಿಸಿ ಚಿಂತಿಸಿದ ಮತ್ತು ಹೋರಾಡಿದ ಇನ್ನೊಂದು ಜೀವ ಈ ದೇಶದಲ್ಲಿ ಹುಟ್ಟಿರಲಿಕ್ಕಿಲ್ಲ ಎನಿಸಿತ್ತು. ಅನೇಕ ಮಹಾನುಭಾವರು ಮತ್ತು ಮಹಾನುಭಾವೆಯರು ಇತಿಹಾಸದಲ್ಲಿ ತಮ್ಮ ಕೈಚಾಚಲು ಸಾಧ್ಯವಾದಷ್ಟು ಅಗಲಕ್ಕೂ ಮಾನವತೆಯ ತಂಪನ್ನು ಹರಡಲು ನೋಡಿದವರು ನಮ್ಮ ಇತಿಹಾಸದಲ್ಲಿದ್ದಾರೆ; ಆದರೆ ಹೀಗೆ ಎಲ್ಲ ಕೋನಗಳಿಂದ, ಎಲ್ಲ ದಿಕ್ಕುಗಳಿಂದಲೂ ಆಲೋಚಿಸಿದವರು? ಜಾತಿಯಿಂದಲೋ, ವರ್ಗದಿಂದಲೋ, ಲಿಂಗದಿಂದಲೋ ಅಥವಾ ಇನ್ಯಾವುದೇ ಮಾನದಂಡವನ್ನು ತೆಗದುಕೊಂಡು ನೋಡಿದಾಗಲೂ ಕಡುಹಿಂದುಳಿದವರೆಂದು ಕಂಡುಬಂದ ಎಲ್ಲ ವರ್ಗ-ಸಮುದಾಯಗಳನ್ನು ಅಂಬೇಡ್ಕರ್ ಅವರು ತನ್ನ ಮಡಿಲಿಗೆಳೆದುಕೊಂಡಿದ್ದಾರೆ. ಭವಿಷ್ಯದ ಭಾರತದಲ್ಲಿ ಅಂತಹ ಎಲ್ಲರ ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕುಗಳು ಖಾತ್ರಿಯಾಗಬೇಕೆಂದು ಅವಿರತವಾಗಿ ಇನ್ನಿಲ್ಲದಂತೆ ಶ್ರಮಿಸಿದ್ದಾರೆ. ಅವರು ಬಯಸಿದ್ದು:

• ಹುಟ್ಟಿನ ಆಧಾರದಲ್ಲಿ ತಾರತಮ್ಯ ಮಾಡದಂತಹ ಸಾಮಾಜಿಕ ವ್ಯವಸ್ಥೆ
• ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶಗಳು, ಸವಲತ್ತುಗಳು, ನ್ಯಾಯ ಮತ್ತು ಹಕ್ಕುಗಳು
• ಸರ್ಕಾರದ ಕಡೆಯಿಂದ ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಅಗತ್ಯವಿರುವಂತಹ ನೀತಿಗಳು- ಭಾರತದ ಸಮಾಜದ ಮೂಲಸ್ವರೂಪವನ್ನು ಬದಲಿಸುವ ಶಕ್ತಿ ಹೊಂದಿರುವ ಭೂಮಿಯ ಹಂಚಿಕೆ ಮತ್ತು ಸಹಕಾರಿ ಬೇಸಾಯ ಪದ್ಧತಿ, ಉದ್ಯೋಗಗಳಲ್ಲಿ ಅತ್ಯಂತ ಶೋಷಿತ ಸಮುದಾಯಕ್ಕೆ ಮೀಸಲಾತಿ, 14 ವರ್ಷದವರೆಗೆ ಉಚಿತ, ಕಡ್ಡಾಯ ಶಿಕ್ಷಣ, ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಹಕ್ಕುಗಳು…………. ಇಂತಹ ಇನ್ನೂ ಎಷ್ಟೋ ಕ್ರಮಗಳು
• ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವ ಮತ್ತು ಘನತೆಯಿಂದ ಬದುಕಲು ಬೇಕಿರುವಂತಹ ಮೂಲಭೂತ ಹಕ್ಕುಗಳು
• ಎಲ್ಲ ಸಮುದಾಯಗಳನ್ನು ಪ್ರಾತಿನಿಧಿಕವಾಗಿ ಒಳಗೊಳ್ಳಬಲ್ಲ ಚುನಾವಣಾ ವ್ಯವಸ್ಥೆ
• ಜನರ ಮನಸ್ಸಿನಾಳದಲ್ಲಿ ಬೇರೂರಿರುವ ಜಾತಿ-ಅಸ್ಪೃಶ್ಯತೆಯ ವಿಷವನ್ನು ತೊಳೆದು ನಿರ್ಮಲಗೊಳಿಸಲು ಬೇಕಿರುವ, ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಒಳದನಿಯನ್ನು ಜಾಗೃತಗೊಳಿಸಿ ನಿಜವಾದ ಮನುಷ್ಯರನ್ನಾಗಿಸಬಲ್ಲ ಆಧ್ಯಾತ್ಮಿಕ (ಧರ್ಮ) ಸಂರಚನೆ

ಇಂತಹ ರಚನೆಗಳನ್ನು ರೂಪಿಸಿಕೊಂಡ ಭಾರತ ಮಾತ್ರ ಸದೃಢವಾಗಿಯೂ, ಸಮಾನವಾಗಿಯೂ ಮತ್ತು ನಿಜಕ್ಕೂ ಆಧುನಿಕವಾಗಿಯೂ ಬೆಳೆದು ಅಭಿವೃದ್ಧಿ ಹೊಂದಲು ಸಾಧ್ಯ; ಹಾಗಿಲ್ಲವಾದರೆ ಭಾರತವನ್ನು ಸೋಲಿಸಲು ಹೊರಗಿನ ಯಾವ ಶತ್ರುವೂ ಬೇಕಿಲ್ಲ, ಇಲ್ಲಿರುವ ಶೋಷಣೆ, ತಾರತಮ್ಯ, ಅಸಮಾನತೆಗಳೇ ಸಾಕು ಈ ದೇಶವನ್ನು ಹಿಂದೆ ತಳ್ಳಲು ಎಂಬ ಬಗ್ಗೆ ಅವರಿಗೆ ಖಚಿತವಾದ ಅಭಿಪ್ರಾಯವಿತ್ತು.

ಆದ್ದರಿಂದಲೇ, ಸಂವಿಧಾನದಲ್ಲಾಗಲೀ, ಅದಕ್ಕೂ ಮೊದಲೇ ಬರೆದಿದ್ದ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ ಎಂಬ ತಮ್ಮ ದೀರ್ಘ ಪ್ರಬಂಧದಲ್ಲಾಗಲೀ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಮಾನತೆಗೆ ಅಂಬೇಡ್ಕರ್ ಅವರು ಅಷ್ಟು ಪ್ರಾಮುಖ್ಯತೆ ನೀಡಿದ್ದರು.

ಆದರೆ, ಸಮಾನವಾದ, ಮಾನವತೆಯ ಮೇಲೆ ನಿಂತಿರುವ ದೇಶವೊಂದನ್ನು ಕನಸುತ್ತಾ ಅದಕ್ಕಾಗಿ ಹೋರಾಟ ಮತ್ತು ಶಾಸನಾತ್ಮಕ ಪ್ರಯತ್ನಗಳಲ್ಲಿ ತೊಡಗಿರುವಾಗಲೇ, ಅವರಿಗೆ ತಾನು ಪರಿಭಾವಿಸುತ್ತಿರುವ ಭಾರತ ವಾಸ್ತವದಲ್ಲಿ ಸಾಕಾರಗೊಳ್ಳುತ್ತಿಲ್ಲ ಎಂಬ ಆತಂಕ ಮನದಾಳದಲ್ಲಿ ಮನೆ ಮಾಡಿತ್ತೇ? ತನ್ನ ಕಣ್ಣೆದುರು ಸ್ವಾತಂತ್ರ್ಯಾನಂತರ ಕಟ್ಟಲ್ಪಡುತ್ತಿದ್ದದ್ದು ತಾನು ಬಯಸಿದ್ದ ದೇಶವಲ್ಲ ಎಂದು ಅವರು ಪರಿಭಾವಿಸಿದ್ದರೇ? ಈ ಪ್ರಶ್ನೆ ಹುಟ್ಟಿ, ಖಚಿತ ಉತ್ತರವಿಲ್ಲದೆ ಹಾಗೆಯೇ ಉಳಿದುಬಿಡುತ್ತದೆ!

ಅಂದರೆ, ಅಂಬೇಡ್ಕರ್ ಅವರು ಆತಂಕದೊಂದಿಗೆ ಮುಂದೆ ಏನಾಗಲಿದೆಯೆಂದು ಊಹಿಸಿದ್ದರೋ ಅದೇ ಭಾರತ ಇಂದು ನಮ್ಮ ಕಣ್ಣಮುಂದಿದೆಯೇ?

“ಸಮಾನತೆಯಿಲ್ಲದ ಸ್ವಾತಂತ್ರ್ಯ ಅರ್ಥಹೀನ” ಎಂದು ಅಂಬೇಡ್ಕರ್ ಅವರು ಹೇಳಿದ್ದಂತೆಯೇ, ಪ್ರಜಾತಂತ್ರವೆಂದು ಕರೆಯಲು ಕಷ್ಟವಾಗುವಂತಹ ಸಮಾಜವೊಂದರಲ್ಲಿ ಬದುಕುತ್ತಿದ್ದೇವೆ. ಅದರಲ್ಲೂ ಈ ಒಂದೆರಡು ದಶಕಗಳಂತೂ, ಎಲ್ಲ ಬಗೆಯ ಕಾನೂನುಗಳನ್ನು, ನೀತಿ-ನಿಯಮಗಳನ್ನೂ ಗಾಳಿಗೆ ತೂರುತ್ತಾ, ತಮ್ಮ ಅಜೆಂಡಾದಲ್ಲಿದ್ದ ಹಿಂದಿನ ಶೋಷಣೆ, ದಬ್ಬಾಳಿಕೆ, ದಮನಗಳ ಸಾಮಾಜಿಕ ವ್ಯವಸ್ಥೆಯನ್ನೇ ಪುನರ್ ಸ್ಥಾಪಿಸಲು ಬಯಸುವ ಮನುವಾದಿ ಬಿಜೆಪಿಯ ಕಪಿಮುಷ್ಟಿಯೊಳಕ್ಕೆ ಈ ದೇಶ ಸಿಲುಕುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಈ ಐದು ವರ್ಷಗಳು, ಸುಮಾರು ನೂರು ವರ್ಷಗಳ ನಡಿಗೆಯ ಗುರುತುಗಳನ್ನು ಅಳಿಸಿಹಾಕಿ ದೇಶವನ್ನು ಹಿಂದಕ್ಕೆಳೆದಿದೆ. ಎರಡು ವಿಶ್ವಯುದ್ಧಗಳಿಗಿಂತ ಮುಂಚೆ ಬದುಕಿದ್ದ ಸಮಾಜದ ಯುವಜನರು ಮುಗ್ಧವಾಗಿ ಯೋಚಿಸಬಹುದಾಗಿದ್ದಂತೆ, ಇಂದಿನ ತಲೆಮಾರಿಗೆ ಯುದ್ಧವೆಂಬುದು ಆತಂಕವನ್ನಲ್ಲ ಬದಲಿಗೆ ಸಂಭ್ರಮೋತ್ಸಾಹವನ್ನು ತರುತ್ತಿದೆ. ಇನ್ನೊಂದು ಸಮುದಾಯವನ್ನು ದಮನಿಸಿ, ತಲೆ ಎತ್ತಲಾಗದಂತೆ ಮುಗಿಸಿಬಿಡುವುದೆಂದರೆ, ವರ್ತಮಾನದ ಸಾಮಾನ್ಯ ಜನರಿಗೆ ತಮ್ಮ ಸ್ವಾಭಾವಿಕ ಹಕ್ಕುಗಳ ಮರುಸ್ಥಾಪನೆಯಂತೆ ಕಾಣುತ್ತಿದೆ. ಇತರರ ನಂಬಿಕೆಗಳನ್ನು ಗೌರವಿಸುವುದು ಬಲಹೀನತೆಯಾಗಿಯೂ, ಪ್ರಶ್ನಿಸುವುದು ಮತ್ತು ಟೀಕಿಸುವುದು ದೇಶದ್ರೋಹವಾಗಿಯೂ ಬಿಂಬಿಸಲ್ಪಟ್ಟಿದೆ.

ತಮ್ಮ ಕುಟುಂಬದ ಯುವಜನರಿಗೆ ಉದ್ಯೋಗ ಸಿಗದಿರುವುದು ಮೀಸಲಾತಿ ನೀತಿಯ ‘ಹುನ್ನಾರ’ವಾಗಿ (ಸ್ವತಃ ತಾವೇ ಮೀಸಲಾತಿಯ ಪರಿಧಿಯೊಳಗಡೆಯೇ ಇದ್ದರೂ ಕೂಡಾ) ವಿವರಿಸಲ್ಪಟ್ಟಿದೆಯೇ ಹೊರತು, ಸರ್ಕಾರದ ಕುಟಿಲ ನೀತಿಯ ಪರಿಣಾಮವೆಂದಲ್ಲ. ಇಳಿಯುತ್ತಿರುವ ತಲಾ ಆದಾಯ, ಏರುತ್ತಿರುವ ಬೆಲೆಗಳು ಆ ಕ್ಷಣಕ್ಕೆ ಚಿಂತೆ ಮೂಡಿಸಿದರೂ, ಅವುಗಳಿಗೂ ಆಳುತ್ತಿರುವ ಸರ್ಕಾರಕ್ಕೂ ಸಂಬಂಧವಿದೆಯೆಂಬ ಅರಿವಿನ ತಂತುಗಳು ಕಡಿದುಹೋಗಿವೆ. ‘20ನೇ ಶತಮಾನದ ಫ್ಯಾಸಿಸಂ ಕಾಲದ ಟಿವಿ ಆಂಕರ್’ ಗೋಬೆಲ್ಸ್‌ನ ಸಿದ್ಧಾಂತವನ್ನೇ ನಂಬಿ ಬೆಳೆಯುತ್ತಿರುವ ಇಂದಿನ ಮಾಧ್ಯಮಗಳ ಗಿಳಿಪಾಠವೇ ಇಂದು ಜಗತ್ತಿನ ಆತ್ಯಂತಿಕ ಸತ್ಯವಾಗಿ ಹೋಗಿರುವ ವಿಪರ್ಯಾಸವನ್ನು ನಮ್ಮ ಶುಷ್ಕ ಕಣ್ಣುಗಳು ನೋಡುತ್ತಿವೆ.

ಮತ್ತೊಮ್ಮೆ ಶೋಷಿತ ಜಗತ್ತು ವಿಸ್ಮೃತಿಯ ವಿಷದೊಳಕ್ಕೆ ಜಾರಿಸಲ್ಪಡುತ್ತಿದೆ……….. ಜಾರುವಿಕೆ ವೇಗವನ್ನು ತಡೆದು ನಿಲ್ಲಿಸಲು ಶಕ್ತಿ ಸಾಲದೆ ನೊಂದ ಕಾಲುಗಳು ಮತ್ತು ಮನಸ್ಸಿನೊಂದಿಗೆ ಚಳುವಳಿಗಳು ನಿಂತಂತಿದೆ.
ನನ್ನ ಪ್ರಕಾರ, ಅಂಬೇಡ್ಕರ್ ಪರಿಭಾವಿಸಿದ್ದು ಒಂದು ಭಾರತವನ್ನಲ್ಲ!! ಅವರ ದಾರ್ಶನಿಕ ಕಣ್ಣುಗಳ ಎದುರಿಗಿದ್ದದ್ದು ಎರಡು ಭಾರತಗಳು; ತಮ್ಮ ಹಕ್ಕುಗಳಿಗಾಗಿ ಎಚ್ಚರವಾಗಿದ್ದು ಎಲ್ಲ ಶೋಷಿತ, ದಮನಿತ ಸಮುದಾಯಗಳು ಸೇರಿ ಹೋರಾಡಿದ್ದೇ ಆದಲ್ಲಿ ಮೂಡಿಬರಬಹುದಾಗಿದ್ದ ಸಮಾನ ಭಾರತ ಮತ್ತು ಹಾಗಿಲ್ಲದೆ ಮತ್ತೆ ಮೋಸದ ಜಾಲದೊಳಕ್ಕೆ ಬಿದ್ದು ತಮ್ಮ ಐಕ್ಯತೆಯನ್ನು ಒಡೆದುಕೊಂಡು ಜನಸಾಮಾನ್ಯರು ದಿಕ್ಕುತಪ್ಪಿದ್ದೇ ಆದಲ್ಲಿ ಮೂಡಬಹುದಾಗಿದ್ದ ‘ಮಸಾಣ’ ಭಾರತ!! ಇಂದು ನಮ್ಮ ಪಯಣ ವೇಗವಾಗಿ ಸಾಗುತ್ತಿರುವುದು ಈ ಎರಡನೇ ಭಾರತದೆಡೆಗೆ………………..

ಅಂಬೇಡ್ಕರ್ ಅವರೇ ಈ ಅರಿವು ರಹಿತ ಸ್ಥಿತಿಯಿಂದ ಹೊರಬರಲು ಕೆಲವು ಹತಾರಗಳನ್ನೂ ನೀಡಿದ್ದಾರೆ. ಚಿಂತನೆಗಳಿಂದ ನಾವು ಪಡೆಯಬೇಲಾದ ಅನೇಕ ಸಂಗತಿಗಳಿದ್ದರೂ, ಬಹಳ ಮುಖ್ಯವಾಗಿ, ಸದಾ ಅರಿವು, ಐಕ್ಯತೆ ಮತ್ತು ಪ್ರಯತ್ನಶೀಲತೆಯನ್ನು ಉಳಿಸಿಕೊಂಡಿರಬೇಕೆಂಬ ಅವರ ಮೂಲಮಂತ್ರಗಳು; ಅವರ ಬದುಕು ಮತ್ತು ಆಚರಣೆಯಿಂದ ಕಲಿಯಬೇಕಾದ್ದು, ತನ್ನ ಮೂಲ ಆಶಯಕ್ಕಾಗಿ ಎಂದೂ ದಣಿವರಿಯದ ದುಡಿಮೆ, ನಂಬಿದ ತತ್ವಕ್ಕಾಗಿ ಭಾರೀ ಪ್ರಯೋಗಗಳಿಗಿಳಿಯುವ ದಿಟ್ಟತನ ಮತ್ತು ಆಶಾವಾದ.

ಇಂದು, ಈ ಕಾಲ ನಮ್ಮೆದುರು ದೀರ್ಘ ನಡಿಗೆಯ ಸವಾಲನ್ನು ಇರಿಸಿದೆ. ಸವಾಲನ್ನು ಸ್ವೀಕರಿಸಿ ಮುನ್ನಡೆಯಲು ಅಂಬೇಡ್ಕರ್ ಎಂಬ ಚೇತನದಿಂದ ಸ್ಪೂರ್ತಿ ಮತ್ತು ವಿಶ್ವಾಸವನ್ನು ಕಡ ಪಡೆದುಕೊಳ್ಳೋಣ; ಉತ್ತಮ ನಾಳೆಗಳನ್ನು ಕಟ್ಟಿಕೊಂಡು ಮರಳಿಸುವ ವಾಗ್ದಾನದೊಂದಿಗೆ!

ಆತಂಕದ ತೂಗುಯ್ಯಾಲೆಯಲ್ಲಿರುವ ಎಲ್ಲ ಜೀವಪರ ಮನಸ್ಸುಗಳಿಗೆ ಅಂಬೇಡ್ಕರ್ ದಿನಾಚರಣೆಯ ಆಶಾವಾದಿ ಶುಭಾಶಯಗಳು.

  • ಮಲ್ಲಿಗೆ ಸಿರಿಮನೆ

(ಸಾಮಾಜಿಕ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ)


ಇದನ್ನೂ ಓದಿ:  ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನಕ್ ಚಂದ್ ರತ್ತುರವರ ’ಬಾಬಾ ಸಾಹೇಬರ ಕೊನೆ ದಿನಗಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....