Homeಕರ್ನಾಟಕಬಾಬಾ ಸಾಹೇಬರ ರಥವನ್ನು ಮುನ್ನಡೆಸಿದ ನಾಯಕ ಸಿ.ಎಂ ಆರ್ಮುಗಂ

ಬಾಬಾ ಸಾಹೇಬರ ರಥವನ್ನು ಮುನ್ನಡೆಸಿದ ನಾಯಕ ಸಿ.ಎಂ ಆರ್ಮುಗಂ

- Advertisement -
- Advertisement -

 

 

 

| ರಮೇಶ್ ಸಂಕ್ರಾಂತಿ |

ಕೆ.ಜಿ.ಎಫ್ ನಲ್ಲಿ ಗಣಿ ಕಾರ್ಮಿಕರಿಗಾಗಿ ನಿರ್ಮಿಸಿದ್ದ ವಸತಿ ಸಮುಚ್ಚಯಗಳಲ್ಲಿ, ಮಾರಿಕುಪ್ಪಂ ಕ್ವಾಟ್ರ್ರಸ್ ಸಹಾ ಒಂದು. ಇಲ್ಲಿ ವಾಸವಾಗಿದ್ದ ಮುನಿಸಾಮಿ ಹಾಗೂ ಚಿನ್ನತಾಯಿ ದಂಪತಿಗಳಿಗೆ ಒಟ್ಟು ಐದು ಮಕ್ಕಳು. ನಮ್ಮ ನಾಯಕ ಆರ್ಮುಗಂ ಜನಿಸಿದ್ದು ದಿನಾಂಕ 15 ಜನವರಿ 1925ರಲ್ಲಿ. ಮುನಿಸಾಮಿ ಹಾಗೂ ಚಿನ್ನತಾಯಿ ದಂಪತಿಗಳಿಗೆ ಹುಟ್ಟಿದ ಐದು ಮಕ್ಕಳಲ್ಲಿ ಆರ್ಮುಗಂ ಮೂರನೇಯವರು. ತುಂಬು ಕುಟುಂಬದ ಪ್ರೀತಿ ಆದರಗಳು ಮಗುವಿನ ಮೇಲಾದವು. ಈ ಪ್ರೀತಿಯೇ ಮುಂದೆ ದೇಶದ ಅಸ್ಪೃಷ್ಯ ಜನಾಂಗದ ಕಣ್ಣೀರು ಒರೆಸುವ ನಾಯಕನಾಗಿ ಬೆಳೆಯಲು ಸಹಕಾರಿಯಾಯಿತು.

ಆರ್ಮುಗಂ ಡಿಪ್ಲೋಮೊ ಇನ್-ಸಿವಿಲ್ ಕಲಿತು, ಬ್ರೀಟೀಷ್ ಸರ್ಕಾರದ ಅಧೀನದಲ್ಲಿದ್ದ ಜಾನ್ ಟೇಲರ್ ಕಂಪನಿಯ ಸ್ಯಾನಿಟರಿ ಬೋರ್ಡ್‍ನಲ್ಲಿ ಕೆಲಸಕ್ಕೆ ಸೇರಿದರು. ಬ್ರೀಟೀಷರ ಸಂಪರ್ಕದಲ್ಲಿದ್ದರಿಂದ ಇಂಗ್ಲೀಷನ್ನು ಸರಾಗವಾಗಿ ಮಾತನಾಡುತ್ತಿದ್ದ ಈ ಹೊತ್ತಿಗಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಹೋರಾಟ ದೇಶದ ಮೂಲೆ ಮೂಲೆಗೂ ತಲುಪಿತ್ತು. ಅದೇ ರೀತಿ ಕೆ.ಜಿ.ಎಫ್‍ನ ಕಾರ್ಮಿಕರಿಗೂ ಬಾಬಾ ಸಾಹೇಬರ ಹೋರಾಟದ ಮಹತ್ವದ ಅರಿವಾಗಿತ್ತು. ಮಾರಿಕುಪ್ಪಂನ ಕ್ವಾಟ್ರ್ರಸ್‍ನಲ್ಲಿ ವಾಸವಾಗಿದ್ದವರು ಶೇ 95% ಜನ ಎಸ್ಸಿಗಳೇ ಆಗಿದ್ದರಿಂದ, ನಾವು ಶೋಷಿತರು, ಅವಕಾಶ ವಂಚಿತರು ಮತ್ತು ನಾವೆಲ್ಲರು ಒಂದು ಎನ್ನುವ ಅರಿವು ಮೂಡಿತ್ತು. ಸಿ.ಎಂ.ಆರ್ಮುಗಂರವರು ಕೆ.ಜಿ.ಎಫ್.ನ ಕಾರ್ಮಿಕರ ನಿಜವಾದ ನಾಯಕರೂ, ಬಾಬಾ ಸಾಹೇಬರ ಕಟ್ಟಾ ಅನುಯಾಯಿಯಾಗಿ ತಮ್ಮ ಕೊನೆ ಉಸಿರು ಇರುವವರೆಗೂ I am massenger of baba saheb Ambedkar ಎಂದು ಹೇಳುತ್ತಿದ್ದರು.

ಬಹಳ ಹಿಂದೆಯೇ ಎಂ.ಸಿ. ದೊರೆ ಎಂಬುವರು ಕೆ.ಜಿ.ಎಫ್‍ನಲ್ಲಿ ಮೈಸೂರು ಸಂಸ್ಥಾನ ಎಸ್ಸಿ/ಎಸ್ಟಿ ಫಡರೇಷನ್ ಸ್ಥಾಪಿಸಿ, ಒಂದು ಸಮ್ಮೇಳನವನ್ನೂ ಏರ್ಪಡಿಸಿದ್ದರು. ಈ ಎಂ.ಸಿ.ದೊರೈಯವರು ಆಲ್ ಇಂಡಿಯಾ ಎಸ್ಸಿ/ಎಸ್ಟಿ ಫಡರೇಷನ್ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರು ರಟ್ಟಮಲೈ ಶ್ರೀನಿವಾಸ್‍ರವರ ಅನುಯಾಯಿ. ಬಾಬಾಸಾಹೇಬ್‍ಅಂಬೇಡ್ಕರ್ ರವರ ಜೋತೆ ದುಂಡು ಮೇಜಿನ ಸಭೆಗೆ ಇಂಗ್ಲೆಂಡಿಗೆ ಹೋಗಿದ್ದವರು ರಟ್ಟಮಲೈ ಶ್ರೀನಿವಾಸ್. ಇವರು ಅಯೋಧ್ಯದಾಸ್ ಪಂಡಿತ್‍ರ ಬಾಮೈದ ಕೂಡಾ ಹೌದು. ಇವರು ಅನುಯಾಯಿಯಾಗಿದ್ದ ಎಂ.ಸಿ.ದೊರೈಯವರು ಬಾಬಾ ಸಾಹೇಬರು ಕೆ.ಜಿ.ಎಫ್‍ಗೆ ಬರಬೇಕೆಂದು 1940ರಲ್ಲೇ ಪತ್ರ ಬರೆದಿದ್ದರು. ಅಪಾರ ಕೆಲಸಗಳ ಒತ್ತಡದ ನಡುವೆ ಬಾಬಾಸಾಹೇಬ್ ಅಂಬೇಡ್ಕರ್‍ರವರು 1954ರಲ್ಲಿ ಕರ್ನಾಟಕಕ್ಕೆ ಬಂದು ಕೆ.ಜಿ.ಎಫ್‍ಗೆ ಬೇಟಿ ನೀಡಿದರು. ಈ ಹೊತ್ತಿಗಾಗಲೇ ಮೈಸೂರು ರಾಜ್ಯಕ್ಕೆ ಸೇರಿದ ಕೆ.ಜಿ.ಎಫ್‍ನಲ್ಲಿ ಆಲ್ ಇಂಡಿಯಾ ಎಸ್ಸಿ/ಎಸ್ಟಿ ಫಡರೇಷನ್ ಸ್ಥಾಪನೆಗೊಂಡು ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು.

1952ರಲ್ಲಿ ಕೆ.ಜಿ.ಎಫ್ ಶಾಸಕರಾಗಿ ಬಾಬಾ ಸಾಹೇಬರ ನೆರಳಿನಂತೆ ಕೆಲಸ ಮಾಡಿದ ಸಾಮಿದೊರೈಯವರು. ತಮ್ಮ ಅವಧಿ ಮುಗಿಯುವ ಹೊತ್ತಿಗೆ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾದ ಉಪಾಧ್ಯಕ್ಷರಾಗಿ ಆಗಿ ಬಡ್ತಿ ಹೊಂದಿದರು. ಇದರಿಂದ ತೆರವಾಗಿದ್ದ ಸ್ಥಾನ ತುಂಬಬೇಕಾದ ಅನಿವಾರ್ಯತೆ ಏರ್ಪಟ್ಟಿತು. ಇದೇ ಸಮಯದಲ್ಲಿ 1957ರ ಎರಡನೇ ಚುನಾವಣೆಯೂ ಬಂದಿತ್ತು. ಆಗ ಅನಿವಾರ್ಯವಾಗಿ ಸಿ.ಎಂ.ಆರ್ಮುಗಮ್‍ರವರು ಪೂರ್ಣಾವಧಿ ರಾಜಕಾರಣಿಯಾಗಿ ಕಣಕ್ಕಿಳಿದು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂದುಳಿದವರಿಗೆ ಸಣ್ಣ ಸಮಸ್ಯೆಗಳಾಗಿದೆ ಎಂದು ತಿಳಿದರೂ ಸಿ.ಎಂ.ಆರ್ಮುಗಮ್‍ರವರು ಅಲ್ಲಿಗೆ ಹೋಗಿ ಬಾದಿತರ ವಿವರ ಸಂಗ್ರಹಿಸಿ ವಿಧಾನ ಸಭೆಯಲ್ಲಿ ಮಾತನಾಡಿ ಈ ಜನತೆಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ.

ಕರ್ನಾಟಕದ ರಾಜ್ಯದ ರಾಜ್ಯಧಾನಿಯಾಗಿರುವ ಬೆಂಗಳೂರಿನಲ್ಲಿ ಅದೂ ವಿಧಾನಸೌಧದ ಮುಂದೆ ಬಾಬಾಸಾಹೆಬ್ ಅಂಬೇಡ್ಕರ್ ವಿಗ್ರಹವನ್ನು ಸ್ಥಾಪಿಸಿ, ಆ ರಸ್ತೆಗೆ ಅಂಬೇಡ್ಕರ್ ವೀದಿ ಎಂದು ನಾಮಕರಣ ಮಾಡಿಸಿದ್ದು ಸಿ.ಎಂ.ಆರ್ಮುಗಮ್‍ರವರ ಸಾಧನೆಗಳಲ್ಲಿ ಒಂದು. ಈ ಕಾರ್ಯಕ್ರಮಕ್ಕೆ ಪಕ್ಕದ ರಾಜ್ಯದ ಮಂತ್ರಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಬೇಡ್ಕರ್ ದಿನಾಚರಣೆಗೆ ಸರ್ಕಾರಿ ರಜಾ ದಿನವನ್ನು ನಿಗದಿಗೊಳಿಸಲು ಶ್ರಮಿಸಿದವರು ಸಿ.ಎಂ.ಆರ್ಮುಗಮ್‍ರವರು ಎನ್ನುವುದನ್ನು ನಮ್ಮ ಜನ ಮರೆಯಬಾರದು. ಸಿ.ಎಂ.ಆರ್ಮುಗಮ್‍ರವರು ಬಾಬಾ ಸಾಹೆಬರಂತೆ ಬೌದ್ಧ ಧರ್ಮದಲ್ಲಿಯೂ ಅಪಾರವಾದ ನಂಬಿಕೆ ಉಳ್ಳವರಾಗಿದ್ದರು. ಆದ್ದರಿಂದ ಬುದ್ಧಿಸ್ಟ್ ಸೊಸೈಟಿ ಅಫ್ ಇಂಡಿಯಾದ ಸದಸ್ಯರೂ ಆಗಿದ್ದರು ಎನ್ನುವುದು ಉಲ್ಲೇಖನೀಯಾ.

ದೇವರಾಜಅರಸು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಗುಲ್ಬರ್ಗದ ಈ ಭಾಗದಲ್ಲಿ ತೀವ್ರತರವಾದ ಬರಗಾಲ ಎರ್ಪಟ್ಟಿತ್ತು. ಕರ್ನಾಟಕ ಸರ್ಕಾರ ಆರ್ಮುಗಂರವರ ನೇತೃತ್ವದಲ್ಲಿ ಏಕ ಸದಸ್ಯರ ಆಯೋಗವನ್ನು ರಚಿಸಿ, ಅದಕ್ಕೆ ಸಿ.ಎಂ.ಆರ್ಮುಗಮ್ ಕಮಿಟಿ ಎಂದು ನಾಮಕರಣ ಮಾಡಿತು. ಈ ಕಮಿಟಿ ಬೆಳಗಾಂ, ಬೀದರ್, ರಾಯಚೂರು ಮತ್ತು ಬಿಜಾಪುರ ಜಿಲ್ಲೆಗಳ ಪ್ರತಿಯೊಂದು ಹಳ್ಳಿಯನ್ನೂ ಬೇಟಿಮಾಡಿ. ಅಲ್ಲಿನ ಸಮಸ್ಯೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ. ಈ ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ಪರಿಗಣಿಸಿ, ಈ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಸಲಹೆಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಇದು ಕರ್ನಾಟಕ ಅತ್ಯುತ್ತಮ ವರದಿ ಎಂದರೆ ತಪ್ಪಾಗಲಾರದು.

ಉತ್ತಮ ವಾಗ್ಮೀ ಹಾಗೂ ಒಳ್ಳೆಯ ಸಂಸದೀಯ ಪಟುವಾಗಿ ಆರ್ಮುಗಂರವರು ಕಾರ್ಯ ನಿರ್ವಹಿಸಿದ್ದಾರೆ. ಅವರು ಎಂದೂ ಒಂದು ರೂಪಾಯಿ ಹಣವನ್ನೂ ತಮ್ಮ ಜೇಬಿನಲ್ಲಿ ಇಟ್ಟು ಕೊಂಡವರಲ್ಲ. ಕಂಚಿನ ಕಂಠದ ಅವರ ದ್ವನಿ, ಸಿಂಹ ಗರ್ಜನೆಯಂತೆ ಠೇಂಕರಿಸುತ್ತಿತ್ತು. ಇವರು ವಿಧಾನ ಸಭೆಯಲ್ಲಿ ಮಾತನಾಡಲು ಎದ್ದು ನಿಂತರೆ ಸದನವೇ ಮೌನವಹಿಸಿ ಸಿ.ಎಂ.ಆರ್ಮುಗಂರವರ ಬಾಷಣವನ್ನು ಆಲಿಸುತ್ತಿತ್ತು.

ಮುರಾರ್ಜಿ ದೇಸಾಯಿಯವರಿಗೆ ಎಸ್ಸಿ/ಎಸ್ಟಿ ಗಳನ್ನು ಕಂಡರೆ ಆಗುತ್ತಿರಲಿಲ್ಲ ಇವರು ಕೇಂದ್ರದ ಹಣಕಾಸು ಸಚಿವರಾಗಿದ್ದಾಗ ಗೋಲ್ಡ್ ಕಂಟ್ರೋಲ್ ಆಕ್ಟ್‍ನ ಅಡಿಯಲ್ಲಿ ಚಿನ್ನದ ಗಣಿಯನ್ನು ಮುಚ್ಚಬೇಕೆಂದು ಆದೇಶಿಸಿದರು. ಗಣಿಯ ಕೆಲಸವನ್ನೇ ನಂಬಿದ್ದ ಸಾವಿರಾರು ಬೀದಿ ಪಾಲಾಗುತ್ತಿದ್ದರು. ಇದಕ್ಕೆ ಪರ್ಯಾಯ ಕಲ್ಪಿಸಬೇಕೆಂದು ಸಿ.ಎಂ.ಆರ್ಮುಗಮ್‍ರವರು ಕೆಲಸ ಮಾಡಿದರೆ ಅಧಿಕಾರದಲ್ಲಿದ್ದವರು ಅದಕ್ಕೆ ತಡೆ ಒಡ್ಡುತ್ತಿದ್ದರು. ಅದನ್ನೂ ಮೆಟ್ಟಿ ನಿಂತು ಹಗಲಿರುಳು ಎನ್ನದೆ ಕೆಲಸ ಮಾಡಿ ಬಿ.ಇ.ಎಂ.ಎಲ್ (BEML)ಕಾರ್ಖಾನೆಯನ್ನು ಕೆ.ಜಿ.ಎಫ್.ಗೆ ತಂದವರು ಸಿ.ಎಂ.ಆರ್ಮುಗಮ್‍ರವರು. ಕೆಲವು ಜನ ರಾಜಕೀಯ ವಿರೋಧಿಗಳು ಈ ಕೆಲಸವನ್ನು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಈ ಸಂಬಂಧವಾಗಿ RPIನ 500ಜನ ಕಾರ್ಯಕರ್ತರು ಬಿ.ಇ.ಎಂ.ಎಲ್.ನ್ನು ಕೆ.ಜಿ.ಎಫ್.ಗೆ ತರಲು ಒತ್ತಾಯಿಸಿ ಬಂಧನಕ್ಕೆ ಒಳಗಾದ ದಾಖಲೆಗಳಿವೆ. ಮೇಲಾಗಿ ವೈ,ಬಿ.ಚವಾಣ್‍ರವರು ಸಿ.ಎಂ.ಆರ್ಮುಗಮ್‍ರವರಿಗೆ ಖುದ್ದು ಒಂದು ಪತ್ರ ಬರೆದು, ನಿಮ್ಮ ಶ್ರಮದಿಂದ ಕೆ.ಜಿ.ಎಫ್‍ಗೆ ಬಿ.ಇ.ಎಂ.ಎಲ್ (BEML)ಬಂದಿದೆ. ಇದನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮ ಮೇಲಿದೆ ಎಂದು ತಮ್ಮ ಒಕ್ಕಣೆಯಲ್ಲಿ ಹೇಳಿದ್ದಾರೆ. ಇದು ನಮ್ಮ ಸಾಧನೆÉ ಎಂದು ಹೇಳಿ ಆರ್ಮುಗಮ್ ಸಾರ್, ಎಂದು ಪಕ್ಕದಲ್ಲಿದ್ದವರು ಒತ್ತಾಯಿಸಿದರೆ, ಸ್ವಲ್ಪ ತಡೆಯಿರಿ ನಮ್ಮ ವಿರೋಧಿಗಳು ಆಗುವ ಕೆಲಸಕ್ಕೆ ಕಲ್ಲು ಹಾಕಿಬಿಡುತ್ತಾರೆ ಎಂದು ಹೇಳುತ್ತಿದ್ದರು. ಅವರೆಂದೂ ಹಿರೋಹಿಸಂನ್ನು ಇಷ್ಟಪಡುತ್ತಿರಲಿಲ್ಲ. ಎಂದು RPIನ ಹಿರಿಯ ಮುಖಂಡರಾದ ದೊರೈ ರಾಜೇಂದ್ರನ್ ನೆನಪು ಮಾಡಿಕೊಳ್ಳುತ್ತಾರೆ.

1957ರ ಎರಡನೇ ವಿಧಾನ ಸಭಾ ಚುನಾವಣೆಯಲ್ಲಿ ಸಿ.ಎಂ.ಆರ್ಮುಗಂ ಅತಿ ಹೆಚ್ಚು ಸಂಖ್ಯೆಯ ಮತಗಳಿಂದ ಆರಿಸಿ ಬಂದರು. 1962 ಮತ್ತೆ ಚುನಾವಣೆ ಎದುರಾಯಿತು. 1967ರಲ್ಲಿ ಮೂರನೆ ಚುನಾವಣೆ ಬಂತು. ಈ ಚುನಾವಣೆಯಲ್ಲಿ ಸಿ.ಎಂ.ಆರ್ಮುಗಂರವರು, ಕಮ್ಯೂನಿಸ್ಟ್ ಪಕ್ಷದ ರಾಜಗೋಪಾಲ್ ಎಂಬವರ ಎದುರು ಕಡಿಮೆ ಅಂತರದಿಂದ ಪರಾಭವಗೊಂಡರು. ರಾಜಗೋಪಾಲ್ ಎಂ.ಎಲ್.ಎ.ಆಗಿ ಆಯ್ಕೆಯಾದರು.

ತಮ್ಮ ಒತ್ತಡದ ಕೆಲಸದ ನಡುವೆಯೂ ಸಿ.ಎಂ.ಆರ್ಮುಗಂರವರು ತಮ್ಮ ಗೆಳೆಯರ ಸಹಾಯದಿಂದ ಒಂದು ಪುಸ್ತಕ ಬರೆದರು. ಈ ಪುಸ್ತಕದಲ್ಲಿ ಸರ್ಕಾರ ಮತ್ತು ಅಲ್ಲಿ ಕೆಲಸಮಾಡುವ ಅಧಿಕಾರಸ್ಥ ಜಾತಿಯ ಮನಸ್ಸುಗಳು ಅಸ್ಪøಷ್ಯರ ಹಕ್ಕು ಅವಕಾಶಗಳನ್ನು ಹೇಗೆ ವಂಚಿಸುತ್ತಿವೆ ಎನ್ನುವ ಬಗ್ಗೆ ವಿವರವಾಗಿ ಬರೆದು ಅದನ್ನು UNO ತಲುಪಿಸಿ ಅಸ್ಪೃಷ್ಯರಿಗಾಗಿ ನೆರವು ಕೇಳಬೇಕು ಎನ್ನುವ ಉದ್ದೇಶ ಉಳ್ಳವರಾಗಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

ಬಂಗಾರಪ್ಪನವರು ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಸಿ.ಎಂ.ಆರ್ಮುಗಮ್‍ರವರು ಕಿಡ್ನಿ ವೈಪಲ್ಯದಿಂದಾಗಿ ಮಣಿಪಾಲ್ ಆಸ್ಪತ್ರೆ ಸೇರಿದರು. ಇದೇ ಸಂದರ್ಭದಲ್ಲಿ ಪ್ರಬಲ ಜಾತಿಗಳಿಗೆ ಸೇರಿದ ಎಂ.ಎಲ್.ಎ.ಗಳು ಒಂದು ಗುಂಪನ್ನು ರಚಿಸಿಕೊಂಡು ಬಂಗಾರಪ್ಪನವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕೆಂಬ ಪಿತೂರಿ ಮಾಡುತ್ತಿದ್ದರು. ಆಗ ಸಿ.ಎಂ.ಆರ್ಮುಗಮ್ ಇದನ್ನು ಖಂಡಿಸಿ ಅಸ್ಪತ್ರೆಯಿಂದಲೇ ಪತ್ರಿಕಾ ಹೇಳಿಕೆಯನ್ನು ನೀಡಿ, ಶೂದ್ರ ಜನಾಂಗಕ್ಕೆ ಸೇರಿದವರು ಎನ್ನುವ ಒಂದೇ ಕಾರಣಕ್ಕೆ ಬಂಗಾರಪ್ಪನವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕೆಂದು ತಂತ್ರ ಮಾಡುತ್ತಿದ್ದಾರೆ, ಎಂದು ಶತೃಗಳ ಬಾಯಿ ಮುಚ್ಚಿಸಿದರು.

ಅಸ್ಪೃಷ್ಯ ಜನತೆಗಾಗಿ ಒಂದು ಶಿಕ್ಷಣ ಸಂಸ್ಥೆ ಬೇಕೆಂದು ಅಂಬೇಡ್ಕರ್ ಮೆಡಿಕಲ್ ಕಾಲೇಜನ್ನು ಸ್ಥಾಪಿಸಿದ ಕೀರ್ತಿ ಸಿ.ಎಂ.ಆರ್ಮುಗಂರವರಿಗೆ ಸಲ್ಲಬೇಕು. ಬಾಬಾ ಸಾಹೇಬರು ಬೆಂಗಳೂರಿಗೆ ಬಂದಾಗ ಅವರನ್ನು ಗೌರವಾದರಗಳಿಂದ ಬರಮಾಡಿಕೊಂಡು ಕೆಲವು ಯುವ ನಾಯಕರನ್ನು ಅವರಿಗೆ ಪರಿಚಯಿಸಿದ್ದ ಸಿ.ಎಂ.ಆರ್ಮುಗಮ್‍ರವರು ತಮ್ಮ 67ನೇ ವಯಸ್ಸಿನಲ್ಲಿ ಅಂದರೆ ದಿನಾಂಕ 14-12-1992 ಕೊನೆಯುಸಿರೆಳೆದರು.

ಇವರು ತಮಿಳಿಗರು ಎನ್ನುವ ಒಂದೇ ಕಾರಣಕ್ಕೆ ಕರ್ನಾಟಕದ ಅಸ್ಪೃಷ್ರ್ಯ ಸಮಾಜದ ಜನ ಇವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳಲಿಲ್ಲ. ಇವರು ಕರ್ನಾಟಕದಲ್ಲಿ ಚುನಾಯಿತರಾಗಿದ್ದರು ಎನ್ನುವ ಕಾರಣಕ್ಕೆ ತಮಿಳು ಅಸ್ಪೃಷ್ರ್ಯರು ಇವರನ್ನು ನಮ್ಮ ನಾಯಕ ಎಂದು ಒಪ್ಪಿಕೊಳ್ಳದೆ ಹೋದರು. ಈ ದೇಶದಲ್ಲಿ ಜಾತಿಯತೆ ಎನ್ನುವುದು ಅಸ್ಪೃಷ್ರ್ಯರಲ್ಲೂ ಹೇಗೆ ಜೀವಂತವಾಗಿದೆ ಎನ್ನುವುದಕ್ಕೆ ಇನ್ನೊಂದು ಜ್ವಲಂತ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...