Homeಮುಖಪುಟಉತ್ತರ ಪ್ರದೇಶ ಚುನಾವಣಾ ವಿಶ್ಲೇಷಣೆ ಸಮೀಕ್ಷೆಗಳನ್ನು ಕಾಡುತ್ತಿರುವ 3 ಸಾಧ್ಯತೆಗಳು

ಉತ್ತರ ಪ್ರದೇಶ ಚುನಾವಣಾ ವಿಶ್ಲೇಷಣೆ ಸಮೀಕ್ಷೆಗಳನ್ನು ಕಾಡುತ್ತಿರುವ 3 ಸಾಧ್ಯತೆಗಳು

- Advertisement -
- Advertisement -

| ನೀಲಗಾರ |

ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶ ಎಲ್ಲರೂ ಕಾತುರದಿಂದ ನೋಡುತ್ತಿರುವ ರಾಜ್ಯವಾಗಿದೆ. ಉತ್ತರ ಪ್ರದೇಶದಲ್ಲಿ ಗೆದ್ದವರು ದೇಶವನ್ನು ಗೆಲ್ಲುತ್ತಾರೆ ಎಂಬ ಹಳೆಯ ಮಾತು ಈ ಸಾರಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಏಕೆಂದರೆ, 2014ಕ್ಕೆ ಹೋಲಿಸಿದರೆ, ಬಿಜೆಪಿಯು ದೇಶದ ಉಳಿದೆಲ್ಲಾ ಭಾಗಗಳಲ್ಲಿ ಪಡೆದುಕೊಳ್ಳುವ ಹೆಚ್ಚುವರಿ ಸೀಟುಗಳನ್ನು ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢಗಳಲ್ಲಿ ಕಳೆದುಕೊಳ್ಳಲಿದೆ. ಅದೇ ರೀತಿ ಕ್ಲೀನ್ ಸ್ವೀಪ್ ಮಾಡಿದ್ದ ಉಳಿದ ರಾಜ್ಯಗಳಲ್ಲೂ ಸೀಟುಗಳು ಕಡಿಮೆಯಾಗಿ ಅದರ ಬಹುಮತವನ್ನು 30 ಸೀಟುಗಳಷ್ಟು ಕಡಿಮೆ ಮಾಡಲಿದೆ. ಎನ್‍ಡಿಎ ಮೈತ್ರಿ ಪಕ್ಷಗಳ ಜೊತೆ ಸೇರಿ ಆಳ್ವಿಕೆ ಮಾಡುತ್ತಾರೋ ಇಲ್ಲವೋ ಎಂಬುದನ್ನು ಉ.ಪ್ರ ಮತ್ತು ಬಿಹಾರಗಳು ನಿರ್ಧಾರ ಮಾಡಲಿವೆ. ಎರಡೂ ರಾಜ್ಯಗಳು ಸೇರಿ ಬಿಜೆಪಿಯು 50 ಸೀಟುಗಳನ್ನು ಕಳೆದುಕೊಂಡರೆ ಅಲ್ಲಿಗೆ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಬರುವುದು ಖಾಯಂ.

ಹಾಗಾಗಿಯೇ ಎಲ್ಲರ ಕಣ್ಣು ಉತ್ತರ ಪ್ರದೇಶದತ್ತ. ಈಗಾಗಲೇ 4 ಹಂತದ ಚುನಾವಣೆಗಳು ಮುಗಿದಿದ್ದು, ಇನ್ನೆರಡು ಹಂತದ ಚುನಾವಣೆಗಳಾದ ನಂತರ ಸಂಪೂರ್ಣ ಚಿತ್ರಣ ಸಿಗುತ್ತದಾದರೂ, ಈಗಾಗಲೇ ಹಲವು ವಿಶ್ಲೇಷಣೆಗಳು ಹೊರಬಂದಿವೆ. ವಿಪರ್ಯಾಸವೆಂದರೆ, ವಿವಿಧ ವಿಶ್ಲೇಷಣೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ.

ಉ.ಪ್ರದೇಶದಾದ್ಯಂತ ಸುತ್ತಾಡಿ, ಸ್ಥಳೀಯ ಸಂಗತಿಗಳನ್ನು ಅಧ್ಯಯನ ಮಾಡಿ ವರದಿ ಬರೆದಿರುವ ಮೀಡಿಯಾವಿಜಿಲ್.ಕಾಂನ ಅಭಿಜಿತ್ ಶ್ರೀವಾಸ್ತವ ಅವರು ಮಹಾಘಟಬಂಧನ್ (ಎಸ್ಪಿ ಬಿಎಸ್ಪಿ ಮತ್ತು ಆರ್‍ಎಲ್‍ಡಿ ಮೈತ್ರಿ)ಗೆ ಅನಾನುಕೂಲಕರ ಅಂಶಗಳು ಹೆಚ್ಚಿವೆ ಎನ್ನುತ್ತಾರೆ. ಆದರೆ, ಆಂತ್ರೋ.ಎಐ ಎಂಬ ಕೃತಕ ಬುದ್ಧಿಮತ್ತೆಯನ್ನಾಧರಿಸಿ ವಿಶ್ಲೇಷಣೆ ಮಾಡುವ ಗುಂಪು, ಚಾಣಕ್ಯ.ಕಾಂ ಮತ್ತು ತಮ್ಮದೇ ಮೂಲಗಳನ್ನಾಧರಿಸಿ ಕ್ವಿಂಟ್‍ನ ಆದಿತ್ಯ ಮೆನನ್ ಅದಕ್ಕೆ ವಿರುದ್ಧವಾದ ವಿಶ್ಲೇಷಣೆ ಮಾಡುತ್ತಾರೆ.

ಇದುವರೆಗೆ ಆಗಿರುವ ನಾಲ್ಕು ಹಂತದ ಮತದಾನದಲ್ಲಿ ಬಿಜೆಪಿಗೆ ಅಷ್ಟೇನೂ ಅನುಕೂಲವಾಗಿಲ್ಲ. ಉ.ಪ್ರ.ದ ಈ ಪಶ್ಚಿಮ ಭಾಗಗಳಲ್ಲಿ ಮುಸ್ಲಿಮರು, ಜಾಟರು, ಜಾಟವ್ (ಮಾಯಾವತಿಯವರ ಜೊತೆಗಿರುವ ದಲಿತ ಸಮುದಾಯ) ಮತ್ತು ಯಾದವರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣದಿಂದ, ಮೈತ್ರಿಯು ಮುನ್ನಡೆ ಸಾಧಿಸಿದ್ದು ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕ್ವಿಂಟ್ ಹೇಳುತ್ತದೆ. ಆದರೆ ಮಾಯಾವತಿಯವರು “ಮುಸ್ಲಿಮರು ಕಾಂಗ್ರೆಸ್‍ಗೆ ಮತ ನೀಡಿ ವ್ಯರ್ಥಗೊಳಿಸಿಕೊಳ್ಳಬೇಡಿ” ಎಂಬ ಹೇಳಿಕೆಯಿಂದ ಉಂಟಾಗಿರುವ ಪ್ರತಿಧ್ರುವೀಕರಣ ಹಾಗೂ ತಳಮಟ್ಟದಲ್ಲಿ ಇನ್ನೂ ಬೆರೆಯದ ಮೈತ್ರಿ ಕಾರ್ಯಕರ್ತರ ಕಾರಣದಿಂದ ಬಿಜೆಪಿಗೇ ಹೆಚ್ಚಿನ ಅನುಕೂಲ ಎಂದು ಅಭಿಜಿತ್ ವಾದಿಸುತ್ತಾರೆ.

ಅವರ ಪ್ರಕಾರ ಮೈತ್ರಿಯಿಂದ ‘ಮಹತ್ವ’ದ ಸಾಧನೆ ಮಾಡಿದ ಉಪಚುನಾವಣೆಗಳಲ್ಲೇ ಈ ಸಂಗತಿ ಎದ್ದು ಕಂಡಿತ್ತು. ಮೂರೂ ಪಕ್ಷಗಳು ಒಟ್ಟುಗೂಡಿದರೆ ಅವರೆಲ್ಲರ ಮತಗಳೂ ಒಟ್ಟುಗೂಡುತ್ತವೆ ಎಂಬುದು ಸತ್ಯವಾಗಿಲ್ಲ. 2017ರ ಅಸೆಂಬ್ಲಿ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ವಿರೋಧ ಪಕ್ಷಗಳು ಪಡೆದುಕೊಂಡ ಮತಗಳನ್ನು ಕೂಡಿಸಿ, 2018ರ ಮಾರ್ಚ್‍ನ ಉಪಚುನಾವಣೆಯಲ್ಲಿ ಒಟ್ಟುಗೂಡಿ ಪಡೆದುಕೊಂಡ ಮತಗಳಿಗೆ ಹೋಲಿಸಿದರೆ ಇದು ಗೊತ್ತಾಗುತ್ತದೆ. ಬಿಜೆಪಿ ಪರ ಇರುವ ರಾಜಕೀಯ ವಿಶ್ಲೇಷಕ ಗುರುಮೂರ್ತಿಯವರು ಬರೆದಿರುವ ಅಂಕಣಲ್ಲಿನ ಸಂಗತಿಗಳು ಸರಿಯಿವೆ ಎಂಬುದು ಅಭಿಜಿತ್ ಅವರ ಅಂಬೋಣ. ಅಸೆಂಬ್ಲಿಗೆ ಹೋಲಿಸಿದರೆ, ಉಪಚುನಾವಣೆಯ ಹೊತ್ತಿಗೆ ಗೋರಖ್‍ಪುರದಲ್ಲಿ 14.8%ನಿಂದ 2.4%ಗೆ ಮೈತ್ರಿಯ ಮುನ್ನಡೆ ಇಳಿದಿತ್ತು. ಅಂದರೆ ಅಸೆಂಬ್ಲಿಯ ಸಂದರ್ಭದಲ್ಲಿ ಆ ಲೋಕಸಭಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಪಡೆದುಕೊಂಡ ಮತಗಳಷ್ಟನ್ನು ಉಪಚುನಾವಣೆಯಲ್ಲಿ ಪಡೆದುಕೊಳ್ಳಲಿಲ್ಲ. ಅದೇ ರೀತಿ ಫುಲ್‍ಪುರದಲ್ಲಿ 24%ನಿಂದ 8%ಗಿಳಿದಿತ್ತು ಹಾಗೂ ಕೈರಾನಾದಲ್ಲಿ 19.2%ನಿಂದ 4.7%ಗಿಳಿದಿತ್ತು. ಈ ಅಂಶವನ್ನು ಎಲ್ಲರೂ ಕಡೆಗಣಿಸಿ, ಮೈತ್ರಿಯಾಗಿಬಿಟ್ಟರೆ ಈ ಪಕ್ಷಗಳ ಮತಗಳೂ ಕ್ರೋಢೀಕೃತವಾಗುತ್ತವೆ ಎನ್ನುತ್ತಿದ್ದಾರೆ, ಇದು ತಪ್ಪು ಎನ್ನುತ್ತಾರೆ. ಜೊತೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳಿಗೆ ಜನರು ಮತ ಹಾಕಲು ಬಯಸುತ್ತಾರಾದ್ದರಿಂದ, ಬಿಜೆಪಿಗೇ ಹೆಚ್ಚಿನ ಅನುಕೂಲವಾಗುತ್ತದೆ.

ಆದರೆ, ಆದಿತ್ಯ ಮೆನನ್ ಸರಳ ಅಂಗಗಣಿತ ಮುಂದಿಡುತ್ತಾರೆ. ಇದುವರೆಗೆ ಮತದಾನ ನಡೆದ 39 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿಗೆ ಇದ್ದ ಮತಪ್ರಮಾಣವು ಮೈತ್ರಿಗಿಂತ ಹೆಚ್ಚಿತ್ತು. ಆದರೆ, ಮುಸ್ಲಿಂ, ಯಾದವ್, ಜಾಟವ್‍ರ ಜೊತೆಗೆ ಜಾಟ್ & ಗುಜ್ಜರ್ ಮತಗಳೂ ಸೇರಿ ಮೈತ್ರಿಗೆ ಹೆಚ್ಚಿನ ಅನುಕೂಲವಾಗಿದೆ. ಇನ್ನು ಉಳಿದ 41 ಸೀಟುಗಳಲ್ಲಿ ಮೈತ್ರಿಯು 24ರಲ್ಲಿ, ಬಿಜೆಪಿಯು 15ರಲ್ಲಿ ಮತ್ತು ಕಾಂಗ್ರೆಸ್ 2ರಲ್ಲಿ (ಮೈತ್ರಿಯ ಸೀಟುಗಳನ್ನು ಕೂಡಿದರೆ) ಮುನ್ನಡೆ ಹೊಂದಿದ್ದವು. ಹೀಗಾಗಿ ಮತಗಳ ಕೂಡಿಕೆಯಿಂದಲೇ ಅರ್ಧಕ್ಕಿಂತ ಹೆಚ್ಚು, ಅಂದರೆ 45, ಸೀಟುಗಳಲ್ಲಿ ಮೈತ್ರಿಯು ಗೆಲ್ಲುತ್ತದೆ. ಅದರ ಜೊತೆಗೆ ಮೈತ್ರಿಯಿಂದ ಸಂಚಯವಾಗಿರುವ ಬಲ ಹಾಗೂ ಗೆಲ್ಲುವ ಕೂಟವೆಂದು ಬಿಂಬಿತವಾಗಿರುವುದರಿಂದ ಇದು ಶೇ.80ರಷ್ಟು ಸೀಟು ಗೆದ್ದರೂ ಆಶ್ಚರ್ಯವಿಲ್ಲ ಎಂಬುದು ಅವರ ಲೆಕ್ಕಾಚಾರ. ಇದಕ್ಕೆ ಮತದಾನದ ಪ್ರಮಾಣದ ಆಧಾರದ ಮೇಲೆ ಆಂತ್ರೋ.ಎಐ ಮಾಡಿರುವ ವಿಶ್ಲೇಷಣೆಯ ಸಹಾಯವನ್ನೂ ಅವರು ತೆಗೆದುಕೊಂಡಿದ್ದಾರೆ.

ಮೂರೂ ಪಕ್ಷಗಳು ಸೇರಿಕೊಂಡು ಮೇಲ್ಮಟ್ಟದಲ್ಲಿ ಮಾಡಿಕೊಂಡಿರುವ ಮೈತ್ರಿಯು ತಳಮಟ್ಟದಲ್ಲಿ ಕಾರ್ಯಕರ್ತರು ಮತ್ತು ನಿಷ್ಠಾವಂತ ಮತದಾರರ ಮೇಲೆ ಯಾವ ಪ್ರಭಾವವನ್ನು ಬೀರಿದೆ ಎಂಬುದು ಮತ್ತು ಈ ಸಾರಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುವ ಮತಗಳೆಷ್ಟು ಎಂಬ ಅಂಶಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಏಕೆಂದರೆ, ಉ.ಪ್ರ.ದಲ್ಲಿ ಮೂರು ವಿರೋಧ ಪಕ್ಷಗಳು ಜೊತೆಗೂಡಿರುವುದು ಜಿದ್ದಾಜಿದ್ದಿ ಸ್ಪರ್ಧೆಯನ್ನು ಕೂದಲೆಳೆಯ ಅಂತರಕ್ಕೆ ತಂದಿದೆ. ಹಾಗಾಗಿ ಪ್ರತಿಯೊಂದು ಅಂಶವೂ ಮುಖ್ಯವಾಗಲಿದೆ.

ಮತಬ್ಯಾಂಕುಗಳಲ್ಲಿ ಮೇಲ್ಜಾತಿಗಳು ಬಿಜೆಪಿಯ ಜೊತೆಗಿರುವುದರ ಜೊತೆಗೆ, ಎಲ್ಲಾ ಜಾತಿಗಳಿಗೂ ಸೇರಿದ ಹೊಸ ಮತದಾರರು ಜಾತಿ ಮೀರಿ ಬಿಜೆಪಿಗೇ ಮತ ಹಾಕುತ್ತಾರೆಂಬುದು ಹಲವಾರು ಸಮೀಕ್ಷೆಗಳಲ್ಲಿ ಸ್ಪಷ್ಟವಾಗಿದೆ. ಆದರೆ, ಯಾದವೇತರ ಓಬಿಸಿ ಮತ್ತು ಜಾಟವೇತರ ದಲಿತರು ಬಿಜೆಪಿಯಿಂದ ಈ ಸಾರಿ ಮೈತ್ರಿಯ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ. ಯೋಗಿ ಆದಿತ್ಯನಾಥ್ ಆಳ್ವಿಕೆಯ ವಿರುದ್ಧವೂ ಖಚಿತವಾದ ಆಡಳಿತ ವಿರೋಧ ಅಲೆಯಿದ್ದು, ಅದು ಮೋದಿ ವಿರುದ್ಧ ಇನ್ನೂ ಕ್ರೋಢೀಕೃತವಾಗಿಲ್ಲ ಎಂದು ಹೇಳಲಾಗುತ್ತಿತ್ತು. ರೈತರಿಗೆ ಬೆಲೆಯ ಸಮಸ್ಯೆ ಮತ್ತು ಬೀಡಾಡಿ ದನಗಳ ಸಮಸ್ಯೆ ತೀವ್ರವಾಗಿದ್ದು, ಇದರ ಪರಿಣಾಮ ಯಾವ ಪ್ರಮಾಣಕ್ಕೆ ಆಗಬಹುದು ಎಂಬುದನ್ನೂ ನೋಡಬೇಕು.

ಯಾವ ಕಡೆಗೂ ಸೇರಿಕೊಳ್ಳದೇ ತೇಲುತ್ತಿದ್ದ 4ರಿಂದ 5% ಮತಗಳು ಬಿಜೆಪಿಯ ವಿರುದ್ಧವೇ ಇದ್ದವು (ಈ ಮಾತನ್ನು ಯೋಗೇಂದ್ರ ಯಾದವ್ ಸಹಾ ಪುಷ್ಟೀಕರಿಸುತ್ತಾರೆ). ಆದರೆ, ಅದನ್ನು ನಿರ್ಣಾಯಕವಾಗಿ ತಮ್ಮ ಕಡೆಗೆ ತಿರುಗಿಸಿಕೊಳ್ಳುವಲ್ಲಿ ಮೈತ್ರಿ ಪಕ್ಷಗಳು ಶಕ್ತರಾಗಲಿಲ್ಲ; ಮಾಯಾವತಿಯವರ ಮುಸ್ಲಿಂ ವೋಟಿನ ಹೇಳಿಕೆ ದೊಡ್ಡ ಡ್ಯಾಮೇಜ್ ಮಾಡಿತು ಎಂದು ಅಭಿಜಿತ್ ಹೇಳುತ್ತಾರೆ.

ಅದೇ ರೀತಿ ವಾರಣಾಸಿಯಲ್ಲಿ ಸ್ಪರ್ಧೆ ಮಾಡುವುದಾಗಿ ಸೂಚನೆ ನೀಡಿ ‘ಸಸ್ಪೆನ್ಸ್’ನಲ್ಲಿ ಇಟ್ಟಿದ್ದ ಪ್ರಿಯಾಂಕಾ ಮತ್ತು ಕಾಂಗ್ರೆಸ್ ಬಹಳ ದೊಡ್ಡ ತಪ್ಪನ್ನು (shock doctrine) ಮಾಡಿದರು ಹಾಗೂ ತೇಜ್ ಬಹದ್ದೂರ್ ಯಾದವ್‍ರನ್ನು ಕಣಕ್ಕಿಳಿಸುವ ಮೂಲಕ (ನಂತರ ನಾಮಪತ್ರ ತಿರಸ್ಕೃತಗೊಂಡಿತು) ಸ್ಪರ್ಧೆ ಇರುವುದು ಮೋದಿ ಹಾಗೂ ಮೈತ್ರಿಯ ಮಧ್ಯೆ ಎಂಬ ಚಿತ್ರಣವನ್ನು ಕೊಡುವಲ್ಲಿಯೂ ಅಖಿಲೇಶ್-ಮಾಯಾವತಿ ಯಶಸ್ವಿಯಾದರು ಎಂಬುದು ಅವರ ಅಭಿಪ್ರಾಯ. ಇವೆಲ್ಲದರ ಲಾಭ ಬಿಜೆಪಿಗಾಗುತ್ತದೆ ಎಂದು ಅವರು ಹೇಳುತ್ತಾರೆ.

ಜೊತೆಗೆ ಪೂರ್ವ ಉ.ಪ್ರ.ದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಶಕ್ತಿ, ಪ್ರಿಯಾಂಕಾರ ಎಂಟ್ರಿಯಿಂದ ಮತ್ತು ಬಾಬುಸಿಂಗ್ ಕುಶ್ವಾಹಾ ಹಾಗೂ ರಮಕಾಂತ ಯಾದವ್‍ರ ಸೇರ್ಪಡೆಯಿಂದ ಬಲ ಹೆಚ್ಚಿಸಿಕೊಂಡಿದೆ. ಆದರೆ, ಇವೆಲ್ಲವೂ ಬಿಜೆಪಿಗೆ ಸಹಾಯ ಮಾಡಬಹುದು ಎಂಬ ಅನಿಸಿಕೆ ವ್ಯಕ್ತ ಮಾಡುತ್ತಾರೆ.

ಅದೇನೇ ಇದ್ದರೂ, ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹಿಂದಿನಷ್ಟು ಸೀಟುಗಳನ್ನು ಪಡೆದುಕೊಳ್ಳುವುದಿಲ್ಲ ಎಂಬುದು ಸರ್ವಸಮ್ಮತ ಅಭಿಪ್ರಾಯವಾಗಿದೆ. ಮೇಲೆ ಹೇಳಲಾಗಿರುವ ಹಲವು ಅಂಶಗಳು ಬಿಜೆಪಿಯ ವಿರುದ್ಧವಾದರೆ, ಅದು 10ರಿಂದ 15 ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಮೈತ್ರಿಯ ವಿರುದ್ಧವಾದರೆ, ಬಿಜೆಪಿಯು 65 ಸೀಟುಗಳವರೆಗೆ ಗೆಲ್ಲಬಹುದು. ವಿಶ್ಲೇಷಣೆಯಲ್ಲಿ ಸೇಫ್ ಇರಬೇಕು ಎಂದಾದಲ್ಲಿ ಬಿಜೆಪಿಯು 38, ಮೈತ್ರಿಯು 37 ಮತ್ತು ಕಾಂಗ್ರೆಸ್ 4-5 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಬೇಕಾಗುತ್ತದೆ.

ಅಂತಿಮ ಫಲಿತಾಂಶವು ಮೇ 23ಕ್ಕೇ ಬರುತ್ತದಾದರೂ, ಮೇ 18ರ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...