Homeಮುಖಪುಟಉತ್ತರ ಪ್ರದೇಶ ಚುನಾವಣಾ ವಿಶ್ಲೇಷಣೆ ಸಮೀಕ್ಷೆಗಳನ್ನು ಕಾಡುತ್ತಿರುವ 3 ಸಾಧ್ಯತೆಗಳು

ಉತ್ತರ ಪ್ರದೇಶ ಚುನಾವಣಾ ವಿಶ್ಲೇಷಣೆ ಸಮೀಕ್ಷೆಗಳನ್ನು ಕಾಡುತ್ತಿರುವ 3 ಸಾಧ್ಯತೆಗಳು

- Advertisement -
- Advertisement -

| ನೀಲಗಾರ |

ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶ ಎಲ್ಲರೂ ಕಾತುರದಿಂದ ನೋಡುತ್ತಿರುವ ರಾಜ್ಯವಾಗಿದೆ. ಉತ್ತರ ಪ್ರದೇಶದಲ್ಲಿ ಗೆದ್ದವರು ದೇಶವನ್ನು ಗೆಲ್ಲುತ್ತಾರೆ ಎಂಬ ಹಳೆಯ ಮಾತು ಈ ಸಾರಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಏಕೆಂದರೆ, 2014ಕ್ಕೆ ಹೋಲಿಸಿದರೆ, ಬಿಜೆಪಿಯು ದೇಶದ ಉಳಿದೆಲ್ಲಾ ಭಾಗಗಳಲ್ಲಿ ಪಡೆದುಕೊಳ್ಳುವ ಹೆಚ್ಚುವರಿ ಸೀಟುಗಳನ್ನು ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢಗಳಲ್ಲಿ ಕಳೆದುಕೊಳ್ಳಲಿದೆ. ಅದೇ ರೀತಿ ಕ್ಲೀನ್ ಸ್ವೀಪ್ ಮಾಡಿದ್ದ ಉಳಿದ ರಾಜ್ಯಗಳಲ್ಲೂ ಸೀಟುಗಳು ಕಡಿಮೆಯಾಗಿ ಅದರ ಬಹುಮತವನ್ನು 30 ಸೀಟುಗಳಷ್ಟು ಕಡಿಮೆ ಮಾಡಲಿದೆ. ಎನ್‍ಡಿಎ ಮೈತ್ರಿ ಪಕ್ಷಗಳ ಜೊತೆ ಸೇರಿ ಆಳ್ವಿಕೆ ಮಾಡುತ್ತಾರೋ ಇಲ್ಲವೋ ಎಂಬುದನ್ನು ಉ.ಪ್ರ ಮತ್ತು ಬಿಹಾರಗಳು ನಿರ್ಧಾರ ಮಾಡಲಿವೆ. ಎರಡೂ ರಾಜ್ಯಗಳು ಸೇರಿ ಬಿಜೆಪಿಯು 50 ಸೀಟುಗಳನ್ನು ಕಳೆದುಕೊಂಡರೆ ಅಲ್ಲಿಗೆ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಬರುವುದು ಖಾಯಂ.

ಹಾಗಾಗಿಯೇ ಎಲ್ಲರ ಕಣ್ಣು ಉತ್ತರ ಪ್ರದೇಶದತ್ತ. ಈಗಾಗಲೇ 4 ಹಂತದ ಚುನಾವಣೆಗಳು ಮುಗಿದಿದ್ದು, ಇನ್ನೆರಡು ಹಂತದ ಚುನಾವಣೆಗಳಾದ ನಂತರ ಸಂಪೂರ್ಣ ಚಿತ್ರಣ ಸಿಗುತ್ತದಾದರೂ, ಈಗಾಗಲೇ ಹಲವು ವಿಶ್ಲೇಷಣೆಗಳು ಹೊರಬಂದಿವೆ. ವಿಪರ್ಯಾಸವೆಂದರೆ, ವಿವಿಧ ವಿಶ್ಲೇಷಣೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ.

ಉ.ಪ್ರದೇಶದಾದ್ಯಂತ ಸುತ್ತಾಡಿ, ಸ್ಥಳೀಯ ಸಂಗತಿಗಳನ್ನು ಅಧ್ಯಯನ ಮಾಡಿ ವರದಿ ಬರೆದಿರುವ ಮೀಡಿಯಾವಿಜಿಲ್.ಕಾಂನ ಅಭಿಜಿತ್ ಶ್ರೀವಾಸ್ತವ ಅವರು ಮಹಾಘಟಬಂಧನ್ (ಎಸ್ಪಿ ಬಿಎಸ್ಪಿ ಮತ್ತು ಆರ್‍ಎಲ್‍ಡಿ ಮೈತ್ರಿ)ಗೆ ಅನಾನುಕೂಲಕರ ಅಂಶಗಳು ಹೆಚ್ಚಿವೆ ಎನ್ನುತ್ತಾರೆ. ಆದರೆ, ಆಂತ್ರೋ.ಎಐ ಎಂಬ ಕೃತಕ ಬುದ್ಧಿಮತ್ತೆಯನ್ನಾಧರಿಸಿ ವಿಶ್ಲೇಷಣೆ ಮಾಡುವ ಗುಂಪು, ಚಾಣಕ್ಯ.ಕಾಂ ಮತ್ತು ತಮ್ಮದೇ ಮೂಲಗಳನ್ನಾಧರಿಸಿ ಕ್ವಿಂಟ್‍ನ ಆದಿತ್ಯ ಮೆನನ್ ಅದಕ್ಕೆ ವಿರುದ್ಧವಾದ ವಿಶ್ಲೇಷಣೆ ಮಾಡುತ್ತಾರೆ.

ಇದುವರೆಗೆ ಆಗಿರುವ ನಾಲ್ಕು ಹಂತದ ಮತದಾನದಲ್ಲಿ ಬಿಜೆಪಿಗೆ ಅಷ್ಟೇನೂ ಅನುಕೂಲವಾಗಿಲ್ಲ. ಉ.ಪ್ರ.ದ ಈ ಪಶ್ಚಿಮ ಭಾಗಗಳಲ್ಲಿ ಮುಸ್ಲಿಮರು, ಜಾಟರು, ಜಾಟವ್ (ಮಾಯಾವತಿಯವರ ಜೊತೆಗಿರುವ ದಲಿತ ಸಮುದಾಯ) ಮತ್ತು ಯಾದವರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣದಿಂದ, ಮೈತ್ರಿಯು ಮುನ್ನಡೆ ಸಾಧಿಸಿದ್ದು ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕ್ವಿಂಟ್ ಹೇಳುತ್ತದೆ. ಆದರೆ ಮಾಯಾವತಿಯವರು “ಮುಸ್ಲಿಮರು ಕಾಂಗ್ರೆಸ್‍ಗೆ ಮತ ನೀಡಿ ವ್ಯರ್ಥಗೊಳಿಸಿಕೊಳ್ಳಬೇಡಿ” ಎಂಬ ಹೇಳಿಕೆಯಿಂದ ಉಂಟಾಗಿರುವ ಪ್ರತಿಧ್ರುವೀಕರಣ ಹಾಗೂ ತಳಮಟ್ಟದಲ್ಲಿ ಇನ್ನೂ ಬೆರೆಯದ ಮೈತ್ರಿ ಕಾರ್ಯಕರ್ತರ ಕಾರಣದಿಂದ ಬಿಜೆಪಿಗೇ ಹೆಚ್ಚಿನ ಅನುಕೂಲ ಎಂದು ಅಭಿಜಿತ್ ವಾದಿಸುತ್ತಾರೆ.

ಅವರ ಪ್ರಕಾರ ಮೈತ್ರಿಯಿಂದ ‘ಮಹತ್ವ’ದ ಸಾಧನೆ ಮಾಡಿದ ಉಪಚುನಾವಣೆಗಳಲ್ಲೇ ಈ ಸಂಗತಿ ಎದ್ದು ಕಂಡಿತ್ತು. ಮೂರೂ ಪಕ್ಷಗಳು ಒಟ್ಟುಗೂಡಿದರೆ ಅವರೆಲ್ಲರ ಮತಗಳೂ ಒಟ್ಟುಗೂಡುತ್ತವೆ ಎಂಬುದು ಸತ್ಯವಾಗಿಲ್ಲ. 2017ರ ಅಸೆಂಬ್ಲಿ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ವಿರೋಧ ಪಕ್ಷಗಳು ಪಡೆದುಕೊಂಡ ಮತಗಳನ್ನು ಕೂಡಿಸಿ, 2018ರ ಮಾರ್ಚ್‍ನ ಉಪಚುನಾವಣೆಯಲ್ಲಿ ಒಟ್ಟುಗೂಡಿ ಪಡೆದುಕೊಂಡ ಮತಗಳಿಗೆ ಹೋಲಿಸಿದರೆ ಇದು ಗೊತ್ತಾಗುತ್ತದೆ. ಬಿಜೆಪಿ ಪರ ಇರುವ ರಾಜಕೀಯ ವಿಶ್ಲೇಷಕ ಗುರುಮೂರ್ತಿಯವರು ಬರೆದಿರುವ ಅಂಕಣಲ್ಲಿನ ಸಂಗತಿಗಳು ಸರಿಯಿವೆ ಎಂಬುದು ಅಭಿಜಿತ್ ಅವರ ಅಂಬೋಣ. ಅಸೆಂಬ್ಲಿಗೆ ಹೋಲಿಸಿದರೆ, ಉಪಚುನಾವಣೆಯ ಹೊತ್ತಿಗೆ ಗೋರಖ್‍ಪುರದಲ್ಲಿ 14.8%ನಿಂದ 2.4%ಗೆ ಮೈತ್ರಿಯ ಮುನ್ನಡೆ ಇಳಿದಿತ್ತು. ಅಂದರೆ ಅಸೆಂಬ್ಲಿಯ ಸಂದರ್ಭದಲ್ಲಿ ಆ ಲೋಕಸಭಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಪಡೆದುಕೊಂಡ ಮತಗಳಷ್ಟನ್ನು ಉಪಚುನಾವಣೆಯಲ್ಲಿ ಪಡೆದುಕೊಳ್ಳಲಿಲ್ಲ. ಅದೇ ರೀತಿ ಫುಲ್‍ಪುರದಲ್ಲಿ 24%ನಿಂದ 8%ಗಿಳಿದಿತ್ತು ಹಾಗೂ ಕೈರಾನಾದಲ್ಲಿ 19.2%ನಿಂದ 4.7%ಗಿಳಿದಿತ್ತು. ಈ ಅಂಶವನ್ನು ಎಲ್ಲರೂ ಕಡೆಗಣಿಸಿ, ಮೈತ್ರಿಯಾಗಿಬಿಟ್ಟರೆ ಈ ಪಕ್ಷಗಳ ಮತಗಳೂ ಕ್ರೋಢೀಕೃತವಾಗುತ್ತವೆ ಎನ್ನುತ್ತಿದ್ದಾರೆ, ಇದು ತಪ್ಪು ಎನ್ನುತ್ತಾರೆ. ಜೊತೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳಿಗೆ ಜನರು ಮತ ಹಾಕಲು ಬಯಸುತ್ತಾರಾದ್ದರಿಂದ, ಬಿಜೆಪಿಗೇ ಹೆಚ್ಚಿನ ಅನುಕೂಲವಾಗುತ್ತದೆ.

ಆದರೆ, ಆದಿತ್ಯ ಮೆನನ್ ಸರಳ ಅಂಗಗಣಿತ ಮುಂದಿಡುತ್ತಾರೆ. ಇದುವರೆಗೆ ಮತದಾನ ನಡೆದ 39 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿಗೆ ಇದ್ದ ಮತಪ್ರಮಾಣವು ಮೈತ್ರಿಗಿಂತ ಹೆಚ್ಚಿತ್ತು. ಆದರೆ, ಮುಸ್ಲಿಂ, ಯಾದವ್, ಜಾಟವ್‍ರ ಜೊತೆಗೆ ಜಾಟ್ & ಗುಜ್ಜರ್ ಮತಗಳೂ ಸೇರಿ ಮೈತ್ರಿಗೆ ಹೆಚ್ಚಿನ ಅನುಕೂಲವಾಗಿದೆ. ಇನ್ನು ಉಳಿದ 41 ಸೀಟುಗಳಲ್ಲಿ ಮೈತ್ರಿಯು 24ರಲ್ಲಿ, ಬಿಜೆಪಿಯು 15ರಲ್ಲಿ ಮತ್ತು ಕಾಂಗ್ರೆಸ್ 2ರಲ್ಲಿ (ಮೈತ್ರಿಯ ಸೀಟುಗಳನ್ನು ಕೂಡಿದರೆ) ಮುನ್ನಡೆ ಹೊಂದಿದ್ದವು. ಹೀಗಾಗಿ ಮತಗಳ ಕೂಡಿಕೆಯಿಂದಲೇ ಅರ್ಧಕ್ಕಿಂತ ಹೆಚ್ಚು, ಅಂದರೆ 45, ಸೀಟುಗಳಲ್ಲಿ ಮೈತ್ರಿಯು ಗೆಲ್ಲುತ್ತದೆ. ಅದರ ಜೊತೆಗೆ ಮೈತ್ರಿಯಿಂದ ಸಂಚಯವಾಗಿರುವ ಬಲ ಹಾಗೂ ಗೆಲ್ಲುವ ಕೂಟವೆಂದು ಬಿಂಬಿತವಾಗಿರುವುದರಿಂದ ಇದು ಶೇ.80ರಷ್ಟು ಸೀಟು ಗೆದ್ದರೂ ಆಶ್ಚರ್ಯವಿಲ್ಲ ಎಂಬುದು ಅವರ ಲೆಕ್ಕಾಚಾರ. ಇದಕ್ಕೆ ಮತದಾನದ ಪ್ರಮಾಣದ ಆಧಾರದ ಮೇಲೆ ಆಂತ್ರೋ.ಎಐ ಮಾಡಿರುವ ವಿಶ್ಲೇಷಣೆಯ ಸಹಾಯವನ್ನೂ ಅವರು ತೆಗೆದುಕೊಂಡಿದ್ದಾರೆ.

ಮೂರೂ ಪಕ್ಷಗಳು ಸೇರಿಕೊಂಡು ಮೇಲ್ಮಟ್ಟದಲ್ಲಿ ಮಾಡಿಕೊಂಡಿರುವ ಮೈತ್ರಿಯು ತಳಮಟ್ಟದಲ್ಲಿ ಕಾರ್ಯಕರ್ತರು ಮತ್ತು ನಿಷ್ಠಾವಂತ ಮತದಾರರ ಮೇಲೆ ಯಾವ ಪ್ರಭಾವವನ್ನು ಬೀರಿದೆ ಎಂಬುದು ಮತ್ತು ಈ ಸಾರಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುವ ಮತಗಳೆಷ್ಟು ಎಂಬ ಅಂಶಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಏಕೆಂದರೆ, ಉ.ಪ್ರ.ದಲ್ಲಿ ಮೂರು ವಿರೋಧ ಪಕ್ಷಗಳು ಜೊತೆಗೂಡಿರುವುದು ಜಿದ್ದಾಜಿದ್ದಿ ಸ್ಪರ್ಧೆಯನ್ನು ಕೂದಲೆಳೆಯ ಅಂತರಕ್ಕೆ ತಂದಿದೆ. ಹಾಗಾಗಿ ಪ್ರತಿಯೊಂದು ಅಂಶವೂ ಮುಖ್ಯವಾಗಲಿದೆ.

ಮತಬ್ಯಾಂಕುಗಳಲ್ಲಿ ಮೇಲ್ಜಾತಿಗಳು ಬಿಜೆಪಿಯ ಜೊತೆಗಿರುವುದರ ಜೊತೆಗೆ, ಎಲ್ಲಾ ಜಾತಿಗಳಿಗೂ ಸೇರಿದ ಹೊಸ ಮತದಾರರು ಜಾತಿ ಮೀರಿ ಬಿಜೆಪಿಗೇ ಮತ ಹಾಕುತ್ತಾರೆಂಬುದು ಹಲವಾರು ಸಮೀಕ್ಷೆಗಳಲ್ಲಿ ಸ್ಪಷ್ಟವಾಗಿದೆ. ಆದರೆ, ಯಾದವೇತರ ಓಬಿಸಿ ಮತ್ತು ಜಾಟವೇತರ ದಲಿತರು ಬಿಜೆಪಿಯಿಂದ ಈ ಸಾರಿ ಮೈತ್ರಿಯ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ. ಯೋಗಿ ಆದಿತ್ಯನಾಥ್ ಆಳ್ವಿಕೆಯ ವಿರುದ್ಧವೂ ಖಚಿತವಾದ ಆಡಳಿತ ವಿರೋಧ ಅಲೆಯಿದ್ದು, ಅದು ಮೋದಿ ವಿರುದ್ಧ ಇನ್ನೂ ಕ್ರೋಢೀಕೃತವಾಗಿಲ್ಲ ಎಂದು ಹೇಳಲಾಗುತ್ತಿತ್ತು. ರೈತರಿಗೆ ಬೆಲೆಯ ಸಮಸ್ಯೆ ಮತ್ತು ಬೀಡಾಡಿ ದನಗಳ ಸಮಸ್ಯೆ ತೀವ್ರವಾಗಿದ್ದು, ಇದರ ಪರಿಣಾಮ ಯಾವ ಪ್ರಮಾಣಕ್ಕೆ ಆಗಬಹುದು ಎಂಬುದನ್ನೂ ನೋಡಬೇಕು.

ಯಾವ ಕಡೆಗೂ ಸೇರಿಕೊಳ್ಳದೇ ತೇಲುತ್ತಿದ್ದ 4ರಿಂದ 5% ಮತಗಳು ಬಿಜೆಪಿಯ ವಿರುದ್ಧವೇ ಇದ್ದವು (ಈ ಮಾತನ್ನು ಯೋಗೇಂದ್ರ ಯಾದವ್ ಸಹಾ ಪುಷ್ಟೀಕರಿಸುತ್ತಾರೆ). ಆದರೆ, ಅದನ್ನು ನಿರ್ಣಾಯಕವಾಗಿ ತಮ್ಮ ಕಡೆಗೆ ತಿರುಗಿಸಿಕೊಳ್ಳುವಲ್ಲಿ ಮೈತ್ರಿ ಪಕ್ಷಗಳು ಶಕ್ತರಾಗಲಿಲ್ಲ; ಮಾಯಾವತಿಯವರ ಮುಸ್ಲಿಂ ವೋಟಿನ ಹೇಳಿಕೆ ದೊಡ್ಡ ಡ್ಯಾಮೇಜ್ ಮಾಡಿತು ಎಂದು ಅಭಿಜಿತ್ ಹೇಳುತ್ತಾರೆ.

ಅದೇ ರೀತಿ ವಾರಣಾಸಿಯಲ್ಲಿ ಸ್ಪರ್ಧೆ ಮಾಡುವುದಾಗಿ ಸೂಚನೆ ನೀಡಿ ‘ಸಸ್ಪೆನ್ಸ್’ನಲ್ಲಿ ಇಟ್ಟಿದ್ದ ಪ್ರಿಯಾಂಕಾ ಮತ್ತು ಕಾಂಗ್ರೆಸ್ ಬಹಳ ದೊಡ್ಡ ತಪ್ಪನ್ನು (shock doctrine) ಮಾಡಿದರು ಹಾಗೂ ತೇಜ್ ಬಹದ್ದೂರ್ ಯಾದವ್‍ರನ್ನು ಕಣಕ್ಕಿಳಿಸುವ ಮೂಲಕ (ನಂತರ ನಾಮಪತ್ರ ತಿರಸ್ಕೃತಗೊಂಡಿತು) ಸ್ಪರ್ಧೆ ಇರುವುದು ಮೋದಿ ಹಾಗೂ ಮೈತ್ರಿಯ ಮಧ್ಯೆ ಎಂಬ ಚಿತ್ರಣವನ್ನು ಕೊಡುವಲ್ಲಿಯೂ ಅಖಿಲೇಶ್-ಮಾಯಾವತಿ ಯಶಸ್ವಿಯಾದರು ಎಂಬುದು ಅವರ ಅಭಿಪ್ರಾಯ. ಇವೆಲ್ಲದರ ಲಾಭ ಬಿಜೆಪಿಗಾಗುತ್ತದೆ ಎಂದು ಅವರು ಹೇಳುತ್ತಾರೆ.

ಜೊತೆಗೆ ಪೂರ್ವ ಉ.ಪ್ರ.ದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಶಕ್ತಿ, ಪ್ರಿಯಾಂಕಾರ ಎಂಟ್ರಿಯಿಂದ ಮತ್ತು ಬಾಬುಸಿಂಗ್ ಕುಶ್ವಾಹಾ ಹಾಗೂ ರಮಕಾಂತ ಯಾದವ್‍ರ ಸೇರ್ಪಡೆಯಿಂದ ಬಲ ಹೆಚ್ಚಿಸಿಕೊಂಡಿದೆ. ಆದರೆ, ಇವೆಲ್ಲವೂ ಬಿಜೆಪಿಗೆ ಸಹಾಯ ಮಾಡಬಹುದು ಎಂಬ ಅನಿಸಿಕೆ ವ್ಯಕ್ತ ಮಾಡುತ್ತಾರೆ.

ಅದೇನೇ ಇದ್ದರೂ, ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹಿಂದಿನಷ್ಟು ಸೀಟುಗಳನ್ನು ಪಡೆದುಕೊಳ್ಳುವುದಿಲ್ಲ ಎಂಬುದು ಸರ್ವಸಮ್ಮತ ಅಭಿಪ್ರಾಯವಾಗಿದೆ. ಮೇಲೆ ಹೇಳಲಾಗಿರುವ ಹಲವು ಅಂಶಗಳು ಬಿಜೆಪಿಯ ವಿರುದ್ಧವಾದರೆ, ಅದು 10ರಿಂದ 15 ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಮೈತ್ರಿಯ ವಿರುದ್ಧವಾದರೆ, ಬಿಜೆಪಿಯು 65 ಸೀಟುಗಳವರೆಗೆ ಗೆಲ್ಲಬಹುದು. ವಿಶ್ಲೇಷಣೆಯಲ್ಲಿ ಸೇಫ್ ಇರಬೇಕು ಎಂದಾದಲ್ಲಿ ಬಿಜೆಪಿಯು 38, ಮೈತ್ರಿಯು 37 ಮತ್ತು ಕಾಂಗ್ರೆಸ್ 4-5 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಬೇಕಾಗುತ್ತದೆ.

ಅಂತಿಮ ಫಲಿತಾಂಶವು ಮೇ 23ಕ್ಕೇ ಬರುತ್ತದಾದರೂ, ಮೇ 18ರ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...