Homeಮುಖಪುಟನೆಲಕ್ಕುರುಳಿದ ಅಂಬೇಡ್ಕರ್ ಪ್ರತಿಮೆಯ ತಲೆ: ಈ ನೆಲದ ಹುನ್ನಾರಗಳ ಅನಾವರಣ..

ನೆಲಕ್ಕುರುಳಿದ ಅಂಬೇಡ್ಕರ್ ಪ್ರತಿಮೆಯ ತಲೆ: ಈ ನೆಲದ ಹುನ್ನಾರಗಳ ಅನಾವರಣ..

- Advertisement -
- Advertisement -

ಆಕ್ಟಿವಿಸ್ಟ್, ಸಿನೆಮಾ ನಿರ್ದೇಶಕಿ, ಪತ್ರಕರ್ತೆ, ಬರಹಗಾರ್ತಿಯಾದ ರೇವತಿ ಸುನಾಮಿ ಪೀಡಿತ ಪ್ರದೇಶದ ಪರಿಹಾರ ಕೆಲಸಕ್ಕೆ ನಾಗಪಟ್ಟಣಂಗೆ ಹೋದರು. ಪರಿಹಾರ ಕಾರ್ಯದಲ್ಲೂ ಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವಿನ ತಾರತಮ್ಯ ಕಂಡು ರೋಸಿ ಹೋಗಿ ಸಿನೆಮಾ ಮಾಡಿದರು. ಅಷ್ಟಕ್ಕೇ ಸುಮ್ಮನಾಗದೇ, ಶೋಷಿತ ಸಮುದಾಯದ ಮಕ್ಕಳಿಗೆಂದು ‘ವಾನವಿಲ್ (ಕಾಮನಬಿಲ್ಲು)’ ಎಂಬ ಶಾಲೆಯನ್ನು ತೆರೆದರು. ಇಂದು ಆ ಮಕ್ಕಳಿಗೆ ವಿಶಿಷ್ಟ ಲೋಕಜ್ಞಾನವನ್ನು ಕಲಿಸುತ್ತಿರುವ ವಾನವಿಲ್ ರೇವತಿಯ ಕ್ರಿಯಾಶೀಲತೆಗೆ ಸಾಕ್ಷಿ. ಎಲ್ಲ ಜನಪರ ಆಂದೋಲನಗಳ ಒಡನಾಡಿ ರೇವತಿಗೆ ಜಾತಿ ದೌರ್ಜನ್ಯ ಬಹುವಾಗಿ ಕಾಡುವ ವಿಚಾರವಾದ್ದರಿಂದ ಅದರ ಸುತ್ತಲೇ ತಮ್ಮ ಲೇಖನವನ್ನು ಕೇಂದ್ರೀಕರಿಸಿದ್ದಾರೆ. ಈ ಲೇಖನವನ್ನು ಕನ್ನಡಕ್ಕೆ ರಾಜಶೇಖರ್ ಅಕ್ಕಿಯವರು ಅನುವಾದಿಸಿದ್ದಾರೆ

ಆಗಸ್ಟ್ 26ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯಮ್ ಎಂಬ ಊರಿನ ವೀಡಿಯೊ ಒಂದು ವೈರಲ್ ಆಗತೊಡಗಿತು. ಅಲ್ಲಿಯ ಪೊಲೀಸ್ ಸ್ಟೇಷನ್ ಎದುರಿಗಿರುವ ವೇದಾರಣ್ಯಮ್ ಬಸ್ ಸ್ಟ್ಯಾಂಡ್‍ನಲ್ಲಿ ಸ್ಥಾಪಿಸಲಾದ ಅಂಬೇಡ್ಕರ್ ಪ್ರತಿಮೆಯ ವೇದಿಕೆಗೆ ಒಬ್ಬ ಯುವಕ ಹತ್ತುವುದನ್ನು ಹಾಗೂ ಡಾ.ಅಂಬೇಡ್ಕರ್ ಅವರ ಸಿಮೆಂಟಿನ ಪ್ರತಿಮೆಯ ಶಿರಚ್ಛೇದ ಮಾಡಿದ್ದನ್ನು ಈ ವೀಡಿಯೊದಲ್ಲಿ ಕಾಣಬಹುದಾಗಿದೆ. ಅಲ್ಲಿ ಜನರ ಒಂದು ದೊಡ್ಡ ಗುಂಪು ಆ ವ್ಯಕ್ತಿಯನ್ನು ಕೇಕೆಹಾಕಿ ಹುರಿದುಂಬಿಸುವುದನ್ನೂ ಕಾಣಬಹುದು.

ಆ ವಿಡಿಯೋ ವೈರಲ್ ಆದ ನಂತರ ಎಲ್ಲೆಡೆಯಿಂದ ಖಂಡನೆಗಳು ಹರಿದುಬಂದವು. ವಿದುತಲೈ ಚಿರತೈಗಲ್ ಕಾಟ್ಚಿ, ತಮಿಳುನಾಡು ಅನ್‍ಟಚಬಿಲಿಟಿ ಇರ್ಯಾಡಿಕೇಷನ್ ಫ್ರಂಟ್ ಹಾಗೂ ಇತರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡವು. ಅವರು ದುಷ್ಕರ್ಮಿಗಳನ್ನು ಗೂಂಡಾ ಕಾಯಿದೆಯ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು. ಘಟನೆಯಾದ ಎರಡು ದಿನಗಳವರೆಗೆ ವೇದಾರಣ್ಯಮ್ ಪಟ್ಟಣವನ್ನು ಪೊಲೀಸ್ ಕಣ್ಗಾವಲಿನಲ್ಲಿ ಇಡಲಾಗಿತ್ತು ಹಾಗೂ ಪೊಲೀಸರು 37 ಜನರನ್ನು ಬಂಧಿಸಿದರು.

ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲು ಒಂದು ಚಿಕ್ಕ ಘಟನೆಯು ಕಾರಣವಾಗಿದೆ ಎಂದು ವರದಿ ಮಾಡಲಾಗಿದೆ. ಒಂದು ಚಿಕ್ಕ ಅಪಘಾತವು ಒಂದು ಚಿಕ್ಕ ಹಿಂದೂ ಸಂಘಟನೆಯ ಒಬ್ಬ ನಾಯಕ ಮತ್ತು ರಾಮಕೃಷ್ಣಪುರಮ್‍ನ ಒಬ್ಬ ದಲಿತ ಯುವಕನ ನಡುವೆ ಜಗಳಕ್ಕೆ ಕಾರಣವಾಯಿತು. ಆದರೆ ಅಲ್ಲಿಯ ಸಾಮಾಜಿಕ ಕಾರ್ಯಕರ್ತರು ಹೇಳುವುದೇನೆಂದರೆ, ಈ ಹಿಂದೂ ಜಾತಿವಾದಿ ಸಂಘಟನೆಯು ಅಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ತೆಗೆದುಹಾಕಬೇಕೆಂದು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ ಹಾಗೂ ಈ ವಿಷಯದಲ್ಲಿ ಕಾನೂನಾತ್ಮಕ ಮಾರ್ಗವನ್ನೂ ಅಳವಡಿಸಿ ವಿಫಲವಾಗಿದ್ದಾರೆ.

ಭಾರತ ಸಂವಿಧಾನದ ಪಿತಾಮಹನ ಪ್ರತಿಮೆಯನ್ನು ಅಲ್ಲಿಂದ ತೆಗೆಯಲು ಇವರು ನೀಡಿರುವ ಕಾರಣ, ಈ ಪ್ರತಿಮೆ ವರ್ಷಕ್ಕೊಂದು ಸಲ ಆಗುವ ದೇವಸ್ಥಾನದ ಮೆರವಣಿಗೆಗೆ ಅಡ್ಡಿಯಾಗುತ್ತದೆ ಎಂಬುದು. ಆದರೆ ಈ ಪ್ರತಿಮೆ ಅದೇ ಸ್ಥಳದಲ್ಲಿ ಅನೇಕ ದಶಕಗಳಿಂದ ಇದೆ ಹಾಗೂ ಇಲ್ಲಿಯವರೆಗೆ ಯಾವ ಮೆರವಣಿಗೆಗೂ ಅಡ್ಡಿಯಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ನ್ಯಾಯಾಲಯವು ಈ ಅರ್ಜಿಯನ್ನು ತಳ್ಳಿಹಾಕಿತು. ಹಾಗೂ ಈ ಜಾತಿಸಂಘಟನೆಯು ತಮಿಳುನಾಡಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿರುವ ತೀವ್ರಗಾಮಿ ಹಿಂದೂ ಸಂಘಟನೆಗಳಲ್ಲಿ ಒಂದಾಗಿದ್ದು, ಇವುಗಳು ತಮ್ಮ ಗುರಿ ಸಾಧಿಸಲು ಉದ್ವಿಗ್ನತೆಯನ್ನು ಸೃಷ್ಟಿಸುವ ಪರ್ಯಾಯ ದಾರಿಯನ್ನು ಹಿಡಿದಿವೆ.

ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಸಮಯದಲ್ಲಿ ಆದ ಒಂದು ಸಾಮಾನ್ಯ ಜಗಳವನ್ನು ಒಂದು ದೊಡ್ಡ ಘಟನೆಯನ್ನಾಗಿ ಬಿಂಬಿಸಲಾಗಿದೆ. ಆ ಘಟನೆಯಿಂದ ಸಿಟ್ಟಿಗೆದ್ದ ಆ ಗ್ರಾಮದ ದಲಿತರು ಹಿಂದೂ ಜಾತಿವಾದಿ ನಾಯಕ ಪಾಂಡಿಯಾನ್‍ನ ವಾಹನಕ್ಕೆ ಬೆಂಕಿ ಹಚ್ಚಿದರು ಹಾಗೂ ಇದೇ ಕಾರಣವನ್ನಿಟ್ಟುಕೊಂಡು ಆ ಜಾತಿಸಂಘಟನೆಯ ಜನರು ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದರು.

ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳಬಹುದು ಎನ್ನುವ ಆತಂಕದಿಂದ ಹಾಗೂ ಖಂಡನೆಯ ಗಟ್ಟಿ ಧ್ವನಿ ಎತ್ತಿದ ವಿರೋಧಪಕ್ಷವನ್ನು ತಣಿಸುವ ಪ್ರಯತ್ನದಲ್ಲಿ ತಮಿಳುನಾಡು ಸರಕಾರವು ಹೊಸದೊಂದು ಪ್ರತಿಮೆಯನ್ನು ರಾತ್ರೋರಾತ್ರಿ ತಂದು ಪ್ರತಿಷ್ಠಾಪನೆ ಮಾಡಿದರು. ಜೊತೆಗೆ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.

ಆದರೆ ಸೆಪ್ಟೆಂಬರ್ 19 ರಂದು ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿತು. ಅಂದು ತಮಿಳುನಾಡು ಪೊಲೀಸರು 11 ಜನರ ವಿರುದ್ಧ ಗೂಂಡಾ ಕಾಯಿದೆಯನ್ನು ಹಾಕಿದರು; ಆ 11 ಜನರಲ್ಲಿ 6 ಜನರು ದಲಿತರಾಗಿದ್ದರು.

“ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವ ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ಮತ್ತು ದಲಿತರನ್ನು ದಾಳಿ ಮಾಡಲು ಪ್ರಯತ್ನಿಸುತ್ತಿರುವ ಜಾತಿವಾದಿ ಹಿಂದೂ ಶಕ್ತಿಗಳಿಗೆ ಒಂದು ಬಲವಾದ ಸಂದೇಶ ನೀಡುವ ಬದಲಿಗೆ, ಈ ಘಟನೆಯಲ್ಲಿ ದಲಿತರ ಮೇಲೆ ದೋಷಾರೋಪ ಹೊರಿಸುವ ಮೂಲಕ ತಮಿಳುನಾಡು ಸರಕಾರವು ತನ್ನ ಜಾತಿವಾದಿ ಮನಸ್ಥಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ” ಎಂದು ಟಿಎನ್‍ಯುಎಎಫ್‍ನ ಸಾಮ್ಯುವೆಲ್ ರಾಜ್ ಹೇಳಿದ್ದಾರೆ.

ಇದೇ ಅಂಶವನ್ನು ಹೇಳುತ್ತ ವೇದಾರಣ್ಯಮ್‍ನ ಸಾಮಾಜಿಕ ಕಾರ್ಯಕರ್ತ ಬಿರ್ಲಾ ತಂಗದುರೈ ಅವರು “ಸುಮಾರು 500 ಜನರ ದೊಡ್ಡ ಗುಂಪು ಪ್ರತಿಮೆಯನ್ನು ಉರುಳಿಸುವುದನ್ನು ಒಂದು ಸಾರ್ವಜನಿಕ ಉನ್ಮಾದದ ಸಮಾರಂಭದಂತೆ ಆಯೋಜಿಸಿತ್ತು, ಆದರೆ ಆ ವಿಡಿಯೋದಲ್ಲಿ ಅನೇಕರನ್ನು ಸ್ಪಷ್ಟವಾಗಿ ಗುರುತಿಸಬಹುದಾದರೂ ಪೊಲೀಸರು ಆ ಕಡೆಯಿಂದ ಹೆಚ್ಚು ಜನರನ್ನು ಬಂಧಿಸಿಲ್ಲ. ಅದರ ಬದಲಿಗೆ ರಾಮಕೃಷ್ಣಪುರಂನ ನಿರಪರಾಧಿ ಕಟ್ಟಡ ಕಾರ್ಮಿಕರನ್ನು ತಡರಾತ್ರಿ ಬಂಧಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವುದು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಅಪರಾಧವಾಗಿದೆ. ಆದರೆ, ಈ ಸೆಕ್ಷನ್‍ಗಳ ಅಡಿಯಲ್ಲಿ ದಲಿತರನ್ನು ಏಕೆ ಬಂಧಿಸಲಾಗುತ್ತಿದೆ? ಒಂದು ಖಾಸಗಿ ವಾಹನವನ್ನು ಒಡೆದುಹಾಕಿದ್ದಷ್ಟೆ ಅವರು ಮಾಡಿದ್ದು” ಎಂದು ವಾದಿಸಿದರು.

ರಾತ್ರೋರಾತ್ರಿ ಪ್ರತಿಮೆಯನ್ನು ಸ್ಥಾಪಿಸಿ, ಒಂದೆಡೆ ಜಾತಿವಾದಿ ಹಿಂದೂ ಸಂಘಟನೆಯ ನಾಯಕನ್ನು ಬಂಧಿಸಿ ಇನ್ನೊಂದೆಡೆ ಅದಕ್ಕಿಂತ ಹೆಚ್ಚು ಸಂಖ್ಯೆಯ ದಲಿತರನ್ನು ಬಂಧಿಸಿ, ಅವರ ಮೇಲೆ ಗೂಂಡಾ ಕಾಯಿದೆಯನ್ನು ಹೊರಿಸಿರುವುದು ತಮಿಳುನಾಡು ಸರಕಾರದ ಒಂದು ಪ್ರವೃತ್ತಿಯನ್ನು ತೋರಿಸುತ್ತದೆ. ಅವಶ್ಯಕತೆ ಇದ್ದಾಗ ಅಂಬೇಡ್ಕರ್ ಅವರ ಪ್ರಶಂಸೆ ಮಾಡುವುದು ಹಾಗೂ ಅದೇ ಸಮಯದಲ್ಲಿ ಜಾತಿವಾದಿ ಹಿಂದೂ ಸಂಘಟನೆಗಳಿಗೆ ಅಭಯಹಸ್ತ ನೀಡುವುದೇ ಈ ಸರಕಾರದ ನಿಲುವಾಗಿದೆ.

ದ್ರಾವಿಡ ಚಳವಳಿಯ ತವರೂ, ಇಂದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಡೆಯೆಂದೂ ಭಾವಿಸಲಾದ ತಮಿಳುನಾಡಿನಲ್ಲಿ ಈ ಪರಿಸ್ಥಿತಿ ಇದೆ. ಕೋಮುವಾದವು ಹುಲುಸಾಗಿ ಬೆಳೆಯಲು ಜಾತಿವ್ಯವಸ್ಥೆಯು ತಳಹದಿಯಾಗಿರುವುದೇ ನಿಜವಾದಲ್ಲಿ ತಮಿಳುನಾಡು ‘ಅಭೇದ್ಯ ಕೋಟೆ’ಯಾಗಿ ಉಳಿಯುವುದೇ? ದಲಿತರ ಮೇಲೆ ದೌರ್ಜನ್ಯವೆಸಗುವಲ್ಲಿ ಎಲ್ಲಾ ಪಕ್ಷಗಳೂ ಶಾಮೀಲಾಗುತ್ತವೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿರುವಾಗ ಪ್ರಜಾತಂತ್ರವಾದಿಗಳ ಮುಂದೆ ಇರುವ ದಾರಿಯೇನು? ಇವು ಎಲ್ಲರೂ ಯೋಚಿಸಬೇಕಾದ ಪ್ರಶ್ನೆಗಳಾಗಿವೆ.
ದೇಶಾದ್ಯಂತ ವೈರಲ್ ಆದ ವಿಡಿಯೋ ಹಿಂದೆ ಒಂದು ‘ನಿರ್ಜೀವ’ ಪ್ರತಿಮೆ ಧ್ವಂಸವಾಗಿದ್ದಷ್ಟೇ ಅಲ್ಲ ಎಂಬುದನ್ನು ತಿಳಿಸಲು ಇಷ್ಟೆಲ್ಲಾ ವಿವರಗಳನ್ನು ಒದಗಿಸಬೇಕಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...