Homeಮುಖಪುಟಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

ಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 16/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಆಂಡ್ರೆ ಡೆಲ್ವೋ (Andre Delvaux)

ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್ (ಡಚ್, 1965, The Man Who Had His Hair Cut Short)

ಮದುವೆಯಾಗಿ ಹತ್ತು ವರ್ಷದ ಮಗಳಿರುವ ಗೊವರ್ಟ್ ನಲವತ್ತು ವಯಸ್ಸಿನ ಅಸುಪಾಸಿನ ಶಿಕ್ಷಕ. ಯಾವುದೇ ರೀತಿಯ ವಿಶಿಷ್ಟ ಆಕರ್ಷಣೆ ಹೊಂದಿರದ ಸೀದಾಸಾದ ಬದುಕಿನ ಈ ವ್ಯಕ್ತಿ ತಾನು ಕೆಲಸ ಮಾಡುತ್ತಿರುವ ಶಾಲೆಯಲ್ಲಿ ಕಲಿಯುತ್ತಿರುವ ಆಕರ್ಷಕ ಮತ್ತು ಮೋಹಕ ರೂಪವುಳ್ಳ ಹದಿಹರೆಯದ ಹುಡುಗಿ ಫ್ರಾನ್‌ಳ ಸೆಳೆತಕ್ಕೆ ಸಿಕ್ಕಿಕೊಂಡರೆ? ಗೊವರ್ಟ್‌ನಿಗೆ ತನ್ನ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಲು ಭಯವಾಗಿ, ಫ್ರಾನ್‌ಳನ್ನು ನೋಡಬೇಕೆಂಬ, ಮಾತಾಡಿಸಬೇಕೆಂಬ ಹಂಬಲ ಗೀಳಾಗಿಬಿಟ್ಟರೆ? ಇದೇ ಈ ಸಿನಿಮಾದ ಅತಿ ನವಿರಾದ ಕಥೆ.

ಸಿನಿಮಾದ ಮೊದಲ ಫ್ರೇಮ್‌ನಲ್ಲಿ ಗೊವರ್ಟ್ ತನ್ನ ಮನೆಯ ಸೋಫಾದಲ್ಲಿ ಕಣ್ಮುಚ್ಚಿ ಕನಸ್ಸು ಕಾಣುವಂತೆ ಮಲಗಿರುತ್ತಾನೆ. ಫ್ರೇಮ್‌ನ ಹೊರಗಿಂದ ಹೆಂಡತಿಯ ಧ್ವನಿ ಕೇಳಿ ಮೇಲೇಳುತ್ತಾನೆ. ಮಗಳು ತಂದು ಕೊಡುವ ಕಾಫಿ ಹೀರಿ, ಶಾಲೆಯಲ್ಲಿ ನಡೆಯಲಿರುವ ಪದವಿ ಪುರಸ್ಕೃತರ ಸಮಾರಂಭಕ್ಕೆ ತಯಾರಾಗಿ ಹೋಗುವ ಮೊದಲು, ತನ್ನ ಸಂಪೂರ್ಣ ದೇಹ ಕಾಣುವ ಆಳೆತ್ತರದ ಕನ್ನಡಿಯ ಮುಂದೆ ನಿಂತು, ಅಲ್ಲಿ ಹಣ್ಣಾಗಿ ಒಣಗಿ ಹೋಗುತ್ತಿರುವ ಬಾಳೆಹಣ್ಣುಗಳನ್ನು ನೋಡಿ, “ಇವುಗಳನ್ನು ಇಂದೇ ತಿನ್ನಬೇಕು, ನಾಳೆಗೆ ಇವು ಹಾಳಾಗುತ್ತವೆ” ಎನ್ನುತ್ತಾನೆ.

ಸ್ಟಾನ್ಲಿ ಕ್ಯುಬ್ರಿಕ್‌ರ ಲೊಲಿತಾ(1962) ಸಿನಿಮಾದ ಗಾಢವಾದ ಛಾಯೆ ಇರುವ ಸಿನಿಮಾ ಇದು. ಲೊಲಿತಾ ವ್ಲಾಡಿಮಿರ್ ನಬಕೊವ್ ಅವರ ಅದೇ ಹೆಸರಿನ ಕಾದಂಬರಿಯಿಂದ ಪ್ರೇರೇಪಿತವಾಗಿತ್ತು. ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್ ಸಿನಿಮಾ ಅದೇ ಹೆಸರಿನ 1947ರಲ್ಲಿ ಪ್ರಕಟವಾದ ಬೆಲ್ಜಿಯಂ ಕಾದಂಬರಿಯೊಂದನ್ನು ಆಧರಿಸಿದೆ. ನಡುವಯಸ್ಸಿನ ಗಂಡಸಿನ ಮನಸ್ಸಿನ ತಳಮಳಗಳನ್ನು ಅತಿ ಪ್ರಬಲವಾಗಿ ಹಿಡಿದಿಟ್ಟಿದೆ.

ಮುಂದುವರೆದು, ಗೊವರ್ಟ್ ಕೂದಲನ್ನು ಕ್ಷೌರಿಕ ಕತ್ತರಿಸುವ ದೃಶ್ಯವನ್ನು ತೋರಿಸಿರುವ ವಿಧಾನ ಗಮನಾರ್ಹವಾಗಿ ಚಿತ್ರಿತವಾಗಿದೆ. ಕ್ಷೌರಿಕನ ಮಾತಲ್ಲೇ ಹೇಳುವಂತೆ “ವೈದ್ಯರ ಮೇಲೆ ಗೌರವವಿದೆ, ಆದ್ರೂ ನನ್ ಕೆಲಸ ಯಾವುದೇ ಕಲೆಗಿಂತ ಕಮ್ಮಿಯಿಲ್ಲ ಎಂಬುದನ್ನು ಅಷ್ಟೇ ಚೆನ್ನಾಗಿ ಚಿತ್ರಿಸಲಾಗಿದೆ. ಹೀಗೆ ಸಿನಿಮಾದ ಮತ್ತೊಂದು ಭಾಗದಲ್ಲಿ ವೈದ್ಯನೊಬ್ಬ ಸತ್ತು ಕೊಳೆಯುವ ಸ್ಥಿತಿಯಲ್ಲಿರುವ ಶವವನ್ನು ಪರೀಕ್ಷೆ ಮಾಡುವಾಗ, ಶವವನ್ನು ತೋರಿಸದೆ ಬರೀ ಶಬ್ದ ವಿನ್ಯಾಸ ಮತ್ತು ಮುಖಾಭಿನಯದಲ್ಲೇ ದೃಶ್ಯವನ್ನು ಕಟ್ಟಿರುವುದು ಆಸಕ್ತಿದಾಯಕವಾಗಿದೆ.

ಚಿತ್ರಕಥೆಗೆ ಬಂದರೆ, ಶಾಲೆಯಿಂದ ಹೊರಹೋಗುತ್ತಿರುವ ಫ್ರಾನ್‌ಳಿಗೆ ಗೊವರ್ಟ್ ತನ್ನ ಮನಸ್ಸಿನಲ್ಲಿರುವುದನ್ನು ಹೇಳಬೇಕೆಂದು ಪ್ರಯತ್ನಿಸಿ ಸೋಲುತ್ತಾನೆ. ಹೀಗೆ ಕೆಲವು ವರ್ಷಗಳು ಕಳೆದ ನಂತರ ನ್ಯಾಯಾಲಯದ ಕಾರಕೂನನಾಗಿ ಕೆಲಸ ಮಾಡುತ್ತಿರುವಾಗ, ಶವಪರೀಕ್ಷೆಗೆಂದು ವೈದ್ಯನ ಜೊತೆ ಬಂದು ಹೋಟೆಲಿನಲ್ಲಿ ತಂಗಿದ್ದಾಗ, ಫ್ರಾನ್ ಅಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾಳೆ. ಆಗ ಗೊವರ್ಟ್ ತನ್ನಲ್ಲಿ ಉಳಿದುಕೊಂಡಿದ್ದ ಭಾವನೆಯನ್ನು ನಿವೇದಿಸಿಕೊಂಡಾಗ, ಫ್ರಾನ್ ಬೇರೊಬ್ಬ ಶಿಕ್ಷಕನನ್ನು ಪ್ರೀತಿಸುತ್ತಿದ್ದ ವಿಷಯವನ್ನು ತಿಳಿಸುತ್ತಾಳೆ. ಅದನ್ನು ಅರಗಿಸಿಕೊಳ್ಳಲಾಗದೆ ಗೊವರ್ಟ್ ರಿವಾಲ್ವಾರ್‌ನಿಂದ ಆಕೆಯ ಮೇಲೆ ಗುಂಡು ಹಾರಿಸುತ್ತಾನೆ. ಶಬ್ದ ಕೇಳಿ ವೈದ್ಯ ರೂಮಿಗೆ ಬಂದಾಗ, ಗೊವರ್ಟ್ “ದಯವಿಟ್ಟು ಇವಳ ದೇಹವನ್ನು ಕತ್ತರಿಸಬೇಡಿ” ಎಂದು ಪರಿಪರಿಯಾಗಿ ವೈದ್ಯನನ್ನು ಬೇಡಿಕೊಳ್ಳುತ್ತಾನೆ.

ಹತ್ತು ವರ್ಷಗಳ ಕಾಲ ಜೈಲುವಾಸಕ್ಕೆ ತುತ್ತಾಗುವ ಗೊವರ್ಟ್ ಒಂದು ದಿನ ನ್ಯೂಸ್ ರೀಲ್‌ನಲ್ಲಿ ಫ್ರಾನ್‌ಳನ್ನು ನೋಡಿ ಮೊದಲಿಗೆ ಅಘಾತಕ್ಕೊಳಗಾಗುತ್ತಾನೆ. ಅಲ್ಲಿರುವ ವಾರ್ಡನ್ ಬಳಿ ಫ್ರಾನ್ ಬದುಕುಳಿದಿರುವ ವಿಷಯವನ್ನು ಕೇಳಿ, ನಿರಾಳಗೊಂಡು ನಿಟ್ಟುಸಿರುಬಿಡುವ ಮೂಲಕ ಸಿನಿಮಾ ಮುಗಿಯುತ್ತದೆ.

ರಾಂಡೆವೂ ಅಟ್ ಬ್ರೇ (ಫ್ರೆಂಚ್ 1971, Rendezvous at Bray)

ಅದು 1917ನೇ ಇಸವಿ. ಮೊದಲ ವಿಶ್ವಯುದ್ಧ ಎಲ್ಲ ಕಡೆಗೂ ಹರಡುತ್ತಿರುವ ಸಮಯವದು. ಜೂಲಿಯನ್ ಪಿಯಾನೋ ಕಲಿಯುತ್ತಿರುವ ಯುವಕ. ಗೆಳೆಯನನ್ನು ಭೇಟಿಯಾಗಲೆಂದು ಬ್ರೇ ಎಂಬ ಊರಿಗೆ ಹೋಗುತ್ತಾನೆ. ಗೆಳೆಯನಿಗಾಗಿ ಕಾಯುವಿಕೆಯಲ್ಲಾಗುವ ಘಟನೆಗಳೇ ಸಿನಿಮಾದ ಕಥಾನಕ. ಜೂಲಿಯನ್ ರೈಲಿನಲ್ಲಿ ಬಂದಿಳಿದ ನಿಲ್ದಾಣ ನಿರ್ಜನವಾಗಿದೆ. ತನ್ನ ಗೆಳೆಯನ ವಿಳಾಸದ ಕುರಿತು ಯಾರನ್ನಾದರೂ ಕೇಳಲೆಂದು ಊರಿನೊಳಗೆ ನಡೆದುಹೋಗುವಾಗ ಇಡೀ ಊರೇ ಖಾಲಿಯಾಗಿದೆ. ದಾರಿಯಲ್ಲಿ ಆಟವಾಡುತ್ತಿರುವ ಮಕ್ಕಳಿಬ್ಬರನ್ನು ಕೇಳುತ್ತಾನೆ. ಅವರು ಸನ್ನೆಯಲ್ಲಿಯೇ ಮುಂದೆ ಹೋಗುವಂತೆ ಹೇಳುತ್ತಾರೆ. ಕೊನೆಗೆ ಬಂಗಲೆಯೊಂದರ ಗೇಟಿನ ಬಳಿಗೆ ಬರಲು, ಸುಂದರ ಯುವತಿಯೊಬ್ಬಳು (ಮನೆಯ ಕೆಲಸದಾಕೆ) ಅವನನ್ನು ಬರಮಾಡಿಕೊಳ್ಳುತ್ತಾಳೆ.

ರಾಂಡೆವೂ ಅಂದರೆ ಫ್ರೆಂಚ್ ಭಾಷೆಯಲ್ಲಿ ಭೇಟಿ ಎಂದರ್ಥ. ಗೆಳೆಯನ ಭೇಟಿಗೆಂದು ಬಂದ ಜೂಲಿಯಾನ್‌ನಿಗೆ ನಿರಾಸೆ ಕಾದಿರುತ್ತದೆ. ಬಂಗಲೆಯಲ್ಲಿ ಗೆಳೆಯನ ಸುಳಿವಿಲ್ಲ. ಗೆಳೆಯನೂ ಕೂಡ ಪಿಯಾನೋ ಕಲಿಯುತ್ತಿದ್ದವನು. ಮೊದಲ ವಿಶ್ವಯುದ್ದದಲ್ಲಿ ಯುದ್ಧ ವಿಮಾನದ ಪೈಲೆಟ್‌ಆಗಿ ಪಾಲ್ಲೊಂಡಿದ್ದ ಗೆಳೆಯ ತನ್ನ ಊರಿಗೆ ಹಿಂದಿರುಗುತ್ತಿರುವ ಸುದ್ದಿಯನ್ನು ಜೂಲಿಯಾನ್‌ನಿಗೆ ತಿಳಿಸಿರುತ್ತಾನೆ.

ಮನೆಯ ಕೆಲಸದಾಕೆ ಸುಂದರಿ. ಮಿತ ಭಾಷಿ. ಜೂಲಿಯಾನ್ ಅವಳನ್ನು ಪದೇಪದೇ ಮಾತಿಗಿಳಿಯುವಂತೆ ಪ್ರೇರೇಪಿಸಿದರೂ, ಅವಳು ಮಾತ್ರ ತನ್ನ ಕೆಲಸದಲ್ಲಿ ಮಗ್ನರಾಗಿರುತ್ತಾಳೆ.

ಸಿನಿಮಾದ ಮೊದಲ ಭಾಗದಲ್ಲಿ ಚಿತ್ರಿತವಾಗಿರುವ, ಪುಟ್ಟ ಹುಡುಗಿಯೊಬ್ಬಳು ಕುಂಟೆಬಿಲ್ಲೆ ಆಡುವಾಗ ಹಾಡುತ್ತಿದ್ದ ಹಾಡೊಂದು ಜೂಲಿಯಾನ್‌ನನ್ನು ಕಾಡುತ್ತಿರುತ್ತದೆ. ಅದೇ ಹಾಡನ್ನು ಗೆಳೆಯನ ಬಂಗಲೆಯಲ್ಲಿದ್ದ ಪಿಯಾನೋದಲ್ಲಿ ನುಡಿಸುತ್ತಾ, ಪ್ಲಾಷ್‌ಬ್ಯಾಕಿಗೆ ಹೋಗುತ್ತಾನೆ. ಅಲ್ಲಿ ತನ್ನ ಗೆಳೆಯನೊಂದಿಗೆ ಕಾರು ವಿಹಾರ, ಕಾಡಿನ ಸುತ್ತಾಟ ನೆನಪಿಸಿಕೊಳ್ಳುತ್ತಾನೆ.

ಗೋಡೆಯ ಮೇಲಿದ್ದ ಚಿತ್ರಕಲೆಯನ್ನು ನೋಡಿ ತನ್ನ ಭವಿಷ್ಯದ ಕುರಿತು ಕನಸೊಂದನ್ನು ಕಾಣುತ್ತಾನೆ. ಆ ಕನಸಿನಲ್ಲಿ, ಅತಿ ಶ್ರೀಮಂತರು ಮತ್ತು ಗಣ್ಯರ ಮಧ್ಯೆ ಜೂಲಿಯಾನ್ ಪಿಯಾನೋ ನುಡಿಸುತ್ತಿದ್ದಂತೆ, ಗಣ್ಯರೊಬ್ಬರ ಪತ್ನಿ ಜೂಲಿಯಾನ್‌ನಿಗೆ ಆರ್ಕಷಿತಗೊಂಡ ಅವನಿಗೆ ಮುತ್ತಿಡುತ್ತಾಳೆ. ಅವಳ ಪತಿ ಜೂಲಿಯಾನ್‌ನ ಪಿಯಾನೋ ವಾದನೆಗೆ ಮನಸೋತು ಸಾವಿರ ಫ್ರಾಂಕ್ಸ್ ಕೊಡಲು ಬಂದಾಗ, ಜೂಲಿಯಾನ್ ಅದನ್ನು ತೆಗೆದುಕೊಂಡು ಬಿಸಾಕುತ್ತಾನೆ.

ಹೀಗೆ ಹಲವು ಬಾರಿ ಕನಸುಗಳನ್ನು ಕಾಣುತ್ತಾ ಮತ್ತು ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಗೆಳೆಯನಾಗಿ ಕಾಯುತ್ತಾ, ಪದೇಪದೇ ಸುಂದರಿ ಕೆಲಸದಾಕೆಯ ಗಮನ ಸೆಳೆಯಲು ಪ್ರಯತ್ನಿಸುತ್ತಾನೆ. ಆ ಹಳೆಯ ನೆನಪಿನ ಭಾಗವಾಗಿ ಮೂಕಿ ಸಿನಿಮಾವೊಂದಕ್ಕೆ ಲೈವ್ ಸಂಗೀತವನ್ನು ಪಿಯಾನೋದಲ್ಲಿ ನುಡಿಸುತ್ತಾನೆ. ಆ ಸಮಯದಲ್ಲಿ ಪ್ರೇಕ್ಷಕನಿಗೆ ಸಿನಿಮಾದೊಳಗೆ ಮತ್ತೊಂದು ಸಿನಿಮಾದ ವಿಶೇಷ ಅನುಭವ ನೀಡುತ್ತದೆ

ಕಾಯುವಿಕೆಯಲ್ಲಿ ತಿಂಡಿ, ಕಾಫಿ, ವೈನ್, ವಿಸ್ಕಿ, ಊಟವೆಲ್ಲ ಮುಗಿಯುತ್ತದೆ. ದಿನಕ್ಕೊಂದೆ ಬರುವ ರೈಲು ಕೂಡ ಹೊರಟುಹೋದ ಕಾರಣ ಅಂದು ರಾತ್ರಿ ಅಲ್ಲೇ ಉಳಿದುಕೊಳ್ಳದೆ ಬೇರೆ ದಾರಿ ಇಲ್ಲ. ಜೂಲಿಯಾನ್ ಊಟದ ನಂತರ ಮಲಗುವಾಗ ಕೆಲಸದಾಕೆಯೊಂದಿಗೆ ಸಂಭೋಗಿಸುತ್ತಾನೆ.

ಮರುದಿನ ಬೆಳಗಿನ ಸಮಯ ರೈಲಿನ ಶಬ್ದ ಕೇಳಿ ತನ್ನ ಬ್ಯಾಗನ್ನು ಹಿಡಿದು ವೇಗವಾಗಿ ನಿಲ್ದಾಣ ತಲುಪಿದರೆ, ಅಲ್ಲಿ ಸೈನಿಕರ ದಂಡೇ ತುಂಬಿರುತ್ತದೆ. ವಾರ್ತಾಪತ್ರಿಕೆಯಲ್ಲಿ ಯುದ್ಧ ತೀವ್ರವಾಗಿದ್ದು, ಪೈಲಟ್‌ಗಳು ಯುದ್ಧದಲ್ಲಿ ನಿರತರಾಗಿದ್ದಾರೆಂದು ಓದುತ್ತಾನೆ. ಅಷ್ಟರಲ್ಲಿ ನಿಂತಿದ್ದ ರೈಲು ನಿಲ್ದಾಣವನ್ನು ಬಿಟ್ಟು ಹೊರಟಿರುತ್ತದೆ. ಮತ್ತೆ ಜೂಲಿಯಾನ್‌ಗೆ ಎಲ್ಲಿಗೆ ಹೋಗಬೇಕೆಂಬ ಗೊಂದಲ ಮೂಡಿ ನಿಂತಲ್ಲೇ ನಿಂತಿರುತ್ತಾನೆ!

ಆಂಡ್ರೆ ಡೆಲ್ವೋ: ಆಂಡ್ರೆಯವರನ್ನು ಬೆಲ್ಜಿಯಂ ಸಿನಿಮಾದ ಗಾಡ್‌ಫಾದರ್ ಎನ್ನುತ್ತಾರೆ. ಇವರ ಸಿನಿಮಾಗಳಲ್ಲಿ ನಿರ್ದಿಷ್ಟ ಸ್ವರೂಪದ ಕಥೆಗಳು ಇರುವುದಿಲ್ಲ, ಬದಲಾಗಿ ಹಲವು ಸನ್ನಿವೇಶಗಳು ಮತ್ತು ಘಟನೆಗಳು ಇರುತ್ತದೆ. ಇವರ ಕಥಾವಿಷಯಗಳು ಕನಸ್ಸು, ಕಲ್ಪನೆ, ಫ್ಯಾಂಟಸಿ, ಒಂಟಿತನಗಳಿಂದ ಕೂಡಿರುವುದು ವಿಶೇಷ.

ಆಂಡ್ರೆರ ಸಿನಿಮಾ ಕಟ್ಟುವ ಶೈಲಿ ಅತಿ ವಿಭಿನ್ನ. ಸಿನಿಮಾವೆಂದರೆ ಕಥೆ ಇರಲೇಬೇಕು, ಅದರಲ್ಲಿ ಉಬ್ಬರ ಏರಿಳಿತಗಳಿಂದ ಪ್ರೇಕ್ಷಕ ಉಸಿರು ಬಿಗಿ ಹಿಡಿದು ನೋಡುವ ಸ್ಥಿತಿಗೆ ತಂದು ನಿಲ್ಲಸಬೇಕೆಂದುಕೊಳ್ಳದೆ, ಪ್ರೇಕ್ಷಕನನ್ನು ಸಿನಿಮಾದೊಳಗೆ ಎಳೆದು, ಅವನ ಬೌದ್ಧಿಕ ತಿಳಿವಳಿಕೆಗೆ ತಕ್ಕಂತೆ ಸಿನಿಮಾವನ್ನು ವ್ಯಾಖ್ಯನಿಸಲು ಬಿಡುವುದು ನಿರ್ದೇಶಕ ಆಂಡ್ರೆ ಅವರ ಸಾಹಸಮಯ ವಿಶಿಷ್ಟತೆ. ಯಾವುದನ್ನು ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಹೇಳದೆ, ಎಲ್ಲವನ್ನೂ ಒಂದೇ ರೀತಿಯಲ್ಲಿ ತೂಗದೆ, ತರ್ಕ ಮತ್ತು ಅರ್ಥಗಳನ್ನು ಬಿಟ್ಟು ದೃಶ್ಯ ಮತ್ತು ಶಬ್ದಗಳಿಂದಲೇ ಅನುಭವಗಳನ್ನು ಕಟ್ಟುವ ಅವರ ತಂತ್ರ ಶ್ಲಾಘನೀಯ.

ಆಂಡ್ರೆ ಸಿನಿಮಾಗಳಲ್ಲಿ ಕಟ್ಟಿಕೊಡುವ ಪಾತ್ರಗಳ ಮೂಡ್/ಮನಸ್ಥಿತಿಯೇ ಮುಖ್ಯಪಾತ್ರ ವಹಿಸುತ್ತವೆ. ಪದೇಪದೇ ದೃಶ್ಯವನ್ನು ತುಂಡರಿಸದೆ, ಸುದೀರ್ಘವಾದ ದೃಶ್ಯಗಳನ್ನು ಸೃಷ್ಟಿಸಿ, ಪಾತ್ರಗಳನ್ನು ಸದಾ ಹಿಂಬಾಲಿಸುತ್ತಾ ಅವರ ಮನಸ್ಸುಗಳಿಗೆ ಕನ್ನಡಿಯಾಗಿಸುತ್ತಾರೆ.

ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್(1965) ಫ್ರೇಮಿಂಗ್ ವಿನ್ಯಾಸದಲ್ಲೇ ಪಾತ್ರಗಳು ಮತ್ತು ಅವರ ನಡುವಿನ ಸಂಬಂಧಗಳನ್ನು ಒಂದೂ ಡೈಲಾಗ್ ಇಲ್ಲದೇ ಕಟ್ಟಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳನ್ನು ನೆನಪಿಗೆ ಬರುತ್ತವೆ. ಬಸ್ಸಿನಲ್ಲಿ ಗೊವರ್ಟ್ ಪ್ರಯಾಣಿಸುವಾಗ ಕಿಟಿಕಿಯಿಂದ ಕಾಣುವ ಆತ ಕುಳಿತಿರುವ ಒಂದೇ ಸೀಟು, ಅವನ ಒಂಟಿತನವನ್ನು ಹಿಡಿದಿಡುತ್ತದೆ.

ಸಿನಿಮಾದ ಸಾಧನಗಳಾದ ಹಿನ್ನೆಲೆ ಸಂಗೀತ, ಪಾತ್ರಗಳ ಸ್ವಗತಗಳನ್ನು ಬಳಸಿಕೊಳ್ಳುವ ಬಗೆಯನ್ನು ಆಂಡ್ರೆರ ಸಿನಿಮಾಗಳನ್ನು ನೋಡಿಯೇ ಅನುಭವಿಸಬೇಕು. ಒಂದು ಸಿನಿಮಾದಲ್ಲಿ ಅಂತರ್ಮುಖಿ ಪಾತ್ರವೊಂದು ಸ್ವಗತದಲ್ಲಿ ತನ್ನ ಪ್ರೀತಿಯ ನಿವೇದನೆ ಮಾಡಿದರೆ, ಇನ್ನೊಂದು ಸಿನಿಮಾದಲ್ಲಿ ಪಿಯಾನೋ ವಿದ್ಯಾರ್ಥಿಯ ಪಾತ್ರದ ದೆಸೆಯಿಂದ ಸಿನಿಮಾದೂದ್ದಕ್ಕೂ ಪಿಯಾನೋದ ಸಂಗೀತದಿಂದಲೇ ಆವರಿಸಿಕೊಳ್ಳುವಂತೆ ಮಾಡುವುದು ಆಂಡ್ರೆಯವರ ಸಿನಿಮಾ ಸಾಧನೆಯನ್ನು ಎತ್ತಿಹಿಡಿಯುತ್ತದೆ.


ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...