Homeಮುಖಪುಟಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

ಪ್ರೇಕ್ಷಕನ ವ್ಯಾಖ್ಯಾನದಿಂದಲೇ ಸೃಷ್ಟಿಯಾಗುವ ಆಂಡ್ರೆಯವರ ಅಮೂರ್ತ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 16/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಆಂಡ್ರೆ ಡೆಲ್ವೋ (Andre Delvaux)

ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್ (ಡಚ್, 1965, The Man Who Had His Hair Cut Short)

ಮದುವೆಯಾಗಿ ಹತ್ತು ವರ್ಷದ ಮಗಳಿರುವ ಗೊವರ್ಟ್ ನಲವತ್ತು ವಯಸ್ಸಿನ ಅಸುಪಾಸಿನ ಶಿಕ್ಷಕ. ಯಾವುದೇ ರೀತಿಯ ವಿಶಿಷ್ಟ ಆಕರ್ಷಣೆ ಹೊಂದಿರದ ಸೀದಾಸಾದ ಬದುಕಿನ ಈ ವ್ಯಕ್ತಿ ತಾನು ಕೆಲಸ ಮಾಡುತ್ತಿರುವ ಶಾಲೆಯಲ್ಲಿ ಕಲಿಯುತ್ತಿರುವ ಆಕರ್ಷಕ ಮತ್ತು ಮೋಹಕ ರೂಪವುಳ್ಳ ಹದಿಹರೆಯದ ಹುಡುಗಿ ಫ್ರಾನ್‌ಳ ಸೆಳೆತಕ್ಕೆ ಸಿಕ್ಕಿಕೊಂಡರೆ? ಗೊವರ್ಟ್‌ನಿಗೆ ತನ್ನ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಲು ಭಯವಾಗಿ, ಫ್ರಾನ್‌ಳನ್ನು ನೋಡಬೇಕೆಂಬ, ಮಾತಾಡಿಸಬೇಕೆಂಬ ಹಂಬಲ ಗೀಳಾಗಿಬಿಟ್ಟರೆ? ಇದೇ ಈ ಸಿನಿಮಾದ ಅತಿ ನವಿರಾದ ಕಥೆ.

ಸಿನಿಮಾದ ಮೊದಲ ಫ್ರೇಮ್‌ನಲ್ಲಿ ಗೊವರ್ಟ್ ತನ್ನ ಮನೆಯ ಸೋಫಾದಲ್ಲಿ ಕಣ್ಮುಚ್ಚಿ ಕನಸ್ಸು ಕಾಣುವಂತೆ ಮಲಗಿರುತ್ತಾನೆ. ಫ್ರೇಮ್‌ನ ಹೊರಗಿಂದ ಹೆಂಡತಿಯ ಧ್ವನಿ ಕೇಳಿ ಮೇಲೇಳುತ್ತಾನೆ. ಮಗಳು ತಂದು ಕೊಡುವ ಕಾಫಿ ಹೀರಿ, ಶಾಲೆಯಲ್ಲಿ ನಡೆಯಲಿರುವ ಪದವಿ ಪುರಸ್ಕೃತರ ಸಮಾರಂಭಕ್ಕೆ ತಯಾರಾಗಿ ಹೋಗುವ ಮೊದಲು, ತನ್ನ ಸಂಪೂರ್ಣ ದೇಹ ಕಾಣುವ ಆಳೆತ್ತರದ ಕನ್ನಡಿಯ ಮುಂದೆ ನಿಂತು, ಅಲ್ಲಿ ಹಣ್ಣಾಗಿ ಒಣಗಿ ಹೋಗುತ್ತಿರುವ ಬಾಳೆಹಣ್ಣುಗಳನ್ನು ನೋಡಿ, “ಇವುಗಳನ್ನು ಇಂದೇ ತಿನ್ನಬೇಕು, ನಾಳೆಗೆ ಇವು ಹಾಳಾಗುತ್ತವೆ” ಎನ್ನುತ್ತಾನೆ.

ಸ್ಟಾನ್ಲಿ ಕ್ಯುಬ್ರಿಕ್‌ರ ಲೊಲಿತಾ(1962) ಸಿನಿಮಾದ ಗಾಢವಾದ ಛಾಯೆ ಇರುವ ಸಿನಿಮಾ ಇದು. ಲೊಲಿತಾ ವ್ಲಾಡಿಮಿರ್ ನಬಕೊವ್ ಅವರ ಅದೇ ಹೆಸರಿನ ಕಾದಂಬರಿಯಿಂದ ಪ್ರೇರೇಪಿತವಾಗಿತ್ತು. ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್ ಸಿನಿಮಾ ಅದೇ ಹೆಸರಿನ 1947ರಲ್ಲಿ ಪ್ರಕಟವಾದ ಬೆಲ್ಜಿಯಂ ಕಾದಂಬರಿಯೊಂದನ್ನು ಆಧರಿಸಿದೆ. ನಡುವಯಸ್ಸಿನ ಗಂಡಸಿನ ಮನಸ್ಸಿನ ತಳಮಳಗಳನ್ನು ಅತಿ ಪ್ರಬಲವಾಗಿ ಹಿಡಿದಿಟ್ಟಿದೆ.

ಮುಂದುವರೆದು, ಗೊವರ್ಟ್ ಕೂದಲನ್ನು ಕ್ಷೌರಿಕ ಕತ್ತರಿಸುವ ದೃಶ್ಯವನ್ನು ತೋರಿಸಿರುವ ವಿಧಾನ ಗಮನಾರ್ಹವಾಗಿ ಚಿತ್ರಿತವಾಗಿದೆ. ಕ್ಷೌರಿಕನ ಮಾತಲ್ಲೇ ಹೇಳುವಂತೆ “ವೈದ್ಯರ ಮೇಲೆ ಗೌರವವಿದೆ, ಆದ್ರೂ ನನ್ ಕೆಲಸ ಯಾವುದೇ ಕಲೆಗಿಂತ ಕಮ್ಮಿಯಿಲ್ಲ ಎಂಬುದನ್ನು ಅಷ್ಟೇ ಚೆನ್ನಾಗಿ ಚಿತ್ರಿಸಲಾಗಿದೆ. ಹೀಗೆ ಸಿನಿಮಾದ ಮತ್ತೊಂದು ಭಾಗದಲ್ಲಿ ವೈದ್ಯನೊಬ್ಬ ಸತ್ತು ಕೊಳೆಯುವ ಸ್ಥಿತಿಯಲ್ಲಿರುವ ಶವವನ್ನು ಪರೀಕ್ಷೆ ಮಾಡುವಾಗ, ಶವವನ್ನು ತೋರಿಸದೆ ಬರೀ ಶಬ್ದ ವಿನ್ಯಾಸ ಮತ್ತು ಮುಖಾಭಿನಯದಲ್ಲೇ ದೃಶ್ಯವನ್ನು ಕಟ್ಟಿರುವುದು ಆಸಕ್ತಿದಾಯಕವಾಗಿದೆ.

ಚಿತ್ರಕಥೆಗೆ ಬಂದರೆ, ಶಾಲೆಯಿಂದ ಹೊರಹೋಗುತ್ತಿರುವ ಫ್ರಾನ್‌ಳಿಗೆ ಗೊವರ್ಟ್ ತನ್ನ ಮನಸ್ಸಿನಲ್ಲಿರುವುದನ್ನು ಹೇಳಬೇಕೆಂದು ಪ್ರಯತ್ನಿಸಿ ಸೋಲುತ್ತಾನೆ. ಹೀಗೆ ಕೆಲವು ವರ್ಷಗಳು ಕಳೆದ ನಂತರ ನ್ಯಾಯಾಲಯದ ಕಾರಕೂನನಾಗಿ ಕೆಲಸ ಮಾಡುತ್ತಿರುವಾಗ, ಶವಪರೀಕ್ಷೆಗೆಂದು ವೈದ್ಯನ ಜೊತೆ ಬಂದು ಹೋಟೆಲಿನಲ್ಲಿ ತಂಗಿದ್ದಾಗ, ಫ್ರಾನ್ ಅಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾಳೆ. ಆಗ ಗೊವರ್ಟ್ ತನ್ನಲ್ಲಿ ಉಳಿದುಕೊಂಡಿದ್ದ ಭಾವನೆಯನ್ನು ನಿವೇದಿಸಿಕೊಂಡಾಗ, ಫ್ರಾನ್ ಬೇರೊಬ್ಬ ಶಿಕ್ಷಕನನ್ನು ಪ್ರೀತಿಸುತ್ತಿದ್ದ ವಿಷಯವನ್ನು ತಿಳಿಸುತ್ತಾಳೆ. ಅದನ್ನು ಅರಗಿಸಿಕೊಳ್ಳಲಾಗದೆ ಗೊವರ್ಟ್ ರಿವಾಲ್ವಾರ್‌ನಿಂದ ಆಕೆಯ ಮೇಲೆ ಗುಂಡು ಹಾರಿಸುತ್ತಾನೆ. ಶಬ್ದ ಕೇಳಿ ವೈದ್ಯ ರೂಮಿಗೆ ಬಂದಾಗ, ಗೊವರ್ಟ್ “ದಯವಿಟ್ಟು ಇವಳ ದೇಹವನ್ನು ಕತ್ತರಿಸಬೇಡಿ” ಎಂದು ಪರಿಪರಿಯಾಗಿ ವೈದ್ಯನನ್ನು ಬೇಡಿಕೊಳ್ಳುತ್ತಾನೆ.

ಹತ್ತು ವರ್ಷಗಳ ಕಾಲ ಜೈಲುವಾಸಕ್ಕೆ ತುತ್ತಾಗುವ ಗೊವರ್ಟ್ ಒಂದು ದಿನ ನ್ಯೂಸ್ ರೀಲ್‌ನಲ್ಲಿ ಫ್ರಾನ್‌ಳನ್ನು ನೋಡಿ ಮೊದಲಿಗೆ ಅಘಾತಕ್ಕೊಳಗಾಗುತ್ತಾನೆ. ಅಲ್ಲಿರುವ ವಾರ್ಡನ್ ಬಳಿ ಫ್ರಾನ್ ಬದುಕುಳಿದಿರುವ ವಿಷಯವನ್ನು ಕೇಳಿ, ನಿರಾಳಗೊಂಡು ನಿಟ್ಟುಸಿರುಬಿಡುವ ಮೂಲಕ ಸಿನಿಮಾ ಮುಗಿಯುತ್ತದೆ.

ರಾಂಡೆವೂ ಅಟ್ ಬ್ರೇ (ಫ್ರೆಂಚ್ 1971, Rendezvous at Bray)

ಅದು 1917ನೇ ಇಸವಿ. ಮೊದಲ ವಿಶ್ವಯುದ್ಧ ಎಲ್ಲ ಕಡೆಗೂ ಹರಡುತ್ತಿರುವ ಸಮಯವದು. ಜೂಲಿಯನ್ ಪಿಯಾನೋ ಕಲಿಯುತ್ತಿರುವ ಯುವಕ. ಗೆಳೆಯನನ್ನು ಭೇಟಿಯಾಗಲೆಂದು ಬ್ರೇ ಎಂಬ ಊರಿಗೆ ಹೋಗುತ್ತಾನೆ. ಗೆಳೆಯನಿಗಾಗಿ ಕಾಯುವಿಕೆಯಲ್ಲಾಗುವ ಘಟನೆಗಳೇ ಸಿನಿಮಾದ ಕಥಾನಕ. ಜೂಲಿಯನ್ ರೈಲಿನಲ್ಲಿ ಬಂದಿಳಿದ ನಿಲ್ದಾಣ ನಿರ್ಜನವಾಗಿದೆ. ತನ್ನ ಗೆಳೆಯನ ವಿಳಾಸದ ಕುರಿತು ಯಾರನ್ನಾದರೂ ಕೇಳಲೆಂದು ಊರಿನೊಳಗೆ ನಡೆದುಹೋಗುವಾಗ ಇಡೀ ಊರೇ ಖಾಲಿಯಾಗಿದೆ. ದಾರಿಯಲ್ಲಿ ಆಟವಾಡುತ್ತಿರುವ ಮಕ್ಕಳಿಬ್ಬರನ್ನು ಕೇಳುತ್ತಾನೆ. ಅವರು ಸನ್ನೆಯಲ್ಲಿಯೇ ಮುಂದೆ ಹೋಗುವಂತೆ ಹೇಳುತ್ತಾರೆ. ಕೊನೆಗೆ ಬಂಗಲೆಯೊಂದರ ಗೇಟಿನ ಬಳಿಗೆ ಬರಲು, ಸುಂದರ ಯುವತಿಯೊಬ್ಬಳು (ಮನೆಯ ಕೆಲಸದಾಕೆ) ಅವನನ್ನು ಬರಮಾಡಿಕೊಳ್ಳುತ್ತಾಳೆ.

ರಾಂಡೆವೂ ಅಂದರೆ ಫ್ರೆಂಚ್ ಭಾಷೆಯಲ್ಲಿ ಭೇಟಿ ಎಂದರ್ಥ. ಗೆಳೆಯನ ಭೇಟಿಗೆಂದು ಬಂದ ಜೂಲಿಯಾನ್‌ನಿಗೆ ನಿರಾಸೆ ಕಾದಿರುತ್ತದೆ. ಬಂಗಲೆಯಲ್ಲಿ ಗೆಳೆಯನ ಸುಳಿವಿಲ್ಲ. ಗೆಳೆಯನೂ ಕೂಡ ಪಿಯಾನೋ ಕಲಿಯುತ್ತಿದ್ದವನು. ಮೊದಲ ವಿಶ್ವಯುದ್ದದಲ್ಲಿ ಯುದ್ಧ ವಿಮಾನದ ಪೈಲೆಟ್‌ಆಗಿ ಪಾಲ್ಲೊಂಡಿದ್ದ ಗೆಳೆಯ ತನ್ನ ಊರಿಗೆ ಹಿಂದಿರುಗುತ್ತಿರುವ ಸುದ್ದಿಯನ್ನು ಜೂಲಿಯಾನ್‌ನಿಗೆ ತಿಳಿಸಿರುತ್ತಾನೆ.

ಮನೆಯ ಕೆಲಸದಾಕೆ ಸುಂದರಿ. ಮಿತ ಭಾಷಿ. ಜೂಲಿಯಾನ್ ಅವಳನ್ನು ಪದೇಪದೇ ಮಾತಿಗಿಳಿಯುವಂತೆ ಪ್ರೇರೇಪಿಸಿದರೂ, ಅವಳು ಮಾತ್ರ ತನ್ನ ಕೆಲಸದಲ್ಲಿ ಮಗ್ನರಾಗಿರುತ್ತಾಳೆ.

ಸಿನಿಮಾದ ಮೊದಲ ಭಾಗದಲ್ಲಿ ಚಿತ್ರಿತವಾಗಿರುವ, ಪುಟ್ಟ ಹುಡುಗಿಯೊಬ್ಬಳು ಕುಂಟೆಬಿಲ್ಲೆ ಆಡುವಾಗ ಹಾಡುತ್ತಿದ್ದ ಹಾಡೊಂದು ಜೂಲಿಯಾನ್‌ನನ್ನು ಕಾಡುತ್ತಿರುತ್ತದೆ. ಅದೇ ಹಾಡನ್ನು ಗೆಳೆಯನ ಬಂಗಲೆಯಲ್ಲಿದ್ದ ಪಿಯಾನೋದಲ್ಲಿ ನುಡಿಸುತ್ತಾ, ಪ್ಲಾಷ್‌ಬ್ಯಾಕಿಗೆ ಹೋಗುತ್ತಾನೆ. ಅಲ್ಲಿ ತನ್ನ ಗೆಳೆಯನೊಂದಿಗೆ ಕಾರು ವಿಹಾರ, ಕಾಡಿನ ಸುತ್ತಾಟ ನೆನಪಿಸಿಕೊಳ್ಳುತ್ತಾನೆ.

ಗೋಡೆಯ ಮೇಲಿದ್ದ ಚಿತ್ರಕಲೆಯನ್ನು ನೋಡಿ ತನ್ನ ಭವಿಷ್ಯದ ಕುರಿತು ಕನಸೊಂದನ್ನು ಕಾಣುತ್ತಾನೆ. ಆ ಕನಸಿನಲ್ಲಿ, ಅತಿ ಶ್ರೀಮಂತರು ಮತ್ತು ಗಣ್ಯರ ಮಧ್ಯೆ ಜೂಲಿಯಾನ್ ಪಿಯಾನೋ ನುಡಿಸುತ್ತಿದ್ದಂತೆ, ಗಣ್ಯರೊಬ್ಬರ ಪತ್ನಿ ಜೂಲಿಯಾನ್‌ನಿಗೆ ಆರ್ಕಷಿತಗೊಂಡ ಅವನಿಗೆ ಮುತ್ತಿಡುತ್ತಾಳೆ. ಅವಳ ಪತಿ ಜೂಲಿಯಾನ್‌ನ ಪಿಯಾನೋ ವಾದನೆಗೆ ಮನಸೋತು ಸಾವಿರ ಫ್ರಾಂಕ್ಸ್ ಕೊಡಲು ಬಂದಾಗ, ಜೂಲಿಯಾನ್ ಅದನ್ನು ತೆಗೆದುಕೊಂಡು ಬಿಸಾಕುತ್ತಾನೆ.

ಹೀಗೆ ಹಲವು ಬಾರಿ ಕನಸುಗಳನ್ನು ಕಾಣುತ್ತಾ ಮತ್ತು ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಗೆಳೆಯನಾಗಿ ಕಾಯುತ್ತಾ, ಪದೇಪದೇ ಸುಂದರಿ ಕೆಲಸದಾಕೆಯ ಗಮನ ಸೆಳೆಯಲು ಪ್ರಯತ್ನಿಸುತ್ತಾನೆ. ಆ ಹಳೆಯ ನೆನಪಿನ ಭಾಗವಾಗಿ ಮೂಕಿ ಸಿನಿಮಾವೊಂದಕ್ಕೆ ಲೈವ್ ಸಂಗೀತವನ್ನು ಪಿಯಾನೋದಲ್ಲಿ ನುಡಿಸುತ್ತಾನೆ. ಆ ಸಮಯದಲ್ಲಿ ಪ್ರೇಕ್ಷಕನಿಗೆ ಸಿನಿಮಾದೊಳಗೆ ಮತ್ತೊಂದು ಸಿನಿಮಾದ ವಿಶೇಷ ಅನುಭವ ನೀಡುತ್ತದೆ

ಕಾಯುವಿಕೆಯಲ್ಲಿ ತಿಂಡಿ, ಕಾಫಿ, ವೈನ್, ವಿಸ್ಕಿ, ಊಟವೆಲ್ಲ ಮುಗಿಯುತ್ತದೆ. ದಿನಕ್ಕೊಂದೆ ಬರುವ ರೈಲು ಕೂಡ ಹೊರಟುಹೋದ ಕಾರಣ ಅಂದು ರಾತ್ರಿ ಅಲ್ಲೇ ಉಳಿದುಕೊಳ್ಳದೆ ಬೇರೆ ದಾರಿ ಇಲ್ಲ. ಜೂಲಿಯಾನ್ ಊಟದ ನಂತರ ಮಲಗುವಾಗ ಕೆಲಸದಾಕೆಯೊಂದಿಗೆ ಸಂಭೋಗಿಸುತ್ತಾನೆ.

ಮರುದಿನ ಬೆಳಗಿನ ಸಮಯ ರೈಲಿನ ಶಬ್ದ ಕೇಳಿ ತನ್ನ ಬ್ಯಾಗನ್ನು ಹಿಡಿದು ವೇಗವಾಗಿ ನಿಲ್ದಾಣ ತಲುಪಿದರೆ, ಅಲ್ಲಿ ಸೈನಿಕರ ದಂಡೇ ತುಂಬಿರುತ್ತದೆ. ವಾರ್ತಾಪತ್ರಿಕೆಯಲ್ಲಿ ಯುದ್ಧ ತೀವ್ರವಾಗಿದ್ದು, ಪೈಲಟ್‌ಗಳು ಯುದ್ಧದಲ್ಲಿ ನಿರತರಾಗಿದ್ದಾರೆಂದು ಓದುತ್ತಾನೆ. ಅಷ್ಟರಲ್ಲಿ ನಿಂತಿದ್ದ ರೈಲು ನಿಲ್ದಾಣವನ್ನು ಬಿಟ್ಟು ಹೊರಟಿರುತ್ತದೆ. ಮತ್ತೆ ಜೂಲಿಯಾನ್‌ಗೆ ಎಲ್ಲಿಗೆ ಹೋಗಬೇಕೆಂಬ ಗೊಂದಲ ಮೂಡಿ ನಿಂತಲ್ಲೇ ನಿಂತಿರುತ್ತಾನೆ!

ಆಂಡ್ರೆ ಡೆಲ್ವೋ: ಆಂಡ್ರೆಯವರನ್ನು ಬೆಲ್ಜಿಯಂ ಸಿನಿಮಾದ ಗಾಡ್‌ಫಾದರ್ ಎನ್ನುತ್ತಾರೆ. ಇವರ ಸಿನಿಮಾಗಳಲ್ಲಿ ನಿರ್ದಿಷ್ಟ ಸ್ವರೂಪದ ಕಥೆಗಳು ಇರುವುದಿಲ್ಲ, ಬದಲಾಗಿ ಹಲವು ಸನ್ನಿವೇಶಗಳು ಮತ್ತು ಘಟನೆಗಳು ಇರುತ್ತದೆ. ಇವರ ಕಥಾವಿಷಯಗಳು ಕನಸ್ಸು, ಕಲ್ಪನೆ, ಫ್ಯಾಂಟಸಿ, ಒಂಟಿತನಗಳಿಂದ ಕೂಡಿರುವುದು ವಿಶೇಷ.

ಆಂಡ್ರೆರ ಸಿನಿಮಾ ಕಟ್ಟುವ ಶೈಲಿ ಅತಿ ವಿಭಿನ್ನ. ಸಿನಿಮಾವೆಂದರೆ ಕಥೆ ಇರಲೇಬೇಕು, ಅದರಲ್ಲಿ ಉಬ್ಬರ ಏರಿಳಿತಗಳಿಂದ ಪ್ರೇಕ್ಷಕ ಉಸಿರು ಬಿಗಿ ಹಿಡಿದು ನೋಡುವ ಸ್ಥಿತಿಗೆ ತಂದು ನಿಲ್ಲಸಬೇಕೆಂದುಕೊಳ್ಳದೆ, ಪ್ರೇಕ್ಷಕನನ್ನು ಸಿನಿಮಾದೊಳಗೆ ಎಳೆದು, ಅವನ ಬೌದ್ಧಿಕ ತಿಳಿವಳಿಕೆಗೆ ತಕ್ಕಂತೆ ಸಿನಿಮಾವನ್ನು ವ್ಯಾಖ್ಯನಿಸಲು ಬಿಡುವುದು ನಿರ್ದೇಶಕ ಆಂಡ್ರೆ ಅವರ ಸಾಹಸಮಯ ವಿಶಿಷ್ಟತೆ. ಯಾವುದನ್ನು ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಹೇಳದೆ, ಎಲ್ಲವನ್ನೂ ಒಂದೇ ರೀತಿಯಲ್ಲಿ ತೂಗದೆ, ತರ್ಕ ಮತ್ತು ಅರ್ಥಗಳನ್ನು ಬಿಟ್ಟು ದೃಶ್ಯ ಮತ್ತು ಶಬ್ದಗಳಿಂದಲೇ ಅನುಭವಗಳನ್ನು ಕಟ್ಟುವ ಅವರ ತಂತ್ರ ಶ್ಲಾಘನೀಯ.

ಆಂಡ್ರೆ ಸಿನಿಮಾಗಳಲ್ಲಿ ಕಟ್ಟಿಕೊಡುವ ಪಾತ್ರಗಳ ಮೂಡ್/ಮನಸ್ಥಿತಿಯೇ ಮುಖ್ಯಪಾತ್ರ ವಹಿಸುತ್ತವೆ. ಪದೇಪದೇ ದೃಶ್ಯವನ್ನು ತುಂಡರಿಸದೆ, ಸುದೀರ್ಘವಾದ ದೃಶ್ಯಗಳನ್ನು ಸೃಷ್ಟಿಸಿ, ಪಾತ್ರಗಳನ್ನು ಸದಾ ಹಿಂಬಾಲಿಸುತ್ತಾ ಅವರ ಮನಸ್ಸುಗಳಿಗೆ ಕನ್ನಡಿಯಾಗಿಸುತ್ತಾರೆ.

ದಿ ಮ್ಯಾನ್ ಹೂ ಹ್ಯಾಡ್ ಹಿಸ್ ಹೇರ್ ಕಟ್ ಶಾರ್ಟ್(1965) ಫ್ರೇಮಿಂಗ್ ವಿನ್ಯಾಸದಲ್ಲೇ ಪಾತ್ರಗಳು ಮತ್ತು ಅವರ ನಡುವಿನ ಸಂಬಂಧಗಳನ್ನು ಒಂದೂ ಡೈಲಾಗ್ ಇಲ್ಲದೇ ಕಟ್ಟಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳನ್ನು ನೆನಪಿಗೆ ಬರುತ್ತವೆ. ಬಸ್ಸಿನಲ್ಲಿ ಗೊವರ್ಟ್ ಪ್ರಯಾಣಿಸುವಾಗ ಕಿಟಿಕಿಯಿಂದ ಕಾಣುವ ಆತ ಕುಳಿತಿರುವ ಒಂದೇ ಸೀಟು, ಅವನ ಒಂಟಿತನವನ್ನು ಹಿಡಿದಿಡುತ್ತದೆ.

ಸಿನಿಮಾದ ಸಾಧನಗಳಾದ ಹಿನ್ನೆಲೆ ಸಂಗೀತ, ಪಾತ್ರಗಳ ಸ್ವಗತಗಳನ್ನು ಬಳಸಿಕೊಳ್ಳುವ ಬಗೆಯನ್ನು ಆಂಡ್ರೆರ ಸಿನಿಮಾಗಳನ್ನು ನೋಡಿಯೇ ಅನುಭವಿಸಬೇಕು. ಒಂದು ಸಿನಿಮಾದಲ್ಲಿ ಅಂತರ್ಮುಖಿ ಪಾತ್ರವೊಂದು ಸ್ವಗತದಲ್ಲಿ ತನ್ನ ಪ್ರೀತಿಯ ನಿವೇದನೆ ಮಾಡಿದರೆ, ಇನ್ನೊಂದು ಸಿನಿಮಾದಲ್ಲಿ ಪಿಯಾನೋ ವಿದ್ಯಾರ್ಥಿಯ ಪಾತ್ರದ ದೆಸೆಯಿಂದ ಸಿನಿಮಾದೂದ್ದಕ್ಕೂ ಪಿಯಾನೋದ ಸಂಗೀತದಿಂದಲೇ ಆವರಿಸಿಕೊಳ್ಳುವಂತೆ ಮಾಡುವುದು ಆಂಡ್ರೆಯವರ ಸಿನಿಮಾ ಸಾಧನೆಯನ್ನು ಎತ್ತಿಹಿಡಿಯುತ್ತದೆ.


ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...