Homeಕರ್ನಾಟಕದೇವರ ಕುರಿತ 'ಅನಿಕೇತನ' ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

ದೇವರ ಕುರಿತ ‘ಅನಿಕೇತನ’ ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

- Advertisement -
- Advertisement -

ನಮ್ಮ ನಾನುಗೌರಿ.ಕಾಂನ ಬರಹಗಾರಾದ ಪಿ.ಕೆ ಮಲ್ಲನಗೌಡರ್ ರವರು ದೇವರ ಕುರಿತು ತಮ್ಮ ಮಗ ‘ಅನಿಕೇತನ’ನ ಕಲ್ಪನೆಗಳನ್ನು ಬರೆದಿದ್ದಾರೆ. ಮಕ್ಕಳನ್ನು ಆರೋಗ್ಯಕರವಾಗಿ ಬೆಳೆಸುವುದರ ಕುರಿತು ನಾವೆಲ್ಲರೂ ಯೋಚಿಸಬೇಕಿದೆ.

ಗಣೇಶ ವಿಸರ್ಜನೆ ವೇಳೆ ರಸ್ತೆಯಲ್ಲಿ ಕುಣಿದ ಮಗ ಅಲೈ ದೇವರ ಮೆರವಣಿಗೆಯಲ್ಲೂ ಕುಣಿದು ಬಂದಿದ್ದಾನೆ. ದೇವರ ಕುರಿತಾಗಿ ಮಕ್ಕಳ ಕಲ್ಪನೆಗಳೇ ಸುಂದರ ಮತ್ತು ವಿಚಿತ್ರ.

ಕಳೆದ ವಾರ ಎಲ್ಲಡೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ 9ನೇ ದಿನದ ಗಣಪತಿಯ ವಿಸರ್ಜನೆ ಜೋರಾಗಿ ನಡೆದಿದೆ. ಜತೆಯಲ್ಲೇ ಅಲೈ (ಮೊಹರಂ) ದೇವರುಗಳ ಮೆರವಣಿಗೆ ಕೂಡ. ಇನ್ನೊಂದು ಕಡೆ ಕೋಲಾರದಲ್ಲಿ ಗಣೇಶ ವಿಸರ್ಜನೆಗೆ ಹೋದ ಆರು ಮಕ್ಕಳು ಜೀವ ತೆತ್ತಿವೆ…
ದೇವರ ಕುರಿತಾಗಿ ಮಕ್ಕಳಲ್ಲಿ ಸುಂದರ ಮತ್ತು ವಿಚಿತ್ರ ಕಲ್ಪನೆ ಮತ್ತು ಭಾವಗಳಿರುತ್ತವೆ. ಆದರೆ ಬರುಬರುತ್ತ ಉತ್ತರ ಕರ್ನಾಟಕದಲ್ಲಿ ಮತೀಯವಾದಿ ಸಂಘಟನೆಗಳ ಜಾಲ ಹೆಚ್ಚಿದಂತೆ ಗಣೇಶ ಉತ್ಸವ ಮತ್ತು ಮೊಹರಂ ಒಂದಕ್ಕೊಂದು ಸ್ಪರ್ಧಿ ಎನ್ನುವಂತೆ ಬಿಂಬಿಸಲಾಗಿದೆ. ಆದರೆ ಸಮಾಧಾನದ ಅಂಶವೆಂದರೆ ಜನ ಈ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ಗಣೇಶನೂ ಬೇಕು ಮತ್ತು ಅಲೈ ದೇವರುಗಳೂ ಬೇಕು. ವಕ್ರತುಂಡ ಹಾಡುವ ಮಕ್ಕಳೇ ಅಲೈ ದೇವರನ್ನು ಇಟ್ಟಿರುವ ಮಸೀದಿ ಮುಂದೆ ತೋಡಿದ ಕುಣಿಯ ಸುತ್ತ ‘ಅಲೈ..ಅಲೈ’ ಎಂದು ಕುಣಿದು ಸಂಭ್ರಮಿಸುತ್ತವೆ.

ಮಕ್ಕಳು ದೇವರ ಬಗ್ಗೆ ಸೃಷ್ಟಿಸಿಕೊಳ್ಳುವ ಕಲ್ಪನೆಗಳು ಹೇಗಿರಬೇಕು? ಅದರಲ್ಲಿ ತಂದೆ ತಾಯಿ ಪಾತ್ರವೇನು? ತಜ್ಞರು ಈ ಬಗ್ಗೆ ಹೇಳಬೇಕು. ಆದರೆ, ದೇವರ ಕುರಿತೂ ಪ್ರಶ್ನಿಸುವ ಗುಣ ಅವರಲ್ಲಿ ಬಂದಾಗಲಷ್ಟೇ ಅವರ ಕಲ್ಪನಾ ಶಕ್ತಿ ಇನ್ನಷ್ಟು ಹರಿತವಾಗಬಹುದು.

ಮನುಷ್ಯನ ಮುಖ ಆನೆಗೆ: ಮಗನ ಬೊಂಬಾಟ್ ಕಲ್ಪನೆ
ಮಗ ಅನಿಕೇತನ ಆಗ ಒಂದೂವರೆ ವರ್ಷದವನೂ ಆಗಿರಲಿಲ್ಲ. ನನ್ನ ಹೆಂಡತಿ ನಾಕೈದು ಬಾರಿ ‘ಗಣೇಶನಿಗೆ ಆನೆ ಮುಖ ಹೇಗೆ ಬಂತು?’ ಎಂದು ಹೇಳುವ ಕತೆಯನ್ನು ಅವನಿಗೆ ಹೇಳುತ್ತ ಬಂದಿದ್ದಳು. ಆಗ ನಾವು ಬಾಡಿಗೆಗಿದ್ದ ಮನೆಯ ಓನರು ಪ್ರೊ. ಬಡಿಗೇರ್ ರಾಜ್ಯ ವಿಜ್ಞಾನ ಪರಿಷತ್‍ನ ಸದಸ್ಯರಾಗಿದ್ದವರು ಮತ್ತು ವೈಜ್ಞಾನಿಕ ಮನೋಭಾವದವರು. ನಾನು ಮತ್ತು ಅವರು ಹೇಳುತ್ತಿದ್ದ ಹೊಸ ಬಗೆಯ ಕತೆಗಳೇ ಅನಿಕೇತನನ ಮೇಲೆ ಪ್ರಭಾವ ಬೀರಿದ್ದವೋ ಏನೋ ಗೊತ್ತಿಲ್ಲ.

ಒಮ್ಮೆ ನಾವೆಲ್ಲರೂ ಕುಳಿತಾಗ ಪ್ರೊಫೆಸರ್ ಮಗ ಅಜಿತ್ (ಸಾಫ್ಟ್ ವೇರ್ ಇಂಜಿನಿಯರ್ ಮತ್ತು ವನ್ಯಜೀವಿ ಪ್ರಿಯ) ಅನಿಕೇತನನಿಗೆ ಕತೆಯೊಂದನ್ನು ಹೇಳಲು ಕೇಳಿದಾಗ ಗಣೇಶನ ಗಜಮುಖದ ಕತೆ ಹೇಳಿದ ಅನಿಕೇತನ ಜೋರಾಗಿ ನಗುತ್ತ, “ಅಜಿತ್ ಮಾಮಾ, ಅಲ್ಲಿ ಶಿವ ಗಣೇಶನ ರುಂಡ ಕಟ್ ಮಾಡ್ಯಾನಲ್ಲ, ಅದನ್ನ ತಗಂಡ್ ಹೋಗಿ ಆ ಆನಿಗೆ ಹಚ್ಚಿಬಿಡೋಣ ಬಾ.. ಪಾಪ ಆ ಆನಿ” ಎಂದುಬಿಟ್ಟ…
ಎಲ್ಲರಿಗೂ ಖುಷಿ ಮತ್ತರು ಆಶ್ಚರ್ಯ. ವನ್ಯಜೀವಿ ಪ್ರಿಯ ಅಜಿತ್ ಅಂತೂ ಅಂದಿನಿಂದ ಅನಿಕೇತನನ ಫ್ಯಾನೇ ಆಗಿಬಿಟ್ಟ.

ಹನುಮಂತನ ಗಲ್ಲಗಳೇಕೆ ಉಬ್ಬಿವೆ ಗೊತ್ತಾ?
ಒಂದಿನ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೇವು. ಒಂದೂವರೆ ವರ್ಷದ ಅನಿಕೇತನ ಅವರ ಮನೆಯ ಹಾಲ್‍ನಲ್ಲಿ ಹಾಕಿದ್ದ ಹನುಮಂತನ ದೊಡ್ಡ ಫೋಟೊ ನೋಡುತ್ತಲೇ ಇದ್ದ. ಅಲ್ಲಿವರೆಗೂ ಅವನು ಆ ಗಾತ್ರದ ಹನುಮಂತನ ಫೋಟೊ ನೋಡಿರಲಿಲ್ಲ. ನಂತರ ಬಾಯಲ್ಲಿ ನೀರು ತುಂಬಿಕೊಳ್ಳುವುದು, ಎರಡು ಕ್ಷಣ ಹನುಮಂತನ ಫೋಟೊ ನೊಡುವುದು, ಹೊರಗೆ ಹೋಗಿ ನೀರನ್ನು ಉಗುಳಿ ಬಂದು ಜೋರಾಗಿ ನಗುವುದು… ಎರಡು ಮೂರು ಸಲ ಹೀಗೆ ಮಾಡಿದ ಅವನನ್ನು ಅವರ ಅವ್ವ’ಏನಾಗಿದೆ ನಿನಗೆ?’ ಎಂದು ಜಬರಿಸಿದಳು.

‘ಅವ್ವಾ, ಹನುಮಂತ ಬಾಯಿ ಮುಕ್ಕಳಿಸಾಕ ನೀರು ಹಾಕ್ಕೊಂಡಾನ. ಆದ್ರ ಹೊಳ್ಳಿ ಅದನ್ನ ಹೊರಗ ಉಗಳಾಕ ಬರವಲ್ದು ಅಂವಂಗ… ಹ ಹ ಹಾ… ಅದಕ್ಕ ಅವ್ನ ಗಲ್ಲುಮ್ ಅಂತಾ ಉಬ್ಬ್ಯಾವ ನೋಡ್ಬೇ’ ಎಂದು ಅನಿಕೇತನ ತನ್ನ ‘ಸಂಶೋಧನೆ’ಯನ್ನು ಮಂಡಿಸಿದ.!!

ಪ್ರಶ್ನೆ ಕೇಳುವ, ಕೆಲವು ಪ್ರಶ್ನೆಗಳಿಗೆ ತಮ್ಮದೇ ಕಲ್ಪನೆಯ ಉತ್ತರ ಸೃಷ್ಟಿಸುವ ಮಕ್ಕಳು ಸಾಕಷ್ಟಿವೆ. ಆದರೆ, ದೇವರ ಬಗ್ಗೆ ಹೀಗೆಲ್ಲ ಪ್ರಶ್ನೆ ಕೇಳುವ, ವಿಡಂಬನೆ ಮಾಡುವ ಮಕ್ಕಳನ್ನೇ ಕೆಲವು ಪೋಷಕರು ಬೈದು ಗದರಿಸುತ್ತಾರೆ. ಅಂತಹ ಒಂದು ಮನಸ್ಥಿತಿಯನ್ನು ಮತೀಯವಾದಿ ಸಂಘಟನೆಗಳು ಬಿತ್ತಿವೆ.

ಆದರೆ, ಸಾವಿರಾರು ಅನಿಕೇತನರು ನಿನ್ನೆ ಗಣೇಶನ ಮುಂದೆಯೂ, ಅಲೈ ದೇವರ ಮುಂದೆಯೂ ಕುಣಿದಿ ಬಂದಿದ್ದಾರೆ. ನಮಗಂತೂ ಆಶಾವಾದ ಇದ್ದೇ ಇದೆ. ದೇವರು ಮತ್ತು ಮತದ ಹೆಸರಲ್ಲಿ ಈ ಸಮಾಜವನ್ನು ಅಷ್ಟು ಸುಲಭವಾಗಿ ಒಡೆಯಲಾಗುವುದಿಲ್ಲ ಎಂದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...