Homeಕರ್ನಾಟಕದೇವರ ಕುರಿತ 'ಅನಿಕೇತನ' ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

ದೇವರ ಕುರಿತ ‘ಅನಿಕೇತನ’ ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

- Advertisement -
- Advertisement -

ನಮ್ಮ ನಾನುಗೌರಿ.ಕಾಂನ ಬರಹಗಾರಾದ ಪಿ.ಕೆ ಮಲ್ಲನಗೌಡರ್ ರವರು ದೇವರ ಕುರಿತು ತಮ್ಮ ಮಗ ‘ಅನಿಕೇತನ’ನ ಕಲ್ಪನೆಗಳನ್ನು ಬರೆದಿದ್ದಾರೆ. ಮಕ್ಕಳನ್ನು ಆರೋಗ್ಯಕರವಾಗಿ ಬೆಳೆಸುವುದರ ಕುರಿತು ನಾವೆಲ್ಲರೂ ಯೋಚಿಸಬೇಕಿದೆ.

ಗಣೇಶ ವಿಸರ್ಜನೆ ವೇಳೆ ರಸ್ತೆಯಲ್ಲಿ ಕುಣಿದ ಮಗ ಅಲೈ ದೇವರ ಮೆರವಣಿಗೆಯಲ್ಲೂ ಕುಣಿದು ಬಂದಿದ್ದಾನೆ. ದೇವರ ಕುರಿತಾಗಿ ಮಕ್ಕಳ ಕಲ್ಪನೆಗಳೇ ಸುಂದರ ಮತ್ತು ವಿಚಿತ್ರ.

ಕಳೆದ ವಾರ ಎಲ್ಲಡೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ 9ನೇ ದಿನದ ಗಣಪತಿಯ ವಿಸರ್ಜನೆ ಜೋರಾಗಿ ನಡೆದಿದೆ. ಜತೆಯಲ್ಲೇ ಅಲೈ (ಮೊಹರಂ) ದೇವರುಗಳ ಮೆರವಣಿಗೆ ಕೂಡ. ಇನ್ನೊಂದು ಕಡೆ ಕೋಲಾರದಲ್ಲಿ ಗಣೇಶ ವಿಸರ್ಜನೆಗೆ ಹೋದ ಆರು ಮಕ್ಕಳು ಜೀವ ತೆತ್ತಿವೆ…
ದೇವರ ಕುರಿತಾಗಿ ಮಕ್ಕಳಲ್ಲಿ ಸುಂದರ ಮತ್ತು ವಿಚಿತ್ರ ಕಲ್ಪನೆ ಮತ್ತು ಭಾವಗಳಿರುತ್ತವೆ. ಆದರೆ ಬರುಬರುತ್ತ ಉತ್ತರ ಕರ್ನಾಟಕದಲ್ಲಿ ಮತೀಯವಾದಿ ಸಂಘಟನೆಗಳ ಜಾಲ ಹೆಚ್ಚಿದಂತೆ ಗಣೇಶ ಉತ್ಸವ ಮತ್ತು ಮೊಹರಂ ಒಂದಕ್ಕೊಂದು ಸ್ಪರ್ಧಿ ಎನ್ನುವಂತೆ ಬಿಂಬಿಸಲಾಗಿದೆ. ಆದರೆ ಸಮಾಧಾನದ ಅಂಶವೆಂದರೆ ಜನ ಈ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ಗಣೇಶನೂ ಬೇಕು ಮತ್ತು ಅಲೈ ದೇವರುಗಳೂ ಬೇಕು. ವಕ್ರತುಂಡ ಹಾಡುವ ಮಕ್ಕಳೇ ಅಲೈ ದೇವರನ್ನು ಇಟ್ಟಿರುವ ಮಸೀದಿ ಮುಂದೆ ತೋಡಿದ ಕುಣಿಯ ಸುತ್ತ ‘ಅಲೈ..ಅಲೈ’ ಎಂದು ಕುಣಿದು ಸಂಭ್ರಮಿಸುತ್ತವೆ.

ಮಕ್ಕಳು ದೇವರ ಬಗ್ಗೆ ಸೃಷ್ಟಿಸಿಕೊಳ್ಳುವ ಕಲ್ಪನೆಗಳು ಹೇಗಿರಬೇಕು? ಅದರಲ್ಲಿ ತಂದೆ ತಾಯಿ ಪಾತ್ರವೇನು? ತಜ್ಞರು ಈ ಬಗ್ಗೆ ಹೇಳಬೇಕು. ಆದರೆ, ದೇವರ ಕುರಿತೂ ಪ್ರಶ್ನಿಸುವ ಗುಣ ಅವರಲ್ಲಿ ಬಂದಾಗಲಷ್ಟೇ ಅವರ ಕಲ್ಪನಾ ಶಕ್ತಿ ಇನ್ನಷ್ಟು ಹರಿತವಾಗಬಹುದು.

ಮನುಷ್ಯನ ಮುಖ ಆನೆಗೆ: ಮಗನ ಬೊಂಬಾಟ್ ಕಲ್ಪನೆ
ಮಗ ಅನಿಕೇತನ ಆಗ ಒಂದೂವರೆ ವರ್ಷದವನೂ ಆಗಿರಲಿಲ್ಲ. ನನ್ನ ಹೆಂಡತಿ ನಾಕೈದು ಬಾರಿ ‘ಗಣೇಶನಿಗೆ ಆನೆ ಮುಖ ಹೇಗೆ ಬಂತು?’ ಎಂದು ಹೇಳುವ ಕತೆಯನ್ನು ಅವನಿಗೆ ಹೇಳುತ್ತ ಬಂದಿದ್ದಳು. ಆಗ ನಾವು ಬಾಡಿಗೆಗಿದ್ದ ಮನೆಯ ಓನರು ಪ್ರೊ. ಬಡಿಗೇರ್ ರಾಜ್ಯ ವಿಜ್ಞಾನ ಪರಿಷತ್‍ನ ಸದಸ್ಯರಾಗಿದ್ದವರು ಮತ್ತು ವೈಜ್ಞಾನಿಕ ಮನೋಭಾವದವರು. ನಾನು ಮತ್ತು ಅವರು ಹೇಳುತ್ತಿದ್ದ ಹೊಸ ಬಗೆಯ ಕತೆಗಳೇ ಅನಿಕೇತನನ ಮೇಲೆ ಪ್ರಭಾವ ಬೀರಿದ್ದವೋ ಏನೋ ಗೊತ್ತಿಲ್ಲ.

ಒಮ್ಮೆ ನಾವೆಲ್ಲರೂ ಕುಳಿತಾಗ ಪ್ರೊಫೆಸರ್ ಮಗ ಅಜಿತ್ (ಸಾಫ್ಟ್ ವೇರ್ ಇಂಜಿನಿಯರ್ ಮತ್ತು ವನ್ಯಜೀವಿ ಪ್ರಿಯ) ಅನಿಕೇತನನಿಗೆ ಕತೆಯೊಂದನ್ನು ಹೇಳಲು ಕೇಳಿದಾಗ ಗಣೇಶನ ಗಜಮುಖದ ಕತೆ ಹೇಳಿದ ಅನಿಕೇತನ ಜೋರಾಗಿ ನಗುತ್ತ, “ಅಜಿತ್ ಮಾಮಾ, ಅಲ್ಲಿ ಶಿವ ಗಣೇಶನ ರುಂಡ ಕಟ್ ಮಾಡ್ಯಾನಲ್ಲ, ಅದನ್ನ ತಗಂಡ್ ಹೋಗಿ ಆ ಆನಿಗೆ ಹಚ್ಚಿಬಿಡೋಣ ಬಾ.. ಪಾಪ ಆ ಆನಿ” ಎಂದುಬಿಟ್ಟ…
ಎಲ್ಲರಿಗೂ ಖುಷಿ ಮತ್ತರು ಆಶ್ಚರ್ಯ. ವನ್ಯಜೀವಿ ಪ್ರಿಯ ಅಜಿತ್ ಅಂತೂ ಅಂದಿನಿಂದ ಅನಿಕೇತನನ ಫ್ಯಾನೇ ಆಗಿಬಿಟ್ಟ.

ಹನುಮಂತನ ಗಲ್ಲಗಳೇಕೆ ಉಬ್ಬಿವೆ ಗೊತ್ತಾ?
ಒಂದಿನ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೇವು. ಒಂದೂವರೆ ವರ್ಷದ ಅನಿಕೇತನ ಅವರ ಮನೆಯ ಹಾಲ್‍ನಲ್ಲಿ ಹಾಕಿದ್ದ ಹನುಮಂತನ ದೊಡ್ಡ ಫೋಟೊ ನೋಡುತ್ತಲೇ ಇದ್ದ. ಅಲ್ಲಿವರೆಗೂ ಅವನು ಆ ಗಾತ್ರದ ಹನುಮಂತನ ಫೋಟೊ ನೋಡಿರಲಿಲ್ಲ. ನಂತರ ಬಾಯಲ್ಲಿ ನೀರು ತುಂಬಿಕೊಳ್ಳುವುದು, ಎರಡು ಕ್ಷಣ ಹನುಮಂತನ ಫೋಟೊ ನೊಡುವುದು, ಹೊರಗೆ ಹೋಗಿ ನೀರನ್ನು ಉಗುಳಿ ಬಂದು ಜೋರಾಗಿ ನಗುವುದು… ಎರಡು ಮೂರು ಸಲ ಹೀಗೆ ಮಾಡಿದ ಅವನನ್ನು ಅವರ ಅವ್ವ’ಏನಾಗಿದೆ ನಿನಗೆ?’ ಎಂದು ಜಬರಿಸಿದಳು.

‘ಅವ್ವಾ, ಹನುಮಂತ ಬಾಯಿ ಮುಕ್ಕಳಿಸಾಕ ನೀರು ಹಾಕ್ಕೊಂಡಾನ. ಆದ್ರ ಹೊಳ್ಳಿ ಅದನ್ನ ಹೊರಗ ಉಗಳಾಕ ಬರವಲ್ದು ಅಂವಂಗ… ಹ ಹ ಹಾ… ಅದಕ್ಕ ಅವ್ನ ಗಲ್ಲುಮ್ ಅಂತಾ ಉಬ್ಬ್ಯಾವ ನೋಡ್ಬೇ’ ಎಂದು ಅನಿಕೇತನ ತನ್ನ ‘ಸಂಶೋಧನೆ’ಯನ್ನು ಮಂಡಿಸಿದ.!!

ಪ್ರಶ್ನೆ ಕೇಳುವ, ಕೆಲವು ಪ್ರಶ್ನೆಗಳಿಗೆ ತಮ್ಮದೇ ಕಲ್ಪನೆಯ ಉತ್ತರ ಸೃಷ್ಟಿಸುವ ಮಕ್ಕಳು ಸಾಕಷ್ಟಿವೆ. ಆದರೆ, ದೇವರ ಬಗ್ಗೆ ಹೀಗೆಲ್ಲ ಪ್ರಶ್ನೆ ಕೇಳುವ, ವಿಡಂಬನೆ ಮಾಡುವ ಮಕ್ಕಳನ್ನೇ ಕೆಲವು ಪೋಷಕರು ಬೈದು ಗದರಿಸುತ್ತಾರೆ. ಅಂತಹ ಒಂದು ಮನಸ್ಥಿತಿಯನ್ನು ಮತೀಯವಾದಿ ಸಂಘಟನೆಗಳು ಬಿತ್ತಿವೆ.

ಆದರೆ, ಸಾವಿರಾರು ಅನಿಕೇತನರು ನಿನ್ನೆ ಗಣೇಶನ ಮುಂದೆಯೂ, ಅಲೈ ದೇವರ ಮುಂದೆಯೂ ಕುಣಿದಿ ಬಂದಿದ್ದಾರೆ. ನಮಗಂತೂ ಆಶಾವಾದ ಇದ್ದೇ ಇದೆ. ದೇವರು ಮತ್ತು ಮತದ ಹೆಸರಲ್ಲಿ ಈ ಸಮಾಜವನ್ನು ಅಷ್ಟು ಸುಲಭವಾಗಿ ಒಡೆಯಲಾಗುವುದಿಲ್ಲ ಎಂದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...