Homeಕರ್ನಾಟಕದೇವರ ಕುರಿತ 'ಅನಿಕೇತನ' ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

ದೇವರ ಕುರಿತ ‘ಅನಿಕೇತನ’ ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

- Advertisement -
- Advertisement -

ನಮ್ಮ ನಾನುಗೌರಿ.ಕಾಂನ ಬರಹಗಾರಾದ ಪಿ.ಕೆ ಮಲ್ಲನಗೌಡರ್ ರವರು ದೇವರ ಕುರಿತು ತಮ್ಮ ಮಗ ‘ಅನಿಕೇತನ’ನ ಕಲ್ಪನೆಗಳನ್ನು ಬರೆದಿದ್ದಾರೆ. ಮಕ್ಕಳನ್ನು ಆರೋಗ್ಯಕರವಾಗಿ ಬೆಳೆಸುವುದರ ಕುರಿತು ನಾವೆಲ್ಲರೂ ಯೋಚಿಸಬೇಕಿದೆ.

ಗಣೇಶ ವಿಸರ್ಜನೆ ವೇಳೆ ರಸ್ತೆಯಲ್ಲಿ ಕುಣಿದ ಮಗ ಅಲೈ ದೇವರ ಮೆರವಣಿಗೆಯಲ್ಲೂ ಕುಣಿದು ಬಂದಿದ್ದಾನೆ. ದೇವರ ಕುರಿತಾಗಿ ಮಕ್ಕಳ ಕಲ್ಪನೆಗಳೇ ಸುಂದರ ಮತ್ತು ವಿಚಿತ್ರ.

ಕಳೆದ ವಾರ ಎಲ್ಲಡೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ 9ನೇ ದಿನದ ಗಣಪತಿಯ ವಿಸರ್ಜನೆ ಜೋರಾಗಿ ನಡೆದಿದೆ. ಜತೆಯಲ್ಲೇ ಅಲೈ (ಮೊಹರಂ) ದೇವರುಗಳ ಮೆರವಣಿಗೆ ಕೂಡ. ಇನ್ನೊಂದು ಕಡೆ ಕೋಲಾರದಲ್ಲಿ ಗಣೇಶ ವಿಸರ್ಜನೆಗೆ ಹೋದ ಆರು ಮಕ್ಕಳು ಜೀವ ತೆತ್ತಿವೆ…
ದೇವರ ಕುರಿತಾಗಿ ಮಕ್ಕಳಲ್ಲಿ ಸುಂದರ ಮತ್ತು ವಿಚಿತ್ರ ಕಲ್ಪನೆ ಮತ್ತು ಭಾವಗಳಿರುತ್ತವೆ. ಆದರೆ ಬರುಬರುತ್ತ ಉತ್ತರ ಕರ್ನಾಟಕದಲ್ಲಿ ಮತೀಯವಾದಿ ಸಂಘಟನೆಗಳ ಜಾಲ ಹೆಚ್ಚಿದಂತೆ ಗಣೇಶ ಉತ್ಸವ ಮತ್ತು ಮೊಹರಂ ಒಂದಕ್ಕೊಂದು ಸ್ಪರ್ಧಿ ಎನ್ನುವಂತೆ ಬಿಂಬಿಸಲಾಗಿದೆ. ಆದರೆ ಸಮಾಧಾನದ ಅಂಶವೆಂದರೆ ಜನ ಈ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ಗಣೇಶನೂ ಬೇಕು ಮತ್ತು ಅಲೈ ದೇವರುಗಳೂ ಬೇಕು. ವಕ್ರತುಂಡ ಹಾಡುವ ಮಕ್ಕಳೇ ಅಲೈ ದೇವರನ್ನು ಇಟ್ಟಿರುವ ಮಸೀದಿ ಮುಂದೆ ತೋಡಿದ ಕುಣಿಯ ಸುತ್ತ ‘ಅಲೈ..ಅಲೈ’ ಎಂದು ಕುಣಿದು ಸಂಭ್ರಮಿಸುತ್ತವೆ.

ಮಕ್ಕಳು ದೇವರ ಬಗ್ಗೆ ಸೃಷ್ಟಿಸಿಕೊಳ್ಳುವ ಕಲ್ಪನೆಗಳು ಹೇಗಿರಬೇಕು? ಅದರಲ್ಲಿ ತಂದೆ ತಾಯಿ ಪಾತ್ರವೇನು? ತಜ್ಞರು ಈ ಬಗ್ಗೆ ಹೇಳಬೇಕು. ಆದರೆ, ದೇವರ ಕುರಿತೂ ಪ್ರಶ್ನಿಸುವ ಗುಣ ಅವರಲ್ಲಿ ಬಂದಾಗಲಷ್ಟೇ ಅವರ ಕಲ್ಪನಾ ಶಕ್ತಿ ಇನ್ನಷ್ಟು ಹರಿತವಾಗಬಹುದು.

ಮನುಷ್ಯನ ಮುಖ ಆನೆಗೆ: ಮಗನ ಬೊಂಬಾಟ್ ಕಲ್ಪನೆ
ಮಗ ಅನಿಕೇತನ ಆಗ ಒಂದೂವರೆ ವರ್ಷದವನೂ ಆಗಿರಲಿಲ್ಲ. ನನ್ನ ಹೆಂಡತಿ ನಾಕೈದು ಬಾರಿ ‘ಗಣೇಶನಿಗೆ ಆನೆ ಮುಖ ಹೇಗೆ ಬಂತು?’ ಎಂದು ಹೇಳುವ ಕತೆಯನ್ನು ಅವನಿಗೆ ಹೇಳುತ್ತ ಬಂದಿದ್ದಳು. ಆಗ ನಾವು ಬಾಡಿಗೆಗಿದ್ದ ಮನೆಯ ಓನರು ಪ್ರೊ. ಬಡಿಗೇರ್ ರಾಜ್ಯ ವಿಜ್ಞಾನ ಪರಿಷತ್‍ನ ಸದಸ್ಯರಾಗಿದ್ದವರು ಮತ್ತು ವೈಜ್ಞಾನಿಕ ಮನೋಭಾವದವರು. ನಾನು ಮತ್ತು ಅವರು ಹೇಳುತ್ತಿದ್ದ ಹೊಸ ಬಗೆಯ ಕತೆಗಳೇ ಅನಿಕೇತನನ ಮೇಲೆ ಪ್ರಭಾವ ಬೀರಿದ್ದವೋ ಏನೋ ಗೊತ್ತಿಲ್ಲ.

ಒಮ್ಮೆ ನಾವೆಲ್ಲರೂ ಕುಳಿತಾಗ ಪ್ರೊಫೆಸರ್ ಮಗ ಅಜಿತ್ (ಸಾಫ್ಟ್ ವೇರ್ ಇಂಜಿನಿಯರ್ ಮತ್ತು ವನ್ಯಜೀವಿ ಪ್ರಿಯ) ಅನಿಕೇತನನಿಗೆ ಕತೆಯೊಂದನ್ನು ಹೇಳಲು ಕೇಳಿದಾಗ ಗಣೇಶನ ಗಜಮುಖದ ಕತೆ ಹೇಳಿದ ಅನಿಕೇತನ ಜೋರಾಗಿ ನಗುತ್ತ, “ಅಜಿತ್ ಮಾಮಾ, ಅಲ್ಲಿ ಶಿವ ಗಣೇಶನ ರುಂಡ ಕಟ್ ಮಾಡ್ಯಾನಲ್ಲ, ಅದನ್ನ ತಗಂಡ್ ಹೋಗಿ ಆ ಆನಿಗೆ ಹಚ್ಚಿಬಿಡೋಣ ಬಾ.. ಪಾಪ ಆ ಆನಿ” ಎಂದುಬಿಟ್ಟ…
ಎಲ್ಲರಿಗೂ ಖುಷಿ ಮತ್ತರು ಆಶ್ಚರ್ಯ. ವನ್ಯಜೀವಿ ಪ್ರಿಯ ಅಜಿತ್ ಅಂತೂ ಅಂದಿನಿಂದ ಅನಿಕೇತನನ ಫ್ಯಾನೇ ಆಗಿಬಿಟ್ಟ.

ಹನುಮಂತನ ಗಲ್ಲಗಳೇಕೆ ಉಬ್ಬಿವೆ ಗೊತ್ತಾ?
ಒಂದಿನ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೇವು. ಒಂದೂವರೆ ವರ್ಷದ ಅನಿಕೇತನ ಅವರ ಮನೆಯ ಹಾಲ್‍ನಲ್ಲಿ ಹಾಕಿದ್ದ ಹನುಮಂತನ ದೊಡ್ಡ ಫೋಟೊ ನೋಡುತ್ತಲೇ ಇದ್ದ. ಅಲ್ಲಿವರೆಗೂ ಅವನು ಆ ಗಾತ್ರದ ಹನುಮಂತನ ಫೋಟೊ ನೋಡಿರಲಿಲ್ಲ. ನಂತರ ಬಾಯಲ್ಲಿ ನೀರು ತುಂಬಿಕೊಳ್ಳುವುದು, ಎರಡು ಕ್ಷಣ ಹನುಮಂತನ ಫೋಟೊ ನೊಡುವುದು, ಹೊರಗೆ ಹೋಗಿ ನೀರನ್ನು ಉಗುಳಿ ಬಂದು ಜೋರಾಗಿ ನಗುವುದು… ಎರಡು ಮೂರು ಸಲ ಹೀಗೆ ಮಾಡಿದ ಅವನನ್ನು ಅವರ ಅವ್ವ’ಏನಾಗಿದೆ ನಿನಗೆ?’ ಎಂದು ಜಬರಿಸಿದಳು.

‘ಅವ್ವಾ, ಹನುಮಂತ ಬಾಯಿ ಮುಕ್ಕಳಿಸಾಕ ನೀರು ಹಾಕ್ಕೊಂಡಾನ. ಆದ್ರ ಹೊಳ್ಳಿ ಅದನ್ನ ಹೊರಗ ಉಗಳಾಕ ಬರವಲ್ದು ಅಂವಂಗ… ಹ ಹ ಹಾ… ಅದಕ್ಕ ಅವ್ನ ಗಲ್ಲುಮ್ ಅಂತಾ ಉಬ್ಬ್ಯಾವ ನೋಡ್ಬೇ’ ಎಂದು ಅನಿಕೇತನ ತನ್ನ ‘ಸಂಶೋಧನೆ’ಯನ್ನು ಮಂಡಿಸಿದ.!!

ಪ್ರಶ್ನೆ ಕೇಳುವ, ಕೆಲವು ಪ್ರಶ್ನೆಗಳಿಗೆ ತಮ್ಮದೇ ಕಲ್ಪನೆಯ ಉತ್ತರ ಸೃಷ್ಟಿಸುವ ಮಕ್ಕಳು ಸಾಕಷ್ಟಿವೆ. ಆದರೆ, ದೇವರ ಬಗ್ಗೆ ಹೀಗೆಲ್ಲ ಪ್ರಶ್ನೆ ಕೇಳುವ, ವಿಡಂಬನೆ ಮಾಡುವ ಮಕ್ಕಳನ್ನೇ ಕೆಲವು ಪೋಷಕರು ಬೈದು ಗದರಿಸುತ್ತಾರೆ. ಅಂತಹ ಒಂದು ಮನಸ್ಥಿತಿಯನ್ನು ಮತೀಯವಾದಿ ಸಂಘಟನೆಗಳು ಬಿತ್ತಿವೆ.

ಆದರೆ, ಸಾವಿರಾರು ಅನಿಕೇತನರು ನಿನ್ನೆ ಗಣೇಶನ ಮುಂದೆಯೂ, ಅಲೈ ದೇವರ ಮುಂದೆಯೂ ಕುಣಿದಿ ಬಂದಿದ್ದಾರೆ. ನಮಗಂತೂ ಆಶಾವಾದ ಇದ್ದೇ ಇದೆ. ದೇವರು ಮತ್ತು ಮತದ ಹೆಸರಲ್ಲಿ ಈ ಸಮಾಜವನ್ನು ಅಷ್ಟು ಸುಲಭವಾಗಿ ಒಡೆಯಲಾಗುವುದಿಲ್ಲ ಎಂದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...