Homeಕರ್ನಾಟಕಹಾದರವೋ, ಹನಿಟ್ರ್ಯಾಪೋ, ಅಸಹ್ಯವೋ?..

ಹಾದರವೋ, ಹನಿಟ್ರ್ಯಾಪೋ, ಅಸಹ್ಯವೋ?..

- Advertisement -
- Advertisement -

ಈ ಹನಿಟ್ರ್ಯಾಪ್ ಪ್ರಕರಣದಿಂದ ಹಲವು ಪ್ರಶ್ನೆಗಳು ಎದ್ದಿವೆ. ಹನಿಟ್ರ್ಯಾಪ್‍ಗೆ ಒಳಗಾದ ಶಾಸಕರಲ್ಲಿ ಐದು ಜನ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಆಡಳಿತ ಪಕ್ಷದವರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಇದರಿಂದ ಯಾವುದಾದರೂ ನಷ್ಟ ಉಂಟಾಗಲಿದೆಯೇ?

ಕೋರ್ಟಿನಿಂದ ನಿರ್ಬಂಧ ಬರುವ ಮುಂಚೆ ಎಲ್ಲೆಡೆ ಓಡಾಡಿದ್ದು ಮಧ್ಯ ಕರ್ನಾಟಕದ ಹಾಲಿ ಶಾಸಕರೊಬ್ಬರ ರಾಸಲೀಲೆಯ ವಿಡಿಯೋ. ಆ ನಂತರ ಎಲ್ಲರಿಗೂ ಲಭ್ಯವಾಗಿದ್ದು ಸಾಹುಕಾರರೊಬ್ಬರ ಆಡಿಯೋ. ಅವರ ದನಿ ಪರಿಚಯ ಇರುವ ಯಾರಿಗೂ ಸಂದೇಹ ಉಳಿದಿಲ್ಲ. ಗುಟ್ಟಾಗಿ ಕೆಲವರಿಗೆ ಮಾತ್ರ ಲಭ್ಯವಾಗಿರುವುದು ಮಹಿಳೆಯೊಬ್ಬರು ಯಲ್ಲಮ್ಮನ ಜಾತ್ರೆ ನಂತರ ಸಿಗುತ್ತೇನೆ ಎಂದು ಹೇಳಿದ ‘ಅವರು’ ತನ್ನನ್ನು ಪಟಾಯಿಸಲು ಮಾಡಿದ ಯತ್ನದ ಕುರಿತಾದ ಆಡಿಯೋ. ಆದರೆ, ಎಲ್ಲಿಯೂ ಯಾವ ಆಡಿಯೋ ಅಥವಾ ವಿಡಿಯೋ ಸಿಗದೇ ಇದ್ದರೂ ಕೋರ್ಟಿಗೆ ಹೋಗಿ ಇನ್ನೊಬ್ಬ ಶಾಸಕರೂ ನಿರ್ಬಂಧಕಾಜ್ಞೆ ತಂದುಬಿಟ್ಟರು. ಅಲ್ಲಿಗೆ ಪತ್ರಕರ್ತರ ವಲಯದಲ್ಲಿ ವಿಪರೀತ ವದಂತಿಗಳು ಓಡಾಡಲು ಶುರು ಮಾಡಿದವು.

ಯಾರ ವಿಡಿಯೋ ಓಡಾಡಿತೋ, ಉತ್ತರ ಕರ್ನಾಟಕದ ಆ ಶಾಸಕರು ಹನಿಟ್ರ್ಯಾಪ್‍ಗೆ ಬಲಿಯಾಗಿದ್ದೇನೆಂದು ದೂರು ಕೊಟ್ಟು ಹೀಗೆ ಹೇಳಿದರಂತೆ. ಅವರಿಗೆ ಹಲವಾರು ಕೋಟಿ ದುಡ್ಡಿನ ಬೇಡಿಕೆಯಿಟ್ಟು, ಆ ದುಡ್ಡನ್ನು ಕೊಡದಿದ್ದರೆ ತಮ್ಮಲ್ಲಿರುವ ವಿಡಿಯೋ ಅನ್ನು ಬಹಿರಂಗ ಪಡಿಸುವುದಾಗಿ ಬ್ಲ್ಯಾಕ್ ಮಾಡಲಾಯಿತು. ಆಗ ಶಾಸಕರು ಪೊಲೀಸ್ ಮೊರೆ ಹೊಕ್ಕು, ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಹಾಗೂ ಆ ವಿಡಿಯೊ ಮತ್ತು ಆಡಿಯೊ ತುಣುಕಗಳು ಬಹಿರಂಗಪಡಿಸದಂತೆ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿದ್ದಾರೆ.

ಈ ದೂರಿನ ಮೇಲೆ ಕ್ರಮ ಕೈಗೊಳ್ಳುತ್ತ ಪೊಲೀಸರು ರಾಘವೇಂದ್ರ ಎಂಬ ವ್ಯಕ್ತಿಯನ್ನು ಮತ್ತು ಆತನ ಇಬ್ಬರು ಮಹಿಳಾ ಸಹಚರರನ್ನು ಬಂಧಿಸಿದ್ದಾರೆ. ಬಂಧನದ ಜೊತೆಗೆ ಒಂದು ಹಾರ್ಡ್ ಡಿಸ್ಕ್, ಕೆಲವು ಪೆನ್ ಡ್ರೈವ್, ಕೆಲವು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ವಶಪಡಿಸಿಕೊಂಡದ್ದರಲ್ಲಿ ದೂರು ನೀಡಿದ ಶಾಸಕರಷ್ಟೇ ಅಲ್ಲದೇ ಇನ್ನೂ ಹತ್ತು ಶಾಸಕರ ವಿಡಿಯೋಗಳು ಇವೆ ಎನ್ನಲಾಗಿದೆ. ಬಂಧಿತನಾದ ರಾಘವೇಂದ್ರ ಶಿವಮೊಗ್ಗೆ ಜಿಲ್ಲೆಯವನಾಗಿದ್ದು, ಈಗಾಗಲೇ ಸೈಬರ್ ಅಪರಾಧ ಪ್ರಕರಣಗಳಲ್ಲಿ ಇವನ ವಿರುದ್ಧ ಅನೇಕ ಪ್ರಕರಣಗಳಿವೆ.

ಇಷ್ಟರಲ್ಲಿ ಆಡಿಯೋ ತುಣುಕು ವೈರಲ್ ಆಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ತಾವೂ ಆ ಆಡಿಯೊ ಅನ್ನು ಕೇಳಿಸಿಕೊಂಡಿದ್ದಾಗಿ ಹೇಳಿ, ಆ ಆಡಿಯೊದಲ್ಲಿನ ಧ್ವನಿ ಸಾಹುಕಾರರ ಧ್ವನಿ ಇದ್ದಂತಿದೆ ಎಂದರು. ಆ ಸಾಹುಕಾರ ಯಾರು ಎಂದು ಅವರು ಬಹಿರಂಗಪಡಿಸದಿದ್ದರೂ, ವಲಯದ ಎಲ್ಲರಿಗೂ ಆ ಸಾಹುಕಾರ ಯಾರು ಎಂಬುದು ಸ್ಪಷ್ಟವಾಗಿ ತಿಳಿದಿದೆ. ಈ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ನಿಷ್ಪಕ್ಷಪಾತವಾದ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ‘ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಅಥವಾ ಉದ್ದೇಶಪೂರ್ವಕ ಬಲಿ ಹಾಕುವ ಪ್ರಯತ್ನ ತಮ್ಮದಲ್ಲ’ ಎಂದು ಹೇಳಿಕೆ ನೀಡಬೇಕಾಗಿ ಬಂದಿತು.

ಈ ಹನಿಟ್ರ್ಯಾಪ್ ಪ್ರಕರಣದಿಂದ ಹಲವು ಪ್ರಶ್ನೆಗಳು ಎದ್ದಿವೆ. ಹನಿಟ್ರ್ಯಾಪ್‍ಗೆ ಒಳಗಾದ ಶಾಸಕರಲ್ಲಿ ಐದು ಜನ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಆಡಳಿತ ಪಕ್ಷದವರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಇದರಿಂದ ಯಾವುದಾದರೂ ನಷ್ಟ ಉಂಟಾಗಲಿದೆಯೇ? ಬರೀ ಹನಿ ಟ್ರ್ಯಾಪ್ ಅಷ್ಟೇ ಅಲ್ಲ. ನಮ್ಮ ಪ್ರತಿನಿಧಿಗಳು ಒಳಗೊಂಡಿದ್ದಾರೆ ಎನ್ನಲಾದ ಲೈಂಗಿಕ ಹಗರಣಗಳು ಈ ಮುಂಚೆಯೂ ಹೊರಬಂದಿವೆ. ವಿಧಾನಸಭೆಯಲ್ಲಿ ನೀಲಿ ಚಿತ್ರವನ್ನು ನೋಡುತ್ತ ಕೆಲವರು ಸಿಕ್ಕಿಹಾಕಿಕೊಂಡಿದ್ದರು. ಅವರೇ ಇಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಬಡ್ತಿ ಪಡೆದಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾರ್ವಜನಿಕರು ಇದೆಲ್ಲದರಿಂದ ತಮಗೆ ಪುಗಸಟ್ಟೆ ಮನರಂಜನೆ ಸಿಕ್ಕಿತು ಎಂದು ಕೃತಜ್ಞರಾಗುವ ಸಂಭವವೇ ಹೆಚ್ಚು ಎಂಬುದಕ್ಕೆ ಮೈಸೂರಿನ ಹಾಲಿ ಸಂಸದರೇ ಸಾಕ್ಷಿ. ಅವರ ಕುರಿತಾದ ಆಡಿಯೋ ಮತದಾನಕ್ಕೆ ಮುಂಚೆ ಯಾವ ಪರಿ ಓಡಿತೆಂದರೆ, ಬಹುಶಃ ಅತ್ಯಂತ ಹೆಚ್ಚು ವೈರಲ್ ಆದ ಧ್ವನಿಮುದ್ರಿಕೆ ಅದು. ಅಂದರೆ, ಜನರು ಈ ಹಗರಣಗಳನ್ನು ಸುಲಭವಾಗಿ ಕ್ಷಮಿಸಿಬಿಡುತ್ತಾರೆಯೇ? ಅಥವಾ ಪುರುಷನ ಲೈಂಗಿಕ ಸ್ವೇಚ್ಛಾಚಾರವು ಎಂದಿಗೂ ಕ್ಷಮಾರ್ಹ ವಿಷಯವೇ ಆಗಿದೆಯೇ? ‘ಶೀಲ’ ಎನ್ನುವುದು ಮಹಿಳೆಯರಿಗೆ ಮೀಸಲಾಗಿಸಲ್ಪಟ್ಟ ವಿಷಯ ಎನ್ನುವುದು ಮುಂಚೆಯಿಂದಲೂ ತಿಳಿದ ವಿಷಯ.

ಹಾಗಾಗಿ ಸಾರ್ವಜನಿಕವಾಗಿ ಸದರಿ ಪ್ರಕರಣದಲ್ಲಿ ಉಳಿದುಕೊಂಡಿರುವುದು ಇನ್ನೂ ಯಾರ್ಯಾರ ವೀಡಿಯೋಗಳು ಅಥವಾ ಆಡಿಯೋಗಳು ಸಿಕ್ಕಿವೆಯಂತೆ ಎಂಬ ಕುತೂಹಲ ಬಿಟ್ಟರೆ ಬೇರೇನೂ ಇಲ್ಲ. ಹನಿಟ್ರ್ಯಾಪ್ ಮಾಡಿದವರ ದುರುದ್ದೇಶವೂ ಈಡೇರದೇ ಹೋಗುವ ದುಸ್ಥಿತಿ ಇದೆ. ಏಕೆಂದರೆ ಯಾರಿಗೂ ಮರ್ಯಾದೆ ಹೋಗುತ್ತದೆಂಬ ಭಯ ಕಾಡುತ್ತಿರುವ ಸಾಧ್ಯತೆ ಕಾಣುತ್ತಿಲ್ಲ. ಬೆತ್ತಲೆ ವಿಡಿಯೋಗಳು ಎಲ್ಲೆಡೆ ಕಂಡುಬಂದ ಶಾಸಕರೊಬ್ಬರ ಪತ್ನಿಯ ನಿಗೂಢ ಸಾವೂ ಸಹ ಅವರನ್ನು ಒಂದು ಅವಧಿಗೆ ಮಾತ್ರ ಶಾಸಕಸ್ಥಾನದಿಂದ ವಂಚಿತನನ್ನಾಗಿಸಿತು. ಅದೂ ಸಹಾ ರಾಜ್ಯಾದ್ಯಂತ ಅವರ ಪಕ್ಷದ ಪರವಾದ ಅಲೆ ಇರದಿದ್ದಾಗ. ಈ ಮಧ್ಯೆ ದೇಶಕ್ಕೆಲ್ಲಾ ರಾಮರಾಜ್ಯದ ಕುರಿತು ಪಾಠ ಮಾಡುವ ಸ್ವಾಮೀಜಿಗಳ ಜೊತೆಗೇ ಓಡಾಡುತ್ತಾ ಅವರು ಉಳಿದುಕೊಂಡಿದ್ದರು.

ಇನ್ನು ಸ್ವಾಮೀಜಿಗಳ ವಿಚಾರಕ್ಕೆ ಬರುವುದಾದರೆ, ಅದನ್ನು ಹೇಳದಿರುವುದೇ ಲೇಸು. ಒಪ್ಪಿತ ಲೈಂಗಿಕ ಸಂಬಂಧ ಅಷ್ಟೇ ಅಲ್ಲದೇ ವಿಕೃತ ಲೈಂಗಿಕತೆಗೂ ಮುಂದಾಗಿರುವ ಸ್ವಾಮೀಜಿಗಳು ಸರ್ವಮಾನ್ಯರಾಗಿ ವ್ಯವಹಾರಗಳನ್ನು ನಡೆಸಿಕೊಂಡು ಮುಂದಾಗಿದ್ದಾರೆ. ಶಿಶುಕಾಮಿಯೂ ಇರಬಹುದು ಎನ್ನುವ ಸ್ವಾಮೀಜಿಯ ತೊಡೆಯ ಮೇಲೆ ಹೆಣ್ನುಮಕ್ಕಳನ್ನು ಕುಳ್ಳಿರಿಸಿ ದೀಕ್ಷೆ ಕೊಡಿಸುವ ಸುಶಿಕ್ಷಿತ ತಂದೆ ತಾಯಂದಿರು ಈಗಲೂ ಇದ್ದಾರೆ.

ಈ ಸದ್ಯ ಇದರಲ್ಲೇನಾದರೂ ರಾಜಕೀಯ ಹುನ್ನಾರದ ವಾಸನೆ ಇದೆಯೇ ಎಂಬುದನ್ನು ಪತ್ರಿಕೆ ಕೆದಕಲು ನೋಡಿತು. ಹಾಲಿ (ನಮ್ಮ ಕೈಗೇ ಆಡಿಯೋ, ವಿಡಿಯೋ ಸಿಕ್ಕಿಲ್ಲವಾದರೂ) ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಹೆಚ್ಚಿನವರು ಬಿಜೆಪಿಯಲ್ಲಿ ಇದ್ದಾರಾದರೂ ಒಂದಿಬ್ಬರು ಕಾಂಗ್ರೆಸ್ ಶಾಸಕರೂ ಇದ್ದಾರೆ. ಹೀಗಾಗಿ ಇದನ್ನು ಒಂದು ಪಕ್ಷದವರು ಇನ್ನಾರನ್ನೋ ಸಿಕ್ಕಿ ಹಾಕಿಸಲು ಮಾಡಿದ ತಂತ್ರ ಎನ್ನುವ ಹಾಗಿಲ್ಲ. ಅನರ್ಹ ಶಾಸಕರನ್ನು ಬೆದರಿಸಲು ಬಿಜೆಪಿ ಮೊದಲೇ ಮಾಡಿಸಿತ್ತು ಎಂಬ ವದಂತಿಯೂ ಒಂದಷ್ಟು ಓಡಾಡಿತಾದರೂ, ಬಿಜೆಪಿಯೊಳಗೇ ಇರುವ ಶಾಸಕರು ಮತ್ತು ಸಂಘಪರಿವಾರದ ಮೂಲದ ಶಾಸಕರೂ ಇರುವುದು ಅದನ್ನೂ ಸುಳ್ಳಾಗಿಸಿದೆ. ಯಡಿಯೂರಪ್ಪನವರ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಅರವಿಂದ ಲಿಂಬಾವಳಿಯ ಸಲಿಂಗರತಿಯ ವಿಡಿಯೋ ಬಹಿರಂಗವಾಗಿದ್ದು ಬಿಜೆಪಿಯವರಿಂದಲೇ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಏಕೆಂದರೆ, ಆಗ ಓಡಾಡಿದ ಆಡಿಯೋಗಳಲ್ಲಿ ಒಂದು ಸದರಿ ‘ಹುಡುಗರು’ ಈಶ್ವರಪ್ಪನವರ ಜೊತೆ ಇದರ ಕುರಿತೇ ಮಾತನಾಡುತ್ತಿದ್ದುದೂ ಇತ್ತು. ಅದಕ್ಕೆ ತಕ್ಕುನಾಗಿ ‘ಪ್ರಭಾವಿ’ಗಳಲ್ಲೊಬ್ಬರಾದ ಲಿಂಬಾವಳಿಯು ನಂತರ ಸಚಿವರೂ ಆಗಲಿಲ್ಲ; ರಾಜ್ಯಾಧ್ಯಕ್ಷರೂ ಆಗಲಿಲ್ಲ.

ತೇಜಸ್ವಿ ಸೂರ್ಯರ ‘ಹಗರಣ’ಗಳ ವಿಚಾರದಲ್ಲಿ ‘ಸಂತ್ರಸ್ತೆ’ ಪ್ರತಾಪ್‍ಸಿಂಹರಿಗೆ ದೂರು ಕೊಡುವುದು; ಪ್ರತಾಪ್‍ಸಿಂಹರ ಆಡಿಯೋದಲ್ಲಿ ರಾಮದಾಸ್ ಹೆಸರು ಕೇಳಿಬರುವುದು ಇವೆಲ್ಲವೂ ಬಿಜೆಪಿಯೊಳಗೆ ಇಂಥಾ ಹಲವು ಒಳಸುಳಿಗಳಿರುವ ಸೂಚನೆಯನ್ನಂತೂ ನೀಡುತ್ತಿವೆ. ಕಾಂಗ್ರೆಸ್ ಸರ್ಕಾರವಿದ್ದಾಗ ಸಚಿವ ಎಚ್.ವೈ.ಮೇಟಿ ಇಂಥದ್ದೇ ಒಂದರಲ್ಲಿ ಸಿಕ್ಕಿಕೊಂಡು ರಾಜೀನಾಮೆ ಕೊಟ್ಟರು. ಒಂದೆರಡು ಚಾನೆಲ್ ಬಿಟ್ಟರೆ ಮಿಕ್ಕೆಲ್ಲವೂ ಎಗ್ಗು ಸಿಗ್ಗಿಲ್ಲದೇ ವಿಡಿಯೋವನ್ನೇ ಪ್ರಸಾರ ಮಾಡಿದ್ದವು. ಕಾಂಗ್ರೆಸ್ ನಾಯಕರುಗಳ ಲೈಂಗಿಕ ಸಂಬಂಧಗಳ ಕುರಿತಂತೆ ಗಾಸಿಪ್‍ಗಳಿಗೆ ಕಡಿಮೆಯಿಲ್ಲವಾದರೂ ಮೇಟಿಯವರ ವಿಡಿಯೋ ಬಿಟ್ಟರೆ ಹೊರಬಂದಿದ್ದು ಕಡಿಮೆ. ಆದರೆ, ಬಿಜೆಪಿಯೊಳಗೆ ಸದಾಕಾಲ ಒಂದಲ್ಲಾ ಒಂದು ಕಡೆ ಯಾರದ್ದೋ ರೆಕಾರ್ಡಿಂಗ್ ನಡೆಯುತ್ತಿರಬಹುದು ಇಲ್ಲವೇ ಸಂಚು ರೂಪಿತವಾಗುತ್ತಿರಬಹುದು ಎನ್ನುವ ಮಟ್ಟಿಗೆ ‘ಲೀಲೆಗಳು’ ಇದ್ದಂತಿವೆ. ಇಂತಹ ಲೀಲೆಗಳಲ್ಲಿ ಈಗ ಸಿಕ್ಕಿ ಹಾಕಿಕೊಂಡಿರುವ ಅನರ್ಹರೂ ಕಾಂಗ್ರೆಸ್‍ನಲ್ಲಿದ್ದವರೇ ಆಗಿರುವುದನ್ನೂ ಮರೆಯುವಂತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕ ಜೀವನದಲ್ಲಿರುವವರಿಗೆ ಇರಬೇಕಾದ ಶಿಸ್ತು, ನೀತಿ ಸಂಹಿತೆಗಳಿಂದ ದೂರ ನಿಂತಿರುವುದಷ್ಟೇ ಅಲ್ಲದೇ, ಸಾರ್ವಜನಿಕರೂ ಇವೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳದಿರುವುದು ಒಳ್ಳೆಯ ಬೆಳವಣಿಗೆಯೋ ದುರಂತವೋ ಗೊತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬ ಮಾತಿಗೆ ಅನುಗುಣವಾಗಿ ನಮ್ಮ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...