Homeಮುಖಪುಟನೆರೆ ನೀರಿನಲ್ಲಿ ಫೋಟೋ ಶೂಟ್‌ ನಡೆಸಿ ನಟನೆ ಮಾಡಿದ ಅಣ್ಣಾಮಲೈ - ‘ಕೋಡಂಗಿ’ ಎಂದ ತಮಿಳರು

ನೆರೆ ನೀರಿನಲ್ಲಿ ಫೋಟೋ ಶೂಟ್‌ ನಡೆಸಿ ನಟನೆ ಮಾಡಿದ ಅಣ್ಣಾಮಲೈ – ‘ಕೋಡಂಗಿ’ ಎಂದ ತಮಿಳರು

- Advertisement -
- Advertisement -

ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾದ ಅವಘಡಗಳಿಂದ 4 ಜನರು ಮೃತಪಟ್ಟಿದ್ದಾರೆ. ಚೆನ್ನೈ, ಚೆಂಗಲ್‌ಪೇಟ್‌, ಕಾಂಚೀಪುರಂ, ತಿರುವಳ್ಳೂರು ಮತ್ತು ವೆಲ್ಲೂರು ಜಿಲ್ಲೆಯಲ್ಲಿ ಸೋಮವಾರದಂದೂ ಮಳೆಯಾಗಿದ್ದವು. ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭೇಟಿ ನೀಡಿ ಪರಿಶೀಲಿಸಿದ್ದರು. ಈ ನಡುವೆ ಪರಿಹಾರ ಕಾರ್ಯಕೂಡಾ ಭರದಿಂದ ಸಾಗಿತ್ತು. ಜೊತೆಗೆ ಹವಾಮಾನ ಇಲಾಖೆಯು ಬುಧವಾರ ಮತ್ತು ಗುರುವಾರ ಕೂಡಾ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಸರ್ಕಾರದ ಜೊತೆಗೆ ಕೈಜೋಡಿಸಿರುವ ಹಲವಾರು ಸಂಘ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ನೆರವಾಗುತ್ತಿದೆ. ಈ ಮಧ್ಯೆ ಪರಿಹಾರ ಕಾರ್ಯದಲ್ಲಿ ನಾಟಕೀಯ ದೃಶ್ಯ ಸೃಷ್ಟಿಸಲು ಹೋಗಿ ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ನಗೆಪಾಟಲಿಗೀಡಾಗಿದ್ದಾರೆ.

ಇದನ್ನೂ ಓದಿ: ಮುಂದಿನ 6 ತಿಂಗಳಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ: ಅಣ್ಣಾಮಲೈ ವಿವಾದಿತ ಹೇಳಿಕೆ

ಅಣ್ಣಾಮಲೈ ಅವರು ಮೊಣಕಾಲುದ್ದ ನೀರಿರುವ ಸ್ಥಳದಲ್ಲಿ ರಕ್ಷಣಾ ದೋಣಿಯನ್ನು ನಿಲ್ಲಿಸಿ ಫೋಟೊಗೆ ಪೋಸ್‌ ನೀಡಿದ್ದಾರೆ. ಆದರೆ ಈ ವಿಡಿಯೊ ವೈರಲ್‌ ಆಗಿದ್ದು, ತಮಿಳುನಾಡಿನ ಜನತೆ ಈ ವಿಡಿಯೊವನ್ನು ಇಟ್ಟು, ಕೋಡಂಗಿ ಅಣ್ಣಾಮಲೈ(ಕೋಮಾಲಿ ಅಣ್ಣಾಮಲೈ) ಎಂದು ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಹಲವು ರೀತಿಯ ವಿಡಿಯೊ ವೈರಲ್ ಆಗಿದ್ದು, ಅಣ್ಣಾಮಲೈ ಅವರು ಮೊಣಕಾಲುದ್ದ ನೀರಿರುವ ಸ್ಥಳದಲ್ಲಿ ರಕ್ಷಣೆಗೆ ಬಳಸುವ ದೋಣಿಯಲ್ಲಿ ಕೂತು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

ವೈರಲ್ ಆಗಿರುವ ಒಂದು ವಿಡಿಯೊದಲ್ಲಿ ಮೊಣಕಾಲಿನಷ್ಟು ಕೂಡಾ ನೀರಿಲ್ಲದ ಜಾಗದಲ್ಲಿ ದೋಣಿಯೊಳಗಡೆ ಕೂತಿರುವ ಅಣ್ಣಾಮಲೈ ಫೋಟೋ ಶೂಟ್‌ಗೆ ತಯಾರಾಗುತ್ತಿರುವುದು ಕಾಣುತ್ತದೆ. ನಂತರ ಯಾರೋ ಹಿನ್ನಲೆಯಲ್ಲಿ ಶುರುಮಾಡಿ ಎಂದು ಹೇಳುತ್ತಾರೆ. ಆಗ, ಅಣ್ಣಾಮಲೈ ಅವರು ಮುಂದಕ್ಕೆ ಕೈ ಮುಗಿದು ಯಾರೊಂದಿಗೋ ಮಾತನಾಡುವ ಶೈಲಿಯಲ್ಲಿ ‘ಇಲ್ಲೆ ಇರುವವರಾ ಬ್ರದರ್‌ ನೀವು’ ಎಂದು ಕೇಳುತ್ತಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿದ ಅಣ್ಣಾಮಲೈಗೆ ಸಿ.ಟಿ ರವಿ ಬೆಂಬಲ!

ಮತ್ತೊಂದು ವಿಡಿಯೊದಲ್ಲಿ, ಅಣ್ಣಾಮಲೈ ಸೇರಿದಂತೆ ಕೆಲವರನ್ನು ದೋಣಿಯಲ್ಲಿ ಕೂರಿಸಿ ಎಳೆದುಕೊಂಡು ಹೋಗುತ್ತಿದ್ದಾರೆ. ಅವರ ಹಿಂದೆ ಬಿಜೆಪಿಯ ಧ್ವಜ ಹಿಡಿದು ಹಲವು ಕಾರ್ಯಕರ್ತರು ಕೂಡಾ ಇರುತ್ತಾರೆ. ಈ ವೇಳೆ ಕೂಡಾ ಅಣ್ಣಾಮಲೈ ಸುಖಾಸುಮ್ಮನೆ ಮುಂದೆ ಯಾರೋ ಇದ್ದಾರೆ ಎಂಬ ರೀತಿಯಲ್ಲಿ ನಮಸ್ಕರಿಸಿದ್ದಾರೆ. ಇದೇ ರೀತಿಯ ದೃಶ್ಯವನ್ನು ಉತ್ತರ ಕರ್ನಾಟಕದಲ್ಲಿ ಮಳೆ ಬಂದಾಗ ಬಿಜೆಪಿಯ ಶಾಸಕ ರೇಣುಕಾಚಾರ್ಯ ಅವರು ಕೂಡಾ ಮಾಡಿದ್ದರು. ಈ ಸಂದಂರ್ಭದಲ್ಲೂ ಜನ ಅವರನ್ನು ಟ್ರೋಲ್ ಮಾಡಿದ್ದರು.

ಇನ್ನೊಂದು ವಿಡಿಯೊದಲ್ಲಿ ಮೊಣಕಾಲುದ್ದ ನೀರಿರುವ ಜಾಗದಲ್ಲಿ ಇರುವ ದೋಣಿಯಲ್ಲಿ ಅಣ್ಣಾಮಲೈ ಕೂತಿದ್ದಾರೆ. ಈ ವೇಳೆ ಕ್ಯಾಮೆರಾ ಮ್ಯಾನ್, ‘ಎಲ್ಲರೂ ಈ ಕಡೆ ಬನ್ನಿ, ಒಂದು ಖಾಲಿಯಾಗಿರುವ ಫೋಟೋ ಕ್ಲಿಕ್ ಮಾಡುತ್ತೇನೆ’ ಎಂದು ಹೇಳುತ್ತಾರೆ. ಆಗ ಅಣ್ಣಾ ಮಲೈ ಕೂಡಾ ಅವರನ್ನು ಕಳುಹಿಸುತ್ತಾರೆ. ಜೊತೆಗೆ ಅಲ್ಲೇ ಇದ್ದ ಮಹಿಳೆಯೊಂದಿಗೆ ಕೂಡಾ ಅಣ್ಣಾ ಮಲೈ ಮಾತನಾಡುತ್ತಾರೆ. ಆಗ, ಆ ಅಕ್ಕ ಜೊತೆ ಮಾತಾಡ್ತಾ ಇರೋ ಥರ ಒಂದು ಶಾಟ್ ತಗೋ ಎಂಬ ಧ್ವನಿಯು ಕೇಳುತ್ತದೆ. ಈ ನಡುವೆ ಅಣ್ಣಾಮಲೈ ಮತ್ತೆ ಯಾರಿಗೋ ನಮಸ್ಕಾರ ಮಾಡುವ ರೀತಿಯಲ್ಲಿ ನಟಿಸುತ್ತಾರೆ.

ಇದನ್ನೂ ಓದಿ: ಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! – ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಮಗದೊಂದು ವಿಡಿಯೊದಲ್ಲಿ, ನೀರಿನಿಂದ ರಕ್ಷಣೆಗಾಗಿ ಬದಿಯಲ್ಲಿ ನಿಂತಿದ್ದ ವೃದ್ದೆಯನ್ನು ಮಾತನಾಡಿಸಲು ಅಣ್ಣಾ ಮಲೈ ತೆರಳುತ್ತಾರೆ. ಅವರನ್ನು ಮಾತನಾಡಿಸಿದ ಅವರು, “ಪ್ರತಿಬಾರಿಯ ಮಳೆಗೂ ಹೀಗಾದರೆ ಹೇಗಮ್ಮ? 2015 ರಲ್ಲೂ ಹೀಗೆ, 2021 ರಲ್ಲೂ ಹೀಗೆ” ಎಂದು ಕೇಳುತ್ತಾರೆ. ಈ ವೇಳೆ ಮಹಿಳೆ, “ನೀವು ಬಂದು ಏನು ಮಾಡುತ್ತೀರಿ” ಎಂದು ಪ್ರಶ್ನಿಸುತ್ತಾರೆ.

ಮಾನವೀಯ ನೆರವು ನೀಡಬೇಕಾದ ಸಮಯದಲ್ಲೂ ನಾಟಕ ಮಾಡಲು ಪ್ರಯತ್ನಿಸಿದ ಅಣ್ಣಾ ಮಲೈ ಅವರನ್ನು ತಮಿಳುನಾಡಿನ ಜನರು ಟ್ವಿಟರ್‌ನಲ್ಲಿ ಮೀಮ್ಸ್‌ ಮಾಡಿ ವ್ಯಂಗ್ಯವಾಡುತ್ತಿದ್ದಾರೆ. ‘ಗೋಟ್‌‌ ಆನ್‌ ದಿ ಬೋಟ್’,(ದೋಣಿಯಲ್ಲಿ ಆಡು) ಕೋಮಾಲಿ ಅಣ್ಣಾಮಲೈ (ಕೋಡಂಗಿ ಅಣ್ಣಾಮಲೈ) ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿ ‘ಅಣ್ಣಾಮಲೈ’ ನೇಮಕ

ಡಿಎಂಕೆ ರಾಜ್ಯ ಐಟಿ ವಿಂಗ್ ನಾಯಕರಾದ ಇಸೈ ಅವರು, ಲೈಫ್ ಆಫ್ ಪೈ ಎಂಬ ಕಾದಂಬರಿಯ ಕವರ್‌ ಫೋಟೋದಲ್ಲಿ ಇರುವ ಮನುಷ್ಯನ ತಲೆಗೆ ಅಣ್ಣಾಮಲೈ ಅವರ ಚಿತ್ರ ಎಡಿಟ್ ಮಾಡಿ ‘ಲೈಫ್‌ ಆಫ್ ಪೊಯಿ’(ಸುಳ್ಳಿನ ಜೀವನ) ಎಂದು ವ್ಯಂಗ್ಯವಾಗಿದ್ದಾರೆ.

ಇಷ್ಟೇ ಅಲ್ಲದೆ ಹಲವಾರು ಮೀಮ್ಸ್‌ಗಳನ್ನು ಜನ ಶೇರ್‌ ಮಾಡುತ್ತಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದನ್ನೂ ಓದಿ: ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಣ್ಣಾ ಮಲೈ ಅವರ ಕೆಲಸದ ಬಗ್ಗೆ ಸರಿಯಾಗಿ ಅರಿಯದೆ ,ಮಾತಾಡೋ ಸೋಕಾಲ್ಡ್ ಎಡಬಿಡಂಗಿ ಕೆಲ ಪತ್ರಿಕೆಗಳ ಬಗ್ಗೆ ಜನ ತಲೆ ಕೆಡಿಸಿ ಕೊಳ್ಳಲ್ಲಾ ಬಿಡಿ , ಅದೂ ಚೈನಿ ಪಾಲನೆಯಲ್ಲಿ ನಡೆಯುವ ಕೆಲ ಮಾಧ್ಯಮಗಳು ಯಾವಾಗಲು ಹೀಗೆ ಮಾತಾಡೋದು ಅಂತ ಜನರಿಗೆ ತಿಳಿದಿದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...