Homeಕರ್ನಾಟಕಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! - ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! – ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಎಸ್ಪಿ ಆದ ಬಳಿಕ ಕೊನೆ ಕೊನೆಗೆ ಸೆಲೆಬ್ರೆಟಿಯಂತೆ ಕಂಡುಬಂದಿದ್ದೂ ಸುಳ್ಳಲ್ಲಾ.

- Advertisement -
- Advertisement -

| ಡಿ.ಎಸ್.ಬಿ |

ಪೊಲೀಸ್ ಇಲಾಖೆಯಲ್ಲಿದ್ದೂ ಪ್ರಾಮಾಣಿಕ ಮತ್ತು ಕರ್ತವ್ಯದಲ್ಲಿ ದಕ್ಷನಾಗಿರುವುದರ ಜೊತೆಗೆ ಮಾನವೀಯ ಮನಸ್ಸುಳ್ಳ ಸಮಾಜವಾದಿಯಾಗಿದ್ದರು ಮಧುಕರ ಶೆಟ್ಟಿ. ಅವರ ಅಸೌಖ್ಯದ ಸಾವಿನ ಬಳಿಕ ಜ್ಞಾನೋದಯ ಉಂಟಾಗಿದ್ದರಿಂದ ಅಣ್ಣಾ ಮಲೈ ರಾಜಿನಾಮೆಗೆ ಮುಂದಾಗಿರುವಂತಿದೆ ಎಂಬ ಪ್ರಚಾರ ವ್ಯಾಪಕವಾಗುವ ಲಕ್ಷಣಗಳ ಹಿನ್ನೆಲೆಯಲ್ಲಿ ಈ ಶೀರ್ಷಿಕೆ ನೀಡಲಾಗಿದೆ. ಇಬ್ಬರೂ ಒಂದೇ ಇಲಾಖೆಯವರಾದರೂ ಇಬ್ಬರದ್ದೂ ಪ್ರತ್ಯೇಕ ವ್ಯಕ್ತಿತ್ವ!
ವೃತ್ತಿ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲದಲ್ಲೇ ಕೆಲಸ ನಿರ್ವಹಿಸಿದ್ದು ಅಣ್ಣಾ ಮಲೈ ಎಂದರೇ ಅತಿಶಯೋಕ್ತಿಯಾಗಲಾರದು
ಸಾಮಾಜಿಕ ತುಡಿತ ಇದ್ದರೂ ಉಡುಪಿಯ ಸೇವೆಯ ಅವಧಿಯಲ್ಲಿ ಕೋಮುವಾದಿಗಳಿಂದ ಕಂಗೆಟ್ಟಿದ್ದೂ ಇದೇ ಅಣ್ಣಾ ಮಲೈ.
ಮಟ್ಕಾ ನಿರ್ಮೂಲನೆ ಮಾಡಲು ಮಟ್ಕಾ ದೊರೆಯ ಮನೆಗೆ ನುಗ್ಗಿ ದೊರೆಸಾನಿಯನ್ನೇ ಎಸ್ಪಿ ಕಚೇರಿಗೆ ತಂದಿರಿಸಿಕೊಂಡು ಮಟ್ಕಾ ದೊರೆಗೆ ಬಂಧನದ ಭೀತಿ ಹುಟ್ಟಿಸಿದ್ದ ಅಣ್ಣಾ ಮಲೈ. ಪರಿಸರ ರಕ್ಷಣೆಯ ಹೆಸರಿನ ಸೈಕಲ್ ಸವಾರಿಯ ಕಾರ್ಯಕ್ರಮಕ್ಕೆ ಉಡುಪಿಯ ಪರಿಸರ ವಿರೋಧಿ ಯುಪಿಸಿಎಲ್ ನ ಮಾಲಿಕತ್ವದ ಅದಾನಿ ಫೌಂಡೇಶನ್‍ನ ನೆರವು ಪಡೆದು ವಿಸ್ಮಯ ಹುಟ್ಟಿಸಿದ್ದರು.
ಉಡುಪಿಯ ಎಸ್ಪಿಯಾಗಿ ಪ್ರಭಾರಕ್ಕೆ ಬಂದಾಗಲೇ ದಲಿತ ಸಂಘಟನೆಯವರನ್ನು ಏಕ ವಚನದಲ್ಲಿ ಗದರಿಸಿ, ಸಂಘಟನೆಯನ್ನು ಹೀಯಾಳಿಸಿ ಕೊನೆಗೆ ತನ್ನ ಕನ್ನಡ ಭಾಷೆಯ ತಿಳಿವಳಿಕೆಯ ಕೊರತೆಯ ನೆರವಿನಲ್ಲಿ ಅದನ್ನು ಮರೆಯಾಗಿಸುವಲ್ಲಿ ಯಶಸ್ವಿಯಾಗಿದ್ದರು.
80 ರ ದಶಕದ ಆರಂಭದಲ್ಲಿ ನಡುಮನಿ ನಾರಾಯಣ ಎಂಬ ಎಸ್ಪಿಯ ಬಳಿಕ ಅಕ್ರಮ ದಂಧೆಯವರಲ್ಲಿ ಭೀತಿ ಹುಟ್ಟುವಂತೆ ಮಾಡಿದ್ದೂ ಇದೇ ಅಣ್ಣಾ ಮಲೈ.
ಎಸ್ಪಿಯಾಗುವ ಮೊದಲು ಕಾರ್ಕಳದ ಎಸ್ಪಿಯಾಗಿ ಬಂದಾಗ ಮಾಡಿದ ಸದ್ದೇ ಅವರನ್ನು ಉಡುಪಿ ಎಸ್ಪಿ ಗಾದಿಯಲ್ಲಿ ಕುಳ್ಳಿರಿಸುವಂತೆ ಮಾಡಿತ್ತು!
ಎಸ್ಪಿ ಆದ ಬಳಿಕ ಕೊನೆ ಕೊನೆಗೆ ಸೆಲೆಬ್ರೆಟಿಯಂತೆ ಕಂಡುಬಂದಿದ್ದೂ ಸುಳ್ಳಲ್ಲಾ.
ಮಹತ್ವಾಕಾಂಕ್ಷೆಯಿಂದ ಇಲಾಖೆಗೆ ಬಂದಿದ್ದ ಅಣ್ಣಾ ಮಲೈ ಪ್ರಚಾರ ಬಯಸುವ ಅಧಿಕಾರಿಯಾಗಿ ಇಲ್ಲಿಂದ ವರ್ಗಾವಣೆಯಾಗಿದ್ದನ್ನು ಯಾರೂ ನಿರಾಕರಿಸಲಾರರು.
ಪೊಲೀಸ್ ಇಲಾಖೆಯಲ್ಲಿ ಇದೂ ಅಗತ್ಯ ಇದೆಯೇನೋ ಅನ್ನಿಸುವುದೂ ಸುಳ್ಳಲ್ಲ. ಜನರಲ್ಲಿ ಇಲಾಖೆಯ ಬಗ್ಗೆ ಬರೇ ಭಯ ತುಂಬಿಕೊಂಡಿದ್ದರೇ ಬದಲಾವಣೆ ಆಗದೇನೋ?!
ಕಾರ್ಕಳ ಎಎಸ್ಪಿಯಾಗಿದ್ದಾಗ ಎಸ್ಪಿ ಅವರ ರಿವ್ಯೂ ಮೀಟಿಂಗಿನಲ್ಲಿ ಮಟ್ಕಾ ಹಾವಳಿ ನಿಗ್ರಹಿಸಿದ್ದೇನೆಂದು ಬಡಾಯಿ ಕೊಚ್ಚಿದ್ದ ಅಂದಿನ ಉಡುಪಿ ಡಿವೈಎಸ್ಪಿ ಪ್ರಭುದೇವ ಮಾನೆಯ ಸುಳ್ಳನ್ನು ಬಯಲಾಗಿಸಲು ತಾನು ಆ ಹುದ್ದೆಯ ಪ್ರಭಾರಕ್ಕೆ ಬಂದಾಗ ಮುಂದಾಗಿದ್ದು ಪ್ರಚಾರ ಪ್ರಿಯತೆಯೋ? ಇಲಾಖೆಯನ್ನು ಸರಿಪಡಿಸುತ್ತೇನೆಂಬ ಆಕಾಂಕ್ಷೆಯೋ? ವೃತ್ತಿಯ ವೈ ಮನಸ್ಸೋ ಅರ್ಥವಾಗಿಲ್ಲಾ. ಆದರೂ ಎಸ್ಪಿಯಾಗಿದ್ದಾಗ ಮಟ್ಕಾ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಂಡಿದ್ದನ್ನು ಅಲ್ಲಗಳೆಯಲಾಗದು.
ಗಂಗೊಳ್ಳಿಯಲ್ಲಿ ಹುಟ್ಟಿಕೊಂಡ ಮತೀಯವಾದದ ನಿಗ್ರಹಕ್ಕೆ ನಿಯೋಜಿತರಾದಾಗ ತನ್ನ ಸಿಂಗಂ ಗಿರಿ ಧರ್ಮಾಂಧರ ಗುಂಪಿನ ಎದುರು ನಡೆಯಲಾರದು ಎಂಬ ವಾಸ್ತವ ಅರಿತ ಅಣ್ಣಾ ಮಲೈ ಮತಾಂಧರ ಒತ್ತಾಯಕ್ಕೆ ಮಣಿದು ಆರೋಪಿಗಳ ಬಂಧ ಮುಕ್ತತೆ ಮಾಡುವಂತಾಗಿತ್ತು.
ಅದಕ್ಕಾಗಿಯೇ ಹೇಳಿದ್ದು ಅಣ್ಣಾ ಮಲೈನೇ ಬೇರೆ : ಮಧುಕರ ಶೆಟ್ಟರೇ ಬೇರೆ ಅಂತ.
ಸಿಂಗಂ ಹೆಸರು ಅಂಟಿಕೊಂಡಿದ್ದು ಉಡುಪಿಯಿಂದ!
ಅಣ್ಣಾ ಮಲೈ ಎಂಬ ತಮಿಳಿಗ ಕಾರ್ಕಳ ದ ಎಎಸ್ಪಿಯಾಗಿ ಬಂದಾಗ .ಮಾಡಿದ ಖದರು ಅವರೇ ಉಡುಪಿ ಎಸ್ಪಿಯಾಗಬೇಕು ಅಂತ ಮಾಡಿತ್ತು. ಮುಖ್ಯವಾಗಿ ಆಗ ಜನಪರ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಮಧ್ಯಾವಧಿಯ ಸಂಸದಗಿರಿಯಲ್ಲಿದ್ದರು. ಸಮಾಜವಾದಿ ಸಿದ್ಧರಾಮಯ್ಯರ ಮುಖ್ಯಮಂತ್ರಿತ್ವದಲ್ಲಿ ಕೆಲಸÀಗಾರ ವಿನಯಕುಮಾರ ಸೊರಕೆಯ ಉಸ್ತುವಾರಿ ಗಿರಿಯಲ್ಲಿದ್ದ ಉಡುಪಿಗೆ ಒಬ್ಬ ಖಡಕ್ ಖಾಕಿಯನ್ನು ತರಬೇಕೆಂಬ ನಿರ್ಧಾರ ಮಾಡಲಾಯಿತು. ಅದರಿಂದಲೇ ಜಿಲ್ಲೆಯಲ್ಲೇ ಪ್ರೊಬೇಷನ್ ಗಿರಿಯ ಎಎಸ್ಪಿ ಹುದ್ದೆ ನಿರ್ವಹಿಸಿದ್ದ ಅಣ್ಣಾ ಮಲೈ ಅದೇ ಜಿಲ್ಲೆಯ ಎಸ್ಪಿಯಾಗುವಂತಾಗಿತ್ತು.
ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದಾಗ ಮೊದಲಿಗೆ ಇಲಾಖೆಯ ಒಳಗೇ ಸ್ವಚ್ಛತೆಗೆ ಮುಂದಾಗಿದ್ದರು. ಅದು ಆರಂಭದಲ್ಲೇ ಆಯಕಟ್ಟಿನಲ್ಲಿದ್ದವರಿಗೆ ಅಪಾಯ ತಂದಿರಿಸಿತ್ತು. ಎರಡನೆಯದಾಗಿ ಕ್ರೈಮ್ ಮಟ್ಟಹಾಕಲು ಫೀಲ್ಡಿಗಿಳಿವಾಗಲೂ ಅದು ಎಲ್ಲೂ ಸುದ್ದಿಯಾಗದಂತೆ ಮಾಡಿದರು. ಹಾಗಾಗಿ ಎಸ್ಪಿ ಚಡ್ಡಿ ಹಾಕಿಕೊಂಡು ಸೈಕಲಲ್ಲಿ ಬಂದರಂತೆ. ಜುಗಾರಿಯಲ್ಲಿಗೆ ಸಾಮಾನ್ಯರಂತೆ ಬಂದರಂತೆ. ಫ್ರೋಟೋಕಾಲ್ ನ ಹಂಗು ಹರಿದು ಏಕಾಂಗಿಯಾಗಿ ಓಡಾಡಿದ್ದ ಅಣ್ಣಾ ಮಲೈ ಅಪರಾಧ ಕೃತ್ಯದವರ ಎದೆಯಲ್ಲಿ ಒಂದಷ್ಟು ಭೀತಿಯನ್ನು ಆರಂಭದಲ್ಲಿ ಹುಟ್ಟು ಹಾಕಿದ್ದಂತೂ ನಿಜ. ಆಗಲೇ ಸಿಂಗಂ ಸಿನೆಮಾ ದ ಪ್ರಭಾವಕ್ಕೆ ಒಳಗಾಗುವ ಭಾವುಕ ಜೀವಿಗಳು ಅಣ್ಣಾ ಮಲೈರಲ್ಲೂ ಸಿಂಗಂ ಅನ್ನು ಕಂಡು ಉಡುಪಿಯ ಸಿಂಗಂ ಅನ್ನಲಾರಂಭಿಸಿದ್ದು.
ಮತಾಂಧತೆ ಅಳಿಸುವ ನಿಟ್ಟಿನಲ್ಲಿ ನಿಯೋಜಿತರಾದ ಇವರು ಮತ್ತೆ ಸುಧಾರಣೆಗಾಗಿ ಎಲ್ಲರನ್ನೂ ಒಲೈಸುವಂತಾಗಿದ್ದು ಕೂಡಾ ಇಲ್ಲದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...