Homeಅಂಕಣಗಳುಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು

- Advertisement -
- Advertisement -

| ಯಾಹೂ |

ಬಿಜೆಪಿ ಗಳಿಸಿದ ಬಹುಮತಕ್ಕೆ ದೇಶದ ಬುದ್ದಿಜೀವಿಗಳು ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯ ಪ್ರಜೆ ತನ್ನ ಕೆಲಸ ಮುಗಿಸಿದಂತೆ ಸಮಾಧಾನದಿಂದಿದ್ದಾನೆ. ಆದರೆ ಚೆಡ್ಡಿಗಳ ತುರಿಕೆ ಚೇಷ್ಟೆಯನ್ನು ಗ್ರಹಿಸಿದವರು ಈ ದೇಶಕ್ಕೆ ಏನು ಕಾದಿದೆಯೋ ಎಂದು ಹೆದರಿ ಹೋಗಿದ್ದಾರಲ್ಲಾ. ಈ ಸಮಯದಲ್ಲಿ ಬಹು ಗಂಭೀರವಾಗಿ ಚಿಂತಿಸುವುದರ ಬದಲು ನಮ್ಮ ವಾಟಿಸ್ಸೆಗೆ ಫೋನ್ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತು. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್ ಟೋನ್: ಏನು ಮಾಡಿ ಏನು ಬಂತಣ್ಣ, ನಾವೆಲ್ಲ ಕೂಡಿ ಏನು ಮಾಡಿ ಏನು ಬಂತಣ್ಣಾ…..
“ಗುಡ್‍ಮಾರ್ನಿಂಗು ಸಾ.”
“ವಾಟಿಸ್ಸೆ ಎಲ್ಲಿದ್ದೀ.”
“ಇನ್ನೆಲ್ಲಿರನ ಸಾರ್, ಕತ್ತಿಗೆ ಬೇಜಾರಾದ್ರೆ ಹಾಳು ಗ್ವಾಡೆ ಅಂತ ಊರಲ್ಲಿದೀನಿ.”
“ಯಂಗಿದೆ ಊರು.”
“144 ಸೆಕ್ಷೆನ್ ಹಾಕಿದಂಗದೆ.”
“ಯಾಕೆ?”
“ಅಂಥಾ ಬಿಸ್ಲು ಸಾರ್, ಈ ಬಿಸ್ಲು ನೋಡಿ ಮುಂದ್ಲೊರಸಕೂ ಇರಬೇಕಾ ಅನ್ನಿಸಿದೆ.”
“ನಿನ್ನಂಥವನಿಗೆ ಅಂಗನ್ನಸಬಾರ್ದು.”
“ನನ್ನಂಥವುನು ಅಂದ್ರೇನು ಸಾ.”
“ಭಾರತವನ್ನೇ ಬದಲಾಯ್ಸೊ ಶ್ರೀಸಾಮಾನ್ಯ ಅಂತ.”
“ಶ್ರೀಸಾಮಾನ್ಯ ಇನ್ನ ಯಾರ ಮಾತ್ನೂ ಕೇಳದಿಲ್ಲ, ಯಾರಿಗೂ ಸಿಗದಿಲ್ಲ ಸಾ.”
“ಅದನ್ನ ರಾಜಕಾರಣಿಗಳು ಅರ್ಥ ಮಾಡಿಕಳ್ಳಿಲ್ಲವಲ್ಲ ಹೇಳು.”
“ಈಗದೆ ಆಯ್ತಾ ಅದೆ ಸಾ. ಈ ಸಿದ್ರಾಮಯ್ಯ ದ್ಯಾವೇಗೌಡ ಇವುರಿಗ್ಯಲ್ಲ ಈಗರ್ಥ ಆಯ್ತ ಅದೆ.”
“ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ದೇಸದ ಕತೆ ಏನಾರ ಆಗ್ಲಿ. ನಮ್ಮ ಸುಮಲತ ಗೆದ್ಲಲ್ಲ ಸಾ.”
“ಸುಮಲತನ ಗೆಲುವ ಅಷ್ಟು ಸೀರಿಯಸ್ಸಾಗಿ ತಗಂಡಿದ್ಯಾ?”
“ಊ ಸಾ. ನಮ್ಮ ಅಳಿವು ಉಳಿವಿನ ಪ್ರಶ್ನೆ ಆಗಿತ್ತು.”
“ಅಷ್ಟ್ ಗಂಭೀರವಾಗಿತ್ತ.”
“ಅಲ್ವೆ ಮತ್ತೆ, ಅದೆಲ್ಲೊ ಬಾರಲ್ಲಿ ಕುತಗಂಡು ಚಿಲ್ಡ್ ಬೀರು ಕುಡೀತಿದ್ದ ಹುಡುಗನ್ನ ತಂದು ಮಂಡ್ಯಕ್ಕೆ ನಿಲ್ಸಿದ್ರಲ್ಲ. ಇವರಿಗೆ ಎಷ್ಟು ಧೈರ್ಯ ಇರಬೇಕು. ಮಂಡ್ಯ ಜಿಲ್ಲೇನ ಏನನ್ನಕಂಡಿದ್ರು ಸಾ.”
“ಸರಿಯಾದ ಉತ್ರ ಕೊಟ್ರಲ್ಲ ಬುಡಿ.”
“ಬುಡದಲ್ಲ ಸಾ. ದ್ಯಾವೇಗೌಡ್ರು ಅಷ್ಟು ಸುಲಭಕ್ಕೆ ಏನ್ನೂ ಬುಡದಿಲ್ಲ. ಆ ಹುಡುಗನ್ನ ಅಲ್ಲೇ ಇರು ಅಂದುಬುಡ್ತರೆ.”
“ಹಾಗಂತೀಯಾ.”
“ಇತಿಹಾಸ ನೋಡಿಲ್ವಾ ಸಾ. ದ್ಯಾವೇಗೌಡ್ರು ಚುನಾವಣೆಯ ಸೋಲು ಗೆಲುವಿಗೆ ಹೆದರಿದೋರಲ್ಲ. ನಿನ್ನ ಭಾಗಕ್ಕೆ ಮಂಡ್ಯ ಕೊಟ್ಟಿದೀವಿ, ನೀನಲ್ಲೇ ಇರು ಅಂದು ಬುಡ್ತರೆ. ಇದು ನೋಡಿದ್ರೆ ಹೈಲು ಪೈಲುಡುಗ ಮಂಡ್ಯ ಜಿಲ್ಲೆಯನ್ನೆ ಹುಚ್ಚಾಸ್ಪತ್ರೆ ಮಾಡಿಬುಡ್ತನೆ.”
“ಏನೇ ಆದ್ರು ಮಂಡ್ಯದ ಜನಗಳು ಸ್ವಾಭಿಮಾನಿಗಳು ಬುಡು.”
“ಅದು ಜಗತ್ತಿಗೇ ಗೊತ್ತಾಯ್ತು ಸಾ.”
“ಜಗತ್ತಿಗೇ ಗೊತ್ತಾಯ್ತಾ.”
“ಊ ಸಾ. ಅಂಬರೀಶ್‍ಗೆ ಪ್ರಪಂಚದಲ್ಯಲ್ಲ ಸ್ನೇಹಿತರಿದ್ರು, ಪರಿಚಯ ಮಾಡಿಕ್ಯಳದು, ಪಾರ್ಟಿ ಕೊಡದು, ಮುಂದ್ಲು ದೇಸುಕೆ ಹೋಯ್ತಾಯಿರದ. ಅಂಗೆ ದುಬಾಯಿ, ಕುವೈತ್, ಮಸ್ಕಟ್, ಅಮೇರಿಕದಲ್ಯಲ್ಲ ಪ್ರೆಂಡ್ಸಿದ್ರು. ಅವುರ್ಯಲ್ಲ ಮಂಡ್ಯದ ಜನ ಏನು ಮಾಡ್ತರೆ ಅಂತ ನೋಡ್ತಿದ್ರು.”
“ರಾಜ್ಯದ ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ಹೇಳದೇನು ಸಾ. ಯಲ್ಲ ಮುಗಿತಲ್ಲ ಬುಡಿ.”
“ಮುಗೀತು ಅಂತೀಯಾ.”
“ಇನ್ನೇನು ಸಾ. ಬಿಜೆಪಿ ತಲೆಮ್ಯಾಲೆ ಕಲ್ಲಾಕಕ್ಕೆ ಇವುರಿಬ್ರೂ ಒಂದಾಗಿ ಸೈಜಗಲ್ಲ ಹೊತ್ತಗಂಡು ನಿಂತಿದ್ರು. ಅವುರಿಗೆ ಗೊತ್ತಿಲ್ಲದಂಗೆ ಅವುರವುರ ಮ್ಯಾಲೆ ಹಾಯ್ಕಂಡ್ರು ಸಾ.”
“ಏನಂದೆ.”
“ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು.”
“ಅವುರ ನಡುವೆ ಅಷ್ಟು ದ್ವೇಶ ಇತ್ತ.”
“ಇತ್ತು ಸಾ, ಸತತವಾಗಿ ಒಂದೊರ್ಸ ಜಗಳಾಡ್ಯವುರೆ, ಹರಿಯ ಮುರಿಯ ಜಗಳಾಡಿಕಂಡು ಚುನಾವಣೆ ಬಂದೇಟಿಗೆ ತ್ಯಕ್ಕೆ ಬಡಕಂಡು, ನಾವಿಬ್ರು ಒಂದು ಅಂತ ಜನಗಳೆದ್ರಿಗೆ ಹೋಗಿ ನಿಂತ್ರೆ ಜನ ನಗದಿಲವಾ.”
“ಇದೊಂತರ ವಳೇಟು ಅಂಗರೆ.”
“ಓಟು ಮಾಡದೇ ವಳೇಟು ಕೊಡಕ್ಕಲವೆ, ಆಗೊಂದು ಸತಿ ಮಂಡ್ಯದಲ್ಲಿ ಉಪ ಚುನಾವಣೆ ಬತ್ತು. ದಿಢೀರಂತ ಕುಮಾರಸ್ವಾಮಿನೂ ಎಡೂರಪ್ಪನೂ ಗಬುಕ್ಕಂತ ತಬ್ಬಿಕಂಡು ಮುತ್ತು ಕೊಟ್ರು. ಜನ ಪುಟ್ಟರಾಜನ್ನ ಸೋಲಿಸಿ ರಮ್ಯನ್ನ ಗೆಲ್ಲಿಸಿದ್ರು, ಗೊತ್ತ ಸಾ.”
“ಗೊತ್ತು. ಜನ ಅಕ್ರಮ ಸಮಂದ ಸಹಿಸಲ್ಲ ಅಲವೆ.”
“ಸಮಂದ ಮಾಡೋರೂ ದೊಡ್ಡ ಮನುಸರಾಗಿರಬೇಕು, ಉದ್ದೇಶ ವಳ್ಳೆದಿರಬೇಕು, ಅಂಗಿದ್ರೆ ಸಯಿಸಿಗತ್ತರೆ ಸಾ.”
“ಮೋದಿ ಈ ತರ ಗೆಲ್ಲದ ನಿರೀಕ್ಷೆ ಮಾಡಿದ್ಯಾ?.”
“ತಿರಗ ಬರಬವುದು ಅನ್ನಕಂಡಿದ್ದೆ.”
“ಹ್ಯಂಗೇ.”
” ಮನೇಲಿ ಕುತಗಂಡು ಟಿವಿ ನೋಡಿ ನೋಡಿ ಅಂಗಂದಿದ್ದ. ಟಿವಿಲಿರೋ ಹಾದರಕ್ಕುಟ್ಟಿದ ನನ್ನ ಮಕ್ಕಳು ದ್ಯಾವೇಗೌಡನ ಅಭಿಮಾನಿ ಸಿದ್ದೇಗೌಡನ್ನೇ ಬದ್ಲಾಸಿದ್ರು ಅಂದ್ರೆ ಇನ್ನೇನೇಳನಾ.”
“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...