Homeಅಂಕಣಗಳುಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು

- Advertisement -
- Advertisement -

| ಯಾಹೂ |

ಬಿಜೆಪಿ ಗಳಿಸಿದ ಬಹುಮತಕ್ಕೆ ದೇಶದ ಬುದ್ದಿಜೀವಿಗಳು ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯ ಪ್ರಜೆ ತನ್ನ ಕೆಲಸ ಮುಗಿಸಿದಂತೆ ಸಮಾಧಾನದಿಂದಿದ್ದಾನೆ. ಆದರೆ ಚೆಡ್ಡಿಗಳ ತುರಿಕೆ ಚೇಷ್ಟೆಯನ್ನು ಗ್ರಹಿಸಿದವರು ಈ ದೇಶಕ್ಕೆ ಏನು ಕಾದಿದೆಯೋ ಎಂದು ಹೆದರಿ ಹೋಗಿದ್ದಾರಲ್ಲಾ. ಈ ಸಮಯದಲ್ಲಿ ಬಹು ಗಂಭೀರವಾಗಿ ಚಿಂತಿಸುವುದರ ಬದಲು ನಮ್ಮ ವಾಟಿಸ್ಸೆಗೆ ಫೋನ್ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತು. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್ ಟೋನ್: ಏನು ಮಾಡಿ ಏನು ಬಂತಣ್ಣ, ನಾವೆಲ್ಲ ಕೂಡಿ ಏನು ಮಾಡಿ ಏನು ಬಂತಣ್ಣಾ…..
“ಗುಡ್‍ಮಾರ್ನಿಂಗು ಸಾ.”
“ವಾಟಿಸ್ಸೆ ಎಲ್ಲಿದ್ದೀ.”
“ಇನ್ನೆಲ್ಲಿರನ ಸಾರ್, ಕತ್ತಿಗೆ ಬೇಜಾರಾದ್ರೆ ಹಾಳು ಗ್ವಾಡೆ ಅಂತ ಊರಲ್ಲಿದೀನಿ.”
“ಯಂಗಿದೆ ಊರು.”
“144 ಸೆಕ್ಷೆನ್ ಹಾಕಿದಂಗದೆ.”
“ಯಾಕೆ?”
“ಅಂಥಾ ಬಿಸ್ಲು ಸಾರ್, ಈ ಬಿಸ್ಲು ನೋಡಿ ಮುಂದ್ಲೊರಸಕೂ ಇರಬೇಕಾ ಅನ್ನಿಸಿದೆ.”
“ನಿನ್ನಂಥವನಿಗೆ ಅಂಗನ್ನಸಬಾರ್ದು.”
“ನನ್ನಂಥವುನು ಅಂದ್ರೇನು ಸಾ.”
“ಭಾರತವನ್ನೇ ಬದಲಾಯ್ಸೊ ಶ್ರೀಸಾಮಾನ್ಯ ಅಂತ.”
“ಶ್ರೀಸಾಮಾನ್ಯ ಇನ್ನ ಯಾರ ಮಾತ್ನೂ ಕೇಳದಿಲ್ಲ, ಯಾರಿಗೂ ಸಿಗದಿಲ್ಲ ಸಾ.”
“ಅದನ್ನ ರಾಜಕಾರಣಿಗಳು ಅರ್ಥ ಮಾಡಿಕಳ್ಳಿಲ್ಲವಲ್ಲ ಹೇಳು.”
“ಈಗದೆ ಆಯ್ತಾ ಅದೆ ಸಾ. ಈ ಸಿದ್ರಾಮಯ್ಯ ದ್ಯಾವೇಗೌಡ ಇವುರಿಗ್ಯಲ್ಲ ಈಗರ್ಥ ಆಯ್ತ ಅದೆ.”
“ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ದೇಸದ ಕತೆ ಏನಾರ ಆಗ್ಲಿ. ನಮ್ಮ ಸುಮಲತ ಗೆದ್ಲಲ್ಲ ಸಾ.”
“ಸುಮಲತನ ಗೆಲುವ ಅಷ್ಟು ಸೀರಿಯಸ್ಸಾಗಿ ತಗಂಡಿದ್ಯಾ?”
“ಊ ಸಾ. ನಮ್ಮ ಅಳಿವು ಉಳಿವಿನ ಪ್ರಶ್ನೆ ಆಗಿತ್ತು.”
“ಅಷ್ಟ್ ಗಂಭೀರವಾಗಿತ್ತ.”
“ಅಲ್ವೆ ಮತ್ತೆ, ಅದೆಲ್ಲೊ ಬಾರಲ್ಲಿ ಕುತಗಂಡು ಚಿಲ್ಡ್ ಬೀರು ಕುಡೀತಿದ್ದ ಹುಡುಗನ್ನ ತಂದು ಮಂಡ್ಯಕ್ಕೆ ನಿಲ್ಸಿದ್ರಲ್ಲ. ಇವರಿಗೆ ಎಷ್ಟು ಧೈರ್ಯ ಇರಬೇಕು. ಮಂಡ್ಯ ಜಿಲ್ಲೇನ ಏನನ್ನಕಂಡಿದ್ರು ಸಾ.”
“ಸರಿಯಾದ ಉತ್ರ ಕೊಟ್ರಲ್ಲ ಬುಡಿ.”
“ಬುಡದಲ್ಲ ಸಾ. ದ್ಯಾವೇಗೌಡ್ರು ಅಷ್ಟು ಸುಲಭಕ್ಕೆ ಏನ್ನೂ ಬುಡದಿಲ್ಲ. ಆ ಹುಡುಗನ್ನ ಅಲ್ಲೇ ಇರು ಅಂದುಬುಡ್ತರೆ.”
“ಹಾಗಂತೀಯಾ.”
“ಇತಿಹಾಸ ನೋಡಿಲ್ವಾ ಸಾ. ದ್ಯಾವೇಗೌಡ್ರು ಚುನಾವಣೆಯ ಸೋಲು ಗೆಲುವಿಗೆ ಹೆದರಿದೋರಲ್ಲ. ನಿನ್ನ ಭಾಗಕ್ಕೆ ಮಂಡ್ಯ ಕೊಟ್ಟಿದೀವಿ, ನೀನಲ್ಲೇ ಇರು ಅಂದು ಬುಡ್ತರೆ. ಇದು ನೋಡಿದ್ರೆ ಹೈಲು ಪೈಲುಡುಗ ಮಂಡ್ಯ ಜಿಲ್ಲೆಯನ್ನೆ ಹುಚ್ಚಾಸ್ಪತ್ರೆ ಮಾಡಿಬುಡ್ತನೆ.”
“ಏನೇ ಆದ್ರು ಮಂಡ್ಯದ ಜನಗಳು ಸ್ವಾಭಿಮಾನಿಗಳು ಬುಡು.”
“ಅದು ಜಗತ್ತಿಗೇ ಗೊತ್ತಾಯ್ತು ಸಾ.”
“ಜಗತ್ತಿಗೇ ಗೊತ್ತಾಯ್ತಾ.”
“ಊ ಸಾ. ಅಂಬರೀಶ್‍ಗೆ ಪ್ರಪಂಚದಲ್ಯಲ್ಲ ಸ್ನೇಹಿತರಿದ್ರು, ಪರಿಚಯ ಮಾಡಿಕ್ಯಳದು, ಪಾರ್ಟಿ ಕೊಡದು, ಮುಂದ್ಲು ದೇಸುಕೆ ಹೋಯ್ತಾಯಿರದ. ಅಂಗೆ ದುಬಾಯಿ, ಕುವೈತ್, ಮಸ್ಕಟ್, ಅಮೇರಿಕದಲ್ಯಲ್ಲ ಪ್ರೆಂಡ್ಸಿದ್ರು. ಅವುರ್ಯಲ್ಲ ಮಂಡ್ಯದ ಜನ ಏನು ಮಾಡ್ತರೆ ಅಂತ ನೋಡ್ತಿದ್ರು.”
“ರಾಜ್ಯದ ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ಹೇಳದೇನು ಸಾ. ಯಲ್ಲ ಮುಗಿತಲ್ಲ ಬುಡಿ.”
“ಮುಗೀತು ಅಂತೀಯಾ.”
“ಇನ್ನೇನು ಸಾ. ಬಿಜೆಪಿ ತಲೆಮ್ಯಾಲೆ ಕಲ್ಲಾಕಕ್ಕೆ ಇವುರಿಬ್ರೂ ಒಂದಾಗಿ ಸೈಜಗಲ್ಲ ಹೊತ್ತಗಂಡು ನಿಂತಿದ್ರು. ಅವುರಿಗೆ ಗೊತ್ತಿಲ್ಲದಂಗೆ ಅವುರವುರ ಮ್ಯಾಲೆ ಹಾಯ್ಕಂಡ್ರು ಸಾ.”
“ಏನಂದೆ.”
“ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು.”
“ಅವುರ ನಡುವೆ ಅಷ್ಟು ದ್ವೇಶ ಇತ್ತ.”
“ಇತ್ತು ಸಾ, ಸತತವಾಗಿ ಒಂದೊರ್ಸ ಜಗಳಾಡ್ಯವುರೆ, ಹರಿಯ ಮುರಿಯ ಜಗಳಾಡಿಕಂಡು ಚುನಾವಣೆ ಬಂದೇಟಿಗೆ ತ್ಯಕ್ಕೆ ಬಡಕಂಡು, ನಾವಿಬ್ರು ಒಂದು ಅಂತ ಜನಗಳೆದ್ರಿಗೆ ಹೋಗಿ ನಿಂತ್ರೆ ಜನ ನಗದಿಲವಾ.”
“ಇದೊಂತರ ವಳೇಟು ಅಂಗರೆ.”
“ಓಟು ಮಾಡದೇ ವಳೇಟು ಕೊಡಕ್ಕಲವೆ, ಆಗೊಂದು ಸತಿ ಮಂಡ್ಯದಲ್ಲಿ ಉಪ ಚುನಾವಣೆ ಬತ್ತು. ದಿಢೀರಂತ ಕುಮಾರಸ್ವಾಮಿನೂ ಎಡೂರಪ್ಪನೂ ಗಬುಕ್ಕಂತ ತಬ್ಬಿಕಂಡು ಮುತ್ತು ಕೊಟ್ರು. ಜನ ಪುಟ್ಟರಾಜನ್ನ ಸೋಲಿಸಿ ರಮ್ಯನ್ನ ಗೆಲ್ಲಿಸಿದ್ರು, ಗೊತ್ತ ಸಾ.”
“ಗೊತ್ತು. ಜನ ಅಕ್ರಮ ಸಮಂದ ಸಹಿಸಲ್ಲ ಅಲವೆ.”
“ಸಮಂದ ಮಾಡೋರೂ ದೊಡ್ಡ ಮನುಸರಾಗಿರಬೇಕು, ಉದ್ದೇಶ ವಳ್ಳೆದಿರಬೇಕು, ಅಂಗಿದ್ರೆ ಸಯಿಸಿಗತ್ತರೆ ಸಾ.”
“ಮೋದಿ ಈ ತರ ಗೆಲ್ಲದ ನಿರೀಕ್ಷೆ ಮಾಡಿದ್ಯಾ?.”
“ತಿರಗ ಬರಬವುದು ಅನ್ನಕಂಡಿದ್ದೆ.”
“ಹ್ಯಂಗೇ.”
” ಮನೇಲಿ ಕುತಗಂಡು ಟಿವಿ ನೋಡಿ ನೋಡಿ ಅಂಗಂದಿದ್ದ. ಟಿವಿಲಿರೋ ಹಾದರಕ್ಕುಟ್ಟಿದ ನನ್ನ ಮಕ್ಕಳು ದ್ಯಾವೇಗೌಡನ ಅಭಿಮಾನಿ ಸಿದ್ದೇಗೌಡನ್ನೇ ಬದ್ಲಾಸಿದ್ರು ಅಂದ್ರೆ ಇನ್ನೇನೇಳನಾ.”
“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...