Homeಅಂಕಣಗಳುಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು

- Advertisement -
- Advertisement -

| ಯಾಹೂ |

ಬಿಜೆಪಿ ಗಳಿಸಿದ ಬಹುಮತಕ್ಕೆ ದೇಶದ ಬುದ್ದಿಜೀವಿಗಳು ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯ ಪ್ರಜೆ ತನ್ನ ಕೆಲಸ ಮುಗಿಸಿದಂತೆ ಸಮಾಧಾನದಿಂದಿದ್ದಾನೆ. ಆದರೆ ಚೆಡ್ಡಿಗಳ ತುರಿಕೆ ಚೇಷ್ಟೆಯನ್ನು ಗ್ರಹಿಸಿದವರು ಈ ದೇಶಕ್ಕೆ ಏನು ಕಾದಿದೆಯೋ ಎಂದು ಹೆದರಿ ಹೋಗಿದ್ದಾರಲ್ಲಾ. ಈ ಸಮಯದಲ್ಲಿ ಬಹು ಗಂಭೀರವಾಗಿ ಚಿಂತಿಸುವುದರ ಬದಲು ನಮ್ಮ ವಾಟಿಸ್ಸೆಗೆ ಫೋನ್ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತು. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್ ಟೋನ್: ಏನು ಮಾಡಿ ಏನು ಬಂತಣ್ಣ, ನಾವೆಲ್ಲ ಕೂಡಿ ಏನು ಮಾಡಿ ಏನು ಬಂತಣ್ಣಾ…..
“ಗುಡ್‍ಮಾರ್ನಿಂಗು ಸಾ.”
“ವಾಟಿಸ್ಸೆ ಎಲ್ಲಿದ್ದೀ.”
“ಇನ್ನೆಲ್ಲಿರನ ಸಾರ್, ಕತ್ತಿಗೆ ಬೇಜಾರಾದ್ರೆ ಹಾಳು ಗ್ವಾಡೆ ಅಂತ ಊರಲ್ಲಿದೀನಿ.”
“ಯಂಗಿದೆ ಊರು.”
“144 ಸೆಕ್ಷೆನ್ ಹಾಕಿದಂಗದೆ.”
“ಯಾಕೆ?”
“ಅಂಥಾ ಬಿಸ್ಲು ಸಾರ್, ಈ ಬಿಸ್ಲು ನೋಡಿ ಮುಂದ್ಲೊರಸಕೂ ಇರಬೇಕಾ ಅನ್ನಿಸಿದೆ.”
“ನಿನ್ನಂಥವನಿಗೆ ಅಂಗನ್ನಸಬಾರ್ದು.”
“ನನ್ನಂಥವುನು ಅಂದ್ರೇನು ಸಾ.”
“ಭಾರತವನ್ನೇ ಬದಲಾಯ್ಸೊ ಶ್ರೀಸಾಮಾನ್ಯ ಅಂತ.”
“ಶ್ರೀಸಾಮಾನ್ಯ ಇನ್ನ ಯಾರ ಮಾತ್ನೂ ಕೇಳದಿಲ್ಲ, ಯಾರಿಗೂ ಸಿಗದಿಲ್ಲ ಸಾ.”
“ಅದನ್ನ ರಾಜಕಾರಣಿಗಳು ಅರ್ಥ ಮಾಡಿಕಳ್ಳಿಲ್ಲವಲ್ಲ ಹೇಳು.”
“ಈಗದೆ ಆಯ್ತಾ ಅದೆ ಸಾ. ಈ ಸಿದ್ರಾಮಯ್ಯ ದ್ಯಾವೇಗೌಡ ಇವುರಿಗ್ಯಲ್ಲ ಈಗರ್ಥ ಆಯ್ತ ಅದೆ.”
“ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ದೇಸದ ಕತೆ ಏನಾರ ಆಗ್ಲಿ. ನಮ್ಮ ಸುಮಲತ ಗೆದ್ಲಲ್ಲ ಸಾ.”
“ಸುಮಲತನ ಗೆಲುವ ಅಷ್ಟು ಸೀರಿಯಸ್ಸಾಗಿ ತಗಂಡಿದ್ಯಾ?”
“ಊ ಸಾ. ನಮ್ಮ ಅಳಿವು ಉಳಿವಿನ ಪ್ರಶ್ನೆ ಆಗಿತ್ತು.”
“ಅಷ್ಟ್ ಗಂಭೀರವಾಗಿತ್ತ.”
“ಅಲ್ವೆ ಮತ್ತೆ, ಅದೆಲ್ಲೊ ಬಾರಲ್ಲಿ ಕುತಗಂಡು ಚಿಲ್ಡ್ ಬೀರು ಕುಡೀತಿದ್ದ ಹುಡುಗನ್ನ ತಂದು ಮಂಡ್ಯಕ್ಕೆ ನಿಲ್ಸಿದ್ರಲ್ಲ. ಇವರಿಗೆ ಎಷ್ಟು ಧೈರ್ಯ ಇರಬೇಕು. ಮಂಡ್ಯ ಜಿಲ್ಲೇನ ಏನನ್ನಕಂಡಿದ್ರು ಸಾ.”
“ಸರಿಯಾದ ಉತ್ರ ಕೊಟ್ರಲ್ಲ ಬುಡಿ.”
“ಬುಡದಲ್ಲ ಸಾ. ದ್ಯಾವೇಗೌಡ್ರು ಅಷ್ಟು ಸುಲಭಕ್ಕೆ ಏನ್ನೂ ಬುಡದಿಲ್ಲ. ಆ ಹುಡುಗನ್ನ ಅಲ್ಲೇ ಇರು ಅಂದುಬುಡ್ತರೆ.”
“ಹಾಗಂತೀಯಾ.”
“ಇತಿಹಾಸ ನೋಡಿಲ್ವಾ ಸಾ. ದ್ಯಾವೇಗೌಡ್ರು ಚುನಾವಣೆಯ ಸೋಲು ಗೆಲುವಿಗೆ ಹೆದರಿದೋರಲ್ಲ. ನಿನ್ನ ಭಾಗಕ್ಕೆ ಮಂಡ್ಯ ಕೊಟ್ಟಿದೀವಿ, ನೀನಲ್ಲೇ ಇರು ಅಂದು ಬುಡ್ತರೆ. ಇದು ನೋಡಿದ್ರೆ ಹೈಲು ಪೈಲುಡುಗ ಮಂಡ್ಯ ಜಿಲ್ಲೆಯನ್ನೆ ಹುಚ್ಚಾಸ್ಪತ್ರೆ ಮಾಡಿಬುಡ್ತನೆ.”
“ಏನೇ ಆದ್ರು ಮಂಡ್ಯದ ಜನಗಳು ಸ್ವಾಭಿಮಾನಿಗಳು ಬುಡು.”
“ಅದು ಜಗತ್ತಿಗೇ ಗೊತ್ತಾಯ್ತು ಸಾ.”
“ಜಗತ್ತಿಗೇ ಗೊತ್ತಾಯ್ತಾ.”
“ಊ ಸಾ. ಅಂಬರೀಶ್‍ಗೆ ಪ್ರಪಂಚದಲ್ಯಲ್ಲ ಸ್ನೇಹಿತರಿದ್ರು, ಪರಿಚಯ ಮಾಡಿಕ್ಯಳದು, ಪಾರ್ಟಿ ಕೊಡದು, ಮುಂದ್ಲು ದೇಸುಕೆ ಹೋಯ್ತಾಯಿರದ. ಅಂಗೆ ದುಬಾಯಿ, ಕುವೈತ್, ಮಸ್ಕಟ್, ಅಮೇರಿಕದಲ್ಯಲ್ಲ ಪ್ರೆಂಡ್ಸಿದ್ರು. ಅವುರ್ಯಲ್ಲ ಮಂಡ್ಯದ ಜನ ಏನು ಮಾಡ್ತರೆ ಅಂತ ನೋಡ್ತಿದ್ರು.”
“ರಾಜ್ಯದ ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ಹೇಳದೇನು ಸಾ. ಯಲ್ಲ ಮುಗಿತಲ್ಲ ಬುಡಿ.”
“ಮುಗೀತು ಅಂತೀಯಾ.”
“ಇನ್ನೇನು ಸಾ. ಬಿಜೆಪಿ ತಲೆಮ್ಯಾಲೆ ಕಲ್ಲಾಕಕ್ಕೆ ಇವುರಿಬ್ರೂ ಒಂದಾಗಿ ಸೈಜಗಲ್ಲ ಹೊತ್ತಗಂಡು ನಿಂತಿದ್ರು. ಅವುರಿಗೆ ಗೊತ್ತಿಲ್ಲದಂಗೆ ಅವುರವುರ ಮ್ಯಾಲೆ ಹಾಯ್ಕಂಡ್ರು ಸಾ.”
“ಏನಂದೆ.”
“ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು.”
“ಅವುರ ನಡುವೆ ಅಷ್ಟು ದ್ವೇಶ ಇತ್ತ.”
“ಇತ್ತು ಸಾ, ಸತತವಾಗಿ ಒಂದೊರ್ಸ ಜಗಳಾಡ್ಯವುರೆ, ಹರಿಯ ಮುರಿಯ ಜಗಳಾಡಿಕಂಡು ಚುನಾವಣೆ ಬಂದೇಟಿಗೆ ತ್ಯಕ್ಕೆ ಬಡಕಂಡು, ನಾವಿಬ್ರು ಒಂದು ಅಂತ ಜನಗಳೆದ್ರಿಗೆ ಹೋಗಿ ನಿಂತ್ರೆ ಜನ ನಗದಿಲವಾ.”
“ಇದೊಂತರ ವಳೇಟು ಅಂಗರೆ.”
“ಓಟು ಮಾಡದೇ ವಳೇಟು ಕೊಡಕ್ಕಲವೆ, ಆಗೊಂದು ಸತಿ ಮಂಡ್ಯದಲ್ಲಿ ಉಪ ಚುನಾವಣೆ ಬತ್ತು. ದಿಢೀರಂತ ಕುಮಾರಸ್ವಾಮಿನೂ ಎಡೂರಪ್ಪನೂ ಗಬುಕ್ಕಂತ ತಬ್ಬಿಕಂಡು ಮುತ್ತು ಕೊಟ್ರು. ಜನ ಪುಟ್ಟರಾಜನ್ನ ಸೋಲಿಸಿ ರಮ್ಯನ್ನ ಗೆಲ್ಲಿಸಿದ್ರು, ಗೊತ್ತ ಸಾ.”
“ಗೊತ್ತು. ಜನ ಅಕ್ರಮ ಸಮಂದ ಸಹಿಸಲ್ಲ ಅಲವೆ.”
“ಸಮಂದ ಮಾಡೋರೂ ದೊಡ್ಡ ಮನುಸರಾಗಿರಬೇಕು, ಉದ್ದೇಶ ವಳ್ಳೆದಿರಬೇಕು, ಅಂಗಿದ್ರೆ ಸಯಿಸಿಗತ್ತರೆ ಸಾ.”
“ಮೋದಿ ಈ ತರ ಗೆಲ್ಲದ ನಿರೀಕ್ಷೆ ಮಾಡಿದ್ಯಾ?.”
“ತಿರಗ ಬರಬವುದು ಅನ್ನಕಂಡಿದ್ದೆ.”
“ಹ್ಯಂಗೇ.”
” ಮನೇಲಿ ಕುತಗಂಡು ಟಿವಿ ನೋಡಿ ನೋಡಿ ಅಂಗಂದಿದ್ದ. ಟಿವಿಲಿರೋ ಹಾದರಕ್ಕುಟ್ಟಿದ ನನ್ನ ಮಕ್ಕಳು ದ್ಯಾವೇಗೌಡನ ಅಭಿಮಾನಿ ಸಿದ್ದೇಗೌಡನ್ನೇ ಬದ್ಲಾಸಿದ್ರು ಅಂದ್ರೆ ಇನ್ನೇನೇಳನಾ.”
“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...